ಒಟ್ಟು 28225 ಕಡೆಗಳಲ್ಲಿ , 136 ದಾಸರು , 9942 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದಿ ಕಾಯೋ ಎನ್ನ ಕಾರುಣ್ಯನಿಧಿ ಕರುಣದಿ ಕಾಯೋ ಎನ್ನ ಪ ಚರಣಸೇವಕಭಯಹರಣ ಶ್ರೀ ಕೌಸ್ತುಭಾಭರಣ ಸೌಖ್ಯವಿ ತರಣ ನಿನ್ನಯ ಚರಣಯುಗಳವ ಶರಣುಹೊಕ್ಕೆನು ಅ.ಪ ಕರ್ಮತಂತ್ರವನುಳಿದು ಕಾಮಿಸಿ ಮ£ವ ನಿರ್ಮಲತ್ವವ ತೊರೆದು ಹಮ್ಮಿನಿಂದಲೆ ಭಕ್ತಿಯುಮ್ಮಳಿಸದೆ ಕಾಮವು ಹೊಮ್ಮುತಿದೆ ಪರಬೊಮ್ಮ ಮೂರುತಿ 1 ಸ್ನಾನ ಮೌನವ ತೊರೆದು ಸಂಧ್ಯಾದ್ಯನುಷ್ಠಾನ ನೇಮವ ಮರೆದು ಮಾನಸಪೂಜಾ ವಿಧಾನವನರಿಯದೆ ದೀನಜನಸುರಧೇನು ಭಕ್ತರಮಾನನಿಧಿಯಹ ಶ್ರೀನಿವಾಸನೆ2 ಶರಣಜನಾವನನೆ ಶಕ್ರಾದಿ ನಿರ್ಜರಕುಲಪಾಲಕನೆ ಪುರಹರ ಸನ್ನುತ ಚರಿತಪೂರಿತ ದುರಿತ ಸದ್ಗುಣ ಭರಿತ ಪುಲಿಗಿರಿ ವರದ ವಿಠಲ 3
--------------
ವೆಂಕಟವರದಾರ್ಯರು
ಕರುಣದಿ ಕಾಯೋ ಗೋವಿಂದಾ ಯಂವ ದುರಿತಗಳಿಂದ ನೀನೀಗೊ ಮುಕುಂದ ಪ ಹರಿಸೇವೆ ಮಾಡುತ್ತ ಬಂದೆ ಮುಂದೆ ಚಿರ ಸಾಯುಜ್ಯವನ್ನು ನೀಡೋ ಶರಣಂದೆ ಅ.ಪ. ಲಕ್ಷಯೆಂಬತನಾಲ್ಕು ಜನ್ಮಯೆತ್ತಿ ಭಕ್ಷಿಸಿ ಬಂದೆನು ಕೋಟಿ ದುಃಖಗಳಾ 1 ಸಾಕ್ಷಿಯಾಗಿರುವಂಥ ಜೀವಾತ್ಮನನು ಲಕ್ಷಕೆ ತಂದೆ ಮನುಜ ಜನ್ಮದಲೀ 2 ಪಾಪ ಪುಣ್ಯಕೆ ಕರ್ತೃವಾಗಿ ಭವದಿ ಕೂಪದಿ ನಿಂದೆನು ಬೋಕ್ತøವು ಆಗೀ 3 ಪಾಪವ ಕ್ಷಮಿಸೋ ಸರ್ವಾತ್ಮಯಂನ ತಾಪವ ನೀಗುತ್ತ ಜನ್ಮ ಪರಿಪರಿಸೋ4 ಜನ್ಮ ತಾಳಲಾರೆ ಹರಿಯೇ ತಾಳಿ ಜನ್ಮದಿ ಹರಿಪಾದ ನಾ ಬಿಡಲಾರೆ 5 ಸನ್ನುತವರ ದೂರ್ವಾಪುರದ ನಂಮ ಚನ್ನಕೇಶವನೇ ಭಕ್ತಿಯನು ನೀ ಕೊಡೆಲೋ6
--------------
ಕರ್ಕಿ ಕೇಶವದಾಸ
ಕರುಣದಿ ಕಾಯೋ-ಕರುಣಾಲ ವಾಲ ಪ ಶಿರಿಯರಸನೆ ನಿನ್ನ ಚರಣವ ನಂಬಿದೆ ಸುರಗಣ ಸೇವಿತ ಸುರರಾಜ ಪಾಲ ಅ.ಪ. ಸತಿ ಶಾಪದಿಂದರೆಯಾಗಿರಲಂದು ನೀದಯದಿ ಇಂದಿರೇಶನೆ ನೀ ||ಕರು|| 1 ಮಾರೆಹೊಕ್ಕರೆ ನುತಿಸಿ ಚಕ್ರದಿ ಮಕರಿಯನಿಕ್ಕಿ ಗಜೇಂದ್ರನರಕ್ಷಿಸಿದಾಪರಿಯಕ್ಕರೆ ತೋರಿಸಿ2 ಶಿರಸರಿಸಕ್ಕೆಗುರಿಯಿಡಲು ಚರಣದುಂಗುಟದಿಂದ ಧರಣಿಯನೂರಿ ನರನ- ಶಿರವುಳುಹಿದ ಶಿರಿ ವರದವಿಠಲ ಹರಿ3
--------------
ಸರಗೂರು ವೆಂಕಟವರದಾರ್ಯರು
ಕರುಣದಿ ಕಾಯೋಯನ್ನ ಕಾರುಣ್ಯನಿಧಿ ಕರುಣದಿ ಕಾಯೊಎನ್ನ ಪ ಚರಣ ಸೇವಕ ಭಯಹರಣ ಶ್ರೀಕೌಸ್ತುಭಾಭರಣ ಸೌಖ್ಯವಿತರಣ ನಿನ್ನಯ ಚರಣ ಯುಗಳವ ಶರಣುಹೊಕ್ಕೆನು ಅ.ಪ. ಕರ್ಮತಂತ್ರವನುಳಿದು ಕಾಮಿಸಿ ಮನ ನಿರ್ಮಲತ್ವವ ತೊರೆದು ಹಮ್ಮಿನಿಂದಲೆ ಭಕ್ತಿಯುಮ್ಮಳಿಸದೆ ಬಲು ನಿರ್ಮಲತ್ವವನಳಿದು ಪರ ಬೊಮ್ಮ ಮೂರುತಿ1 ಸ್ನಾನ ಮೌನವ ತೊರೆದು ಸಂಧ್ಯಾದ್ಯನುಷ್ಠಾನನೇಮವ ಮರೆದು ಮಾನಸ ಪೂಜಾ ವಿಧಾನ ವನರಿಯದೆ ದೀನಜನ ಸುರಧೇನು ಭಕ್ತರ ಮಾನನಿಧಿಯಹ ಶ್ರೀನಿವಾಸನೆ 2 ಶರಣಜನಾವನನೆ ಶಕ್ರಾದಿನಿ-ರ್ಜರಕುಲ ಪಾಲಕನೆ ಪುರಹರ ಸನ್ನುತ ಚರಿತದೂರಿತ ದುರಿತಸದ್ಗುಣ ಭರಿತ ಪುಲಿಗಿರಿ ವರದ ವಿಠಲ 3
--------------
ಸರಗೂರು ವೆಂಕಟವರದಾರ್ಯರು
ಕರುಣದಿ ಕೊಡು ಕಾರ್ತಿಕೇಯಾ | ತವ | ಶಿರದ ಮೇಲಿಹ ಗಂಧ ಸಿಂಗಾರ ಹೂವಾ ಪ ದುರಿತ ಕೋಟಿಗಳನು ತರಿಯೇ | ಮಹಾ | ದುರುಳರುಪದ್ರದ ಗಿರಿಯನು ಮುರಿಯೇ ಪರಮ ಕುಲಿಶದಂತೆ ಇರುವಾ | ತವ | ಶಿರದ ಮೇಲಿರುವ ಸಂಪಿಗೆ ಹೂವ | ದೇವಾ 1 ಕೆಡುಕಿನ ತಾಮಸವಳಿದೂ | ತವ | ದೃಢಭಕ್ತಿ ಎನ್ನಯ ಮನದೊಳು ಮೊಳೆದೂದೃಢವಾಗಿ ನೆಲೆಸುವ ತೆರದೀ | ತವ | ಮುಡಿ ಮೇಲಿಹ ಮಲ್ಲಿಗೆಯನತಿ ಮುದದೀ2 ಆಶಾದಿಗಳ ಪರಿತ್ಯಜಿಪಾ | ತವ | ದಾಸರ ಚರಣಯುಗ್ಮಕೆ ನಮಸ್ಕರಿಪಾ | ಲೇಸಿನ ತಿಳಿ ಜನಿಸಲಿಕೇ ಪಾವಂ- ಜೇಶ ನೀ ಪೊತ್ತು ಕೊಂಡಿರುವ ಅಶೋಕೇ 3
--------------
ಬೆಳ್ಳೆ ದಾಸಪ್ಪಯ್ಯ
ಕರುಣದಿ ಕೊಡು ವರವಾ ಗುರು ಮಹಾದೇವ ಪ ನಿರುತ ಸ್ಮರಿಸುವ ಶರಣ ಸಂಜೀವಾ ಅನುದಿನ | ಹರಿಕುಮಾರನ ಗರ್ವವನದಾವಾನಲ ಮಹಾನುಭಾವ ಅ.ಪ ಸ್ಪಟಿಕ ಸನ್ನಿಭ ಧವಳ ಶುಭಗಾತ್ರ ಕಟಕ ವಂಚಕ ಯಕ್ಷಪತಿ ಮಿತ್ರ ನಿಗಮ ಹಯ ಧೂರ್ಜಟಿಯ ಸುಚರಿತ್ರ ಹೇ ನಿಟಲ ನೇತ್ರ 1 ಅದ್ರಿವೈರಿಯತನಯನೊಡನೆ ಯುದ್ಧಗೈದಾತ ಭದ್ರದಾಯಕ ರುದ್ರದೇವ ಪ್ರಸಿದ್ಧ ಮುನಿ ನಮಿತ ಶ್ರೋದ್ರು ನೀಧರ ದದ್ದಲಾಪುರ ಸದ್ಮಸುಖದಾತ ಹೇ ಸದ್ಯೋಜಾತ 2 ಶಾಮಸುಂದರ ಸ್ವಾಮಿ ಪ್ರಿಯ ಸಖ ಸೋಮಶೇಖರನೆ ಪ್ರೇಮದಿಂದಲಿ ರಕ್ಷಿಸೆನ್ನನು ಭೂಮಿಶ್ಯಂದನನೆ ಕಾಮಿತ ಪ್ರದ ವಾಮದೇವನೆ ಹೇಮಾತಿಧವನೆ ನಿಸ್ಸೀಮ ಮಹಿಮನೆ 3
--------------
ಶಾಮಸುಂದರ ವಿಠಲ
ಕರುಣದಿ ಪೊರೆಯೆ ಭಾರತಿ ಸತಿ ಪ ಪರಮ ಮಂಗಾಳೆ ನಿನ್ನ ಚರಣ ಕಮಲಾವ ಮರೆಯ ಹೊಕ್ಕೆನು ಕಣ್ಣ ತೆರೆದು ನೋಡೌ ತಾಯೆ 1 ಸರುವದ ದುರಿತದಿ ಚರಿಸಿದವನೆಂದು ತರಳನಾದೆನ್ನನು ಜರಿದು ನೂಕುವರೆ 2 ದುರಿತದೂರ ಗುಣಪೂರ್ಣ ಸಿರಿ ರಂಗೇಶವಿಠಲನೆ ಸರಿಯೆಂಬ ಮತಿಯನ್ನು ಸ್ಥಿರವಾಗಿ ಕೊಟ್ಟೆನ್ನ 3
--------------
ರಂಗೇಶವಿಠಲದಾಸರು
ಕರುಣದಿ ಬಂದು ನಿನ್ನ ಚರಣ ಕಮಲವೆನ್ನ ಶಿರದ ಮೇಲಿಟ್ಟು ನೀ ಪೊರಿಯೊ ಕೃಪಾರಸ ಸುರಿಯೋ ಗರುಡಧ್ವಜ ನೀನು ಸ್ಮರಮಣ ನಿನ್ನ ಭಕುತರ ಸುರಧೇನೆಂದು ಕರೆವರು ನಿನ್ನನು ಪ ಸರಸಿಯೊಳ್ಕರಿರಾಜ ಭರದಿಂದ ತನ್ನವುದ್ಧರಿಸೆಂದು ಮೊರೆಯಿಡೆ ಪೊರೆದೆಯಲ್ಲೊ ಶಿರಿಯೊಳುನುಡಿಯದೋ ಶರಣಾಗತರನ್ನು ಪೊರೆವೆನೆಂಬ ನಿಜ ಬಿರಿದನು ಮೆರಿಸಿದಿ1 ಆಗಮವಂದಿತ ನಾಗಭೂಷಣ ತಾತ ಮೇಘವಾಹನ ಸುತನ ಬ್ಯಾಗ ರಕ್ಷಿಸಿದಿ ಜಾಗುಮಾಡದೆ ಎನ್ನ- ದಾಗಲು ರಕ್ಷಿಸೆಂದು ಬಾಗಿ ಬೇಡುವೆನು 2 ಕಾವನು ನೀನಲ್ಲದೆ ಯಾವ ದೇವರನು ನಾ ಆವಲ್ಯು ಕಾಣೆನು ಭಾವಜಜನಕನೆ ಶ್ರೀವಾಸುದೇವನ ಗೋವೃಂದ ರಕ್ಷಕನೆ ಪತಿ ಶ್ರೀವತ್ಸಾಂಕಿತನೆ 3
--------------
ಸಿರಿವತ್ಸಾಂಕಿತರು
ಕರುಣದಿ ಭವಾರ್ಣವದಿಂದಾ ದಾಟಿಸುವುದು ಜೀಯಾ ಪ ಯೋನಿ ಮುಖದಿ | ಘಾಶಿಯಾದೆನೋ ವಿಷಯಾಭಿಲಾಷದಿ | ಸೋಸಿದೆನೋ ದು:ಖ ತಾಪವ ಮಾರದೀ | ಮಾಯಾ ಮೋಹದಿ 1 ಧ್ಯಾನ ಮೌನವೆಂಬ ಸಾಧನವನು | ಈ ನಿಯಮ ಯಮ ಯೋಗವನು | ಙÁ್ಞನ ಭಕುತಿ ವೈರಾಗ್ಯವನು | ಏನು ಇಂತರಿಯದ ಮಹಾಪತಿತÀನು 2 ಮುನ್ನ ಮಾಡಿದೆಲ್ಲ ಪರಾಧ ಕ್ಷಮಿಸಿ | ಇನ್ನು ಅಭಯಕರ ಸಿರಸಲಿರಿಸಿ | ಎನ್ನ ಹೃದಯಾಲಂದಃ ಕಾರಹರಿಸಿ | ಸನ್ನುತ ಮಹಿಪತಿ ಎನ್ನ ಭಕ್ತನೆನಿಸಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣದಿಂದ ಕಾಯೊ ಎನ್ನನು ಉರಗಾದ್ರಿವಾಸ ವಿಠ್ಠಲ ದೇವ ಪ ತಂದೆ ವೆಂಕಟೇಶ ವಿಠ್ಠಲ ಬಂದು ಎನ್ನ ಹೃದಯದಲ್ಲಿ ನಿಂದು ನಾಮ ನುಡಿಸಿ ಪೇಳ್ವ ಚಂದ ಮನಕೆ ತಂದು ಕೊಡುತ 1 ವಾಸುದೇವ ನಿನ್ನ ಮಹಿಮೆ ತೋಷದಿಂದ ಭಜಿಸುವುದಕೆ ದೋಷಗುಣಗಳನ್ನೆ ಕಳೆದು- ಲ್ಲಾಸ ಮನಕೆ ಒದಗುವಂತೆ 2 ಮಂದಮತಿಗಳಾದ ಜನಕೆ ಮುಂದೆ ಗತಿಯ ಪಥವ ತೋರಿ ಬಂಧನಂಗಳನ್ನೆ ತರಿದು ತಂದೆ ಕಾಯೊ ಇಂದಿರೇಶ 3 ಬೊಕ್ಕಸದ ದ್ರವ್ಯ ಜನರು ವೆಚ್ಚಮಾಡುತಿರುಹ ತೆರದಿ ಮೆಚ್ಚಿ ಬಂದ ಜನರ ಮನದ ಇಚ್ಛೆ ಪೂರ್ತಿಗೊಳಿಸಿ ಪೊರೆದೆ 4 ಅಂತರಂಗದೊಳಗೆ ನಿನ್ನ ಚಿಂತೆ ಮರೆಯದಂತೆ ಕೊಟ್ಟು ಅಂತರಾತ್ಮ ಕಮಲನಾಭ ಸಂತೈಸಿ ಕಾಯೊ5 ಟ ಟ ಅಸ್ವತಂತ್ರ ಜೀವಾಂತರ್ಗತ ಶ್ರಿ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಉರಗಾದ್ರಿವಾಸ ವಿಠ್ಠಲಾಭಿನ್ನ ಶ್ರಿ ಗುರುವಾಸುದೇವ ವಿಠ್ಠಲಾ ಭಿನ್ನ ಶ್ರೀ ತಂದೆ ವೆಂಕಟೇಶ ವಿಠ್ಠಲಾತ್ಮಕ ಶ್ರೀ ಕಮಲನಾಭ ವಿಠ್ಠಲಾಯ:ನಮ: ಟ ಶ್ರೀ ಕಮಲನಾಭ ವಿಠ್ಠಲ ದಾಸರಾದ ಜೀವೂಬಾಯಿ ಅವರು ರಚಿಸಿದ ಮೊತ್ತ ಮೊದಲ ಹಾಡು.
--------------
ನಿಡಗುರುಕಿ ಜೀವೂಬಾಯಿ
ಕರುಣದಿಂದಲಿ ಪ್ರಕಾಶ ದೇವನ ಪ ಹೇಮ ಮುಕುಟ- ಮಾಣಿಕ್ಯಯುಕ್ತವಾಗಿರೆ ಇರುವ ಶಂಖಚಕ್ರವು ಮುತ್ತಿನಹಾರ ಮೋಹನನೆ ಮತ್ತೆ ಅಂದಿಗೆ ಗೆಜ್ಜೆಯುಕ್ತದಿ ವಸ್ತುಗಳು ಅಕೋ ಭೂಷಣವು ಪ್ರತಿರೂಪ-----ಭಾವನಾ 1 ದಿವಿಜ ಪೋಷಕನಾದ ಶ್ರೀಹರಿ ಜ್ಞಾನಿಗಳ ಬಿಡದಿನ್ನು ಸಲಹುವಾ---- ನ ವಾಧಿಪನೊಳಾದನು ? ಗಾನಲೋಲನಾಗಿ ಕನಸು ಮನಸಿನಲ್ಲಿ ಕರುಣರಸದಲ್ಲಿ ಸಾನುರಾಗದಿ ನಾಟ್ಯವಾಡುತ ಸಾರಿ ಸಾರಿಗೆ ಬಂದ ಕೃಷ್ಣನ 2 ಕಟಿ ಸುದರ್ಶನ----ಡುವಣಿ ಬಂದು ಎನ್ನ ಹೃದಯ ಪರಿ ಪರಿಯಿಂದ ತೋರುವ ನಿರುತ ದೃಷ್ಟಿಯಿಂದ ನಾನು 3
--------------
ಹೆನ್ನೆರಂಗದಾಸರು
ಕರುಣದೋರೋ ಸ್ಕಂದ ಕರುಣದೋರೋ ಪ ಮೃತ್ಯು ದೇವತೆಯೆನ್ನ | ನೆತ್ತಿಯಳಿಹಳೂ | ಕೃತ್ತಿವಾಸನ ಸುತ ಕಿತ್ತೊಗೆಯೋ ಸ್ಕಂದ 1 ಶೂಲಪಾಣಿಯ ಪುತ್ರ ಬೀಳ ಹೊಯ್ಯೋ 2 ದಾಸರ ಕಾಲನ ಪಾಶಕೀಯದಿರೋ | ತೋಷದೋಳೈಕ್ಯ ಪಾವಂಜೇಶ ಮಾಡೋ 3
--------------
ಬೆಳ್ಳೆ ದಾಸಪ್ಪಯ್ಯ
ಕರುಣವ ಬೀರು ಚೆನ್ನ ಕಾಯಬೇಕೋ ಎನ್ನಮರೆತಿರೆ ಕಾವರ ಕಾಣೆಪ. ಸೊಪನ ಜಾಗರದಲ್ಲಿ ನಿನ್ನ ಧ್ಯಾನವೆ ಬಂದುತೃಪ್ತನಾಗಿ ನಾನು ಜೀವಿಸುವೆಕಪಟದ ನುಡಿಯಲ್ಲ ನೀನೆ ಬಲ್ಲೆವಿಪತ್ತುಗಳನೆ ಬಿಡಿಸಯ್ಯ 1 ಕಡಲಮಗಳ ಗಂಡ ಕಾಮಧೇನು ನೀ ಕಂಡ್ಯಾಬಡವ ನಿನ್ನಡಿಗೆ ಪೊಡಮಡುವೆಒಡಲ ಬಳಿಯ ನೆಳಲಂತೆ ಬಿಡದೆ ನಿನ್ನದೃಢವಾಗಿ ನಾನು ಕೂಡುವೆನು 2 ತಂಡ ತಂಡದ ವ್ಯಾಧಿಯ ಉಂಡು ಉಂಡು ಬಳಲಿದೆಕಂಡ ಕಂಡವರ ಬೇಡಿ ನೊಂದೆಹಿಂಡುಹಿಂಡುಗಟ್ಟಿ ಬಂದ ಚಂಡ ದಂಡಧರನವರುತುಂಡು ತುಂಡು ಮಾಡಿ ಕಾಡುವರು 3 ಘೋರತರ ವ್ಯಾಧಿಗಳ ತೋರಿ ತೋರಿ ನರಕದಿಮುರಹರನುಣಿಸದೆ ಬಿಡನುಮೀರಿ ಮೀರಿ ಬಹ ಮೃತ್ಯು ಆರನಂಜಿಸುವುದುಭಾರಿ ಭಾರಿ ಗಳಿಸಿದ ಪಾಪ 4 ಹರಿ ನಿನ್ನ ಚರಣದ ಸ್ಮರಣೆ ಒಂದಿರೆ ಸಾಕುಮರಣಗಿರಣಕಂಜೆನಯ್ಯಶರಣಜನರು ನಿನ್ನ ಪ್ರಾಣಕ್ಕೆ ಸರಿಯೆಂಬೆಸಿರಿರಮಣನೆ ಸಲಹೆನ್ನ 5 ಶರಧಿಯೊಳಾಡುವ ಮಂದರಧರ ವರಾಹನೆಹಿರಣ್ಯಾಕ್ಷವೈರಿ ವಾಮನನೆಪರಶುರಾಮನೆ ರಘುರಾಮ ಕೃಷ್ಣ ಬೌದ್ಧನೆಧುರದಿ ಕಲ್ಕಿಯಾಗಿ ಮೆರೆದೆ 6 ಕರಕರ ಮತತತ್ವವ ಒರದೊರೆದು ಪೇಳುವೆಥÀರಥರದ ಹಿರಿಯರನೆಲ್ಲಮಿರಿ ಮಿರಿ ಮಿಂಚುತಿಹ ಮುರಹರನ ಭಜಿಸದೆಹರಿಹರಿಯೆಂದು ಪೇಳೆನೊಮ್ಮೆ 7 ಮನೆಮನೆವಾರ್ತೆಗೆ ಧನಂಗಳ ಗಳಿಸಿದೆಚಿನಿಚಿನಿಯಂಬರಕೆ ಮರುಳಾಹೆಮನೆಮನೆ ಮಹಿಮೆಯ ಕಾಣೆ ಕಾಣೆ ಕೆರೆಗಳನೆನೆನೆನೆದಾಡುತ್ತ ನಾ ಭಜಿಸಿ 8 ತನು ಜೀರ್ಣವಾಯಿತು ಕರಣ ಎನ್ನಿಚ್ಛೆಯೊಳಿಲ್ಲಮನವೆನ್ನ ಮಾತು ಕೇಳದಯ್ಯಇನಿತು ಸಂಕಟದವ ಇನ್ನು ನಾನೆಂತರ್ಚಿಪೆವನಜನಾಭನೆ ಹಯವದನ9
--------------
ವಾದಿರಾಜ
ಕರುಣವ ಮಾಡಿ ಶರಣು ಹೋ | ಶರಣು ಹೋಗುವೆ ನಿಮ್ಮ ಚರಣ ಕಮಲಕೆ | ಎರವು ಮಾಡಿದೆ ನಿರುತಾ ಪ ನಗರ ದಹನಾ | ತಾರಕ್ಷ ವಾಹನಾ | ತರುಣ ಚರ್ಮಾಂಬರ ಪೀತಾಂಬರಧರ ಶ್ರೀ ಸತಿರಮಣಾ | ಶೌರಿ ಕೌಸ್ತುಭಮಾಲಾ | ಮಾರಜನಕ ಕು | ಮಾರನಪಿತ ಗಂಗಾಧರ ಧರ ಧರ1 ಶೂಲ ಡಮರುಗ ಹಸ್ತ | ಮೂಲೋಕ ಮೀರಿದವಸ್ತಾ | ಕಾಲ ನಿಯಾಮಕ | ನಿತ್ಯ | ಪಾಲಸಾಗರಶಾಯಿ ನಂದಿಗಮನ ಕಾ | ಪಾಲಿ ಅಭಯ ಪಾಣಿ 2 ವಿಷಧರ ಭೂಷಣ ಕಸ್ತೂರಿ ತಿಲಕ ರಂ | ಪಶುಪತಿ ಪಿನಾಕಿ ಅಸುರಾರಾತಿ ವಿವೇಕಿ | ಅಸಮ ಸುದರುಶನ ರುಂಡಮಾಲಾಧೀಶ ಪಾಲ ಗೋಪಾಲ 3 ಭೂತ ಪ್ರಮಥರೊಡೆಯಾ | ಭೂತೇಶಾದಿಗಳೊಡೆಯಾ | ನೀಲ | ಗಾತುರ ಸದ್ಯೋಜಾತಾ ಜಾತರಹಿತಾ | ಶೂನ್ಯ ಪ್ರತಾಪಾ | ಶ ತಾಮಸ ಖ್ಯಾತಿ ಮಂಗಳಕೀರ್ತಿ 4 ತಂತ್ರ ಮಂತ್ರಕ್ಕೆ ಸಿಲುಕಾ | ಅಂತರಂಗ ನಿಯಾಮಕಾ | ಎಂತೆಂತು ತಿಳಿದರೆ | ಅಂಥಂಥ ಗತಿಯನ್ನು | ಸಂತತ ಕೊಡುವನೆ ಚಿಂತಿಪೆ ವರಹನ್ನ | ದಂತಜ ತೀರದಲ್ಲಿ | ಕಾಂತಾರ ನಿವಾಸಾ 5
--------------
ವಿಜಯದಾಸ
ಕರುಣವ ಮಾಡೊ ಶರಣರ ಪ್ರೇಮಿಕರುಣವ ಮಾಡೊ ಅರುಣನಿಭನೆ ಗುರು | ಕರುಣವ ಮಾಡೊ ಪ ಸುರ ತರುವಿನ ಅನುಸರಿಸಿದ ಮನುಜಗೆ ಮೃಷ್ಟಾನ್ನದ ಬರವೆಸುರನದಿ ಅನುಸರಿಸಿದ ಮನುಜಗೆ ಘನ ತೃಷಿಯ ಬಾಧೆ 1 ಕಾಮಧೇನು ತನ್ನ ಧಾಮದೊಳಗೆಯಿರೆ ಸೀಮೆ ಆಳುವರಾಸೆರಾಮನ ಪದಯುಗ ತಾಮರಸವನಂಬೆ ಪಾಮರರಂಜಿಕೆಯೆ 2 ವ್ರಜತಾಧಿಪ ವೇಣುಗೋಪಾಲ ವಿಠಲನ್ನ ನಿಜವಾಗಿ ಸ್ಮರಿಸುವರಕುಜನ ದಲ್ಲಣ ಗುರು ವಿಜಯದಾಸರೆ ಸ್ಮರಿಸುವರೆಯಿವರ3
--------------
ವೇಣುಗೋಪಾಲದಾಸರು