ಒಟ್ಟು 8293 ಕಡೆಗಳಲ್ಲಿ , 131 ದಾಸರು , 4393 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನುಡಿಯಲ್ಲಿ ರಸತೋರೆ ಉಡಿಯೊಳಗೆ ವಿಷಮಿರೆ ನಡೆಯಲ್ಲಿ ವಕ್ರಮುರೆ ನೋಡಲರರೆ ಅನೃತೋಕ್ತಿಯಿಂತಿವಗೆ ಅಮೃತಾನ್ನದಂತಾಗೆ ಸೂನೃತದಿ ಚಿತ್ತಮಿಗೆ ಬಹುದು ಹೇಗೆ ನಗಧರಗೆ ಸತಿಯಾದೆ ಹಗರಣಕ್ಕೀಡಾದೆ ನಗೆಗೇಡಿಗೊಳಗಾದೆ ಜಗದ ಮುಂದೆ ಪರರ ಬಿನ್ನಣದ ನುಡಿ ಗೆÀರಕಮಾಗಿರೆ ಕಿವಿಯ ಪರಿಯದೇಂ ವರ್ಣಿಸುವೆ ನರಿಯೆನಾನು ಕೋಟಿಜನ್ಮದಿನೋಂತ ಪುಣ್ಯಫಲದಿ ಬೂಟಕವ ತೋರುವನ ಪಡೆದೆ ಮುದದಿ ನಾಟಕಪ್ರಿಯನಿಂದೆ ಸುಖೆಪ ಬಗೆಗೆ
--------------
ನಂಜನಗೂಡು ತಿರುಮಲಾಂಬಾ
ನೆಚ್ಚದಿರು ಸಂಸಾರ ಕಡೆಗೆ ಹಾಕುವುದಲ್ಲ ಮಚ್ಚುಗೊಳಿಸುವುದು ವಿಷಯದಲಿ ಎಚ್ಚತ್ತು ಪ್ರವರ್ತಿಸು ಇನ್ನಾದರೂ ಸಿರಿ- ಅಚ್ಯುತನ ಪಾದವನು ನಂಬೊ ಪ್ರಾಣಿ ಪ ಪುಂಪೆಣ್ಗಳಿಂದ ಪುಟ್ಟಿದ ದೇಹವನು ತಿಳಿ ಕೆಂಪು ಬಿಳಿದಿನ ವರ್ಣ ಮಿಳಿತ ಇಂಪಾಗಿದೆಯೆಂದು ಹಿಗ್ಗದಿರೆಲವೊ ಹೊಲೆ- ಗಂಪು ನಾರುವುದು ಅದ ತೊಳೆಯದೆ ಇರಲು 1 ಜನಿಸಿದಾಕ್ಷಣ ಕಾಯು ಕಡಮೆಂದು ತಿಳಿಯದಲೆ ಜನನಿ ಜನಕರು ಸುಖಿಸುತಿಹರು ತನುಭ್ರಮಣವಲ್ಲದೆ ಚಿದ್ರೂಪ ಬಲ್ಲರೆ ಕೊನೆಗೆ ಏನಾಗುವುದೊ ಪ್ರಾಣಿ 2 ಗಳಿಸಿ ಧನ ತರುವಾಗ ಸುತ್ತ ನೆರೆದಿಹರೆಲ್ಲ ಭಳಿರೆ ಇವ ಮಹಾತ್ಮನೆಂದು ಘಳಿಗೆ ತೊಲಗಲು ಧನವು ಕರಗಿ ತಿಂದು ಪೋಗಿ ಹಳಿದು ಹಲ್ತೆರೆದು ಅಣಕಿಪರೋ-ಪ್ರಾಣಿ 3 ಹುಬ್ಬಿನಿಂದಲೆ ಹೊಡೆದು ಹೃದಯದ ಕಗ್ಗಂಟು ಕಬ್ಬು ಕಾರ್ಮುಕನಿಂದ ಬಿಡಿಸಿ ಉಬ್ಬಿಸ್ಯುಕ್ಕಿನ ತಂತಿಯಂತೆ ಮಾತುಗಳಾಡಿ ಉಬ್ಬಸವ ಬಡಿಸುವಳೊ ನಾರಿ ಪ್ರಾಣಿ 4 ಯೌವನವೊದಗಿದಾಗ ಏನೆಂದರೂ ಅಪ್ಪ ಅವ್ವಣ್ಣನೆಂದು ನಸುನಗುತ ಗವ್ವಳಿಕೆ ವೃದ್ಧಾಪ್ಯ ಬಂದೊದಗಲು ಇವನ ಬವ್ವನ ತೆರೆದಲಾಡಿಪರೋ-ಪ್ರಾಣಿ 5 ನಿಷ್ಠಕ್ಕೆ ದೇಹವನು ಮಾಡಿಕೊಂಡಂತೆ ನೀ ದುಷ್ಕರ್ಮಕೊಳಗಾಗದಿರೆಲೋ ನಿಷ್ಕಂಟಕವಾದ ಮಾರ್ಗದಲಿ ನರಹರಿಯ ನಿಷ್ಕಾಮದಲಿ ಭಜಿಸೊ ಮನವೆ ಪ್ರಾಣಿ 6 ಅಂ¨ಲಿಗೆ ಗೃಹಪಾಲ ಮನೆ ಮುಂದೆ ಹಗಲಿರುಳು ಹಂಬಲಿಸಿ ಬಿದ್ದಂತೆ ನೀನು ಕವಿ ಜೋತು ಬಿದ್ದು ಈ ಡಿಂಬವನು ಪೋಷಿಸದಿರೆಲವೊ-ಪ್ರಾಣಿ 7 ದೇಹಕ್ಕೆ ಬಲವಾಗಬೇಕೆಂದು ಎಲ್ಲರೊಳು ಕಂಡಲ್ಲಿ ಸ್ನೇಹಭಾವವನ್ನು ಬಯಸಿ ಕಾಯ ಪುಷ್ಟಿಯಿಂದ ಮೋಹಕ್ಕೆ ಒಳಗಾದೆಯಲ್ಲೋ-ಪ್ರಾಣಿ8 ಸ್ವಲ್ಪ ದಿನವುಳಿಯಿತು ಒಂದು ಸಾಧನ ಕಾಣೆ ಕಲ್ಪಾಯು ನಿನಗಿಲ್ಲವಲ್ಲೊ ಬಲ್ಪಂಥಗಳ ಮಾಡಿ ಭೋಗಪಡದಿರು ನಾಗ- ತಲ್ಪನ್ನ ಮೊರೆಹೋಗಲೋ-ಪ್ರಾಣಿ9 ದೇಶ ದೇಶವ ತಿರುಗಿ ಬಳಲಿ ಬಾಯಾರಿ ನೀ ಕ್ಲೇಶಕೊಳಗಾಗಿ ಹೊನ್ನುಗಳ ಏಸೇಸು ತಂದದ್ದು ಏನಾಯಿತೋ ಒಂದು- ಕಾಸು ನಾಳೆಗೆ ಕಾಣೆಯೋ-ಪ್ರಾಣಿ10 ಎಂದಿಗಾದರೋ ಇದೇ ಸಂಸಾರ ವಿಸ್ತಾರ ಒಂದಕ್ಕೆ ಒಂದೊಂದು ಅಧಿಕ ಬಂಧನವಲ್ಲದಲೆ ಲೇಶ ನಿರ್ಮಲ ಕಾಣೆ ಪೊಂದು ಸಜ್ಜನರಲ್ಲಿ ಮಂದ-ಪ್ರಾಣಿ11 ನಿತ್ಯ ಗಂಡಾಂತರದಿ ಬಿದ್ದು ಸಕಲಕ್ಕೆ ಕರ್ತೃ ನಾನೆಂದು ಕೂಗುವಿಯಲೊ ಮೃತ್ಯು ನಗುವುದು ನಿನ್ನ ಹೆಡತಲೆಯಲಿ ನಿಂದು ಚಿತ್ತದಲ್ಲಿ ತಿಳಿದು ತಲೆ ಬಾಗೊ-ಪ್ರಾಣಿ 12 ದೊಡ್ಡವನು ನಾನು ಎನಗೆಲ್ಲ ಜನರು ಬಂದು ಅಡ್ಡಬೀಳುವರೆಂಬ ಮಾತು ಹೆಡ್ಡತನ ತಾಳದಿರು ಕೊನೆಗೆ ಅನುಭವಕ್ಕು ಕಡ್ಡಿಯಂದದಿ ಮಾಳ್ಪರೋ-ಪ್ರಾಣಿ 13 ಕೋಟಿಯಾದರು ಕೇಳು ಅವರೋಕ್ಷಿಗಾದರೂ ಕೋಟಲೆಯೊಳಿರದೆ ಗತಿಯಿಲ್ಲ ತಾಟತೂಟಕ ಮಾಡಿ ಅವರಂತೆ ನುಡಿದು ಭವ ದಾಟಬೇಕೋ ಬೇಗ ಜಾಣ-ಪ್ರಾಣಿ14 ಆದರಿಸಿ ಸತಿಸುತರು ಬಂಧು ಬಳಗಕ್ಕೆ ಸಂ ಪಾದಿಸಿ ಧನ ಧಾನ್ಯ ತಂದು ಮೋದಪಡಿಸುವೆನೆಂದು ವಾದಿಸುವ ಮನುಜನ್ನ ಪಾದಕ್ಕೆ ಶರಣು ಸಾರೆಲವೋ-ಪ್ರಾಣಿ 15 ವನಧಿಯೊಳು ಸಪ್ತದ್ವೀಪದ ಮೃತ್ತಿಕೆ ಹಾಕೆ ದಣುವಿಕ್ಯಲ್ಲದೆ ಪೂರ್ಣವಹುದೆ ಇನಿತು ತಿಳಿಯೆಲ್ಲೆಲ್ಲಿ ತಂದ ಧನದಿಂದ ಭವ- ವನಧಿ ತುಂಬದು ಕಾಣೊ ಮರುಳೆ-ಪ್ರಾಣಿ 16 ನಿತ್ಯ ಬರೆದ ಲೆಖ್ಖವು ದಿವಾ ರಾತ್ರಿ ನೋಡುತಲಿದ್ದು ನಿನ್ನ ಪತ್ರ ಕರದಲಿ ಪಿಡಿದು ಈ ಮೂರ್ಖ ನರಮಹಿಷ- ಪುತ್ರನೆಂದು ನಸುನಗುವರಲ್ಲೋ-ಪ್ರಾಣಿ 17 ಎನಗೆ ತನಗೆಂದು ಯಮಭಟರು ಕರಗಳ ಹೊಯಿದು ಕಣಿದು ಭುಜ ಚಪ್ಪರುಸುತಿಹರೊ ಅನಿತರೊಳಗೆಚ್ಚರಿಕೆ ಎಚ್ಚತ್ತು ಹರಿಚರಣ ವನಜ ಧಾನ್ಯವ ಒಲವು ಮಾಡೊ-ಪ್ರಾಣಿ 18 ಶ್ರುತಿಗೆ ಅಪ್ರಾಮಾಣ್ಯ ಬಾರದಂತೆ ಮಧ್ವ ಮತಕೆ ವಿರೋಧವಾಗದಂತೆ ಕ್ಷಿತಿಯೊಳಗೆ ಸುಜನರಿಗೆ ಹಿತವಾಗುವಂತೆ ಶ್ರೀ- ಪತಿಯ ಸೇವಿಸಿ ಸುಗತಿ ಪಡೆಯೋ-ಪ್ರಾಣಿ 19 ಅರ್ಥಬಾರದು ನಿನ್ನ ಸಂಗಾತ ಕೇಳ್ ಕೊನೆಗೆ ವ್ಯರ್ಥಧಾವತಿ ಪ್ರಾಪ್ತಕರ್ಮ ತೀರ್ಥಯಾತ್ರೆಯ ಮಾಡಿ ನಿಸ್ಸಂಗನಾಗು ಯ_ ಥಾರ್ಥಾ ಜ್ಞಾನದಿಂದ ಬಾಳೊ ಪ್ರಾಣಿ20 ಶಿಥಿಲವಾಗಿ ಪೋಪ ದೇಹಕೆ ಮಮತಿಂದ ಮಿಥುನ ಭಾವಗಳನ್ನೆ ಬಯಸಿ ವ್ಯಥೆಪಟ್ಟು ಪಥತಪ್ಪಿ ನಡೆದು ನರಹರಿ ಸುಗಣ ಕಥೆಗೆ ವಿಮುಖನಾಗದಿರೆಲೊ-ಪ್ರಾಣಿ 21 ವನಗಿರೀ ನದಿ ಮೆದೆ ಹೊದರು ಗಹ್ವರ ಹುತ್ತ ವನರಾಶಿ ದ್ವೀಪ ಪಾತಾಳ ತನು ಮತ್ರ್ಯ ಸುರಲೋಕ ಜನನಿ ಜಠರದೊಳಿರಲು ಅಣು ಮಾತ್ರ ತಪ್ಪುವುದೆ ಬರಹ ಪ್ರಾಣಿ 22 ಹಲವು ಹಂಬಲ ಸಲ್ಲ ಆದ್ಯಂತಕಾಲದಲಿ ಗಳಿಸಿಕೋ ಪೂರ್ಣಾಯು ವಾಯು ಒಲಿಯದಲೆ ನಿನ್ನೊಳಗೆ ವಿಜಯವಿಠ್ಠಲರೇಯ ಸುಳಿಯ ಜಾಗ್ರತನಾ ಗೆಲೋ ಪ್ರಾಣಿ 23
--------------
ವಿಜಯದಾಸ
ನೆಚ್ಚದಿರು ಸಂಸಾರ ಕಾಡಗಿಚ್ಚಿನಂದದಿ ದಹಿಸುವದತಿ ಘೋರ ಪ ಕ್ಷುದ್ರ ಜನರ ಸಂಗತ್ಯಜಿಸೊ | ಸದಾ ಮಧ್ವಸುಶಾಸ್ತ್ರ ಕೇಳಿ ನೀ ಗ್ರಹಿಸೊ ಸದ್ಗುರುಗಳ ಪಾದಾಶ್ರೈಸೊ | ನೀನೆ ಉದ್ಧಾರಕನೆಂದು ಹರಿಯನ್ನೆ ಬಯಸೊ 1 ನಾನೆಂಬೊ ಅಹಂಕಾರಸಲ್ಲ | ನಿನ್ನ ಮಾನಿನಿ ಸುತರು ಸಂಗಡ ಬಾಹೋರಿಲ್ಲ ಈ ನುಡಿ ದಿಟ ಸಟಿಯಲ್ಲ | ಹೀಗೆ | ನೀನಾಚರಿಸಲು ಒಲಿವ ಶ್ರೀನಲ್ಲ2 ಆಶಾಕ್ರೋಧಂಗಳ ಕೀಳೊ | ಹರಿ | ದಾಸರ ದಾಸರ ದಾಸನೆಂದ್ಹೇಳೊ || ದೋಷಕ್ಕೆ ಅಂಜಿ ನೀ ಬಾಳೊ | ಎಲ್ಲ | ಈಶನಾಧೀಶವೆಂಬುದೆ ಮುಕ್ತಿ | ಕೇಳೋ 3 ಹರಿವಾಸರುಪವಾಸ ಮಾಡೊ | ಇರುಳು ಜಾಗರ ಮರಿಬ್ಯಾಡೊ ಮರುದಿನ ನಿದ್ರೆಯ ದೂಡೊ | ಇಂತು ಪರಿಯಲ್ಲಿ ನಡೆದರೆ ನಿನಗಿಲ್ಲ | ಕೇಡು 4 ಇಂದ್ರಿಯಗಳ ನಿಗ್ರಹಿಸೊ | ಮನಿಗೆ | ಬಂದ ಭೂಸುರರಿಗೆ ವಂದಿಸಿ | ಉಣಿಸೊ ಕುಂದು ನಿಂದೆಗಳೆಲ್ಲ ಸಹಿಸೊ | ಶಾಮ ಸುಂದರ ವಿಠಲನ್ನ ನೀ ಪೊಂದಿ ಸುಖಿಸೊ 5
--------------
ಶಾಮಸುಂದರ ವಿಠಲ
ನೆನೆಮನವನುದಿನ ಹನುಮದೀಶನ ಕನಸಿನಲಿ ತನುಸುಖವನು ಬಯಸದೆ ನಿ ಪ. ಮನಸಿಜ ಪಿತನನೆ ನೆನೆನೆನೆದ್ಹಿಗ್ಗುತ ನಿನ ಹೃದಯದಲ್ಹರಿಯನು ನಿಲಿಸುತಲೆ ತನುಮನವರ್ಪಿಸೆ ಜನುಮ ಜನುಮದಘ ವನು ಕಳೆವನು ರಾಮನುಮಾನವೇಕೆ 1 ಆರು ಅರಿಯದ ತೋರಿ ಭಕ್ತಿಯೇ ಬಾರಿ ಪಾಶದಿ ಕಟ್ಟಿಹ ಹನುಮ ವಾರಿಜನಾಭನು ಹಿಗ್ಗಿ ನಿಲುತಲೆ ಚಾರುಸೇವೆಗೆ ಬಹೆ ಎನೆ ರಾಮನ ನೆನೆ2 ಕಲ್ಲಾಗಿದ್ದ ಅಹಲ್ಯೆಯ ರಾಮನು ನಲ್ಲೆಯ ಮಾಡಿದನರಿಯೆಯ ಮನವೆ ಚೆಲ್ಲುತ ಕರುಣವ ಶಬರಿಯ ಎಂಜಲನುಂಡ ರಮಾ ವಲ್ಲಭ ಶ್ರೀ ಶ್ರೀನಿವಾಸ ಕರುಣಿಯೊ ನೆನೆ 3
--------------
ಸರಸ್ವತಿ ಬಾಯಿ
ನೆನೆಯ ಬಾರದೆ ಮನವೆ ಪರಮಪಾವನನ ಪ ಸಾಕಾರದಿಂದ ಸರ್ವವನು ರಕ್ಷಿಪನಜೋಕೆಯಲಿ ತನ್ನ ನೆನೆವವರ ಪಾಲಿಪನ - ಅ-ನೇಕ ಮೂರುತಿ ಸೂರ್ಯನಾರಾಯಣನ 1 ಬ್ರಹ್ಮಾಂಡ ಕೋಟಿ ತಿಮಿರವ ಗೆಲುವವನಒಮ್ಮೆ ನೆನೆಯಲು ಪ್ರಸನ್ನನಾದವನಧರ್ಮಕ್ಕೆ ಸಾಕ್ಷಾತ್ ರೂಪಾಗಿ ತೋರುವನನಿರ್ಮಲಾತ್ಮಕವಾಗಿ ಥಳಥಳಿಸುವವನ 2 ಹರಗೆ ನಯನವಾಗಿ ಮಕುಟವ ಬೆಳಗುವನತರುಣಿಯೈವರ ಲಜ್ಜೆ ಕಾಯ್ದವನದುರಿತಕೋಟಿಗಳನುದ್ಧರಿಸುವವನಪರಬ್ರಹ್ಮ ಕಾಗಿನೆಲೆಯಾದಿಕೇಶವನಮರೆಯದೆ ಭಜಿಪರ ಕಾಯುವವನ 3
--------------
ಕನಕದಾಸ
ನೆನೆವೆನನುದಿನ ನೀಲನೀರದವರ್ಣನ ಗುಣರನ್ನನಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಪಾಂಗನ ಪ. ದೇವಕೀ ಜಠÀರೋದಯಾಂಬುಧಿಚಂದ್ರನ ಸುಖಸಾಂದ್ರನಗೋವ್ರಜಕೆ ಘನ ಯಮುನೆಯನು ದಾಟಿ ಬಂದನ ಅಲ್ಲಿ ನಿಂದನಮಾವ ಕಳುಹಿದ ಮಾಯಶಠವಿಯ ಕೊಂದನ ಚಿದಾನಂದನ ದೇವರಿಪು ದೈತ್ಯೇಂದ್ರ ಶಕಟನ ಒದ್ದನ ಶ್ರುತಿಸಿದ್ಧನ 1 ಗೋಕುಲದ ಗೋಪಿಯರ ಸಂಚಿತ್ತ ಚೋರನ ಬಹು ಧೀರನ ಅ-ನೇಕ ನಾರಿಯರ್ವಸನವನು ಕದ್ದೊಯ್ದನ ಪುರಗಾಯ್ದನನಾಕಿಯರ ನೋಯಿಪಧೇನುಕ ವತ್ಸವಿಘಾತ ವಿಖ್ಯಾತನಕಾಕುಮತಿ ಕಾಳಿಂಗನ ಫಣ ತುಳಿದನ ಆವಗೊಲಿದನ 2 ಕರ ಪಿಡಿದನ ಸುಧೆಗುಡಿದನಬಾಲ ಭಾಮೆಯರೊಡನೆ ಜಲಕ್ರೀಡೆಗಿಳಿದನ ಅಲ್ಲಿ ನಲಿದನಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ ಸಂತುಷ್ಟನ 3 ಕ್ರೂರ ಬಕ ಕೇಶಿಗಳನೆಲ್ಲ ಸೀಳ್ದನ ಸುರರಾಳ್ದನ ಅಕ್ರೂರ ಕರೆಯಲು ಹರುಷದಿಂದಲಿ ಬಂದನ ಸುರವಂದ್ಯನಸಾರಿ ಕುಬ್ಜೆಗೆ ಭೂರಿಸಂತಸವಿತ್ತನ ಅತಿಶಕ್ತನವಾರಣವ ಒದ್ದು ಕೆಡಹಿದಾಪ್ರತಿಮಲ್ಲನ ಅತಿಚೆಲ್ವನ4 ಸುಲಭದಿಂದಲಿ ಶಿವನ ಧನುವನು ಮುರಿದನ ನೆರೆಮೆರೆದನಮಲೆತÀ ಮಲ್ಲರ ಮಡುಹಿರಂಗದಿ ನಿಂತನ ಜಯವಂತನಖಳಕುಲಾಗ್ರಣಿ ಕಂಸನೆಂಬನ ಹೊಡೆದನ ಹುಡಿಗೆಡೆದನಬಲದಿ ತಾಯಿತಂದೆ ಬಂಧನ ಕಡಿದನ ಕೀರ್ತಿ ಪಡೆದನ 5 ಭುವನ ಪಟ್ಟವನುಗ್ರಸೇನಗೆ ಕೊಟ್ಟನ ಅತಿ ದಿಟ್ಟನಯುವತಿಯರಿಗುದ್ಧವನ ಕಳುಹಿದ ಜಾಣನ ಸುಪ್ರವೀಣನವಿವಿಧ ವಿದ್ಯಾ ಕಲೆಗಳನ್ನೆಲ್ಲ ಅರಿತನ ಶುಭಚರಿತನ ಜವನ ಶಿಕ್ಷಿಸಿ ದ್ವಿಜನ ಕಂದನ ತಂದನ ಆನಂದನ 6 ಕುಮತಿ ಖಳ ಮಾಗಧನ ಯುದ್ಧದಿ ಗೆದ್ದನ ಅನವದ್ಯನದ್ಯುಮಣಿಸಮ ದ್ವಾರಕೆಯ ರಚಿಸಿದುದಾರನ ಗಂಭೀರನಸುಮತಿ ಮುಚುಕುಂದನೊದ್ದ ಯವನನ ಸುಟ್ಟನ ಅತಿದಿಟ್ಟನವಿಮಲ ಸುಚರಿತ್ರಾಷ್ಟಮಹಿಷಿಯರಾಳ್ದನ ನೆರೆಬಾಳ್ದನ 7 ಮುರನರಕ ಮುಖ್ಯರನು ಚಕ್ರದಿ ತರಿದನ ಕರಿವರದನಸುರತರುವ ಸತಿಗಾಗಿ ತಂದ ಸಮರ್ಥನÀ ಜಗತ್ಕರ್ತನದುರುಳ ಶಿಶುಪಾಲಾದಿ ದೈತ್ಯ ಸಂಹಾರನ ಬಹು ಶೂರನಕುರುಕುಲಕೆ ಲಯವಿತ್ತ ಪಾಂಡವಪ್ರೀಯನ ಕವಿಗೇಯನ 8 ಸಂತತವೀ ಸಾರÀ ಕತೆಯನು ಕೇಳ್ವರ ನೆರೆ ಬಾಳ್ವರಕಂತುಪಿತ ಕಾರುಣ್ಯದಿಂದಲಿ ಹೊರೆವನು ಸುಖಗರೆವನುಇಂತು ಇಳೆಯ ಸುಜನರ ಸಲಹುವ ಕಾಂತನ ಸಿರಿವಂತನಪಂಥವುಳ್ಳ ಪ್ರಸನ್ನ ಹಯವದನ್ನನಮುನಿಮಾನ್ಯನ 9
--------------
ವಾದಿರಾಜ
ನೆನೆಸು ಮನವೆ ನಲಿವಿನಿಂದಲಿ ನೆನೆಸು ಮನವೆ ನಲಿವಿನಿಂದಲಿ ಮನಸಿಜನ್ನ ಪೆತ್ತ ಹರಿಯ ವನಜ ಚರಣವನ್ನು ಹೃ ದ್ವನಜದೊಳಗೆ ನಿಲಿಸಿ ನಗುತ ಪ ಪ್ರಳಯದಲ್ಲಿ ವರ ರಮಾ ಕ ಳವ ತಾಳಿ ಲೀಲೆಯಲ್ಲಿ ಪೊಳವ ಕಂಗಳಿಂದ ಕಿಡಿ ಗಳನು ತೋರಿ ಕುಣಿವುತ ಜಲಜ ಪೀಠ ಸುರಪ ಪುಲಿದೊ ಗಲ ವಸನ ಉಳಿದ ಸುರರ ಅಳಿದು ಏಕಮೇವನಾಗಿ ನಲಿವ ನಾರಸಿಂಹನೆಂದು 1 ಜರಾಮರಣರಹಿತ ಸುಜ ನರನ ಕಾಯ್ದು ಕರುಣದಲ್ಲಿ ಜರಿದು ಅದ್ರಿಯಲ್ಲಿ ದನುಜರನ್ನು ಶೀಳಿ ವೇಗ ನಿ ಪರಮನೆಂದೆನಿಸಿ ಚರಿಸುತಿಪ್ಪ ಅರುಣಪ್ರಭೆಗೆ ಕೋಟಿ ಮಿಗಿಲು ಪರಮಪುರುಷ ಸಿರಿಧರನ್ನ 2 ಕೆಡದೆ ಪರಮ ಭಕುತಿ ಮಾರ್ಗ ವಿಡಿದು ಗರ್ವವೆಂಬ ಕವಚ ದುರುಳ ಚೇತನಕ್ಕೆ ಕೊಡದೆ ಮನಸು ವಿನಯದಿಂದ ಕಡಲಶಯನನಾದ ಒಡಿಯ ವಿಜಯವಿಠ್ಠಲನ್ನ ಬಿಡದೆ ನುಡಿಯೆ ಬಂದ ಅವ ಘಡವ ದಾಟಿಸು ವೊಲಿದು ಕಾಯುವಾ3
--------------
ವಿಜಯದಾಸ
ನೆರೆದು ಗೋಪಿಯರೆಲ್ಲರು - ಕೃಷ್ಣಯ್ಯನಕರವ ಪಿಡಿದುಕೊಂಡುಭರದಿಂದ ಬಂದು ಯಶೋದೆಗೆ ಚಾಡಿಯಅರುಹಿದರತಿ ವೇಗದಿ ಪ ಬಲು ಕಳ್ಳ ನಿನ್ನ ಮಗ - ಯಶೋದೆ ಕೇಳೆಹಾಲು ಕರೆಯುತಿರಲುತೊಲೆಗೆ ನಿಚ್ಚಣಿಕೆಯನೆ ಹಾಕದೆ ಸುರಿದನುನೆಲುವಿನ ಪಾಲ್ಮೊಸರ 1 ಅಮ್ಮಯ್ಯ ಇಲ್ಲ ಕಾಣೆ - ಇವಳು ಎನ್ನಸುಮ್ಮನೆ ದೂರುವಳೆಹಮ್ಮಿಂದ ನಾನವಳ ಅಟ್ಟಕ್ಕೆ ನೆಗೆಯಲುಬೊಮ್ಮ ಜಟ್ಟಿಗನೇನಮ್ಮ2 ಮತ್ತೆ ಮುತ್ತಿನಂಥ - ನಿನ್ನೀ ಮಗಹತ್ತಿ ಗವಾಕ್ಷದಿಂದಎತ್ತಿಟ್ಟ ಬೆಣ್ಣೆಯನೆಲ್ಲದ ಮೆದ್ದನುಹೆತ್ತ ಮಕ್ಕಳಿಗಿಲ್ಲದಂತೆ 3 ಗಡಿಗೆ ಬೆಣ್ಣೆ ಮೆಲ್ಲಲು - ಎನ್ನ ಹೊಟ್ಟೆಮಡುವು ಭಾವಿಯೇನೆಹುಡುಗರಿಗರಿಯದೆ ಎತ್ತಿಟ್ಟ ಬೆಣ್ಣೆಯಹೊಡೆದರವರ ಮಕ್ಕಳು 4 ಮರೆತು ಮಂಚದ ಮೇಲೆ - ನಾ ಮಲಗಿರಲುಹರಿವ ಹಾವನೆ ತಂದುಅರಿಯದಂತೆ ಬಂದು ಮುಸುಕಿನೊಳಗಿಟ್ಟುಸರಸರ ಪೋದನಮ್ಮ 5 ಹರಿದಾಡುವ ಹಾವನು - ನಾ ಹಿಡಿಯಲುತರಳ ನಾ ತಡೆಗಾರನೆಹರಕೆಯ ಹೊತ್ತುದನೊಪ್ಪಿಸದಿರಲುಗುರುತು ತೋರಲು ಬಂತೇನೊ6 ಕಕ್ಕಸ ಕುಚಗಳಮುಸುಕಿನೊಳಗೆ ಹಿಡಿದ 7 ಕೇಳು ಕೇಳೆಲೆ ಅವ್ವ - ಇವಳು ಬೇ-ತಾಳನಂತಿರುವಳುಬಾಲಕ ನಾನವಳುದ್ದಕೆ ನೆಗೆವೆನೆಜೋಲುವ ತೊಗಲಿಗಾಗಿ 8 ಮಕ್ಕಳು ಪಡೆದವರು - ಇಲ್ಲದ ಕಳವಿಕ್ಕಬಹುದೆ ಕೃಷ್ಣಗೆಸಿಕ್ಕ ತಪ್ಪು ಸಮೇತ ಎಳೆತಂದರೆತಕ್ಕ ಬುದ್ಧಿಯ ಹೇಳುವೆ 9 ಅಣುಘನರೂಪ ಕಾಣೆ - ನಿನ್ನೀ ಮಗಚಿನುಮಯ ರೂಪ ಕಾಣೆಘನ ಮಹಿಮನು - ಇಂಗಳಗೊಂದಿಯಚೆನ್ನಕೇಶವರಾಯ ಕಾಣೆ 10
--------------
ಕನಕದಾಸ
ನೆರೆನಂಬಿದವರನ್ನ ಪರಿವೆಮಾಡದೆ ಇನ್ನು ಪೊರೆಯದಿರುವರೆ ಪರಮಪುರುಷನೆ ನರಹರೆ ನಿಮ್ಮ ಚರಣ ಕಮಲವ ಹಾಗೆ ಸ್ಮರಿಸುತಿರುವಂಥ ಪರಮಪುಣ್ಯ ಭಕ್ತಜನ ರನು ಪಾಲಿಸದೆ ಇನ್ನು ಇರುವದುಚಿತವೆ ಪ ಅಮಿತ ಪರಾಕ್ರಮ ಕುಂಡಲಶಯನ ಅಕ್ರೂರ ವಂದ್ಯಾ ಪುಂಡರೀಕಾಕ್ಷನೆ ಪುಣ್ಯ ಪ್ರಭಾವನೆ ಕುಂಡಲಾಧಿಪ ದೇವ ಮಹಾನುಭಾವ ದಂಡಿದಾನವ ಖಂಡಗರ್ವ ಅಖಂಡಮುನಿಮನ ಮಂಡಲ ನಿಲಯ ಕೋದಂಡಧರನೆ ಅಂಡಜ ಗಿರಿವಾಸ ಹರಿಗೋವಿಂದನೆ 1 ಭೂಮಿಜರಮಣ ಸಂಪೂರ್ಣಾನಂದನೆ ಸಾಮಗಾನಲೋಲ ಸರ್ವೇಶನೆ ಕಾಮತಾರ್ಥಗಳೀವ ಕರುಣಾಸಾಗರ ದೇವಾ ಸ್ವಾಮಿ ಜಗನ್ನಾಥ ಸರ್ವೋತ್ತಮನೆ ಕಾಮ ಜನಕ ಸುದಾಮ ರಕ್ಷಕ ಪ್ರೇಮ ಸೀತಾರಾಮ ಜಗತ್ಪತಿ ಶೌರಿ ಶ್ರೀಹರಿ ಕೋಮಲಾಂಗ ಕೃಷ್ಣ ಮೂರುತಿ 2 ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕನಾಗಿ ಸಕಲಭಾರಕರ್ತ ಶ್ರೇಷ್ಠನೆ ನಿಕರದಿ ಸಲಹುವ ನಿಜನಿತ್ಯಾನಂದಾನೆ ಪ್ರಕೃತಾದಿ ಪಾಲಿಸುವ ಪರಮಾತ್ಮನೆ ಸಕಲ ವೈಭವ ಚಿದ್ವಿಲಾಸನೇ ನಿಖರಾರೈ ನಿನ್ನಲಿ ನಮೋ ಭಕುತವತ್ಸಲ ಮುಕುತಿದಾಯಕ ರುಕ್ಮಣಿಯವರ 'ಹೆನ್ನವಿಠ್ಠಲಾ’ 3
--------------
ಹೆನ್ನೆರಂಗದಾಸರು
ನೆಲೆಯಗೊಳ್ಳಿರೊ ಮನವ ಬಲಿದು ನೆಲೆಯಗೊಳ್ಳಿರೊ ನೆಲೆಯಗೊಳ್ಳಿರಯ್ಯ ನೀವು ಬಲಿದು ಭಾವಭಕ್ತಿಯಿಂದ ಧ್ರುವ ಹಲವು ಮಾತಾಡಿ ನಿಮ್ಮ ಕುಲವ ಚಲವವೆಂದು ಎನಿಸಬ್ಯಾಡಿ ಹೊಲಬು ತಿಳಿದು ನಿಮ್ಮ ನೆಲೆಯನಿಭವನರಿತು ನೋಡಿರೊ 1 ಗುಟ್ಟು ತಿಳಿಯಲರಿಯದೆ ಬೊಟ್ಟೆಣಿಸಿ ದಣಿಯಬ್ಯಾಡಿ ಮಟ್ಟಮಾಡಿ ಮನವ ನಿಜಗಟ್ಟಿಗೊಳ್ಳಿರೊ 2 ನಿಲವು ತಿಳಿದು ನೆಲಯಗೊಂಡು ಇಳಿಯೊಳಗೆ ಮಹಿಪತಿಯು ಒಲಿದು ದಯಮಾಡಿ ಸಲಹುತಿಹ ಗುರು ಕಾಣಿರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೈವೇದ್ಯವಿದು ಭುಂಜಿಸಲು ಯೋಗ್ಯವಾಗಿದೆಕೈವಲ್ಯದಾಯಕ ನೀನಾರೋಗಣೆ ಮಾಡು ಪಆದಿತ್ಯ ವಸು ರುದ್ರ ಬ್ರಹ್ಮಾದಿ ಸಕಲ ದೇವರ್ಕಳು ಮಂಡಲದೊಳಗಿಹರುಆದಿಯೊಳ್ ಭೂಮಿಯ ಪ್ರೋಕ್ಷಿಸಿ ಮತ್ತಲ್ಲಿಸಾಧಿಸಿ ಮಂಡಲವದು ರಂಜಿಸುತಲಿದೆ 1ಭೋಗ್ಯ ಭೋಕ್ತøಗಳೆಂದು ಬಗೆಯರಡಾಗಿದೆಭೋಗ್ಯವು ಜಗವಿದು ಭೋಕ್ತø ನೀನುಪ್ರಾಜ್ಞ ರೂಪದಿ ಸುಪ್ತಿ ಸುಖಸಾಕ್ಷಿರೂಪನೆಸಾಘ್ರ್ಯಪಾದ್ಯಗಳಿಂದ ಸತ್ಕರಿಸುವೆನೀಗ 2ಜಡಪ್ರಕೃತಿಯೆ ಪಾದವೆಂಟರ ಪೀಠವುಜಡವಿರಹಿತವಾದ ಪ್ರಕೃತಿ ತಾ ಮಣೆಯುದೃಢ ವಿವೇಕವೆ ದಿವ್ಯ ಹರಿವಾಣವದರಲ್ಲಿಒಡಗೂಡುವನುಭವವೆಂಬನ್ನ ಬಡಿಸಿದೆ 3ಇಪ್ಪತ್ತುನಾಲ್ಕು ತತ್ವಂಗಳೆ ಶಾಕಂಗಳೊಪ್ಪುವ ಬಹು ವಿಷಯಗಳೆ ವ್ಯಂಜನವುತಪ್ಪದೆ ಮಾಡುವ ಭಕ್ತಿ ತಾ ರಸವುತುಪ್ಪವು ಜೀವನ ಬೆರಸುವ ಗುಣವು 4ಪರಮನೊಳೈಕ್ಯವಾದನುಭವ ಕ್ಷೀರವುನೆÀರೆ ಪುಟ್ಟಿದಾನಂದ ತಾನೆ ಸಖ್ಖರೆಯುತಿರುಪತಿ ನಿಲಯ ಶ್ರೀ ವೆಂಕಟರಮಣನೆಕರುಣಕಟಾಕ್ಷದಿಂದಾರೋಗಣೆ ಮಾಡು5ಓಂ ನವನೀತವಿಲಿಪ್ತಾಂಗಾಯ ನಮಃ
--------------
ತಿಮ್ಮಪ್ಪದಾಸರು
ನೊಂದೆ ನಾ ಹರಿಯೆನ್ನದೆ ಪ ವೈರಿ ಷಡ್ವರ್ಗದಾಟಗಳಿಂದ ನೊಂದೆ ನಾ ಹರಿಯೆನ್ನದೆ ಅ ಮಾಸ ತಾಯುದರದಲಿಸಂದೇಹವಿಲ್ಲ ನವಮಾಸ ಮಲ ಮೂತ್ರದೊಳುಒಂದಾಗಿ ನಿಂದು ಕುದಿಕುದಿದು ಹುಟ್ಟಿಬಂದೆ ಎಂಬತ್ತು ನಾಲುಕು ಲಕ್ಷ ಯೋನಿಯೊಳುನೊಂದೆ ಮುನ್ನೂರ ಅರವತ್ತು ಬೇನೆಗಳಿಂದಒಂದು ಕ್ಷಣವೂ ಯಮನ ಬಾಧೆ ತಾಳಲಾರೆನುಹಿಂದೆಗೆಯದಿರು ಇಂಬಿತ್ತು ಕಾಯೊ ಮುರಾರಿ 1 ಎಲುವುಗಳ ಗಳ ಮಾಡಿ ಬಲು ನರಂಗಳ ಬಿಗಿದುಚೆಲುವ ತೊಗಲಂ ಪೊದಿಸಿ ಮಜ್ಜೆ ಮಾಂಸವ ತುಂಬಿಹೊಲೆ ಗೂಡಿನೊಳು ಪೊಗಿಸಿ ತಲೆ ಹುಳಕ ನಾಯಂತೆಅಲೆದು ಮನೆಮನೆಯೆದುರು ಉಚ್ಚಿಷ್ಟವನು ತಿಂದುಕಳವು ಹಾದರ ಪಂಚಪಾತಕಂಗಳ ಮಾಡಿನೆಲೆಯಿಲ್ಲದಧಿಕತರ ನರಕದೊಳಗಾಳ್ದೆನೈಒಲಿದು ಬಂದು ರಕ್ಷಿಸು ನಾಗವೈರಿ ವಾಹನನೆನಳಿನ ಲೋಚನನೆ ನೀ ಎನ್ನ ಕೈ ಬಿಡದೆ 2 ಹುಟ್ಟುವಾಗಲೆ ಜಾತಕರ್ಮ ಷೋಡಶವೆಂಬಕಟ್ಟಳೆಯ ದಿವಸದಲಿ ನಂಟರಿಷ್ಟರು ಕೂಡಿಕಟ್ಟಿ ಮುಂಜಿಯ, ಹರುಷದಲಿ ಮದುವೆ ಮಾಡಿ ಉಂ-ಡುಟ್ಟು ಹಾಡಿ ಹರಸಿದರು ನೂರ್ಕಾಲ ಬದುಕೆಂದುಬಿಟ್ಟು ಪ್ರಾಣಂ ಪೋಗೆ ಪೆಣನೆಂದು ಮೂಲೆಯೊಳುಕಟ್ಟಿ ಕುಳ್ಳಿರಿಸಿ ಹೊಟ್ಟೆಯ ಹೊಯ್ದುಕೊಂಡಳುತಸುಟ್ಟು ಸುಡುಗಾಡಿನಲಿ ಪಿಂಡಗಳನಿಕ್ಕಿ ಬಲುಕಟ್ಟಳೆಯ ಕಾಣಿಸಿದರಯ್ಯ ಹರಿಯೆ 3 ಹಲವು ಜನುಮದಿ ತಾಯಿ ಎನಗಿತ್ತ ಮೊಲೆಹಾಲುನಲಿನಲಿದು ಉಂಬಾಗ ನೆಲಕೆ ಬಿದ್ದುದ ಕೂಡಿಅಳೆದು ನೋಡಿದರೆ ಕ್ಷೀರಾಂಬುಧಿಗೆ ಎರಡು ಮಡಿಹಲವಾರು ಸಲ ಅತ್ತ ಅಶ್ರುಜಲವನು ಕೂಡಿಅಳೆದು ನೋಡಿದರೆ ಲವಣಾರ್ಣವಕೆ ಮೂರು ಮಡಿಎಲುವುಗಳ ಕೂಡಿದರೆ ಮೇರುವಿಗೆ ನಾಲ್ಕು ಮಡಿಸುಲಿದು ಚರ್ಮವ ಹಾಸಿದರೆ ಧರೆಗೆ ಐದು ಮಡಿನೆಲೆ ಯಾವುದೀ ದೇಹಕೆ ನರಹರಿಯೆ4 ಸತಿ ಇಂದು ಕಾಯ್ವರದಾರುದಂದುಗವನಿದನೆಲ್ಲ ನೀಬಲ್ಲೆ ನಾನರಿಯೆತಂದೆ ನೆಲೆಯಾದಿಕೇಶವನೆ ನಿನ್ನಯ ಪಾದದ್ವಂದ್ವವನು ಎಂದಿಗೂ ಬಿಡೆನು ಬಿಡೆನೊ 5
--------------
ಕನಕದಾಸ
ನೊಂದೆನಯ್ಯ ಭವದೊಳು ಸಿಂಧುಶಯನ ವೆಂಕಟೇಶ ಪ ಒಂದು ದಿನಸುಖವಿಲ್ಲ ಗೋ- ವಿಂದ ಬಹಳ ಕರುಣದಿಂದ ನಿ- ರ್ಬಂಧವನ್ನು ಕಳೆದು ಎನ್ನ ತಂದೆ ನೀನೇ ರಕ್ಷಿಸಯ್ಯ 1 ಕಪಟ ನಾಟಕ ಸೂತ್ರಧಾರಿ ಅಪರಿಮಿತ ಮಹಿಮ ಎನ್ನ ಅಪರಾಧವನು ಕ್ಷಮಿಸಿ ಮುಂದೆ ಕಪಟವಿಲ್ಲದೆ ರಕ್ಷಿಸಯ್ಯ 2 ಕಂದ ಪ್ರಹ್ಲಾದನಂತೆ ತಂದೆ ಮುನಿದಾಡುವ ತೆರದಿ ಗ- ಜೇಂದ್ರನಂತೆ ದೃಢವಿಲ್ಲ ಮಂದಮತಿಯ ರಕ್ಷಿಸಯ್ಯ 3 ನರ ಜನ್ಮದೊಳಗೆ ಪುಟ್ಟಿ ನರಕ ಭಾಜನ ತಾನಾಗಿ ದುರಿತ ಪಂಜರದೊಳಗೆ ನಾನು ಸೆರೆಯ ಬಿದ್ದೆ ರಕ್ಷಿಸಯ್ಯ 4 ಹಗಲು ದೃಷ್ಟಿ ಕಾಣದವಗೆ ಮೊಗವುಗೊಂಡು ರಾತ್ರಿಯೊಳು ಹಗೆಯ ವನದಿ ಸಿಕ್ಕಿದವನ ಅಗಲಿ ಹೋಗದೆ ರಕ್ಷಿಸಯ್ಯ 5 ಸಾವಿರ ಅಪರಾಧವನು ಜೀವಿತಾತ್ಮನೆ ಕ್ಷಮಿಸಿ ಎನ್ನ ಮೂವಿಧಿಯೊಳು ಸಿಲುಕದಂತೆ ಭಾವಿಸಿಯೆ ರಕ್ಷಿಸಯ್ಯ 6 ವರಾಹತಿಮ್ಮಪ್ಪ ಮನದ ಘೋರ ದುಃಖವನ್ನು ಕಳೆದು ಮೀರಿ ಬಂದಾಪತ್ತಿನೊಳು ಕಾರಣಿಕನೆ ರಕ್ಷಿಸಯ್ಯ 7
--------------
ವರಹತಿಮ್ಮಪ್ಪ
ನೋಡಬಾರದೆ ಹರಿಯ ಮನವೆ ಧ್ರುವ ಸುಲಲಿತವಾಗಿ ಸುಲ್ಲಭವಾಗ್ಹಾನೆ ನೆಲೆ ನಿಭವಾಗಿ ತನ್ನೊಳು ತುಂಬ್ಹಾನೆ 1 ಹೃದಯಕಮಲದೊಳು (ಕರೆಗುಡು)ತ್ಹಾನೆ ಸದೋದಿತ ಸವಿಸುಖ ಬೀರುತಲ್ಹಾನೆ 2 ಹಲವು ಪರಿಯಲಿ ತಾ ಸಲಹುತಲ್ಹಾನೆ ಕುಲಕೋಟಿ ಬಂಧು ಬಳಗಾಗ್ಹಾನೆ 3 ಕಣ್ಣಿನ ಮುಂದೆವೆ ತಾನೆ ಕಟ್ಹಾನೆ ಬಣ್ಣ ಬಣ್ಣದಲಿ ತಾ ಭಾಸುತಲ್ಹಾನೆ 4 ಸ್ವಹಿತ ಸುಖದ ಸುಮೂರುತಿ ಆಗ್ಹಾನೆ ಮಹಿಪತಿಯೊಳು ಶ್ರೀಪತಿ ಆಗ್ಹಾನೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಮ್ಮಾ ಶ್ರೀ ವಾಸುದೇವನಾ ನಮ್ಮ ಬೇಡಿದಿಷ್ಟಾರ್ಧವ ನೀವನಾ ಪ ಪರ ಬ್ರಹ್ಮ ರೂಢಿಗೆ ನರಲೀಲೆಯಾಡುವ ಬಗೆಯಾಅ.ಪ ದೇವರ ಅನುಮತ ನೋಡಿದಾ ಅಂವ ದೇವಕಿ ಉದರದಿ ಮೂಡಿದಾ ಪಾವನ ಗೋಕುಲ ಮಾಡಿದಾ ಸುಖ ದೇವಿ ಯಶೋದೆಗೆ ನೀಡಿದಾ ಆವಾವ ಪರಿಯಲಿ ನೋವ ಬಗೆಯ ಬಂದು ಗಾಲಿಲ ಅಸುರರ ಜೀವನ ವಳಿದಾ 1 ಗೊಲ್ಲತೆಯರ ಮನಮೋಹಿಸಿ ಕದ್ದು ಅಲ್ಲಿಹ ಪಾಲ್ಬಣ್ಣೆ ಸೇವಿಸಿ ಬಿಲ್ಲ ಹಬ್ಬದ ನೆವತೋರಿಸಿ ಪೋಗಿ ಮಲ್ಲಚಾಣರರಾ ಭಂಗಿಸೀ ಬಲ್ಲಿದ ಕಂಸನ ಮಲ್ಲಯದ್ಧಗಳಿಂದ ಘಲ್ಲಿಸಿದನು ಜನಚಲ್ಲಿ ಬಡಿದನಾ 2 ನೀರೊಳು ಕಟ್ಟಿಸಿ ಮನೆಯನು ಬಂಗಾರದ ದ್ವಾರಕಾ ಪುರವನು ಸೇರಿಸಿ ಯದುಕುಲದವರನು ರುಕ್ಮಿ ಣೀ ರಮಣಲ್ಲಿಗೆ ಮರೆದನು ಸಾರಿದ ಶರಣರಾ ತಾರಿಸಿ ಹೋದನು ಮಹಿಪತಿ ನಂದನ ಪ್ರೀಯನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು