ಒಟ್ಟು 435 ಕಡೆಗಳಲ್ಲಿ , 74 ದಾಸರು , 367 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ಕಾಮಹರ ನಿನ್ನಂಘ್ರಿ ತಾಮರಸಯುಗಳ ಭಜಿಸುವೆ | ಭಜಿಸಿ ಬಿನ್ನೈಸುವೆ ಶ್ರೀ ಮನೋಹರನ ತೋರಯ್ಯ 1 ಕೃತ್ತಿವಾಸನೆ ಎನ್ನ ಚಿತ್ತದಲಿ ಹರಿಯಪದ ನಿತ್ಯದಲಿ ಭಜಿಪ ಮತಿ ನೀಡೊ | ಮತಿ ನೀಡೊ ಪಾರ್ವತಿ ಚಿತ್ತದೊಲ್ಲಭನೆ ನಮಿಸುವೆ 2 ಸುವರ್ಣಮುಖರಿಯ ತೀರದಲಿ ನೆಲಸಿರುವೆ ಶ್ರೀ ವರಾಹನಂಘ್ರಿ ಭಜಿಸುತ್ತ | ಭಜಿಸುತ್ತ ನೆಲಸಿರುವ ಪಾವನರೂಪ ಸಲಹಯ್ಯ 3 ಕಾಳಸ್ತಿನಿಲಯನೆ ಪೇಳಲಿನ್ನೇನು ನಾ ತಾಳಲಾರೆನು ಈ ಭವಬಂಧ | ಭವಬಂಧ ಬಿಡಿಸುವ ವ್ಯಾಳ ಶಯನನ್ನ ತೋರೈಯ್ಯ 4 ಭಕ್ತರಿಗೊಲಿದು ಅಪಮೃತ್ಯು ಪರಿಹರಿಸಿದೆ ಸತ್ಯ ಸಂಕಲ್ಪ ನಿನ್ನಂಘ್ರಿ | ನಿನ್ನಂಘ್ರಿ ಕಮಲಗಳ ಚಿತ್ತದಲಿ ತೋರಿ ಸಂತೈಸು 5 ಮನಕೆ ಗುರು ನೀನಹುದು ಮನವ ಹರಿಯಲಿ ನೆಲಸೊ ವೈರಿ ಮಮತೆಯಿಂ | ಮಮತೆಯಿಂದಲಿ ನಿತ್ಯ ಮನಶುದ್ಧಿಗೈದು ಕಾಯಯ್ಯ 6 ಶಂಖಚಕ್ರವ ಪಿಡಿದ ಸಂಕರ್ಷಣನ ರೂಪ ನಿತ್ಯ ಭಜಿಸುವೆ | ಭಜಿಸುವೆ ಕೈಲಾಸ ಅಂಕದಲಿ ನೆಲಸಿ ಹರುಷದಿ 7 ನರಸಿಂಹ ರೂಪವನು ಸ್ಮರಿಸುತ್ತ ಮೈಮರೆವೆ ಉರುತರ ಭಾವ ಭಕ್ತಿಯಲಿ | ಭಕ್ತಿಯಲಿ ಭಜಿಪ ನಿನ್ನ ಸ್ಮರಿಸುವರ ಭಯವ ಹರಿಸುವೆ 8 ಶ್ರೀ ರಾಮನಾಮವನು ಪ್ರೇಮದಿಂದುಮೆಗರುಹಿ ಆರಾರು ಅರಿಯದಾನಂದ | ಆನಂದವಿತ್ತೆ ಭವ ತಾರಕವೆಂದು ಕರುಣಾಳೂ 9 ಅಜನ ಭ್ರೂಮಧ್ಯದಲಿ ಜನಿಸಿದೆಯೊ ಜಗದಲ್ಲಿ ಭಂಜನ | ಭಂಜನಗೊಳಿಸಿದೆ ತ್ರಿಜಗದಲಿ ನಿನಗೆ ಸರಿಯುಂಟೆ 10 ಶೇಷ ಪರ್ಯಂಕನಿಗೆ ಹಾಸಿಗೆಯಾಗಲು ತೋಷದಲಿ ತಪವಾಚರಿಸಿದೆ | ಚರಿಸಿ ಸಾಧಿಸಿದೆ ನೀ ಶೇಷ ಪದವಿಯನು ತ್ರಿನೇತ್ರ 11 ಶರಧಿ ಮಥಿಸಲು ಗರಳ ಉದ್ಭವಿಸಿ ಭಯವಾಗೆ | ಭಯವಾಗಿ ಪರಿಹರಿಸಿ ಗರಳವನೆ ಕುಡಿದೆ ಶ್ರೀ ಕಂಠ 12 ಅಸುರರ ವಂಚಿಸಿದ ವಶವಲ್ಲದ ಹೆಣ್ಣು ವಶವಾಗಲೆಂದು ಹಾರೈಸಿ | ಹಾರೈಸಿ ಬಳಲುತಿರೆ ಬಿಸಜಾಕ್ಷ ನಿನ್ನ ಸಲಹಿದ 13 ತಾರಕಾಸುರನಿಂದ ಘೋರಪಡುತಿರೆ ಜಗವು ಮಾರ ಪೂಅಸ್ತ್ರ ಎಸೆಯಲು | ಎಸೆಯಲು ದಹಿಸಿ ಕು- ಮಾರನನು ಪಡೆದೆ ಗಿರಿಜೇಶ 14 ಸ್ತುತಿಪ್ರಿಯ ನಿನ್ನ ನಾ ಸ್ತುತಿಸಲಾಪೆನೆ ಮಂದ ಮತಿ ಎಂದು ನೀನೆ ಸಂತೈಸೊ | ಸಂತೈಸಬೇಕಿನ್ನು ಮತಿಯಿತ್ತು ಹರಿಯ ಪದದಲ್ಲಿ 15 ಶಿರದಲ್ಲಿ ಗಂಗೆ ಚಂದ್ರನ ಮೆರೆಯುವ ಉರಗ ಭೂಷಣನೆ ಕೇಳಿನ್ನು | ಕೇಳಿನ್ನು ಎನ್ನ ಮನ ಮರೆಯದೆ ಹರಿಯ ನೆನೆಯಲಿ 16 ವಿಷ್ಣು ಭಕ್ತರೊಳಗೆ ಶ್ರೇಷ್ಠ ನೀನಹುದಯ್ಯ ಜಿಷ್ಣುವಿಗೆ ಮೆಚ್ಚಿ ಧನುವಿತ್ತೆ | ಧನುವಿತ್ತೆ ಗೋಪಾಲ- ಕೃಷ್ಣವಿಠ್ಠಲನ ತೋರಯ್ಯ 17
--------------
ಅಂಬಾಬಾಯಿ
ಭವ ವನಧಿಗೆ ನವಪೋತ | ಪಾಲಿಸು ವಿಖ್ಯಾತ ಪ ವಿಯದಧಿಪನೆ ಎನ್ನ ಕೈಯ್ಯನು ಪಿಡಿಯೋ | ಜ್ಞಾನ ಭಿಕ್ಷ ಈಯೋ ಅ.ಪ. ಮಾಯಾಪತಿ ಪದ ಪದ್ಮಯುಗಳ ಭಜಿಪಾ | ಉತ್ತಮ ಪಥತೋರ್ಪಾಶ್ರೇಯಸು ಸಾಧನ ವೆನಿಸಿ ಮೆರೆಯುರ್ತಿರ್ಪಾ | ಹರಿಪರಮನು ಎನಿಪಾ ||ಮಾಯಾಮತ ತಮ ಸೂರ್ಯನೆನಿಸಿ ಮೆರೆವಾ | ಸುಜನಸುರದ್ರುಮವಾನ್ಯಾಯ ಸುಧೆಯನೇ ತಾರಚಿಸಿರುವಾ | ಮುಕುತಿ ಮಾರ್ಗ ತೋರ್ವಾ 1 ಕಾಕು ವೃತ್ರನಿಂದಾವೃತ ಜಗವಿರಲೂ | ಜ್ಞನರಹಿತ ವಿರಲೂಲೋಕ ಮಹಿತ ಮಂತ್ರವು ನಿನಗಿರಲೂ | ಜಪಿಸುತಾಸ್ತ್ರ ಬಿಡಲೂ ||ಆ ಕುಯೋನಿಗತ ಚಿತ್ರಕೇತು ಮೋಕ್ಷ | ಆಯಿತು ಸುರರಾಧ್ಯಕ್ಷಲೋಕಾಮಯವನು ಹರಿಸಿ ಜಗದಿ ಮೆರೆದೇ | ಮಹಾನ್ನು ಎನಿಸೀದೇ2 ಚಾಪ ಜೇತಾಕುಕ್ಷಿಯೊಳಗೆ ಬಲು ಬಲು ವಿಖ್ಯಾತಾ | ಕಾಗಿನಿ ತಟದಿಸ್ಥಿತ ||ಅಕ್ಷರೇಡ್ಯ ಗುರುಗೊವಿಂದ ವಿಠ್ಠಲನಾ ತನ ಹೃದ್ಗನಾಗಿರುವವನ ||ಅಕ್ಷಿಯೊಳಗೆ ಕಂಡು ಮೋಕ್ಷ ಪಧವ ಸೇರ್ದ | ಆನಂದವ ಬೀರ್ದ 3
--------------
ಗುರುಗೋವಿಂದವಿಠಲರು
ಭಳಿರೆ ಮೆಚ್ಚಿದೆ ರಮಣಿ ಒಳಿತು ನಿನ್ನಯ ವಾಣಿ ಬಲುಹು ತೋರಿದೆ ತರುಣಿ ಒಲಿದೆ ರಾಣಿ ಬಳಬಳನೆ ಕಣ್ಣೀರನಿಳಿಸುತಳುತೆ ಕೋರಿದುದ ತಂದೀಯಲಾರದಿಹ ಪುರುಷರಂ ದೂರುವುದೆ ನಾರಿಯರ ಧರ್ಮವೇನು ಉಡುಪುತೊಡುವೆಂದೆನುತ ಸಡಗರದಿ ಹಿಗ್ಗುತ ಬಡಿವಾರ ತೋರುವುದೆ ನಡತೆಯೇನು ಸಜ್ಜೇಸುಖಶಯೈ ಯಿದನೆ ನಂಬಿ ಲಜ್ಜೆಯಲಿಕರ್ತವ್ಯವÀನೆ ಮರೆದು ದೌರ್ಜನ್ಯಕೀಡಾಗಬಹುದೆ ಸಾಧ್ವಿ ಸಜ್ಜನೆಯೆನಿಸು ಶೇಷಗಿರೀಶನೆಣಿಸು
--------------
ನಂಜನಗೂಡು ತಿರುಮಲಾಂಬಾ
ಭಳಿರೆ ವಾಗೀಶ ತೀರ್ಥಾಖ್ಯ ಮುನಿವರ್ಯ ಇಳೆಯೊಳು ನಿನಗೆಣೆÂ ಕಾಣೆ ನಾ ಯತಿವರ್ಯ ಪ ಜಗದೊಳು ದುರ್ವಾದಿ ಮತವ ಖಂಡಿಸಿದ ನಿಗಮಾರ್ಥವನು ಜಗದಿ ಸಾರಿದಾ ಕುಜನೇಭ ಮೃಗರಾಜ ವಾದಿರಾಜರಿಗೆ ಗುರುವೆನಿಸಿದೆ 1 ಭಾವೀ ಸಮೀರ ಶ್ರೀವಾದಿರಾಜರ ಜನ್ಮೋ- ತ್ಸವ ಕಾಲವರಿತಾಗ ಸುಮಪುರಕೆ ನೀನು ತವಕದಿಂದಲಿ ಪೋಗಿ ಬಾಲಕನ ರಕ್ಷಿಸಿ ಅವನನೆ ಯತಿರಾಜ ಪಟ್ಟದೊಳಿರಿಸಿದಿರಿ 2 ಗುರು ಮಧ್ವರಂತೆ ನೀ ಸರ್ವಶಾಸ್ತ್ರವ ಮಾಡಿ ಧರಣಿಯೊಳು ರಾಜೇಶ ಹಯಮುಖನ ಚರಣ ಸ್ಮರಿಸಿ ನೂರಿಪ್ಪತ್ತು ವತ್ಸರದ ಕಾಲದಲಿ ಇರುವಿರೆನುತಲಿ ಅವರ ಹರಸಿದಿರಿ ದೊರೆಯೆ 3
--------------
ವಿಶ್ವೇಂದ್ರತೀರ್ಥ
ಭಾವ ಭಕುತಿಗೆ ವಲಿವ ನೋಡಿರೋ| ದೇವ ದೇವ ಮುಕುಂದನು| ಆವನಾಗಲಿ ತನ್ನ ನಂಬಿದ| ಸೇವಕರನು ದ್ಬರಿಸಿ ಪೊರೆವನು ಪ ಆಚರಣೆ ನೋಡಿದನೆ ವ್ಯಾಧನ| ನೀಚನೆಂದನೆ ವಿದುರನ| ಯೋಚಿಸಿದನೇ ಧ್ರುವನ ವಯಸನು| ನಾಚಿದನೇ ಕುಬ್ಜೆಯನು ಕೂಡಲು1 ಏನು ವಿದ್ಯೆ ಗಜೇಂದ್ರದೋರಿದ| ಏನು ಕೊಟ್ಟ ಸುಧಾಮನು| ಏನು ಪೌರುಷ ಉಗ್ರಸೇನನ| ಏನುಣಿಸಿದಳು ಹರಿಗೆ ದ್ರೌಪದಿ2 ಆವಶೇವೆಯೋ ನರನ ಬಂಡಿಯ| ಬೋವತನವನು ಮಾಡಲು| ಭಾವಿಸಲು ಗುರುಮಹಿಪತಿ ಪ್ರಭು| ಕಾವಕರುಣಿಯೋ ಮಹಿಮೆ ತಿಳಿಯದು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾವಜಾರಿವಿನುತ ಮಹಿತ ದಯಿತಾ ಸಮೇತಅ.ಪ ಶ್ರೀಭೂನೀಳಾ ಸಮೇತ ಸತತ ವಿಭವಯುತ ತ್ರಿಭುವನ ಸುಖದಾತ ಶುಭಚರಿತ 1 ರಾಜೇಂದ್ರಪುರಿಧಾಮ ರಘುರಾಮ ಘನಶ್ಯಾಮ ರಾಜಶೇಖರನುತನಾಮ ಜಗದಭಿರಾಮ ಪಾವನಗುಣಧಾಮ2
--------------
ನಂಜನಗೂಡು ತಿರುಮಲಾಂಬಾ
ಭಾವಿಸಮೀರ ಗುರು ಶ್ರೀ ವಾದಿರಾಜ ನಿಮ್ಮ ಸೇವಿಪ ಜನರಿಗಭೀಷ್ಟವನೀವ ಪ ಹನುಮ ಭೀಮ ಮಧ್ವರೊಡಗೂಡಿ ವೃಂದಾವನ- ದೊಳು ಮೆರಸುವ ಮುಂದಿನ ಸೊಬಗ ಪಂಥದಿ ವೀರಶೈವರ ಗುರುವನೆ ಗೆದ್ದು ಹತ್ತಿದೆ ಮುತ್ತಿನ ದಿವ್ಯ ಪೀಠವನು 1 ಕುಂಡಿನೇಶನ ತನುಜಾತೆಯ ಪತ್ರವ ಪುಂಡರೀಕಾಕ್ಷನಿಗರ್ಪಿಸಿದ್ಯಲ್ಲೋ ಮದುವೆಯ ಸಮಯದಿ ಶಪಥದಿಂದಲಿ ಬಂದು ವಧುವಿನ ಭಾಗ್ಯವನುಳಿಸಿದೆಯಲ್ಲೋ 2 ಅರಿತುಂಡು ವಿಷವ ನೀನರಗಿಸಿಕೊಂಡ್ಯಲ್ಲೊ ನರಪತಿತನಯನ ಬದುಕಿಸಿದ್ಯಲ್ಲೋ ಭಜಿಸುತ ರಾಜೇಶ ಹಯಮುಖನಂಘ್ರಿಯ ತ್ರಿಜಗದೊಳಧಿಕ ಸೋದಾಪುರದೊಳು ನಿಂದ್ಯೋ 3
--------------
ವಿಶ್ವೇಂದ್ರತೀರ್ಥ
ಭೀಮಾನದೀ ತೀರಾವಾಸ ಪಾಹಿ ಪಾಹಿ ಪಾಂಡುರಂಗ ಪ ಜಾರಚೋರನೆಂಬರೆಂದು ಜಾರಚೋರನೆಂದು ನಿನ್ನ ಪುಂಡರೀಕ ಮುನಿಕರೆದ ||ಪಾಂಡುರಂಗ|| 1 ಅನ್ಯ ಭೋಗಗಳನು ಬಿಟ್ಟು ನಿನ್ನ ಪಾದವ ಧ್ಯಾನಿಸುವರ ತೋರಿಸುವೇ ಚಿಹ್ನೆಯಿಂದ ||ಪಾಂಡುರಂಗ|| 2 ರಾಜೇಶ ಶ್ರೀಹಯಮುಖ ಜ್ಞಾನಶೂನ್ಯಾರ್ತರ್ಗೆ ಸಾಯುಜ್ಯವಿತ್ತು ಪೊರೆವ ವಿಠಲ- ನೆಂದು ಭೂಮಿಯೊಳು ಮೆರೆವ ||ಪಾಂಡುರಂಗ|| 3
--------------
ವಿಶ್ವೇಂದ್ರತೀರ್ಥ
ಭೂತನಾಥ ಪಾಲಿಸೆನ್ನ ನಾರಾಯಣ ಭೂತನಾಥನೆ ಪಾಲಿಸೆನ್ನ ಪ ಸ್ವರ್ಣದಿ ಭಾಸುರಾಂಗ ಶ್ರೀರಾಜರ ಸ್ವರ್ಣದ ಪಾಲಕಿಯನ್ನು ಮುಂಭಾಗದಿ ಭಕುತಿಯಿಂದಲಿ ಪೊತ್ತ ಶ್ರೀ ಭೂತರಾಜ 1 ಬದರಿಕಾಶ್ರಮದಿಂದ ನದಿಯ ತಾತನ ದಿವ್ಯ ಸದನವ ಶ್ರೀಸೋದಾಕ್ಷೇತ್ರಕ್ಕೆ ತರಲು ಬೆದರದೆ ವಿಘ್ನವ ತಂದ ದೈತ್ಯನ ರಥ ಚಕ್ರದಿಂದಲಿ ಕೊಂದು ರಥವ ಬೇಗದಿ ತಂದೆ 2 ಧನಪನ ಕೋಶದೊಳಿಪ್ಪ ಮೌಳಿಯ ವೇಗ - ದಿಂದಲಿ ನೀ ತಂದು ವಾದಿರಾಜರಿಗಿತ್ತೆ ಅನುಮಾನವಿಲ್ಲದೆ ತಂದು ಶ್ರೀರಾಜೇಶ ಹಯಮುಖನನ ಚರಾಗ್ರಣಿಯಾಗಿ ಮೆರೆದೆ 3
--------------
ವಿಶ್ವೇಂದ್ರತೀರ್ಥ
ಭೂತರಾಜ ಕರುಣಿಸೊ ಭೂತರಾಜ ಮುಂದೆ ಬೆಳ್ಳಿಯ ಗಿರಿನಾಥನೆಂದೆನಿಸುವ ಭೂತರಾಜ ಪ ವಾದದಿಂದಲಿ ಸೋತು ವಾದಿರಾಜರ ಸೇರ್ದೆ ಭೂತಾದಿಗಳ ಬೇಗದಿಂದಲೋಡಿಸುವಿ 1 ವಾದಿರಾಜರ ಬಲಭಾಗದಿ ನಿಂತಿರ್ದೆ ಬಂದ ಜನರಿಗಿಷ್ಟ ಕೊಟ್ಟು ಪೋಷಿಸುವಿ 2 ರಾಜೇಶ ಹಯಮುಖ- ನೊಲಸಿ ಕೊಂಡಿಹ ಋಜು ಗಣನಾಥ ಶ್ರೀವಾದಿರಾಜ ಕಿಂಕರವರ್ಯ 3
--------------
ವಿಶ್ವೇಂದ್ರತೀರ್ಥ
ಭೋಜನ ಮಾಡೈಯ ಶ್ರೀರಾಮಚಂದ್ರ ಪ ರಾಜೀವಾನಯನ ಸ್ವರಾಜಾನುಜ ಮಹಾ ರಾಜ ವಂದಿತ ರಾಜಾರಾಜ ಸಖಾರ್ಚಿತ ಅ.ಪ ಉಪ್ಪು ಉಪ್ಪಿನಕಾಯಿ ಪಚ್ಚಡಿಗಳು ಗೊಜ್ಜು ಹಪ್ಪಳ ಸಂಡಿಗೆ ಶಾಖಗಳೂ ಒಪ್ಪುವ ರಸ ಕೂಟು ಹುಳಿ ಫಳಿದ್ಯವು ಸೂಪ ತುಪ್ಪ ಶಾಲ್ಯೋದನ ಚಿತ್ರಾನ್ನಗಳನ್ನು 1 ಹೊರೀಗೆ ಶಷ್ಕುಲಿ ಹೋಳಿಗೆ ಕಡುಬು ಮು- ಚ್ಚೋರೆಯು ಅತಿರಸ ಹೊಯಗಡಬೂ ಕೀರುಆಂಬೊಡೆ ಬೋಂಡ ಶಾವೀಗೆ ಹುಳಿದೋಸೆ ಕ್ಷೀರ ಶರ್ಕರ ಜೇನು ತುಪ್ಪವೆ ಮೊದಲಾಗಿ2 ಮಂಡೀಗೆ ಲಾಡು ಚಿರೋಟಿ ಘೀವರು ಪೇಣಿ ಬೆಂಡು ಸೋಮಾಶಿಬತ್ತಾಸು ಫೇಡಾ ಖಂಡ ಶರ್ಖರೆ ಕಬ್ಬು ಖರ್ಜೂರ ದ್ರಾಕ್ಷಿಗ- ಳುಂಡು ತ್ರಿಲೋಕಳುದ್ಧರಿಸುವ ಸ್ವಾಮಿ 3 ಪನಸು ಜಂಬೂ ಕದಳಿನಾರಂಗ ಎಳನೀರು ಪಾನಕ ತಕ್ರಬೆಣ್ಣೆಯು ಮೊಸರೂ ಸ್ವಾದೋದಕ ಮೊದಲಾಗಿ ಶ್ರೀ ಯರ್ಪಿಸುವಳು ಭಕ್ತಿಯಿಂದಾ ಕೈಕೊಂಡು ನೀ 4 ಸತ್ಯತಾಂಬೂಲ ವರ್ಪಿಸಲು ಯಥಾಶಕ್ತಿ ವಿತ್ತಸಮೇತವಾದಿದನು ಕೈಕೊಂಡು ನೀ 5 ಭೋಗದ್ರವ್ಯವು ಮುಕ್ತಚೂರ್ಣ ದಕ್ಷಿಣೆ ಸಹ ಈಗ ತಾಂಬೂಲ ವೊಪ್ಪಿಸಲು ಕೈಕೊಂಡು ನೀ6 ನವ್ಯ ಸುಗಂಧ ಪುನರ್ಧೂಪವರ್ಪಿಸಿ ಸೇವ್ಯಸೇವಕನಾಗಿ ಸೇವೆ ಕೈಕೊಳ್ಳೆಂದು ಭವ್ಯಚರಿತ ನಿನ್ನ ಪೊಗಳುತ್ತ ಕುಣಿವರು 7 ಅವ್ಯಯಾನಂತ ಜಗದ ಬದುಕು ನೀನೆಂದು ಸೇವ್ಯಸೇವಕನಾಗಿರುವೆ ಎಂದು ಭವ್ಯಚರಿತ್ರರು ಪೊಗಳುವರೈ ನಿನ್ನ ಸವ್ಯಸಾಚಿಯ ಸೂತ ಗುರುರಾಮ ವಿಠಲನೆ 8
--------------
ಗುರುರಾಮವಿಠಲ
ಮಗಟಖಾನ ಹುಬ್ಬಳ್ಳಿ ಶ್ರೀಯಾದವಾರ್ಯರ ಕರಾರ್ಚಿತ ಶ್ರೀನರಸಿಂಹ ಸ್ತೋತ್ರ ಕರುಣವೆಂತುಂಟೋ ನಿನಗೆ | ಶ್ರೀನಾರಸಿಂಹಾ ಪ ವರತಟನಿ ಮಲಪ್ರಭೆಯ | ತೀರಸ್ಥನೆನಿಸೀ ಅ.ಪ. ಪೂರ್ವದಲಿ ಋಷಿ ಚ್ಯವನ | ರಿಂದರ್ಚಿತವು ಎನೆಓರ್ವ ಶಿಲೆಯಲಿ ನಿಂದು ಯಾದವಾರ್ಯಾ |ಪಾರ್ವ ಯೋಗೀಶ ರಚಿ | ತಾಕಾರ ಗಂಧದಲಿಆಹ್ವಾನಿತನು ಆಗಿ ನೀನಿಲ್ಲಿ ಇರುವೇ 1 ಆದಿ ವ್ಯಾಧಿಲಿನೊಂದ | ಬುಧರಿಂದ ಬಹುಸೇವ್ಯಯಾದವಾರ್ಯಾಂತಸ್ಥ | ಶ್ರೀ ನಾರಸಿಂಹಾ |ಬಧಿರ ಮೂಕರು ತಮ್ಮ | ವ್ಯಾಕುಲವ ಕಳೆಯುತ್ತಮುದವಾಂತು ತವ ಮಹಿತಿ ಕೀರ್ತಿಸುತ್ತಿಹರೋ 2 ಮಾಸ ನಿಶಿ ಜೇಷ್ಠದಲಿಮತ್ತೆ ಹರಿದಿನದಲ್ಲಿ | ಮಂದವಾರದಲೀ |ಮತ್ಸರಾದ್ವಿರಹಿತರು | ಸತ್ಸುಜನರಿಂದ ಕೂಡಿಉತ್ಸಹದ ಜಾಗರವ | ನೀ ಮಾಡಿ ಮಾಡಿಸಿದ್ಯೊ 3 ಬೆಟ್ಟದಾಚಾರ್ಯರೆನೆ | ಸುಷ್ಠು ಕೀರ್ತನೆಗೊಂಡಶ್ರೇಷ್ಠ ಹುಚ್ಚಾಚಾರ್ಯ | ರಿಲ್ಲಿ ನೆಲೆಸುತಲೀಇಷ್ಟ ಸಿದ್ಧಿಗಾಗಿ ಶ್ರೇಷ್ಟ | ತಪವನೆ ಗೈದುಇಷ್ಟಾರ್ಥ ಪೊಂದಿತಾ | ಬೆಟ್ಟಕ್ಕೆ ತೆರಳಿದರೋ 4 ಮೋದ ಪಡಿಸುತ ಬುಧರಯಾದವೇಶನ ನೊಲುಮೆ | ಸಂಧಿಸುತ ಮೆರೆದೂ |ಆದರಿಸಿ ಮಂಗಳ ಸು | ಭೋದಗಳ ಬೀರುತಲಿಮೋದ ಬಡಿಸಿದ ಹರಿಯ | ಭೂದೇವ ಆರ್ಯ 5 ಪ್ರೇರ್ಯ ಪ್ರೇರಕರಾಗಿ | ಬೆಳಗಾವ್ಕರು ಎಂಬಪಾರ್ವನಲಿ ನೀ ನಿಂತು | ಅಚ್ಚರಿಯನೆಸಗೀಭಾರ್ಯೆ ತವ ಕೊಲ್ಲಾಪುರ | ಮ್ಮ ಸತ್ಯವ್ರತರಆರ್ಯಗೊಡ ದರ್ಶಿಸುವ | ಯೋಗ ನೀನಿತ್ತೇ 6 ಸೃಷ್ಠ್ಯಾದಿ ಅಷ್ಟಕವ | ದೃಷ್ಟಿ ಮಾತ್ರದಿಗೈವಇಷ್ಟ ಭಕುತಿಗೆ ಮೆಚ್ಚಿ | ಘಟ್ಟಿ ಕಂಬದಿ ಜಿಗಿದೂದುಷ್ಟನ್ನ ಸಂಹರಿಸಿ | ಕಷ್ಟಗಳ ಕಳೆದಂಥಕೃಷ್ಣ ಗುರು ಗೋವಿಂದ ವಿಠಲಾ ಗಾನಮಿಪೇ 7
--------------
ಗುರುಗೋವಿಂದವಿಠಲರು
ಮಂಗಳ ಪದಗಳು ಜಯದೇವ ಜಯದೇವ ಜಯ ಸುಬ್ರಹ್ಮಣ್ಯ ವರೇಣ್ಯ ಪ. ಅರಳಿದ ಕಮಲಸನ್ನಿಭಶುಭಚರಣ- ವರ ಪಂಚಾನನ ಪೋಲ್ವ ಕಟಿಕಾಂಚ್ಯಾಭರಣ ಉರುಶಕ್ತಿಕುಕ್ಕುಟಾಭಯವಜ್ರಹಸ್ತ ಶರಣಾಗತಜನದ ರಿತವಿಧ್ವಸ್ತ1 ಬಲಮುರಿಶಂಖದಂತಿಹ ಚೆಲ್ವಗ್ರೀವ ಸುಲಲಿತಮಾಣಿಕ್ಯಹಾರದಿಂ ಪೊಳೆವ ನಲಿವ ಕರ್ಣಕುಂಡಲಗಳ ಶೋಭ ಜ್ವಲಿತಕಿರೀಟಮಸ್ತಕ ಸೂರ್ಯಾಭ2 ಈ ಕ್ಷಿತಿಯೊಳಗೆ ಪಾವಂಜೇತಿ ನಾಮ ಸುಕ್ಷೇತ್ರವಾಸ ಸುಜನಜನಪ್ರೇಮ ಲಕ್ಷ್ಮೀನಾರಾಯಣನ ಪ್ರೀತಿಯ ಪಾತ್ರ ರಾಕ್ಷಸಾರಣ್ಯದಹನವೀತಿಹೋತ್ರ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳಂ ಮಂಗಳಂ ಲಕ್ಷ್ಮೀಶಗೆ ಮಂಗಳಂ ಮಾಕಮಲಾಸನ ವಂದಿತ ಶೃಂಗಾರಶೇಖರ ತುಂಗಗಿರೀಶ ಪ. ಶ್ರೀಲೋಲ ಶುಭಗುಣಜಾಲಪಾಲಿತ ಸತ್ವ ಶೀಲ ಸುಂದರ ವನಮಾಲ ನೀಲಕುಂತಲ ನಿರ್ಜಿತಾಳಿ ಕುಲಾನನ ಕಪೋಲ ಗೋಪಾಲ 1 ಶರಣಾಗತ ರಕ್ಷಕರಣ ಧುರೀಮ ಮ- ದ್ಫರಣ ತ್ರಿಲೋಕೀ ಧಾರಣ ಕರುಣಾಮೃತ ಹರ ತರುಣಾರ್ಕ ಕೋಟಿಭಾ ಭರಣ ರಮಾಧೃತ ಚರಣಾರವಿಂದ 2 ನಿತ್ಯ ಪದ್ಮ ಸರೋವರ ಪದ್ಮ ನಿರಂತರ ಸಂಚಾರ ಪದ್ಮನಾಭ ಹೃತ್ಪದ್ಮ ಸುಸಂಸ್ಥಿತ ಪದ್ಮ ಪತ್ರ ನೇತ್ರ ಪದ್ಮಜ ಜನಕ 3 ಇಂದಿರಾವರ ಪೂರ್ಣೇಂದು ನಿಭಾನನ ವಂದನೀಯ ವಾಸುದೇವ ಮಂದಿರೆ ಮಮ ನಿತ್ಯಾನಂದದಾಯಿ ನಿಜ ಬಂಧುತಯಾಸ್ಥಿತ ಮಂದಹಸಿತೆ 4 ದಾಸೀಕೃತ ಕಂಜಜೇಶಾಹೀಶ ವಿ- ವೇಶಾಮರೇಶ ರಮೇಶಾ ಶೇಷ ಭೂಧರ ನಿಜ ವಾಸ ದಯಾರಸ ಮಾಶುಪ್ರವರ್ಷಯ ಹೇ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳೆಂದು ಪಾಡಿಕೆ ಶ್ರೀರಂಗನಿಗೀಗ ಭೃಂಗಾಲಕಿಯರು ಕೂಡಿ ಶೃಂಗಾರದಿ ಬೇಗ ಪ ದೇವಾಧಿದೇವ ಹರಿಗೆ ದೇವೌಷ ವಂದ್ಯಗೆ ಗೋವರ್ಧನಾದ್ರಿಧರಗೆ ಗೋವೃಂದ ಪಾಲಗೆ ಪವಳಿಸಿದವಗೆ ಭೃಂಗಾಲಕಿಯರು 1 ಮೀನಾಗ ಫಾಣಿಕಿಟಗೆ ಶ್ರೀನಾರಿಸಿಂಹಗೆ ಕ್ಷೋಣಿಯ ತೊರೆದ ದಶಾನನಾರಿಗೆ ಸ್ಥಾಣು ಬಾಣ ಘೋಟಕಧ್ವಜಗೆ ಭೃಂಗಾಲಕಿಯರು 2 ಪ್ರೇಮಾಬ್ಧಿ ಪವನ ಪಿತಗೆ ಹೇಮಾಂಬಕಾರಿಗೆ | ಸಾಮಜೇಂದ್ರ ಪ್ರಿಯಗೆ ತ್ರಿಧಾಮ ದೇವಗೆ ಶಾಮಸುಂದರ ವಿಠಲ ಸುಧಾಮ ಸಖಗೆ ಭೃಂಗಾಲಕಿಯರು 3
--------------
ಶಾಮಸುಂದರ ವಿಠಲ