ಒಟ್ಟು 5292 ಕಡೆಗಳಲ್ಲಿ , 123 ದಾಸರು , 3484 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತವತ್ಸಲನೆಂಬ ಬಿರುದು ಬಿಡದಿರು ದೇವ ಬಹು ಪರಾಕೆಲೊ ಮುರಾರಿ ಪ. ಶಕ್ತ ನೀನೆಂದು ನಂಬಿರುವೆ ಕೃಪಾಸಿಂಧು ಮತ್ತಗಜ ಮೈಮರೆದು ಸುತ್ತಿ ಕೆಸರೊಳು ಬಿದ್ದು ಶಕ್ತಿ ಹೀನನಾಗಿ ಏಳದಂತಾಗಿದೆ ಮತ್ತಾರಿಗಳವಲ್ಲ ಮಂದರಾದ್ರಿಧರನೆ ಎತ್ತಿ ಕಡೆಹಾಯಿಸೊ ಎನ್ನೊಡೆಯ ಶ್ರೀ ಹರಿಯೆ 1 ನಿಂದ ನೆಲ ಮುನಿಯುತಿದೆ ನಿಪುಣತನವಡಗಿತು ಮಂದಮತಿ ವೆಗ್ಗಳಿಸಿ ನೆಲೆಗಾಣೆ ಮುಂದೆ ತಂದೆ ನೀನಲ್ಲದಿನ್ಯಾರು ರಕ್ಷಿಪರಯ್ಯ ಬಂಧನವ ಪರಿಹರಿಸೊ ಭಯನಿವಾರಣ ಹರಿಯೆ 2 ಕೊಂಡೆಯರ ಕೆಡಮೆಟ್ಟಿ ಕುಹಕಿಗಳ ಮಸ್ತಕವ ಚೆಂಡಾಡಿದ ಚಿನ್ಮಯರೂಪ ನೀನು ದಿಂಡರಿದು ದುರಳರನು ದುರಿತಗಳ ಪರಿಹರಿಸಿ ಪುಂಡರೀಕಾಕ್ಷ 3 ವ್ಯಾಕುಲದಿ ಕೃಷ್ಣಮೃಗವು ಎದೆಗುಂದಿರೆ ನೀ ಕರುಣಿ ಸಮಯದಲಿ ವೃಷ್ಟಿಯ ಕರೆದು ಜೋಕೆಯಲಿ ಪಥÀವೆನೇರಿಸಿದ್ಯೊ ಜಗದೀಶ 4 ನಿನ್ನನೆ ಪೂಜಿಪೆನು ನಿನ್ನನೆ ಪಾಡಿ ಪೊಗಳುವೆನು ನಿನ್ನನೆ ನಂಬಿದವಳಿಗಿಂತ ಉನ್ನತವಾದ ಕಂಟಕವು ಬಂದಿದೆ ಕಾಯೊ ಪನ್ನಗಶಯನ ಹೆಳವನಕಟ್ಟೆ ರಂಗಯ್ಯ 5
--------------
ಹೆಳವನಕಟ್ಟೆ ಗಿರಿಯಮ್ಮ
ಭಕ್ತವತ್ಸಲಭಯನಿವಾರಣ ಭಾಗವತರ ಪ್ರಿಯ ನಿತ್ಯತೃಪ್ತನೆ ನೀರಜನಯನ ಸತ್ಯಭಾಮೆಪತಿ ಸರಸಿಜವದನ ಪ ಮಂಗಳ ಚರಣದಿ ಗಂಗೆಯ ಪಡೆದ ಭು- ಜಂಗನ ತುಳಿದ ಪದಾಂಬುಜಕೆ ನಮೊ1 ವಿನತೆಸುತನ ಹೆಗಲು ಘಮಿಕಿಲಿಂದೇರಿಪ ಕಣಕಾಲಂದಿಗೆಮಣಿಕಾಲಿಗೆ ನಮೊ 2 ಉಟ್ಟ ಪೀತಾಂಬರ ಕಟ್ಟಿದ ಉಡಿದಾ- ತ್ರಿಜಗ ಊರ್ಹೊಟ್ಟೆಗೆ ನಮೊ 3 ನಾಲ್ಕುಮುಖದ ಅಜನಂದನರುದಿಸಿದ ನಾರಾಯಣ ನಾಭಿಕಮಲಕ್ಕೆ ನಮೊ 4 ಕರ್ಣಕುಂಡಲವು ಕಪೋಲದಲ್ಹೊಳೆಯುತ ಸಣ್ಣ ನಾಮದರವಿಂದನೇತ್ರಕೆ ನಮೊ5 ವರ ಶಂಖಚಕ್ರದ ಕರಕÀಮಲಕೆ ನಮೊ 6 ನಾಸಿಕ ಚೆಲುವ ಪ್ರಕಾಶ ಕಿರೀಟ ಭೀ- ಮೇಶಕೃಷ್ಣನ ಮುಖಪದ್ಮಕೆ ನಮೊ 7
--------------
ಹರಪನಹಳ್ಳಿಭೀಮವ್ವ
ಭಕ್ತಾಧೀನಹರೇ ಭಕ್ತಾಧೀನ ವಿರಕ್ತ ವಿನೋದನ ಭುಕ್ತಿಮುಕ್ತಿದ ಸರ್ವಶಕ್ತಿ ನೀ ದಯವಾಗು ಪ. ಚಂಚಲ ಮನದಿ ಪ್ರಾಪಂಚಿಕ ಸುಖದಾಸೆ ಮಿಂಚಿ ಸಂಸ್ಕøತಿಯಲಿ ಸಂಚರಿಸಿ ಮುಂಚಿನ ಭವಗತ ಸಂಚಿತವರಿಯದೆ ಹಂಚಿಗು ಕಡೆಯಾದೆ ಪಂಚಾತ್ಮನ ನೆನೆಯದೆ 1 ಘೋರ ಸಂಸ್ಕøತಿ ಪಾರ ವಾರುಧಿ ಮುಳುಗ್ಯಾಡಿ ಪಾರುಗಾಣದೆ ಬಹು ಗಾರಾದೆನು ಶ್ರೀರಮಣನೆ ನಿನ್ನಾಧಾರವಲ್ಲದೆ ಮುಂದೆ ಕಂಸಾರಿ ನೀ ಕೃಪೆದೋರು 2 ಭವ ವಾಯು ಗಿರೀಶಾದಿ ದಿವಿಜರ ನಿರತ ಪ್ರೇರಿಸುವಂಥ ದೊರೆಯೆ ನಿನ್ನ ಸ್ಮರಿಸುವೆ ಪರಿವೃತಾಂತರ ನಿಯಾಮಕ ಲಕ್ಷ್ಮೀ- ವರ ವೆಂಕಟಾದ್ರೀಶ ನಿರುಪಧಿ ಕರುಣಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಕ್ತಾರ್ತಿ ಹರ ವಿಠಲ | ತೆತ್ತಿಗನ ಪಾಲಿಸೋ ಪ ಮುಕ್ತೀಶ ಕರುಣಾಳು | ಪ್ರಾರ್ಥಿಸುವೆ ನಿನ್ನಾ ಅ.ಪ. ಕರ ಪಿಡಿದು ಸಲಹೋ 1 ಭವ ತಾಪ | ಕಾರುಣ್ಯನಿಧಿಯೇ 2 ಯತಿಗಳ ಕಾರುಣ್ಯ | ಪಾತ್ರನಿರುವನುಯೀತಅತಿಶಯದ ಸೇವೆಗೆ | ಕಾತುರನು ಇರುವಾಮತಿಯಿತ್ತುಸತ್ಪಥಾ | ಪಥರಲ್ಲಿ ನಡಿಸಿವನರತಿಯು ಶ್ರೀ ಹರಿದಾಸ | ಶತ ಪತ್ರದೊಳಗೆ 3 ಪಾದ | ಅದ್ದೂರಿಯಲಿ ಭಜಿಪಶುದ್ಧ ಬುದ್ಧಿಯನಿತ್ತು | ಉದ್ಧರಿಸೊ ಹರಿಯೇ |ಅದ್ವೈತ ತ್ರಯದರಿಪು | ಬುದ್ಧಿಗೇ ಸಿಲುಕಲೀಶ್ರದ್ಧಾಳುವಿನ ಸಲಹೋ | ಶಬ್ಧ ಗೋಚರನೇ 4 ಕಾಮದಾನತಜನವ | ಶ್ರೀ ವರನೆ ಸರ್ವೇಶ ನೀವೊಲಿಯದಿನ್ನಿಲ್ಲ | ಪಾವನ್ನ ಮೂರ್ತೇಭಾವ ಕೋವಿಯುವ ದೇವ | ಭಾವದಲಿ ಮೈದೊಲೊಗೋವಿಂದಾಂಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಭಕ್ತಿ ಒಂದೇ ಸಾಕು ಸಜ್ಜನರಿಗೆ | ಕು ಯುಕ್ತಿಯಾತಕೆ ಹಲವು ಬಗೆ ಪ ಶಕ್ತರಾಗಿಹ ಅಧಿಕಾರಿಗಳಿಗೆ ಕು- ಯುಕ್ತಿ ಏತಕೆ ಹಲವು ಬಗೆ ಅ.ಪ ದೀನರು ನಾವೆಂದು ದಿನ ದಿನದೀ ನಾನು ಎಂಬುದು ಬಿಟ್ಟಿರುವವಗೆ 1 ಲೇಸಾದ ದಾರಿಯೊಳ್ ನಡಿಯುವರಿಗೆ2 ಹರುಷ ಶೋಕಗಳೊಂದೆ ಸಮನಾಗಿ ತಿಳಿದು ಪುರುಷ ಪ್ರಯತ್ನಗಳನು ಮೆರೆದು ಗುರುರಾಮವಿಠಲನ ಸ್ಮರಿಪರಿಗೆ 3
--------------
ಗುರುರಾಮವಿಠಲ
ಭಕ್ತಿ ಗೀತಾವಳಿ ಸರಸ್ವತಿ ಸ್ತುತಿಗಳು 1 ಜಯ ಜಯ ಜನನಿ ಜಗದುಜ್ಜೀವಿನಿ ಪ ಜಯ ಬ್ರಹ್ಮಾಣಿ ಅ.ಪ ಆವಳ ಕೃಪೆಯಿಂ ಜೀವಿಪೆಮೋ ಮ ತ್ತಾವಳ ವ್ಯಾಪನೆಯಿಂ ದೈವಿಕ ಗುಣಸಂಭಾವಿತರಪ್ಪೆವೋ ಭಾವಿಪೆವಾದೇವಿಯ ನಾವ್ 1 ಉಡುವುದು ತೊಡುವುದು ಕೊಡುವುದು ಹಿಡಿವುದದಾರಿಂದಂ ನುಡಿವೆಣ್ಣೆನಿಸಿದವಳಾವಳೋ ನಾವವ ಳೆಡಬಿಡದೆರೆವೋಂ 2 ತಾಯೆಮಗರಿವಂ ಕಾಯಕೆಬಲಮಂ ಮಾಯೆಯೆ ಬಿಡಿಸಿನ್ನು ಕಾಯಜಪಿತ ಶೇಷಾದ್ರೀಶನೆ ನೆನೆವಾಸನ್ಮತಿಯೆಂದೆಂದುಂ 3
--------------
ನಂಜನಗೂಡು ತಿರುಮಲಾಂಬಾ
ಭಕ್ತಿ ಪಾಶದಿ ಕಟ್ಟುತ ಹರಿಯನು ನಿತ್ಯದಲಿರು ಮನವೇ ಪ. ಭಕ್ತಿಗೆ ಮೆಚ್ಚುತ ಅಚ್ಚುತ ತಾನೆ ಬಹ ನಿಶ್ಚಯವಿದು ಮನವೆ ಅ.ಪ. ಅನುದಿನ ನಾರಾಯಣನೆಂದಣುಗಗೆ ಕ್ಷಣದಿ ಕಂಬದಿ ಬಂದ ದನುಜನ ಮುರಿದ ಗುಣನಿಧಿಯನು ನೀ ಕ್ಷಣ ಬಿಡದನುದಿನ ನೆನೆ ಮನವೇ 1 ಕಲ್ಲಾಗಿದ್ದಹಲ್ಲೆ ಪೊರೆದು ಶಿವ ಬಿಲ್ಲ ಮುರಿದ ರಾಮನ ನಲ್ಲೆ ಕುಬ್ಜೆಯ ಡೊಂಕನೆ ತಿದ್ದಿದ ಖುಲ್ಲ ಕಂಸನ ಗೆದ್ದಾ ಕೃಷ್ಣನ 2 ಅಂಬರೀಷ ದ್ವಾದಶಿ ವ್ರತವನು ಮಾಡೆ ಮುನಿ ಪುಂಗವ ಜರಿಯುತಿರೆ ರಂಗನ ಚಕ್ರದಿಂದ್ಹುಟ್ಟಿದನರಿಯ ದೇವ ಈ ಅಂಗ ಭಂಗರಕೆ ಚಾಟಿ ಶ್ರೀ ಶ್ರೀನಿವಾಸನು 3
--------------
ಸರಸ್ವತಿ ಬಾಯಿ
ಭಕ್ತಿ ಬೇಕು ವಿರಕ್ತಿ ಬೇಕು ಸರ್ವಶಕ್ತಿ ಬೇಕು ಮುಂದೆ ಮುಕ್ತಿಯ ಬಯಸುವಗೆ ಪ ಸತಿ ಅನುಕೂಲ ಬೇಕು ಸುತನಲ್ಲಿ ಗುಣಬೇಕುಮತಿವಂತನಾಗಬೇಕು ಮತ ಒಂದಾಗಿರಬೇಕು 1 ಜಪದ ಜಾಣುವೆ ಬೇಕು ತಪದ ನೇಮವೆ ಬೇಕುಉಪವಾಸ ವ್ರತ ಬೇಕು ಉಪಶಾಂತವಿರಬೇಕು 2 ಸುಸÀಂಗÀ ಹಿಡಿಯಲಿಬೇಕು ದುಸ್ಸಂಗ ಬಿಡಲಿಬೇಕುಶ್ರೀರಂಗವಿಠಲನ್ನ ಬಿಡದೆ ನೆರೆ ನಂಬಿರಬೇಕು 3
--------------
ಶ್ರೀಪಾದರಾಜರು
ಭಕ್ತಿ ಭಾವಗಳು ಸ್ವಲ್ಪಮಾತ್ರವಿಲ್ಲವಾಯಿತು ಪ ಗುರುಗಳಿವರು ಹಿರಿಯರಿವರು ಶರಣರೆಂದು ತಾರತಮ್ಯದಿ ರವನರಿತು ಅರಿಯದಂತೆ ಸಿರಿಯ ಮದದಲಿ ಶುನಕ ನಂಕೆನೋಡಿ ಮರಳುತಿಹರು ಏನನೆಂಬೆ ನೆಲವ ನೋಡದೆ 1 ನಿಟ್ಟಿಸದೆ ಸಾದುಗಳನು ಪ್ರಾಯ ಮದದ ಹಮ್ಮಿನಿಂದ ಭ್ರಷ್ಟ ಜನರು ಪುಣ್ಯ ಪಾಪಗಳನು ತಿಳಿಯದೆ ಅಷ್ಟದಿಕ್ಕು ತಮ್ಮದೆಂದು ಸರ್ವಗಿರಿಯನೇರಿ ತಾವೆ ಶ್ರೇಷ್ಠರೆಂದು ತಮ್ಮ ತಾವೆ ಕೊಂದು ಕೊಂಬರೋ 2 ನೂತನದಾಭರಣ ವಸ್ತ್ರ ಜಾತಿಯನ್ನು ಉಟ್ಟು ಕೊಟ್ಟು ಪ್ರೀತಿಯಿಂದ ತಮ್ಮ ತಾವೆ ನೋಡಿ ಹಿಗ್ಗುತಾ ಧಾತು ತಪ್ಪಿ ನಡೆವ ಜನರ ವಾತಸುತನ ಕೋಣೆಲಕ್ಷ್ಮೀ ನಾಥ ಬಲ್ಲ ನಮಗೆ ಅವರ ಮಾತಿನ್ನೇತಕೋ 3
--------------
ಕವಿ ಪರಮದೇವದಾಸರು
ಭಕ್ತಿಗಭಿಮಾನಿ ಭಾರತೀದೇವಿ ಪ ಶಕ್ತಿ ಕೊಟ್ಟು ಶುದ್ಧ | ಭಕ್ತಿ ಮಾರ್ಗದಲಿರಿಸೇ ಅ.ಪ. ಕೃತ್ತಿವಾಸನ ತಾಯೆ | ಶಕ್ತಿ ನಿರ್ಭಯ ವೀಯೆಎತ್ತು ಭವದಿಂದೆನ್ನ | ಇತ್ತು ಜ್ಞಾನಾನ್ನ |ಉತ್ತಮೋತ್ತಮ ಹರಿಯ | ಚಿಂತೆ ಮಾಡುವ ಪರಿಯಬಿತ್ತರಿಸಿ ಮನದಲ್ಲಿ | ಹರಿಯ ತೋರಲ್ಲೀ 1 ಸತಿ ನಿನ್ನ | ಪಾದಕಮಲಗಳನ್ನಸಾಧು ಸಮ್ಮತವೆನಿಪ | ಮಾರ್ಗದಲಿ ಭಜಿಪ |ಹಾದಿ ತೋರಿಸು ತಾಯಿ | ವೆಸೂೀದ ಮುನಿ ಮತದಾಯಿಕಾದು ಕೋ ನೀ ನಿನ್ನ | ಕಂದ ನೆಂದೆನ್ನ 2 ಅಪರೋಕ್ಷ ಮಾನಿ |ಭಾವ ಜನಯ್ಯ ಗುರು | ಗೋವಿಂದ ವಿಠಲನಪಾವನವು ಪದ ದ್ವಂದ್ವ | ತೋರು ಆನಂದ 3
--------------
ಗುರುಗೋವಿಂದವಿಠಲರು
ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ ಮುಕ್ತಿಶೀಲವು ತಿಳಿದು ನಿಜವಿರಕ್ತತನದಲಿ ಬಾಳಿ ಧ್ರುವ ಪ್ರೇಮ ಪ್ರೀತಿ ರತಿ ನೇಮದಲಿ ಶ್ರೀಸ್ವಾಮಿ ಚರಣದಲಿಡಬೇಕು ಸೌಮ್ಯ ಸಮಾಧಾನದಲಿ ತಾನಮೃತವನು ಹಿಡಿಯಬೇಕು ನಿರ್ಮಳದಲಿ ನಡಿಬೇಕು ಪಡೆದು ಸಮದೃಷ್ಟಿಗುಡಬೇಕು 1 ನಿತ್ಯ ವಿವೇಕವು ತಿಳಿದು ಪಥ್ಯದಲಿ ನಡಿಯಬೇಕು ಚಿತ್ತವೃತ್ತಿ ಸವೃತ್ತಿಯ ಮಾಡಿ ಸತ್ಯದಲಿ ನುಡಿಯಬೆಕು ಉತ್ತಮೋತ್ತಮ ವಸ್ತುದ ನಿಜಸುಖ ಹೃತ್ಕಮಲದಲಿಡಬೇಕು ಭಕ್ತಿಗೆ ಭಾವನೆ ಬಲಗೊಂಡು ವೈರಾಗ್ಯದ ಸುಖ ತೊಡಬೇಕು 2 ಸೋಹ್ಯ ಸೋನ್ನಿಯ ಸೂತ್ರವ ತಿಳಿದು ಸ್ಥಾಯಿಕನಾಗಿರಬೇಕು ಧ್ಯೇಯಧ್ಯಾತಧ್ಯಾನವ ತಿಳಿದು ಮಾಯದ ಮೊನೆ ಮುರಿಬೇಕು ನ್ಯಾಯ ನೀತಿಯ ನೆಲೆನಿಭವನು ಉಪಾಯದಲಿ ಅರಿಯಬೇಕು ಪಾಯಕನಾಗನುದಿನ ಮಹಿಪತಿ ಗುರುಪಾದದಿ ಸ್ಥಿರವಿರಬೇಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಕ್ತಿನೋಡಿ ಜನ ಮಾಡುವ ಪರಿಯ ಮುಕ್ತಿಯ ಮಾರ್ಗವ ಯುಕ್ತಿಯನರಿಯದೆ ಭಕ್ತ ನಾನೆಂದಾಡುವರ್ಹೊರಿಯ ಧ್ರುವ ಚಕ್ಕಮಲಕು ಭಕ್ತಿಯ ನೋಡಿ ಉಕ್ಕಿ ದೋರುತಲ್ಯದ ಬಲಗೂಡಿ ಮಿಕ್ಕ ಮಾನವರಿಗೆ ದಯಮಾಡಿ 1 ಡಂಭದೋರು ವನೇಕಚಂದ ಗುಂಭಹೇಳನು ಸರಕ್ಕನೆ ಬಂದು ಕೊಂಬುಕೊಡುವ ಮಾತಿಗೆ ಬಂದರೆ ನಂಬದೆ ಹೋಗುವರತ್ತತ್ತ ಹಿಂದ 2 ಹೊಟ್ಟಿನಮ್ಯಾಲೆ ಸಾರಿಸಿದಂತೆ ನಿಷ್ಠೆನೋಡಿ ಜನ ಮೋಹಿಸುವಂತೆ ಘಟ್ಟಿಸುತ ತಮ್ಮ ಹೊಟ್ಟೆಯ ಹೊರೆದರು ಮುಟ್ಟ ಭಜಿಸುವ ಗುಟ್ಟುದೋರಿದಂತೆ3 ರಚ್ಚಿಗೆ ಬಂತು ಭಕ್ತಿ ಇದೇ ಬಹಳ ಹೆಚ್ಚು ನಮ್ಮದೆಂದು ಮಾಡುರು ಮ್ಯಾಳಿ ಮತ್ಸರದೊಳಗಿದ್ದು ಸಚಲಸ್ನಾನ ಮಾಡಿದೆವೆಂದು ಹೇಳುರು ನಿರ್ಮಲ4 ನಗೆ ಬರುತ್ತದೆ ಭಕ್ತಿಯ ಕಂಡು ಜಗದೊಳಗೆಲ್ಲ ಇದೇವೆ ಭಂಡು ಸುಗಮ ಸುಪಥ ಬ್ಯಾರದೆ ಎಂದು ಮಹಿಪತಿ ಘನಬೆರೆದು ಸದ್ಗುರು ಬಲಗೊಂಡು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಕ್ತಿಪಥ ಸಲ್ಲಿಸೈ ಸತತ ಸುಖಿ ಮುರವೈರಿ | ಸಂಸಾರ ಘೋರ ಭಯದೂರೋಡಿಸಿ ಹರಿಯೆ | ತ್ವತ್ವಾದ ಸಂಸೇವಿಪ ಸೌಭಾಗ್ಯತ್ವರ ನೀಡೋ ಶ್ರೀಕಾಂತನ ಪ ಅಪರಾಧ ನೋಡದಲೆ ಕೃಪೆಯಿಂದ ಕರಪಿಡಿಯೊ | ಪಾಪಾಂಧ ಗೋಪಾಲಾ ನೀ ಪಾರುಗೈಯುವದು 1 ಕಡೆಹಾಯಿಸೋ ದೇವನೆ ತಡಮಾಡದೆ ಜಡಜಾಂಬಕ ಶ್ರೀಹರೇ 2 ಶ್ರೀಶಾಮಸುಂದರನೆ | ಶಿಶುನಿಂಗೆ ಪಡೆದವರು ಮೋಸದಿಂದ ಘಾತಿಸುವರೆ | ದಾಶರಥ ಭವಘುಸಣೆ ತ್ವರಿತದಿ ಪರಿಹರಿಸುತ ಗೋವಿಂದನೆ ನೀನೋಡೊ ಸುಜ್ಞಾನವಾ 3
--------------
ಶಾಮಸುಂದರ ವಿಠಲ
ಭಕ್ತಿಯನು ಪಾಲಿಸುತ ಭಕ್ತರನು ಪಾಲಿಸುವ ಮುಕ್ತಿದಾಯಕ ಹರಿಯ ಸೇವೆಯನು ಮಾಳ್ಪೇ ಪ ಪಂಚೇಂದ್ರಿಯವ ಗೆದ್ದು ಪಂಚಾಮೃತಗಳಿಂದ ಕಂಚಿಪುರ ವಾಸಿಯ ಕಾಯವನು ತೊಳೆದೂ 1 ಆರು ಅಂಗಳ ಜೈಸಿ ಆರು ಶಾಸ್ತ್ರಗಳಿಂದ ಧಾರೆ ಪುರವಾಸಿಗೇ ಗಂಧ ಲೇಪಿಸುತಾ 2 ಚಾರು ವೇದಗಳಿಂದ ನಿತ್ಯ ಪುಷ್ಪವೇರಿಸುತ 3 ಎಂಟ ಕೀಳರ ಗೆದ್ದು ತುಂಟರೈವರ ಕೊಂದು ಬಂಟನಾಗುತ ಹರಿಯ ಮಹಿಮೆಯನು ಭಜಿಸಿ 4 ಶಾಪ ತಾಪವ ಕಳೆದು ತ್ರಿಪುರಾರಿ ವದ್ಯನಿಗೆ ಧೂಪದೀಪಗಳಿಂದ ಆರತಿಯ ಬೆಳಗೀ 5 ಅನುಮಾನವನು ತ್ಯಜಿಸಿ ಶ್ರೀ ಚೆನ್ನಕೇಶವನಿಗೆ ತನುಮನ ಧನದಿಂದ ಆತ್ಮವರ್ಪಿಸುವೇ 6
--------------
ಕರ್ಕಿ ಕೇಶವದಾಸ
ಭಕ್ತಿಯಲಿ ತನುಮನವು ಸತತ ಬಗ್ಗಿರಲಯ್ಯ ಭುಕ್ತಿಯೆ ಮಹಾಭಕ್ತಿ ನೀಡು ಎನಗೆ ಪ ಯುಕ್ತಿ ಶಕ್ತಿಗಳೆಲ್ಲ ಬಿಡದಿರಲಿ ತತ್ಪಾದ ಶಕ್ತಿಯನು ಎಂದೆಂದು ಗುಣಪೂರ್ಣ ನಿಧಿಯೆ ಅ.ಪ ಇಹಭೋಗ ಬಿಡಿಸಯ್ಯ ಮಹದಾದಿ ದೇವೇಶ ಗುಹಪಿತನಸಖ ನರನಸೂತ ಬಂಧು ಮುಹುರ್ಮುಹು ಪ್ರಾರ್ಥಿಸುವೆ ಮಹಿದಾಸ್ಯ ಹರಿದಾಸ್ಯ ಮಹಪದವಿ ಕರುಣಿಸಯ್ಯ ಮರುತ ಮಂದಿರ ವಿಭುವೆ 1 ಪಂಚಬೇಧ ಜ್ಞಾನ ಅನುಷ್ಠಾನದಿ ಇರಲಿ ಚಂಚಲಿಲ್ಲದ ಭಕ್ತಿ ಇತ್ತು ಮೆಚ್ಚಿ ವಂಚಿಸದೆ ಸಂಸಾರ ಯಾತ್ರೆಯಲಿ ಒಡನಾಡು ಪಂಚಾತ್ಮ ಜಯೇಶವಿಠಲನೆ ಮದ್ಬಿಂಬ 2
--------------
ಜಯೇಶವಿಠಲ