ಒಟ್ಟು 4163 ಕಡೆಗಳಲ್ಲಿ , 122 ದಾಸರು , 2494 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವರಲಕುಮಿ ಕರುಣಿಸೌ ಕರುಣಾಕರಳೆ ಎನ್ನೊಳು ಪ ಮರೆಹೊಕ್ಕ ದಾಸರ ದಾರಿದ್ರ್ಯ ಖಂಡಿಸು ಪರಮಪಾವನೆ ನಿನ್ನನರಸಿ ಬೇಡುವೆನವ್ವ 1 ಗರುವಕ್ಕೆ ಬಾರದ ಸಿರಿಯ ಕರುಣಿಸಿ ಮತ್ತೆ ಹರಿಸ್ಮರಣೆ ಸೌಭಾಗ್ಯ ವರ ಪಾಲಿಸೆನ್ನವ್ವ 2 ಕ್ಷೇಮ ಪಾಲಿಸು ತಾಯಿ ಕಾಮಿತ ಜನ ಮಹ ಪ್ರೇಮಮಂದಿರೆ ಶ್ರೀರಾಮನರ್ಧಾಂಗಿಯೆ 3
--------------
ರಾಮದಾಸರು
ವರ್ಷ ವರ್ಧಂತಿಗಳು (ಆಚಾರ್ಯರ 21ನೇ ವರ್ಷದ ವರ್ಧಂತಿ ಸಮಯ) ನಿನ್ನ ನಂಬಿದೆ ಶರದಿಂದುವದನ ಎನ್ನ ಪಾಲಿಸು ವರಕುಂದರದನ ಮುನ್ನ ಪಾತಕಿಯಾದಜಾಮಿಳನು ತನ್ನ ಚಿಣ್ಣನ ಕರೆದರೆ ಮನ್ನಿಸಿದವನೆಂದು ಪ. ನರ ಧ್ರುವಾಂಬರೀಷ ಪ್ರಹ್ಲಾದ ಮುಖ್ಯರನ- ವರತ ನಿನ್ನನಾಧರಿಸಿದರವರ ಪೊರೆದನೆಂಬೀ ಮದಗರುವ ಭಾರದಲತಿ- ಕಿರಿದಾಗಿಹ ಎನ್ನ ಮರೆವುದುಚಿತವೆ 1 ಹತ್ಯ ಪ್ರಮುಖ ದುಷ್ಕøತ್ಯಗಳಿರಲಿ ನಿತ್ಯ ಪರಧನಾಸಕ್ತನಾಗಿರಲಿ ಭಕ್ತವತ್ಸಲ ನಿನ್ನ ಸ್ಮರಣೆ ಮಾತ್ರದಿ ಪಾಪ ಮುಕ್ತಿದೋರಲು ಪೂರ್ಣಶಕ್ತಿಯಾಗಿಹೆ ಎಂದು 2 ತುರುಗಳೆಣಿಸಿದಂತೆ ಕರುಗಳ ಗುಣವ ಮರೆದಂತೆ ಜನನಿ ತನ್ನಯ ಬಾಲನನುವ ಕರುಣಾಳು ನೀ ಮುನಿಸಿಂದ ಕರುಣಿಸದಿರೆ ಎನ್ನ ಪೊರೆವರಿನ್ಯಾರಿಹರುರಗಾದ್ರಿಯರಸ ಕೇಳ್ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಶವಾಗಿ ಉದ್ಧರಿಸಮ್ಮಾ ಪಾಲನ ಪ ಮತಿಯ ಕೊಡುತಿಪ್ಪ ಎನ್ನ ಅಂತರಂಗನ ತ್ರಿಪುರವ ಭಂಗನಾ ಕರುಣಾ ಪಾಂಗನ1 ಬುದ್ದ್ಯಾಭಿಮಾನಿ ದೇವಿ ಇಂದ್ರಾದ್ಯ ಸುರರನ್ನ ಕಾಯ್ವಿ ಗಾತ್ರನ ಧನಪತಿ ಮಿತ್ರನಾ 2 ತ್ರಿಜಗ ಪೂಜಿತೆ ಉಮೆ ಪೊಗಳುವೆನು ಒಮ್ಮೆ ವಿಜಯವಿಠ್ಠಲರೇಯನ ದಾಸದಾಸನ ಕೈಲಾಸವಾಸನ ಜಗಕೆ ವಿಶೇಷನಾ 3
--------------
ವಿಜಯದಾಸ
ವಾಗ್ದೇವಿ - ನಿಮ್ಮಚರಣ ಕಮಲಂಗಳ ದಯಮಾಡು ದೇವಿ ಪ ಶಶಿ ಮುಖದ ನಸುನಗೆಯ ಬಾಲೆಎಸೆವ ಕರ್ಣದ ಮುತ್ತಿನೋಲೆನಸುನಗುವ ಸುಪಲ್ಲ ಗುಣಶೀಲೆ - ದೇವಿಬಿಸಜಾಕ್ಷಿ ಎನ್ನ ಹೃದಯದೊಳು ನಿಂದವಳೆ 1 ಇಂಪು ಸೊಂಪಿನ ಚಂದ್ರ ಬಿಂಬೆಕೆಂಪು ತುಟಿಗಳ ನಾಸಿಕದ ರಂಭೆಜೊಂಪು ಮದನನ ಪೂರ್ಣ ಶಕ್ತಿ ಬೊಂಬೆ - ಒಳ್ಳೆಸಂಪಗೆ ಮುಡಿಗಿಟ್ಟು ರಾಜಿಪ ಶಾರದಾಂಬೆ2 ಸನ್ನುತ ರಾಣಿವಾಸೆ 3
--------------
ಕನಕದಾಸ
ವಾಗ್ದೇವಿ ಭಾರತಿ ನೀಡೆನಗೆ ಸುಮತಿ ನಂದಸುತನ ಪದದಿ ಕೊಡು ರತಿ ಪ ಕಳೆದು ಮನದಿ- ಗರಿಯೆ ಬಂದು ಬೇಗ ಅ.ಪ ಇಂದು ಮೌಲಿ ಮುಖ್ಯ ಸುರಗಣ ವಂದಿತಳೆ ಎನ್ನ ಅನುದಿನ ನಂದ ಮುನಿಯ ಶಾಸ್ತ್ರವಚನ ಛಂದದಿಂದ ಪಠಣ ಶ್ರವಣಾನಂದವಾಗುವಂದದಿ ಗುರು ಗಂಧ ವಾಹನರಾಣಿ ನಿನಗೆ1 ಪೇಳಲಳವೆ ನಿಮ್ಮ ಮಹಿಮೆಯ ಕಾಲಭಿಮಾನಿ ಕೇಳುವೆ ಸುಜ್ಞಾನ ಭಕುತಿಯ ಕಾಲಕಾಲಗಳಲ್ಲಿ ಎನ್ನ ಶುಭ ಲೀಲೆಗಳನು ಪಾಡಿ ಪೊಗಳುವಂತೆ ಜನನಿ 2 ಚಾರು ಕೃಷ್ಣಾತೀರಸಂಸ್ಥಿತಾ ಉದಾರ ಚರಿತ ನೀರಜಾಸನಾದಿಸುರನುತಾÀ ಶೇರಿದ ಭಕುತರಿಗೆ ತ್ರಿದಶ ಭೂರುಹ ವೆಂದೆನಿಸಿದಂಥಾ ಪಾರ ಮಹಿಮ ಕಾರ್ಪರಸಿರಿ ನಾರಸಿಂಹನ ಸೊಸೆಯೆ ನಿನಗೆ 3
--------------
ಕಾರ್ಪರ ನರಹರಿದಾಸರು
ವಾಜಿವದನಾರ್ಚಕ ಶ್ರೀ ವಾದಿರಾಜ ಪ ರಾಜೀವನಯನ ಶ್ರೀ ಕೃಷ್ಣನಲಿ ಬಿಡು ಎನ್ನ ಅ.ಪ. ದೇವದೇವೇಶನ ಪರಮ ಒಲುಮೆಗೆ ಪಾತ್ರ ಪಾವನ್ನತಮಚರಿಯ ಪತಿತಪಾಲ ಸಾವಧಾನದಿ ಎನ್ನ ಆದಿರೋಗವನಳಿದು ಕೇವಲ ಸದ್ಭಕ್ತಿ ಶೀಲನ ಮಾಡಯ್ಯ 1 ಭಾರತೀಪತಿ ಪದವನೈದುವ ಮಹಾತ್ಮ ಮಾರಾರಿಸುರ ಪೂಜ್ಯ ಕರುಣಿಸಿ ಕಾಯೊ ಸಾರಿದೆನು ತವ ಚರಣ ಸರಸಿಜಯುಗ್ಮಗಳ ದೂರ ಮಾಡದೆ ಹರಿಯ ಕರುಣಪಾತ್ರನ ಮಾಡು 2 ಭಾಗವತ ಶಿರೋರತುನರಿಂದರ್ಚಿತನೆ ಶಿರಿ ವೇಣುಗೋಪಾಲ ವೇದ ವೇದ್ಯ ಜಯೇಶವಿಠಲನ ಮನದಲ್ಲಿ ಬಿಡದಿಪ್ಪ ಪರಮಕೃಪೆ ಬೇಡುವೆನು ಕರುಣಾಬ್ಧಿ ಕೃಪೆ ಮಾಡು 3
--------------
ಜಯೇಶವಿಠಲ
ವಾಣಿ ವರದೆ ಶಾರದೆ ನಿನ್ನ ಚರಣವ ಸೇರಿದೆ ಪ. ಎನ್ನ ನಾಲಿಗೆಯೊಳ್ನೆಲಸು ಹರಿಲೀಲೆಯನ್ನು ನುಡಿಸು 1 ಅತಿರೋಹಿತ ವಿಜ್ಞಾನಿ ವೇದವ್ಯೂ ಹಕಭಿಮಾನಿ 2 ಲಕ್ಷ್ಮೀನಾರಾಯಣನ ಸೊಸೆ ಸರ್ವಾಧಾರ ಭಕ್ತಿವಿಲಾಸೆ3
--------------
ತುಪಾಕಿ ವೆಂಕಟರಮಣಾಚಾರ್ಯ
ವಾಣಿಯೆ ಪುಸ್ತಕಪಾಣಿಯೆ ಮಂಗಳ ವಾಣಿಯೆ ಬ್ರಹ್ಮನ ರಾಣಿಯೆ ವಂದಿಪೆ ಪ. ವೇದವಿದಿತೇ ತವ ಪಾದವ ಸ್ಮರಿಸುವ ಸಾಧನೆಯೆಲ್ಲವ ಮೋದದಿ ಪಾಲಿಸು 1 ಎನ್ನ ನಾಲಿಗೆಯಲ್ಲಿ ಚೆನ್ನಾಗಿ ನೆಲೆಗೊಂಡು ಅನೃತ ಬಾರದೋಲ್ ಘನ್ನೆ ನೀನಾಡಿಸು 2 ಪರಮಪಾವನ ಶೇಷಗಿರಿ ವಾಸನ ನಿಜ ಶರಣರ ಕಥೆ ಪೇಳ್ವ ಪರಿಜ್ಞಾನವಿತ್ತು ನೀಂ3
--------------
ನಂಜನಗೂಡು ತಿರುಮಲಾಂಬಾ
ವಾಣೀ ಪರಮ ಕಲ್ಯಾಣಿ - ವಾರಿಜೋದ್ಭವನ ರಾಣೀ ನಾರೀ ಶಿರೋಮಣಿ ಪ ಕ್ಷೋಣಿಯೊಳಗೆ ಸರಿಗಾಣೆನೆ ನಿನಗೆ ಸು- ಪ್ರಾಣಿಯೆ ಹರಿಪದರೇಣು ಧರಿಪೆ ಸದಾ ಅ. ಪ. ಸರಸ್ವತಿ ನಿತ್ಯಾಸಾವಿತ್ರಿ ದೇವಿ ಗಾಯತ್ರಿ ಸರಸಿಜದಳ ಸುನೇತ್ರಿ ನಿಕರ ಸ್ತೋತ್ರಿ - ಶೋಭನಗಾತ್ರಿ ಕರುಣಾಸಾಗರೆ ಪವಿತ್ರಿ ಚರಣದಂದಿಗೆ ಪಂಚ ಬೆರಳು ಭೂಷಣ ಧ್ವನಿ ಸರವು ಕನಕ ಗೆಜ್ಜೆ ಸರಪಳಿ ಪೊಳೆವಾಂ- ಬರಧರೆ ಸುಂದರಿ ಎರಗುವೆ ಎನ್ನನು ಎರವು ಮಾಡದೆ ತ್ರಿಕರಣ ಶುಧ್ಧನೆ ಮಾಡೆ 1 ಸರ್ವರಾತ್ಮಕೆ ಪ್ರಖ್ಯಾತೆ-ಧವಳಗೀತೆ ಸರ್ವರಿಗೆ ಮಹಾ ಪ್ರೀತೆ ನಿರ್ವಾಹವಂತೆ ಪತಿವ್ರತೆ ನಿರ್ಮಲ ಚರಿತೆ ಪೂರ್ವದೇವತೆ ಹರಿಜಾತೆ ಉರ್ವಿಯೊಳಗೆ ಮದಗರ್ವದ ಮತಿನಾ- ನೋರ್ವನಲ್ಲದೆ ಮತ್ತೋರ್ವನ ಕಾಣೆನು ಪೂರ್ವಜನ್ಮದ ಪಾಪ ಪರ್ವತದಂತಿದೆ ನಿರ್ವಾಹವನುಮಾಡೆ ದೂರ್ವಾಂಕುರದಿ 2 ನಿಗಮಾಭಿಮಾನಿ ಸುಜ್ಞಾನಿ ಅಗಣಿತ ಫಲದಾಯಿನಿ ಝಗಝಗಿಸುವ ಕರಯುಗಳ ಭೂಷಣ ಪ - ನ್ನಗವೇಣಿ ಕುಂಕುಮ ಮೃಗಮದ ವೊಪ್ಪಲು ಜಗತ್ಪತಿ ಪ್ರದ್ಯುಮ್ನ ವಿಜಯವಿಠ್ಠಲನಮಗಳೆ ಸುಖಾತ್ಮಕೆ ಜಗದಿ ಶುಶ್ರೋಣೆ 3
--------------
ವಿಜಯದಾಸ
ವಾತವನು ಪರಿಹರಿಸೊ ವಾತನೊಡಿಯಾ ಪ ಪರಿ ಬಾಧೆಬಡುವುದುಚಿತವೇ ರಂಗಾ ಅ.ಪ. ನಿನ್ನ ದಾಸನೊ ದೇವಾ ಸಾಕು ಸಾಕು ಈ ಬವಣೆ ಬಿಡಿಸಿನ್ನು 1 ಅನ್ಯನನು ಇವನಲ್ಲ ನಿನ್ನವನು ಕೇಳೋಶಿರಿನಲ್ಲಾ ಲಾಲಿಸೊ ಎನ್ನ ಸೊಲ್ಲಾ 2 ವಾತಪದ ಯೋಗ್ಯನ ದೂತನಂತೆಂದು ಬಿನ್ನೈಪೆ ತಾತ ತಂದೆವರದಗೋಪಾಲವಿಠಲಾ 3
--------------
ತಂದೆವರದಗೋಪಾಲವಿಠಲರು
ವಾದಿರಾಜಾಶ್ರಮ ನೋಡಲು ಸಂಭ್ರಮ ಪಾಡಿ ಪೊಗಳುವರಿಗಾಹುದು ಪ್ರೇಮ ಪ ಕಾಡೊಳಗೆ ಸಂಚರಿಪ ಋಷಿಗಳು ಪಾಡಿಪೊಗಳುತ ಪರಮ ಪುರುಷನ ಬೇಡಿದಿಷ್ಟಾರ್ಥಗಳ ಪಡೆಯುತ ಕೂಡಿ ಸುಖಿಸುವ ಶಿಷ್ಟರಂದದಿ ಅ.ಪ ಪರಮಸಾತ್ವಿಕರೆಲ್ಲ ಪುರಂದರದಾಸರ ಪರಮ ಪುಣ್ಯದ ದಿನ ಬರಲು ಸಂಭ್ರಮದಿ ಪರಿಪರಿವಿಧದಿಂದ ಹರಿದಾಸರೆಲ್ಲರು ತ್ವರದಿಂದ ಗುರುಗಳಾಜ್ಞೆಯ ಮೀರದೆ ಭರದಿಂದ ನೆರೆದರತಿ ಶೀಘ್ರದಿಂದಲಿ ಮುದದಿಂದ ಗುರುಗಳಡಿಗೊಂದಿಸುತ ಕ್ರಮದಿಂದ ಸರಸವಾಕ್ಯಗಳಿಂದ ಶಿಷ್ಯರಿಂದ ಹರಿಸಿ ಆಶೀರ್ವಾದದಿಂದಲಿ ಸುರಿಸಿ ಅಮೃತವಾಣಿ ನುಡಿಯುತ ಹರುಷಪಡುತಿಹ ಗುರುಗಳಿಹ ಸ್ಥಳ 1 ಪವಮಾನಮತದವರೆಲ್ಲರೊಂದಾಗುತ ನಮಿಸಿ ಶ್ರೀಪತಿಗೆ ವಂದನೆ ಮಾಡುತ ವಿನಯದಿಂದಲಿ ತಮ್ಮನಿಯಮಿತ ಕಾರ್ಯವ ನÀಡೆಸುತ್ತ ತಂಬೂರಿಗಳ ಸುಸ್ವರದಿ ಮೀಟುತ ನಿಂದು ಹರುಷಿಸುತ ತಾಳಗಳ ಬಾರಿಸುತ ಶಿಷ್ಯರು ಕುಣಿಯುತ್ತ ಬಲುನಾದ ಕೊಡುತಿಹ ಕಾಲಗೆಜ್ಜೆಗಳೆಲ್ಲ ಘಲುರೆನುತ ದಾಸರಿಗೆ ಉಚಿತದ ಜೋಳಿಗೆಗಳನೆ ಪಿಡಿದು ನಡಿಯುತ್ತ ಶ್ರೀರಾಮರ ದೂತನ ಬಾರಿಬಾರಿಗೆ ನಮಿಸಿ ನಮಿಸಿ ಪೊಗಳುತ್ತ ಹರಿನಾಮ ಸ್ಮರಣೆಯಲಿ ಮಾರುತೀಶನ ಭಕುತರೆಲ್ಲರು ದ್ವಾರಬಿಡುತಲಿ ಪೊರಟು ಭಜಿಸುತ ಬೀದಿಯಲಿ ಕುಣಿಯುತ್ತ ಹರಿಗುಣ ಪಾಡಿ ಪೊಗಳುವ ಪರಮ ವೈಭವ2 ಆ ಮಾರುತನ ದಯದಿಯಾಯಿವಾರವು ಮಾಡಿ ಶ್ರೀನಿಕೇತನ ಪಾಡಿ ಪೊಗಳುತಲಿ ಜ್ಞಾನಿ ಪುರಂದರದಾಸರ ಚರಿತೆಯ ಪೇಳುವರು ಸಂಭ್ರಮದಿಂದಲಿ ನಲಿದಾಡುವರು ಹರಿದಾಸರ ಅದ್ಭುತಕಾರ್ಯಗಳ ಸುಸ್ವರದಿ ಪಾಡುವರು ಹರಿದಾಸ ಶ್ರೇಷ್ಠರ ಮಹಿಮೆಗಳ ಇನ್ನುಳಿದ ಶಿಷ್ಯರು ಪೇಳುವರು ವರ ಪಾರ್ಥಿವ ವತ್ಸರದಿ ಗುರುಗಳ ಕರುಣ ಪಡೆದವರು ನೆರೆದು ರಾತ್ರಿಕಾಲದಲಿ ಶ್ರೀ ಹರಿಯ ಭಜನೆ ಮಾಡುತಿರಲು ಹರುಷ ಪಡುತಲಿ ನಲಿದು ಕಮಲನಾಭ- ವಿಠ್ಠಲನೆ ಸಲಹು ಎನ್ನುವ3
--------------
ನಿಡಗುರುಕಿ ಜೀವೂಬಾಯಿ
ವಾಮ ಭಾಗದಿ ಲಕ್ಷ್ಮೀದೇವಿಯುಭೂಮಿ ದೇವಿಯು ದಕ್ಷಭಾಗದಿಶ್ರೀ ಮನೋಹರನಿಹನು ಮಧ್ಯದಿಪ್ರೇಮದಲಿ ನಮಿಸು 1 ನಮಿಸು ಕೃದ್ದೋಲ್ಕ ವಾಸುದೇವರಸ್ಮರಿಸು ಕೇಶವದ್ವಿತಿ ಮತ್ಪರಸ್ಮರಿಸು ಕೂರ್ಮಾನಂತ ಶಕ್ರರಸುರಿಪ ದಿಶಿಯಲ್ಲೀ 2 ಸ್ಮರಿಸು ಸಹಸ್ರೋಲ್ಕ ಮಾಯರಶಿರಿವರಾವನಿ ಧರನ ವಾರುಣಿಸ್ಮರಹರಾಂಚಿತನು ವಹ್ನಿಯಶರನ ಕೋನದಲಿ 3 ನಮಿಸು ಮಹೋಲ್ಕ ಸಂಕರ್ಷಣನನಮಿಸು ಗೋವಿಂದ ವಿಷ್ಣು ನರಹರಿನಮಿಸು ವಾಮನ ಬ್ರಹ್ಮ ಯಮರನುಕ್ರಮದಿ ದಕ್ಷಿಣದಿ 4 ಸ್ಮರಿಸು ಸಹಸ್ರೋಲ್ಕ ಜಯರನುಸ್ಮರಿಸು ಮಧುಹನ ಪರಷುರಾಮನಸರಸಿಜಾಸನ ಸತಿಯು ನಿಋತಿಯತಿಋತಿ ಕೋಣದಲಿ 5 ವೀರ ಉಲ್ಕ ಪ್ರದ್ಯುಮ್ನ ತ್ರಿವಿಕ್ರಮಸಾರ ರಘುವರ ವೃಷ್ಣಿನಾಥಸ-ಮೀರ ವರುಣರ ಪೂಜಿಸೂವುದುವಾರಿ ದಿಶೆಯಲ್ಲೀ 6 ನುತಿಸು ಸಹಸ್ರೋಲ್ಕ ಕೃತಿಯರನತಿಸು ಶ್ರೀಧರ ಬುದ್ಧಿ ಭಾರತಿಸತತ ಗಮನರ ವಾಯು ಕೋಣದೊಳತಿ ಸುಭಕ್ತಿಯಲಿ 7 ದ್ಯುಲ್ಕ ಅನಿರುದ್ದೇಂದ್ರಿಶೇಯರನಳಿನನಾಭನ ಕಲ್ಕಿ ನಂತರಸಲಿಲ ಮೂರುತಿ ರೋಹಿಣೇಶರಒಲಿಸು ಉತ್ತರದೀ 8 ಸ್ಮರಿಸು ಸಹಸ್ರೋಲ್ಕ ಶಾಂತರಸ್ಮರಿಸು ದಾಮೋದರನ ವಿಶ್ವನಗಿರಿಜೆಯನು ಪಾರ್ವತೀ ಪತಿಯಹರನ ಕೋಣದಲಿ 9 ವಾರಣಾಸನ ಮೊದಲು ನಿಜಪರಿವಾರ ಸಹಿತದಿ ಸರ್ವದಿವಿಜರುಮಾರನಯ್ಯನ ಸುತ್ತಲೂ ಪರಿ-ಚಾರರಾಗಿಹರು 10 ಈಸು ಪೀಠಾವರಣ ತ್ರಿದಿವನಿವಾಸಿಗಳ ಮಧ್ಯದಲಿ ಸಂತತವಾಸುದೇವನ ಪೂಜಕೇಶನಿ-ವಾಸ ಪೊಂದುವರು 11 ಗಿರಿಯೊಳಿರುತಿಹ ವೆಂಕಟೇಶನಸರಸ ಪೀಠಾವರಣ ಪೂಜೆಯಕರಡಿ ಮಗಳಿಗೆ ಜೈಗಿಷವ್ಯನುಅರುಹಿದನು ಮುದದಿ 12 ಗರುಡನಿಗೆ ಶ್ರೀಕೃಷ್ಣ ಪೇಳಿದಹರಿಯ ಪೀಠಾವರಣ ಪೂಜೆಯಸರ್ವ ಜನರಿಗೆ ತಿಳಿಯಲೋಸುಗವಿರಚಿಸಿದೆ ನಾನೂ 13 ಇಂದಿರೇಶನು ಎನ್ನವಾಣಿಲಿನಿಂದು ಮಾಡಿದನೀ ಸುಗ್ರಂಥವಲೆಂದು ಆತನ ಪಾದಕಮಲದ್ವಂದ್ವಕೊಪ್ಪಿಸುವೆ 14
--------------
ಇಂದಿರೇಶರು
ವಾರಿಜಾಕ್ಷನೆ ನಿನ್ನ ಚಾರುಚರಣದ ಸ್ಮರಣೆ ಬಾರಿ ಬಾರಿಗೆ ಮಾಳ್ಪ ಭಾಗ್ಯವೀಯೊ ಸಾರಸಾಕ್ಷನೆ ಸಂಸಾರ ದು:ಖದಿ ಎನ್ನ ಸೇರದಂದದಿ ಮಾಡೋ ಸರ್ವವಂದಿತ ಕೃಷ್ಣ 1 ಅಂಬುಜಾಕ್ಷನೆ ನಿನ್ನ ನಂಬಿದೆನೊ ಈ ಭವದ ಬಂಧ ತಪ್ಪಿಸಿ ಕಾಯೊ ಇಂದಿರೇಶ ಹಿಂದು ಮುಂದ್ಯಾರಿಲ್ಲವೆಂದು ನಂಬಿದೆ ನಿನ್ನ ಛಂದದಿಂದ ಸಲಹೊ ಮಹೇಂದ್ರತೀರ ನಿವಾಸ 2 ಸುಂದರಾಂಗನೆ ದೇವ ವಂದಿಸುವೆ ತವಪಾದ ಧ್ವಂದ್ವ ಭಜಕರ ಸಂಗ ಬಂದುನೀಡೈ ಇಂದಿರಾರಮಣನೆ ನಂದಗೋಪನ ಕುವರ ಬಂದು ಭಕುತರ ಪೊರೆವ ಆನಂದ ಮೂರುತಿ ಕೃಷ್ಣ3 ಶರಣಜನರನು ಪೊರೆಯೆ ತ್ವರಿತದಲಿ ಬಂದು ಈ ಗಿರಿಯ ಮಧ್ಯದಿನಿಂದೆ ಮಧುಸೂದನ ಶರಣುಶರಣೆಂದು ನಿನ್ನಡಿಗೆರಗುವ ಜನರ ದುರಿತವೆಲ್ಲವ ಕಳೆದು ಪೊರೆವ ದಯಾನಿಧಿ ಕೃಷ್ಣ4 ಕನಕಗರ್ಭನ ಪಿತನೆ ಕಡುಲೋಭವನೆ ಬಿಟ್ಟು ದೃಢವಾದ ಅಭಯವನು ದಯಪಾಲಿಸೊ ಪೊಡವಿಗೊಡೆಯನೆ ದೇವ ಕಮಲನಾಭವಿಠ್ಠಲ ಬಿಡದೆ ನಿನ್ನನು ಭಜಿಪ ಧೃಢ ಮನವ ನೀಡೈ5
--------------
ನಿಡಗುರುಕಿ ಜೀವೂಬಾಯಿ
ವಾರಿಜಾಸನ ವಂದ್ಯ ಚರಣಾ ಲಕ್ಷ್ಮೀ- ನಾರಾಯಣ ಎನ್ನೊಳಿರಿಸು ಸತ್ಕರುಣಾ ಪ. ಶ್ರೀರಮಣಿಯ ಕೂಡಿ ನೀನು ದಯ ದೋರಲನ್ಯರಿಗೆಂದರಂಜೆ ನಾನು ದಾರಿದ್ರ್ಯ ಭಯ ದೋಷಗಳನು ದೂರ ಹಾರಿಸಿ ಪೊರೆವ ಸಕಲ ಸುರಧೇನು1 ನಿನ್ನಂಥ ದಾತರಿನ್ನಿಲ್ಲ ಪರ- ಮೋನ್ನತ ಪದವ ಧ್ರುವನಿಗಿತ್ತಿಯಲ್ಲ ಮುನ್ನ ಕುಚೇಲನ ಸೊಲ್ಲ ಕೇಳಿ ಅನ್ಯರಿಗೊಲಿಯದ ಸಿರಿಯಿತ್ತಿಯಲ್ಲ 2 ಇಂದಿರಾವರ ವೆಂಕಟೇಶ ನೀ ಬಂದುದರಿಂದಾದುದೆನಗೆ ಸಂತೋಷ ಹೊಂದಿದೆ ನಿನ್ನನು ಶ್ರೀಶ ಪೂ- ರ್ಣೇಂದು ವದನ ಕರುಣಾರಸ ಭೂಷಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಾಲೆ ಬಂದಿಹುದೇ ತಂಗೀಯನ ವ್ವಾಲೆ ಬಂದಿಹುದೆ ಪ. ವಾಲೆ ಬರೆದ ಭಕ್ತ ಪಾಲ ಶೀಲ ಕರುಣಾಲ ವಾಲೆ ಅ.ಪ. ಅಂಬುರುಹೋದ್ಭವ ಅಖಿಲ ಸುರಾ ರಂಬರದಲಿ ಸ್ತುತಿಸೆ ಶಂಬರಾಸುರ ಸಂಹರನೈಯ್ಯನ ಹಡಗು ಅಂದು ಮಾರುತನಿಲ್ಲದೆ ಗೋಪಿ ಚಂದನಸಹಿತನಿಲ್ಲೇ ಮಧ್ಯದಿಂದಲೀ ಅಂದದಿ ಮುನಿಗಳ ನಿಂದು ಸ್ತುತಿಸುತಾ ನಂದದಿಂದಾನಂದಕಂದನ ಮುಂದೆ ಕರೆಯೆ ಮುನಿ ದಂದುಗ ಹರಿಸುತ ಬಂದೆನೆಂದು ಇಂಥಾ 1 ಬಂದೆನೆಂದು ತೋರನೆ ಹರಿ ನಿಂದಿರುವನೆ ಬದಿಲಿ ಇಂದುಧರನ ಆಣೆ ಎನ್ನ ಮಂದಿರದಲಿ ತೋರುತ ಬಂದ ಭಕ್ತರ ಸೇವಿಸೆಂದು ಬರೆದಿಹ ಬಂಧು ನಾನೆಂದು ತಿಳಿ ಎಂದು ಹೇಳುವತೆರ ಬರಹವ ಇಂದಿರೇಶ ತಾ ಬಂದು ನಿಂದು ಕೈ ಪಿಡಿದ ವಾಲೆ 2 ಶ್ರೀ ಶ್ರೀನಿವಾಸನ ತೋರುವೆ ವಾಸವಾಗುತ ಮನದಿ ಕ್ಲೇಶವ ಕಳೆ ಮನದಾಸೆ ಬಿಟ್ಟರೇನು ಶ್ರೀಶನಾಜ್ಞೆಯೆಂದು ಎನ್ನ ಶುಭ ಪತ್ರವ ದಾಸಳಾದ ಎನ್ನ ಮನದಾಸೆ ಪೂರೈಸುವ ವಾಲೆ ವಾಸುದೇವನ 3
--------------
ಸರಸ್ವತಿ ಬಾಯಿ