ಒಟ್ಟು 646 ಕಡೆಗಳಲ್ಲಿ , 76 ದಾಸರು , 563 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಿರಿಯೆಡೆಗೆ ಬರಲಾರೆನೇ [ಮಾಂಗಿರಿ ರಂಗನ] ಪ ಗಿರಿಯೆಡೆಗೆ ಬರಲಾರೆ ಬರುವದೃಢವಿಡಲಾರೆ ಬರಲಾರೆನೆನಲಾರೆ ಹೊರಡಲಾರೆನೊ ರಂಗ ಅ.ಪ ನೂರುಯೋಜನ ಪೋಪೆನೇ ಅಲ್ಲಿಂದಿತ್ತ ಮೂರು ಹೊನ್ನನು ಹಿಡಿದಾ ಮೂರು ಹರಿದಾರಿಯ1 ಪರಿಕಿಸುತಿಹೆ ನೀನೆನ್ನಾ ಮಾಮನದ ರನ್ನ ಬರುವೆ ನಿನ್ನನು ನೋಡಿ ಶಿರಬಾಗಿ ಬಹೆನೆಂಬ ಭರವಸೆ ಬಿಡಲಿಲ್ಲ ಹೊರಡಲಿಲ್ಲವೋ ರಂಗ2 ನೀನರಿಯದುದಾವುದೋ ಸೂನು ಧೃವರಾಯನೆಡೆಗೆ ನೀನೋಡಿ ಬರಲಿಲ್ಲವೇ ನಾನು ಮೊರೆಯಿಡೆ ನಿನ್ನ ಮಾನಸ ಕರಗದಲ್ಲ 3 ತಾಮರಸಾಕ್ಷಾ ನಿನ್ನ ನಾಮದ ಭಜನೆ ರಾಮದಾಸಾರ್ಚಿತ ಕೋಮಲಾಂಗ ರಂಗ4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗುರು ನಾರಪ್ಪಯ್ಯನ ಚರಣಕಮಲಯುಗ್ಮ ಮಾನವ ಪ ನಿರುತ ಸ್ಮರಿಸುವ ಶರಣು ಜನರಘ- ತರಿದಭೀಷ್ಠೆಯ ಗರಿಯಲೋಸುಗ ಧರಣಿ ವಲಯದಿ ಮೆರೆವ ವೆಂಕಟ ಗಿರಿಯ ರಮಣನ ಕರೆದು ತಂದಿಹ ಅ.ಪ ಧರೆಸುರರೊಳು ಜನಿಸಿರಲು ಭ್ರಾತ್ರರುನಾನಾ ಪರಿಬಾಧಿಸಲು ಸಹಿಸಿ ಚರಣ ಯಾತ್ರೆಯಲಿಂದ ಗಿರಿಯಕಾಣುತ ಮಲಗಿರಲು ಸ್ವಪ್ನದಿಸೂಚಿಸಿ ಧರಣಿ ದೇವನೆ ನಿನಗೆ ದರುಶನ ಕೊಡಲು ನಾ ಬರುವೆನೆಂದಾಜ್ಞಾಪಿಸಿ ಭಕ್ತನನುಸರಿಸಿ ತುರುಸ್ವರೂಪವ ಧರಿಸಿ ಬರುತಿರೆ ಕುರಿಕಿಹಳ್ಳಿಯ ಗ್ರಾಮದಿಂದಲಿ ತರುವರಾಶ್ವತ್ಥದಲಿ ಸಲೆ ಪಾಲ್ಗರಿದ ದೇವನ ಕರೆದು ತಂದಿಹ 1 ನಾರಾಯಣಾರ್ಯರು ಕಾರ್ಪರಾರಣ್ಯದಿ ಆರಾಧಿಸುತಲಿರುತ ಆರಾರು ಭಕುತರು ಗೋಧನ ಧಾನ್ಯದಿ ಸಾರಾವಸ್ತುಗಳೀಯುತ್ತ ಗೋರಕ್ಷಣವ ಮಾಡಿರೆನುತ ತಮ್ಮಯ ಬಂಧು ಬಾಲಕರಿಗೆ ಪೇಳುತ್ತ ಭಯ ಬ್ಯಾಡಿರೆನುತ ಚಾರು ಶಿಲೆಯೊಳಗೊಂದು ದಿನ ಅಂಗಾರದಲಿ ಶ್ರೀ ಭಾರತೀಶನ ಮೂರುತಿಯ ಬರೆದೀತ ಭಯ ಪರಿ- ಹಾರಕನು ನಿಮಗೆಂದು ಪೇಳಿದ 2 ಧರಣಿ ಪಾಲಕನಿಂದ ನಿರ್ಮಿತಮಾದ ಬಂ- ಧುರ ನಿಲಯದಿ ರಾಜಿತ ತರುಮೂಲದೊಳಗವ- ತರಿಸಿ ಷೋಡಶ ಸಂಖ್ಯ ಕರಗಳಿಂದಲಿ ಶೋಭಿತ ವರ ಕೃಷ್ಣಾ ಜಲದೊಳಗಿರುವ ಪ್ರತಿಮೆಯ ತಂದು ತರು ಬಳಿಯಲಿ ಸ್ಥಾಪಿತ ಶ್ರೀಭೂಸಮೇತ ಮೂರ್ತಿ ನಿರುತ ಪೂಜೆಯಕೊಳುತ ಧರೆಯೊಳು ಶರಣು ಜನರನು ಪೊರೆವ ಕಾರ್ಪರ ನಿಲಯ'ಸಿರಿನರ ಹರಿ'ಯನೊಲಿಸಿದ3
--------------
ಕಾರ್ಪರ ನರಹರಿದಾಸರು
ಗೋದಾವರಿ ಎನಗೆ ಶ್ರೀಧರನ ತೋರೆ ಪ. ನೀ ದಯದಿ ಸಲಹೆನ್ನ ಮಾಧವಗೆ ಪ್ರಿಯೆ ಅ.ಪ. ಸ್ವಚ್ಛವರ್ಣಳೆ ಬಹು ಹೆಚ್ಚಾಗಿ ಪರಿಯುವಳೆ ಮುಚ್ಚಿರುವ ಮಲಗಳನು ದೂರಮಾಡೆ ಅಚ್ಯುತನ ಪದವೀವ ಹೆಚ್ಚಿನಾ ಜ್ಞಾನವನು ಸ್ವಚ್ಛತನದಲಿ ಕೊಟ್ಟು ಮೆಚ್ಚಿ ಎನ್ನನು ಸಲಹೆ 1 ಧರೆಯ ಜನರು ನಿನ್ನೊಳ್ ಬರುತ ಮಲಗಳ ತೊಳೆಯೆ ಅರಿತು ಅದನು ಮನದಿ ಪರಿಹರಿಸಿಕೊಳಲು ಪರಮ ಭಾಗವತರ ವರ ಮಂದಿರಕೆ ಪೋಗಿ ವರಹ ವೆಂಕಟಗಿರಿಯೊಳ್ ಸ್ಥಿರವಾಗಿ ನಿಂತೆ 2 ಬರುತ ದಾರಿಯೊಳೆನಗೆ ಸ್ವಪ್ನದಲಿ ತೋರಿದೆ ವರ ದಿವ್ಯರೂಪವನು ನಾರಿಮಣಿಯೆ ಸರಿಗೆ ಕಂಕಣ ಮುತ್ತಿನಾ ಬುಗುಡಿಯನೆ ಧರಿಸಿ ವರ ಮುತ್ತೈದೆಯರಿಬ್ಬರಂದದಲಿ ತೋರಿದೆ 3 ಮುಕ್ಕೋಟಿ ಗಂಧರ್ವ ದೇವರ್ಕಳೂ ಬರುತಿರಲು ಅಕ್ಕರದಿ ತಂಗಿಯನೆ ಒಡಗೂಡುತ ಲಕ್ಕುಮಿ ಸ್ವಾಮಿ ಶ್ರೀ ಪುಷ್ಕರಣಿ ಸಾರಿರಲು ಉಕ್ಕುವೋ ಉಲ್ಲಾಸದಿಂದ ತೆರಳಿದೆಯೆ 4 ಜಿಷ್ಣು ಸಖನ ದಿವ್ಯ ಪಟ್ಟಣವ ಸೇರಲು ಕೃಷ್ಣವೇಣಿಯ ಒಡಗೂಡಿ ವಿಷ್ಣುಪಾದೋದ್ಭವೆಗೆ ಸರಿಯೆನಿಸಿ ಗೋಪಾಲ ಕೃಷ್ಣವಿಠ್ಠಲನ ಬಹುನಿಷ್ಠೆಯಿಂ ಧ್ಯಾನಿಸುವೆ 5
--------------
ಅಂಬಾಬಾಯಿ
ಗೋಪಾಲಕೃಷ್ಣರಾಯ ತಾಪತ್ರಯಗಳೆಲ್ಲ ನೀ ಪರಿಹರಿಸು ಜೀಯ್ಯಾ ಪ ವಿದ್ಯಾಶ್ರೀ ಸಿಂಧುತೀರ್ಥ ಶುದ್ಧ ಪದ್ಧತಿಯಿಂದ ಶುದ್ಧ ಪೂರ್ವಕ ನಿನ್ನ ಭಜಿಪೆನು ಅನುದಿನ ಮುದ್ದುಮೋಹನ ನೀನು ತಿದ್ದಿ ಸರ್ವರ ಹೃದಯ ಬದ್ಧನಾಗಿರುತಿ ಪ್ರಸಿದ್ಧ ಮೂರುತಿ ವೇಣು 1 ಸುರಪನ ಗರ್ವವ ಹರಣವ ಮಾಡಿ ನೀ ವರವಿತ್ತೆ ಕಾಳಿಂಗ ಉರಗನಿಗೆ ಸುರರ ವೃಂದಗಳೆಲ್ಲ ಪೊರೆವುತ ಸರ್ವದಾ ವರ ಕಲ್ಪತರುವೆಂದು ಮೆರೆಯುವಿ ಧರೆಯೊಳು 2 ಗಿರಿಯನು ಪೊತ್ತು ನೀ ಪೊರೆದಿಹ ತುರುಗಳ ಮರೆಯೋದು ಯನ್ನನು ಸರಿಯೆನೊ ಹರಿಯೆ ಶರಣ ರಕ್ಷಕ ಬೇಗ ಕರುಣಾಳು ಕಾಯಯ್ಯ ಶ್ರೀವತ್ಸಾಂಕಿತನಾದ ವರಜಾರಚೋರ ವೇಣು 3
--------------
ಸಿರಿವತ್ಸಾಂಕಿತರು
ಗೋಪಿ ಇವನು ನಿನ್ನಾ ಪ ಜಗವ ನಿರ್ಮಿಸಿ ಪಾಲಿಸಿ ಅಳಿಸುವ ಅಗಣಿತ ಸುಗುಣಾ ಭರಣನೆ ಇವನು ಅ.ಪ ಬೆಣ್ಣೆಯ ಕದ್ದನು ಸಣ್ಣವನಿಹ ಬಹು ಚಿಣ್ಣರ ಕೂಡುತ ಗೋಗಣ ಕಾಯುವ ಮನ್ಮನ ಪುಥ್ಥಳಿ ಕಳಿಸುವದಾಗದು ಎನ್ನುವ ನುಡಿಗಳ ಬದಿಗಿಡು ತಾಯಿ ಉಣ್ಣುತ ಉಣ್ಣುತ ಮೊಲೆಯನು ಕೊಂದಿಹ ಉನ್ನತ ರಕ್ಕಸಿ ಪೂತಣಿಯನ್ನಿವ ಮಣ್ಣನು ಕಂಡರು ಕಂಸನದೂತರು ಪೂರ್ಣಾನಂದನು ಸರಿ ಇವನಮ್ಮ 1 ಜಾರ ಚೋರ ಸುಕುಮಾರನು ಸುಂದರ ನಾರೇರ ವಲಿಸಿ ಸೇರಿದ ನಿಶಿಯಲಿ ಪೋರನೆಂಬ ಮನ ದೂರವಗೈದುಗ ಭೀರ ಮಹಿಮ ಜಗ ಸಾರನೆಂದರಿಯೆ ಭಾರಿಗಿರಿಯನೆತ್ತಿ ಊರಿಗೆ ಊರನು ಸೇರಿಸಿ ಪೊರೆದಿಹಪಾರಮಹಿಮ ಜಂ ಭಾರಿದರ್ಪಹರ ಪೋರನೆ ಬಿಡುಬಿಡು ನಿಗಮ ಸಂಚಾರನೆ ಖರೆಯೆ 2 ಕಾಲ್ಗಳು ಸೋಕಲು ಶಕಟನು ಬಿದ್ದನು ಶೀಳುತ ಕೊಕ್ಕನು ಬಕನಂ ಕೊಂದನು ಕಾಳಿಯ ತುಳಿಯುತ ಗರ್ವವ ನಿಳಿಸಿದ ಲೀಲಾಜಾಲದಿ ಜ್ವಾಲೆಯ ನುಂಗಿದ ಬಾಲರು ಕೇಳಲು ಆಲಯತೋರಿದ ಪಾಲಿಸಿ ವರುಣನ ತಂದೆಯ ಕಂದನ ಲೋಲನೆ ಸರಿ ಜಗಮೂಲನು ಕೇಳೆ 3 ನೀರಜ ನಾಭಗೆ ಗೊಲ್ಲತಿಯ ಗಣ ಬೀರಲ್ ಸಾಧ್ಯವೆ ಮೋಹವ ನೆಂದಿಗು ಶ್ರೀರತಿದಾಯಕ ಕೊಳ್ಳುವನೇ ರತಿ ಭವ ತಾರಕ ಶುಭ ಶೃಂಗಾರ ಪೂರ್ಣ ಪರಿವಾರದಭೀಷ್ಠವ ಖರೆ ಭೂರಿದಯಾಮಯ ನಾರಾಯಣನಿವ ದೋಷ ವಿದೂರ 4 ಮೆಲ್ಲಗೆ ಬಾಯೊಳು ಎಲ್ಲವ ತೋರಿದ ಮಲ್ಲನು ಸರ್ವರ ವಲ್ಲಭ ಸಿದ್ಧವು ಗೊಲ್ಲನ ವೇಷದಿ ಇಲ್ಲಿಹನಮ್ಮ ಇಲ್ಲವೆ ಸಮರಿವಗೆಲ್ಲಿಯ ಸತ್ಯ ಮಲ್ಲರ ಮರ್ದಿಸಿ ಕೊಲ್ಲುತ ಕಂಸನ ನಿಲ್ಲಿಸಿ ಧರ್ಮವ ಕಾಯುವ ನಮ್ಮ ಬಲ್ಲಿದ “ಶ್ರೀಕೃಷ್ಣವಿಠಲ” ಬೇಗನೆ ನಿಲ್ಲಿಸಿ ಕೊಳ್ಳದೆ ಕಳುಹೇ ತಾಯಿ 5
--------------
ಕೃಷ್ಣವಿಠಲದಾಸರು
ಗೋಪಿ ದಾನವ ಕೋರುವಿ ಎಂಥಾ ಕೂಸಮ್ಮ ಶ್ರೀ- ಕಾಂತ ಸುಜನಮಾನಸಂತರಂಗದಿ ನಿತ್ಯ ನಿಂತು ನಲಿವ ಕೃಷ್ಣ ಪ. ಕ್ಷೀರ ವಾರಿಧಿಯಲ್ಲಿದ್ದನಾದರು ಬೆಣ್ಣೆ ಕ್ಷೀರವ ಕದ್ದು ಮೆದ್ದ ತೋರುವ ತತ್ವ ಶುದ್ಧ ಆದರು ಬಹು ಕ್ರೂರ ರಕ್ಕಸರ ಗೆದ್ದ ನೀರಜಾಲಯ ರಮಣ ಗೋಕುಲ ನಾರಿಯರ ಮೇಲ್ ಬಿದ್ದು ರಮಿಸಿದ ವಾರಿಜಾಸನ ವಂದ್ಯ ಸುರವರ ವೈರಿ ಶಕಟನ ಕಾಲಲೊದ್ದ 1 ಸಂಸಾರಾರ್ಣವ ತಾರಕನಾದರು ಪಾಂಡು- ವಂಶ ರಕ್ಷಣಕಾರಕ ಹಂಸಾದ್ಯ ಸುರಮಾರಕನಾದರು ನಾನಾ ಹಿಂಸಾದೋಷ ನಿವಾರಕ ಕಂಸಮರ್ದನ ವೈನತೇಯ ಶು- ಪಾದ ಕಮಲ ತಿ- ಲಾಂಶ ದೋಷರಹಿತ ಗೋಪಾ- ಲಾಂಶವೇರಿ ವಿನೋದಗೊಳುತಿಹ 2 ಶುದ್ಧ ಪೂರ್ಣಾನಂದ ಸುಜನಾರ್ತಿವಾರÀ ನಿ- ಷಿದ್ಧ ಕಲುಷದೂರಾ ಕ್ರುದ್ಧ ಖಳವಿದಾರ ಕಿಂಕರ ಪರಿಚರ ಸಿದ್ಧಾಂತ ಶ್ರುತಿ ಶೇಖರಾ ಬುದ್ಧ ರೂಪದಿ ಭೂತಪತಿಗೆ ಸ- ಮೃದ್ಧಿ ಜಯಪಾಲಿಸಿ ಸುರೋತ್ತಮ ಸಿದ್ಧವಂದಿತ ಶೇಷಗಿರಿಯೊಳ- ಗಿದ್ದು ದಾಸರನುದ್ಧರಿಸುತಿಹ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗೋಪಿ ಹಾಡಿ ದಣಿಯಳೂ ಪ ನೋಡಿ ಹಾಡಿ ಹೊಗಳಿ ಕೃಷ್ಣಗೆ ಮಾಡಿ ಮಾಡಿ ಸಿಂಗರವನು ಅ.ಪ ಮಣ್ಣತಿಂದು ಚಪ್ಪರಿಸುವ ಚಿಣ್ಣನೆಡೆಗೆ ಓಡಿಬಂದು ಸಣ್ಣಬಾಯ ಬಿಡಿಸಿ ವಿಶ್ವವ ಕಣ್ಣಿನಿಂದ ಕಂಡು ನಲಿದು 1 ವಿಕಳೆಯಸುವ ಹೀರಿ ಕುಣಿದು ಶಕಟಖಳನನೊದ್ದು ಕೊಂದು ಬಕನ ಸೀಳಿ ಫಣಿಯ ತುಳಿದ ವಿಕಸಿತಾಂಗನ ಹಾಡಿ ಹೊಗಳಿ 2 ಗಿರಿಯನೆತ್ತಿ ಬೆರಳಿನಿಂದ ಕರದಮುರಳಿನಾದದಿಂದ ಧರೆಯ ದಿವಿಯಗೈದ ಮಾಂಗಿರಿಯರಸರಂಗನಂಗವ ನೋಡಿ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋಪಿಯ ಕಂದ ಇಗೋ ಬಂದ ತಾಪಸರೆಡೆಯಿಂದ ಗೋವಿಂದ ಪ ಆಪನ್ನರ ಕರೆ ಕೇಳಿಸಿದಾಕ್ಷಣ ಗೋಪಿಯರೆಡೆಯಿಂದ ಪರಿಪರಿದೋಡಿ ಅ.ಪ ಹಣೆಯ ಕಸ್ತೂರಿಯು ಥಳಥಳಿಸುತಿರೆ ಮಣಿ ಮಾಲೆಗಳೆಲ್ಲಾ ಮಿನುಗಾಡುತಿರೆ ಕಿಣಿ ಕಿಣಿ ನಾದದ ಗೆಜ್ಜೆ ನುಲಿಯುತಿರೆ ಫಣಿಪತಿಶಯನ ಮಾಂಗಿರಿಯೆಡೆಯಿಂದ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋವಿಂದ ಗೋವಿಂದ ಗೋಕುಲಾನಂದ ದೇವೇಶ್ವರಾನಂದ ಪಾದಾರವಿಂದ ಪ ಲಾವಣ್ಯ ಪರಿಪೂರ್ಣ ಸಚ್ಚಿದಾನಂದ ಶ್ರೀವೇಣುಗೋಪಾಲ ಶೌರೇ ಮುಕುಂದ ಅ.ಪ ನೀನೇ ಗತಿ ನೀನೇ ಮತಿ ನೀನೆನ್ನ ಪ್ರೇಮಾ ನೀನೆನ್ನ ತಾಯ್ತಂದೆ ಲೋಕಾಭಿರಾಮಾ ನೀನೆನ್ನ ಕರುಣದಲಿ ಕಾಯೋ ಶ್ರೀರಾಮ 1 ಮಂಗಳಾಂಗನು ನೀನು ಕಮಲಾಯತಾಕ್ಷ ಮಂಗ ಮೂಢನು ನಾನು ಸಿರಿದೇವಿ ಪಕ್ಷ ಶೃಂಗಾರ ಪೂರ್ಣನೀ ಕಾಮ್ಯಾರ್ಥದಕ್ಷ ಮಾಂಗಿರಿಯ ರಂಗ ಭಕ್ತಾಳಿ ಸಂರಕ್ಷ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಚಂಚಲಿಸಲು ಕೊಡದಿರು ನೀನೆನ್ನ ಮನಕೆ ಶ್ರೀಹರಿಯೇ ಪ ವಂಚಿಸುತಿಹುದೀ ಮನವು ಸ್ಥಿರಗೊಳಿಸಲರಿಯೇ ಅ.ಪ. ನಿನ್ನ ಪದದಿ ಏನಿರಿಸೆ ಇನ್ನು ಭಜಿಸಬೇಕೆಂದರೆಭಿನ್ನ ದೆಸೆಗೆ ಓಡಿಸದೆ ಅನ್ಯವನ್ನೆ ಚಿಂತಿಸುವುದು 1 ಕಡಲ ಕಡಿಯುವಾಗ ಗಿರಿಯು ನಡುಗದಂತೆ ಗಟ್ಟಿ ನಿಂತುಹಿಡಿದ ತೆರದೊಳಡಲ ಹೊಕ್ಕು ಜಡಿದು ಎನ್ನ ಮನದಿ ನಿಂದು 2 ಸದಾ ಭಜಿಸುವಂತೆ ಮಾಡೋ ಗದುಗು ವೀರನಾರಾಯಣ 3
--------------
ವೀರನಾರಾಯಣ
ಚನ್ನಕೇಶವ ಇನ್ನೇನಿನ್ನೇನಿನ್ನು ಯನಗಿನ್ನೇನಿನ್ನೇನಿನ್ನು ಪ. ಚನ್ನಕೇಶವನಿವನನ್ನು ಹೃದಯದೊಳ್ ಚೆನ್ನಾಗಿ ನೆಲಸಿರಲಿನ್ನೇನ ಬೇಡುವೆ 1 ಭುವಿಜಾತೆಯೆನ್ನ ಮಾತೆ - ಭುವಿನಾಥನೆನ್ನ ತಾತ ಇವರೆನ್ನೊಳಿರುತಿರೆ ಭವಕ್ಲೇಶ ಪರಿದಿರೆ 2 ಅಂಡಜವಾಹನಾಖಂಡಲಾರ್ಚಿತನ ಪುಂಡರೀಕಾಕ್ಷನ ಕಂಡು ಕೊಂಡಾಡಿದೆ 3 ಧರೆಯೊಳಧಿಕ ಶೇಷಗಿರಿಯೊಳು ನೆಲಸಿರ್ಪ ವರದ ಶ್ರೀನರಹರಿ ವರದನೆನ್ನೊಳಿರೆ 4
--------------
ನಂಜನಗೂಡು ತಿರುಮಲಾಂಬಾ
ಚರಣಯುಗವ ತೋರೋ ಪ ಶರಣರ ಪೊರೆಯುವ ಕರುಣಿಗಳರಸನೆ ನಿರುತವು ನಿನ್ನನೆ ನೆರೆನಂಬಿದೆ ಹರಿ ಅ.ಪ ದಿಕ್ಕು ನೀನೆ ಎಂದು ನಂಬಿದೆನಕ್ಕರಿಂದ ಬಂದು ತಕ್ಕುದೇನು ಘನ ರಕ್ಕಸವೈರಿಯೆ 1 ಇಷ್ಟದೇವನಾರೋ ಮನಸಾಭೀಷ್ಟವ ಕೊಡುಬಾರೋ ಕೃಷ್ಣಮೂರ್ತಿ ನೀಂ ದೃಷ್ಟಿಸು ನಮ್ಮನು2 ಕೇಣವ್ಯಾಕೋ ಹರಿಯೆ ಕಣ್ಣಲಿ ಕಾಣು ಬಾರೋ ದೊರೆಯೇ ಕಾಣೆನಿನಗೆ ಸರಿ ಜಾಣತನದಿ ಹರಿ 3 ವಾರಿಧಿಕೃತಶಯನ ವಿಕಸಿತ ವಾರಿಜದಳನಯನ ಕ್ಷೀರದೊಳದ್ದುನೀ ನೀರೊಳಗದ್ದು ಕಂ ಸಾರಿ ನಿನ್ನನೆ ಸಾರಿದೆ ನರಹರಿ 4 ಧರೆಯೊಳಧಿಕವಾದ ಶ್ರೀ ಪುಲಿಗಿರಿಯೊಳು ನೆಲೆಯಾದ ವರದವಿಠಲ ದೊರೆ ದಯಾನಿಧೆ 5
--------------
ವೆಂಕಟವರದಾರ್ಯರು
ಚಾಮುಂಡೇಶ್ವರಿ ಚಾಮೇಂದ್ರನೃಪನನ್ನು ಪ್ರೇಮದಿಂ ರಕ್ಷಿಸಮ್ಮ ಪ ಜೀಮೂತಶ್ಯಾಮಳೆ ಕೋಮಲಶುಭಗಾತ್ರೆ ಕಾಮಿತ ಫಲದಾಯಕಿ ಕಲ್ಯಾಣಿ ಅ.ಪ. ನಿನ್ನ ಸನ್ನಿಧಿಗೆ ನಾ ಬಂದು ಪ್ರಾರ್ಥಿಸೆ ಪ್ರ ಸನ್ನಳಾಗಿ ನೃಪನ ರನ್ನದ ಸಿಂಹಾಸನವೇರಿಸಿ ಎನ ಗುನ್ನತೋನ್ನತವಾದಾನಂದವನಿತ್ತೆ 1 ಆಯುರಾರೋಗ್ಯ ರಾಜೈಶ್ವರ್ಯ ಪುತ್ರರಿಂ ದಾನಂದವನೈದಿ ನಾಯಕಮಣಿಯಂದದಿಂ ನರನಾಥರ್ಗೆ ನಾಥನಾಗಿ ನಲಿಯುತ್ತಲಿರಲಿ ಸದಾ2 ಗಿರಿಯೊಳುತ್ತಮ ಮಹಾಬಲಗಿರಿಯೊಳು ನಿಂದು ಕರುಣಾರಸವೆರಸಿ ಪೊರೆವೆ ನಾರಾಯಣದಾಸನ ಬಿನ್ನಪವ ತಿರುಪತೀಶನ ಸೋದರಿ ಶುಭವರ್ಧಿನಿ 3
--------------
ನಾರಾಯಣದಾಸರು
ಚಾಮುಂಡೇಶ್ವರಿ ಚಾಮೇಂದ್ರನೃಪನನ್ನುಪ್ರೇಮದಿಂ ರಕ್ಷಿಸಮ್ಮ ಪಜೀಮೂತಶ್ಯಾಮಳೆ ಕೋಮಲಶುಭಗಾತ್ರೆಕಾ'ುತ ಫಲದಾಯಕಿ ಕಲ್ಯಾಣಿ ಅ.ಪ.ನಿನ್ನ ಸನ್ನಿಧಿಗೆ ನಾ ಬಂದು ಪ್ರಾರ್ಥಿಸೆ ಪ್ರಸನ್ನಳಾಗಿ ನೃಪನರನ್ನದ ಸಿಂಹಾಸನವೇರಿಸಿ ಎನಗುನ್ನತೋನ್ನತವಾದಾನಂದವನಿತ್ತೆ 1ಆಯುರಾರೋಗ್ಯ ರಾಜೈಶ್ವರ್ಯ ಪುತ್ರರಿಂದಾನಂದವನೈದಿನಾಯಕಮಣಿಯಂದದಿಂ ನರನಾಥರ್ಗೆನಾಥನಾಗಿ ನಲಿಯುತ್ತಲಿರಲಿ ಸದಾ 2ಗಿರಿಯೊಳುತ್ತಮ ಮಹಾಬಲಗಿರಿಯೊಳು ನಿಂದುಕರುಣಾರಸವೆರಸಿಪೊರೆವೆ ನಾರಾಯಣದಾಸನ ಬಿನ್ನಪವತಿರುಪತೀಶನ ಸೋದರಿ ಶುಭವರ್ಧಿನಿ 3
--------------
ನಾರಾಯಣದಾಸರು
ಚಾಮುಂಡೇಶ್ವರಿ ಪಾಲಿಸೆ ನಮ್ಮಚಾಮರಾಜೇಂದ್ರ ನೃಪಾಲನ ನಿರುತವು ಪಇಂದ್ರಾದಿ ದೇವರ್ಕಳೆಲ್ಲ ನಿನ್ನಂಘ್ರಿಯಕುಂದ ಮಂದರಾದಿ ಕುಸುಮರತ್ನಗಳನ್ನುತಂದು ಪೂಜಿಸಲಾಗ ಪರಿತುಷ್ಟಳಾಗಿ ನೀನಂದು ಕುಂದದ ವರಗಳನಿತ್ತು ಸಲ'ದೆ 1ಇಳೆಯೊಳು ಕೃಷ್ಣೇಂದ್ರ ನಿನ್ನ ಪೂಜೆಯ ಭಕ್ತಿಯಲಿ ಗೈದು ವರಪುತ್ರನನ್ನಾತ ಪಡೆದನುಒಲಿದು ನೀನಿತ್ತ ಪುತ್ರನು ಸುಖದಿಂದೀ ಭೂವಲಯವನಾಳಿಕೊಂಡಿರುವಂತೆ ವರ'ತ್ತು 2ಶರಣಾಗತಜನ ರಕ್ಷಣೆಗೈಯುತವರ ಮಹಾಬಲಗಿರಿಯೋಳು ನಿಂದು ಮೆರೆಯುವೆತರಳ ನಾರಾಯಣದಾಸನ ಬಿನ್ನಪವಕರುಣದಿಂ ಸಲಹು ವೆಂಕಟರಮಣ ಸೋದರಿ 3
--------------
ನಾರಾಯಣದಾಸರು