ಏನು ದುಷ್ಕøತ ಫಲವೋ ಸ್ವಾಮಿ
ಶ್ರೀನಿವಾಸನೆ ಪೇಳೋ ಪ.
ಏನು ಕಾರಣ ಭವಕಾನನದೊಳು ಬಲು
ಹಾನಿಯಾಗಿ ಅವಮಾನ ತೋರುವದಿದು ಅ.ಪ.
ಹಂಬಲವೂ ಹಿರಿದಾಯ್ತು ಎನ್ನ
ನಂಬಿಕೆಯೂ ಕಿರಿದಾಯ್ತು
ಸಂಭ್ರಮವಲ್ಲ ಕುಟುಂಬಿಗೆರೆನ್ನಯ
ಹಂಬಲಿಸರು ನಾನೆಂಬುವದೇನಿದು 1
ಹಣವಿಲ್ಲಾ ಕೈಯೊಳಗೆ ಸ-
ದ್ಗುಣವಿಲ್ಲಾ ಮನದೊಳಗೆ
ಜನಿತಾರಭ್ಯದಿ ತನುಸುಖವಿಲ್ಲೈ
ಘನದಾಯಾಸವ ಅನುಭವಿಸುವದಾಯ್ತು 2
ಪೋದರೆಲ್ಲ್ಯಾದರು ಅಪ-
ವಾದವ ಪೇಳ್ವರು ಜನರು
ಆದರವಿಲ್ಲೈ ಶ್ರೀಧರ ತವ ಚರ-
ಣಾಧಾರವೆ ಇನ್ನಾದರೂ ಕೃಪೆಯಿಡು 3
ಗೋಚರವಿಲ್ಲೆಲೊ ರಂಗ ಎನ್ನ
ಪ್ರಾಚೀನದ ಪರಿಭಂಗ
ನಾಚಿಕೆ ತೋರದ ಯಾಚಕತನವ-
ನ್ನಾಚರಿಸುವ ಕಾಲೋಚಿತ ಬಂದುದು4
ಸೇರಿದೆನೆಲೊ ರಂಗ ಕೃಪೆ
ದೋರೆನ್ನೊಳ್ ನರಸಿಂಗ
ಭಾರವೆ ನಿನ್ನ ಮೈದೋರಿ ರಕ್ಷಿಸುವುದು
ನಾರದನುತ ಲಕ್ಷ್ಮೀನಾರಾಯಣ ಗುರು5