ಒಟ್ಟು 4552 ಕಡೆಗಳಲ್ಲಿ , 126 ದಾಸರು , 2958 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಘುನಾಥ ದೀನಾನಾಥ ಸದ್ಗತಿದಾತ ನೋಡಿರ್ಯೋ ಜಾನಕಿ ಧವಗರ್ಪಿತವೆನೆ ಅವನಿಯೊಳಗೆ ಶಬರಿ ಘವಘವಿಸುತಿಹ ಅವಿರಳ ಪದದನುಭವ ನೀಡಿದಾ1 ದಾವನು ಶೃತಿಗಳು ಭಾವಿಸೆ ನುಡಿಯದು ದೇವನು ಹಿತಗುಜ ಕೇವಲ ವನಚರ ಜೀವರೊಳಾಡುತ ಸೇವೆಗೆ ನಲಿಯುತ ಕೈವಿಡಿ ಬಿತ್ತನು ಕೈವಲ್ಯಾದಾ 2 ಕುಂದದೆ ಬಾಂಧವ ನಿಂದಿಸಿ ನೂಕಲು ನೊಂದು ವಿಭೀಷಣ ಬಂದರ ಶರಣವ ತಂದೆ ಮಹಿಪತಿ ನಂದನ ಪ್ರಭು ಆ ನಂದದ ಸ್ಥಿರಪದ ಹೊಂದಿಸಿದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಘುವರ್ಯ ಕರಜಾತ ಶ್ರೀ | ರಘೋತ್ತಮ ತೀರ್ಥಾ ಪ ಅಘಹರ ಶ್ರೀ ರಾಮ ಪದ ಭಜಕ ನೇಮಾ ಅ.ಪ. ಪ್ರವಚನಾಚಾರ್ಯರಿಂ | ದವಮಾನ ತಡೆಯದಲೆಸವನ ಮೂರರ ಮೇಲೆ | ಪವಡಿಸಿರೆ ತಾನೂ |ಪವನ ಪಿತ ತೈಜಸನು | ಗುರುವರರ ರೂಪಿನಲಿಪ್ರವಚಿಸೆನೆ ನ್ಯಾಯ ಸುಧೆ | ಪ್ರವಚಿಸಿದ ಮಹಿಮಾ 1 ಪ್ರಮೆಯ ದೀಪಿಕೆ ತತ್ವ | ಅಮಮ ಬೃಹದಾರಣ್ಯಸುಮನ ವ್ಯಾಹರಣೆಯನು | ನೀ ಮಾಡಿ ಮುದದೀ |ಕಮಲನಾಭನ ಮಹಿಮೆ | ಅಮೃತವನು ತೆಗೆಯುತಲಿಸುಮನಸರಿಗುಣಿಸಿದೆಯೋ | ರಾಮ ಪದ ಭಜಕಾ 2 ತತುವನ್ಯಾಸವ ಮಾಡೆ | ತತ್ವ ದೇವತೆಗಳನುತತುತತೂ ರೂಪದಲಿ | ಸತತ ನೋಡುವನೇ |ಕ್ಷಿತಿಪತಿ ಶ್ರೀ ಗುರೂ | ಗೋವಿಂದ ವಿಠ್ಠಲನೆಉತ್ತಮೋತ್ತಮನೆನುತ | ಬಹು ಮೆರೆಸಿದಾತ 3
--------------
ಗುರುಗೋವಿಂದವಿಠಲರು
ರಚ್ಚೆ ಕಟ್ಟೆ ಪುರಾಣ ರಾದ್ಧಾಂತವು -ಇದು ಪ ಹುಚ್ಚುತನದಲಿ ನೀ | ಚೋಚ್ಚ ನುಡಿಗಳನಾಡುವುದು ಅ.ಪ ನವನವ ಆಸ್ತಿಗಳೆಲ್ಲ | ಇವನ ಮನೆಗೆ ಸೇರಿ ಬಂತು 1 ಸೊಟ್ಟಮೂತಿ ನಾಗಪ್ಪನ ಸೋದರಿಯರು ಏನು ಹೇಳಲಿ 2 ಇವನಿಗೆ ಬಂತು ಮತ್ತೆ ನಾವು ಬಡವರು ನಮಗೆಲ್ಲಿಂದ ಬಹುದು? 3 ದುರ್ಯೋಧನ ಯೋಗ್ಯ ಕುಂತೀತರಳರದೇ ಅನ್ಯಾಯ ಕೃಷ್ಣನು ನೆರೆ ಮೋಸಗಾರನು ಭಾರತ ಕಥೆಯೆಂಬುವುದು4 ಮೋಸಗಾರರೀವೂರೆಲ್ಲ ಆಶೆ ಪಾತಕರು 5 ತಂಗಿ ಆಸ್ತಿ ಸೇರಿತಿವಗೆ ಭಂಗಿ ಕೋರ ವೆಂಕಟರಾಯ ಮಂಗಿ ಸಂಗದಿಂದಲೀ ಕಮಂಗನಾನನು 6 ಮಧ್ವರಾಯನ ಮಗನ ಕಥೆ ಏನು ಹೇಳೋಣ 7 ಕಾಸಿದ್ದವರೇನು ಮಾಡಿದರೂ ಮಾಡಬಹುದು 8 ದಾರಿಹೋಕರೆಲ್ಲ ಕೂಡಿ ಭಾರಿ ಭಾರಿ ಮಾತುಗಳಾಡಿ ಸೂರೆಗೊಂಬುವರು ಪಾಪ ಶರಧಿಯನ್ನು 9 ಶರಣರ ದೂರಿಪಾತಕಕ್ಕೆ ಭಾಗಿಗಳಹರು 10
--------------
ಗುರುರಾಮವಿಠಲ
ರಜತ ಪೀಠದ ಯಾತ್ರೆ ರಜೋತಮ ಗುಣವುಳ್ಳ | ಪ್ರಜರಿಗೆ ದೊರಕುವದೆ | ತ್ರಿಜಗದೊಳಗೆ ಮುಂದೆ | ಅಜನಾಗಿ ಬಪ್ಪಗೆ | ಭಜನೆ ಮಾಡುವಂಥ ಸುಜನರಿಗಲ್ಲದೆ ಪ ಮಂದಾಕಿನಿ ಮಿಕ್ಕಾದ ನದಿಗಳಲ್ಲಿಗೆ ಪೋಗೆ | ಮಿಂದು ನಾನಾ ಕ್ಷೇತ್ರವ ಬಂದೂ ಬಿಡದೆ ತಿರುಗಿ ವೇದ ಶಾಸ್ತ್ರಗಳು | ಚಂದದಿ ಓದಿಕೊಂಡು | ಕುಂದದೆ ವ್ರತ ಯಾಗ ಯೋಗ ಮಾಡಲೇನು | ಬಿಂದು ಮಾತ್ರ ಫಲವಿಲ್ಲ | ಸುರರು ಒಂದಾಗಿ ಒಂದಿನ | ಅಂದು ಪೀಯೂಷವ ಕರೆಯೆ ಉಂಡವರಾರು 1 ಮಾನವ | ನಾಡೊಳು ಉಡುಪಿ ಯಾತ್ರೆ ಮಾಡಿದರವಗೇನು ಲೇಶ ಸತ್ಕರ್ಮವು | ಕೂಡದು ಕೂಡದಯ್ಯಾ | ಬಿಡಾಲನಂದದಿ ತಿರುಗಿದಂತಾಗುವದು | ಕೇಡಿಗೆ ಗುರಿಯಾಗುವಾ | ಜೋಡು ಇಲ್ಲಿಗೆ ಬಂದು ತಿರುಗಿ ಪೋದರೆಯೇನು | ಆಡಲೇನದಕೆ ತಿಲಾಂಶ ಸುಖವುಂಟೆ 2 ತಮೋ ಯೋಗ್ಯ ಉಡುಪಿನ ಯಾತ್ರೆ ಮಾಡಲು | ಅಮಿತ ಬಲವಂತನಾಗಿ ಪುಟ್ಟಿ ಆಕ್ರಮಿಸಿ ಪುಣ್ಯವನೆ ಕೆಡಿಸಿ ತಮಕೆ ಸಾಧನವಾದ ಸುಖಬಟ್ಟು ಬಹುಕಾಲ | ರಮಣಿ ಮಕ್ಕಳು ಸಹಿತದಿ | ನಿತ್ಯ | ತಮಸಿನೊಳಗೆ ವಾಸಫಲ ವ್ಯರ್ಥವಾಗದು 3 ರಾಜಸ ಗುಣದಲ್ಲಿ ಈ ಯಾತ್ರೆ ಮಾಡಲು | ಭೂಷಣವನೆ ಯಿಟ್ಟು | ವಾಜಿ ಗಜವಾಗಿ ಸೌಖ್ಯ ಈ ಜಗದೊಳು ಒಟ್ಟು ಪೋಗೋದಲ್ಲದೆ ವಿ | ರಾಜಿಸುವದು ಬಲ್ಲದೇ | ರಾಜಮಂದಿರಕೆ ನವರತ್ನ ತೆತ್ತಿಸಿದಂತೆ | ಈ ಜನದ ಸುಖದ ಫಲ ವ್ಯರ್ಥವಾಗುವದು4 ಮುಕ್ತಿಯೋಗ್ಯನು ಬಂದು ಯಾತ್ರೆಯ ಮಾಡಲು | ಮುಕ್ತಿ ಉತ್ತಮ ಕುಲದಲ್ಲಿ | ವ್ಯಕ್ತನಾಗೀ | ದಿವ್ಯ ಮನದಲ್ಲಿ ವಿರುಕುತಿ | ಭಕ್ತಿಜ್ಞಾನದಲಿ ಬಾಳಿ | ಶಕ್ತನೆಂದೆನೆ ಸತತ ಶ್ರೀಮದಾರ್ಯರ | ಭಕ್ತಿಲಿ ಲೋಲಾಡುತ | ಭಕ್ತವತ್ಸಲ ವಿಜಯವಿಠ್ಠಲ ಕೃಷ್ಣಸಾರ | ಭೋಕ್ತನಲ್ಲಿಪ್ಪನು ಫಲ ವ್ಯರ್ಥವಾಗದು 5
--------------
ವಿಜಯದಾಸ
ರಜತ ಪುರೀಶಾ ಪಾಲಿಸೋ | ನಿನ್ನ ಶ್ರೀಪಾದಭಜನೆಯೋಳಿರಿಸೋ ಪ ಅಜ ಜನಕನೆ ಹರಿ | ನಿಜ ಜನರಿಗೆ ನೀವಿಜಯದ ತವ ಪದ | ರಜದವನೆನಿಸೋ ಅ.ಪ. ಕ್ರತು ಕುವರಾ 1 ಭವ ಮುಖನುತ | ಪತ ಸರಸಿಜ ಯುಗಹೃದಯದಿ ಪೊಳೆಯುತ | ಮುದವನೇ ಬೀರೋಶ್ರೀಹಂಸಾ | ಯದು ವಂಶಾ | ಖಲಧ್ವಂಸಾಕೃತ ಕುರುಕುಲ ನಿರ್ವಂಶಾ 2 ಭವ | ಕರುಣಾ ನಿಧಿ ಪೊರೆಗೋವಿಂದ ಎನಗಾನಂದಾ 3
--------------
ಗುರುಗೋವಿಂದವಿಠಲರು
ರಥವನೇರಿದ ರಥಗಾತ್ರ ಪಾಣಿ | ರಥಪತಿ ದಶರಥ ಸುತ ದಶರಥ ನೃಪ ಭಾಗೀ | ರಥಿ ವಿನುತಾ ಸು | ರಥನಯ್ಯ ಮನೋರಥ ದೇವ ಪ ಕರಿ ಭಯಂಕ ಹರ ಹರಿಣಾಂಕಾ | ಕಿರಣಶತ ಧಿಕ್ಕರಿಸುವ ದೇವಾ || ವರಮಣಿ ಭಕ್ತ ವರದಾಯುದಧಿ ತುರಗವು | ಪರತರ ತಮ ತರರಸ | ಪರಮ ಮಂಗಳ ಪುರುಷ ಪ್ರಧಾನಂ | ಪ್ರವಿಷ್ಠ ಭಾ | ಸುರ ಕೀರ್ತಿಹರ ನಿರುತ ಪ್ರದರು ಸುರಪತಿ 1 ಮಣಿಪ್ರಚುರ ಮುತ್ತಿನ ಮುಕುಟ ಸು | ಫಣಿ ಕಸ್ತೂರಿ ಕಂಕಣ ಕೇಯೂರ ಕಾಂ| ಕೌಸ್ತುಭ ಸೂರ್ಯನಗೆಲ್ಲ್ಲೆ | ವನಮಾಲೆ ಹರಿಮಣಿ ಪದಕ ಪಾ | ವನ ಪೀತಾಂಬರ ಮಿನಗುವ ಕಾಂಚಿ | ಝಣ ಝಣ ಮಹಾ | ಧ್ವನಿ ಚರಣ ಭೂಷಣವಾಗಿಯೂ ಮಾ | ನಿನಿ ಕೂಡಾ 2 ಎತ್ತಿದ ಶ್ವೇತಾತಪತ್ರ ಚಾಮೀಕರ | ವಿತ್ತ ನಭ ತುಳುಕುತ್ತಲಿರೆ ಧ್ವಜ | ಮಾತ್ರ ಬಂದಾಗಿ ತೂಗುತ್ತಿರಲು | ಸುತ್ತಲು ಊದುವ ತುತ್ತುರಿ ಶಂಖ | ವತ್ತಿ ಬಾರಿಸುವ ಮತ್ತೆ ವಾದ್ಯಗಳು | ತುತ್ತಿಸುವ ಮುನಿ | ಉತ್ತಮ ಜನ ಬಾ | ಗುತ್ತ ವಡನೆ ಬರುತಿರಲು 3 ವಸು ರುದ್ರಾದಿತ್ಯ ವಸುಜನರ ಪಾ | ಲಿಸುವೆನೆಂದು ದರಶನವು ಸರಸಿಜಗದಾಧರಿಸಿಕೊಂಡು ಅಷ್ಟ ರಸ ನಾಮಕ ಹರುಷದಿಂದ | ನಸುನಗುತ ನೀಕ್ಷಿಸಿಕೊಳುಂತ ಆ | ಲಸ ಮಾಡದೆ ರಂ | ಜಿಸುವ ಲೀಲಾಮಾನಸ ವಿಗ್ರಹ ಮೆ | ಚ್ಚಿಸಿದ ಜನರ | ವಶವಾಗಿಪ್ಪ ರಾಕ್ಷಸ ರಿಪು 4 ವನಧಿ ಚಿನ್ಮಯ ಉ | ಭಯಾ ಭಯ ಹಾರೆ | ಪಯೋವಾರಿ ನಿಧಿ | ಶಯನ ಚತುರ್ಬೀದಿಯಲಿ ತಿರುಗಿ | ಪ್ರೀಯದಿಂದಲಿ ಸ | ತ್ಕ್ರಿಯವಂತ ಜಯ ಜಯ ಪ್ರದಾ | ಸಾರಥಿ ನಿ | ರಯ ವಿದೂರ ವಿಜಯವಿಠ್ಠಲ ಸಾ | ಹಾಯವಾಗುವ ಗಿರಿಯ ವೆಂಕಟರಾಯ ಬಂದಾ 5
--------------
ವಿಜಯದಾಸ
ರಥಾರೂಢ ಮಾರುತ ವಂದಿತ ಯನ್ನಾ ಪಥವ ತೋರೋ ಬೇಗ ಮುಂದಿನ ಪಥವ ತೋರೋ ಬೇಗ ಪ ಸತೀಸುತರುಗಳು ಅತಿಹಿತರೆಂಬುದು ಮತಿಗಳ್ದು ಸದ್ಗತಿಯನು ಪಾಲಿಸು ಅ.ಪ. ದೀನ ಜನರ ಸುರಧೇನುವೆ ನೀ ಬಂಧು ಆನತ ಜನರನು ಮಾನದಿಂದ ಕಾಯೋ 1 ಹನುಮ ಭೀಮ ಮಧ್ವ ಮುನಿನುತ ದೇವನೀ ವನರುಹದಳನೇತ್ರ ಅನಿಮಿಷರೊಡೆಯ 2 ದುಷ್ಟ ಜನರುಗಳರಿಷ್ಟಗೋಸುಗ ಶಿಷ್ಟ್ಟಿಲಿ ಬಂದು ಸುಜನೇಷ್ಟಪ್ರದನಾದಿ 3 ಶಿರಿವತ್ಸಾಂಕಿತ ನಿನ್ನ ಚರಣಕಮಲದಲ್ಲಿ ನಿರುತ ಭಕುತಿಯಿತ್ತು ಪೊರಿಯುತ ಸರ್ವದಾ 4
--------------
ಸಿರಿವತ್ಸಾಂಕಿತರು
ರಧವವೇರಿದ ಚಂದ್ರಾ ರಾಘವೇಂದ್ರನೋಡು ಪಾಡು ಕುಣಿದಾಡಿ ಭಜನೆಮಾಡುಬೇಡಿದ ವರವ ಕೊಡುವಾ ಪಖಂಬದಿ ನರಹರಿ ಬರಿಸಿದ ಕಂಡಾಕುಂಭಿಣಿಪತಿ ಕುಹಯೋಗವ ಕಳೆದಾನಂಬಿದವರ ಪೊರೆವಾ 1ಆದ್ಯ ಸತ್ಯಾಗ್ರ' ಭಕ್ತ ಶಿರೋಮಣಿಉದ್ಗ್ರಂಥಗಳನು ರಚಿಸಿದ ದಿನಮಣಿಮಧ್ವಮತೋದ್ಧಾರಾ2ಭೂಪತಿ - 'ಠ್ಠಲಗೆ ಪ್ರೀತಿ 'ಖ್ಯಾತಾಆಪದ್ಬಾಂಧವ ಅನಾಥನಾಥಾರಥೋತ್ಸವದಿ ಮೆರೆವಾ 3
--------------
ಭೂಪತಿ ವಿಠಲರು
ರಮಾವಿನುತ ವಿಠಲ ಪೊರೆಯಬೇಕೊ ಇವಳ ಪ ಕ್ರಮಾನುಸಾರ ತವದಾಸ್ಯ ಕಾಂಕ್ಷಿಪಳ ಅ.ಪ. ಪತಿಸುತರು ಹಿತರಲ್ಲಿ ವ್ಯತಿರೇಕ ಮತಿ ಕೊಡದೆಅತುಳ ಪ್ರೀತಿಯಲಿ ಅವರಂತರಾತ್ಮಕನಾ |ಹಿತ ಸೇವೆಯೆಂಬ ಸನ್ಮತಿಯನೇ ಕರುಣಿಸುತಕೃತ ಕಾರ್ಯಳೆಂದೆನಿಸೊ ಕ್ಷಿತಿರಮಣ ಹರಿಯೇ 1 ಭವಶರಧಿ ದಾಟಿಸುವ ಪ್ಲವವೆನಿಪ ತವನಾಮಸ್ತವನಗಳ ಸರ್ವತ್ರ ಸರ್ವಕಾರ್ಯದಲಿಹವಣಿಸುತ ನೀನಾಗಿ ಪ್ರವರ ಸಾಧನಗೈಸೊಪವಮಾನ ಸನ್ನಿಹಿತ ಭುವನ ಮೋಹನನೇ 2 ಪ್ರಾಚೀನ ಕರ್ಮಗಳ ಯೋಚಿಸಲು ಎನ್ನಳವೇಕೀಚಕಾರಿಪ್ರೀಯ ಮೋಚಕೇಚ್ಛೆಯನುಸೂಚಿಸುವುದೋ ಸವ್ಯಸಾಚಿಸಖ ಶ್ರೀಹರಿಯೆನೀಚೋಚ್ಚ ತರತಮವ ತಿಳಿಸಿ ಪೊರೆ ಇವಳಾ 3 ನಂದ ಗೋಪನ ಕಂದ ಇಂದಿರೇಶನೆ ಹೃದಯಮಂದಿರದಿ ತವರೂಪ ಸಂದರುಶನಾ |ನಂದವನೆ ಇತ್ತಿವಳ ಅಂದದಲಿ ಸಲಹೆಂದುಕಂದರ್ಪಪಿತ ನಿನ್ನ ವಂದಿಸುತ ಬೇಡ್ವೆ4 ಅನಿರುದ್ಧ ರೂಪಾತ್ಮಮಧ್ವಗುರು ಗೋವಿಂದ ವಿಠಲ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ರಾಘವೇಂದ್ರ ಗುರು ನಮೋ ನಮೋ ಯೋಗಿಜನೇಡಿತ ನಮೋ ನಮೋ ಪ ವಾದಿಜಯಪ್ರದ ನಮೋ ಸಾಧುಜವಾವ ನಮೋ ನಮೋಶ್ರೀಧರ ಬೋಧಕ ನಮೋ ಅಗಾಧತವ ಮಹಿಮ ನಮೋ 1 ಎಷ್ಟು ದಿನವಾಯಿತು ನಮೋ ಶ್ರೀ ಕೃಷ್ಣನ ಕಾಣದೆ ನಮೋಭೆಟ್ಟಿಯ ಮಾಡಿಸು ನಮೋ ವಿಷ್ಣು ದಾಸರೇಣ್ಯನೆ ನಮೋ 2 ತುಷ್ಟ ಮುಖಾಯ ನಮೋ ಶಿಷ್ಯರು ಸೇವಿಸೆ ನಮೋದೃಷ್ಟಿಲಿ ಕಳೆಯುವಿ ನಮೋ ಸರ್ವೇಷ್ಯವರಪ್ರದ ನಮೋ 3 ಚೂತರಸದಿ ಹರಿ ನಮೋ ಪೋತನು ಬೀಳಲು ನಮೋಆ ತನು ತ್ಯಜಿಸಿದ ನಮೋ ಜೀವಾತು ನೀನಾದೆ ನಮೋ 4 ವರಜಯತೀರ್ಥರ ನಮೋ ಸುರಸ ಸುಗ್ರಂಥಕೆ ನಮೋಪರಿಮಳ ಟೀಕೆಯ ನಮೋ ವಿರಚಿಸಿ ರಾಜಿಪೆ ನಮೋ 5 ರತುನಮಾಲಿಯ ನಮೋ ಹುತವಹಗಿತ್ತೆಯೋ ನಮೋಅತಿಶಯ ಪ್ರಾರ್ಥಿಸೆ ನಮೋ ಪ್ರಥಮ ತೆಗೆದುಕೊಟ್ಟೆ ನಮೋ 6 ನಾರದ ಶಿಷ್ಯನೆ ನಮೋ ನಾರಸಿಂಹಾರ್ಚಕ ನಮೋಸೇರಿ ಭಜಿಸಿ ನಿಮ್ಮ ನಮೋ ಎನ್ನ ಚಾರುದೃಷ್ಟಿಲಿನೋಡು ನಮೋ 7 ನಾಕವತಾರನೆ ನಮೋ ಲೋಕನಾಥಾಶ್ರಯ ನಮೋಕಾಕು ದರ್ಮತ ಹರ ನಮೋ ಶ್ರೀಕರ ಸೇವಕ ನಮೋ 8 ವೃಂದಾವನದಲಿ ನಮೋ ನಮೋ ಭಕ್ತ ವೃಂದರಲಿಂದು ನೀ ನಮೋಬಂದು ಮಾತಾಡುವಿ ನಮೋ ಇಂದಿರೇಶನ ಪ್ರಿಯನಮೋ ನಮೋ 9
--------------
ಇಂದಿರೇಶರು
ರಾ‌ಘವೇಂದ್ರ ಗುರುರಾಯ ಬಾಗಿ ನಮಿಸುವೆ ಬೇಗ ಭಾಗವತ ಜನಪ್ರಿಯ ಪ ಮಧ್ವಮತಪಾರಾವಾರ | ಶುದ್ಧಪೂರ್ಣ ಸುಧಾಕರ ಅದ್ವೈತಾದ್ರಿ ಶತಧರ | ಉದ್ಧರಿಸೈ ಯೋಗೀಶ್ವರ 1 ಭೂಷ ಭೂಸುರ ಪರಿವಾರ ಪೋಷ ಪ್ರಹ್ಲಾದವತಾರ 2 ತುಂಗಾಭದ್ರಾ ಸುತೀರದಿ |ಶೃಂಗಾರ ಸದ್ವøಂದಾವನದಿ ಪಿಂಗಳ ಸನ್ನಿಭಾಂಗದಿ | ಕಂಗೊಳಿಸಿದ ದಯಾಂಬುಧಿ 3 ಮರುಥಾವೇಶ ಯಮಿವರಿಯಾ | ದುರಿತಾಹಿ ವೈನತೇಯ | ಪರಮೋದಾರ ಪರಿಮಳಾರ್ಯ | ತರಳನೆಂದು ಕರುಣಿಸಯ್ಯ 4 ಶಾಮಸುಂದರ ಭಕ್ತಾಗ್ರಣಿ | ಭೂಮಿಯೊಳು ನಿನಗಾರಣೆ | ಕಾಮಿತಾರ್ಥ ಚಿಂತಾಮಣಿ | ಸ್ವಾಮಿ ಶ್ರೀ ವ್ಯಾಸ ಸನೌನಿ 5
--------------
ಶಾಮಸುಂದರ ವಿಠಲ
ರಾಘವೇಂದ್ರಂ ಭಜೇಹಂ ||ಶ್ರೀ|| ಪ ಆಗಮಚಯ ವಿಜ್ಞಾನ ಸುಗೇಹಂ ಶ್ರೀಗದಾಬ್ಜ ಚಕ್ರಾಂಕಿತ ದೇಹಂ ಅ.ಪ ರಾಗ ಮೋಹನಾದಿ ರಹಿತಂ ಸುಚರಿತಂ ಭೋಗಿರಾಟ್ ಶಯನ ಗುಣಮತಿ ಮಹಿತಂ ಭಾಗವತೋತ್ತಮ ಮತಿ ಸುಮತಿಯುತಂ ಯೋಗಿ ಜನಹಿತಂ ಶ್ರೀ ಗುರು ನಿರುತಂ 1 ಅತಿಪಾವನ ಕಾಷಾಯ ಸುವಸನಂ ನತಜನೇಷ್ಟ ವಿಶ್ರಾಣನ ನಿಪುಣಂ ಧೃತ ದಂಡ ಕಮಂಡಲ ಶುಭಪಾಣಿಂ ಕೃತ ಹರಿಸುತಿ ಸಂಗೀತ ಸುವಾಣೀಂ 2 ನಿಜತಪಸಾ ಸಮುಜಾರ್ಜಿತ ತೇಜಂ ಸುಜನಾವನ ಗುಣಹಿತ ಸುರಭೂಜಂ ಹರಣ ಕೃಷ್ಣ ವಿಜಯವಿಠ್ಠಲರೇಯಂ ಅಜಿನಾಸನ ಸುಸ್ಥಿರ ಯತಿರಾಜಂ3
--------------
ವಿಜಯದಾಸ
ರಾಘವೇಂದ್ರ ರಾಯರೆಂಬೋ ಮಹಾಯೋಗಿವರರ ನೋಡೈ ಪ ಭಾಗವತರು ಶಿರಬಾಗಿ ಕರೆಯಲತಿವೇಗದಿ ರಥದೊಳು ಸಾಗಿಬರುವ ಶ್ರೀ ಅ.ಪ. ಮಿನಗುವ ಘನವಾಹನಗಳ ರಥ ಶೃಂಗರವೋ ಕರದೊಳುಕನಕಛಡಿ ಕೊಡಿಗಳನುಪಮ ಭಾರವೊಅನಿಳ ನಿಗಮದಿ ನಿಪುಣ ಸುಜನರ ಪರವಾರವೋ ಪರಸ್ಪರಪಣದ ವೇದ ಘೋಷಣ ಸುಸ್ವರ ಗಂಭೀರವೋಘನ ಗುಣ ಗಣಮಣಿ ಮುನಿರಾಯನ ಮನದಣಿಯ ಪಾಡಿ ಕುಣಿಕುಣಿದಾಡಿ ಶಿರವಮಣಿಸುವರೋ ಗುಣವೆಣಿಸುವರೋ ದ-ಕ್ಷಿಣದಿಂ ತೆರಳಿ ವರುಣನ ಬೀದಿಯೊಳು 1 ಧರಣಿ ಸುರವರನಿಕರ ಕುಮುದೋದಯ ಚಂದ್ರನ ಮದ (ನ) ದು-ರ್ಧರ ದ್ವಿರದನ ತೆರಸಿ ಮೆರೆದ ಅಪ್ರತಿಮ ಮುನೀಂದ್ರನಸರಸ ಸುಧಾ ಪರಿಮಳ ಬೆರೆದ ಸುಗುಣಸಾಂದ್ರನ ಧರೆಯೊಳುಸಿರಿ ವಿಜಯೀಂದ್ರರ ಕುವರನೆನಿಪ ಸುಧೀಂದ್ರನಸರಸಿಜ ಸಂಭವ ಶರಣ್ಯ ಸುಂ-ದರ ನಿಜಾಂಘ್ರಿ ಭಜಕರ ಭಾಗ್ಯೋದಯಸುರರ ಸುರಭಿಗೆ ಸಮರೆಂದು ಸಾರಿ ಡಂಗುರ ಹೊಯಿಸುತ್ತ ಉತ್ತರ ಬೀದಿಯೊಳು 2 ವೆಗ್ಗಳ ವಾದ್ಯಗಳ ಸುವಾದ್ಯವೋ ಆರುತಿಯಬೆಳಗುವರು ಹಗಲ ದೀಪಗಳಗಾಧವೋಇಳೆಯೊಳು ಜನುಮ ಸಫಲವೆಂಬುವರ ವಿನೋದವೋ ಹಾಸ್ಯದಲಲಿನೆಯರಡಿ ಘಿಲಘಿಲಕೆಂಬುವ ನಟನ ಭೇದವೋಭಳಿರೆ ಭಳಿರೆ ಭಜಿಸುವರ ಭಕುತಿಬಲಿಗೊಲಿದ ಇಂದಿರೇಶನ ಕರದರಗಿಳಿಯೊ ನಳಿಯೊ ನಳಿನಾಂಘ್ರಿಯುಗದಿನಲಿಯುತ ಸುರರಾಜನ ಬೀದಿಯೊಳು 3
--------------
ಇಂದಿರೇಶರು
ರಾಘವೇಂದ್ರ ವಿಠಲ | ಪೊರೆಯ ಬೇಕಿವನ ಪ ಯೋಗಿಯನೆಗೈಯುತ್ತ | ಯೋಗಮಾರ್ಗದಲಿ ಅ.ಪ. ಪತಿ ಪ್ರಿಯನೇ 1 ಉತ್ತಮ ಸುಸಂಸ್ಕತಿಯ | ಪೊತ್ತು ಶ್ರಮಿಸುತ್ತಿಹಗೆಭಕ್ತಿ ಜ್ಞಾನಗಳನ್ನೆ | ಇತ್ತಿವನ ಸಲಹೋ |ಕರ್ತ ನೀನೆಂಬಮತಿ | ವ್ಯಕ್ತಿಗೈ ಇವನಲ್ಲಿಭಕ್ತಪರಿಪಾಲಕನೆ | ಅವ್ಯಕ್ತಮಹಿಮಾ 2 ಕರ್ಮಾಕರ್ಮಗಳ | ಮರ್ಮಗಳ ತಿಳಿಸುತ್ತಭರ್ಮಗರ್ಭನ ಪಿತನೆ | ಪೇರ್ಮೆಯಲಿ ಪೊರೆಯೋಕರ್ಮಗಳ ಮಾಳ್ಪಲ್ಲಿ | ನಿರ್ಮಮತೆ ನೀಡಯ್ಯನಿರ್ಮಲಾತ್ಮನೆ ಹರಿಯೆ | ಧರ್ಮಗಳ ಗೋಪ್ತಾ 3 ಸಾರ | ಉಣಿಸಿವಗೆ ಹರಿಯೆ 4 ಸರ್ವಜ್ಞ ಸರ್ವೇಶ | ಸರ್ವವ್ಯಾಪ್ತನೆ ದೇವಸರ್ವ ಪ್ರೇರಕ ಹರಿಯೆ | ಸರ್ವಾಂತರಾತ್ಮಾದುರ್ನಿಭಾವ್ಯನೆ ಗುರು | ಗೋವಿಂದ ವಿಠಲನೆದರ್ವಿ ಜೀವಿಯ ಪೊರೆಯೆ | ಬಿನ್ನವಿಪೆ ಹರಿಯೇ 5
--------------
ಗುರುಗೋವಿಂದವಿಠಲರು
ರಾಘವೇಂದ್ರನೆಂದು ನುಡಿದವರಿಗೆ | ಅನುರಾಗದಿಸಲಹುವರಾ ಯೋಗಿ ಶ್ರೀ ರಾಘವೇಂದ್ರರಾಯಾ ಪ ರಾಮಧ್ಯಾನವನು ಮಾಡುತಲನುದಿನ | ಜಯಿಸಿದಿ ರಾಕ್ಷಸರಾ ರಾಯರಾವ್ಯಾಧಿಗಳಳಿದು ಸೇವಾ ಕೊಡುತಿಹರಾ ರಮಾವಲ್ಲಭನಾಶ್ರಯ ಮಾಡಿ | ರಾಜ್ಯವಾಳಿದರೆ ರಾಘವೇಂದ್ರ 1 ಘಾತುಕ ದನುಜನ ಕಾಲವಿದೆಂದು ಎಣಿಸದೆ ಕಲಿಯುಗ ಘನ ಪರಾಕ್ರಮದಿಂದ ಮೆರೆಯುವಿ | ಸುಯತೀಂದ್ರ ನೀ ಘನ ಜಾಡ್ಯಗಳ ಕಳೆದು ಜನರಿಗೆ ಸುರಿಸಿದಿ ಸುಖಮೇಘ ಘಾ ಬುರಿಯಿಂದಲಿ ಬಂದ ಆತುರರಿಗೆ ಕಳದಿರೊ ನೀ ಅಘವಾ 2 ವೇದಶಾಸ್ತ್ರ ಪಾರಾಯಣ ಮಾಡುತ | ವೃಂದಾವನ ದೊಳಿರುವೇ ವ್ಯಥೆಯಿಂದಲಿ ಬಂದಾ ತುರರಿಗೆ | ಅತಿಸುಖವನು ಸುರಿವೇ ವೇದವ್ಯಾಸರು ಮೊದಲಾದರೊಳು | ಆಧಾರದೊಲಿರುವೇ ವೇಷತಾಳಿ ನೀ ಯತಿಯಾಗಿ ಈ ಜಗದೊಳುನೀ ಮೆರೆವೆ 3 ಬಿಡುವೆನುರಾಘವೇಂದ್ರಾ ಮತ್ಸ್ಯ ದ್ರಾಕ್ಷಾಫಲದಂತೆ ಮಧುರವು ತೋರಿಸಲಹೊಗುಣಸಾಂದ್ರಾ ದ್ರವ್ಯ ಪತಿಸಿರಿ ನರಸಿಂಹ ವಿಠಲನ ತೋರೋದಯದಿಂದ ನೀರಾಘವೇಂದ್ರಾ 4
--------------
ಓರಬಾಯಿ ಲಕ್ಷ್ಮೀದೇವಮ್ಮ