ಒಟ್ಟು 808 ಕಡೆಗಳಲ್ಲಿ , 86 ದಾಸರು , 661 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಾಮುಂಡೇಶ್ವರಿ ಚಾಮೇಂದ್ರನೃಪನನ್ನುಪ್ರೇಮದಿಂ ರಕ್ಷಿಸಮ್ಮ ಪಜೀಮೂತಶ್ಯಾಮಳೆ ಕೋಮಲಶುಭಗಾತ್ರೆಕಾ'ುತ ಫಲದಾಯಕಿ ಕಲ್ಯಾಣಿ ಅ.ಪ.ನಿನ್ನ ಸನ್ನಿಧಿಗೆ ನಾ ಬಂದು ಪ್ರಾರ್ಥಿಸೆ ಪ್ರಸನ್ನಳಾಗಿ ನೃಪನರನ್ನದ ಸಿಂಹಾಸನವೇರಿಸಿ ಎನಗುನ್ನತೋನ್ನತವಾದಾನಂದವನಿತ್ತೆ 1ಆಯುರಾರೋಗ್ಯ ರಾಜೈಶ್ವರ್ಯ ಪುತ್ರರಿಂದಾನಂದವನೈದಿನಾಯಕಮಣಿಯಂದದಿಂ ನರನಾಥರ್ಗೆನಾಥನಾಗಿ ನಲಿಯುತ್ತಲಿರಲಿ ಸದಾ 2ಗಿರಿಯೊಳುತ್ತಮ ಮಹಾಬಲಗಿರಿಯೊಳು ನಿಂದುಕರುಣಾರಸವೆರಸಿಪೊರೆವೆ ನಾರಾಯಣದಾಸನ ಬಿನ್ನಪವತಿರುಪತೀಶನ ಸೋದರಿ ಶುಭವರ್ಧಿನಿ 3
--------------
ನಾರಾಯಣದಾಸರು
ಚಾರು ಹಸ್ತಾಯ 1ಹೃದಯಶೋಭಿತ ಮಹಾ ಕೌಸ್ತುಭಾಭರಣಾಯವಿಧಿಜನಕ ನಾಭಿಪಂಕಜ ಭಾಸುರಾಯಸದಮಲಾಯತ ಕಾಂಚಿದಾಮಯುತ ವಸನಾಯಬುಧಜನಮನೋವೇದ್ಯ ಪಾದಪದ್ಮಾಯ 2ಲಕ್ಷ್ಮೀಕಳತ್ರಾಯ ಸೂಕ್ಷ್ಮಸ್ವರೂಪಾಯಕುಕ್ಷಿಗತಭುವನ ಪರಿಪಾಲಕಾಯಪಕ್ಷೀಂದ್ರಕಂಧರಾರೂಢಾಯ ದುಷ್ಟಜನಶಿಕ್ಷಾಸಮರ್ಥಾಯ ಸಾಕ್ಷಿ ಚೈತನ್ಯಾಯ 3ವಿಶ್ವಸ್ವರೂಪಾಯ ವಿಶ್ವತರು ಮೂಲಾಯವಿಶ್ವಗುಣ ಸಂಹಾರಕಾರಣಾಯವಿಶ್ವನಾಟಕಸೂತ್ರಧಾರಾಯ ನಿತ್ಯಾಯವಿಶ್ವಕೃತ ಸುಕೃತದುಷ್ಕøತ ಲೇಪರಹಿತಾಯ 4ಧರಣಿಕಮಲಾಲಯಾಶ್ರಿತ ದಿವ್ಯ ಪಾಶ್ರ್ವಾಯಸುರಮುನಿ ಸ್ತುತಿ ಘೋಷಪೂರಿತಾಯಪರಮಪಾವನಪುಣ್ಯ ಶೇಷಾದ್ರಿನಿಲಯಾಯಸ್ಮರಜನಕ ಸುರಶಿಖಾಮಣಿ ವೆಂಕಟೇಶಾಯ 5ಓಂ ಅನಘಾಯ ನಮಃಕಂ||ಗಣಪತಿ ನಿನ್ನಾಗ್ನೇಯದಲಿನ ತಾ ನೈರುತ್ಯದೆಶೆಯೊಳಂಬಿಕೆಮರುತನೊಳನುಪಮ ಶಂಕರನೀಶಾನ್ಯನೋಳರ್ಚಿತರಾರೈಯ್ಯ ತಿರುಪತಿಯೊಡೆಯಾನೀನೇ ಗಣಪತಿ ಸೂರ್ಯನುನೀನೇ ಶಿವ ನಿನ್ನ ಶಕ್ತಿ ದೇವಿಯು ನಾನೂನೀನಾಗಿ ನಿನ್ನ ಭಜಿಸಿದೆನೀ ನಿರ್ಣಯ ನಿನ್ನ ವಚನ ವೆಂಕಟರಮಣಾ
--------------
ತಿಮ್ಮಪ್ಪದಾಸರು
ಚ್ಚಂದಿರವದನೆ ಶಾರದೆ ಪ ಇಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿ ಕುಂದು ನೋಡದೆ ಶ್ರುತಿವಂದೆ ಜ್ಞಾನವ ನೀಡೆ ಅ.ಪ. ಸಿತಾಬ್ಜಾಸನೆ ಸುಖದಾಯಕಿ ಸುರ ನಾಥಾರಾಧಿತೆ ವಿಶ್ವನಾಯಕೀ ವೀತದುರಿತೆ ಶಿವ ಮಾತೆ ಸದ್ಗುಣಮಣಿ ವಾಗ್ದೇವಿ ಮಾತೆ 1 ಕೋಕಿಲವಾಣಿ ಕವಿಸೇವಿತೆ ಎನ್ನ ವಾಕು ಲಾಲಿಸೆ ಮನಿವಂದಿತೆ ತೋಕನೆಂದು ಸುವಿವೇಕ ಬುದ್ಧಿಯನಿತ್ತು ವಾಕು ಮನ್ನಿಸು ತಾಯೆ 2 ಪಾತಕಿಗಳೊಡನಾಡಿ ನಾ ನಿನ್ನ ಪೋತಾಬ್ಜಪದ ಭಜಿಸದ್ಹೋದೆ ನಾ ಪಾತಕವೆಣಿಸದೆ ಸೀತಾರಮಣ ಜಗ ನ್ನಾಥವಿಠ್ಠಲನಘ್ರಿ ಗೀತಾಮೃತವನುಣಿಸು 3
--------------
ಜಗನ್ನಾಥದಾಸರು
ಛೀ ಯಾತರ ಜನ್ಮಾ | ನಾಯಿಗಿಂದತ್ತಾಧಮ ಪ ಛೀ ಯಾತರ ಜನ್ಮಾ ನಾಯಿ ಹಿಂದತ್ತಾಧಮ ಬಾಯಿ ಬಡಕನಾಗಿ ಮಯ್ಯ ಮರೆವರೇ ನಿಮ್ಮಾ ಅ.ಪ ಸಾಧುರಾನುಸರಿಸಿ | ಬೋಧನಾಮೃತ ಸೇವಿಸಿ | ಹಾದಿವಿಡಿದು ಗತಿ ಸಾಧಿಸಿ | ಘಾಸಿ 1 ಬುದ್ಧಿ ತನಗ ಇಲ್ಲಾ | ತಿದ್ದಿದರ ಕೇಳಲಿಲ್ಲಾ | ಇದ್ದೆರಡಾದಿನದೊಳು | ಸದ್ಯ ಸೌಖ್ಯ ಕಳೆದೆಲ್ಲಾ | 2 ಕಲ್ಲು ಕಟೆಯ ಬಹುದು | ಬಿಲ್ಲು ಮಣಿಸಬಹುದು | ನಿಲ್ಲದೇ ವನಕಿ ತುಂಡಾ | ಸಲ್ಲದಂತೆ ನೀನಾಗುದು 3 ಮರಹುಟ್ಟಿ ಮರ ಬಿದ್ದಾ | ತೆರನಾದೋ ಅಪ್ರಬುದ್ಧಾ | ತಿರುಗಿ ನೋಡಿನ್ನಾರೆ | ಚ್ಚರಿತು ನೀ ಮದದಿಂದ 4 ಗುರು ಮಹೀಪತಿಜನಾ ಧರಿಸಿರೋ ಸದ್ವಚನಾ ಸರಿಕರ ಕಂಡು ಹ್ಯಾವಾ ವರಿಸದೆ ಇಹುದೇನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಗನ್ನಾಥದಾಸರು ರಕ್ಷಿಸೋ-ಗುರುವರ-ರಕ್ಷಿಸೋ ಪ ಈಕ್ಷಿಸೊ ಕರುಣ ಕಟಾಕ್ಷದಲಿನ್ನ ಶಿಕ್ಷಿಸು ಮಧ್ವಾಗಮವ ಮುನ್ನ ಉಕ್ಕಿಸು ಭಕ್ತಿ ವಿರಕ್ತಿ ಚೆನ್ನ | ಆಹ ಲಕ್ಷ್ಮೀಕಾಂತನ ಅಪರೋಕ್ಷದಲಿ ಕಂಡು ಪ್ರ- ತ್ಯಕ್ಷ ಔತಣ ಉಂಡ ದಕ್ಷ ಶ್ರೀ ಜಗನಾಥ ವಿಠಲನ ದೂತ ಅ.ಪ. ನರಸಿಂಹದಾಸರ ಕುವರಾ-ಧರಿಸಿದೆ ಶ್ರೀನಿವಾಸನಪೆಸರ ವರಕವಿತಾ ಹುಟ್ಟಿನ ಸಾರ-ಮೆರೆಯಿತು ಕೀರ್ತಿ ಅಪಾರ \ಆಹ ವರದೇಂದ್ರನ್ನ ಅಶುಕವಿತಿಯಲಿಪೊಗಳಿ ವರಶಿಷ್ಯನಾಗುತ ಮೂರೊಂದು ಶಾಸ್ತ್ರದಿ ಕಡುಹುಲಿ ಎನಿಸಿದೆ 1 ನ್ಯಾಯಶಾಸ್ತ್ರದಿ ಜಗಜ್ಜಟ್ಟೀ-ವೇದಾಂತರಸಗಳ ಭಟ್ಟಿ ಮಾಯಾವಶಿರ ಮೆಟ್ಟಿ-ಅಹಂಕಾರ ಶಿರದಲಿಟ್ಟಿ ಆಹ ಶ್ರೇಷ್ಠವಿಜಯದಾಸರು ಮನೆ ಮುಟ್ಟಿ ಕರೆದರು ನಿನ್ನ ಬಹು ಬಹು ಕಂಗೆಟ್ಟೀ ಬತ 2 ಹೋಯಿತು ಕಳೆಮುಖದಿಂದ ಕಚ್ಚಿತು ಭರದಿಂದ ಆಹ ಭರದಿ ಹರಿಯ ಕರುಣ ಜರುಗಿ ಪೋದುದಕಂಡು ಕೊರಗಿ ಕೊರಗುತ ಕ್ಷೇತ್ರ ತಿರುಗುತ ಕೊನೆಗೆ ಗುರು ರಾಘವೇಂದ್ರರ ಪುರವ ಸೇರುತ ಬಹಳ ಕಾಯ ದೆರಗಿ ಸೇವೆಯಗೈದೆ 3 ಕರುಣಾಮಯನು ಸ್ವಪ್ನದಿ ಗುರುವು- ಗುರು ದ್ರೋಹ ಕಾರಣ ವರುಹಿ ಸುರಿಸಿ ಆಶೀರ್ವಾದವ ಶಿರದಿ- ತೆರಳೆಂದ ವಿಜಯದಾಸರ ಬಳಿ ಆಹ ತೆರೆದು ಕಂಗಳು ಒಡನೆ ತರಿದು ಮದಮಾತ್ಸರ್ಯ ಕರೆದು ಕುಡಿಯುತ ಶಿಷ್ಯ- ವರನು ಎನಿಸುತ ಚರಣಸಾರುವ ಬಿಡದೆ ಗೋಪಾಲದಾಸರ 4 ಸ್ವಗುರುಭಾವವತಿಳಿದು ತನ್ನಾಯುವನೆ ಇತ್ತ ಆಹ ಕೊಂಡು ಆಯುರ್ದಾನ ತೊಂಡನೆಂದಡಿಗೆರಗಿ ಕೊಂಡು ಶ್ರೀಹರಿದಾಸ ಗಂಡುದೀಕ್ಷೆಯ ಒಡನೆ ತಾಂಡವಾಡುತ ಪೋಗಿ ಪಾಂಡುರಂಗನ ಪುರದಿ ಮಂಡೆ ಮುಳುಗಿಸೆ ನದಿಲಿ ಕಂಡೆ ಅಂಕಿತ ಶಿರದಿ 5 ಪಂಡಿತನಾನೆಂಬ ಹೆಮ್ಮೆ ಬರಿ-ಪುಂಡತನವಲ್ಲದೆ ಹರಿಯ ನಿಜ ನಿನ್ನ ಚರಿತೆ ಆಹ ತಂಡತಂಡದ ಕವನ ದಂಡೆ ಹಾರಲು ಹರಿಗೆ ಕೊಂಡು ಔಡಣ ನಡಿಸೆ ಉಂಡು ಸಂತಸದಿಂದ ತುಂಡುಗೈಯುವ ಭವವ ಕಂಡೆ ನಾಕವ ಭುವಿಲಿ 6 ದೇಶದೇಶಗಳ ಸಂಚರಿಸಿ-ಹೇಸಿ ಮತಗಳ ನಿರಾಕರಿಸಿ ಪೊರೆದೆ ಹರೆಸಿ ಆಹ ಭಾಷಾದ್ವಯ ಯೋಜನೆ ಮೀಸಲು ನಿನಗೆಂಬೆ ವ್ಯಾಸ ರಾಜಾದಿಗಳ ಆಶೆಯಂದದದಿ ತತ್ವ- ರಾಶಿ ತುಂಬುತ ಗ್ರಂಥರಾಜ ರಚಿಸುತ ಜಗಕೆ ತೋಷ ತಂದಿತ್ತಿಯೊ ದಾಸಜನರುಲ್ಲಾಸ 7 ಶ್ರೀಮದ್ಧರಿಕಥಾಮೃತಸಾರ-ನೇಮ ದಿಂದೋದುವನೆ ಧೀರ ತಾಮಸರಿಗಿದು ಬಹಳದೂರ- ನೀಮಾಡಿದೆ ಮಹೋಪಕಾರ ಆಹ ಕಾಮವರ್ಜಿತವಾಗಿ ಪ್ರೇಮದಿ ನರಹರಿಯ ಭಾಮಸಹ ಸಂತತ ನೇಮದಿಂ ಧ್ಯಾನಿಸುತ ನಿತ್ಯ ಸಕಲೇಂದ್ರಿಯ ವ್ಯಾಪಾರ ಧೂಮಕೇತುವು ಎನಿಸುತ ನಮ್ಮಘಕಾನನಕೆ 8 ಪ್ರಾಣೇಶ ಕರ್ಜಗಿ ದಾಸಾರ್ಯರವೃಂದ- ನೀನಾಗಿ ಪೂರೆದಂತೆ ಘನ ಅಭಿಮಾನದಿಂದ ದೀನರೆಮ್ಮಯವೃಂದ ಕಾಯೆಂಬೆ ಮುದದಿಂದ- ತಾಣ ನಿಮ್ಮದೆ ನಮಗೆ ದಾಸಪಂಥ ಸ್ತಂಭ ಆಹ ಕೃಷ್ಣಾಗ್ರಜ ಶಲ್ಯ ಸಹ್ಲಾದ ಮತ್ತಾ ಪುರಂದರ ದಾಸಾತ್ಮಜನೀನಂತೆ ದೀನಜನೋದ್ಧಾರಗೈಯ್ಯೆ ಮುಂದೇಳುಬಾರಿ ಜನ್ಮಯೆತ್ತು ವಿಯಂತೆ ಶರಣು ಕರುಣಾಮಯ 9 ಕನ್ನಡಕೆ ಮುಳ್ಳು ಕುವರ ನೀಮುದ್ದು ಆಹ ಶರ್ಕರಾಕ್ಷಸಗೋಸ್ಥ ಅನುಸಂಧಾನ ಕ್ರಮ ಸು ನೀಕವಡಗಿಸಿ ಕವನ ಕಡಲೊಳು ಸಾಕಿಹೆ ಹರಿ ಭಕ್ತಸಂಘವ ಹಿರಿಯ ದಾಸರ ಪಥವನನುಸರಿಸಿ ಶಕ್ತನಾವನು ಗುಣಿಸೆ ನಿನ್ನುಪಕಾರ ಜಗಕೆ 10 ಸಣ್ಣವನು ನಾ ನಿನ್ನು ಗುರುವೇ-ನಿನ್ನವ ಸತ್ಯ ಮನ್ಮನ ಪ್ರಭುವೆ ಮನ್ನಿಸಪರಾಧ ಕಲ್ಪ ಧ್ರುಮವೆ-ಚಿಣ್ಣರ ಸಲಹೆ ಪಿತಗೆ ಶ್ರಮವೆ ಆಹ ಘನ್ನ ಜಯತೀರ್ಥ ವಾಯ್ವಂತರ್ಗತ ಶ್ರೀ ಕೃಷ್ಣವಿಠಲ ತದ್ವನನೆಂದು ಭಜಿಸುವ ಭಾಗ್ಯ ಜನ್ಮಜನ್ಮಂತರ ಕೊಟ್ಟು ಕಾಪಾಡುವಂಥ ನಿನ್ನಭಯಕರವೆನ್ನ ಶಿರದಲಿಡುವಲಿ ಸತತ 11
--------------
ಕೃಷ್ಣವಿಠಲದಾಸರು
ಜಗನ್ನಾಯಕ ಗುರುಪಾಹಿಮಾಂ | ಅಘನಾಶಕ ವರದಾಯಕಾ | ಪ ವರಮಾನವಿ ಪುರ ಮಂದಿರ ಕರುಣ ಭರಣ ಶಾಂತ ಮೂರುತಿ1 ನಿರುತ ನಿನ್ನಯ ಚರಣನಂಬಿದೆ ದುರಿತ ತರಿದು ತೋರೋ ಸತ್ವಥ 2 ಭೂಮಿಜಾವರ ಶಾಮಸುಂದರ ನಾಮಗರಿಯೋ ಪ್ರೇಮಸಾಗ 3
--------------
ಶಾಮಸುಂದರ ವಿಠಲ
ಜಗವು ನಿನ್ನಧೀನ ಖಗಪತಿವಾಹನ ನಿಗಮ ಗೋಚರ ಕೃಷ್ಣ ನಿತ್ಯತೃಪ್ತ ಮೋಹನ ಪ. ಇಂದಿರೆ ನಾಯಕ ಸಿಂಧುಶಯನ ಸದಾನಂದ ಸುಖಪ್ರದ 1 ಜೀವವಿಲಕ್ಷಣ ಜೀವಸಂಪ್ರೇಕ್ಷಣ ಕೇವಲ ನಿರ್ಗುಣ ಕೇಶಿನಿಷೂದನ2 ವಾಯುಜನಕ ಯದುರಾಯ ರುಕ್ಮಿಣಿ ಸಖ ಪ್ರಿಯ ಶ್ರೀ ಲಕ್ಷುಮಿನಾರಾಯಣ ಪಾವನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಜಡಮತಿಗಡ ಕಡಿದೀಡ್ಯಾಡಿ ಪಡಿರೋ ಸನ್ಮಾರ್ಗವ ಹುಡುಕ್ಯಾಡಿ ಪ ಗಡಗಡಸದೃಢದಯಿಡುತೋಡೋಡಿ ಪಡಿರೋ ಕಡು ಅನಂದ್ವೊಯ್ಕುಂಠ ನೋಡಿ ಅ.ಪ ಚಿಂತೆ ಭ್ರಾಂತಿಗಳ ದೂರಮಾಡಿ ನಿ ಶ್ಚಿಂತರಾಗಿರೋ ಮನ ಮಡಿಮಾಡಿ ಶಾಂತಿತೈಲ್ಹೊಯ್ದು ಜ್ಞಾನಜ್ಯೋತಿಕುಡಿ ಚಾಚಿ ನಿಂತು ನೋಡಿರೋ ಹರಿಪುರದಕಡೆ ಅಂತ್ಯ ಪಾರಿಲ್ಲದಾತ್ಯಂತ ಪ್ರಕಾಶದಿಂ ನಿಂತು ಬೆಳಗುತಾರೋ ಆನಂತಸೂರ್ಯರು ಕೂಡಿ 1 ಬೋಧಾದಿಮಯ ಮಹದ್ವಾರಗಳು ಮತ್ತು ವೇದ ನಿರ್ಮಯ ಪುರಬೀದಿಗಳು ಆದಿಅಂತಿಲ್ಲದಷ್ಟ ಭೋಗಗಳು ವಿ ನೋದ ಮುಕ್ತಿ ಕಾಂತೇರಾಟಗಳು ವೇದವೇದಾಂತ ಅಹ್ಲಾದದಿಂ ಪೊಗಳುವ ಸುಜನ ಮಹದಾದಿಪದವಿಗಳು2 ಸೇವಿಪ ಸುರಮುನಿಗಣಗಳು ಕೋವಿದ ನಾರದಾದಿ ಗಾನಗಳು ರಂಭೆ ನಾಯಕಿಯರ ಮಹನರ್ತನಗಳು ಸಾವಿರಮುಖಪೀಠದ್ಹೊಳೆವ ಶ್ರೀರಾಮನ ಪಾವನಪಾದಕಂಡು ಸಾವ್ಹುಟ್ಟು ಗೆಲಿರೆಲೋ 3
--------------
ರಾಮದಾಸರು
ಜನನಿ ಜಾನಕೀ ನೀದಯಮಾಡೇ ಜಗದೀಶ್ವರ ನಾಯಕೀ ಪ ಫಣಿವಿಲಾಸನ ಪ್ರೀಯೆ ಭಜಕರ ಮನವಿಗಳ ನೀಕಾಯೆ ತಾಯಳೇ ಪ್ರಣವರೂಪಳೆ ಪ್ರಣಮಿಸುವೆ ತ್ರಿಣಯಸಖನಾರಾಣಿ ಸುಂದರೀ 1 ಸರ್ವತಂತ್ರಳೆ ಸಾಕ್ಷರೂಪಿಣಿ ದುರ್ಮದಾಂತಕಿ ದುಃಖದೂರಳೆ ನಿರ್ವಿಕಲೆ ಗೀರ್ವಾಣೆ ಶುಭಕರಿ ಉರ್ವಿಪಾಲಿಕಳಾದ ಸೀತೆಯ 2 ಆದಿಶಕ್ತಿ ಅನಂತರೂಪಳೆ ವೇದಮಾನಿನಿ ವಾದಿಭೀಕರಿ ಪಾದಸೇವ ಕನಿಷ್ಟಮೊದಗಿಸೆ ಭೂಧರಗೆ ನಿಜರಾಣಿ ವೈಭವೆ 3 ರಂಗನಾಯಕಿ ರಾಧೆ ಶ್ರೀ ಜಯ ಮಂಗಳಾಂಗಿ ಸಮೋದೆ ನಿಚ್ಚಲೆ ಜಂಗಮಾರ್ಚಿತ ಗುರುವು ತುಳಸೀ ಬೆಂಗಳೂರೊಳಗಿರುವ ಕಾರಣ4
--------------
ಚನ್ನಪಟ್ಟಣದ ಅಹೋಬಲದಾಸರು
ಜಯ ಜಯ ದಯಾಮಯ ಚಿನ್ಮಯ ಜಯ ಜಯ ನಿರಾಮಯ ಶ್ರೀಜಯ ಪ ಶ್ರೀರಮಣೀ ಮನಮೋಹನ ಪಾವನ ಸಾರಸಲೋಚನ ಪಾಪವಿಮೋಚನ ಸರ್ವ ಭುವನಪಾಲಾ ಭಕ್ತಬೃಂದಾನುಕೂಲಾ 1 ದುರಿತ ತಿಮಿರಕಾಲಾ ಶುದ್ಧಸತ್ವಾದಿ ಮೂಲಾ ಉರುತರ ಶುಭಲೀಲಾ ನಿತ್ಯಕಾರುಣ್ಯ ಶೀಲಾ 2 ಮಂಗಳದಾಯಕ ಮಾಂಗಿರಿನಾಯಕ ತುಂಗಕೃಪಾಂಬಕ ದುರುಳಕುಲಾಂತಕ ರಂಗ [ಶರಣ್ಯಕ ಭಕ್ತಜನ ಪಾಲಕ] 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯ ಜಯ ಭೀಮಶ್ಯಾಮಾ ಜಯ ಸತ್ಯಾವರ ಪ್ರೇಮಾ ಜಯ ಕೃಷ್ಣಾಗತ ಕಾಮಾ ಜಯ ಪುಣ್ಯನಾಮಾ ಪ. ಪಂಚಬಾಣನ ಜನಕ ಪಾಂಚಾಲೆಯನು ಕರೆದು ಪಂಚ ಮೂರುತಿಗರಿಸಿನವ ಹಚ್ಚೆನಲೂ ಪಂಚರತ್ನಗಳಿಂದ ಮಿಂಚುತ ಭಾವಿ ವಿ- ರಿಂಚಿಯ ಕಡೆಗಾಗಿ ನಡೆತಂದಳಾಗ 1 ಅಣಿಮಾದಿ ಗುಣ ಚಿಂತಾಮಣಿಯ ಹತ್ತಿರೆ ಬಂದು ಮಣಿದು ಪಾದಕೆ ನಾರಿಮಣಿ ನಸುನಗುತಾ ಝಣಝಣವೆನಿಪ ಕಂಕಣ ಶೋಭಿತದಿಂದ ಪುನುಗಿನೆಣ್ಣೆಯ ಕೂಡಿದರಿಶಿಣ ಹಚ್ಚಿದಳು 2 ಕ್ಷತ್ರಿಯ ಗಣ ಶಿರೋರತ್ನನಾಗಿರುವಿ ಸ- ರ್ವತ್ರ ವ್ಯಾಪಕ ಫಾಲನೇತ್ರ ವಂದಿತನೆ ಕೃತ್ರಿಮ ದ್ವಿಜ ಭಿಕ್ಷಾ ಪಾತ್ರ ಸಲ್ಲದು ಕಂಜ ಪತ್ರ ತೋರಿದರೆ ನಾನರಿಶಿಣ ಹಚ್ಚುವೆನು 3 ಖುಲ್ಲ ಬಕಗೆ ಭಂಡಿಯಲ್ಲಿ ತುಂಬಿದ ನಾನಾ ಪಲ್ಯ ಭಕ್ಷಗಳ ಮೇಲೆ ಚೆಲ್ಲಿದನ್ನವನು ಎಲ್ಲ ಉಂಡಸುರನ ನಿಲ್ಲದಂತೊರಸಿದ ಮಲ್ಲ ನಿನ್ನಯ ದಿವ್ಯ ಗಲ್ಲವ ತೋರೊ 4 ಅಂಗಸಂಗದಿ ಶತಶೃಂಗಗಿರಿಯನೊಡದ ಮಂಗಳಮೂರ್ತಿ ಮಾತಂಗ ವೈರಿಗಳ ಭಂಗಿಸಿ ಬಲುಹಿಂದ ರಂಗನರ್ತನ ಗೈವ ಶೃಂಗಾರ ಕರಗಳಿಗರಸಿನ ಹಚ್ಚುವೆನು 5 ಮುಂದೆ ಕೀಚಕಬಾಧೆಯಿಂದ ರಕ್ಷಿಸುವಿ ಸೌ ಗಂಧಿ ಕುಸುಮವನ್ನು ತಂದು ಮುಡಿಸುವಿ ಮಂದಮತಿಯ ಕುರುನಂದ ನರನು ಬೇಗ ಕೊಂದು ಮನ್ಮನಸಿಗಾನಂದ ಪಾಲಿಸುವಿ 6 ಕುಂಡಲೀ ಗಿರೀಶ ಬ್ರಹ್ಮಾಂಡ ನಾಯಕ ಹೃ- ನ್ಮಂಡಲದೊಳಗಿಟ್ಟುಕೊಂಡು ಸಂತಸದಿ ಚಂಡ ವೈರಿಗಳನ್ನು ಖಂಡಿಸಿ ಸುಖದಿಂದ ಶುಂಡಾಲ ಪುರವಾಳಿಕೊಂಡು ನೀನಿರುವಿ7
--------------
ತುಪಾಕಿ ವೆಂಕಟರಮಣಾಚಾರ್ಯ
ಜಯ ಜಯ ಮಂಗಳಜಯ ಮಂಗಳ ಅಮರಾಧೀಶನಿಗೆ ಪ ಕಪ್ಪು ಗೊರಳನಿಗೆ ಕರುಣಾಸಮುದ್ರಗೆ ಕಾಮ ಸಂಹಾರ ಮಾಡಿದಗೆಮುಪ್ಪುರ ಗೆಲಿದಗೆ ಮೂಜಗದೊಡೆಯಗೆ ಮೂರನೆಯ ಗುಣದಾ ಮನೆಯವಗೆಒಪ್ಪುವ ದಶಭುಜ ತೋಳಲಿ ಡಮರುಗ ವಿಡಿದಿಹ ಪಾಶಾಂಕುಶಧರಗೆತಪ್ಪದೆ ಭಕ್ತರಿಗೊಲಿವಗೆ ಪಾಲಿಪ ಕರುಣಕೋಟಿ ಪ್ರಕಾಶನಿಗೆ 1 ಸುರನದಿ ಧರಿಸುತ ಮೆರೆದವಗೆಕೊರಳೊಳು ರುಂಡದ ಮಾಲೆಯ ಹಾಕಿಹಕೋಮಲ ಸ್ಫಟಿಕ ಪ್ರಕಾಶನಿಗೆಕರದಲಿ ಕಂಕಣ ಧರಿಸಿಹ ಮೂರ್ತಿಗೆ ಕಣ್ಣುರಿಭಾಳದಿ ರಂಜಿಪಗೆ 2 ದೇಶದಿ ಪೆಸರಾಗಿರುತಿಹ ಅಮರಾಧೀಶನು ಎನಿಪ ನಾಯಕಗೆಮಾಸದ ಮಂಜಿನ ಮಲೆಯೊಳು ನೆಲಸಿಯೆ ಆಸೆಯನೆಲ್ಲವ ಸಲಿಸುವಗೆಶ್ರೀಸಚ್ಚಿದಾನಂದಾವಧೂತ ದೊರೆ ಶಿರತಾರಕ ಅಮರೇಶನಿಗೆ 3
--------------
ಚಿದಾನಂದ ಅವಧೂತರು
ಜಯ ಜಯ ರಮಾಕಾಂತ - ಜಯತು ದೈತ್ಯ ಕೃತಾಂತ ಜಯ ಸರ್ವ ವೇದಾಂತ - ಜಯತು ನಿಶ್ಚಿಂತ ಪ ಬೇಡ ವೇಷವ ತಾಳಿ- ಓಡಿಸುತೆ ತುರಗವನು ಪ್ರೌಢೆ ಪದ್ಮಾವತಿಯ - ನೋಡಿ ನಸುನಗುತ ಜೋಡಾಗು ತನಗೆಂದು - ಗಾಡಿಕಾರರ ಮಾತ ನಾಡಿ ಕ್ರೋಢಾಲಯಕೆ - ಓಡಿಬಂದವನೆ 1 ತಾಯೆ ಬಕುಳೆಯ ಕಳುಹಿ ಮಾಯಕದ ಕೊರವಂಜಿ ಕಾಯದಿಂದಾಕಾಶರಾಯನರಮನೆಗೆ ಜೋಯೆಂದು ಪೋಗಿ - ಸದುಪಾಯಗಳ ನಡೆಸಿ ತ ನ್ನಾಯ ಕೈತಂದ ಕಮನೀಯ ಮೂರುತಿಯೆ 2 ಶುಕಮುನಿಯ ಮುಖದಿಂದ ಸುಖವಾರ್ತೆಯನು ಕೇಳಿ ಸಕಲ ದೇವೋತ್ತಮರ - ನಿಕರವನು ನೆರಹಿ ಅಕಳಂಕ ಲಗ್ನದಲಿ ಸುಕಪೋಲೆಗೊಲಿದುರಗ ಶಿಖರಿಯಲಿ ನೆಲೆಯಾದ ಲಕುಮಿವಲ್ಲಭನೆ 3
--------------
ಲಕ್ಷ್ಮೀನಾರಯಣರಾಯರು
ಜಯ ಜಾನಕೀಪ್ರಿಯ ರಾಘವ ಜಯ ಪಾವನ ಚರಣಾ ಪ ಜಯ ದಾನವಭಯ ತಾರಣ ಜಯ ಭವಸಾಗರ ತರಣಾ ಅ.ಪ ಸೇವ್ಯ ಚರಣ ದಾನವ ಕುಲ ಹರಣಾ ಚಾರು ಚರಿತ ಮಾರಜನಕ ಸಾಗರಜಾ ರವiಣಾ 1 ಸುರುಚಿರ ಮಣಿಗಣ ವಿತರಣ ಸುರನಾಯಕ ಶರಣಾ ಉರಗಶಯನ ಮರಕತ ಮಾಂ ಗಿರಿನಾಯಕ ಕರುಣಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯತು ಜಯತು ಜಯತೆಂಬೆನು ವಿಠಲ ಭಯನಿವಾರಣ ನಿರಾಮಯ ನೀನೆ ವಿಠಲಪ. ಮನವೆನ್ನ ಮಾತ ಕೇಳದು ಕಾಣೊ ವಿಠಲ ಮನಸಿಜನಾಯಸ ಘನವಾಯ್ತು ವಿಠಲ ನಿನಗಲ್ಲದಪಕೀರ್ತಿಯೆನಗೇನು ವಿಠಲ ತನುಮನದೊಳಗನುದಿನವಿರು ವಿಠಲ1 ಕದನ ಮುಖದಿ ಗೆಲುವುದ ಕಾಣೆ ವಿಠಲ ಮದನ ಮುಖ್ಯಾದಿ ವೈರಿಗಳೊಳು ವಿಠಲ ವಿಧವಿಧದಿಂದ ಕಷ್ಟಪಟ್ಟೆನು ವಿಠಲ ಇದಕೇನುಪಾಯ ತೋರಿಸಿ ಕಾಯೋ ವಿಠಲ2 ಹುಟ್ಟಿದೆ ನಾನಾ ಯೋನಿಗಳೊಳು ವಿಠಲ ಸುಟ್ಟ ಬೀಜದ ವೋಲ್ ಫಲವಿಲ್ಲ ವಿಠಲ ಇಷ್ಟಾರ್ಥಗಳನಿತ್ತು ಸಲಹಯ್ಯ ವಿಠಲ ಇಷ್ಟಕ್ಕೆ ನೀ ಮನ ಮಾಡಯ್ಯ ವಿಠಲ3 ಬಂಗಾರ ಭಂಡಾರ ಬಯಸೆನು ವಿಠಲ ಮಂಗಲ ಕೊಡು ಯೆನ್ನ ಬುದ್ಧಿಗೆ ವಿಠಲ ರಂಗ ರಂಗನೆಂಬ ನಾಮದಿ ವಿಠಲ ಭಂಗವ ಪರಿಹರಿಸಯ್ಯ ನೀ ವಿಠಲ4 ಏನು ಬಂದರೂ ಬರಲೆಂದಿಗು ವಿಠಲ ಮಾನಾವಮಾನ ನಿನ್ನದು ಕಾಣೊ ವಿಠಲ ನಾನು ನಿನ್ನವನೆಂದು ಸಲಹಯ್ಯ ವಿಠಲ ಲಕ್ಷ್ಮೀನಾರಾಯಣ ನೀನೆ ತಂದೆ ಕೇಳ್ ವಿಠಲ5
--------------
ತುಪಾಕಿ ವೆಂಕಟರಮಣಾಚಾರ್ಯ