ನರರೇನು ಬಲ್ಲರು ಪ
ಘೋರದುರಿತ ಸಂಹಾರ ಕೇಶವಧೀರಾ
ಮಾರಜನಕ ಸುಂದರ ಹೇ ವೀರಾ
ಸುರಾಸುರಪವಂದ್ಯ ಸುಗುಣ
ಶ್ರೀಗೋವಿಂದ ವೀರಾ
ಶ್ರೀರಾಮಾವತಾರ ಎತ್ತಿದ ಧೀರಾ 1
ಆದಿಮೂಲ ಕರ್ತನೆಂದು ಅರಿತು ಮನದಿ
ಶೋಧಿಸೆ ಸಕಲ ಸಾರವನು
ಭೇದಾನರಿತು ಯದಾಯುಗ ಭಟಗಾಳಾರು
ಮೋದದಿ ನವಯುಗದ ಮರ್ಮವ ನರಿತು 2
ಸಕಲ ಪ್ರಪಂಚವೆಂಬ ಸುಖವನ್ನೆ ಅತಿಗಳೆದು
ಮುಕುತಿ ದಾಯಕ 'ಹೊನ್ನ ವಿಠ್ಠಲ’ ನೆಂದೆನ್ನು
ಭಕುತಿಯಿಂದಲಿ ಸದಾಭಾವನೆಯ ನೀ ಬಿಡದೆ
ಅಕಳಂಕ ಮಹಿಮನ ಅರಿತು ಸ್ತುತಿಸುವರಿಗಲ್ಲದೆ 3