ಒಟ್ಟು 2585 ಕಡೆಗಳಲ್ಲಿ , 119 ದಾಸರು , 1949 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೊ |ಕಾಮಧೇನು ಬಂದಂತಾಯಿತು ಸುಖವ ಸುರಿಯಿರೊ ಪಮಕರಕುಂಡಲನೀಲಮುತ್ತಿನ ಚೌಕಳಿ ಇಡುತಲಿ |ಸುಕುಮಾರ ಸುಂದರವಾದ ಉಡುಗೆಯುಡತಲಿ ||ಮುಖದಕಮಲಮುಗುಳನಗೆಯ ಸುಖವ ಕೊಡುತಲಿ |ಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿ 1ಚೆಂಡು-ಬೊಗರಿ-ಚಿಣ್ಣಿಕೋಲು-ಗಜುಗವಾಡುತ |ದುಂಡುಮಲ್ಲಿಗೆತುಂಬಿಕೊಳಲನೂದಿ ಪಾಡುತ ||ಮಿಂಡೆವೆಂಗಳ ಮುದ್ದು ಮೊಗದ ಸೊಗವ ನೋಡುತ |ಭಂಡುಮಾಡಿ ಭಾಮೆಯರೊಡನೆ ಸರಸವಾಡುತ 2ಪೊಕ್ಕುಳಲ್ಲಿ ಅಜನ ಪಡೆದ ದೇವದೇವನು |ಚಿಕ್ಕ ಉಂಗುಟದಿ ಗಂಗೆಯ ಪಡೆದನಾತನು ||ಮಕ್ಕಳ ಮಾಣಿಕ್ಯ ಪುರಂದರವಿಠಲ ರಾಯನು |ಭಕ್ತ ಜನರಿಗೊಲಿದ ನೀನು ಮುಕ್ತಿದಾತನು 3
--------------
ಪುರಂದರದಾಸರು
ರಾಮನ ನೋಡಿರೈ ರಘುಕುಲಸೋಮನ ಪಾಡಿರೈ ಪ.ಜೀಮೂತಶ್ಯಾಮಲಕಾಯ ಜನಕಜಾಮಾತಸೀತಾಕಾಂತಅ.ಪ.ಕೋಟಿದಿವಾಕರನಿಭ ಮಕುಟದ ಮಸ್ತಕದ ಮುದ್ದಿನ ಮುಖದನೀಟಹ ಪಣೆಯಲಿಮೃಗಮದಪುಂಡ್ರತಿಲಕದ ನೀಲಾಳಕದಮಾಟಕ ಮದನನ ಬಿಲ್ಲ ಹಳಿವ ಹುಬ್ಬುಗಳ ಇತ್ತಂಡಗಳನೋಟದಿ ದಯಾರಸ ಸೂಸುವ ಕಮಲದಳಗಳ ಸಮನಯನಗಳ 1ಎಸೆವ ಸುನಾಸಿಕ ಜ್ವಲಿತಕುಂಡಲಸ್ಮಿತವದನ ಶಶಿಸಮರದನಹೊಸ ತುಲಸಿಯ ಮಂಜರಿ ವನಮಾಲಾಧರನ ಸತ್ಕಂಧರನಮಿಸುನಿಯವೈಜಯಂತಿತ್ರಿಸರವು ದಿವ್ಯಪದಕಗಳ ಝಳ ಝಳಪುಗಳಲಸತ್ ಶ್ರೀವತ್ಸ ವಕ್ಷದಿ ಕುಂಕುಮ ಚಂದನದ ಗುಣಗಣಘನದ 2ಮರಕತಸ್ತಂಭಗಳಿಗೆ ಪೋಲ್ವೆಡೆಬಾಹುಗಳ ಅಂಗದಯುಗಳಕರವಲಯಾಂಗುಲಿಮುದ್ರಿಕೆ ಧೃತಕೋದಂಡ ದಂಡಕದಂಡಸಿರಿಜಠರತ್ರಿವಳಿಗಂಭೀರನಾಭ ನಿರ್ಜರನಾಭವರಪಿಂಗಳ ಕೌಶೇಯಾಂಬರಕಟಿಸೂತ್ರಶ್ರೀ ಬ್ರಹ್ಮಸೂತ್ರ3ಬಟ್ಟದೊಡೆಜಾನುಘಟ್ಟಿದಂತೋಪಮ ಜಂಘ ಸಂವೃತ ಜಂಘಾಕುಟಿಲ ನೀ ರಾಕ್ಷಸದಲ್ಲಣ ಪೆಂಡೆಯದ ಚೆಲುವಾ ಜನಜನಿಗೊಲಿವಕಠಿಣತರ ಪದತಳದೆಡೆ ಧ್ವಜಾಂಕುಶಾಂಬುಜ ಹೃತ್ಕಲುಷಾನಿಟಿಲನಯನ ವಿಧಿಸುರ ಋಷಿವಂದಿತಚರಣನೂಪುರಾಭರಣ4ಸುಖಮುನಿ ಮುಖ್ಯಮುನಿ ಪೂಜಿತ ವಿಗ್ರಹ ವಾರಾಪಾರವಿಹಾರನಿಖಿಲ ಗುಣಾರ್ಣವ ನಿತ್ಯದಯಾರ್ಣವ ರಾಜ ರಾಜಾಧಿರಾಜಸಕಲ ಸಂಯಮಿಕುಲಮೌಳಿರತುನ ಸತ್ಯಪೂರ್ಣ
--------------
ಪ್ರಸನ್ನವೆಂಕಟದಾಸರು
ರೊಕ್ಕ ಎರಡಕ್ಕೆ ದುಃಖಗಕ್ಕನೆ ಹೋದರೆ ಘಾತ ಕಾಣಕ್ಕ ಪ.ಚಿಕ್ಕತನಕೆ ತಂದು ಕೆಡಿಸುವುದುರೊಕ್ಕಮಕ್ಕಳ ಮರಿಗಳಮಾಳ್ಪದು ರೊಕ್ಕಸಕ್ಕರೆ ತುಪ್ಪದ ಸಲಿಸುವುದು ರೊಕ್ಕಕಕ್ಕುಲಾತಿಗೆ ತಂದು ಕೆಡಿಸುವುದು ರೊಕ್ಕ 1ಕುಂಟರ ಕುರುಡರ ಕುಣಿಸುವುದು ರೊಕ್ಕಗಂಟು ಮಾಡಲಿಕ್ಕೆ ಕಲಿಸುವುದು ರೊಕ್ಕಬಂಟರನೆಲ್ಲ ವಶ ಮಾಡುವುದು ರೊಕ್ಕತುಂಟತನಕೆ ತಂದು ನಿಲಿಸುವುದು ರೊಕ್ಕ 2ಇಲ್ಲದ ಗುಣಗಳ ಕಲಿಸುವುದು ರೊಕ್ಕಸಲ್ಲದ ನಾಣ್ಯವ ಸಲಿಸುವುದು ರೊಕ್ಕಬೆಲ್ಲದಹಿಕ್ಕಿಂತಲೂ ಸವಿಯಾದ ರೊಕ್ಕಕೊಲ್ಲಲಿಕ್ಕೆ ಕಾರಣವಾಯಿತು ರೊಕ್ಕ 3ಉಂಟಾದ ಗುಣಗಳ ಬಿಡಿಸುವುದು ರೊಕ್ಕನಂಟರ ಇಷ್ಟರ ಮಾಡುವುದು ರೊಕ್ಕಒಂಟೆ - ಆನೆ -ಕುದುರೆ ತರಿಸುವುದು ರೊಕ್ಕಕಂಟಕಗಳನೆಲ್ಲ ಬಿಡಿಸುವುದು ರೊಕ್ಕ 4ವಿದ್ವಜ್ಜನರ ವಶ ಮಾಡುವುದು ರೊಕ್ಕಹೊದ್ದಿದವರನು ಹೊರೆವುದು ರೊಕ್ಕಮುದ್ದು ಪುರಂದರವಿಠಲನ ಮರೆಸುವಬಿದ್ದು ಹೋಗುವ ರೊಕ್ಕ ಸುಡು ನೀನಕ್ಕ 5
--------------
ಪುರಂದರದಾಸರು
ಲಾಲಿಪಂಪಾಂಬಿಕೆಲಾಲಿಭ್ರಮರಾಂಬಿಕೆಲಾಲಿಬಗಳಾಂಬಿಕೆಲಾಲಿಲಾಲಿಎಂದು ಪಾಡಿರಿ ಸಾಧು ಸಜ್ಜನರೆಲ್ಲದೇವಿ ತಾನೇ ಎಂದುಲಾಲಿಪಅದ್ವಯಾಗಮ ದ್ಯುತಿಗೋಚರ ಅನಾದಿಅಚಲಾನಂದವೇಲಾಲಿಶುದ್ಧ ಸಮ್ಯಕ್ ಜ್ಯೋತಿರ್ಮಯ ಸ್ವರೂಪಸುಚರಿತ್ರ ನಿಶ್ಚಲಲಾಲಿಚಿದ್ಬಯಲಿನೊಳು ಹೃದಯ ತೊಟ್ಟಿಲೊಳುಭಾವಹಾಸಿಗೆಯಲ್ಲಿ ಪವಡಿಸಿಹೆಲಾಲಿಸಿದ್ಧರಿ ಮಲಗಿನ್ನು ಜೋಗುಳ ಪಾಡುವೆಶ್ರೀ ಮಹಾಲಕ್ಷ್ಮಿಯೇಲಾಲಿ1ನಿತ್ಯನಿರ್ಗುಣ ನಿಷ್ಕಲಂಕ ನಿರ್ವಿಕಲ್ಪನಿಜನಿತ್ಯ ನಿರ್ಮಳೆಲಾಲಿಸತ್ಯ ವಸ್ತುವೆ ಸನಾಥ ವಿಶೋತ್ಪತ್ತಿಸರ್ವಪರಬ್ರಹ್ಮರೂಪಲಾಲಿಪ್ರತ್ಯಗಾತ್ಮಳೆ ಪೂರ್ಣಪರಮ ಪರತರವಂದ್ಯೆಪಾವನ ಚಾರಿತ್ರೆಲಾಲಿಕರ್ತೃನೀ ಅನಂತ ಬ್ರಹ್ಮಾಂಡಾದಿಗಳಿಗೆಕರುಣಾ ಸಮುದ್ರವೇಲಾಲಿ2ಪೃಥ್ವಿಅಪ್ಪುತೇಜವಾಯುರಾಕಾಶಕ್ಕೆಪೃಥಕಾಗಿ ಹೊಳೆದಿಹಳೆಲಾಲಿಸತ್ವರಜತಮಸು ಮೂರರೊಳಗೆ ನೀಸಾಕ್ಷಿರೂಪದಲಿರುವೆಲಾಲಿವೇದ ವೇದಾಂಗಗಳ ವಾಗ್ರೂಪಿನಲ್ಲಿನೆಲೆಸಿ ರಂಜಿಪಳೆಲಾಲಿತತ್ವವಿಂಶತಿ ಪಂಚಶರೀರಗಳೊಳಗೆ ನೀತೊಳ ತೊಳಗಿ ಬೆಳಗುತಿಹೆಲಾಲಿ3ಜಾಗೃತ ಸ್ವಪ್ನ ಸುಷುಪ್ತಿ ಮೂರವಸ್ಥೆಜನಿತದಿ ಕಾಣಿಸಿಲಾಲಿಪ್ರಾಜÕತೈಜಸವಿಶ್ವಮೂರು ಮೂರುತಿಯಾಗಿಪರಿಣಮಿಸಿ ತೋರುವೆಲಾಲಿಶೀಘ್ರದಲಿ ಸದ್ಭಾವ ಸಚ್ಛಿಷ್ಯರಾದರ್ಗೆಸ್ವಾನಂದ ಸುಖವೀವೆಲಾಲಿರೌದ್ರದಲಿ ಭುಗುಭುಗು ಭುಗಿಲೆಂಬ ಕಳೆಗಳುಅತ್ಯುಗ್ರದಿ ಝಂಗಿಸುವೆಲಾಲಿ4ವಿದ್ಯಾವಿದ್ಯವ ತೋರಿ ದೃಶ್ಯಾದೃಶ್ಯಕೆ ಮೀರಿಅದೃಶ್ಯರೂಪ ಶ್ರೀ ಲಕ್ಷ್ಮೀಲಾಲಿಸಿದ್ಧಿಗಳೆಂಬುವ ಛೇದಿಪ ಹರಿಹರಸರಸಿಜೋದ್ಭವ ಮಾತೆಲಾಲಿಸಿದ್ಧ ಪರ್ವತವಾಸ ಸಾಹಸ್ರದಳ ಮಧ್ಯೆಶ್ರೀ ಬಗಳಾಮುಖಿಲಾಲಿಸದ್ಗುರು ಚಿದಾನಂದಅವಧೂತಬಗಳಾಂಬ ಸಗುಣನಿರ್ಗುಣಮೂರ್ತಿಲಾಲಿ5
--------------
ಚಿದಾನಂದ ಅವಧೂತರು
ಲಾಲಿಸಿದಳು ಮಗನ - ಯಶೋದೆ |ಲಾಲಿಸಿದಳು ಮಗನ ಪಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು |ತರಳನ ಮೈಸಿರಿ ತರುಣಿ ನೋಡುತೆ ಹಿಗ್ಗಿ 1ಬಾಲಕನೇ ಕೆನೆವಾಲ ಮೊಸರನೀವೇ |ಲೀಲೆಯಿಂದಲಿ ಎನ್ನ ತೋಳ ಮೇಲ್ಮಲಗೆಂದು 2ಮುಗುಳು ನಗೆಯಿಂದಲಿ ಮುದ್ದು ತಾ ತಾರೆಂದು |ಜಗದೊಡೆಯನ ಶ್ರೀ ಪುರಂದರವಿಠಲನ 3
--------------
ಪುರಂದರದಾಸರು
ಲೇಸ ಪಾಲಿಸು ಜಗದೀಶನೆ ದಯದಿ |ದೋಷರಹಿತ ಪರಮೇಶನೆ ಮುದದಿ ಪದಾಸ ಜನರ ಮನದಾಸೆಯ ಸಲಿಸುವ |ಸಾಸಿರ ನಾಮ ಸರ್ವೇಶ ಶ್ರೀಶಂಕರ ಅ.ಪಕಾಮ ವ್ಯಾಮೋಹ ಮದಾಂಧಕಾರವು ಬಂದುಪ್ರೇಮದಿ ನಿನ್ನನು ಭಜಿಸಲು ಬಿಡದೂ |ಕಾಮಹರನೆ ಕಾಯೋ ಕಾಮಿತಾರ್ಥವನಿತ್ತು |ಪ್ರೇಮ ಗಿರಿಜಾರಮಣ |ಸೋಮಶೇಖರ ನಿನ್ನ ಲೇಸ ಪಾಲಿಸು 1ಫಾಲಲೋಚನಭವ|ಭಾರನಿವಾರಣ |ಶೂಲಪಾಣಿಯೆ ಮುನಿಜಾಲಸಂರಕ್ಷಣ |ಮಹಾಲಿಂಗೇಶನೆ | ಭಕ್ತಪಾಲಕನೆಂಬುವ |ಮೂಲ ಚರಿತ್ರವಕೇಳಿಬಂದೆನು ದೇವಾ 2ಹಿಂದೆ ಮಾರ್ಕಾಂಡೇಯ ಮುನಿವರ ನಿನ್ನನು |ಚಂದದಿ ಪೂಜಿಸಿ ವಲಿಸಲಾ ಯಮನೂ |ಬಂದು ಪಾಶವ ಕೊರಳ ಸಂದಿನೋಳ್ ಸೇರಿಸ- |ಲಂದು ಮೈದೋರಿ ಗೋವಿಂದಸಖ ನೀ ಕಾಯ್ದೆ 3
--------------
ಗೋವಿಂದದಾಸ
ಲೋಕಪಾಲಕರು96-1ಪೂರ್ಣ ಸುಗುಣಾಂಬೋಧಿಅನಘಲಕ್ಷ್ಮೀರಮಣಜ್ಞಾನಾದಿನಿಖಿಳಸೌಭಾಗ್ಯದನೆ ಸ್ವಾಮಿಅನವರತಸರ್ವ ದಿಕ್ಪಾಲಕರೊಳಿದ್ದು ನೀಎನ್ನ ರಕ್ಷಿಪ ವಿಭುವೆ ಶರಣು ಮಾಂಪಾಹಿಪಇಂದ್ರಾಗ್ನಿ ಯಮ ನಿಯಯತಿ ವರುಣ ವಾಯುಚಂದ್ರ ನಿಧಿಪತಿ ಈಶಾನಫಣಿಬ್ರಹ್ಮಇಂದಿರಾಪತಿ ಸದಾ ನಿಮ್ಮೊಳು ನಿಂತು ಆನಂದ ಸರ್ವೇಷ್ಟಗಳಈವಸ್ಮರಿಪರಿಗೆ1ವಾಮ ಹಸ್ತದಿ ವಜ್ರಬಲ ಕರವು ಅಭಯದವುಹೇಮವರ್ಣನೆ ಸಹಸ್ರಾಕ್ಷಸುರರಾಜಕಾಮಿತಾರ್ಥವನೀವೆ ಐರಾವತಾರೂಢನಮೋ ಶಚೀಪತಿ ಇಂದ್ರ ಶ್ರೀಶಪ್ರಿಯತರನೆ 2ಹೇಮವರ್ಣಾಂಗನೆ ಸಪ್ತಕರ ಸಪ್ತಾರ್ಚಿನಮೋ ಸ್ವಾಹಾಪತಿ ಅಗ್ನಿ ಮೇಷವಾಹನನೆಕಾಮದನೆ ದುರಿತಹನೆ ಹರಿಣೀಶಪ್ರಿಯಕರನೆನಮೋ ಶ್ರುವಾಶಕ್ತ್ಯಾದಿಧರ ಅಭಯಹಸ್ತ 3ಜ್ಞಾನಸುಖಮಯ ವಿಷ್ಣುಯಜÕನಿಗೆ ಪ್ರಿಯತರನೆಕೃಷ್ಣವರ್ಣನೆ ಲೋಕಕರ್ಮಫಲಪ್ರದನೆದಂಡಧರ ಅಭಯದನೆ ಮಹಿಷವಾಹನ ಯಮನೆಎನ್ನ ಮನ್ನಿಸಿಪೊರೆಇಲಾಪತಿಯೆ ಶರಣು4ಅಸುರರಿಗೆ ಭೀಕರ ಕರಾಲ ವಿರೂಪಾಕ್ಷನೆಅಸಿಧರನೆ ಅಭಯದನೆ ಶರಣು ಮಾಂಪಾಹಿನೃಸಿಂಹಪ್ರಿಯತರನೆ ಕಾಳಿಕಾಪತಿ ಊಧ್ರ್ವಕೇಶ ನಿಋಋತಿನೀಲನರವಾಹ ನಮಸ್ತೆ5ಮೀನ ವಡವಕಮಠಕ್ರೋಡನಿಗೆ ಪ್ರಿಯತರನೆಸ್ವರ್ಣವರ್ಣನೆ ವರುಣ ಪದ್ಮಿನೀರಮಣವನಪತಿಯೆ ಮಕರವಾಹನ ಹವಳಭೂಷಣನೆನಿನಗೆ ನಮೋ ಪಾಶಧರ ಅಭಯದನೆಪಾಹಿ6ನಿಯಮನ ಸುಕರ್ತಾ ಶ್ರೀ ಪುಂಡರೀಕಾಕ್ಷನಿಗೆಪ್ರಿಯತರನೆ ಹರಿಣವಾಹನ ಮೋಹಿನೀಶಶ್ಯಾಮವರ್ಣನೆ ವಾಯು ಜಗತ್ ಪ್ರಾಣರೂಪನೆಕಾಯೆನ್ನ ದಯದಿ ಗದಾಪಾಣಿ ಅಭಯದನೆ 7ಸಾರಾತ್ಮ ಹಯಮುಖ ಧನ್ವಂತರಿ ಪ್ರಿಯತರನೆಸೂರಿಜನ ಚಿಂತ್ಯ ನೀ ಸಿತಕಾಂತಿಕಾಯಪೊರೆಎನ್ನ ಅಭಯದನೆ ರೋಹಿಣೀಪತಿಸೋಮಪುರುಟಭೂಷಣ ಸುಖದ ಕುಮುದಸದ್ಮಸ್ಥ 8ಸೌಭಾಗ್ಯ ಸಾರಾತ್ಮ ಶ್ರೀಯಃಪತಿಗೆ ಪ್ರಿಯತರನೆವಿಪರತ್ನನಿಭ ಯಕ್ಷವೈಶ್ರವಣಪಾಹಿಕುಬೇರ ನಿಧಿಪತಿ ಧನಧಾನ್ಯಾಧಿಪತೇ ನಮೊಸೌಭಾಗ್ಯ ಧನ ಧಾನ್ಯ ಸಮೃದ್ಧಿ ಎನಗೀಯೊ 9ಮನುಜವಾಹ್ಯವು ವರವಿಮಾನದಿ ಕುಳಿತಿಹೆಅನಲಾಕ್ಷಶಂಖಗದಾಧರ ನಮೋಕಿರೀಟಿಎನ್ನ ತಪ್ಪುಗಳನ್ನು ಮನ್ನಿಸಿ ಹರಿಭಕ್ತಿಧನಧಾನ್ಯ ಆರೋಗ್ಯ ಸೌಂದರ್ಯವೀಯೊ 10ನಿರ್ದೋಷಸುಖಮಯ ಜಯೇಶನಿಗೆ ಪ್ರಿಯತರನೆನೀ ದಯದಿ ಸಲಹೆನ್ನ ಈಶಾನಶೂಲಿಸದಾಶಿವನೆ ಭಕ್ತರಿಂ ಅಚ್ಛಿನ್ನ ಸೇವ್ಯನೆಸದಾಅಭಯಎನಗಿತ್ತು ಪೊರೆಯೊ ಗೌರೀಶ11ಆನಂದರೂಪ ಸಂಕರ್ಷಣ ಅನಂತನಿಗೆಅನಂತ ನೀ ಪ್ರಿಯತರನು ಶುಕ್ಲವರ್ಣನಿನ್ನಸತಿವಾರುಣೀಸಮೇತ ಅಭಯದನಾಗಿಎನ್ನಪೊರೆಕೃಷ್ಟಿಧರ ನಮೋ ನೀಲವಾಸ12ಜಗದೀಶ ಭೂರಮಣ ಕೇಶವ ಸುಪ್ರಿಯತಮನೆಜಗದಾದ್ಯ ಬ್ರಹ್ಮ ಸರಸ್ವತೀಸಮೇತಖಡ್ಗಧರ ಅಭಯದನೆ ನಮೋ ರಕ್ತವರ್ಣನೆಮುಗಿದುಕರಶರಣಾದೆಪೊರೆಪಿತಾಮಹನೆ13ಐಶ್ವರ್ಯ ಆಯುಷ್ಯ ನೀತಿ ಜಯ ಅಪಿಪಾಸಪಾವಿತ್ರ್ಯ ಸುಖವಿತ್ತಜ್ಞಾನವಿಜ್ಞಾನಈವೋರು ಇವು ಸರ್ವ ಶ್ರವಣ ಪಠಣವ ಮಾಡೆವಿಶ್ರವ ಕಾಶ್ಯಪ ಲೋಕಪಾಲಕರು ದಯದಿ 14ಇಂದ್ರಾಗ್ನಿ ಯಮ ನಿಋಋತಿ ವರುಣ ಪ್ರವಹಸ್ಥಚಂದ್ರ ವೈಶ್ರವಣ ಈಶಾನ ಅನಂತಸ್ಥಮಂದಜಾಸನಪಿತ ಪ್ರಸನ್ನ ಶ್ರೀನಿವಾಸನುಕುಂದದ ಸೌಭಾಗ್ಯವನುಈವಕರುಣಾಳು15
--------------
ಪ್ರಸನ್ನ ಶ್ರೀನಿವಾಸದಾಸರು
ವನಿತೆ ನೀ ತೋರಿಸೆ ಹನುಮನ ಬೇಗ |ತನು-ಮನ-ಧನವನು ನಿನಗೀವೆನೀಗ ಪಆತುರದಿಂದಲಿ ಉದಧಿಹಾರಿದವನ |ಪ್ರೀತಿಯಲಿ ರಾಮನ ಮುದ್ರೆಯಿತ್ತವನ ||ಘಾತಕರನ್ನು ಮುರಿದಟ್ಟಿದವನ -ಸತಿ|ಸೀತೆಯಪತಿರಘುನಾಥಗರ್ಪಿಸಿದನ1ಪಾಂಡುನಂದನನಿಗೆ ಅನುಜನಾಗಿಹನ |ಪುಂಢರೀಕಾಕ್ಷನ ಚರಣಸೇವಿಪನ ||ಪುಂಡ ಕೌರವ ಶಿರವ ಚೆಂಡನಾಡಿದವನ 2ಎರಡು ಮೂರಾರೊಂದು ಕುಮತ ಖಂಡಿಸಿದನ |ಭರದಿ ಮಧ್ವಮತ ಉದ್ಧರಿಸಿದನ ||ಧರೆಯೊಳಧಿಕ ಶ್ರೀಹರಿಯ ಭಜಕನ |ವರದ ಶ್ರೀಪುರಂದರವಿಠಲರಾಯನ3
--------------
ಪುರಂದರದಾಸರು
ವರುಷ ಕಾರಣವಿಲ್ಲ ಹರಿಭಜನೆಗೆ |ಅರಿತ ಸಜ್ಜನರೆಲ್ಲಕೇಳಿಸಮ್ಮುದದಿಪ.ತರಳತನದಲಿ ಕಂಡ ಹರಿಯ ಧ್ರುವರಾಯನು |ಹಿರಿಯ ತಾನವನಯ್ಯ ಕಂಡನೇನೂ ? ||ತರಳ ಪ್ರಹ್ಲಾದ ನರಹರಿಯನು ತಾ ಕಂಡ |ಹಿರಿಯನವನಪ್ಪ ತಾ ಮರೆಯಲಿಲ್ಲವೇನೊ ? 1ಹಿರಿದಾಗಿ ಬಹುಕಾಲ ಮರದ ಮೇಲ್ಬಾಳುವ |ಇರುಳು ಗಣ್ಣಿನ ಗೂಗೆ ತಾ ದೊಡ್ಡದೆ ? ||ಮರೆಯಾದ ಅರಗಿಣಿ ಹರಿಕೃಷ್ಣ ಎಂದೊದರೆ |ಮರಿ ದೊಡ್ಡದೆಂತೆಂದು ಪೇಳುವರು ಬುಧರು 2ಸುರುವದಾ ಒದರುವರು ಅರಣ್ಯವಾಸಿಗಳು |ಮರದಡಿಗೆ ಬಿದ್ದ ಎಲೆಗಳ ತಿನ್ನುತ ||ಪರಮಪಾತಕಿ ಅಜಾಮಿಳನು ನಾರಗ ಎನಲು |ಭರದಿಂದ ಸಲುಹಿದನು ಪುರಂದರವಿಠಲ 3
--------------
ಪುರಂದರದಾಸರು
ವಾಯು ದೇವರುಮುದದಿ ಪಾಲಿಸೊ ಮುದತೀರಥ ರಾಯಾಸದ್ಬುಧ ಜನ ಗೇಯಾ ಪಪದುಮನಾಭ ಪದ ಪದುಮ ಮುದುಪ ಸದಯಾಸದಮಲಶುಭಕಾಯಾ ಅ.ಪ.ವದಗಿರಾಮ ಕಾರ್ಯದಿ ನೀ ಮನಸಿಟ್ಟಿಲಂಕಾಪುರ ಮೆಟ್ಟಿಹೆದರದೆ ದಿತಿಜರನೆಲ್ಲ ಕೊಂದು ಬಿಟ್ಟೆಪುಚ್ಚದಿಪುರ ಸುಟ್ಟಕದನದಿ ಭೀಮವೃಕೋದರ ಜಗಜಟ್ಟಿಸಂನ್ಯಾಸ ತೊಟ್ಟಿ 1ಸೀತಾಶೋಕವಿನಾಶನ ಮಹಂತಾಮಹಬಲಿ ಹನುಮಂತದಾತಜವಾರಿಜಜಾತನಾಗುವಂತಾಖ್ಯಾತಿಯುಳ್ಳವಂಥಾಕೋತಿರೂಪಿಧರ್ಮಾನುಜಜಯವಂತಯತಿನಾಥನೆ ಶಾಂತಾ 2ಶಿರಿಗೋವಿಂದ ವಿಠಲನ ಪ್ರೀತಿ ಕಂದಾಭೀಮನೆ ಆನಂದಾಗರಿದು ಮುರಿದು ಪರಮತವನೆಆನಂದಾ ಮುನಿ ರೂಪದಲಿಂದ ಶಿರಿರಾಮನಸುತರ ಪ್ರೀಯ ಭರದಿಂದಾಬದರಿಗೆ ನಡೆ ತಂದಾ 3
--------------
ಸಿರಿಗೋವಿಂದವಿಠಲ
ವಾವಿಯೀ ಪರಮಾತ್ಮಗೊಂದೂ ಇಲ್ಲ |ಶ್ರೀ ವರನೆ ಇದು ಅಲ್ಲವೆಂಬರಿಲ್ಲ ಪಮೊಮ್ಮಕ್ಕಳನ್ನು ವಂಚಿಸಿ ತಾನೆ ಕೊಲ್ಲಿಸಿದ |ಮೊಮ್ಮಗಗೆ ತನ್ನ ತಂಗಿಯನು ಕೊಟ್ಟ ||ಮೊಮ್ಮಗನ ನಾದಿನಿಯರಲ್ಲಿ ಮಕ್ಕಳ ಪಡೆದ |ಮೊಮ್ಮಗನ ವಹಿಸಿ ಪುತ್ರನ್ನ ಅಳಿದ 1ಒಬ್ಬ ಮಾವನ ನೋಡ ನೋಡ ಪ್ರಾಣವಕೊಂಡ|ಒಬ್ಬ ಮಾವನ ಕೂಡ ಕಡಿದಾಡಿದ ||ಒಬ್ಬ ಮಾವನ ಮೇಲೆ ಬಾಣವನ್ನೇರಿಸಿದ |ಒಬ್ಬ ಮಾವನ ಮಗನಮಾನಕಳೆದ2ಒಬ್ಬ ಅತ್ತೆಗೆ ತಾನೆ ತಂದೆಯನ್ನಿಸಿಕೊಂಬ |ಒಬ್ಬ ಅತ್ತೆಗೆ ಗಂಡನಾದನಿವನು |ಒಬ್ಬ ಅತ್ತೆಗೆ ಮಾವನಾದನೀ ಕೇಶವನು |ಒಬ್ಬ ಅತ್ತೆಯ ಬಹಳ ಶ್ರಮ ಬಡಿಸಿದ 3ಒಬ್ಬ ಮಗಳನು ತನ್ನ ಹಿರಿಯ ಮಗನಿಗೆ ಕೊಟ್ಟ |ಒಬ್ಬ ಮಗಳನು ತಾನೇ ಮದುವೆಯಾದ ||ಒಬ್ಬ ಮಗಳಿಗೆ ಒಂದು ರೀತಿಯಲಿ ಮಗನಾದ |ಒಬ್ಬ ಮಗಳನು ಹಲವರಲ್ಲಿರಿಸುವ 4ಇವನ ನಿಜ ಭಕ್ತನೆಂಬವನು ತನ್ನ ಸತಿಯನು |ಸವಿಯಾಗಿ ನಾಲ್ವರಿಗೆಹಂಚಿಕೊಟ್ಟ ||ಭುವನದೊಳಗೆ ಪ್ರಾಣೇಶ ವಿಠಲನ ಮನೆ ನಡತೆಯಿದು |ಕವಿಗಳೆಲ್ಲರು ತಿಳಿದು ಪೂಜಿಸುತಿಹರು ಮುದದೀ 5
--------------
ಪ್ರಾಣೇಶದಾಸರು
ವಾಸುದೇವ ನಿನ್ನವರ್ಮ ಕರ್ಮಂಗಳದೇಶ ದೇಶದೊಳು ಹೇಳಲೆ ? ಪಬೇಸರಿಯದೆ ಎನ್ನ ಹೃದಯ ಕಮಲದಲ್ಲಿವಾಸವಾಗಿ ಸುಮ್ಮನಿರುವೆಯೊ ? ಅ.ಪಮತ್ಸರೂಪನಾಗಿ ಮನಸು ಕಾಣಿಸಿಕೊಂಡು ಮಕ್ಕಳತಿದ್ದಿದ್ದು ಹೇಳಲೆ ?ಉತ್ಸಾಹದಿಂದ ನಿಗಮವ ತಂದು ಬ್ರಹ್ಮಗೆ ಮೆಚ್ಚಿಕೊಟ್ಟದ್ದು ನಾ ಹೇಳಲೆ 1ಕಡಗೋಲು ಮಂಡೆಯಂದದಿ ಕೈಕಾಲು ಮುದುಡಿಕೊಂಡದ್ದು ನಾ ಹೇಳಲೆ ?ಕಡಲೊಳಗಿಂದ ಪಾತಾಳಕೆ ಇಳಿದಿಳೆ ಪಡೆದಾತನ ಸುದ್ದಿ ಹೇಳಲೆ 2ಹುಚ್ಚುಮನಸುಮಾಡಿ ಕಚ್ಚುತ ಕೆದರುತ ರಚ್ಚೆಯಿಕ್ಕಿದಸುದ್ದಿ ಹೇಳಲೆ ?ಮುಚ್ಚಿದ ಭೂಮಿಯ ಹಲ್ಲಿಂದ ಕಿತ್ತಿದ ಹೆಚ್ಚುತನವ ನಾನು ಹೇಳಲೆ 3ಕಂದನ ಮಾತಿಗೆ ಕಡುಕೋಪದಿಂ ಬಂದು ಕಂಬವನೊಡೆದದ್ದು ಹೇಳಲೆ ?ಕುಂದದೆ ಹಿರಣ್ಯಕಶಿಪುವಿನುದರ ಸೀಳಿ ಕರುಳ್ಮಾಲೆಧರಿಸಿದ್ದು ಹೇಳಲೆ 4ಬಾಲನಾಗಿ ಬ್ರಹ್ಮಚಾರಿ ವೇಷವ ತೋರಿ ಬಲಿಯ ಬೇಡಿದುದನು ಹೇಳಲೆ ?ಲೀಲೆಯಿಂದಲಿ ಧರೆಯಈರಡಿ ಮಾಡಿದ ಜಾಲತನ್ವನುನಾನು ಹೇಳಲೆ5ಹೆಸರಿಲ್ಲದೆ ಹೋಗಿ ಹೆತ್ತತಾಯ್ ತಲೆಕುಟ್ಟಿ ಕೊಡಲಿಯ ಪಿಡಿದದ್ದು ಹೇಳಲೆ ?ಸೋಸಿ ದೈತ್ಯರನೆಲ್ಲ ರೋಸಿ ಪ್ರಾಣವ ಕೊಂಡ ದೋಷತನವ ನಾನು ಹೇಳಲೆ 6ತಾಯ ಮಾತನೆಕೇಳಿ ತಮ್ಮನ ಒಡಗೂಡಿಅಡವಿಯೊಳಿದ್ದುದು ಹೇಳಲೆ ?ಮಾಯಾಸೀತೆಗಾಗಿ ರಾವಣನನು ಕೊಂದು ಮಹಿಮೆಯ ನೆರೆದದ್ದು ಹೇಳಲೆ ? 7ತರಳತನದಲಿ ದುರುಳನಾಗಿ ಬಂದ ಒರಳೆಳೆತಂದದ್ದು ಹೇಳಲೆ(ಬೆರಳಿಂದ ಗಿರಿಯೆತ್ತಿ ಕಂಸನ ಕೊಂದ ಆ ) ದುರುಳತನದ ಸುದ್ದಿ ಹೇಳಲೆ 8.............................................................................................................................................................................. 9ರಾಯ ರಾವುತನಾಗಿ ರಾಯರ ಮನೆ ಪೊಕ್ಕು ಕಡುಗವ ಪಿಡಿದದ್ದು ಹೇಳಲೆ ?ಆಯತದಿಂದ ಕಲಿಯಲಿದ್ದು ಮನುಜರ ಮಾಯವ ತೋರಿದ್ದು ಹೇಳಲೆ 10ಧರೆಯೊಳಗಧಿಕವಾದ ಉರಗಗಿರಿಯಲ್ಲಿ ಸ್ಥಿರಿವಾಗಿನಿಂತದ್ದು ಹೇಳಲೆ ?ಕರುಣದಿಂ ಭಕುತರ ಪುರಂದರವಿಠಲನೆಂದು ನಾ ಹೇಳಲೆ 11 *
--------------
ಪುರಂದರದಾಸರು
ವೀರಭದ್ರೇಶ್ವರನೆ ಪಾಲಿಸು ನಮಸ್ಕಾರವ ಗೈಯುವೆನೆ ಪಫೋರ ಶರೀರನೆ ಧೀರನೆ ಶೂರನೆಕ್ರೂರ ಖಡುಗಧಾರಿತುರಗಸವಾರಿಯೆ ಅ.ಪರುದ್ರ ರೌದ್ರಾವತಾರ ಚಿತೆಯೊಳಂದುಉದ್ಭವಿಸಿದ ವೀರ-ಭದ್ರ ಶರೀರ ಕೆರಳ್ದ ಲೋಚನಾಕಾರಊಧ್ರ್ವ ದೇಶಾನ್ವಿತ ಸಮುದ್ರ ಸಾಹಸಿಯೆ 1ಮಣಿಮಯ ಭೂಷಣನೇ ತೋರುವೆಘೋರಘಣಿ ಘಣಿ ನಾದವನೇಕುಣಿಯುವ ಕೂಗುವ ಭೂತಗಣದಸಂದಣಿಸೇರಿತ್ರಿನಯನಾಜೆÕಯ ತಾಳ್ದು ಧರಣಿಗೆ ನಡೆತಂದ 2ದಕ್ಷಾಧ್ವರ ಹರನೇ ಕ್ರೋಧದಿ ಕ್ರೂರದಕ್ಷನ ಮುರಿದವನೇಸೃಷ್ಟಿ ಪಾಲಕ ಭಗನಕ್ಷಿಯ ಕೀಳಿಸಿದುಷ್ಟ ಪೊಷನದಂತ .... ಸೃಷ್ಟಿಗುರುಳಿಸಿದಾ 3ಪಾದೇಮಠದ ಪುರದೀ ನೆಲಸಿದೆ ಬಂದುಸಾಧು ಜನರ ಪೊರೆದೆಆದಿಮೂರುತಿ ಗೋವಿಂದನ ದಾಸನಆಧರಿಸೈ ಕರುಣೋದಯ ಮೂರುತಿ 4
--------------
ಗೋವಿಂದದಾಸ
ವೆಂಕಟೇಶನ ಮಹಿಮೆಯ ಹೊಗಳುವಕಿಂಕರಧನ್ಯನಯ್ಯಪ.ಇಳೆಯ ಭಕ್ತರ ನೋಡಿದ ವೈಕುಂಠದಿಂದಿಳಿದು ಶ್ರೀಸಹಿತ ಬಂದಸಲೆ ಸುವರ್ಣಮುಖರಿಯ ತೀರವಒಲಿದು ನಿಂತನು ತಿಮ್ಮ್ಮಯ್ಯ 1ಭೂವರಾಹ ಸ್ವಾಮಿಯ ಸನ್ನಿದಶ್ರೀವತ್ಸಲಾಂಛನಿಹಶ್ರೀವಿಮಾನಸಹಿತ ದೇವಾಧಿದೇವ ತಾನಿಲ್ಲಿ ನಿಂತ 2ಸ್ವಾಮಿ ಪುಷ್ಕರಿಣಿಯೆಂಬ ತೀರ್ಥದನಾಮದ ಮಹಿಮೇನೆಂಬೆಆ ಮಹಾ ದುಷ್ಕøತವು ಸ್ನಾನದನೇಮದಲ್ಲೋಡುವುದು 3ರಾಜಾಧಿರಾಜನಿತ್ಯಉಪಚಾರಪೂಜೆ ಲೋಕಾರ್ಥದೊಳು ತಾಮೂಜಗಕಾನಂದವವರಕರುಣಾಜಲಧಿ ಕೊಡುವ 4ನಿತ್ಯಸ್ವಾರಿಗೈದುವಸುರಋಷಿಮೊತ್ತದಿ ಚರಿಪದೇವಮತ್ತೆ ಆ ಲಕ್ಷ್ಮಿಯ ಕೂಡ ಮುನಿವದೊಂದರ್ತಿಯ ಬುಧರು ನೋಡಿ 5ನುಡಿವ ಸಾವಿರ ಪೇರ್ಗಂಟೆ ಉಬ್ಬುಬ್ಬಿಹೊಡೆವರ್ಯೊಡೆ ಜಾಗಟೆಬಡಿವ ಕರಡೆ ಭೇರಿಯು ಮುಂದೆ ಉಗ್ಗಡಿಪ ಸಾಮಗಾನವು 6ಚಿತ್ರವರ್ಣದ ಸತ್ತಿಗೆ ಸಾಲ್ಗಳುಸುತ್ತಲು ಕೈ ದೀವಿಗೆಉತ್ತಮ ವಾಹನವೇರಿ ವಿಶ್ವದಕರ್ತಬಂದನು ಉದಾರಿ7ಉದಯ ತೋಮಾಲೆ ಸೇವೆ ಪುಳುಕಾಪುಮೊದಲಾದ ದಿವ್ಯಸೇವೆಒದಗಿದವಸರಂಗಳು ನೈವೇದ್ಯಮೃದುಭಕ್ಷ್ಯವರಪೊಂಗಲು8ಅತಿರಸ ಮನೋಹರವುದಧ್ಯನ್ನಅತಿರುಚಿ ಅನ್ನವಾಲವುಕ್ಷಿತಿಯ ಮೇಲಿಹ ಭಕ್ತರು ಶ್ರೀಲಕ್ಷ್ಮೀಪತಿಗೆ ಅರ್ಪಿಸುತಿಹರು 9ಹೂವಿನಂಗಿಯ ತೊಡುವಮೃಗಮದಲಾವಣ್ಯ ತಿಲಕಿಡುವಕಾವನಂತರ ತೇಜವ ಗೆಲ್ಲುವಸಾವಿರ ಹೆಸರ ದೇವ 10ತಪ್ಪದೆ ನುಡಿವಂದನು ಮುಡಿಪಿನಕಪ್ಪವೆಣಿಸಿ ಕೊಂಬನುಚಪ್ಪನ್ನ ದೇಶಸ್ತರು ಬಂದು ಸಮರ್ಪಣೆ ಮಾಡುವರು 11ಕೊಟ್ಟ ವಾಕ್ಯಕೆ ತಪ್ಪನು ವರಭಯವಿಟ್ಟು ಸಾಕುತಲಿಪ್ಪನುಇಷ್ಟಾರ್ಥದಾತನಯ್ಯ ವಿಶ್ವದಶಿಷ್ಟರೊಡೆಯ ತಿಮ್ಮಯ್ಯ 12ಕಿರೀಟ ಕುಂಡಲವಿಟ್ಟನು ತಿಮ್ಮಯ್ಯಕರುಣ ನೋಟದ ಚೆಲ್ವನುಅರಿಶಂಖವನು ಧರಿಸಿದ ಹಾರಕೇಯೂರ ಕೌಸ್ತುಭದಲೊಪ್ಪಿದ 13ತೋಳಬಂದಿಯು ಕಂಕಣಮುದ್ರಿಕೆಕೀಲುಕಡಗಒಡ್ಯಾಣನೀಲಮಾಣಿಕ ಪಚ್ಚದ ಮುತ್ತಿನಮಾಲೆಗಳಿಂದೊಪ್ಪಿದ 14ಮಣಿಮಯ ಕವಚ ತೊಟ್ಟ ಗಳದಲಿಮಿನುಗುವಾಭರಣವಿಟ್ಟಕನಕಪೀತಾಂಬರವು ಕಟಿಯಲ್ಲಿಅಣುಗಂಟೆಗಳೆಸೆದವು 15ರನ್ನದಂದುಗೆಯನಿಟ್ಟಿಹ ಪಾದಕೆಪೊನ್ನಹಾವುಗೆಮೆಟ್ಟಿಹಘನ್ನ ದೈತ್ಯರ ಸೋಲಿಪ ಬಿರುದಿನಉನ್ನತ ತೊಡರಿನಪ್ಪ 16ದಿನಕೆ ಸಾವಿರ ಪವಾಡ ತೋರುವಜನಕೆ ಪ್ರತ್ಯಕ್ಷ ನೋಡಘನಶಾಮ ತಿರುವೆಂಗಳ ಮೂರ್ತಿಯಮನದಣಿಯೆ ಹೊಗಳಿರೆಲ್ಲ 17ಭೂವೈಕುಂಠವಿದೆಂದು ಸಾರಿದಭಾವಿಕ ಭಕ್ತ ಬಂಧುಶ್ರೀ ವಾಯುಜಾತ ವಂದ್ಯ ಶ್ರೀನಿವಾಸಗೋವಿಂದ ನಿತ್ಯಾನಂದ 18ಸೇವಕಜನರಪ್ರಿಯಅರುಣರಾಜೀವಲೋಚನ ತಿಮ್ಮಯ್ಯದೇವಶಿಖಾಮಣಿಯು ಬ್ರಹ್ಮಾದಿದೇವರಿಗೆ ದೊರೆಯು 19ಕಶ್ಚಿಜ್ಜೀವನೆನ್ನದೆ ನನ್ನನುನಿಶ್ಚಯದಲಿ ಹೊರೆವನುಆಶ್ಚರ್ಯಚರಿತ ನೋಡಿ ಶರಣರವತ್ಸಲನ ಕೊಂಡಾಡಿ 20ಆರಾಶ್ರಯಿಲ್ಲೆನಗೆ ದ್ರಾವಿಡವೀರನೆ ಗತಿಯೆನಗೆಭೂರಿಪ್ರಸನ್ವೆಂಕಟಪತಿ ಸುಖತೀರಥವರದ ನಮೊ 21
--------------
ಪ್ರಸನ್ನವೆಂಕಟದಾಸರು
ವ್ಯಾಸೋಕ್ತಿಯನುಸರಿಸಿ ಹತ್ತು ಅವತಾರವನುಶ್ರೀಶ ಮಾಡಿದ ದಿನದ ಕ್ಲಪ್ತಿಯಂ ಬರೆವೆ ಸಂ- |ತೋಷದಿಂ ಕೇಳ್ಪುದೆಲ್ಲರು ಪೊರೆವ ಹರಿಯು ಅಭಿ-ಲಾಷೆ ಪೂರೈಸಿ ಬಿಡದೇ ಪಕೃತಯುಗಪ್ರಭವಮಧು ಶುದ್ಧ ಪ್ರತಿಪದಜಲಧಿಸುತವಾರ ರೇವತೀ ವಿಷ್ಕಂಭ ಹಗಲು ಸಂ-ಯುತ ಹನ್ನೆರಡು ಘಳಿಗೆಗವತರಿಸಿಶ್ರೀ ಮತ್ಸ್ಯ ಹತಮಾಡಿ ತಮನೆಂಬನಾ ||ಚತುರಾಸ್ಯವೈವಸ್ವತರಿಗೊಲಿದು ಮೆರೆದ ನೀಕ್ಷಿತಿಯೊಳಗೆ ಮತ್ತಾಯುಗದಿಕೂರ್ಮರೂಪದಿಂಚ್ಯುತರಹಿತನವತಾರ ಮಾಡಿ ಮಾಡಿದ ಕಾರ್ಯ ಮತಿವಂತರಿಗೆ ಪೇಳೂವೆ 1ವಿಭವಾಬ್ದ ಜ್ಯೇಷ್ಠ ಶುಕ್ಲದ್ವಿತೀಯಬುಧವಾರಶುಭದ ರೋಹಿಣಿ ಋಕ್ಷ ಧೃತಿ ಯೋಗ ದಿವದಲ್ಲಿತ್ರಿಭುವನೇಶ್ವರ ನಾಲ್ಕು ಘಳಿಗೆಗುದಿಸಿಯಮೃತಕೃತುಭುಜರಿಗುಣಿಸಿ ಕರುಣದಿಂ ||ಅಭಯವಿತ್ತನ್ಯರನು ದಣಿಸಿ ಧರಿಸಿದನು ಜಲ-ಜಭವಾಂಡ ಮಂದರಾದ್ರಿಯ ಬೆನ್ನಮ್ಯಾಲಿಂದಸುಭುಜಾಹ್ವಯನ ಚರಿತೆ ಸ್ಮರಿಸೆ ಕ್ಲೇಶಹ ಮತ್ತೆ ನಭಗವಹನಾ ಯುಗದಲಿ 2ಶುಕ್ಲ ಸಂವತ್ಸರದಶುಭಮಾಘ ಮಾಸದಲಿಶುಕ್ಲ ಪಕ್ಷದ ಸಪ್ತಮೀ ಭಾನುವಾರದಲಿಅಕ್ಲೇಶಪ್ರದ ಅಶ್ವಿನೀ ಸಾಧ್ಯಯೋಗದಲಿ ಶುಕ್ಲಶೋಣಿತ ವಿದೂರ ||ಶುಕ್ಲಾಂಬರಧರ ಕಿಟಿರೂಪದಿಂದವತರಿಸಿಹಕ್ಲಾಸುರ ಹಿರಣ್ಯಶನ ತರಿದುತ್ವರತನ್ನಒಕ್ಲಾದವರ ಪೊರೆದ ಹಗಲೆಂಟು ಘಳಿಗೆಯೊಳು ಶುಕ್ಲಾಂಗಆ ಯುಗದಲಿ 3ಆಂಗಿರಸವೆಂಬ ಸಂವತ್ಸರದ ವೈಶಾಖತಿಂಗಳದಿಸಿತಪಕ್ಷಚತುರ್ದಶೀ ಶನಿವಾರತುಂಗಸ್ವಾತಿಪರಿಘದಿವಾಷ್ಟ ವಿಂಶತಿ ಘಳಿಗೆಗಾಂಗೇಯಗರ್ಭನೊರವು ||ಸಂಘಟನೆವಾಗಲಾ ಸಮಯದೊಳು ಸ್ತಂಭದಿಂಸಂಗರಹಿತಹರಿಘುಡಿಘುಡಿಸುತಲಿ ಉದಿಸಿನರಸಿಂಗಾಹ್ವಯದಿಹೇಮಕಶ್ಯಪನ ತರಿದು ತರಳಂಗೆ ಸನ್ಮುದವಿತ್ತನೂ4ತ್ರೇತಾಯುಗದಲದಿತಿ ದೇವಿ ಭಕುತಿಗೆ ಮೆಚ್ಚಿಧಾತಾಬ್ದ ಭಾದ್ರಪದಸಿತಪಕ್ಷದ್ವಾದಶೀಖ್ಯಾತಿ ವಿಷ್ಣುಭ ಶುಕ್ರ ಧೃತಿ ಹತ್ತೈದು ಘಟಗೆಪೋತಭಾವದಿ ದಿವವಲಿ ||ತಾಂ ತಾಳಿ ಅವತಾರವಂ ತ್ರಿವಿಕ್ರಮನಾಗಿಭೂತಲಾಗಸವಳೆದು ವೈರೋಚಿನಿಯ ತುಳಿದುಪ್ರೀತಿಪಡಿಸುತ ಶಕ್ರನಂ ಸ್ವರ್ನದಿಯ ಪಡೆದ ಈತಗೆಣೆಯಾರೊ ಜಗದಿ 5ಅದೆ ಯುಗದಲಿ ಪ್ರಮಾಥಿಯೆಂಬ ಸಂವತ್ಸ-ರದಲಿ ವೈಶಾಖ ಶುದ್ಧ ತೃತೀಯೆ ಸುಕರ್ಮ ಯೋ-ಗದಲಿ ರೋಹಿಣಿಮಂದಹನ್ನೊಂದು ಘಟರಾತ್ರಿಯೊದಗುತಿರೆಭೂಪತಿಗಳಾ ||ವಧೆಗೆ ವಿಪ್ರರ ವೃಂದವನು ಪೋಷಣೆಯ ಮಾಡು-ವದಕೆ, ಜಮದಗ್ನಿಯಿಂದವತರಿಸಿ ರಾಮ ನಾ-ಮದಲಿ ಪರಶುವ ಧರಿಸಿ ಈ ಧಾತ್ರಿಯೊಳು ಬಹು ಮೆರೆದಮತ್ತು ಆ ಯುಗದಲಿ 6ತಾರಣೆಂಬಬ್ಧ ಮಧುಮಾಸ ಶುಕ್ಲ ನವಮಿಯಆರನೇ ತಾಸು ದಿವದಲಿ ಪುನರ್ವಸು ಚಂದ್ರವಾರ ಶೂಲೆಂಬ ಯೋಗದಲಿ ದಶರಥನೃಪತಿಹಾರೈಸಿದುದಕೆ ಒಲಿದು ||ಶ್ರೀರಾಮನಾಮದಿಂದವತರಿಸಿ ದೈತ್ಯ ಪರಿವಾ-ರ ರಾವಣನ ಸಂಹರಿಸಿ ವಿಭೀಷಣಗೊಲಿದುವಾರಿಜೋದ್ಭವಮುಖ ದಿವೌಕಸರಿಗಾನಂದ ತೋರಿಸಿದ ಸೀತಾಪತಿ 7ಮೂರನೇ ಯುಗ ವಿರೋಧೀ ಶ್ರಾವಣವದಿ ಅ-ರ್ಧರಾತ್ರಿಯೊಳಷ್ಟಮೀ ರೋಹಿಣೀವಜ್ರಬುಧವಾರದಲಿ ಅಜನ ಬಿನ್ನಹಕೊಪ್ಪಿ ಕೃಷ್ಣಾವತಾರವನು ತಾಳಿ ಧರೆಗೆ ||ಭಾರವಾಗಿದ್ದ ಕಂಸಾದಿ ಖಲವೃಂದ ಸಂ-ಹಾರಮಂ ಗೈದು ಪಾಂಡವರ ಪೋಷಿಸಿವಿಪ್ರಗೋ ರಕ್ಷಣೆಯ ಮಾಡಿ ಧರ್ಮವಂ ಸ್ಥಾಪಿಸಿದ ಶ್ರೀರಮಣ ಮಧ್ವಸದನ 8ಕಲಿಖರಾಬ್ಧಾಷಾಢ ಶುದ್ಧ ದಶಮಿ ವಿಶಾಖನಳಿನಸಖವಾರ ಶುಕ್ಲಾಹ ಯೋಗ ದಿವಾಷ್ಟಘಳಿಗೆಯೊಳು ಜನನೆಂಬ ದೈತ್ಯನಲ್ಲವತರಿಸಿ ಬಲುದುರ್ಮತಿಯ ಪ್ರೇರಿಸಿ ||ಕಳೆಗೆಡಿಸಿ ಬುದ್ಧಾವತಾರವೆಂದೆನಿಸಿ ಶಿವ-ಗೊಲಿದು ತ್ರಿಪುರವ ಕೆಡಿಸಿ ಸಜ್ಜನರ ಸಂಶಯವಕಳದು, ಕರುಣಾಂಬುಧಿಯ ಮಹಿಮೆಯಂತಿಳಿಯಲಸದಳಮಾವಿಧಿಗೆ ಎಂದಿಗೂ 9ದನುಜಪತಿ ಯುಗ ದುರ್ಮುಖಾ ಮಾರ್ಗಶಿರ ಶುದ್ಧಶನಿವಾರ ದ್ವಿತೀಯೆ ಪೂರ್ವಾಷಾಢ ವೃದ್ಧಿ ಮೂ-ರನೆ ಘಳಿಗೆ ದಿವದ ಕಲ್ಕ್ಯವತಾರದಿಂಮ್ಲೇಂಛರನು ಸದೆದು ಭೂ ದಿವಿಜರಾ ||ಘನಮೋದ ಪಡಿಸಿ ವಾಜಿಯನೇರಿ ಮೆರೆದಾಡಿಅನಿಮಿಷರ ಕೈಯ್ಯ ಪೂ ಮಳೆಯಂಗರಿಸಿಕೊಂ-ಡನಘ ಬಲ್ಲವರಿಗಲ್ಲಲ್ಲೆ ಇರುತಿಹನುಪ್ರಣತಜನಕಾಮಧೇನೂ 10ಈ ಪರಿಯಲಚ್ಯುತನ ಅವತಾರ ಚರಿತೆ ಸಂ-ಕ್ಷೇಪದಿಂ ವಿರಚಿಸಿದೆ ಸದ್ಭಕ್ತಿಯಿಂದಿದನುಪಾಪಿಗಳಿಘೇಳದಲೆ ಕಾಲತ್ರಯದಿ ಪಠಸೆ ತಾಪತ್ರಗಳ ಕಳೆದು ||ಈ ಪೊಡವಿಯೊಳಗೆ ಬಹುಮಾನ ಮಾಡಿಸಿ, ತಂದೆ-ಯೋಪಾದಿ ಕ್ಷಣ ಬಿಡದೆ ಸಲಹಿ ಪ್ರಾಂತಕೆ ತನ್ನಆ ಪರಂಧಾಮ ವೈದಿಸುವನತಿ ಕರುಣಾಳು ಶ್ರೀಪ ಪ್ರಾಣೇಶ ವಿಠಲಾ 11
--------------
ಪ್ರಾಣೇಶದಾಸರು