ಒಟ್ಟು 19041 ಕಡೆಗಳಲ್ಲಿ , 136 ದಾಸರು , 7982 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣೇಶ ಬಾರೋ ಕರುಣವ ಬೀರೋ ಪ ತ್ರಿಗುಣಯ್ಯನ ಸುತ ಮುನಿಜನಹಿತ ಅ.ಪ ಭಗ್ನವೆಗೈಯುತಲಿಶ ತೃಘ್ನಾಗ್ರಜನಣ್ಣನನಿ- ರ್ವಿಘ್ನತೆಯಲಿ ಭಜಿಸುವದಕೆ 1 ಮೂಲಾಧಾರನಿಲಯರಿಪು ಕಾಲಗಿರಿಸುತಾಬಾಲ ಪಾಲಿಸುತಿಹೆ ಕರುಣಾಳೊ 2 ತಾಮಸದಾನವ ಹರಗುರು ರಾಮವಿಠಲನಡಿಗಳನಿ- ಕಾಮಿತ ಫಲಗಳ ಕೊಡುವಡೆ 3
--------------
ಗುರುರಾಮವಿಠಲ
ಗಣೇಶ ಸ್ತವನ ನೀ ದಯವಾಗು ಶುಭೋದಯ ಗಣಪತಿ ಕಾದುಕೊಂಡಿರು ಸಂತತಂ ಪ. ವಾದವಿರಲಿ ನಿಷುಸೀದ ಗಣಪನೆಂಬ ವೇದಾರ್ಥವ ಪರಿಶೋಧಿಸಿ ನಮಿಸುವೆ ಅ.ಪ. ಯದ್ಯದ್ವಿಭೂತಿಮದೆಂದು ಪೇಳಿದ ಪರಿಶುದ್ಧವಾದ ವಚನ ಶ್ರದ್ಧಾಪೂಜಿತ ಸಕಲ ದೇವರೊಳಗಿದ್ದು ಉಲಿವ ಕಥನ ಮಧ್ವಾಗಮ ಸಂಸಿದ್ಧವಾಗಿರೆ ವೃಥಾ ಪದ್ಧತಿ ತಿಳಿವದು ದುರಾಧ್ಯರಂತಿರಲಿ 1 ಸರ್ವದೇವ ನತಿಯೆಲ್ಲವು ಕೇಶವನಲ್ಲಿ ಸೇರುವದೆಂದು ಯಲ್ಲಾ ಕಡೆಯಲಿ ಚಲ್ಲದೆ ಜಲವ ಬೇರಲ್ಲಿ ಸುರಿಯಿರೆಂದು ಫುಲ್ಲನಾಭ ಶಿರಿವಲ್ಲಭ ವ್ಯಾಸರ ಸೊಲ್ಲ ತಿಳಿದು ನಿಂನಲ್ಲಿಗೆ ಸೇರಿದೆ 2 ವಿಘ್ನಮಹೌಘ ವಿದಾರಣ ಭವಸಂವಿಘ್ನಮನ:ಶರಣಾ ರುಗ್ಣಾತ್ವಾದಿ ನಿವಾರಣ ಸಂಗದ-ಭಗ್ನಸುರಾರಿ ಗಣಾ ನಗ್ನ ಚಿದಾತ್ಮಜ ನೀಲಾಭರಣ ಭ- ಯಾಗ್ನಿ ಶಮನ ನಿರ್ವಿಘ್ನದಿ ಕರುಣಿಸು 3 ಪುಂಡರೀಕ ನಯನ ಅಂಡಜಾಗಮನಾಖಂಡಲ ಸೈನಿಕ ಚಂಡವೈರಿ ಮಥನಾ ಪಂಡಿತ ಪಾಮರ ಸಮದೃಗಭೀಪ್ಸಿತ ಶುಭ ಮಂಡಲ ಮಧ್ಯಗ 4 ವಿಶ್ವಂಭರ ವಿಬುಧೇಶ ಗಣಾರ್ಚಿತ ವಿಶ್ವನಾಥವಿನುತಾ ವಿಶ್ವಜನಿಸ್ಥಿತಿ ಕಾರಣವಾರಣ ವಿಶ್ವಭೂತಿ - ಶರಣ ವಿಶ್ವಾಸಾನುಗುಣಾರ್ಥ ವಿಭಾವನ ವಿಶ್ವದೇವಗತ ವೆಂಕಟರಮಣ 5
--------------
ತುಪಾಕಿ ವೆಂಕಟರಮಣಾಚಾರ್ಯ
ಗಣೇಶ ಸ್ತುತಿ ಗಜವದನ ಪಾವನ ವಿಘ್ನನಾಶನ ಪ. ವರ ಪಾಶಾಂಕುಶಧರ ಪರಮದಯಾಳೊಕರುಣಾಪೂರಿತ ಗೌರೀವರಕುಮಾರನೆ 1 ಸುಂದರವದನಾರವಿಂದನಯನ ಘನ-ಸುಂದರಿ ಕಂದನೆ ಬಂದು ರಕ್ಷಿಸೊ 2 ಗೋಪಾಲವಿಠಲನ ಅಪಾರ ಭಜಕನೆಶಾಪಾನುಗ್ರಹಶಕ್ತಾನೇಕ ಮಹಿಮಾ 3
--------------
ಗೋಪಾಲದಾಸರು
ಗಣೇಶ ಸ್ತುತಿ ಮಂಗಲಂ ಜಯ ಮಂಗಲಂ ಪ ಗಜಮುಖದೆಸೆವೆ ಲಂಬೋದರಗೆ ತ್ರಿಜಗವಂದಿತ ಮೋದಕ ಕರಗೆ ರಜತಾದ್ರಿವಾಸನ ರಮಣಿಯಸುತನಿಗೆ ಭಜಕರ ಪಾಲಿಪ ವಿಜಯನಿಗೆ 1 ಮೂಷಿಕ ತೇಜಿಯನೇರಿದಗೆ ದೇಶದಿ ಕೀರ್ತಿಯ ಬೀರಿದಗೆ ಶೇಷಾಭರಣವೆತ್ತ ಶೂರ್ಪಕರ್ಣನಿಗೆ ವಾಸೆಯಿಂದ ಭಕ್ತರ ಪೋಷಿಪಗೆ ಮಂಗಲಂ 2 ಕಡುಕರುಣದಿ ಜಗವನು ಕಾಯ್ವಾ ಯೆ ನ್ಹೊಡೆಯ ಶ್ರೀ ವಿಘ್ನೇಶ್ವರ ದೇವಾ ಇಡಗುಂಜಿಯೊಳಗಿದು ದೃಢದಿ ಲಕ್ಷ್ಮಣನಿಗೆ ಗಡಣವಿದ್ಯವನಿತ್ತು ನುಡಿಸುವಗೆ ಮಂಗಲಂ 3
--------------
ಭಟಕಳ ಅಪ್ಪಯ್ಯ
ಗಣೇಶಸ್ತುತಿ ಕರುಣಿಸೋ ಗೌರೀಕರಜ ಪ ಕರುಣಾಳು ಕ್ಷಿಪ್ರ ಮನದ ಕಾಯ ಬೇಗದಿ ಅ.ಪ ಕಾಯ ಜಾತ ಅರಿವರ್ಗಗಳಿಗೆ ವಿಘ್ನವ ತ್ವರದಲ್ಲಿ ಇತ್ತು ಶುಭಕೆ ಮಾರ್ಗವ 1 ನರಭಾವದಿಂದ ನಿನ್ನ ಮರೆತರೆ ನೀನು ಎನ್ನನು ಜರಿದರೆ ಪೊರೆವೊರ್ಯಾರೊ ನಿರುತದಿ 2 ಮರುದಂಶ ಮಧ್ವಮುನಿಯ ವರಶಾಸ್ತ್ರ ಪೇಳ್ವ ಬುದ್ಧಿಯ ವರವಿತ್ತು ಬಂದ ವಿಘ್ನವ ಕಳೆಯುತ 3 ವರಪಾಶಪಾಣಿ ಎನ್ನ ದುರಿತಾಶಪಾಶ ಛೇದಿಸಿ ಹರಿ ಭಕ್ತಿ ಪಾಶದಿಂದ ಬಿಗಿಯುತ 4 ಕರಿವಕ್ತ್ರಶಂಕೆ ಎಂಬ ಕರಿಯನ್ನು ಅಂಕುಶದಲಿ ಮುರಿಬಿಂಕ ಶಂಕಿಸದೆ ವಿದ್ಯವ 5 ಸಿರಿ ವಾಣಿ ಚಂಡಿಕಾದ್ಯರು ನಿರುತದಿ ಇದ್ದು ವರವ ಬೀರ್ವರು 6 ನರವಾಹ ವಾಯುಜರಿಗೆ ಸರಿ ಎಂಬೋ ಜ್ಞಾನದಿ ಪಾದ ತೋರಿ ಬೇಗನೆ 7
--------------
ಪ್ರದ್ಯುಮ್ನತೀರ್ಥರು
ಗಣ್ಯವಾಗಿ ಬಣ್ಣಿಸುತ್ತ ಪುಣ್ಯವಂತರುಣ್ಣತಿರುವ ಪ ಬೀಜವಿಲ್ಲದೆ ಬೆಳೆದ ಭೂಜವಿಲ್ಲದ ಬೀಜ ಭೂಜಗಳಿಗೆ ತಾನೆ ಬೀಜಮಾಗಿ ಮೆರೆಯುತಿರುವ 1 ಹುಟ್ಟಿ ಬೆಳೆಯದಾ ಜನರು ಮುಟ್ಟಿ ತೊಳೆಯುದಾ ಎಷ್ಟು ದಿವಸವಿಟ್ಟಿರಲು ಕೊಳೆತು ಕೆಟ್ಟು ಹೋಗದಾ 2 ಬೆಲೆಗೆ ಬಾರದಾ ತನ್ನ ನೆಲೆಯ ತೋರದ ಒಲಿದವರಿಗೆ ಸುಲಭವಾಗಿ ಹಲವು ವಿಧದಿ ಹೊಳೆಯುತಿರುವ3 ಅರಿಯದವರಿಗೆ ರುಚಿಯನರಿತ ಜನರಿಗೆ ಅರಿತ ಮೇಲೆ ನಿರುತವಿರುತ ಸರಸ ಮಧುರ ಭರಿತ ಬರಿತ 4 ಸಿರಿ ಮನೋಹರ ವ್ಯಾಘ್ರಗಿರಿಯ ಮಂದಿರ ಶರಣ ಜನರ ಪೊರೆವ ನಮ್ಮ ವರದ ವಿಠಲನೆಂಬದಿವ್ಯ 5
--------------
ವೆಂಕಟವರದಾರ್ಯರು
ಗತಿಯಾರೋ ಈ ಜಗದಿ ಮತಿಗೆಟ್ಟ ಮನುಜ ಕ್ಷಿತಿನಾಥ ಹೆಜ್ಜಾಜಿ ಕೇಶವನ ಹೊರತು ಪ ಸತಿಯ ಪರದೊಳು ನೋಡೆ ಪುಣ್ಯವರ್ಥಕೆ ಕತೆಗೆ ಸುತರಿರುವರೆಂದೆನಲು ಋಣಮುಗಿವೊವರೆಗೇ ಅತಿಶಯದ ಬಾಂಧವರು ಮಿತ್ರಮಂಡಲಿಯೆಲ್ಲ ಸ್ತುತಿಯುಕ್ತ ಮರ್ಯಾದೆ ಪಡೆಕೊಳ್ಳುವನಕ 1 ತಂದೆ ತಾಯಿಗಳೆಲ್ಲ ಮುಂದಳಿದು ಹೋಗುವರು ಬಂದ ತನ್ನಧಿಕಾರ ಬಲುಮೆಯಿರುವಾಗ ಬಂದಿದ್ದ ಧನಧಾನ್ಯಗಳು ನಿಲ್ಲದೋಡುವುವು ಬಂಧನದ ಕಾಲದೊಳಗೊಬ್ಬರೂ ಬರರೂ 2 ಕರಿ ಧ್ರುವನು ಪಾಂಚಾಲಿ ಪ್ರಹ್ಲಾದ ಪ್ರಭೃತಿಗಳ ಪರಮಪಾವನರೆನಿಸಿ ಪೊರೆದಂಥ ಹರಿಯ ಉರುತರದ ನೋಟದೊಳು ನಿರುತ ನೆನೆಯಲು ನಿನ್ನ ಕರಪಿಡಿದು ಕಾಯುವನು ಸುಂದರಶ್ಯಾಮ 3
--------------
ಶಾಮಶರ್ಮರು
ಗದ್ಯ ದಂಡಕ ಅಧರ ಚುಬುಕ ದಂತಗಳ 10 ಅಗರು ಚಂದನದಮುತ್ತಿನ ಮಲುಕು ಪೆಂಡೆಯಸರ ಕೊರಳಲ್ಲಿಹತ್ತೆಗಟ್ಟಿದ ವಾಗ್ಗೊರಳು ಮುತ್ತುಗಳಮುತ್ತು ಮಾಣಿಕ ನವರತ್ನದ ಚಿಂತಾಕ-ವತ್ತಿ ಸೇರಿದ ಕಂಠಮಾಲೆ ಸರಗಳ 20 ಮಣಿ ತಾಯಿತ್ತುಮೆರೆವ ಹಮ್ಮೀರ ತಾಯಿತಿ ಕಾಂತಿಗಳಕಡಗ ಕಂಕಣ ಸುರಿಗೆ ಬಿಚ್ಚು ಬಳೆಗಳುಹಿಡಿವುಡಿಯಲ್ಲಿ ವಜ್ರದ ಥಳವುಗಳಕಡು ಮೋಹವಾದ ಮುರುಡಿಯ ಸರಪಣಿಝಡಿವ ಮುಂಗೈಯ ಮುರಾರಿ ಕವಡೆಯ30 ನೀಲ ವೈಜಯಂತಿ ಮಾಲೆ ಶೋಭಿಸುವ 40 ಕದಳಿ ನಖ ಚಂದ್ರಿಕೆಯ 50 ಕಮಲ ವಾಸವಾಗಿಪ್ಪ ಕೃಷ್ಣನಪದುಮ ಚರಣಕ್ಕೆ ನಮೊ ನಮೊ ನಮೋ ಎಂಬೆ ನಾ. 60
--------------
ವ್ಯಾಸರಾಯರು
ಗಮನ ಕೃಷ್ಣಾ ಪ ಇಂದಿರೇಯರಸ ಮುಕುಂದ ಮೂಜಗಕ್ಕೆ ತಂದೆತಾಯಿ ನೀನೇ | ಶ್ರೀರಾಮಾ ಅ.ಪ ಕೇಸರಿ ಪುನಗುಗಳೂ ನೀಸತಿ ಸಹಿತ ಸದಾ ಲೇಪಿತ ಶ್ರೀನಿ- ವಾಸ ಸುಗುಣಧಾಮಾ | ಶ್ರೀ ರಾಮ 1 ಸ್ಪುರಿಪಲಲಾಟದೊಳೂಧ್ರ್ವ ಪುಂಡ್ರಕ- ಸ್ತುರಿತಿಲಕವು ಬೆಳಗೇ ಹರಿದ್ರಾ ಕುಂಕುಮ ಮಂಗಲ ದ್ರವ್ಯ ನಿನ್ನ ಅರಸಿ ಜಾನಕಿ ದೇವಿಗೇ | ಶ್ರೀರಾಮ 2 ಕ್ಷತೆಯಿಲ್ಲದವನು ನೀನೆಂಬುವದ- ಕ್ಷತೆ ನಿನದಿದೊ ದೇವಾ ತ್ಪತಿ ಮಹಾನುಭಾವಾ | ಶ್ರೀರಾಮ 3
--------------
ಗುರುರಾಮವಿಠಲ
ಗಮಿಸಿ ಜನರು ನಿಮ್ಮ ಗೃಹಗಳಿಗೆ ುೀಗರಮೆಯರಸಗೆ ನಿದ್ರೆ ರಾಜಿಪುದಾಗಿ ಪನಿಜರೂಪನಾಗಿದ್ದು ನಿಖಿಳವ ನಿರ್ಮಿಸಿರುಜುವಾಗಿ ಜೀವರ್ಗೆ ರಾಗವ ಸಲಿಸಿಭಜಿಸಲು ತನ್ನನು ಬಹು ರೂಪಗಳ ತಾಳಿಯಜನ ತೀರಲು ನಿದ್ರೆಗೈದುವನಾಗಿ 1ಸರಸಿಜೋದ್ಭವನಾಗಿ ಸ್ಟೃಸಿ ಲೋಕವಧರಿಸಿ ಸತ್ವವ ಹಾಗೆ ದೇವನು ಕಾಯ್ವಎರಗಿದವರಿಗಿಷ್ಟವೀಯುತ ಸರ್ವತ್ರಚರಿಸುವನೀ ಶ್ರಮಶಮವಾಗಲಿ 2ವರಿಸುವ ಜನರೀತಗೊಬ್ಬರಲ್ಲಮಿತವುನೆರೆದಿರೆ ವರಗಳ ನೀಡುವ ದಿಟವುವರದ ಶ್ರೀ ತಿರುಪತಿ ವೆಂಕಟಗಿರಿಪ್ರಭುವುವರಿಸಲಿ ನಿದ್ರೆಯ ಹರೆಯಲೋಲಗವು 3ಓಂ ಜಗದ್ಗುರವೇ ನಮಃ
--------------
ತಿಮ್ಮಪ್ಪದಾಸರು
ಗರುಡನೇರಿ ಬಂದ ಸಿರಿರಮಣನು ತಾನು ಪ ಗರುಡನೇರಿ ಬಂದ ಸಿರಿರಮಣನು ತನ್ನ ಶರಣ ಕರುಣದಿ ಪೊರೆಯಲೋಸುಗ ಭರದಿ ಅ.ಪ. ಕರಿರಾಜನು ಅಂದು ಕ್ರೂರ ನಕ್ರಗೆ ಸಿಲ್ಕಿ ತೆರವಿಲ್ಲದೆ ಕೂಗುತ ಚೀರುತಿರಲು ಸುರರು ಮೊದಲಾಗಿ ಸತಿಸುತ ಬಾಂಧವರು ಅರಿತು ಅರಿಯದಂತೆ ತ್ರಾನದಿಂದ್ದಾಗ 1 ಉತ್ತಾನಪಾದನು ಚಿತ್ತದಿ ಮರುಗದೆ ಮತ್ತೆ ಬÁಲನ ಕರೆದು ಮನ್ನಿಸದೆ ಅತ್ತ ಸಾರೆಂದು ಸುರುಚಿ ನೂಕಿದ ಮೇಲೆ ಚಿತ್ತಜನಯ್ಯನ ಸ್ಮರಿಸಿದ ಮಾತ್ರದಿ 2 ನೀಚ ರುಕ್ಮನು ತನ್ನನುಜಾತೆಯನಂದು ಮಾಚಿಸಿ ಶಿಶುಪಾಲಗೀವೆನೆಂದು ಯೋಚಿಸಿ ಮನದೊಳು ಹರಿಯ ದೂರುತಲಿರೆ ತಾ ಚಿಂತೆ ತಾಳಿದ ರುಕ್ಮಿಣಿಯ ಕೈಪಿಡಿಯಲು 3 ಅಕ್ಷಯ ಪಾತ್ರೆಯ ತೊಳೆದು ಪಾಂಚಾಲೆ ಪಕ್ಷಿದೇರನ ಧ್ಯಾನದೊಳು ಕುಳಿತಿರಲು ಭಿಕ್ಷೆ ಬೇಡುತ ಬಂದು ದೂರ್ವಾಸ ಮುನಿಪನು ಶಿಕ್ಷಿಸೆನೆಂದಾಗ ಸತಿಗೆ ಮುಂದೋರದಂದು 4 ಗರುವ ಪಾರ್ಥನು ಅಂದು ಗಂಗಾ ಶಾಪದಲಿ ಅಸುವ ತೊರೆದು ರಣದೊಳು ಬಿದ್ದಿರಲು ಅರಿತು ಮನದೊಳು ಅನಿಲಜನೊಡಗೂಡಿ ಸಿರಿ ರಂಗೇಶವಿಠಲನು 5
--------------
ರಂಗೇಶವಿಠಲದಾಸರು
ಗರುಡನೇರುವ ಕೃಷ್ಣ ಹೊರಡುವನೀಗ ಸಖಿನೋಡೋಣ ನಾವೆಲ್ಲ ಈಗ ಬಾರೆ ನೀರೆ ಪ. ಗಗನದಿ ಬೆಳಗುವ ಹಗಲು ಬತ್ತಿಗÀಳೆಷ್ಟುಹಗಲು ಬತ್ತಿಗಳೆಷ್ಟು ಮುಗಿಲಿಗೆ ಮುಟ್ಟೋಬಿರಸೆಷ್ಟ ಬಹುಶ್ರೇಷ್ಠಮುಟ್ಟೋ ಮಿಂಚಿನಂತೆ ಹೊಡೆವೊ ಬಾಣಗಳು ಕಡಿಯಿಲ್ಲ ನಲ್ಲೆ 1 ಎಡಬಲ ಭಾವೆ ರುಕ್ಮಿಣಿ ಮಡದಿಯರೊಪ್ಪುವ ಮಡದಿಯ ಹಿಂದೊಪ್ಪುವ ಬೆಡಗು ವರ್ಣಿಸಲು ವಶವಲ್ಲ ನಲ್ಲೆಬೆಡಗು ವರ್ಣಿಸುವೊ ಅವರಾರೆ ಚತುರ್ಮುಖನು ಖಡಿಸೋತು ಕೈಯ ಮುಗಿದಾನೆ ತಾನೆ2 ಕೃಷ್ಣನರಸಿಯರುಉಟ್ಟ ಪಟ್ಟಾವಳಿಯ ಬೆಳಕು ಅಷ್ಟು ಇಷ್ಟೆಂಬ ಮಿತಿ ಇಲ್ಲ ನಲ್ಲೆ ಅಷ್ಟು ಇಷ್ಟೆಂಬ ಮಿತಿ ಇಲ್ಲ ಸೂರ್ಯನಾಚಿಬಿಟ್ಹೋದ ತಮ್ಮ ಮನೆತನಕ ಸುಜನಕೆ 3 ಮದನ ತಾ ನಾಚಿ ಮನೆಗ್ಹೋದ ಅಗಾಧ4 ಕಡಗ ಸರಪಳಿ ಗೆಜ್ಜಿ ನಡುವಿನೊಡ್ಯಾಣ ಪದಕ ನಡುವಿನೊಡ್ಯಾಣ ಪದಕ ಇಡವೊಕುಂಡಲದ ಮುಕುಟವೆ ಚಂದವುಮುಕುಟದ ಕಾಂತಿಗೆ ಅಡಗಿವೆ ತಾರೆ ಗಗನದಿ ಮುದದಿ 5 ಫುಲ್ಲ ನಯನೆಯರ ಮುತ್ತಿನ ಝಲ್ಲೆ ವಸ್ತದ ಬೆಳಕುಎಲ್ಲೆಲ್ಲು ಇಲ್ಲ ಜಗದೊಳು ಕೇಳುಎಲ್ಲೆಲ್ಲೂ ಇಲ್ಲ ಜಗದೊಳು ಚಂದ್ರನಾಚಿಖಡಿ ಸೋತು ಕೈಯ ಮುಗಿದಾನೆÉ ತಾನೆ6 ಕೌಸ್ತುಭ ವೈಜಯಂತಿ ಹಾರ ಶೋಭಿಸುವ ಬೆಳಕೆಷ್ಟು ಬಹುಶ್ರೇಷ್ಠ7 ಮಂದಗಮನೆಯರು ಹರಿಯ ಗಂಧ ಕಸ್ತೂರಿ ಸೊಬಗುಛಂದ ವರ್ಣಿಸುವವರ್ಯಾರ ತೋರೆಛಂದ ವರ್ಣಿಸುವ ಅವರ್ಯಾರೆ ಚತುರ್ಮುಖನ ಛಂದಾಗಿ ನಾಚಿ ಕೈ ಮುಗಿದ ಸುಕರ 8 ನಲ್ಲೆಯರು ರಮೆ ಅರಸು ಮಲ್ಲಿಗೆ ಮುಡಿದ ಚಂದ ಮಲ್ಲಿಗೆ ಮುಡಿದ ಚಂದ ಎಲ್ಲೆಲ್ಲೂ ಇಲ್ಲಧsರೆ ಮ್ಯಾಲೆ ಎಲ್ಲೆಲ್ಲೂ ಇಲ್ಲ ಧರೆ ಮ್ಯಾಲೆ ಸರಸ್ವತಿಯುಚಲ್ವಿ ತಾ ನಾಚಿ ನಡೆದಾಳೆ ಕೇಳೆ 9
--------------
ಗಲಗಲಿಅವ್ವನವರು
ಗರ್ವಿಸುವದು ತರವೆ ಗರ್ವಿಸುವದು ತರವಲ್ಲ ನೀವಿದ ಕೇಳಿ ಸರ್ವೇಶನೊಪ್ಪನೀ ನಡತೆಯ ಕಂಡರೆ ಪತೊಗರಿ :ಬೆಲ್ಲವೆ ಬಾ ನಾನು ತೊಗುರಿಬೇಳೆಯು ನನಗುಲ್ಲಾಸದಿಂದೊಂದು ಯೋಚನೆ ತೋರಿತುಎಲ್ಲರು ಒಬ್ಬಟ್ಟು ಒಳ್ಳಿತೆಂದೆಂಬರುಬಲ್ಲವರಾದರೆ ವಿವರಿಸದಿರುವರೆಸಲ್ಲದ ಮಾತನಾಡಲಿಬೇಡ ಸತ್ಯವನಿಲ್ಲಿ ನನ್ನೊಳು ಪೇಳು ಮತ್ತೆ ನಾಲುವರಿರುವಲ್ಲಿ ನ್ಯಾಯವ ತಿದ್ದಿಕೊಂಬ ನಾವಿಬ್ಬರುಇಲ್ಲದ ಬಳಿಕ ಗೋಧಿಯ ದೆಸೆುಂದೇನುಸಲ್ಲದ ತುಪ್ಪವನೇನ ಮಾಡಲಿಬೇಕುಒಳ್ಳೆಯತನ ನಿನ್ನೊಳು ಇರುವುದಿದನೆಲ್ಲವನೆನಗೆ ಪೇಳು ಸಟೆಯ ಪೇಳಬಲ್ಲೆನೆ ನಾ ನಿನ್ನೊಳು ನಿಮ್ಮೊಳು ನಾನೆಬಲ್ಲಿದನಲ್ಲವೆ ಕೇಳು ನನ್ನನೆ ಯೆಲ್ಲಾಕೊಳ್ಳುವರವನಿಯೊಳು ನೀನೂ ಸ್ವಲ್ಪವಲ್ಲವೆ ನಿಜ ನಮ್ಮೊಳು ಕೋಪಿಸಬೇಡಸಲ್ಲದ ವಸ್ತುಗಳು ಗೋಧಿಯು ಎಣ್ಣೆಯಲ್ಲವೆ ನಿತ್ಯದಲ್ಲೂ ತುಪ್ಪವ ಬಿಡುಪೊಳ್ಳುನುಡಿದರೆನ್ನ ಮಾತೆಲ್ಲ ಪಾಳು 1ಬೆಲ್ಲ :ಏನೆಲೆ ತೊಗುರಿಬೇಳೆಯೆ ನನ್ನ ಸ್ವಲ್ಪವೆಂದೇನು ಕಾರಣವನು ಕಂಡು ನನ್ನೊಡನೀಗನೀನುಸುರಿದೆ ಮಾತು ಹೆಚ್ಚಿ ಬರುತಲಿದೆುೀ ನಡೆ ನಿನ್ನಯ ಶ್ರೇಷ್ಠವದೆನಿಟಷ್ಟೂನಾನಿಲ್ಲದಿರಲು ಸೀಯಾಗುವದೆಂತುರೆನೀನು ಸುಮ್ಮನೆ ಹೇಳಿಕೊಂಬೆ ತನ್ನಯ ಸ್ತುತಿತಾನೆ ಮಾಡಿಕೊಂಬ ಮನುಜಗೆ ನರಕವೆಂಬೀನಿಗದಿಯನರಿತರೆ ಪರನಿಂದೆಯನೀನೆಚ್ಚರಂಗೆಟ್ಟು ಮಾಳ್ಪೆಯ ಇನ್ನಭಿಮಾನವನೀಗ ುರುಯೆನ್ನೆಡೆಯೊಳುನೀನಿರಬೇಡ ಸಾರು ಹೆಚ್ಚುಗೆ ನಿನ್ನದೇನದನೆನಗೆ ತೋರು ದುರ್ಜನರು ತಾವೀನುಡಿ ನಿಜವೆಂಬರು ಸತ್ಪುರುಷರುಮಾನಸದಲಿ ಒಪ್ಪರು ನಿನಗೆ ಅಭಿಮಾನ ಮೊದಲು ಇದ್ದರೂ ಹಾರು ಮುಂದುಜಾಣತನವೆಯಾದರೂ ಹೆದರದಿಪ್ಪೆಹೀನಾಯವೆ ಬಂದರೂ ನಾಲುವರೆನ್ನದೀನಡೆಯೆನ್ನುವರು ಎಂಬುದನೀಗನೀನರಿಯದೆ ಬಂದೆುದು ಪಾಪ ಬೇರು 2ಗೋಧಿ :ಹೋಗಲೆ ತೊಗುರಿ ಬೆಲ್ಲಗಳಿರ ನನ್ನನುಕೂಗಿ ಬೈವಿರಿ ಗೋಧಿ ಯೋಗ್ಯದ ವಸ್ತು ತಾನಾಗದು ಎಂದು ಕೊಬ್ಬಿದ ಮಾತನಾಡುತ ನೀಗಿಕೊಂಬಿರೆ ನಿಮ್ಮ ಮಾನವ ಸದರ ನಿಮಗಾಗಿದೆ ಕೊರಗಿಪರೆ ಮಾತಿನ ಪರಿಯೇಗುವುದೆನಿಸದಿರೆ ನಿಮ್ಮನು ತೃಣಕಾಗಿ ನಾ ಕಾಣುವರೆ ಕಾಣೆನು ಮಾನಹೇಗೆ ನಿಮ್ಮೊಳು ಹೋಗೆ ಯೆನಗೆ ಸಮನಾಗಲು ನೀವು ಬಲ್ಲಿರೆ ುೀ ಯಾಳೆಗೆಹೋಗಿ ನೀವು ಕೊಬ್ಬಿದರೆ ಈಶ್ವರ ಕೃಪೆಯಾಗುವದೆಂತೆನ್ನು ಮರೆಯೊಗಲೊಲ್ಲಿರೆ 3ಎಣ್ಣೆ :ಹರಟಿಕೊಂಬಿರೆ ನೀವೆ ನಿಮ್ಮೊಳು ನನ್ನನುಜರೆಯುತಲೆಣ್ಣೆುಂದೇನೆಂದು ನಾನಿಲ್ಲದಿರಲು ನೀವೆಂತೊಂದು ಗೂಡಿ ಬಾಳುವಿರಿದನರಿಯದೆ ಮುಂಗೆಟ್ಟು ನುಡಿದರೇನಾುತೀಪರಿಯಹಂಕಾರ ಲೇಸಲ್ಲ ಹೀನಾಯವುಬರುವದು ಪರರ ನಿಂದಿಸಿ ಜೀವಿಸುವುದುತರವಲ್ಲ ಸದ್ಗತಿಗೆಟ್ಟು ಕೊನೆಗೆ ಬರದಿರದು ನರಕ ಬೆಂಕಿುಂ ಮೂರುವೇಳೆ ನೀಕೊರಗುವೆ ಬೆಲ್ಲವೆ ಕೇಳು ತೊಗುರಿಯೆ ನೀನಿರದೆ ಸಾರಿಯೊಳು ಬೇಯುವೆ ಗೋಧಿಕೊರಗುವೆ ಕಲ್ಲಿನೊಳು ಚಚ್ಚಿಸಿಕೊಂಡುಇರುವದೆ ನಿಮ್ಮವೊಲು ಕಷ್ಟವದೆಂಬದರಿುರೆ ನೀವು ನನ್ನೊಳು ುಂಥಾ ನಡೆಬರುವುದೆ ಬಹು ಕೇಳಾ ಹೀನಾಯವುಬರದಿರದೀ ಬಾಳು ಯಾತಕೆ ಸುಖಕರ ಮಾರ್ಗ ತಾ ನಿಮ್ಮೊಳು ುಲ್ಲವು ುದನರಿಯದೆ ನಿಮ್ಮಳಲು ಬಿಡದು ನನ್ನಮರೆಯೊಕ್ಕು ಬದುಕುವದಿದು ಬಹುಮೇಲೂ 4ತುಪ್ಪ :ಜಗದೊಳು ನೀವೆ ಬಲ್ಲಿದರೆಂದು ನಿಮ್ಮೊಳುನಿಗದಿಯ ಮಾಡಿಕೊಂಬಿರಿ ಗರ್ವ ಹೆಚ್ಚಿತೆಸುಗುಣವಂತರು ನೀವಾದರೀಪರಿಯಲ್ಲಿಬಗುಳಿಕೊಂಬಿರೆ ತುಪ್ಪವಂ ಬಿಡುಯೆನ್ನುತಮಿಗೆ ಸುರತತಿ ಮೊದಲಾಗಿ ನನ್ನಿಂದಲಿಸೊಗಸಾಗಿ ಕೃಪೆವಡೆವರು ನಾನಿಲ್ಲದೆಮಿಗೆ ಶುದ್ಧರಾಗುವಿರೆಂತು ಬರಿದೆ ನಿಮ್ಮನಿಗದಿಯ ಪೇಳಿಸಿಶಾನಿಗೆ ನನ್ನ ನೀವಗಲಲು ರುಚಿಕರವೆಂತು ನಾನೊಪ್ಪೆನುನಿಗಮದ ಮಾತಿದುವೆ ಸಟೆಯ ಮಾಡಿಸೊಗಸಾಗಿ ಬಾಳಿ ನೀವೆ ಅನ್ಯಾಯಗಳಗಣಿತವಾಗಿುವೆ ನನ್ನಯ ನ್ಯಾಯನಿಗದಿಯಾದರೆ ಹೋಗುವೆ ತಪ್ಪಿದರೆ ಈಜಗದೊಳಗ್ನಿಯ ಪೊಗುವೆ ನಿಮಗೆ ಆಣೆಯಗಲಿದರಿಲ್ಲಿಂದವೆ ಪೋಟಾಟವೆಜಗದೊಳುತ್ತಮ ವಸ್ತುವೆ ನಾನೆಂಬರುಬಗೆುರೆನ್ನನು ನೀವೆ ಮೊಂಡರುಯೆಂದುಖಗವಾಹನಗೆ ಪೇಳುವೆ ಚಿಕ್ಕನಾಗನಗರಕೆ ನಡೆುರಿ ನ್ಯಾಯವ ತಿದ್ದುವೆ 5ಒಟ್ಟಾಗಿ :ದೇವ ಭಕ್ತಾವನ ಪಾವನ ಚರಿತ ಸುರಾವಳಿನುತಪಾದಭಾವಜ ಜನಕ ರಮಾವಲ್ಲಭಾನಂತ ಗೋವಿಂದ ಮಾಧವನೀವರಿಯದೆ ಪೋಗಲಾವಗತಿ ನಮಗೀ ವಸುಧೆಯೊಳ್ಮುನಿಭಾವಿತ ಚರಣನೆಸಾವಧಾನದೊಳು ಪರಾಮರಿಸಿುಂತಪ್ಪದಾವಲ್ಲಿುದ್ದಡಲ್ಲಿಗೆ ತಕ್ಕ ಶಿಕ್ಷೆಯನೇ ವಿರಚಿಸಿ ಗುಣವಿದ್ದಲ್ಲಿ ರಕ್ಷಿಪುದಾವ ಪರಿಯಲಾದರು ಜಗನ್ನಾಥನೆುೀವ್ಯವಹಾರವನು ನಿಗದಿಗೈದುನೀವೊಲಿದೆಮ್ಮುವನು ರಕ್ಷಿಸಬೇಕು ದೇವಾದಿದೇವ ನೀನು ಅನಾಥರ ಕಾವಲ್ಲಿ ದಯಾವಂತನುಸುಜನಪತಿ ಭಾವಿತ ಪಾದಪದ್ಮನು ನೀನೆ ಗತಿನಾವರಿದನ್ಯರನು ಬಾಳುವೆವೆಂತುರಾವಣಾರಿಯೆ ನೀನು ಕೈಪಿಡಿ ಗತಿುವರೆದಿಕ್ಕು ನೀನು ಮಾಡಿನ್ನೇನುಭಾವಿಸೆವನ್ಯರನು ನಮ್ಮಿಂದಲಿಸೇವೆಗೊಳುವ ನೀನಿರಲು ಭಜಿಸದೆ ನಾವು 6ಬರಿದೆ ಜಗಳವಾಡಬೇಡವೀಚೆಗೆ ಬನ್ನಿಒರೆಯುವೆ ಬುದ್ಧಿಯ ಕೇಳಲಿಚ್ಛಿಸಿದರೆತರುಣನಾಗಾಖ್ಯಪುರದ ವೆಂಕಟೇಶನುಗುರುವಾಸುದೇವಾವತಾರವ ತಾಳಿಯೆಕರುಣದಿಂ ತಿಮ್ಮದಾಸನ ಬಹುದೋಷವ ಪರಿದಾಳ್ದನೆಂಬ ಬಿರುದಪೊತ್ತು ನಾನೀಗಮೆರೆಯುವೆನೀವೆಲ್ಲ ಬರಿ ಮಾತ ಮಾಡದೆಶಿರದಲಿ ಹೊತ್ತು ನನ್ನಯ ನುಡಿಗೇಳಲುಬರುವುದು ಕೀರ್ತಿ ಮೂಜಗದೊಳಗದರಿಂದನೆರೆುೀಗ ನೀವೆಲ್ಲರೂ ಒಂದಾಗಿಯೆುರಲು ಸೌಖ್ಯವದೆಂಬರು ವಿಂಗಡದಿ ನೀವಿರಲು ಜನರು ಬೈವರು ಕೂಡಲು ನನ್ನಗುರುದಯ ಬಹುದೆಲ್ಲರು ಹಿಗ್ಗುವರು ಮತ್ತರಿತು ಸಾರವ ಕೊಂಬರು ಬಹಳ ಶ್ರೇಷ್ಠರುವದರಿಯದಿದ್ದರೂ ಹೊಣೆಯ ನೀವೆನೆರೆ ನಿಮ್ಮನೀ ಜನರು ಬೈಯದ ಹಾಗೆಉರು ಶಿಕ್ಷೆಯನೆ ಮಾಳ್ಪರು ಯಾರೆಂಬಿರೆಅರಿುರಿ ಗಂಗಪ್ಪ ಹೊಣೆ ಹೋಗಿನ್ನಾದರು7
--------------
ತಿಮ್ಮಪ್ಪದಾಸರು
ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ ಗಳಿಗಿಯೊಳು ದೋರಿಕೊಡುವರು ಅಂತರಂಗವ ಧ್ರುವ ಹೊಟ್ಟಿಗೆ ಮೊಟ್ಟಿಗೆ ಕಟ್ಟು ಹೋಗಬ್ಯಾಡಿರೊ ಹುಟ್ಟಿಬಂದ ಮ್ಯಾಲೆ ಹರಿನಾಮ ಘಟ್ಟಗೊಳ್ಳಿರೊ ಗುಟ್ಟಲಿದ್ದ ವಸ್ತು ನೀವು ಮುಟ್ಟಿ ಮನಗಾಣಿರೊ ಕೆಟ್ಟ ಗುಣಕಾಗಿ ಬಿದ್ದು ಸಿಟ್ಟು ಹಿಡಿಯಬ್ಯಾಡಿರೊ 1 ಹೊನ್ನಿಗೆ ಹೆಣ್ಣಿಗೆ ಬಾಯಿ ತೆರಿಯಬ್ಯಾಡಿರೊ ಕಣ್ಣಗೆಟ್ಟು ಹೋಗಿ ನೀವು ದಣ್ಣನೆ ದಣಿಯಬ್ಯಾಡಿರೊ ಹೆಣ್ಣಿಗಾಗಿ ರಾವಣೇನು ಪಡೆದುಕೊಂಡ ಕಾಣಿರೊ ಹೊನ್ನಿಗಾಗಿ ವಾಲಿ ಏನು ಸುಖವ ಪಡೆದ ನೋಡಿರೊ 2 ಉರ್ವಿಯೊಳು ಬಂದು ನೀವು ಗರ್ವಹಿಡಿಯ ಬ್ಯಾಡಿರೊ ಕೌರವೇಶ ಮಣ್ಣಿಗೆ ಗರ್ವಹಿಡಿದು ಕೆಟ್ಟ ನೋಡಿರೊ ಅರ್ವಪಥವ ಬಿಟ್ಟು ಮರ್ವಿಗ್ಹೋಗಬ್ಯಾಡಿರೊ ಸರ್ವಸಾರಾಯ ಸುಖ ಹರಿಯ ಭಕ್ತಿ ಮಾಡಿರೊ 3 ಕಾಮ ಕಳವಳಿಗಿನ್ನು ಕುಣಿದು ಕೆಡಬ್ಯಾಡಿರೊ ನೇಮದಿಂದ ಸ್ವಾಮಿ ಶ್ರೀಪಾದ ಬೆರೆದು ಕೂಡಿರೊ ನಾಮರೂಪಕವಗಿ ಬಿದ್ದು ಹಮ್ಮು ಹಿಡಿಯಬ್ಯಾಡಿರೊ ತಾಮಸೆಂಬ ದೈತ್ಯನ ಸುಟ್ಟು ಹೋಮಮಾಡಿರೊ 4 ಭವ ಬಂಧವಾದ ದುಸ್ತರ ಹೋಳಿಯಾಡಬೇಕು ಒಂದೆ ಸೀಳಿ ಮದಮತ್ಸರ ಹೇಳಿಕೊಟ್ಟ ಗುರುವಿನ ಕೊಂಡಾಡಬೇಕು ಎಚ್ಚರ ಬೋಧ ಶ್ಯಾಸ್ತರ 5 ಲೋಕವೆಲ್ಲ ಬಂದು ಹೊನ್ನ ಹೆಣ್ಣು ಮಣ್ಣಿಗಾಯಿತು ಬೇಕಾದ ವಸ್ತು ಬಿಟ್ಟು ಪೋಕುಬುದ್ಧಿಗ್ಹೋಯಿತು ಸುಖ ಸೂರೆಗೊಳ್ಳದೆ ತೇಕಿ ದಣಿದುಹೋಯಿತು ಏಕವಾಗಿ ನೋಡಲು ದೈಥಯ್ಯಗೊಟ್ಟಿತು 6 ಮಹಿಪತಿಯ ಸ್ವಾಮಿಯ ನೆನೆದು ಒಮ್ಮೆ ನೋಡಿರೊ ಇಹಪರಸುಖ ಸೂರ್ಯಾಡಿ ನಲಿದಾಡಿರೊ ಮಹಾಮಹಿಮೆದೋರುತದೆ ಮಯ್ಯ ಮರಿಯಬ್ಯಾಡಿರೊತ್ರಾಹಿತ್ರಾಹಿ ಎಂದು ಮನಗಂಡು ಕುಣಿದಾಡಿರೊ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗಳಿಸಿದೆ ನಾಕಳತಿ ತಿಳಿಯದೆ ನಿನ್ನಳತಿ ಅಳೆದು ಹಾಕಿ ತೊಳಲಿ ಬಳಲಿದೆ ಚಿತ್ತ ಹೊಲತಿ 1 ಏಸು ಜನ್ಮ ತಾಳಿ ಹೆಸಲಿಲ್ಲ ಮೂಳಿ ಘಾಸಿಯಾದೆ ಸೋಶಿಲಿನ್ನು ಆಶಿಯಲಿ ಬಾಳಿ 2 ವಿಷಯದಾಶಿವಳಗ ವಶವನೀಗೊಂಡಲಗ ಪಶುವಿನಂತೆಗಳದಿ ಜನ್ಮವ್ಯಸನದಾಶಿ ಕೆಳಗೆ 3 ಏನ ನೀನಾದರ ಜ್ಞಾನಹೀನನಾದರೆ ಭಾನುಕೋಟಿ ತೇಜನ ನೀ ಶರಣು ಪುಗು ಇನ್ನಾರೆ 4 ಪಿಡಿದು ನಿಜಖೂನ ಪಡೆದುಕೋ ಸುಜ್ಞಾನ ಬಿಡದೆ ಸಹಲುತ್ಹಾನೆ ಮಹಿಪತಿಯ ಸ್ವಾಮಿ ಪೂರ್ಣ5
--------------
ಕಾಖಂಡಕಿ ಶ್ರೀ ಮಹಿಪತಿರಾಯರು