ಒಟ್ಟು 390 ಕಡೆಗಳಲ್ಲಿ , 76 ದಾಸರು , 303 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೈಯದವನಿಗಿಂತಲೂ ಬೈಯುವವನೇ ಮೇಲು ಹೊಯ್ಯದವಗಿಂತಲೂ ಹೊಯ್ಯುವವನೆ ಮೇಲು ಪ ಬಾಯೆನಲು ಬರಲೊಲ್ಲೆ ಮಾಯಾಕಾರ ನಿನ್ನಅ.ಪ ಒಬ್ಬ ಧರಣಿಯನೊಯ್ದ ಒಬ್ಬ ಖಡ್ಗವ ಹಿಡಿದ ಒಬ್ಬ ಧರಣಿಯನೆ ಕದ್ದ ಒಬ್ಬ ಬೈದಾ ಉಬ್ಬಿ ನೀ ಸಂತಸದಿ ಅಬ್ಬರಿಸಿ ಪರಿದೈದೆ ಒಬ್ಬೊಬ್ಬರಿಗೂ ದಿವ್ಯ ದರ್ಶನವನು 1 ಜಾರನೆಂದರು ಕೆಲರು ಚೋರನೆಂದರು ಕೆಲರು ಪೋರನಿವನೆಂದರು ನಾರಿಯರು ಪಲರು ಆರೇನ ಬೈದರೂ ದೂರಿ ನಿಂದಿಸಿದರೂ ಸ್ಮರಿಸಿದಾ ನಿಮಿಷಾರ್ಧ ಹರಿ ನಿನ್ನ ಭಕ್ತರ 2 ಇರಬಹುದು ಹಸಿವು ಬಾಯಾರಿಕೆಗಳಿಂದ ಅರಿವು ನಿದ್ರಾ ನೀರಡಿಕೆಗಳ ತೊರೆದು ಅರಸುವಾ ಸಮಯದಲಿ ಬರುವೆ ನೀನದರಿಂದ 3 ಇಳೆಯನೇ ತೆತ್ತವನ ತುಳಿದು ಕೈಸೆರೆ [ಮಾಡ್ದೆ] ಹಳಿದು ನಿಂದಿಸಿದವನ ಬಳಿಗೆ ಹೋದೆ ಮುಳಿಸಿನಿಂದೊದ್ದವನ ಕಾಲುಗಳ ನೀತೊಳೆದೆ ಹಳಿವು ಬೈಗಳು ನಿನಗೆ ಹಿತವು ಮಾಂಗಿರಿಯ ರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಕ್ತಜನ ಸಂರಕ್ಷಣ ಪ ಭಕ್ತಜನ ಸಂರಕ್ಷ ಭವದುರಿತ ಸಂಹಾರಿ ಭಕ್ತರಾ ಸುರಧೇನು - ತರುವೆ ಚಿಂತಾಮಣಿಯೆ ಪೊತ್ತ ತಿಮ್ಮಪ್ಪ ಏಳೊಅ.ಪ. ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು ಇಂಬಿನಲಿ ತಲೆದೋರೆ ಕಿರಣಗಳು ಹರಹಿದುವು ತಾರಾ ನಿಕರವಂಬರದಿ ರೂಹುಮಾಸೆ ಕುಂಭಿಣಿಯ ಮುಸುಕಿರ್ದ ಕತ್ತಲೆ ಪರಿದು ಪೋಗೆ ಅಂಬುಜದಳಕ್ಕೆ ಮರಿದುಂಬಿಗಳು ಎರಗಿದವು ಸರಸಿಜಾಂಬುಕ ಮಂಚದಿಂದೇಳೊ 1 ಉದಯ ಪರ್ವತಕೆ ರಥನೂಕಿದನು ಮಾರ್ತಾಂಡ ಉರಗ ಪೆಡೆಯೆತ್ತಿದನು ಭಯದಿಂದ ಅಡಗಿದರು ದಶದಿಕ್ಕಿನೊಳಗೆ ತ್ರಿದಶರಬ್ಬರಿಸಿ ಆನಕ ದುಂದುಭೀ ಶಂಖ ಧಂ ಧಂ ಧಣಾ ಸರಿಗಮಪದನೀ ಯೆಂದೆನುತ ತುರೆಸಿದರು ಸದಮಲಾನಂದ ತಿಮ್ಮಾ 2 ನಾರಿಯರು ಬಂದು ಅಂಗಳ ಬಳಿದು ಗಂಧದಾ ಸಾರಣಿಯದೆಳೆದು ಮುತ್ತಿನ ರಂಗವಾಲೆ ವಿ- ಮಕರ ಕನ್ನಡಿ ದ್ವಾರದಲಿ ಬಿಗಿದರ್ಥಿಯಲಿ ಗೊಲ್ಲ ಕಟ್ಟಿಗೇ- ಕಾರ ಪರಿವಾರದವರೆಲ್ಲ ವೊಪ್ಪುತಿದಾರೆ ಕಂಸಾರಿ ಕೋನೇರಿವಾಸ 3 ನೃತ್ಯಗಾರರು ಬಂದು ತತ್ಥಿಗಿಣಿ ತಕ್ಥೈಯ ತಿತ್ತಿರಿ ಮೃದಂಗ ಜೊತೆ ತಪ್ಪದಂದದಿ ತಾಳ ಬತ್ತೀಸರಾಗದಲಿ ಎತ್ತಿ ಧ್ವನಿತೋರುತ್ತ ನೃತ್ಯ ಪಾಡುತ್ತ ಕುಣಿಯೆ ಮುತ್ತೈದೆಯರು ಬಂದು ಮುತ್ತಿನಾರತಿ ಪಿಡಿದು ಮಿತ್ರಭಾವದಿ ನಿಮ್ಮ ಅಡಿಗಳಿಗೆ ಹರಿವಾಣ ನೋಡುತ್ತಿದಾರೆ ಸರ್ವೇಶ4 ಕಾದೋದಂ ವಿಮಲ ಕಮ್ಮೆಣ್ಣಿ ಕಸ್ತೂರಿ ಸ್ವಾದು ಜವ್ವಾಜಿ ಚಂದನ ಗಂಧ ದ್ರವ್ಯಗಳ ಹೇಮ ಪಾದುಕಾ ಪಟ್ಟುವಸನ ಈ ಧರೆಯ ಮೇಲಿರ್ದ ಉಡಿಗೆ ತೊಡಿಗೆಯು ಕರ್ಪು ರಾದಿ ತಾಂಬೂಲ ನಿರ್ಮಲ ದಾದಿಯರು ಪಿಡಿದು ಮುಂದೆ ಆದಿಹರಿ ಪರಮಪುರುಷ 5 ದಂಡಿಗೆ ಶಂಖತಾಳ ತಂಬೂರಿ ಜಾಂಗಟೆಯ ಗೊಂಡು ನಿನ್ನಯ ಪರಮ ಪ್ರೀತ್ಯರ್ಥ ದಾಸರು ಬೊಮ್ಮಾಂಡ ಕಟಹÀ ಬಿಚ್ಚುವಂತೆ ತಂಡ ತಂಡದಿ ಗೆಜ್ಜೆಕಟ್ಟಿ ಅಭಿನಯ ತಿರುಹಿ ಕೊಂಡಾಡೆ ಶಬ್ದ ಪ್ರತಿ ಶಬ್ದವಾಗುತಿದೆ ಭೂ- ಬಲ್ಲವರಾರು ಕುಂಡಲಗಿರಿವಾಸ ತಿಮ್ಮಾ 6 ಗೋತ್ರಾರಿ ಹರಿಧರ್ಮ ಪುಣ್ಯಜನಪನು ವರುಣ ವೀತಿಹೋತ್ರನ ಸಖನು ಯಕ್ಷೇಶ ಕೈಲಾಸ- ಸೂರ್ಯ ಚಿತ್ತದಲಿ ಮುಖ್ಯರಾದ ವಿಶ್ವ - ಮಿತ್ರ ಸನಕಾದಿಗಳು ನಾರದರೆ ಮೊದಲಾಗಿ ಸ್ತೋತ್ರವನು ಮಾಡುತಲಿದ್ದಾರೆ ಲಕ್ಷ್ಮೀಕಳತ್ರ ಜಗದ್ಭರ್ತ ತಿಮ್ಮಾ 7 ನಿಚ್ಚ ಏಳುವ ಸಮಯ ಮೀರಿತೋ ಇಂದೀಗ ಎಚ್ಚರಿಕೆ ಪುಟ್ಟದೇ ಎಲೋ ದೇವ ಶ್ರೀದೇವಿ ಮೆಚ್ಚಿಸಿದ ಮಹಸರಸವೆ ಮುಚ್ಚಟೆಯಿದೇಂ ತಿಳಿಯಲಾಗದೆ ಸ್ವಾಮಿ ಸೊಲ್ಲು ಕರ್ಣಕೆ ಬೀಳದಾಯಿತೆ ಕಾಣೆ ಸಚ್ಚಿದಾನಂದಾತ್ಮಕ 8 ನಿದ್ರೆಗೆವೆ ಹಾಕದಿರೊ ನೀರೊಳಗೆ ನೀನಿರೊ ಉ- ಪದ್ರ ಭೂಮಿಗೆ ಕಳೆಯೊ ಕಶ್ಯಪನ ಸುತನಳಿಯೊ ಸ- ಮುದ್ರ ರಾಣಿಯ ಪಡೆಯೊ ರಾಯರಾಯರ ತÀಡೆಯೊ ಮುದ್ರೆ ಭೂಮಿಜೆಗೆ ಕಳುಹೊ ಅದ್ರಿಯುದ್ಧರಿಸೊ ಮುಪ್ಪುರವ ಸಂಹರಿಸೊ ಕಲಿ- ಕ್ಷುದ್ರ ಕಳೆ ನಿದ್ರೆ ಸಾಕೆಂದು ಶುಕ್ತಿ ಸಾರುತಿದೆ ವೆಂಕಟಕಾದ್ರವೇಯ ಹಾಸಿಗೆಯಿಂದೇಳು 9
--------------
ವಿಜಯದಾಸ
ಭಕ್ತವತ್ಸಲನೆಂಬ ಬಿರುದು ಬಿಡದಿರು ದೇವ ಬಹು ಪರಾಕೆಲೊ ಮುರಾರಿ ಪ. ಶಕ್ತ ನೀನೆಂದು ನಂಬಿರುವೆ ಕೃಪಾಸಿಂಧು ಮತ್ತಗಜ ಮೈಮರೆದು ಸುತ್ತಿ ಕೆಸರೊಳು ಬಿದ್ದು ಶಕ್ತಿ ಹೀನನಾಗಿ ಏಳದಂತಾಗಿದೆ ಮತ್ತಾರಿಗಳವಲ್ಲ ಮಂದರಾದ್ರಿಧರನೆ ಎತ್ತಿ ಕಡೆಹಾಯಿಸೊ ಎನ್ನೊಡೆಯ ಶ್ರೀ ಹರಿಯೆ 1 ನಿಂದ ನೆಲ ಮುನಿಯುತಿದೆ ನಿಪುಣತನವಡಗಿತು ಮಂದಮತಿ ವೆಗ್ಗಳಿಸಿ ನೆಲೆಗಾಣೆ ಮುಂದೆ ತಂದೆ ನೀನಲ್ಲದಿನ್ಯಾರು ರಕ್ಷಿಪರಯ್ಯ ಬಂಧನವ ಪರಿಹರಿಸೊ ಭಯನಿವಾರಣ ಹರಿಯೆ 2 ಕೊಂಡೆಯರ ಕೆಡಮೆಟ್ಟಿ ಕುಹಕಿಗಳ ಮಸ್ತಕವ ಚೆಂಡಾಡಿದ ಚಿನ್ಮಯರೂಪ ನೀನು ದಿಂಡರಿದು ದುರಳರನು ದುರಿತಗಳ ಪರಿಹರಿಸಿ ಪುಂಡರೀಕಾಕ್ಷ 3 ವ್ಯಾಕುಲದಿ ಕೃಷ್ಣಮೃಗವು ಎದೆಗುಂದಿರೆ ನೀ ಕರುಣಿ ಸಮಯದಲಿ ವೃಷ್ಟಿಯ ಕರೆದು ಜೋಕೆಯಲಿ ಪಥÀವೆನೇರಿಸಿದ್ಯೊ ಜಗದೀಶ 4 ನಿನ್ನನೆ ಪೂಜಿಪೆನು ನಿನ್ನನೆ ಪಾಡಿ ಪೊಗಳುವೆನು ನಿನ್ನನೆ ನಂಬಿದವಳಿಗಿಂತ ಉನ್ನತವಾದ ಕಂಟಕವು ಬಂದಿದೆ ಕಾಯೊ ಪನ್ನಗಶಯನ ಹೆಳವನಕಟ್ಟೆ ರಂಗಯ್ಯ 5
--------------
ಹೆಳವನಕಟ್ಟೆ ಗಿರಿಯಮ್ಮ
ಭಯದೂರ ಧರ್ಮಸಾರ ಭುವನಾಧಾರ ಪ. ಭಕ್ತಾರ್ತಿಭಂಜನ ಭವಪಾಶಮೋಚನ ದಮನ ನಿಕೇತನ ಸಾರಿ ಮೈದೋರು ಬಾ ಶ್ರೀರಮಾಮನೋಹರ 1 ಸಂದಿಗ್ಧ ಸಮಯಂಗಳ್ ಬಂದಿರ್ಪವೇಳೆಯೊಳ್ ನೊಂದಿರ್ಪ ಭಜಕರೊಳ್ ಇಂದೇಕೆ ಸಂದೆಗಂ ಪೇಳ್ ಇಂದಿರಾಮನೋಹರ ನಂದನಕುಮಾರ 2 ಶ್ರೀನಾಥ ನಿನ್ನಂಘ್ರಿಯೊಳ್ ಅನ್ಯೂನ ಭಕ್ತಿಯಿರಲ್ ಮಾನಾಭಿಮಾನಂಗಳೇನೊಂದನೆಣಿಸದೆ ಜ್ಞಾನೋದಯಂ ತಾನಾಗೆ ಚಿದಾನಂದಮಪ್ಪುದೈ 3
--------------
ನಂಜನಗೂಡು ತಿರುಮಲಾಂಬಾ
ಭವ ಎನಗೆ ಹರಿುತುಸದಯ ಗೋಪಾಲಾರ್ಯನ ಪದ ಕರುಣವಾಯ್ತೆನಗೆ ಪಮೊದಲು ಬಹು ಜನ್ಮಂಗಳಲ್ಲಿ ಮಾಡಿದ ಪುಣ್ಯಒದಗಿತೀ ಸಮಯದಲಿ ಧನ್ಯನಾದೆಸದಸದ್ವಿವೇಕ ಸಂಪತ್ತಿ ಮುಂತಾದ ಸತ್ವದ ಸಾಧನಂಗಳೊದಗಿದವೀಗಲೆನಗೆ 1ದೇವ ಋ ಪಿತೃ ಋಣಂಗಳು ತಿದ್ದಿದವು ಶುದ್ಧಭಾವನಾದೆನು ಕುಲ ಪವಿತ್ರವಾುತೆನ್ನಾಪಾವನತೆಯಾಗಿ ಜನನೀ ಜನಕರಿಗೆ ದೇವದೇವ ಪದವಾುತು ಕೃತಕತ್ಯ ನಾನಾದೆ 2ಸಕಲ ಸಂದೇಹಗಳಳಿದು ದೇಹಾತ್ಮ ಮತಿವಿಕಲವಾದುದು ನಿತ್ಯ ತೃಪ್ತಿಯಾುತುಪ್ರಕಟ ಗೋಪಾಲಾರ್ಯ ಪದವ ಸಾಕ್ಷಾತ್ಕರಿಸಿಸುಕರ ಸತ್ಯಾನಂದ ರೂಪ ನಾನಾದೆ 3
--------------
ಗೋಪಾಲಾರ್ಯರು
ಭಾಗವತ ದಶಮಸ್ಕಂದ ಕಥೆ ಜಯ ಜಯ ರಾಮಾನುಜ ಪಾಹಿ ಜಯ ಜಯ ಶ್ರೀಕೃಷ್ಣಪಾಹಿ ಜಯ ಪಾಂಡವ ಮಿತ್ರ ಪಾಹಿ ಜಯ ಜಯ ಜಯತು ಪ ಭವ ಪ್ರಮುಖ ಸುರರಿ- ಗಾನಮಿಸುತ ದಶಮಸ್ಕಂದದ ಕಥೆಯ ಪೇಳುವೆ 1 ತಾಮರಸಭವಂಗೆ ಪೋಗಿ ಮೊರೆಯನಿಟ್ಟಳು 2 ಹರಮುಖ ಸುಮನಸರ ಕೂಡಿ ವಿಧಿಯು ಕ್ಷೀರ ಶರಧಿಯೈದಿ ಪರುಷಸೂಕ್ತದಿಂದ ಹರಿಯ ಸ್ತೋತ್ರ ಮಾಡಲು 3 ಸುರರು ಯಾದವರಾಗಿ ನಾನು ಬರುವೆ ದೇವಕಿ ಪುತ್ರನೆನಿಸಿ ತರಿವೆ ನೀಚರನೆಂದಾಕಾಶವಾಣಿಯಾಯಿತು 4 ಕನ್ನಿಕೆಯರು ಭುವಿಯೊಳವತರಿಸುವದೆನ್ನುತ 5 ಮೃಡ ಸಡಗರದಲಿ ತಮ್ಮ ನಿಳಯಗಳನು ಸಾರ್ದರು 6 ಶೂರಸೇನನೆಂಬ ರಾಜ ಪಾರಂಪರ್ಯದಿ ಮಧುರೆಯಲ್ಲಿ ಧಾರುಣಿಯ ಪಾಲಿಸುತೆ ಧರ್ಮದಿಂದಲಿ 7 ದೇವಕನು ದೇವಕಿಯ ವಸುದೇವಗಿತ್ತು ಉತ್ಸವ ಬರೆ ಭಾವ ಮೈದ ಕಂಸ ರಥಕೆ ಸಾರಥಿಯಾದನು8 ನಭವುನುಡಿಯೆ ಜವದಿ ತಂಗಿಯ ಮುಡಿಯ ಪಿಡಿಯೆ ಕಂಸ ಕೋಪದಿ9 ಪುಟ್ಟಿದ ಮಕ್ಕಳನೆಲ್ಲ ನಿನಗೆ ಕೊಟ್ಟುಬಿಡುವೆ ಕೊಲ್ಲದಿರವಳ ಸಿಟ್ಟು ಸೈರಿಸೆನುತ ಪೇಳ್ದ ಶೌರಿಭಾವಗೆ 10 ಕೊಡಲು ಕಂಸ ಹೃದಯದಲಿ ಸತ್ಯಕೆ ಮೆಚ್ಚಿ ಭಾವಗೆಂದನು 11 ಇವನ ಭಯವು ಎನಗೆ ಇಲ್ಲ ಈವುಂದೆಂಟನೆ ಸುತನ ಮಾತ್ರ ತವಕದಿಂದ ಮನೆಗೆ ಪೋಗು ಪುತ್ರ ಸಹಿತದಿ 12 ಸೆರೆಯೊಳಿಡಿಸಿ ಘನವಿಭವದಿ ಭುವಿಯನಾಳುತಿರ್ದ ಕಂಸನು 13 ಸುರ ಋಷಿ ರಹಸ್ಯದಲಿ ಬಂದು ಪೇಳಿದ 14 ಉರಿದ ಕಣ್ಣೊಳು ಕಿಡಿಗಳುದುರೆ ಶೌರಿಯ ಬಂಧನದೊಳಿಟ್ಟು ತರಿದನಾರುಮಂದಿ ಸುತರ ತವಕದಲಿ 15 ಏಳನೆಯ ಗರ್ಭ ಉದರವಿಳಿದೆಂದು ತಿಳಿಯೆ ಜನರು ಶ್ರೀಲತಾಂಗಿಯರಸನಂಶ ಬಳಿಕ ಬೆಳೆದುದು 16 ಅದನು ವಯ್ದು ದುರ್ಗಿ ರೋಹಿಣಿಯುದರದಲ್ಲಿ ಇಟ್ಟೆಶೋದೆ ಯುದರದಲ್ಲಿ ತಾನು ಸೇರಿ ಬೆಳೆಯುತಿರ್ದಳು 17 ಬಳಿಕಯಿಂದಿರೇಶ ತಾನು ಜಲಜಮುಖಿ ದೇವಕಿಯ ಗರ್ಭ ದಲಿ ಪ್ರವಿಷ್ಠನಾಗಿರ್ದ ಮಹಿಮೆಯಿಂದಲಿ 18 ಮುಖದಿ ಕಳೆಯೇರಿರಲ್ಕೆ ಖಳನಿದೇ ಇದೇ ಎನುತ್ತ ಸಕಲ ಭಾಗದಿ ಕಾವಲಿಟ್ಟು ಸಮಯ ನೋಡುತ್ತಿರೆ 19 ಸುರರು ಹರಿಯ ವೇದದಿಂದ ಸ್ತೋತ್ರಮಾಡಿ ಹೋದರು 20 ನಂದನರಸಿಯಲ್ಲಿ ದುರ್ಗಿಯಂದುದಿಸಿರೆ ನಭೋ ಮಾಸದಿ ಅಂದುರಾತ್ರಿಯ ಶಿತಪಕ್ಷಯಷ್ಟಮಿ ದಿನದಲಿ 21 ಸರಸಿಜಾಪ್ತನುದಿಸಿದಂತೆ ಬೆಳಕು ತುಂಬಲು 22 ದರ ಗದಾರಿ ಪದ್ಮ ಪೀತಾಂಬರ ಶ್ರೀವತ್ಸ ಕೌಸ್ತುಭಗಳ ಶೌರಿ ನೋಡಿದ 23 ದಿವ್ಯರೂಪವ ಕಾಣುತ ವಸುದೇವ ಮನದಿ ಹಿಗ್ಗಿ ಮುದದಿ ಗೋವುಗಳನು ಹತ್ತುಸಾವಿರ ಧಾರೆಯೆರೆದನು 24 ತುತಿಸಲಂದು ಸತೀಪತಿಗಳು ಹಿತದಿ ತೇಜವ ಮಾಯಗೈದು ಸುತನು ಮಗುವಿನಂತೆ ತೋರೆ ಸೊಬಗಿನಿಂದಲಿ 25 ಕಾಲಲಿದ್ದ ಸಂಕೋಲೆಗಳು ಕಳಚಿ ಬಿದ್ದುದಾಗ ದೇವಕಿ ಬಾಲನನ್ನು ನೋಡಿ ಮನದಿ ಭಯವ ಪಟ್ಟಳು 26 ಬೀಗಮುದ್ರೆ ಸಹಿತ ಎಲ್ಲ ಬಾಗಿಲು ತನ್ನಿಂತಾನೆ ತೆಗಿಯೆ ಶೌರಿ ನಡೆದನು 27 ಗೋಕುಲವನೈದಿ ಕಮಲನಾಭನಂ ಯಶೋದೆಯ ಬಳಿಯಲಿಟ್ಟನು 28 ಆಕೆ ಪಡೆದ ಹೆಣ್ಣು ಶಿಶುವ ತಾ ಕೈಕೊಂಡು ಮನೆಗೆ ಬಂದು ಜೋಕೆಯಿಂದ ಮೊದಲಿನಂತೆ ತೋರುತಿರ್ದನು 29 ಅಳಲು ಶಿಶವು ಕೇಳಿಯೆಲ್ಲ ಖಳರು ಹೋಗಿ ಕಂಸಗುಸುರೆ ಝಳಪಿಸುತ್ತ ಖಡ್ಗವನ್ನು ಜವದಿ ಬಂದನು 30 ವಂದನಾದರೂ ಬಿಡಬಾರದೆ ಸುಂದರಿ ಇವಳಣ್ಣ ಎನಲು ಮುಂದುಗಾಣದೆ ಯೋಚಿಸುತ್ತ ಮುಗುವನೆತ್ತಿದ 31 ನಭದಿನಿಂತು ಸಾರಿ ಛೀ ದುರಾತ್ಮ ಯಾರ ಕಡಿವೆ ಯೆಂದಳು? 32 ವೈರಿ ಮೀರಿ ಕೊಂದು ಪಾಪಿಯಾದೆ ಛೀ! ಹೋಗೆಂದಳು 33 ಮನದಿ ನೊಂದು ಕಂಸನು ತನ್ನನುಜೆಯನ್ನು ಭಾವನನ್ನು ವಿನಯದಿಂದ ಬೇಡಿಕೊಂಡ ಕ್ಷಮಿಸಿರೆನ್ನುತಾ 34 ನೆರಹಿ ತನ್ನ ಮಂದಿಯಾದ ದುರುಳರಿಗೀ ಸುದ್ದಿಪೇಳೆ ಬರಲಿ ಹರಿಯು ಕೊಲುವೆವವನ ಭಯಬಿಡೆಂದರು 35 ಧರೆಯೊಳು ಪುಟ್ಟಿದ ಶಿಶುಗಳನ್ನು ತರಿವುದೆಂದು ಪೂತನೆಯೆಂಬ ಮರುಳೆಯನ್ನು ಕಳುಹಿ ವಿಸ್ಮಯದಿಂದಲಿರ್ದನು 36 ನಂದಗೋಕುಲದಲ್ಲಿ ಮಹಾನಂದವಾಗಿ ಜನರೆಶೋದೆಯ ಕಂದನನ್ನು ನೋಡಿ ಹಿಗ್ಗಿಯುತ್ಸವಗೈದರು 37 ಪ್ರೀತಿಯಿಂದ ನಂದಗೋಪ ಜಾತಕರ್ಮ ಮಾಡಿಸಲ್ಕೆ ಶ್ರೀ ತರುಣಿಯ ಕಳೆ ದಿನದಿನದಿ ಪೆರ್ಚುತಿಹುದು 38 ಶೌರಿಯ ಮಧುರೆಯಲಿ ನೋಡಿ ಆದರಿಸಿ ಎನ್ನ ಮಗನೆ ಧೀರ ನಿನ್ನ ಮಗನೆನ್ನುತ ಗೋಪ ನುಡಿದನು39 ಏಳನೆಯ ದಿನದಿ ಪೂತನಿ ಬಾಲಕಂಗೆ ಮೊಲೆಯನೊಡೆ ಹಾಲಾಹಲವನೀಂಟಯಸುವನೆಳದು ಕೊಂದನು40 ಬಿಡುಬಿಡೆನ್ನುತಾರ್ಭಟಿಸುತಲೊಡನೆ ಯೋಜನವಾಗಿ ದೇಹ ಪೊಡವಿಗುರುಳೆ ನೋಡಿಗೋಪರು ಭೀತಿಗೊಂಡರು 41 ಜನ್ಮತಾರೆಯುತ್ಸವದಲಿ ಶಕಟನು ಬಂಡಿಯೊಳು ಸೇರಿ ಇರಲು ನನ್ನಿಯಿಂದಲೊದ್ದು ಕೆಡಹಿ ಕೊಂದಿತಾ ಶಿಶು ಪೋರ 42 ಬಾರಿಬಾರಿಗೆ ರಕ್ಷೆಕಟ್ಟಿನಾರಾಯಣ ಕವಚವ ತೊಡಿಸಿ ಪೋರಬಾಲನನ್ನು ಸಲಹೆನುತ ಹರಿಯ ಬೇಡಿದರು43 ಸಾರಿ ನೆಲಕೆ ಕೆಡಹಿ ಮೇಲೆ ಆಡುತಿರ್ದನು 44 ಶೌರಿ ನೇಮದಿಂದ ಗರ್ಗ ಸೇರಿ ಗೋಕುಲವನು ಸಂ ಸ್ಕಾರ ಕ್ಷತ್ರದಿಂದ ಮಾಡಿದ ಶಿಶುಗಳೆರಡಕೆ 45 ರಾಮಕೃಷ್ಣರೆಂದು ಪೆಸರ ಪ್ರೇಮದಿಂದಲಿಡಿಸಿ ನಂದನ ನೇಮಕೊಂಡು ತಾ ತೆರಳಿದ ಗರ್ಗಾಚಾರ್ಯನು46 ಶುಕ್ಲಪಕ್ಷದ ಚಂದ್ರನಂತೆ ಶುಕ್ಲನಾಮಕ ಹರಿಯು ಜನದೊ ಳಕ್ಕರಿಯಲ್ಲಿ ಬಾಲಲೀಲೆ ತೋರುತಿರ್ದನು 47 ಅಂಬೆಗಾಲಿಡುತ್ತ ಕೃಷ್ಣ ಸಂಭ್ರಮದಲಿ ಮನೆಮನೆಗಳೊ ಳಿಂಬಾಗಿ ಪಾಲು ಬೆಣ್ಣೆ ಕದ್ದು ತಿಂಬನು 48 ವಂದು ನೋಡಿ ಕಣ್ಣುಮುಚ್ಚಿ ವಿಸ್ಮಿತಳಾದಳು 49 ಮನೆಮನೆಗಳ ಪೊಕ್ಕೆಶೋದೆತನಯ ಪಾಲುಬೆಣ್ಣೆಸವಿದು ವಿ ನಯದಿಂದ ಅರಿಯದವನಂತಿರುವ ತಾಯಿಗೆ 50 ಗೋಪಿ ವಿಧ ವಿಧ ಗುಣದಿಂದಲೂಖಲಕ್ಕೆ ಕಟ್ಟಿದಳ್ 51 ವರಳ ಸೆಳೆದುಕೊಂಡು ಮತ್ತಿಮರಗಳನ್ನು ಮುರಿಯೆ ಸಿದ್ಧ ಪರುಷರೀರ್ವರಾಬಾಲಗೆ ನಮಿಸಿ ತುತಿಸಿ ಪೋದರು 52 ವನಜನಾಭ ಕೃಷ್ಣನನ್ನು ದೂರುತಿರುವರು 53 ಸೂನು ನಮ್ಮ ಮನೆಗೆ ಬಂದು ಆನಂದದಿ ಯಾರು ಆಡದಾಟ ಆಡುವ 54 ಬಾಯಿಗೊರಸಲತ್ತೆ ಸೊಸೆಯ ಹೊಡೆಯೆ ನಗುತ ಓಡಿ ಬಂದ ತವಸುತ 55 ಲೀಲೆಯಿಂದಲಿವನು ನೆಲುವಿನ ಮೇಲಿಟ್ಟಿರುವ ಭಾಂಡವನ್ನು ಕೋಲಿನಿಂದ ತಿವಿದು ವಡೆದು ಪಾಲ ಸವಿದನು56 ಎತ್ತಿಕೊಳ್ಳೆನುತ್ತ ಮೈಯ್ಯ ಹತ್ತಿ ನೆಲುವಿನ ಭಾಂಡವನ್ನು ಮತ್ತೆ ನಿಲುಕಿಸಿಕೊಂಡು ಪಾಲಕೆನೆಯ ಮೆದ್ದನು 57 ಸತಿಪತಿಗಳ್ ಮಲಗಿರೆ ಮಧ್ಯೆ ಸರ್ಪವನು ಹಾಕಿ ತಾನ- ಗುತ್ತಲಿ ಜುಟ್ಟು ಜಡೆಗೆ ಗಂಟಿಕ್ಕಿ ಓಡಿದ58 ಅಳುತಲಿರುವ ಶಿಶುವಿನ ತಲೆಯ ಕೂದಲು ಕರುವಿನಬಾಲಕೆ ಎಳೆದು ಗಂಟುಹಾಕಿ ಬೀದಿಯಲ್ಲಿ ನೂಕುವ 59 ಬೆಣ್ಣಿಯನ್ನು ಮೆದ್ದು ಮಿಕ್ಕದನ್ನು ಕೋತಿಗಿತ್ತದು ತಿನ್ನತಿರಲು ನಗುತ ನಗುತ ತಿರುಗುತಿರುವನು 60 ಇನಿತು ಎಲ್ಲ ಪೇಳೆ ಗೋಪವನಿತೆ ತಾನು ಮಗನ ಮುದ್ದಿಸಿ ಘನ ಪ್ರಮೋದ ಚಿತ್ತಳಾಗಿ ಕಾಲಕಳೆವಳು 61 ಪ್ರೀತಿಯಿಂದ ಬನ್ನಿ ಎಂದು ಕರೆವ ಬಾಲರ 62 ಮೂರು ವರ್ಷವಾಗೆ ಕೃಷ್ಣ ಮುದದಿ ಕರುಗಳ ಕಾಯುತ್ತ ವಾರಿಗೆಯವರಿಂದ ಕೂಡಿ ಕುಣಿಯುತಿರುವನು 63 ವತ್ಸ ಬಕರ ಮುರಿದು ಕೃಷ್ಣ ಸ್ವೇಚ್ಛೆಯಿಂದಲಣ್ಣನೊಡನೆ ನಿಶ್ಚಲ- ಚಿತ್ತರುಲಿಯಲಾಡುತೆಸೆದ ಮೋದದಿ64 ವೃಂದಾವನಕೆ ಪೋಗಲಲ್ಲಿ ಇಂದಿರೇಶ ವಿಷದ ಮಡುವ ನೊಂದು ದಿನದಿ ಧುಮುಕಿ ಜಲವ ನಿರ್ಮಲಗೈದನು 65 ವನದೊಳಗ್ನಿಯನು ನುಂಗಿ ಜನರ ಸಲಹಿ ರಾತ್ರಿಯಲ್ಲಿ ಮುನಿ ಜನೇಢ್ಯನಾಗಿ ಗೋಕುಲದೊಳೆಸೆದನು 66 ಅಜಗರನಾಗಿದ್ದಸುರನ ನಿಜಶರೀರ ಬೆಳಸಿ ಕೊಂದು ಸ್ವಜನರನ್ನು ಪಾಲಿಸಿದನು ವೃಜಿನದೂರನು 67 ಳನ್ನು ಕಾಯ್ದ ಕೃಷ್ಣ ತಾನು ನನ್ನಿಯಿಂದಲಿ 68 ಕರುಗಳನ್ನು ಹುಡುಗರನ್ನು ಸರಸಿಜಭವ ಬಚ್ಚಿಡಲ್ಕೆ ಹರಿಯುತಾನು ತತ್ವದ್ರೂಪವಾಗಿ ಮೆರೆದನು 69 ನಾನಾಲಂಕಾರದಿ ಗೋವುಗಳ
--------------
ಗುರುರಾಮವಿಠಲ
ಭಾಗೀರಥೀ ಜನಕಗೆ ಭಾಗವತಪ್ರಿಯಗೆ ಆಗ ನೀರೆರೆದರವಿಂದಲೋಚನನಿಗೆ ಗೋಪಿ 1 ಸಾಗರಶಯನನ ತೂಗಿ ತೊಟ್ಟಿಲೊಳಿಟ್ಟು ನಾಗಮುರಿಗೆ ವಂಕಿ ನಂದಗೋಪನ ಸುತಗೆ ಬೆರಳಿಗುಂಗುರ ಕೋಟಿಭಾಸ್ಕರತೇಜಗೆ ಹೊಳೆವೊ ಬಿಂದಲಿ ಗುಂಡು ಭುಜಕೀರ್ತಿ ಭೂಷಣ 2 ಮಲಕು ಮುತ್ತಿನ ಹಾರ ಪದಕ ಪಚ್ಚೆಯ ಕಾಂತಿ ಕೌಸ್ತುಭ ರತ್ನ ಥಳಥಳಿಸುವ ಕರ್ಣದಲ್ಲಿ ಬಾವುಲಿ ಚೌಕುಳಿ ಚಳತುಂಬು ಮುತ್ತಿನಬಟ್ಟು ಮುಂದಲೆಗೆ 3 ಹೊಸ ವಜ್ರದರಳೆಲೆ ಹುಲಿಯುಗುರು ತಾಯಿತ ಕುಸುಮನಾಭಗೆ ಕಿರುಗೆಜ್ಜೆ ಕಾಲಲಂದಿಗೆ ಮಿಸುಣಿ ಮಾಣಿಕ್ಯದುಡಿದಾರದಡ್ಡಿಕೆ ಕಟ್ಟಿ ಗೋಪಿ 4 ಕಂಜನಯ್ಯನ ನೋಡೆ ಕಂಗಳಿನ್ನೆರಡಿಲ್ಲ ಜಿಹ್ವೆ ಒಂದೆ ಸಾಲದೆನಗೆಂದು ಅಂಗಿಟೊಪ್ಪಿಗೆ ಹಾಕ್ಯಾಲಿಂಗನೆ ಮಾಡುತ ಸತಿ ತಾನಂದಾನಂದಭರಿತಳಾಗಿ5 ತನ್ನ ಮಗನ ಮುದ್ದು ತಾ ನೋಡಿ ಸಾಲದೆ ಹೊನ್ನ ಪುತ್ಥಳಿಯಂತೆ ಹೊಳೆವೊ ಕೂಸನು ಎತ್ತಿ ನಿನ್ನ ಮಗನ ಆಟ ನೀ ನೋಡೆಂದೆನುತಲಿ ತನ್ನ ಪತಿಯ ತೊಡೆಯಲ್ಲಿಟ್ಟು ನಲಿಯುತ 6 ಹೊನ್ನ ಪುತ್ಥಳಿಗೊಂಬೆ ಹೊಸ ಚಿನ್ನದರಗಿಳಿಯೆ ಹೊನ್ನು ತಾ ಗುಬ್ಬಿತಾರಮ್ಮಯ್ಯ ಎನುತಲಿ ಬಣ್ಣ ಬಣ್ಣದ ಆಟ ವರ್ಣಿಸುತಲಿ ನೀಲ- ವರ್ಣನ ತನ್ನ ತೋಳಿಂದಪ್ಪಿ ನಲಿಯುತ 7 ಸೃಷ್ಟಿಮಾಡುವರಿಲ್ಲೀ ಶಿವ ಬ್ರಹ್ಮರೊಡೆಯನ ಸೃಷ್ಟಿಕರ್ತನಾದನನ್ಹುಟ್ಟಿಸಿದ ನಾಭಿಯಿಂದಿವನು ಹೊಟ್ಟೆಲೀರೇಳು ಜಗವಿಟ್ಟು ಸಲಹುವ ಎಷ್ಟು ಸರ್ವೋತ್ತಮ ಈಗಿಲ್ಲ್ಯವತರಿಸಿದ 8 ಚತುರವದನಗೆ ವೇದ ತಂದಿಟ್ಟು ಸಾಗರ ಮಥಿಸಿ ಮಂದರವನು ಪೊತ್ತು ಅಮೃತವ ಹೀರಿ ಪೃಥಿವಿಯನು ತಂದ ಕೋರೆಯಲಂದ್ಹಿರಣ್ಯಾಕ್ಷನ ಹತವ ಮಾಡಿದ ತಾ ಭೂಪತಿ ಎಂದೆನಿಸಿದಿವನು 9 ಪರಮಭಕ್ತನು ಕರೆಯೆ ಬಿರುದು ಕಂಬದಿ ಬಂದು ಕರುಳ ಬಗೆದ ಪುಟ್ಟ ತÀರÀಳ ರೂಪವ ನೋಡಿ ಮರುಳಾಗಿ ಬಲಿ ಮೂರು ಚರಣ ದಾನ ನೀಡೆ ಬೆಳೆದು ಬ್ರಹ್ಮಾಂಡಕ್ಕೆ ಭುವನ ವ್ಯಾಪಿಸಿಕೊಂಡ10 ಕ್ಷತ್ರ ಸಂಹಾರಿ ತಾ ಎತ್ತಿ ಧನುವ ಸೀತಾ ಸೌ- ಮಿತ್ರಿಸಹಿತ್ವನದಲ್ಲಿ ಇರುತಿರಲಾಗ ಪತ್ನಿ ಒಯ್ಯಲು ಅಸುರನ್ಹತ್ತು ಶಿರಗಳ ತರಿದ ದುಷ್ಟ- ರಂತಕನೆ ನಿರ್ದುಷ್ಟ ಸಜ್ಜನಪ್ರಿಯ 11 ದೇವಾಧಿದೇವ ದೇವಕ್ಕಿ ಜಠರದಿ ಬಂದು ಮಾಯಾ- ಪೂತಣಿಯನ್ನು ಕೊಂದು ವಿಷಮೊಲೆನುಂಡು ಕಾಲಲಿ ಶಕಟನ ಕೆಡವಿದ ಯದುವೀರ ತಾ- ಗೋಪಾಲಕ ಗೋಪೀಸುತನೆಂದೆನಿಸಿಕೊಂಡ12 ವಿಪರೀತ ಮಾಯದಿ ತ್ರಿಪುರದ ಜನರಿಗೆ ದುರ್ಮತವ ಬೋಧಿಸಿ ಅಸುರಾರಿ ಮೋಹಕ ತೋರಿ ಚಪಲ ಚೆನ್ನಿಗ ಖಡ್ಗಪಿಡಿದು ತೇಜಿಯ- ನೇರಿ ಕಪಟನಾಟಕ ಕಲಿಮರ್ದನ ಕರಿಗ್ವರವಿತ್ತ13 ಜನ್ಮಕರ್ಮವು ಜರಾಮರಣಗಳಿವಗಿಲ್ಲ ಜಗದೋ- ಪರಬ್ರಹ್ಮನ ಪಾದಾಂಘ್ರಿಸ್ಮರಣಿ (ಣೆಯಿ?)ರೆ ಪರಮಾ- ದರದಿ ಕರೆದೊಯ್ವ ತನ್ನ (ಬಳಿಯ)ಲ್ಲೆ 14 ಏಸುಜನ್ಮದ ಫಲವಿನ್ನೆಷ್ಟು ಜನ್ಮದ ಸುಕೃತ ಈ ಸಮಯದಿ ಫಲಿಸಿತೀತ ಇಲ್ಲುದಿಸಿರಲು ದೋಷವರ್ಜಿತನೆ ಸಂತೋಷಭರಿತನಿವ ಭೀ- ಮೇಶಕೃಷ್ಣ ಯಶೋದೆ ಕೂಸೆಂದೆನಿಸಿಕೊಂಡ15
--------------
ಹರಪನಹಳ್ಳಿಭೀಮವ್ವ
ಭಾವಿಸಮೀರ ಗುರು ಶ್ರೀ ವಾದಿರಾಜ ನಿಮ್ಮ ಸೇವಿಪ ಜನರಿಗಭೀಷ್ಟವನೀವ ಪ ಹನುಮ ಭೀಮ ಮಧ್ವರೊಡಗೂಡಿ ವೃಂದಾವನ- ದೊಳು ಮೆರಸುವ ಮುಂದಿನ ಸೊಬಗ ಪಂಥದಿ ವೀರಶೈವರ ಗುರುವನೆ ಗೆದ್ದು ಹತ್ತಿದೆ ಮುತ್ತಿನ ದಿವ್ಯ ಪೀಠವನು 1 ಕುಂಡಿನೇಶನ ತನುಜಾತೆಯ ಪತ್ರವ ಪುಂಡರೀಕಾಕ್ಷನಿಗರ್ಪಿಸಿದ್ಯಲ್ಲೋ ಮದುವೆಯ ಸಮಯದಿ ಶಪಥದಿಂದಲಿ ಬಂದು ವಧುವಿನ ಭಾಗ್ಯವನುಳಿಸಿದೆಯಲ್ಲೋ 2 ಅರಿತುಂಡು ವಿಷವ ನೀನರಗಿಸಿಕೊಂಡ್ಯಲ್ಲೊ ನರಪತಿತನಯನ ಬದುಕಿಸಿದ್ಯಲ್ಲೋ ಭಜಿಸುತ ರಾಜೇಶ ಹಯಮುಖನಂಘ್ರಿಯ ತ್ರಿಜಗದೊಳಧಿಕ ಸೋದಾಪುರದೊಳು ನಿಂದ್ಯೋ 3
--------------
ವಿಶ್ವೇಂದ್ರತೀರ್ಥ
ಭೀಮಸೇನ ಭಾಮಿನಿಯಾದನು ಪ. ಭೀಮಸೇನ ಭಾಮಿನಿಯಾಗಲುಪ್ರೇಮದ ಸತಿಯ ಕಾಮಿಸಿದವನಝಾಮರಾತ್ರಿಗೆ ಸೀಳುವೆನೆನ್ನುತಸಾಮಜವರದನ ಪಾಡುತಲಿ ಅ.ಪ. ರಾಜಾಧಿರಾಜನು ಗಜಪುರದಲ್ಲಿಜೂಜಾಡಿ ತಮ್ಮ ರಾಜ್ಯವನು ಸೋತುವಿಜಯಮುಖ್ಯ ಅನುಜರೊಡಗೂಡಿಭುಜಂಗಶಾಯಿಯ ಭಜಿಸುತ್ತಸೂಜಿಮೊನೆಯಷ್ಟು ಗೋಜಿಲ್ಲದೆ ಬೇರೆವ್ಯಾಜದಿಂದ ರೂಪಮಾಜಿಕೊಂಡು ಪೋಗೆರಾಜ ಮತ್ಸ್ಯನೊಳು ಭೋಜನ ಮಾಡುತ್ತಪೂಜಿಸಿಕೊಂಬೋ ಸೋಜಿಗವೇನಿದು1 ಮಾನಿನಿ ದ್ರೌಪದಿ ಶ್ರೇಣಿಯೊಳು ಬರುತ ತ್ರಾಣಿ ವಿರಾಟನ ರಾಣಿಯು ಕಾಣುತಧ್ಯಾನಿಸಿ ಯಾರೆಂದು ಮನ್ನಿಸಿ ಕೇಳಲುಮುನ್ನಿನ ಸಂಗತಿ ಪೇಳಿದಳುಆಣಿಮುತ್ತಿನಂಥಾ ವಾಣಿಯ ಕೇಳಲುಕ್ಷೋಣಿಲಿ ನಿನ್ನಂಥ ಜಾಣೆಯ ಕಾಣೆನುಪ್ರಾಣ ನೀನೆನಗೆ ವೇಣಿ ಹಾಕೆನುತಪಾಣಿ ಪಿಡಿದು ಕರೆತಂದಳಾಗ2 ಈಶ ಕೇಳೊ ಪರದೇಶದಿಂದೊಬ್ಬಳುಕೇಶಕಟ್ಟುವಂಥ ವೇಷದಿ ಬಂದಳುಸಾಸಿರಮುಖದ ಶೇಷನೀರೂಪವಲೇಶವು ತಾ ವರ್ಣಿಸಲರಿಯನುವಾಸಮಾಡುವೆನು ಮಾಸಯೀರಾರುಗ್ರಾಸವ ಕೊಟ್ಟೆನ್ನ ಪೋಷಿಸೆಂದಾ ನುಡಿದೋಸನು ಪೇಳಲು ಮೀಸೆಯ ತಿರುವುತಮೀಸಲೆನಗೆಂದು ತೋಷಿಸಿದ 3 ನಾರಿ ಅಕ್ಕನಲ್ಲಿ ಸೇರಿಕೊಂಡಿಹಳುಮೋರೆಯ ನೋಡಲು ಭಾರಿ ಗುಣವಂತೆತೋರುತಲಿದೆ ಎನ್ನ ಸೇರಿದ ಮೇಲನು-ಚಾರಿ ಎನಿಸುವೆ ಮೀರಿದ್ದಕ್ಕೆವಾರೆಗಣ್ಣಿಲೊಂದು ಸಾರಿ ನೋಡ್ಯಾಳೆಂದುಬಾರಿ ಬಾರಿಯಾಕೆ ಮೋರೆ ನೋಡುತಿರೆನೀರೆ ಆ ಕ್ರೂರನ್ನ ಘೋರರೂಪಕಂಜಿಮೋರೆ ತೋರದೆ ಗಂಭೀರದಿಂದಿರೆ 4 ಅಕ್ಕನಿಗೆ ಬಾಚಿ ಹಿಕ್ಕುವ ಸೇವೆಗೆಪುಕ್ಕಟೆ ಅನ್ನಕೆ ಸಿಕ್ಕುವರೆ ನೀನುಚಿಕ್ಕಪ್ರಾಯಕೆನ್ನ ಪಕ್ಕಕ್ಕೆ ಬಂದರೆಸಕ್ಕರೆದುಟಿಸವಿ ದಕ್ಕಿಸುವೆರಕ್ಕಸ ನಿನಗೆ ದಕ್ಕುವಳೆ ನಾನುಮುಕ್ಕಣ್ಣನಾದರು ಲೆಕ್ಕಿಸದಾ ಪತಿಗಕ್ಕನೆ ಬಂದರೆ ತಿಕ್ಕಿ ನಿನ್ನ ಕಾಯದಿಕ್ಕು ದಿಕ್ಕಿಗೆ ಬಲಿಯಿಕ್ಕುವರೊ 5 ಭಂಡಕೀಚಕನುದ್ದಂಡತನ ಕೇಳುಮಂಡೆ ಹಿಕ್ಕುವಳೆಂದು ಕಂಡಕಂಡ ಬಳಿಪುಂಡು ಮಾಡುವನು ಗಂಡಕಂಡರೆ ತಲೆಚಂಡನಾಡುವನು ಖಂಡಿತದಿಮಂಡಲಾಧಿಪನ ಹೆಂಡತಿ ನೀನಮ್ಮಉಂಡಮನೆಗೆ ಹಗೆಗೊಂಡಳೆನ್ನದಿರುಲಂಡನಿಗೆ ಬುದ್ಧಿ ದಂಡಿಸಿ ಪೇಳದೆಹಿಂಡಿಕೊಳ್ಳದಿರು ದುಂಡುಮುಖ 6 ತರಳ ನಿನ್ನಯ ದುರುಳತನದಬೆರಳ ಸನ್ನೆಯು ಗರಳವಾಯಿತೆಸರಳ ಗುರಿಗೆ ಕೊರಳ ಕೊಡದೆಪುರದೊಳಿರದೆ ತೆರಳೊ ನೀಅರಳಮೊಗ್ಗೆಯ ಹೆರಳಿಗ್ಹಾ ಕುತಕುರುಳು ತಿದ್ದುವ ತರಳೆಯ ಕಂಡುಇರಳು ಹಗಲು ಬಾರಳು ಎನ್ನುತಮರುಳುಗೊಂಡರೆ ಬರುವಳೆ 7 ನಿಷ್ಠೆ ಸೈರಂಧ್ರಿಯ ದೃಷ್ಟಿಸಿ ನೋಡಲುನಷ್ಟವಾಗುವುದು ಅಷ್ಟೈಶ್ವರ್ಯವುಭ್ರಷ್ಟ ನಿನಗೆ ನಾನೆಷ್ಟು ಪೇಳಲಿನ್ನುಕಟ್ಟಕಡೆಗೆ ನೀನು ಕೆಟ್ಟಿಕಂಡ್ಯಾಸೃಷ್ಟಿಲಿ ನನ್ನಂಥ ಗಟ್ಟಿಗನ್ಯಾರಕ್ಕದುಷ್ಟರ ಎದೆಯ ಮೆಟ್ಟಿ ಸೀಳುವೆನುಗುಟ್ಟಿಂದ ನಾರಿಯ ಕೊಟ್ಟುಕಳುಹಲುಪಟ್ಟದ ರಾಣಿಯೊಳಿಟ್ಟುಕೊಂಬೆ 8 ಕರವ ಬಾಚಿದನುಬಾಚಿ ಹಿಕ್ಕುವಂಥ ಪ್ರಾಚೀನವೇನಿದುವಾಚನಾಡು ಮೀನಲೋಚನೆ ಎನ್ನಲುಆಚರಿಸಿ ಮುಂದುತೋಚದೆ ಖಳನವಿಚಾರಿಸಿಕೊ ಶ್ರೀಚಕ್ರಪಾಣಿ 9 ಪೊಡವಿಪತಿಗಳ ಮಡದಿ ನಾನಾಗಿಬಡತನವು ಬಂದೊಡಲಿಗಿಲ್ಲದೆನಾಡದೊರೆಗಳ ಬೇಡುವುದಾಯಿತುಮಾಡುವುದೇನೆಂದು ನುಡಿದಳುಕೇಡಿಗ ಕೀಚಕ ಮಾಡಿದ ಚೇಷ್ಟೆಗೆಕಡಲಶಾಯಿ ಕಾಪಾಡಿದ ಎನ್ನನುಆಡಲಂಜಿಕೇನು ಷಡುರಸಾನ್ನದಅಡುಗೆ ರುಚಿಯ ನೋಡುವರೇ 10 ನಡುಗುವೊ ಧ್ವನಿ ಬಿಡುತ ಕಣ್ಣೀರಿಂ-ದಾಡುವ ಮಾತನು ಬಾಡಿದ ಮುಖವನೋಡಿದನಾಕ್ಷಣ ತೊಡೆದು ನೇತ್ರವಬಿಡುಬಿಡು ದುಃಖ ಮಾಡದಿರುಪುಡುಕಿ ನಿನ್ನನು ಹಿಡಿದವನನ್ನು ಬಡಿದು ಯಮಗೆ ಕೊಡುವೆ ನೋಡೀಗತಡವ ಮಾಡದೆ ಗಾಢದಿ ಪೋಗು ನೀಮಾಡಿದ ಚಿಂತೆ ಕೈಗೊಡಿತೆಂದು 11 ಶಶಿಮುಖಿ ಕೇಸರಿ ಗÀಂಧವದಾಸಿಯರಿಂದ ಪೂಸಿಕೊಂಡುಹಾಸುಮಂಚದಲ್ಲಿ ಬೀಸಿ ಕೊಳುತಲಿಗಾಸಿ ಪಡುತಿರೆ ಆ ಸಮಯದಲಿಲೇಸಾಗಿ ನಿನ್ನಭಿಲಾಷೆ ಸಲ್ಲಿಸುವೆಈಸು ಸಂಶಯ ಬೇಡ ಭಾಷೆ ಕೊಟ್ಟೆ 12 ನಳಿನಮುಖಿಯು ಪೇಳಿದ ಮಾತನುಕೇಳಿ ಹರುಷವ ತಾಳಿದನಾಕ್ಷಣಖಳನು ಹೊನ್ನಿನ ಜಾಳಿಗೆಯ[ತೊಟ್ಟಿನ್ನುಳಿಯದಲೆ] ರತಿಕೇಳಿಗಿನ್ನುಕಾಳಗದ ಮನೆಯೊಳಗೆ ಬಾರೆಂದುಪೇಳಿದ ಸುಳುವು ಪೇಳಲು ಭೀಮಗೆಖಳನ ಕಾಯವ ಸೀಳುವವೇಳೆ ಬಂತೆನ್ನುತ ತೋಳ ಹೊಯಿದ 13 ನಾರಿಯಿನ್ಯಾವಾಗ ಬರುವಳೋಯೆಂದುದಾರಿಯ ನೋಡುವ ಚೋರ ಕೀಚಕನುತೋರಿದ ಠಾವಿಲಿ ಸೇರುವ ಬೇಗನೆಊರೊಳಗಾರು ಅರಿಯದಂತೆಕ್ರೂರನು ಮೋಹಿಪತೆರದಿ ಎನಗೆನಾರಿಯ ರೂಪ ಶೃಂಗರಿಸು ನೀನೆಂದುವಾರಿಜಮುಖಿಯ ಮೋರೆಯ ನೋಡಲುನೀರೆ ದ್ರೌಪದಿ ತಾ ನಾಚಿದಳು14 ಬಟ್ಟ ಮುಖಕೆ ತಾನಿಟ್ಟಳು ಸಾದಿನಬಟ್ಟು ಫಣೆಯಲಿ ಇಟ್ಟು ಕಣ್ಣಕಪ್ಪಪಟ್ಟ್ಟೆಪೀತಾಂಬರ ಉಟ್ಟುಕೋ ನೀನೆಂದುಪುಟ್ಟಾಣಿ ಕುಪ್ಪಸ ಕೊಟ್ಟಳಾಗಕಟ್ಟಾಣಿ ಮುತ್ತು ತಾಕಟ್ಟಿ ಕೊರಳಿಗೆಗಟ್ಟ್ಯಾಗಿ ಚಿನ್ನದಪಟ್ಟಿಯುಡುದಾರದಿಟ್ಟನ ಬೆರಳಿಗಿಟ್ಟಳು ಉಂಗುರವಿಟಪುರುಷರ ದೃಷ್ಟಿತಾಕುವಂತೆ15 ಮುತ್ತಿನ ಮೂಗುತಿ ಕೆತ್ತಿದ ವಾಲೆಯುಇತ್ತೆರÀ ಬುಗುಡಿಯು ನೆತ್ತೀಗರಳೆಲೆಚಿತ್ರದ ರಾಕಟೆ ಉತ್ತಮಕ್ಯಾದಿಗೆಒತ್ತೀಲಿ ಶ್ಯಾಮಂತಿಗ್ಹ್ಹೂವು ಗೊಂಡ್ಯಾಹಸ್ತದ ಕಡಗವು ಮತ್ತೆ ಚೂಡ್ಯ ವಂಕಿಮುತ್ತಿನ ಹಾರವು ರತ್ನದ ಪದಕವುಅರ್ತಿಲಿ ನಾರಿಯು ಕುತ್ತಿಗ್ಗ್ಯೆಹಾಕಲುಹಸ್ತಿನಿಯೋ ಈಕೆ ಚಿತ್ತಿನಿಯೊ16 ಮುಡಿಗೆ ಮಲ್ಲಿಗೆ ಮುಡಿಸಿ ಸುಗಂಧತೊಡೆದು ತಾಂಬೂಲ ಮಡಿಸಿಕೊಡುತಪ್ರೌಢನ ಸ್ತ್ರೀರೂಪ ನೋಡಲು ಖಳನುಕೊಡದೆ ಪ್ರಾಣವ ಬಿಡನೆಂದಳುಮಾಡಿದ್ಯೋಚನೆ ಕೈಗೂಡಿತು ಇಂದಿಗೆನೋಡು ಆ ಕೃಷ್ಣನು ಹೂಡಿದ ಆಟವಮಡದಿ ನೀನೆನ್ನ ಒಡನೆ ಬಾರೆಂದುನಡೆದ ಖಳನ ಬಿಡಾರಕೆ 17 ಇಂದುಮುಖಿ ಅರವಿಂದನಯನದ ಮಂದಗಮನೆಯು ಬಂದಳು ಎನ್ನುತನಂದನತನಯನ ಕಂದನ ಬಾಧೆಗೆಕಂದಿ ಕುಂದಿ ಬಹು ನೊಂದೆನೆಂದಹಿಂದಿನ ಸುಕೃತದಿಂದಲಿ ನಿನ್ನೊಳಾ-ನಂದವಾಗಿಹುದು ಇಂದಿಗೆ ಕೂಡಿತುಕುಂದದಾಭರಣ ತಂದೆ ನಾ ನಿನಗೆಚಂದದಿಂದಿಟ್ಟು ನೀನಂದವಾಗೆ18 ಗುಲ್ಲುಮಾಡದಿರೊ ಮೆಲ್ಲಗೆ ಮಾತಾಡೊವಲಭರ್ತಾಕಂಡರೆ ಹಲ್ಲು ಮುರಿವರೊಬಲ್ಲವ ನಿನಗೆ ಸಲ್ಲದು ಈ ಕಾರ್ಯಗೆಲ್ಲಲರಿಯೆ ನೀ ಕೊಲ್ಲಿಸಿಕೊಂಬೆಚೆಲ್ವೆ ಕೇಳು ನಿನ್ನ ಹುಲ್ಲೆಗಣ್ಣ ನೋಟಕೊಲ್ವಬಗೆ ಗೆಲ್ಲಲಾರೆನೆಂದುಗಲ್ಲವ ಮುದ್ದಿಟ್ಟು ಮೈಯೆಲ್ಲ ಹುಡುಕಲುಕಲ್ಲೆದೆಯಲ್ಲ್ಲಿರೆ ಖೂಳ ನೊಂದ 19 ನಾರಿಯೊ ನೀನೇನು ಮಾರಿಯೊ ಇನ್ನೊಂದುಬಾರಿ ನೀ ಎನಗೆ ಮೋರೆ ತೋರಿಸೆಂದಧೀರನ ಸಮೀಪಬಾರದೆ ಓಡುವದಾರಿಯ ನೋಡುತಿರಲಾಗಬಾರದಂಥಾ ಪರದಾರರ ಮೋಹಿಪಕ್ರೂರಗೆ ಈ ರೂಪ ಘೋರವಾಗಿಹುದುಸಾರದ ಮಾತಿದು ಯಾರಾದರೇನೀಗಮಾರನ ತಾಪವ ಪರಿಹರಿಸುವೆ 20 ಸಮೀರಜ ಗುದ್ದಲು ಕೀಚಕಬಿದ್ದನು ಭೂಮಿಲಿ ಗೆದ್ದೆನೆನುತ ಅನಿ-ರುದ್ಧನ ಸ್ಮರಿಸುತಲೆದ್ದ ಭೀಮ 21 ಕೆಟ್ಟ ಕೀಚಕ ತಾ ತೊಟ್ಟ ಛಲದಿಂದಬೆಟ್ಟದಂಥ ದೇಹ ಬಿಟ್ಟಿನ್ನವನಪಟ್ಟಾಗಿ ತೋರುವೆ ದೃಷ್ಟಿಸು ಎನ್ನಲುಭ್ರಷ್ಟನ ನೋಡುವುದೇನೆಂದಳುಕೊಟ್ಟ ಭಾಷೆಯು ಈಗ ಮುಟ್ಟಿತು ನಿನಗೆಕೃಷ್ಣನ ದಯದಿ ಕಷ್ಟವು ಹಿಂಗಿತುಪಟ್ಟಣಕೀಸುದ್ದಿ ಮುಟ್ಟದ ಮುಂಚೆಗುಟ್ಟಲಿ ಪೋಗುವ ಥಟ್ಟನೆಂದ 22 ಅರಸಿ ನಿನ್ನೊಳು ಸರಸ ಬೇಕೆಂದಪುರುಷನ ಜೀವ ಒರೆಸಿ ಕೊಂದೆನುಹರುಷದೀ ಪುರದರಸು ನಮ್ಮನುಇರಿಸಿಕೊಂಡೊಂದೊರುಷವಾಯಿತುಬೆರೆಸಿದ ಸ್ನೇಹಕ್ಕೆ ವಿರಸ ಬಂತೆಂದುಸರಸಿಜಾಕ್ಷಿಯು ಕರೆಸಿ ನಿನ್ನೊಳಗಿರಿಸದಿದ್ದರೆ ಹಯವದನನಸ್ಮರಿಸಿ ಗದೆಯನು ಧರಿಸುವೆ23
--------------
ವಾದಿರಾಜ
ಭ್ರಮೆ ಬೇಡಲೆ ಮನ ತಿಳಿ ಜವದಿ ಹರಿ ವಿಮಲಚರಣಕಮಲ್ಹಿಡಿ ದೃಢದಿ ಪ ಸುಮನಸರಗೂಡಿ ನೀ ಸುಮಶರ ಪಿತನಂ ಸಮಯ ತಿಳಿದು ಭಜಿಸನುದಿನದಿ ಅ.ಪ ಸಾರವಿಲ್ಲದ ಸಂಸಾರ ಇದು ಮೇರೆನಿಲ್ಲದ ಸಾಗರ ಆರಿಗೆ ನಿಲುಕದೆ ಮೂರುಲೋಕವದ್ದಿ ಮೀರಿಬಡಿಸುವುದು ಬಲುಘೋರ 1 ಹೆಂಡರು ಮಕ್ಕಳೆಂದು ನಂಬಿದಿ ನಿನ್ನ ಹಿಂಡಿನುಂಗುವುದು ಅರಿಯದ್ಹೋದಿ ಕಂಡಕಂಡವರಿಗೆ ಮಂಡೆಬಾಗಿಸಿ ನಿನ್ನ ದಂಡನೆಗೆಳಪುದು ಅಂತ್ಯದಿ 2 ಕಾಕುಜನರ ಸಂಗ್ಹಿಡಿದಿದ್ದಿ ನೀ ಲೋಕನೆಚ್ಚಿ ನೂಕುನುಗ್ಗಾದಿ ಲೋಕಗೆಲಿದು ಭವನೂಕಿ ನಲಿಯುವರ ಸಾಕಾರಗಳಿಸದೆ ಕೆಟ್ಟ್ಹೋದಿ 3 ಧರೆಯ ಭೋಗವನು ಸ್ಥಿರ ತಿಳಿದಿ ನೀ ಹರಿದು ಹೋಗುವದಕೊಲಿತಿದ್ದಿ ಮರೆಮೋಸದಿ ಬಿದ್ದರು ಮೈಯಮರೆದು ಸ್ಥಿರಸುಖ ಪಡೆಯದೆ ದಿನಗಳೆದಿ 4 ಭೂಮಿಸುಖಾರಿಗೆ ನಿಜವಲ್ಲ ಇದು ಕಾಮಿಸಬೇಡೆಲೊ ಶೂಲ ಕಾಮಿತಗಳನಿತ್ತು ಕ್ಷೇಮದಿ ಸಲಹುವ ಸ್ವಾಮಿ ಶ್ರೀರಾಮನ ತಿಳಿಮಿಗಿಲ 5
--------------
ರಾಮದಾಸರು
ಮಗಳೆ ಜಾನಕಿ ನಿನ್ನ ಸುಗುಣಸನ್ಮೋಹನ್ನ ಖಗಕುಲರನ್ನ ಮನೋರಮಣ ಮನೋರಮಣ ಕಾಂತ ಶ್ರೀರಾಮನ ಅಗಲದಿರು ಕಾಣೆ ಮರಿಯಾನೆ ಶೋಭಾನೆ 1 ಪತಿಯೇಳ್ವ ಮೊದಲು ಜಾಗ್ರತೆಯಾಗಿ ಯೆದ್ದು ಗೃಹ- ಕೃತ್ಯಕೆಲ್ಲಕ್ಕನುಸರಿಸಿ ಅನುಸರಿಸಿ ನಡೆ ನೀ ಮಗಳೆ ಹಿತವಾಗಿ ಬಾಳು ಪತಿಯೊಳು ಶೋಭಾನೆ 2 ಗಂಡನ ಮಾತಿಗೆ ದುರ್ಚಂಡಿಸದಿರು ಮಗಳೆ ಗಂಡನುಣ್ಣದ ಮೊದಲು ನೀ ಮೊದಲು ನೀನುಣ್ಣದಿರು ಪುಂಡರೀಕಾಕ್ಷಿ ಪುಣ್ಯರಾಶಿ ಶೋಭಾನೆ 3 ಮುಗುಳು ನಗೆಯ ಬೀರು ಜಗಳವ ಮಾಡದಿರು ಜಗದೊಳು ಕೀರ್ತಿಯುತಳಾಗು ಯುತಳಾಗು ಬಂಧುಗಳಲಿ ನೀ ಹಗೆಯ ಮಾಡದಿರು ಕೃಪೆದೋರು ಶೋಭಾನೆ 4 ಪಾದ ಹೊದ್ದಿ ಸೇವೆಯ ಮಾಡು ಸುದ್ಧ ಭಾವದೊಳು ನಡೆ ಮಗಳೆ ನಡೆ ಮಗಳೆ ನಿತ್ಯಸುಮಂಗಲೆ ಮುದ್ದಾಗು ಬಂಧು ಬಳಗಕ್ಕೆ ಶೋಭಾನೆ 5 ಅತ್ತೆಯ ಮಾತಿಗೆ ಪ್ರತ್ಯುತ್ತರ ಕೊಡದಿರು ಪ್ರತ್ಯೊಬ್ಬಳೆ ಸ್ಥಳದಿ ನಿಲದಿರು ನಿಲದಿರು ನೀರಜಗಂಧಿ ಸತ್ಯ ವಚನವನೆ ಸವಿಮಾಡು ಶೋಭಾನೆ 6 ಮೈದುನರನ್ನು ತನ್ನ ಮಕ್ಕಳೆಂಬಂತೆ ನೋಡು ಸಾಧುಭಾವದದಲಿ ನಡೆ ಮಗಳೆ ನಡೆ ಮಗಳೆ ಪಂಕ್ತಿಯಲಿ ಭೇದ ಮಾಡದಿರು ಕೃಪೆದೋರು ಶೋಭಾನೆ 7 ಕಂಡರೆ ಶಿಷ್ಟರ ದಂಡ ನಮಸ್ಕರಿಸು ಹಿಂಡು ದಾಸಿಯರ ದಣಿಸದಿರು ದಣಿಸದಿರು ಉತ್ತಮಳೆಂದು ಭೂ- ಮಂಡಲದಿ ಕೀರ್ತಿಪಡು ಪೂರ್ತಿ ಶೋಭಾನೆ8 ಚಂಡಿತನವ ನಿನ್ನ ಗಂಡನೊಳ್ಮಾಡದಿರು ಗಂಡಸರ ಮುಂದೆ ಸುಳಿಯದಿರು ಸುಳಿಯದಿರು ಸಂತತ ಸೌಖ್ಯ- ಗೊಂಡು ಬಾಳಮ್ಮ ಸೀತಾಭಾಮಾ ಶೋಭಾನೆ 9 ಕ್ಷಮೆಯಲ್ಲಿ ಧಾತ್ರಿಯುಂಬ ಕ್ರಮದಲ್ಲಿ ಮಾತೆ ಸುರತ ಸಮಯದಿ ವೇಶ್ಯಾ ತರುಣಿಯಳ ತರುಣಿಯಳ ತೆರದಿ ರಾಮನ ಸತಿಯಂ- ತೆ ಮಾಡವ್ವ ಸುಖಂ ಜೀವಾ ಶೋಭಾನೆ 10 ಲಕ್ಷ್ಮೀನಾರಾಯಣರಂತೆ ಸೀತಾರಾಮರು ನೀವು ಕುಕ್ಷಿ ಈರೇಳು ಜಗವನ್ನು ಜಗವನ್ನು ನಮ್ಮನ್ನು ಸರ್ವರ ರಕ್ಷಣ್ಯ ಮಾಡಿ ಸುಖಿಯಾಗಿ ಶೋಭಾನೆ 11
--------------
ತುಪಾಕಿ ವೆಂಕಟರಮಣಾಚಾರ್ಯ
ಮತ್ಸ್ಯಾದಿ ದಶಾವತಾರಗಳು ಮತ್ಸ್ಯಾದ್ಯವತಾರವನು ತಾಳ್ದು ನೀ ಪರದೇವ ಮನ್ವಂತರ ಪ್ರಳಯಜಲಧಿಯನು ಪೊಕ್ಕು ಸೂರ್ಯಪುತ್ರನ ಮನುವ ದೋಣಿಯಲ್ಲಿರಿಸಿ ನೀನ್ ನೀರಾಟವಾಡಿದೆಯ ಲೀಲೆಯಿಂದಲಿ ನೀಂ 33 ಮಂದರ ಪೊಕ್ಕೆ ಕೂರ್ಮರೂಪವ ತಾಳ್ದು ಕಡಲಿನಡಿ ಸೇರಿ ದೇವತೆಗಳಿಗೆಯಮೃತ ಕಲಶವನು ತೆತ್ತು ನೀನ್ ದೈತ್ಯರನು ವಂಚಿಸಿದೆ ಮೋಹಿನಿಯದಾಗಿ34 ಸೂಕರದ ರೂಪವನು ತಾಳ್ದು ನೀನ್ ಸಿರಿವರನೆ ಚಿನ್ನ ಕಣ್ಣಿನ ದೈತ್ಯಸೇವಕನ ಕೊಂದು ದೈತ್ಯನಾತ್ಮಜ್ಯೋತಿಯನು ತನ್ನಲಿಯಿರಿಸಿ ವಾರಾಹ ರೂಪದಿಂದಲಿ ಆಟವಾಡ್ದೆ35 ಶಿಲ್ಪಿಯಿಂ ರೂಪುಗೊಂಡಿಹ ಕಂಬದಲಿಯಿದ್ದು ವಿಷ್ಣುವೇ ಪ್ರಹ್ಲಾದ ಮಗುವನುದ್ಧರಿಸೆ ನಂಬಿದೆಡೆಯೆಲ್ಲೆಲ್ಲು ಇರುವೆನೆಂಬುದ ತಿಳಿಸೆ ನರಸಿಂಹ ರೂಪವನು ತಾಳ್ದೆ ಪರಮಾತ್ಮ 36 ಇಂದ್ರಾವರಜನೊಮ್ಮೆ ವಟುವಾಮನನು ಬಂದು ಬಲಿಯ ಯಾಗದ ಸಮಯ ಮೂಹೆಜ್ಜೆ ಬೇಡೆ ರಾಜ ಕೊಡಬಯಸಲದ ಗುರು ಶುಕ್ರತಡೆದಾಗ ದಾನಿ ಬಲಿ ಕೊಟ್ಟವನು ಸಿದ್ಧಿಯನು ಪಡೆದಾ 37 ಸಂಹಾರ ಲೀಲೆಯನು ತೋರಲವ ಪರಮಾತ್ಮ ಪಿತೃವಾಕ್ಯಪಾಲನೆಗೆ ತಾಯ ತಲೆ ಕಡಿದು ಮಾತೆಯನು ಬದುಕಿಸುತ ದುಷ್ಟರಾಜರ ತರಿದು ರಾಜವಂಶವನು ನಿರ್ವಂಶ ಮಾಡಿದನು 38 ಎದೆಯೊಳಿಹ ಸೀತೆಯನು ಕಾಡೆಲ್ಲ ಹುಡುಕುತ್ತ ಜಲಧಿಗೇ ಕಟ್ಟಿ ಸೇತುವೆಯ ಸಿರಿವರನು ಕಪಿ ಸೈನ್ಯದೊಡಗೂಡಿ ಲಂಕೆಯನ್ನೈದುತ್ತ ರಾವಣನ ಕೊಂದು ಸೀತೆಯ ಮರಳಿ ತಂದೆ 39 ಇಬ್ಬರನು ತಾಯಂದಿರನು ರಮಿಸಿ ಮಗುವಾಗಿ ಪದಿನಾರು ಸಾಸಿರದ ಸತಿಯರನು ಒಲಿಸಿ ಏಕಕಾಲದಲಿ ಎಲ್ಲರನು ಮೆಚ್ಚಿಸಿದ ಹರಿ ಆನಂದರೂಪದವ ಪರಮಾತ್ಮ ನಿಜವು 40 ತಾಮಸದ ಜೀವರನಧೋಗತಿಗೆಯಿಳಿಸುತಲಿ ಬುದ್ಧ ರೂಪದಲಿ ತ್ರಿವಿಧ ಜೀವಂಗಳಿಗೆ ಯೋಗ್ಯತೆಗೆ ತಕ್ಕಂತೆ ಗತಿಯಾಗಿಸುವದೆ ನಿನ್ನ ಸಂಕಲ್ಪವದಲಾ 41 ಧರ್ಮವದು ನಶಿಸುತಲಿ ದುಷ್ಟರಾಜರು ತುಂಬೆ ಕಲಿಯುಗದ ಕೊನೆಯಲ್ಲಿ ಕಲ್ಕಿ ರೂಪದಲಿ ಅಶ್ವವನ್ನೇರುತಲಿ ದುಷ್ಟರನು ಸಂಹರಿಸಿ ಕೃತಯುಗವ ಮಾಡಿದೆಯ ಪರಮಾತ್ಮ ನೀನು 42 ಕಾಣದಾ ದೇವರಿಗೆ ಭಕ್ತಿಯಿಂ ಪೂಜಿಸಲು ಹತ್ತು ರೂಪಗಳಿವುಗಳೇ ಮುಖ್ಯವದರಿಂ ಅವತಾರ ರೂಪಗಳ ಪ್ರತಿಮೆಗಳ ಪೂಜಿಸುತ ಸರ್ವಾರ್ಥಸಿದ್ಧಿಗಳ ಪಡೆಯುವರು ಜನರು 43 ವೇದೋಕ್ತ ಪದಗಳಿಗೆ ಮುಖ್ಯಾರ್ಥ ಹರಿಯಿಹನು ಅಗ್ನ್ಯಾದಿ ನಾಮಗಳು ದೇವರಿಗೆಯಿಹವು ದೇವತೆಗಳಿಗೆಲ್ಲ ಅಗ್ರಣಿಯು ತಾನಾಗಿ ಅಗ್ನಿನಾಮವು ನಿನಗೆ ಒಪ್ಪುವುದು ಹರಿಯೆ 44 ಇಂದ್ರಿಯಂಗಳೆ ಕುದುರೆ ಬುದ್ಧಿಯೇ ಸಾರಥಿಯು ಮನವೆಂಬ ಕಡಿವಾಣ ಹಿಡಿದೋಡಿಸುವವನು ಜೀವನೇ ರಥಿಕನವ ವಿಷಯಬೇಟೆಗಳಲ್ಲಿ ಪರಮಾತ್ಮನರಿವೆಂತು ಮೂಡುವುದು ಅವಗೆ 45 ವಾಸದಿಂ ಬೆಳಗಿಸುವ ವಾಸುದೇವನು ತಾನು ವರುಣನಂತರ್ಗತನು ಶಿರದಲ್ಲಿಯಿಹನು ಸಪ್ತರಂಧ್ರಗಳಲ್ಲಿ ವಿದ್ಯುತ್ತ ಹರಿಸುತಲಿ ಜ್ಞಾನವನ್ನೊದಗಿಪನು ಶ್ರೀಕೃಷ್ಣನವನು 46 ವಿಜ್ಞಾನಿ ಭಗವಂತ ಹೃದಯ ಗುಹೆಯಲ್ಲಿಹನು ಅನಿರುದ್ಧ ಯಜ್ಞೇಶ ಮೊದಲಾದ ಪೆಸರಿಂ ಪ್ರಾಣವಾಯುಗಳ ಜೊತೆ ಪಾಕವನು ಗೈಯುತ್ತ ರಕ್ತರೂಪವ ಮಾಡಿ ಪಾಲಿಸುವ ನಮ್ಮ47 ಪ್ರಾಕೃತ ಜ್ಯೋತಿಯಾದೊಡೆ ದೇಹ ಸುಡದಿರದು ಅಪ್ರಾಕೃತ ಜ್ಯೋತಿ ಯಜ್ಞೇಶಗಿಹುದು ಭಕ್ಷ್ಯಭೋಜ್ಯಗಳೆಂಬ ಲೇಹ್ಯಪೇಯಗಳೆಂಬ ನಾಲ್ಕುವಿಧ ವಸ್ತುವಿನ ಪಾಕ ಮಾಡುವನು 48 ವಾಯುವಂತರ್ಗತನು ನೀಲರೂಪದ ದೇವ ಪ್ರದ್ಯುಮ್ನನಾಮಕನು ನಾಭಿಯಲ್ಲಿಹನು ಕಾಮರೂಪಿಯು ಅವನಪಾನಕ್ಕೆ ಒಡೆಯನವ ಪುರುಷರಿಂದಲಿ ಸೃಷ್ಟಿಗವನೆ ಕಾರಣನು 49 ಪೃಥ್ವಿವಿಯಪ್ ತೇಜಸ್ಸು ಮೂರು ದೇಹದ ಮೂಲ ಶ್ರೇಷ್ಠ ವಾಯುವು ಸೇರಿ ದೇಹಕ್ಕೆ ಚಲನೆ ಹೃದಯದಲ್ಲಾಗಸವು ಇರುವ ಕಾರಣದಿಂದ ಪಂಚಭೂತಂಗಳಿವು ದೇಹದಲ್ಲಿಹವು 50 ವಾಯುವಿನ ಜೊತೆಗೂಡಿ ದೇಹಚಾಲಕನು ಯಂತ್ರರೂಪದಲ್ಲಿದ್ದು ಯೋಗ್ಯತೆಗೆ ತಕ್ಕಂತೆ ಕಾರ್ಯವನು ಮಾಡಿಸುತ ಫಲವನ್ನು ಕೊಡುವ 51
--------------
ನಿಡಂಬೂರು ರಾಮದಾಸ
ಮನ್ಮಥ ಚರಿತೆ340 ವರಸಿದ್ಧಿ ಗಣೀಶನ ಬಲಗೊಂಡೀ- ಶ್ವರನ ಪದಕೆ ನಮಿಸಿ | ಶಾರದೆಯ ಹರುಷದಿ ಸಂಸ್ಮರಿಸಿ | ಚ ತುರ್ಮುಖಗಳ ನೆರೆ ಭಜಿಸಿ ಹರುಷದಿ ನುತಿ ಮಾಡಿ | ಮಾಡಿ- ದ ಕೃತಿಯ ಸುಜನರು ನೋಡಿ 1 ಕಾಮಜನಕ ನಿಷ್ಕಾಮಜನಾಪ್ತ | ಸು- ಧಾಮನ ಸಖ ಹರಿಯು | ಮೂರು ಲೋಕಗಳಿಗೆ ತಾ ದೊರೆಯು | ಎನ್ನಹೃ- ತ್ಕಮಲದೊಳೀಪರಿಯು ಕಾಮನ ಸುಚರಿತೆಯು | ಸಜ್ಜನರು- ಇಹಪರ ಸದ್ಗತಿಯು | 2 ಪೃಥಿವಿಯೊಳಿಹ ಸುಜನರು ಕೇಳಿ | ಮ ನ್ಮಥ ಚರಿತ್ರೆಯನು | ಸಹ- ರ್ಷೋತ್ಕರದಿ ನೀವ್ಗಳಿದನು | ಭಜಿಸೆ ಸ- ದ್ಗತಿಗಳನು ಕೊಡುವನು | ಶತಮುಖವಂದಿತ ಸಿರಿದೇವಿಯರಸ- ನೊಲಿದು ಪಾಲಿಸುವನು | ಜನರ ಕೋ- ರಿದ ಕೋರಿಕೆಗಳನು | ತಾ ಕೊಟ್ಟವರನು ಪಾಲಿಪ ತಾನು 3 ತಾರಕಾಸುರನ ಭಯದಿಂದಲಿ ವೃಂ- ದಾರಕರೆಲ್ಲ ಕೂಡಿ | ಮನದಿ ಆಲೋಚನೆಗಳ ಮಾಡಿ | ವನಜ ಸಂ- ಭವನಡಿಗಳ ಬೇಡಿ | ಯಾರು ನಮಗೆ ದಿಕ್ಕೆಂದು ಕಳವಳಿಸಿ ನಾರಾಯಣನ ತ್ವರಿತದಲಿ | ಕಂಡು ವಂ- ದಿಸಿದರು ತವಕದಲಿ | 4 ವಾರಿಜಾಕ್ಷ ಪರುಷೋತ್ತಮ ವಿಶ್ವಾ- ಧಾರ ಪರಾತ್ಪರನೆ | ಅನಂತನವ- ತಾರ ಕೃಪಾಕರನೆ | ನಾವೆಲ್ಲ ಸೇರಿದೆವೈ ನಿನ್ನನೆ | ತಾರಕಾಸುರನ ಬಾಧೆ ಪರಿಹರಿಪ- ರ್ಯಾರನು ನಾವ್ ಕಾಣೆವೈಯ್ಯ | ಉ-- ದ್ಧಾರ ಮಾಳ್ಪನು ನೀನೆ | ಭಕ್ತಜನ- ವಾರಿಧಿ ಚಂದ್ರಮನೆ | 5 ಎನಲು ಸುರರೊಡನೆ ನುಡಿದನಾಗಲಾ- ವನಜನಾಭ ತಾನು | ಈ ಕಾರ್ಯ- ಕೆನಾ ಮಾಡುವುದೇನು | ಭ- ವಾನೀಧವನಾಗಿ ಶಿವನು | ಘನತಪವನಾಚರಿಸುತ್ತ ಮೇರುಗಿರಿ ಗುಹೆಯೊಳು ಕುಳಿತಿಹನೊ | ಫಾಲದಲಿ ಉರಿಗುಣ್ಣುಳ್ಳವನು | ಏನಾದರು ಸರಿ ತಾ ಲೆಕ್ಕಿಸನು | 6 ಕಾಮನಿಂದ ಶಂಕರನ ತಪಕಿಡಿಸಿ ಕರುಣಿಸಬೇಕೆಂದು ಬೇಡಿ | ಕೊಂ- ಡರವ ನಿಮ್ಮೊಳು ದಯಮಾಡಿ | ತ- ಕ್ಕಯೋಚನೆಗೈಯ್ಯುವ ನೋಡೀ | ತಾಮಸನ ಮುರಿದು ನಿಮಗೆ ಸಂತತವ ಕೊಡುವನು ಮುದಗೂಡಿ | ಎಂದು ಪೇಳಿದ ಶ್ರೀಹರಿಯನುಡಿ | ಕೇಳಿ ಇಂದ್ರನು ಗುರುವನು ನೋಡಿ 7 ಚಂದದಿಂದ ಸೇರಿ | ಸ್ಮರಗೆಯಿದ- ರಂದವೆಲ್ಲವುಸುರಿ | ಅವನಮನ ಶೌರಿ ಕಂದನೆಯಂತಾದರು ತಂದರೆ ಸುಖ- ವೆಂದನುಪಕಾರಿ | ಗುರು ವಂದಿಸೆ ಸುರರ ದೊರಿ | ಬೀಳ್ಕೊಂಡು ಬಂದನು ಕುಸುಮಪುರಿ8 ಕುಸುಮಾವತಿಯಲಿ ಮೀನಕೇತನನ ಶಶಿನಿಭವದನೆಯರು | ಸೇ- ವಿಸುತಿರೆ ಹಸನಾದ ಪನ್ನೀರು | ಪುನಗು ಅಗರು | ಕುಸುಮಶರನ ಉಪಚರಿಸುತ ಬಾಲೆಯ- ರೆಸೆಯಲು ಮೋದದೊಳು | ರತಿ- ಕ್ರೀಡೆಯಲಿ ಮನಕರಗಲು | ಬೃ ಹಸ್ಪತಿಯನಿತರೊಳೈತರಲು 9 ಊಳಿಗದವರಿಂದ್ಹೇಳಿ ಕಳುಹೆ ಗುರು ಕೇಳಿ ಸುದ್ದಿ ಮಾರಾ | ತವಕ ಪರಿಪರಿಯುಪಚಾರ | ಶ್ರೀಪತಿಯ ಕುಮಾರ | ಬಂದಹದ- ನೇನೆನುತ ಪದಾರ | ವಿಂದ- ಕೆರಗಿದನಾ ಕುಸುಮಶರ 10 ಭಯದೊಳಮರರೆಲ್ಲ | ಕ್ಷೀರಸಾಗರಕೆ ಪೋಗಿ ಎಲ್ಲ | ಬಿನ್ನೈ- ಸಲು ಕೇಳಿ ಸಿರಿಯನಲ್ಲಾ | ಅರಘಳಿಗಾಲೋಚಿಸಿ ಎನ್ನೊಳುನುಡಿ- ದನುಕೇಳಿಸಿರಿಯನಲ್ಲಾ | ಖಳಗೆಧರೆ- ಪರಿ ಎಲ್ಲವನು ಬಲ್ಲ 11 ಕಾಮನು ಪುಷ್ಪ ಶರಗಳಿಂದೆಸೆಯಲು ಗೌ- ರಿಮನೋಹರನೂ | ಬ- ಹಿರ್ಮುಖನಾಗುತ ಶಂಕರನೂ | ನಿ- ಕ್ಷೇಮವ ಪಾಲಿಪನು | ರಜತಗಿ ರಿವಾಸಿ ಮಹೇಶ್ವರನು | ಇದಕೆ ಗುರಿಯಾದ ಎನ್ನ ಮಗನು 12 ನಾವು ಪೇಳಿರುವೆವೆಂದು ನಮ್ಮ ಸು- ಕುಮಾರ ಮನ್ಮಥನಿಗೆ | ಇದೆಲ್ಲಾ ಪೇ- ಳಿವಿವರಮಾಗೆ | ಕರೆದುಕೊಂ- ಡ್ಹೋಗಿ ಶಿವನ ಬಳಿಗೆ | ಪಾವಕಾಕ್ಷ ಬಲು ಕರುಣಾನಿಧಿಯಿ- ನ್ನೇನು ಚಿಂತೆ ನಮಗೆ | ಬೇಗನಡೆ ಯೆಂದ ಹರಿಯು ಎನಗೆ | ಸಕಲವೂ ತಿಳಿಸಿದೆ ನಾನಿನಗೆ | 13 ಪರಿಯೋಚನೆ ಮಾಡು | ಸ- ತ್ಕೀರ್ತಿಯ ಸಂಪಾದನೆ ಮಾಡು | ಭರದಿ ಹೂ ಶರಗಳ ನೀ ಹೂಡು | ಹರನ ತಪವ ಭಂಗಿಸಿ ನಮ್ಮೆಲ್ಲರ ಕರುಣದಿ ಕಾಪಾಡು | ತಂದೆಯ- ಪ್ಪಣೆಯ ಮನದಿ ನೋಡು | ಮೂಜಗದಿ ಯಾರು ನಿನಗೆ ಜೋಡು | 14 ಈ ಪರಿಪೇಳಿದ ಗುರುವಿನ ನುಡಿಯನು ಶ್ರೀಪತಿಯ ಕುಮಾರ | ರತಿಯೊಡನೆ ಮಾರ | ನುಡಿದಳಾ ಶಿವನು ಮಹಾಕ್ರೂರ | ಆಪತ್ತೊದಗುವುದೀಗ ಬೇಡ ಎಂ- ಕಂದರ್ಪಮನದಿ ಸೋತು | ಬೃಹಸ್ಪತಿ- ಗೆಂದ ಕಾಮನಿನಿತು 15 ಸಮ್ಮತಿಯಿದು ಕೇಳಿ | ಪೂಶರನ ಬಿಡಲು ಚಂದ್ರಮೌಳಿ | ಕೋಪಿಸಲಾ ಹಣೆಗಣ್ಣೆನಗಾಳೀ | ಬ್ರಹ್ಮಾಂಡಗಳಾದರು ದಹಿಸುವುದು ಎನ್ನಳವೇ ಎಂದಾ | ಈ ಕಾರ್ಯಕೆ ನಾನು ಬಾರೆನೆಂದ | ನುಡಿಗೆ ಸುರ- ಗುರುಮತ್ತಿಂತೆಂದ | 16 ಮರೆಹೊಕ್ಕಿರುವಮರರ ಪಾಲಿಸುನೀ ಕಂದರ್ಪ | ಜಗ- ತ್ಕಾರಣನೈನಿಮ್ಮಪ್ಪ | ಪೇಳ್ದನುಡಿ ನಡಿಸಲು ಬೇಕಪ್ಪಾ | ಪರಿಪರಿಯಲಿ ನೋಡಿದರು ಜಗದೊಳಗೆ ನಿನ್ನ ಸರಿಯಾರಪ್ಪಾ | ನಮ್ಮ ನುಡಿ ಮೀರಬಾರದಪ್ಪಾ | ಅಷ್ಟು ಪೇಳಿ- ದರು ಕಾಮವೊಪ್ಪಾ | 17 ಕಾಮನವೊಪ್ಪಿಸಿ ಕರದೊಯಿದಮರರು ಕೈಲಾಸವ ಸೇರಿ | ಅರುಹಿದರು ಗಿರಿರಾಜ ಕುಮಾರಿ | ಕೇಳಿನಡೆತಂದಳಾಗಗೌರಿ | ವ್ಯೋಮಕೇಶನಿಹ ಗವಿಯ ದ್ವಾರಕೇ ಬರಲು ನೋಡಿ ನಂದಿ | ತಾಯಿನೀ- ನಿಲ್ಲಿಗೇಕೆ ಬಂದಿ | ಏನು ಅ- ಪ್ಪಣೆಯೆಂದನು ನಂದಿ 18 ವಂದನೆ ಒಳಗೆ ಹೋಗುವನು ಇವನನೀ ತಡೆಯಬೇಡವಯ್ಯ | ಎನ್ನ ಕಂದನು ಇವ ಕೇಳಯ್ಯ | ಎಂದು ಪೇ- ಳಿದ ಗೌರಿಯ ನುಡಿಯಾ | ಮುದದಿ ಶಿರದೊಳಾಂತನು ನಂದೀಶ್ವರ ಮುಂದೆ ಕೇಳಿ ಕಥೆಯ | ಅನಿತರೊಳ್ ಬಂದ ಕಾಮರಾಯ | ಪೋಗ ಬಹು- ದೆಂದ ಪ್ರಥಮಗೇಯ | 19 ಕಾಮಪೊಕ್ಕನಂದು | ಕರದಿ ಜ- ಪಮಾಲೆ ಪಿಡಿದು ಮುಂದು | ಮ- ಹಾಮಂತ್ರಗಳ ಜಪಿಸುತಂದು | ನೇಮದೊಳೇಕೋಭಾವದೊಳಿರುತಿಹ ಸೋಮಧರನ ಕಂಡ | ಏ- ನು ಮಾಡುವದೆಂದು ಪ್ರಚಂಡಾ | ಇಕ್ಷುಧ- ನುಶರಗಳ ಕೈಕೊಂಡಾ | 20 ವಿನಯದಿಂದ ಪ್ರಾರ್ಥಿಸಿ ಮಾತಾಡಿಸು- ವೆನೆಂದು ಶಂಕರನ | ನುತಿಸಿ ಬೇಡಿ- ದನು ಶೂಲಧರನಾ | ಎಷ್ಟಾದರು ಕರಗಲಿಲ್ಲವನಮನಾ | ಪರಿಪರಿಯೋ- ಚನೆ ಮಾಡಿ ಮನ್ಮಥನು | ಬೆರಗಾಗುತಾ ನಿಂತಾ ಸಮಯನೋಡುತ- ಲಿರತಿಯ ಕಾಂತಾ | ಮನ ದಿ ಹೊಂದಿದನು ಮಹಾಚಿಂತಾ 21 ನೆಂದು ಯೋಚಿಸಿದನು | ಇ- ಕ್ಷು ಧನುವನು ಜೇ ಹೊಡೆದಾನು | ಮಹೇ- ಶನ ಮರ್ಮಸ್ಥಳಗಳನು | ಪುಷ್ಪ ಬಾಣಗಳೂಡೆಸೆಯೆ ಮ- ಶರಗಳನು ಸುರಿದಾನು | ಜ- ನರೆ ಕೇಳೀಯಾಶ್ಚರ್ಯವನು | 22 ಆ ಮಹೇಶ್ವರನ ಮೂಲ ತಿಳಿಯಲಿಂ- ದ್ರಾದಿಸುರರಿಗಳವೆ | ಕೇಳಿಯೀ ಕಾಮನೇನು ಲಕ್ಷ್ಯವೆ | ಕರಿಚರ್ಮಾಂಬರನಾ | ಮೀನ ಕೇ- ತನನ ಬಾಣಕೆ ಮನಾ | ಬಹಿರ್ಮು- ಖನಾಗಿ ನೋಡಿ ಸ್ಮರನಾ | 23 ಕಣ್ಣುತೆಗೆದು ಮುಕ್ಕಣ್ಣಯಲೋ ನಿನ- ಗೆನ್ನೊಳೇಕೆ ಪಂಥಾ | ಛೀ ಛೀನಡಿ ಹೋಗು ಹೋಗು ಭ್ರಾಂತ | ಎಂದು ತಾ- ತನ್ನನಿಜಸ್ವಾಂತ-| ವನ್ನು ಪೂರ್ವದಂದದಿ ತಪದಲ್ಲಿರಿಸಚ- ಪೋಲ್ವಂದದಲಾ ಶಾಂತಾ | ಶೂರ್ಪಕಾ- ರಿಯು ಎದುರಲಿ ನಿಂತಾ | 24 ನಾನು ಬಂದಾ ಕಾರ್ಯವ ಕೇಳದಲೆ ಇ- ದೇನೀ ಪುರಹರನು | ಛೀಹೋಗೋ- ಗೆಂದು ಗರ್ಜಿಸಿದನು | ಎನುತ ತೆ- ಗೆದೆಚ್ಚ ಪೂಶರವನು | ನಾನಾವಿಧದಲಿ ತನ್ನ | ಚಮತ್ಕಾ- ರಗಳ ತೋರಿಸಿದನು | ಮನದಿ ಭಯಗೊಳುತ ಮನಸಿಜನು | ಮುಂದಾಗುವ ಕಥೆಯ ಕೇಳಿಯಿನ್ನು 25 ಭರ್ಗಕಣ್ದೆರೆದು ನೋಡಲಾಕ್ಷಣದಿ ಭರದಿಂ ಮನ್ಮಥನಾ | ಕೋಪಕಿಡಿ- ಯಿಡುತ ಫಣೆಗಣ್ಣ | ತೆಗೆದು ನೋಡಲು ತಕ್ಷಣ | ಚಿಣ್ಣಾ ಭುಗ್ಗು ಭುಗ್ಗುಯೆಂದೇಳ್ವ ಉರಿಗಳಿಂ ದಗ್ಧನಾದ ಮದನಾ | ಭಸ್ಮದಂ- ತಿದ್ದು ಮರ್ಮಸದನಾ | ಅಗ್ನಿವ್ಯಾ ಪಿಸೆ ಬ್ರಹ್ಮಾಂಡವನಾ 26 ಸುರರು ಕಿನ್ನರರು ಗಡಗಡ ನಡುಗುತ ಬೆರಗಾದರು ನೋಡಿ | ಅವರ- ಶಿರವನಲ್ಲಾಡಿ | ಚರರು ಬಂದು ರತಿಗೀ ಸುದ್ದಿಯ ಪೇಳಿ- ದರು ದುಃಖ ಮಾಡಿ | ಕೇಳಿ ನಾರಿಯರು ಶೋಕವಮಾಡಿ | ರತಿಯು ನೆಲದೋಳ್ ಬಿದ್ಹೊರಳಾಡಿ | 27 ಹಾಹಾರಮಣಾ ಹಾ ನಿಜೇಶ ಹಾ ಪ್ರಾಣಕಾಂತಕಾಮಾ | ಎನ್ನ ಕರ್ಕಶನಿಸ್ಸೀಮ | ಸಾಹಸ ಮಾಡುವೆನೆಂದು ಪೋಗಿ ಶಂ- ಕರನಿಂದಲಿ ಮಡಿದೆ | ಪೇಳಿದಮಾ- ತ್ಕೇಳದೆ ನೀ ನಡೆದೇ | ಪೋಗಬೇ- ಡೆಂದು ನಾನು ನುಡಿದೆ 28
--------------
ಗುರುರಾಮವಿಠಲ
ಮರುಳೆ ಸುಖ ನೀನೆನು ಪಡೆದಿ ನರಜನುಮ ತಾಳಿ ಇಹ್ಯದಿ ಪ ಪರಿಪರಿ ಜನುಮ ತಾಳಿ ಪರಮ ಬಂಧದೊಳೊರಲ ಉರುಳಿ ವರಮುಕ್ತಿ ದೊರೆವ ಕೀಲಿ ಸ್ಮರಿಸಿ ಬಂದಿ ಹರಿಯ ಬಳಲಿ 1 ಅರಿಯದೆ ಮತ್ತು ಭವಮಾಲೆ ಕೊರಳಿಗ್ಹಾಕಿಕೊಂಡಿ ದುರುಳ ಮರೆಯಮೋಸ ಕಾಂಬೋದೆಲ್ಲ ಹರಿದು ಪೋಗ್ವುದು ಸ್ಥಿರವಲ್ಲ 2 ಸಮಯ ಮಿಂಚಿಪೋದ ಬಳಿಕ ಕ್ರಮದಿ ಮತ್ತೆ ಸಿಗುವುದೆ ಮೂರ್ಖ ವಿಮಲ ಶ್ರೀರಾಮ ಪಾದಕಮಲ ನಮಿಸಿ ಪಡಕೊ ಮುಕ್ತಿಮಾಲಾ 3
--------------
ರಾಮದಾಸರು
ಮಾನವ ಜನುಮ ನಾನು ಯಾರೆಂಬ ಖೂನವಿಲ್ಲದೆ ಪ ಕಾಲನಾಜ್ಞೆಯನ್ನು ಪಡೆದು ಸೂಳ ಎಣಿಸಿ ಜಗಕಿಳಿದು ಜಾಲಹಾಕಿ ಜವನಗೊಲಿದು ಶೂಲಕ್ಹಾಕುವ ಮಾರಿಗೊಲಿದು 1 ತಂದ ಪುಣ್ಯವನ್ನು ಕೆಡಿಸಿ ಮಂದಿಮಕ್ಕಳನ್ನು ಬಿಡಿಸಿ ಮಂದನೆನಿಸಿ ಕುಂದುಹೊರೆಗೆ ಬಂಧಕ್ಕೆಳೆವ ರಂಡೆನ್ಹೊರೆಸಿ2 ಜನನಿಜನಕರನ್ನು ಜರೆದಿ ಮನೆಯ ಹೆಂಡಿರ ಮಾನ ಕಳೆದಿ ಬಿನುಗು ಸೂಳೆಗೆ ವಶನಾದಿ ಬಿನುಗರೊಳಗೆ ಬಿನುಗನಾದಿ 3 ನೀಗಿದಿ ಕುಲಶೀಲತೆ ಮುದಿ ಗೂಗೆಯಂದದಿ ದಿನಗಳೆದಿ ಭಾಗವತದ ಭಾಗ್ಯ ಮರೆದಿ ಕಾಗೆನುಂಗಿದ ಹೊಲೆಯನಾದಿ 4 ಸಾಧು ಸುಜನಬೋಧ ಜರೆದಿ ವೇದವಾಕ್ಯ ಮೀರಿ ನಡೆದಿ ಶೋಧಿಸಿ ಸಮಯ ತಿಳಿಯದ್ಹೋದಿ ಆದಿ ಶ್ರೀರಾಮಗ್ಹೊರತಾದಿ 5
--------------
ರಾಮದಾಸರು