ಒಟ್ಟು 904 ಕಡೆಗಳಲ್ಲಿ , 92 ದಾಸರು , 780 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾವೇರಿ ಕಲುಪಾಪಹಾರಿ ಪಾವನ ಶರೀರೆ ಶುಭತೋಷಕಾರಿ ಪ ವಾಸುದೇವ ರಂಗೇಶನಾಲಯಕೆ ನೀ ನಾವರಣಳಾಗಿಪ್ಪೆ ವಿರಜೆಯಂತೇ ದೇವ ಋಷಿ ಗಂಧರ್ವ ಪಿತೃಪ ನರವರರಿಂದ ಸೇವನೀಯಳಾಗಿ ಸರ್ವಾರ್ಥ ಪೂರೈಪೆ 1 ಜಲಚರಾನ್ವೇಷಣ ಲುಬ್ಧ ಸಾಲಿಗ್ರಾಮ ತುಲಸಿ ವೃಕ್ಷವನೆ ಕೊಡಿಸಿದ ಮಾತ್ರದೀ ಕಲುಷರಾಶಿಗಳೆಲ್ಲ ಕಳೆದು ಮುಕ್ತಿಯನಿತ್ತೆ ಸಲಿಲಮಂದಿರೆ ನಿನ್ನ ಕರುಣಕೇನೆಂಬೆ 2 ರವಿ ತುಲಾರಾಶಿಗೈದಿದ ಸಮಯದೊಳಗೊಂದು ಮಜ್ಜನ ಗೈವ ಮಾನವರಿಗೆ ಪವನಾಂತರಾತ್ಮಕನ ಪಾದಕಮಲವ ತೋರಿ ಭವಜ ರೋಗವ ಕಳೆದು ಭಾಗ್ಯವಂತರ ಮಾಳ್ಪೆ 3 ಶ್ರೀ ಪವನ ಶಿವರಿಂದ ತಾ ಪೂಜೆಗೊಳುತ ಬಹು ಪರ ಮನು ವ್ಯಾಪಿಸಿಹ ನಿನ್ನೊಳದ್ಯಾಪಿ ಸ್ವರ್ಗಸ್ಥ ಜನ ರೀ ಪೊಡವಿಯೊಳು ತವ ಸಮೀಪದಲಿ ಜನಿಸುವರು 4 ಮೂಢಮತಿ ನಾನು ಕೊಂಡಾಡ ಬಲ್ಲೆನೆ ನಿನ್ನ ಬೇಡಿಕೊಂಡೆನು ಹೃದಯ ನೀಡದೊಳಗೇ ಗೂಡ ಪದ ಶಯನ ಜಗನ್ನಾಥ ವಿಠ್ಠಲನಂಘ್ರಿ ನೋಡುವ ಸೌಭಾಗ್ಯ ದಯ ಮಾಡು ಪ್ರತಿದಿನದಲ್ಲಿ ಬ 5
--------------
ಜಗನ್ನಾಥದಾಸರು
ಕುಲಮದ ವೈಭವಮದ ವಿದ್ಯಾಮದಗಳನುಳಿದು ಹರಿದಾಸರ ಮರೆಯೊಕ್ಕು ಸುಖಿಯಾಗು ಪ. ಮಾನವ ಪೇಳೆಯಸರ್ಪತÀಲ್ಪನ ಪೂಜೆಗುಚಿತನಾದರೆ ಅವನಇಪ್ಪತ್ತೊಂದು ಕುಲ ಸುಕುಲ ನೋಡಾ1 ಸುರರ ಸೋಲಿಸಿ ಸ್ವರ್ಗಸಿರಿಯ ಭೋಗಿಸಿದ ದೈ-ತ್ಯರ ಭಾಗ್ಯ ಬಿಸುಟುಪೋದುದ ಕೇಳೆಯಸ್ಥಿರವಲ್ಲ ಸಂಪತ್ತು ಪರಕೆ ಪ್ರತ್ಯಹವೆಂದರಿದುನರಹರಿಯ ಚರಣಸೇವೆಯ ಮಾಡು 2 ಎತ್ತು ಹೊತ್ತಗೆಯ ಹೊರೆ ಹೊತ್ತಡದಕೆ ಸಂ-ಪತ್ತೇನೋ ಮರುಳ ಸರ್ವಜ್ಞರುಂಟೆಭಕ್ತಿಯುಳ್ಳವನೊಬ್ಬ ನೆರೆಜಾಣ ಜಾಣರಿವರೆತ್ತ್ತೆಂದರಿಯದ ಹಯವದನನಂಘ್ರಿಯ ಬಲ್ಲ 3
--------------
ವಾದಿರಾಜ
ಕುಸುಮ ಗಂಧಿನಿ ಸೀತೆಯೆ ಪ ಮಂಜೀರ ಭೂಷೆಯೆ ಮಂಜುಸುವಾಣಿಯೆ ಕಂಜನಾಭ ರಾಮ ಭಾಮೆಯೆ ಮಂಜುಳಾಂಗಿಯೆ 1 ಅಂಬುಜಪಾಣಿಯೆ ಅಂಬುಜನಾಭಿಯೆ ಬಿಂಬಫಲ ಸದೃಶಾನನೆ ಕಂಬುಕಂಧರೆ 2 ಕ್ಷೋಣೀಷ ಸನ್ನುತೆ ವಾಣೀಶ ವಂದಿತೆ ಏಣ ನೇತ್ರೆ ಶ್ರೀರಾಮ ಸುಪ್ರಾಣನಾಯಕಿ 3 ಸುರರಚಿರ ಕುಂತಲೆ ಪರಿಜನ ವತ್ಸಲೆ ನಿರುಪಮ ವಾಣಿಸುನ್ನುತೆ ಪ್ರಣವಾಂಚಿತೆ 4 ಮಾನವ ಸೇವ್ಯಯೆ ಧೇನುಪುರಿಕಾಂತ ಸುಪ್ರಿಯೆ ರಾಮವಲ್ಲಭ 5
--------------
ಬೇಟೆರಾಯ ದೀಕ್ಷಿತರು
ಕೃಷ್ಣ ಎನಗೆ ಬಂದರಿಷ್ಟವ ಕಳೆದು ನಿನ್ನ ನಿಷ್ಠೆಯಲಿ ಇರುವಂತೆ ಇಷ್ಟೆ ಮಾತುರವೀಯೋ ಪ ನಿರ್ದೋಷ ಗುಣವಾರುಧಿ ನಿರ್ಧಾರವಾಗಿ ನುಡಿವೆ ಸಿದ್ಧಾಂತ ಮತದಲಿ ಪೊದ್ದಿಪದೆ ಸಾಕು 1 ಅಜ ಭವಾದ್ಯರು ನಿನ್ನ ಭಜಿಪರಾರು ದೋಷ ಮಾನವ ತಿಳಿದು ಭಜಿಸಬಲ್ಲೆನೆ ದೇವಾ 2 ಮಧ್ವ ಸರೋವರದಲ್ಲಿ ಇದ್ದು ಪೂಜೆಯಗೊಂಬ ಮುದ್ದು ವಿಜಯವಿಠಲ ಬಿದ್ದೆ ನಿನ್ನಯ ಪದಕೆ 3
--------------
ವಿಜಯದಾಸ
ಕೃಷ್ಣ ನೀ ಕರುಣದಿ ಥಟ್ಟನೆ ಸಲಹೊ ದುಷ್ಟಮರ್ದನ ಸಕಲೇಷ್ಟದಾಯಕ ರಾಮ ಪ. ಹುಟ್ಟಿಸಿದ ದೇವರು ಹುಲ್ಲು ಮೇಯಿಸನೆಂದು ಶಿಷ್ಟ ನುಡಿವುದ ನಂಬಿಹೆನು ಮೆಟ್ಟಿ ಬಾಧಿಸುವಂಥ ದಟ್ಟ ದಾರಿದ್ರ್ಯದ ಬಟ್ಟೆ ಒಂದನು ಕಾಣೆ 1 ಊರ ಜನರ ಮುಂದೆ ಸೇರಿದ ಪದವನ್ನು ದೂರಗೊಳಿಸಿ ಬಹು ಗಾರಾದೆನು ಮಾರಮಣ ನೀನ್ನುದಾರ ಗುಣವ ನಂಬಿ ಚೀರುವ ಎನಗೆ ಬೇರಾರು ರಕ್ಷಕರಿನ್ನು 2 ವಿಶ್ವಕುಟುಂಬಿ ಸರ್ವೇಶ್ವರ ನೀನಿಂದು ವಿಶ್ವಾಸದಿಂದ ನಾನಿರುವದನು ತೈಜಸ ಪ್ರಾಜ್ಞ ತುರ್ಯರೂಪಗಳಿಂದ ವಿಶ್ವವ್ಯಾಪಕನಾದ ನಿನಗರುಪುವುದೇನೊ 3 ಖುಲ್ಲ ಮಾನವರೆಂಬ ಕ್ಷುಲ್ಲ ನುಡಿಗಳಿಂದ ತಲ್ಲಣಗೊಳಿಸುವುದುಚಿತವೇನೊ ಮಲ್ಲ ಚಾಣೂರ ಮುಷ್ಟಿಕರನ್ನ ಗೆಲಿÉದರಿ- ದಲ್ಲಣಯನಗೆ ಬೆಂಬಲನಾಗಿ ಸಲಹಿನ್ನು 4 ಇಂದ್ರಾದಿ ದಿವಿಜರ ಪದಗಳನವರಿಗೆ ಪೊಂದಿಸಿ ಪಾಲಿಪ ಕರುಣಿ ನೀನು ಇಂದಿರೆ ಸಹಿತಾಗಿ ಬಂದೆನ್ನ ಮನಸಿಗಾ ನಂದ ತೋರಿಸೊ ಭುಜಗೇಂದ್ರಾದಿ ಒಡೆಯ 5
--------------
ತುಪಾಕಿ ವೆಂಕಟರಮಣಾಚಾರ್ಯ
ಕೃಷ್ಣ ಭವರೋಗದ ಮದ್ದುಕೃಷ್ಣ ಅಭಿಮಾನವ ಕಾಯ್ವಾತ ನಿಂದಲ್ಲಿದ್ದುಪ. ದುಷ್ಟ ದನುಜರ ಹುಡಿಗುಟ್ಟಿ ನಂಬಿದ ಸುರರದಿಟ್ಟರ ಮಾಡಿದ ಜಗಜಟ್ಟಿ ರಂಗ ಧೀರ1 ಪಾದ 2 ಮಧ್ವರ ಪೂಜಿತ ಪಯೋಬ್ಧಿ ತನುಜೆಯರಸಹೃದ್ಯ ಹಯವದನ ಸಮೃದ್ಧ ವೈಕುಂಠಾಧೀಶ 3
--------------
ವಾದಿರಾಜ
ಕೃಷ್ಣತಾತ ಮ'ಪತಿರಾಯರ ಭಜಿಸೊಅಭಿಮಾನವ ತ್ಯಜಿಸೊ ಅನುಮಾನವ ತ್ಯಜಿಸೊ ಪರಾಜವೈಭವದ ಭೋಗಗಳನುಭ'ಸಿ ಶ್ರೀ ಹರಿಯ ಸ್ಮರಿಸಿಭೋಗದೊಳಗೆ ತ್ಯಾಗದ ಪಾಠವ ಕಲಿಸಿ ಕೊಡುಗೈದೊರೆಯೆನಿಸಿಯೋಗಬಂದತಕ್ಷಣ ವೈಭವ ತ್ಯಜಿಸಿ ಯೋಗಿಯನಾಶ್ರೈಸಿಯೋಗಾಭ್ಯಾಸದಿ ಬೇಗ ಹರಿಯ ಒಲಿಸಿ ಅವನೊಳು ಮನಬೆರೆಸಿ 1ಹರಿಯಧ್ಯಾನಕನುಕೂಲವಾದ ಮೆಟ್ಟಾ ಹುಡಕುತುತಾಹೊರಟಾವರಕಾಖಂಡಿಕಿ ಕ್ಷೇತ್ರದಿ ಕಾಲಿಟ್ಟಾ 'ಶ್ರಾಂತಿಗೆ ಕುಳಿತಾಅರೆನಿ'ುಷದಿ ಹರಿಧ್ಯಾನದಿ ಮೈಮರೆತಾ ಸಮಾಧಿ ಇಳಿಯುತಾವರೃಮುನಿಗಳು ತಪವಗೈದಮೆಟ್ಟಾ ಎನುತಲಿಯೆ ನಿಂತಾ 2ಹಗಲು ಇರಳು ಹರಿಧ್ಯಾನದಿ ತಾ ಮುಳುಗಿ ಅಲ್ಲಿರುತಿರಲಾಗಿ ನಗೆ ಮುಖದಲಿ ಝಗಝಗ ಕಾಂತಿಯು ಬೆಳಗಿ ಸುತ್ತಲು ಬೆಳಕಾಗಿಜಗದಜನಕೆ ಅದು ಅತಿ ಅಚ್ಚರಿಯಾಗಿ ಯೋಗಿಗೆ ಶಿರಬಾಗಿಬಗೆ ಬಗೆ ಭಕುತರು ಬಂದರು ತಾವಾಗಿ ಮ'ಪತಿಮಹಾಯೋಗಿ 3ಅಷ್ಟಸಿದ್ಧಿಗಳು ನೆಲೆಸಿದವಾಗಲ್ಲಿ ಆಶ್ರಮ ಬಾಗಿಲಲಿಎಷ್ಟು ಭಕುತಿಜನ ಬಂದರು ಸ'ತಲ್ಲಿ ಇಷ್ಟಾರ್ಥ ಕರದಲಿಮೃಷ್ಟಾನ್ನ ಭೋಜನ ಪ್ರತಿದಿನದಲ್ಲಿ ನಡೆುತು ಸಮತೆಯಲಿಇಷ್ಟವಾದ ಆಧ್ಯಾತ್ಮಿಕ ಮಾರ್ಗದಲಿ ಉಪದೇಶ ಪಡೆಯುತಲಿ 4
--------------
ಭೂಪತಿ ವಿಠಲರು
ಕೃಷ್ಣನ ಮೂರ್ತಿಯ ಮನದಿ ನೆನೆವುದುತೃಷ್ಣೆಯ ಬಿಡಿಸುವುದು ಎನ್ನ ಘನ್ನ ತೃಷ್ಣೆಯ ಪ. ಕುಂಡಲ ತತಿಯ ಈ ಚೆಲ್ವಿನಸದ್ರತ್ನತಿಲಕದ ಸೊಬಗನ ಕಂಡೆರಗದವನಾವ ಸುಖಿ ಗೋಕುಲದೊಳಗಿದ್ದ ಮಾನವನೆ ಸುಖಿ ಅಮ್ಮ ನಮ್ಮ 1 ಬೊಮ್ಮ ನೋಡು ನೋಡು2 ವರ್ತುಳೋರು ಜಾನು ಜಂಘಗಳ ಸಂ-ಪತ್ತ ನೋಡು ಕರಿಕರದರತ್ನದರ್ಪಣದ ಕಾಮನ ಬೆನ್ನಿಲೊಪ್ಪುವಬತ್ತಳಿಕೆಯ ಚೆಲುವ ಪೋಲುವ ಬೆರ-ಳರ್ಥಿಯಿಂದಲಿ ಪೊಳೆವ ಚಿತ್ರ ಚಾರಿತ್ರಚಿತ್ತಜನಯ್ಯನ ಚರಣಕಮಲವೆನ್ನಚಿತ್ತದಿ ನೆಲೆಸಿಪ್ಪುದು ಅದರಿಂದ ಸ-ರ್ವತ್ರ ಸುಖವು ತಪ್ಪದು ಹಯವದನ್ನ3
--------------
ವಾದಿರಾಜ
ಕೃಷ್ಣಾ ನಿನ್ನ ಕನಿಷ್ಟ ಪೊಳವ ವುಂ ಗುಷ್ಟ ಭಜಿಸುವ ನಿಷ್ಠ ಜನರ ಉಚ್ಚಿಷ್ಟ ಎನಗದು ಮೃಷ್ಠಾನ್ನವಾಗಲಿಷ್ಟೇ ಬೇಡಿದೆನೊ ಪ ನರಲೋಕದ ಸುಖ ಪರಿಪರಿಯಲ್ಲಿ ಅರಿದೆನದರೊಳು ಪರಮ ಸೌಖ್ಯ ಎಳ್ಳರೆ ಅನಿತಿಲ್ಲ ಬರಿದೆ ಜನನ ಮರಣ ಪರಿಯಂತಾ ದುರಿತ ಧರೆಯೊಳಗೆ ನಿಂದಿಸಲಾರೆ ಸಾಕು ಶರಣು ಹೊಕ್ಕೆನು ಕರುಣಪಾಂಗನೆ ಕರವಿಡಿದು ಸಲಹೋ 1 ಆವುದುಂಟದು ದೇವ ಮಾಣಿಸು ಈ ವರವ ಕೊಂಡು ನಾ ಒಂದನು ವಲ್ಲೆ ಭಾವಶುದ್ಧ ವಾಕ್ಯವೆ ನಿಶ್ಚಯವೊ ಮಾನವ ಕಾವ ನೈಯನೆ ಕಾವ ಜೀವ ನಿನ್ನಂಘ್ರಿ ಸೇವೆ ಸಂಪದವೊ ಜಗತ್ರಯವ 2 ಹಡಗದೊಳಗಿಂದ ತಡಿಯದೆ ಬಂದಾ ಕಡಗೋಲ ನೇಣ ಪಿಡಿದ ಪಡುವಲಾ ಗಡಲ ತೀರದ ಉಡುಪಿನಲಿ ನಿಂದ ಅಡಿಗಡಿಗೆ ಪೂಜೆ ಬಿಡದೆ ಯತಿಗಳಿಂ ಉಘಡ ವಿಜಯ ವಿಜಯವಿಠ್ಠ ಲೊಡಿಯ ಭಕ್ತರ ಬಿರುದಿನ ಕಡು ಸಾಹಸಮಲ್ಲ3
--------------
ವಿಜಯದಾಸ
ಕೇಶವನೊಲುಮೆಯು ಆಗುವತನಕ ಹರಿ ದಾಸರೊಳಿರು ಮನವೆ ದಾಸರ ಸ್ತುತಿಯನು ಪೊಗಳುತ ಮನದೊಳು ಪ ಕಾಶಿಗೆ ಪೋದರೆ ಪೋದೀತೆ ಲೇಸಾಗದೆ ಸುಮ್ಮನಿದ್ದೀತೆ ಮೋಸವ ಮಾಡದೆ ಬಿಟ್ಟೀತೆ ನಿಜವಲ್ಲದೆ ಪುಸಿಯಾದೀತೆ 1 ಸೊಣಕನ ಮನಸಿಗೆ ಸೊಗಸೀತೆ ಹೀನ ವಿಷಯಗಳು ಬಿಟ್ಟೀತೆ ಮಾನಾಭಿಮಾನವು ಉಳಿದೀತೆ ದೀನಗೆ ಮುಕ್ತಿಯು ದೊರಕೀತೆ 2 ಕತ್ತೆಯ ಮನಸಿಗೆ ಬಂದೀತೆ ತೊತ್ತಿನ ಮನಸಿಗೆ ಬಂದೀತೆ ಅರ್ಥ ತೊರೆಯದೇ ಬಿಟ್ಟೀತೆ ಚಿತ್ರದಿ ಬೊಂಬೆ ವಿಚಿತ್ರದಿ ಬರೆದಿತ್ತ ಮುತ್ತು ಕೊಟ್ಟರೆ ಮಾತಾಡೀತೆ 3 ನಾಯಾಗಿ ಹುಟ್ಟೋದು ಬಿಟ್ಟೀತೆ ಮಾಯಾವಾದಿಗೆ ಮುಕುತಿಯು ದೊರಕೀತೆ ಬಾಯಿಬೊಬ್ಬಿಲಿ ಬೊಗಳುವ ಮನುಜಗೆ ಘಾಯವಾಗದೆ ಬಿಟ್ಟೀತೆ ಕಾಯಕ ಕಷ್ಟ ಬಿಡದಿದ್ದೀತೆ 4 ರ್ವಾದಿಗೆ ಮುಕುತಿಯು ದೊರಕೀತೆ ಗೈದವಗೆ ವ್ಯಾಧಿ ಕಾಡದೆ ಬಿಟ್ಟೀತೆ ಬುದ್ಧಿಹೀನನೆಂಬೋದು ಬಿಟ್ಟೀತೆ ಇದ್ದದ್ದೋಗದೆ ಉಳಿದೀತೆ 5 ಅಂಗನೆಯರ ಬಯಸೀತೆ ಶೃಂಗಾರದ ಬಗೆ ತೋರೀತೆ ಭೃಂಗಗೆ ಮುಕ್ತಿಯು ದೊರಕೀತೆ 6 ಕರುಣಾನನ ಸ್ಮರಣೆವುಳ್ಳರಿಗೆ ಪರಮ ಪದವಿ ಆಗದಿದ್ದೀತೆ ಚರಣ ಸೇವಕನಾಗಿ ಇರು ಕಂಡ್ಯ ಮನವೆ 7
--------------
ಬೇಲೂರು ವೈಕುಂಠದಾಸರು
ಕೇಳು ಕಿವಿಗೊಟ್ಟು ನಿನ್ನ ನಿಜಗುಹ್ಯದ ಸುಮಾತ | ಹೇಳುತಿಹ್ಯಾ ನಂದಬೋಧ ತಿಳಿಯಾ ವಿಶ್ವನಾಥ ಧ್ರುವ ನೋಡಿ ನಿನ್ನ ಗೂಡಿನೊಳು ಮಾಡಿಕೊ ಸ್ವಹಿತ ಚಾಡುವಿಡಿದು ನಡೆದು ಹೋಗಿ ಕೂಡಿರೊ ಸುಪಥ ಹಿಡಿಯದೆ ಆಲೇಶದ ಮನೆಯ ನೀ ಪಡಕೊ ಘನ ಅಮೃತ ಬೇಡಿ ಬಯಸಿದರಾಗದು ವಸ್ತು ಹಿಡಕೊಡುವ ಗುರುನಾಥ 1 ಖೂನ ಕಂಡು ಗುರುಪಾದದಲಿ ತನುಮನದಲಿ ನೀಜಡಿಯೊ | ಮೌನಮುಗ್ದದಲಿ ನೀನೆಂದು ಅನುಭವದ ನೀಹಿಡಿಯೊ ನಾನು ನೀನೆಂಬುದು ತಾ ಬಿಟ್ಟರೆ ಸನ್ಮತ ಸುಖನಿಲುಕಡಿಯೊ ಜ್ಞಾನ ದೈವತೆಯಂಬು ಮಾರ್ಗದಲಿ ಅನುಸರಿಸಿ ನೀ ನಡಿಯೋ 2 ಒಂದೆ ಮನದಲಿ ಹೊಂದಿ ನಿಜವುಸಂದಿಸಿಕೊಸ್ವಾನಂದ ಬಂದ ಜನ್ಮವು ಸಾರ್ಥಕ ಮಾಡುದು ಇದು ನಿನಗೆ ಬಲುಚಂದ ಹಿಂದೆ ಮುಂದೆ ತಾ ತುಂಬ್ಯಾನೆ ಮಹಿಪತಿಸ್ವಾಮಿ ಸಚ್ಚಿದಾನಂದ ಹೊಂದಿದವರನುಮಾನವ ಬಿಡಿಸಿ ಛೇದಿಸುವ ಭವಬಂಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳು ಜೀವನವೆ ನೀ ಮಧ್ವಮತವನುಸರಿಸಿ ಶ್ರೀಲೋಲನಂಘ್ರಿಯನು ನೆನೆದು ಸುಖಿಸೊ ಪ. ನರನಾಗಿ ಪುಟ್ಟುವುದು ದುರ್ಲಭವೆಲವೊ ಭೂ- ಸುರಕುಲದಿ ಜನಿಸುವುದು ಬಹು ದುರ್ಲಭ ಪರಮ ಸುಕೃತವದೇನು ಫಲಿಸಿತೊ ನಿನಗೀಗ ದೊರಕಿದೀ ಜನುಮವನು ಸಫಲ ಮಾಡೊ 1 ಅರಘಳಿಗೆ ಮಾತ್ರವೆ ಪೊತ್ತು ಪೋಗಲು ಆಯು ಕೊರತೆಂದು ತಿಳಿ ನಿನ್ನ ಕ್ಲುಪ್ತದೊಳಗೆ ಮರಳುತನದಲಿ ಬರಿದೆ ದಿನಗಳಿಯಬ್ಯಾಡೆಲವೊ ಸ್ಥಿರವಲ್ಲ ಈ ದೇಹ ಸ್ವಪ್ನಸಮವೊ 2 ದುರುಳರೊಡನಾಡಿ ದುರ್ವಿಷಯ ಲಂಪಟನಾಗಿ ನರಕಯಾತನೆಗೆ ಗುರಿಯಾಗದಿರೆಲೊ ಎರಡುದಿನದೋಡ್ಯಾಟ ಇರಬಂದುದಲ್ಲವಿದು ಪರಗತಿಗೆ ಸಾಧನ ಮಾಡಿಕೊಳ್ಳೊ 3 ಹೋಗುತಿವೆ ಹೋಗುತಿವೆ ದಿವಸ ವ್ಯರ್ಥವಾಗಿ ಹೀಗೆ ಮೈಮರೆದಿಹುದು ನಿನಗೊಳ್ಳಿತೆ ಬ್ಯಾಗ ಹರಿಯನು ಭಜಿಸು ಬಾ ಈ ಮಾತಲ್ಲ ನೀ ಹೋಗಿನೋಡಲು ಯಮನ ಬಾಧೆ ಬಿರುಸೊ4 ಏನ ಹೇಳಲಿ ನಿನ್ನ ಮಂದಮತಿಯನು ಹಿಂದೆ ಶ್ವಾನಸೂಕರ ಮೊದಲಾದ ನೀಚ- ಯೋನಿಗಳೊಳಗೆ ಬಂದು ಅಂದದನು ಕ್ರಮಿಸಿದವನು ಆ ನೋವನಾಗಲೆ ಮರೆದಿಯಲ್ಲೊ 5 ಮುನ್ನ ದುಷ್ಕರ್ಮವ ಮಾಡಿದ ಪ್ರಾಣಿಗಳು ಉನ್ನತ ನೀಚ ದೇಹಗಳ ಧರಿಸಿ ಬನ್ನಬಡುತಿಹುದು ನೀ ನೋಡಿ ನೋಡಿ ಮತ್ತೆ ದುರ್ನಡತೆಯನು ಮಾಡಲುದ್ಯೋಗಿಪೆ 6 ಎಂಬತ್ತು ನಾಲ್ಕು ಲಕ್ಷ ಯೋನಿಗಳೊಳಗೆ ಕುಂಭಿಣಿಯೊಳಗೆ ತಿರುತಿರುಗಿ ಪಾಪ ಉಂಬುದನುಚಿತವೆಂದು ಮನ ಹೇಸಿ ವಾಕರಿಸಿ ನಂಬುನಾರಾಯಣನ ಇನ್ನಾದರೂ 7 ಜನನಿಯ ಗರ್ಭವಾಸ ದುಃಖ ಅತಿಶಯವೊ ಜನನ ಮರಣದ ದುಃಖ ಬಲು ಅಧಿಕವೊ ಘನ ನರಕದಾ ದುಃಖ ಪೇಳಲೊಶವಲ್ಲ ನಿನ- ಗಿನಿತಾದರೂ ನಾಚಿಕಿಲ್ಲವೇನೊ 8 ಸಾರಿ ಪೇಳುವೆನೀಗ ಪುಟ್ಟಿ ಬೆಳೆದಳಿವ ಸಂ- ಸಾರ ಸುಖವಲ್ಲ ಮಹ ದುಃಖಪುಂಜ ಘೋರ ಸಂತಾಪಕ್ಕೆ ಕಡೆಮೊದಲಿಲ್ಲವೊ ವಾರಿಜಾಂಬಕನ ಮರೆಯೊಕ್ಕು ಬದುಕೊ 9 ಹಿಂದೆ ಬಹುಜನುಮದಲಿ ಬಂದು ಬಳಲಿದ ಬವಣೆ ಒಂದೊಂದು ನೆನೆಸಿಕೊಳಲತಿ ಕಷ್ಟವೊ ಮುಂದಾದರು ಸರಿ ಎಚ್ಚೆತ್ತು ಬಿಡದೆ ಗೋ- ವಿಂದನ ಪದಾಂಬುಜವ ಧ್ಯಾನ ಮಾಡೊ 10 ಮಾರಿ ಇಲ್ಲಿದೆಯೆಂದು ಕೇಳುತಲಿ ಪೋಗಿ ನೀ ಭೂರಿ ಭಯಕೊಳಗಹದು ನೀತಿಯಲ್ಲ ದೂರ ತಿಳಿದು ನೋಡಿ ದುರ್ಮಾರ್ಗವನು ಜರಿದು ಸೇರಿ ಸಜ್ಜನರ ಸುಪಥವ ಪಡೆಯೊ 11 ನಿನ್ನಯ ಸ್ವರೂಪಕ್ಕೆ ಹೀಗಾಗುವುದೆಂದು ಪುಣ್ಯವನೆ ಗಳಿಸಿಕೊ ಬ್ಯಾಗ ನೀನು ಇನ್ನು ಈ ಧರೆಯಲ್ಲಿ ಬಿಟ್ಟು ಹೋಗುವ ದೇಹ- ವನ್ನು ಪೋಷಿಸಿಕೊಂಡು ಹಿಗ್ಗಬೇಡ 12 ವನಿತೆಸುತರನು ಪೊರೆಯಬೇಕೆಂಬ ಬುದ್ಧಿಯಲಿ ಧನದಾಸೆಯಿಂದಲಗಣಿತ ಪಾಪವ ಕ್ಷಣದೊಳಗೆ ಸಂಪಾದಿಸಿಕೊಂಬೆ ಎಲೊ ಮೂಢ ನಿನಗಿವರು ಕೊನೆಗೆ ಸಂಗಡ ಬರುವರೆ 13 ಕೆಡಬ್ಯಾಡ ವ್ಯರ್ಥಮೋಹಕೆ ಸಿಲುಕಿ ಜವನವರು ಪಿಡಿದೊಯ್ದು ಕಡಿದಿರಿದು ಕೊಲ್ಲುವಾಗ ಬಿಡಿಸುವವರಾರಿಲ್ಲ ಈಗಳೆ ಮುಂದರಿತು ಕಡಲಶಯನನ ಪೊಂದಿ ಮುಕುತಿ ಪಡೆಯೊ 14 ಈಗಲೇನೊ ಇನ್ನು ಕ್ಷಣಕೇನು ಬಪ್ಪುದೊ ನೀ ಗರುತರಿಯದಲೆ ಹಿತ ರಾಗದಲಿ ಸರ್ವವನು ಎನ್ನದೆಂದಾಡದಿರು ನಾಗಾರಿಗಮನನಾಧೀನವೆನ್ನೊ 15 ನೀ ಮಗುಳೆ ಮಹಿಯೊಳಗೆ ಕಂಡುಕಂಡುದ ಬಯಸಿ ಭ್ರಾಮಕರ ನುಡಿಗೇಳಿ ಭ್ರಾಂತಿಗೊಳದೆ ಕಾಮಾದಿಗಳ ತ್ಯಜಿಸಿ ಸತ್ಕರ್ಮವನು ಮಾಡಿ ಶ್ರೀಮನೋ ಹರನಿಗರ್ಪಣೆಯ ಮಾಡೊ16 ಏನುಧಾವತಿಗೊಳಲೇನೇನು ಫಲವಿಲ್ಲ ಮಾನವಜನುಮ ಜೊಳ್ಳು ಮಾಡಬ್ಯಾಡ ಆನಂದತೀರ್ಥರ ಪಾದಕಮಲವ ಪೊಂದಿ ಅಚ- ಲಾನಂದವಿಠಲನ್ನ ನೀನೊಲಿಸಿಕೊ 17
--------------
ಅಚಲಾನಂದದಾಸ
ಕೈಯ ತೋರೋ ರಂಗ ಕೈಯ ತೋರೋ ಪ. ಕೈಯ ತೋರೋ ಕರುಣೆಗಳರಸನೆ ಅ.ಪ. ಶರಧಿ ಮಥನದಿ ದೇವಾಸುರರಿಗೆ ಮೋಹಿನಿಯೋಲ್ ಸುರರಿಗೆ ಸುಧೆಯಿತ್ತು ಸುರರಿಗಾಸರೆಯನಿತ್ತಾ 1 ಶಿರಮಂ ಸದ್ಗತಿವೊಂದಿಸಿ ಹರನಂ ನಲವಡಿಸಿದ 2 ಹರನ ವರದಿ ಭಸ್ಮಾಸುರ ಗರ್ವಿತನಾಗಿ [ಆ] ಹರನಂ ಬೆನ್ನಟ್ಟಿ ಬರೆ ದುರುಳನ ದಂಡಿಸಿದಾ 3 ತರಳಧ್ರುವ ತಾಯ ಬಿರುನುಡಿಗೆ ಮನನೊಂದು ಶರಣೆನೆ ಮೈದೋರಿ ತರಳನ ಮೈದಡಹಿದ4 ಕಂದ ಪ್ರಹ್ಲಾದನ ತಂದೆಯುಗ್ರದಿ ಜಡಿಯೆ ಕಂಬದಿಂ ಬಂದು ಖಳನ ಕರುಳನು ಕಿತ್ತೆಸೆದಾ 5 ಮೊಸಳೆ ಬಾಯೊಳು ಸಿಕ್ಕಿ ಬಸವಳಿದು ಬಾಯ್ಬಿಡುತಿರೆ ಎಸೆದ ಚಕ್ರದಿ ಸೀಳಿ ನಕ್ರನ ಕರಿಯನುದ್ಧರಿಸಿದ 6 ಚಕ್ರಧರ ರುಕ್ಮಿಣಿಯ ಕೈಪಿಡಿದ7 ತರುಣಿಯಭಿಮಾನವ ನೆರೆಕಾಯ್ದು ನರನಿಗೆ ವರಸಾರಥಿಯಾಗಿ ತೇರನೆ ನಡೆಸಿದ 8 ವರಶೇಷಗಿರಿಯಲ್ಲಿ ಸ್ಥಿರವಾಗಿ ಶರಣರ ಕರೆದಾದರಿಸಿ ವರಗಳ ಕೊಡುತಿಪ್ಪ 9
--------------
ನಂಜನಗೂಡು ತಿರುಮಲಾಂಬಾ
ಕೊಂಡಾಡಬಹುದೆ ಯತೀಂದ್ರ ಎನ್ನಾ ಪಾಂಡವಪ್ರಿಯನಾಭಜಕ ವಾದಿರಾಜಯತಿ ಪ ನಾನಾ ಜನುಮದಾ ಯೋನಿಮುಖದಲಿ ಬಂದು ಮಾನವಳಿದು ಜ್ಞಾನಶೂನ್ಯನಾಗಿಹ ಶ್ವಾನಮನದ ಮೂಢಮನುಷ್ಯನಾಗಿ ಹೀನ ಅಹಂಕಾರಪೂರಿತ ದೋಷಿಂiÀi1 ಅರಿಷಡ್ವರ್ಗದೊಳು ಸಿಲುಕಿ ನರಗುರಿಯಾಗಿ ಪರರವಾರ್ತೆಯ ಸವಿವ ಹಗಲು ಇರಳೂ ದುರುಳ ದುಶ್ಚೇಷ್ಟಿಕನು ಬಹುದುರಾತ್ಮನು ನಾನು ಗುರುಹಿರಿಯರಿಗೆ ಎರಗದ ಗೂಢಪಾಪಿಯನು 2 ಒಡೆಯ ವೈಕುಂಠ ವಿಠಲನ ಭಜಿಸದೆ ಪೊಡವಿಯೊಳು ಕ್ಷುದ್ರ ದೈವಗಳಿಗೆಲ್ಲ ಪೊಡಮಡುತಿಹೆ ಸ್ವಾಮಿದ್ರೋಹಿ ಗರುವಿಯಾ ಕಡುಪಾತಕನ್ನ ನಡತೆಯನು ನೀನರಿಯದಲೇ 3
--------------
ಬೇಲೂರು ವೈಕುಂಠದಾಸರು
ಕೊಡುವವನು ನೀನು ಕೊಂಬುವನು ನಾನು ಪ ಬಡಮನದ ಮನುಜನ ಬೇಡಿ ಫಲವೇನುಅ.ಪ ಹದಿನಾರು ಹಲ್ಲುಗಳ ಬಾಯ್ದೆರದು ಬೇಡಿದರೆ ಇದು ಸಮಯವಲ್ಲೆಂದು ಪೇಳಿ ತಾನು ಮದನ ಕೇಳಿಗೆ ನೂರನೊಂದಾಗಿ ನೋಡುವನು ಮದಡ ಮಾನವನೇನು ಕೊಡಬಲ್ಲ ಹರಿಯೆ 1 ಗತಿಯಲ್ಲವೆಂತೆಂದು ನಾನಾ ಪ್ರಕಾರದಲಿ ಮತಿಗೆಟ್ಟು ಪೊಗಳಿದರೆ ಅವನು ತನ್ನ ಸತಿಸುತರ ಕೇಳಬೇಕೆಂದು ಮೊಗ ತಿರುಹುವ ದುರುಳ ಮತ್ತೇನು ಕೊಡಬಲ್ಲ ಹರಿಯೆ 2 ಹೀನ ವೃತ್ತಿಯ ಜನರಿಗಾಸೆಯನು ಬಡುವದು ಗಾಣದೆತ್ತು ತಿರುಗಿ ಬಳಲಿದಂತೆ ಭಾನು ಕೋಟಿ ತೇಜ ವಿಜಯವಿಠ್ಠಲರೇಯ ನೀನಲ್ಲದನ್ಯತ್ರ ಕೊಡುಕೊಂಬುರಂಟೆ 3
--------------
ವಿಜಯದಾಸ