ಒಟ್ಟು 2968 ಕಡೆಗಳಲ್ಲಿ , 112 ದಾಸರು , 1882 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೆಟ್ಟಿತು ಕೆಲಸವೆಲ್ಲ - ಲೋಕದಿ ಕಾಮನಟ್ಟುಳಿದಶನವಾಯಿತು ಪ.ಬಟ್ಟೆ ತಪ್ಪಿ ಮುಂದೆ ಕೆಟ್ಟು ಕರ್ಮಿಯಾಗಿಬಿಟ್ಟು ಮುಂದಣ ಪಥವ - ಹೇ ದೇವಾ ಅಪಸತ್ಯ ಕಾಮ ಕರ್ಮವು ಧರ್ಮದ ಬಲಮತ್ತೆ ಅಡಗಿಹೋಯಿತುಎತ್ತ ನೋಡಲು ನೀಚವೃತ್ತಿಯೆತುಂಬಿಅತ್ಯಂತ ಪ್ರಬಲವಾಯ್ತೋ ಹೇ ದೇವಾ 1ಹೊತ್ತುಹೊತ್ತಿಗೆ ಹಲವು ಲಂಪಟತನದಲಿಚಿತ್ತ ಚಂಚಲವಾಯಿತುಸತ್ತು ಹುಟ್ಟುವ ಸುಳಿಯಲ್ಲದೆ ಮತ್ತೊಂದುಗೊತ್ತು ಇಲ್ಲದೆ ಹೋಯಿತ್ತೋ ಹೆ ದೇವಾ 2ಪೇಳುವುದೇನಿನ್ನು ದುರ್ಜನರ ಸಂಗದೋಲಾಟ ಸೊಗಸಾಯಿತುಕೀಳು ಮೇಲು ಮೇಲು ಕೀಳಾಗಿ ನಡೆಯುವಕಾಲವೆಗ್ಗಳವಾಯಿತೋ ಹೇ ದೇವಾ3ಆಳುವ ಅರಸರಿಗೆಲ್ಲ ಕಾಂತನದಾಸೆಮೇಲು ಮೇಲಾಯಿತಯ್ಯನೀಲ ಮೇಘಶ್ಯಾಮ ನಿನ್ನಾಳೆಂಬರಿಗೆಕೂಳು ಹುಟ್ಟದೆ ಹೋಯಿತೋ ಹೇ ದೇವಾ 4ಅರಿಷಡ್ವರ್ಗದಲಿ ಸಿಲುಕಿ ಸುಜ್ಞಾನದಅರಿವು ಇಲ್ಲದೆ ಹೋಯಿತುಕರಣಾಳು ಶ್ರೀ ಪುರಂದರವಿಠಲನೆ ನಿನ್ನಸ್ಮರಣೆಯಿಲ್ಲದೆ ಹೋಯಿತೋ ಹೇ ದೇವಾ 5
--------------
ಪುರಂದರದಾಸರು
ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರು ಮನವೆಕ್ಲೇಶ ಪಾಶಗಳ ಹರಿದು ವಿಳಾಸದಿ ದಾಸರ ನುತಿಗಳ ಪೊಗಳುತ ಮನದೊಳು ಪ.ಮೋಸದಿ ಜೀವಿಯಘಾಸಿ ಮಾಡಿದ ಫಲಕಾಶಿಗೆ ಹೋದರೆ ಹೋದೀತೆದಾಸರ ಕರೆ ತಂದು ಕಾಸು ಕೊಟ್ಟ ಫಲ ಲೇಸಾಗದೆ ಸಸಿನಿದ್ದೀತೆಭಾಷೆಯ ಕೊಟ್ಟು (ನಿ) ರಾಸೆಯ ಮಾಡಿದಫಲ ಮೋಸವು ಮಾಡದೆ ಬಿಟ್ಟೀತೆಶಶಿವದನೆಯ ಅಧರಾಮೃತ ಸೇವಿಸಿ ಸುಧೆಯೆಂದಡೆ ನಿಜವಾದೀತೆ 1ಕನಕದ ಪಾತ್ರದ ಘನತೆಯ ಪ್ರಭೆಗಳು ಶುನಕನಮನಸಿಗೆ ಸೊಗಸೀತೆಹೀನ ಮನುಜನಿಗೆ ಜಾÕನವ ಭೋಧಿಸೆ ಹೀನ ವಿಷಯಗಳು ಹೋದಿತೇಮಾನಿನಿ ಮನಸು ನಿಧಾನವು ಇಲ್ಲದಿರೆಮಾನಭಿಮಾನ ಉಳಿದೀತೆಭಾನುವಿಕಾಸನ ಭಜನೆಯ ಮಾಡದ ದೀನಗೆ ಮುಕುತಿಯು ದೊರಕೀತೆ 2ಸತ್ಯದ ಧರ್ಮವ ನಿತ್ಯವು ಭೋಧಿಸೆ ತೊತ್ತಿನ ಮನಸಿಗೆ ಸೊಗಸೀತೆತತ್ವದ ಅರ್ಥ ವಿಚಿತ್ರದಿ ಪೇಳಲು ಕತ್ತೆಯ ಮನಸಿಗೆ ತಿಳಿದೀತೆಪುತ್ಥಳಿ ಬೊಂಬೆಯ ಚಿತ್ರದಿ ಬರೆದಿರೆ ಮುತ್ತುಕೊಟ್ಟರೆ ಮಾತಾಡೀತೆಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ ಅರ್ತಿಯುತೋರದೆ ಇದ್ದೀತೆ 3ನ್ಯಾಯವ ಬಿಟ್ಟು ಅನ್ಯಾಯ ಪೇಳುವ ನಾಯಿಗೆ ನರಕವು ತಪ್ಪೀತೆತಾಯಿ ತಂದೆಗಳ ನೋಯಿಸಿದ ಅನ್ಯಾಯಿಗೆ ಮುಕ್ತಿಯು ದೊರಕೀತೆಬಾಯಿ ಕೊಬ್ಬಿನಿಂದ ಬೈಯುವ ಮನುಜಗೆ ಘಾಯವುಆಗದೆ ಬಿಟ್ಟೀತೆಮಾಯಾವಾದಗಳ ಕಲಿತಾ ಮನುಜಗೆ ಕಾಯಕಷ್ಟ ಬರದಿದ್ದೀತೆ 4ಸಾಧು ಸಜ್ಜನರನು ಬಾಧಿಸಿದಾ ಪರವಾದಿಗೆ ದೋಷವು ತಪ್ಪೀತೆಬಾಧಿಸಿ ಬಡವರ ಅರ್ಥವ ಒಯ್ವವಗೆ ವ್ಯಾಧಿ ರೋಗಗಳು ಬಿಟ್ಟೀತೆಬದ್ದ ಮನುಜ ಬಹು ಕ್ಷುದ್ರವ ಕಲಿತರೆಬುದ್ದಿ ಹೀನನೆಂಬುದು ಹೋದೀತೆಕದ್ದು ಒಡಲ ತಾ ಪೊರೆವನ ಮನೆಯೊಳಗೆಇದ್ದುದು ಹೋಗದೆ ಇದ್ದೀತೆ 5ಅಂಗದ ವಿಷಯಂಗಳನು ತೊರೆದಾತಗೆ ಅಂಗನೆಯರಬಗೆ ಸೊಗಸೀತೆಸಂಗ ಸುಖಂಗಳು ಹಿಂಗಿದ ಮನುಜಗೆ ಶೃಂಗಾರದ ಬಗೆ ಸೊಗಸೀತೆಇಂಗಿತವರಿಯುವ ಸಂಗ ಶರೀರ ವಜ್ರಾಂಗಿಯಾಗದೆ ಇದ್ದೀತೆಮಂಗಳ ಮಹಿಮನ ಅಂಘ್ರಿಯ ಕಾಣದ ಭಂಗಗೆ ಮುಕ್ತಿಯು ದೊರಕೀತೆ 6ಕರುಣಾಮೃತದಾ ಚರಣವ ಧರಿಸಿದ ಪರಮಗೆ ಸರಳಿ ಬಂದೀತೆಕರಣ ಪಾಶದುರವಣೆ ತೊರೆವಾತಗೆ ಶರಣರ ಪದ್ಧತಿ ತಪ್ಪೀತೆಆರುಶಾಸ್ತ್ರವನು ಮೀರಿದ ಯೋಗಿಗೆತಾರಕ ಬ್ರಹ್ಮವು ತಪ್ಪೀತೆವರದ ಪುರಂದರವಿಠಲನ ಚರಣಸ್ಮರಿಸುವವನಿಗೆ ಸುಖ ತಪ್ಪೀತೆ * 7
--------------
ಪುರಂದರದಾಸರು
ಕೇಳಲೊಲ್ಲನೆ ಎನ್ನ ಮಾತನು-ರಂಗ -|ಕಾಳಿಮರ್ದನನಿಗೆ ಪೇಳೇ ಗೋಪಮ್ಮ ಬುದ್ಧಿ ಪಬಿಟ್ಟ ಕಂಗಳ ಮುಚ್ಚಲೊಲ್ಲನೆ-ಬೇಗ- |ಬೆಟ್ಟಕೆ ಬೆನ್ನೊಡ್ಡಿ ನಿಂತನೆ ||ಸಿಟ್ಟಿಂದೆ ಕೋರೆಯ ತೋರ್ಪನೆ-ಬೇಗ-|ಗಟ್ಟಿ ಉಕ್ಕಿನ ಕಂಬ ಒಡೆದು ಬಂದನೆ ರಂಗ 1ಮೂರಡಿ ಭೂಮಿಯ ಬೇಡಿದನೆ-ನೃಪರ-|ಬೇರ ಕಡಿಯಲು ಕೊಡಲಿ ತಂದನೆ |ನಾರಸೀರೆಯನುಟ್ಟುಕೊಂಡನೆ-ಬೇಗ-|ಚೋರತನದಿ ಹರವಿ ಹಾಲ ಕುಡಿದನಮ್ಮ 2ಬತ್ತಲೆ ನಾರಿಯರನಪ್ಪಿದ-ಬೇಗ-|ಉತ್ತಮ ಅಶ್ವವ ಹತ್ತಿದ ||ಹತ್ತವತಾರವನೆತ್ತಿದ-ನಮ್ಮ-|ಸತ್ಯಮೂರುತಿ ಪುರಂದರವಿಠಲರಾಯನು 3
--------------
ಪುರಂದರದಾಸರು
ಕೊಂಡಾಡಲಳವೆ ಕರುಣಾನಿಧಿ ಕಾವನದಂಡ ಸಂಜಿತ ಗುರುಸತ್ಯನಾಥರ ಕೀರ್ತಿ ಪ.ಶ್ರೀ ವಾಸುದೇದ ತಾ ಭಾವಿಸಿ ಚಿತ್ತದಿಭೂವಲಯಕೆ ಸುಜನಾವಳಿಗಾಶ್ರಯವೀವೆನೆನುತ ಶುಭದೇವವೃಕ್ಷವನಟ್ಟೆಈವರ ಪರಮಹಂಸಾವಲಂಬನ ತಾಳ್ದುಶ್ರೀ ವಾಯುಮತದಿ ತತ್ವವೆ ಲಕ್ಷಿಸುವ ಪ್ರೇಕ್ಷಾವಂತರಾಗಿಹ ಜೀವಕೋಟಿಗಳ ಕೃಪಾವಲೋಕನದೊಳಿಟ್ಟ ಅಪೇಕ್ಷಿತಭಾವಾರ್ಥಗಳನೆ ಕೊಟ್ಟು ನಂಬಿದಸೇವಕರ್ಗಭಯವಿಟ್ಟ ಗುರುರಾಯನ 1ಭಾನುತೋರುವ ಮುನ್ನೆ ಸ್ನಾನವ ಮಾಡಿ ಸುಮ್ಮಾನದಿಂದಲಿ ನೇಮ ಮೌನದೊಳಿದ್ದು ಶ್ರೀಮಾನಾಥನಂಘ್ರಿಯ ಮಾನಸದಲಿ ದೃಢಧ್ಯಾನದಿಂ ಬಲಿದುಗೀರ್ವಾಣಭಾಷ್ಯಾಮೃತಪಾನವ ಜನರಿಗೆ ಸಾನುರಾಗದಲಿತ್ತುನಾನಾ ತತ್ವಾರ್ಥ ವ್ಯಾಖ್ಯಾನವ ಜನರಿಗೆತಾನಂದು ಬೋಧಿಸಿದತಾಮಸಜ್ಞಾನವನೋಡಿಸಿದ ಆ ಕಾಮಧೇನುವೆನಿಸಿ ಎಸೆದ ಗುರುರಾಯನ 2ಭೇದವರ್ಜಿತ ಮತ್ತವಾದ ಕುಂಭಿಯಕುಂಭಭೇದಕಸಿಂಗಹಲಾಧಾರಿಹರಿಸಗುಣೋದರ ಸಾಕಾರಮಾಧವಹರನುತಪಾದನೆನುತಸೂತ್ರವೇದ ಪುರಾಣದಿಸಾಧಿಸಿ ಕುತ್ಸಿತವಾದಿಗಳಪಾದಾಕ್ರಾಂತರ ಮಾಡಿ ಮೇದಿನಿಯೊಳು ಜಯನಾದಭೇರಿಯ ಹೊಯಿಸಿದ ಮುಕ್ತಿಯಸಾಧನ ತೋರಿಸಿದ ಭ್ರಷ್ಟಂಕುರೋದಯ ಮಾಣಿಸಿದ ಗುರುರಾಯನ 3ಕಾಲಕಾಲಕೆ ಧರ್ಮ ಪಾಲಿಸಿ ಯಾಚಕಜಾಲಕೆ ಮನ್ನಿಸಿ ಮೂಲ ಮಂತ್ರೋಪದೇಶಪೇಳಿ ಪೂತರ ಮಾಡಿ ಹಾಲು ಸಕ್ಕರೆ ತುಪ್ಪಹೋಳಿಗ್ಯನ್ನವನಿಕ್ಕಿ ಮೇಲೆ ದ್ರವ್ಯವನಿತ್ತುಪಾಲಿಸಿ ತಾಯಿತಂದೆಗಳ ಹಂಬಲ ಬಿಡಿಸಿ ಲೋಕದವರಿಗಭಿಲಾಷಾ ಪೂರ್ಣಾನುಕೂಲಚಿಂತಾಮಣಿಯ ಯತಿಕುಲಮೌಳಿಮಕುಟಮಣಿಯ ವಿರತಿಭಾಗ್ಯಶಾಲಿ ಸುಗುಣಖಣಿಯ ಗುರುರಾಯನ 4ಮಣ್ಣು ವನಿತೆಸತಿಹೊನ್ನಿನ ಬಯಕೆಯಘನ್ನತೆಜರಿದುಪಾವನ್ನಮಹಿಮನಾದಚೆನ್ನ ಸತ್ಯನಿಧಿ ತೀರಥನ್ನ ಕರೋದ್ಭವತನ್ನಾಕಷೆಂಬುವಭಿನ್ನವಚಂದ್ರಿಕೆಯನ್ನು ಪ್ರಕಾಶಿಸಿ ಪೂರ್ಣಚಂದ್ರಮನಂತೆಉನ್ನತ ಕಳೆಯುತ ಚಿನ್ಮಯ ವರದ ಪ್ರಸನ್ನ ವೆಂಕಟಾಧಿಪನ ಭಜಿಸಿನಿತ್ಯಧನ್ಯನೆನಿಸುತಿಪ್ಪನ ಸತ್ಯಾಭಿನವರನ್ನನ ಪೊರೆದÀಪ್ಪನ ಗುರುರಾಯನ 5
--------------
ಪ್ರಸನ್ನವೆಂಕಟದಾಸರು
ಕೋಲುಹಾಡುಕೋಲು ಕಾಮನ ಗೆದ್ದ ಕೋಲು ಮಾಯ್ಗಳನೊದ್ದಕೋಲು ಆನಂದಮುನಿ ಪಿಡಿದಿಹ ಕೋಲೆ ಪ.ತಮನೆಂಬುವನ ಕೊಂದು ಕಮಲಜನಿಗೆ ವೇದಕ್ರಮದಿಂದ ಕೊಟ್ಟು ಜಗವನು ಕೋಲೆಕ್ರಮದಿಂದ ಕೊಟ್ಟು ಜಗವನು ರಕ್ಷಿಸಿದವಿಮಲ ಶ್ರೀಮತ್ಸ್ಯಮನೆದೈವ ಕೋಲೆ1ಸುರಪನ ವಿಭವೆಲ್ಲ ಶರಧೀಲಿ ಮುಳುಗಿರೆಗಿರಿಗಹಿ ಸುತ್ತಿ ಕಡೆಯಲು ಕೋಲೆಗಿರಿಗಹಿ ಸುತ್ತಿ ಕಡೆಯಲುನಗಜಾರೆಧರಿಸಿದ ಶ್ರೀಕೂರ್ಮಮನೆದೈವ ಕೋಲೆ2ಹೊಂಗಣ್ಣಿನವನು ಭೂವೆಂಗಳನೆಳೆದೊಯ್ಯೆಮಂಗಳಮಹಿಮ ದಯದಿಂದ ಕೋಲೆಮಂಗಳ ಮಹಿಮ ದಯದಿಂದ ನೆಗಹಿದ್ಯಜ್ಞಾಂಗ ಶ್ರೀವರಾಹ ಮನೆದೈವ ಕೋಲೆ 3ಒಂದೆ ಮನದೊಳಂದು ಕಂದ ನೆನೆಯಲಾಗಬಂದವನಯ್ಯನ್ನೊದೆದನು ಕೋಲೆಬಂದವನಯ್ಯನ್ನೊದೆದನು ಅನಿಮಿತ್ತಬಂಧು ನರಹರಿಯು ಮನೆದೈವ ಕೋಲೆ 4ಎದುರಿಲ್ಲವೆನಗೆಂದು ಮದವೇರಿದವನ ತ್ರಿಪದ ಭೂಮಿ ಬೇಡಿ ಗೆಲಿದನು ಕೋಲೆಪದ ಭೂಮಿ ಬೇಡಿ ಗೆಲಿದಾ ತ್ರಿವಿಕ್ರಮಮುದದ ವಾಮನ ಮನೆದೈವ ಕೋಲೆ 5ಕುಜನರಳಿದು ಭಾಗ್ಯ ಸುಜನರಿಗೊಲಿದಿತ್ತನಿಜ ತಾತನಾಜÕ ಸಲಹಿದ ಕೋಲೆನಿಜ ತಾತನಾಜÕ ಸಲಹಿದ ಶುಭಗುಣದ್ವಿಜರಾಮ ನಮ್ಮ ಮನೆದೈವ ಕೋಲೆ 6ಕೌಸಲ್ಯೆ ಗರ್ಭದಿ ಜನಿಸಿದ ಕೃಪೆಯಲ್ಲಿಕೌಶಿಕಕ್ರತುವ ಕಾಯ್ದನು ಕೋಲೆಕೌಶಿಕಕ್ರತುವ ಕಾಯ್ದ ರಾವಣಾಂತಕಶ್ರೀ ಸೀತಾರಾಮ ಮನೆದೈವ ಕೋಲೆ 7ಗೋಕುಲದಲಿ ಬೆಳೆದುಪೋಕದನುಜರ ಅನೇಕ ಪರಿಯಲಿ ಸದೆದನು ಕೋಲೆ ಅನೇಕ ಪರಿಯಲಿ ಸದೆದ ಪಾಂಡವಪಾಲಶ್ರೀಕೃಷ್ಣ ನಮ್ಮ ಮನೆದೈವ ಕೋಲೆ 8ಮಿಥ್ಯಾವಾದಿಗಳಿಗೆ ಮಿಥ್ಯವನೆ ಕಲಿಸಿಸತ್ಯವಾದಿಗಳ ಪೊರೆದನು ಕೋಲೆಸತ್ಯವಾದಿಗಳ ಪೊರೆದನು ಅಜವಂದ್ಯಕರ್ತಬೌದ್ಧನು ಮನೆದೈವ ಕೋಲೆ9ಸ್ವಾಹಾ ಸ್ವಧಾಕಾರವು ಮಹಿಯೊಳಿಲ್ಲದಾಗೆಸುಹಯವೇರಿ ಕಲಿಯನು ಕೋಲೆಸುಹಯವೇರಿ ಕಲಿಯನೆಳೆದು ಕೊಂದಮಹಾಕಲ್ಕಿ ನಮ್ಮ ಮನೆದೈವ ಕೋಲೆ 10ಹತ್ತವತಾರದಿ ಭಕ್ತಜನರ ಹೊರೆದಮತ್ತಾವಕಾಲದಿ ರಕ್ಷಿಪ ಕೋಲೆಮತ್ತಾವ ಕಾಲದಿ ರಕ್ಷಿಪ ಪ್ರಸನ್ವೆಂಕಟಕರ್ತನ ನಂಬಿ ಸುಖಿಯಾದೆ ಕೋಲೆ 11
--------------
ಪ್ರಸನ್ನವೆಂಕಟದಾಸರು
ಕ್ಷೀರಸಾಗರದಲೆರಡೀರೈದು ಯೋಜನದ |ಮೇರೆಯಲಿ ವರತ್ರಿಕೂಟಾದ್ರಿ ಶೃಂಗತ್ರಯದಿ |ರಾರಾಜಿಸುವ ತಾಮ್ರ-ರಜತ-ಕಾಂಚನದಿಂದನಾರಾಯಣಾಂಶದಿಂದ ||ಪಾರಿಜಾತಾಂಭೋಜ ಬಕುಳ ಮಲ್ಲಿಗೆ ಜಾಜಿ |ಸೌರಭದಲಶ್ವತ್ಥಪೂಗಪುನ್ನಾಗಜಂ |ಬೀರತರುಗುಲ್ಮಶಾಖಾಮೃಗಗಳೆಸೆವಲ್ಲಿವಾರಣೀಂದ್ರನು ಮೆರೆದನು 2ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲ್ಲಿ |ಕಾನನದಿ ತೊಳಲುತ್ತ ಬೇಸಗೆಯ ಬಿಸಿಲಲ್ಲಿ |ತಾನು ನೀರಡಿಸಿ ಬಂದೊಂದು ಸರಸಿಯ ತಟಕೆಪಾನಾಭಿಲಾಷೆಯಿಂದ ||ನಾನಾಪ್ರಕಾರದಿಂ ಜಲಕ್ರೀಡೆಯಾಡುತಿರ |ಲೇನಿದೆತ್ತಣ ರಭಸವೆಂದುಗ್ರಕೋಪದಿಂ |ಒತ್ತಿ ಪಿಡಿದೆಳೆಯುತಿರೆ ಎತ್ತಣದಿನೇನೆನುತ |ಮತ್ತಇಭರಾಜನೌಡೊತ್ತಿ ನೋಡುತ್ತಂಘ್ರಿ |ಎತ್ತಿ ತಂದನು ತಡಿಗೆ ಮತ್ತೆ ನಡುಮಡುವಿನೊಳುಅತ್ತಲೇ ತಿರುಗೆನೆಗಳೆ||ಇತ್ತಂಡದಿಂತು ಕಾದಿದರು ಸಾವಿರ ವರುಷ |ಉತ್ತರಿಸಿತೇನೆಂಬೆ ಮತ್ತಾ ಗಜೇದ್ರಂಗೆ |ಸತ್ತ್ವ ತಗ್ಗಿತು ತನ್ನ ಮನದೊಳಗೆ ಚಿಂತಿಸಿತುಮತ್ತಾರು ಗತಿಯೆನುತಲಿ 4ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ |ದಿಂದ ದಿವ್ಯಜಾÕನ ಕಣ್ದೆರೆದು ಮನದೊಳರ |ವಿಂದನಾಭಾಚ್ಯುತ ಮುಕುಂದಮಾಧವಕೃಷ್ಣನಿಖಿಲ ಮುನಿವೃಂದವಂದ್ಯ ||ಇಂದಿರಾರಮಣ ಗೋವಿಂದ ಕೇಶವ ಭಕ್ತ |ಬಂಧು ಕರುಣಾಸಿಂಧು ತಂದೆ ನೀ ಗತಿಯೆನಗೆ |ಇಂದುಸಿಲ್ಕಿದೆನು ಬಲು ದಂದುಗದಮಾಯಾಪ್ರ-ಬಂಧಕನೆ ನೆಗಳಿನಿಂದ 5ಪರಮಾತ್ಮ ಪರಮೇಶ ಪರತತ್ತ್ವ ಪರಿಪೂಜ್ಯ |ಪರತರ ಪರಂಜೋತಿಪರಮಪಾವನಮೂರ್ತಿ |ಪರಮೇಷ್ಟಿಪರಬ್ರಹ್ಮಪರಮಪರಮಾಕಾಶ |ಪರಿಪೂರ್ಣ ಪರಮಪುರುಷ ||ನಿರುಪಮ ನಿಜಾನಂದ ನಿರ್ಲಯ ನಿರಾಕಾರ |ನಿರವಧಿಕನಿರ್ಗುಣನಿರಂಜನನಿರಾಧಾರ |ನಿರವದ್ಯನಿಸ್ಸಂಗ ನಿಶ್ಚಿಂತ ನಿಖಿಲೇಶಇರದೆ ನೀ ಸಲಹೆಂದನು 6ಇಂತೆನುತ ಮೂಚ್ರ್ಛೆಯಲಿ ಗುಪ್ತಕಂಠಸ್ವರದ |ಕಾಂತ ನಡುನೀರೊಳಗೆ ತೇಲಿ ಮುಳುಗುತಲಿರೆ ಅ- |ನೆಗಳ ಬಾಯನು ಚಕ್ರದಲಿ ಸೀಳಿ ಕರಿವರದ |ಒಗುವ ಕರಣದಲಿ ಮೈದಡಹಲ್ಕೆ ಗಜಜನ್ಮ |ತೆಗೆದುದಾಕ್ಷಣಕೆ ಮಣಿಮುಕುಟ - ಕುಂಡಲದಿಂದನಗಧರನು ಓಲೈಸಿದ ||ವಿಗಡದೇವಲ ಮುನಿಯ ಶಾಪದಲಿ ದಾರುಣಿಯೊ- |ಳಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ |ಮಗುಳಿಪುರವನು ಕಂಡು ನಿಜಗತಿಗೆ ಐದಿದಿನುಕಮಲಾಕ್ಷಮಿಗೆ ಮೆರೆದನು 8ಮಣಿಮುಕುಟಕುಂಡಲಪದಕಹಾರ ಕಡಗಕಂ- |ಕಣ ಕೌಸ್ತು ಭೊಜ್ವ ್ಜಲಾಂಗದವೈಜಯಂತಿಭೂ- |ಷಣ ಶಂಖ-ಚಕ್ರ-ಗದೆ-ಪದ್ಮ ಧರಿಸಿಹಹಸ್ತಪಣಿಯ ಕಸ್ತುರಿ ತಿಲಕದಾ ||ಝಣಝಣಿಪ ನೂಪುರದ ದಂತಪಂಕ್ತಿಯ ಕೃಪೇ- |ಕ್ಷಣದ ಸಿರಿಮೊಗದ ಪೀತಾಂಬರದ ಮೂರುತಿಗೆ |ಮಣಿದು ಜಂiÀi ಜಯಜಯಾಎಂಬ ಸುರನರರಸಂ- |ದಣಿಯಿಂದೆಹರಿಮೆರೆದನು 9ಹರಹರಿಎನುತ್ತಂಘ್ರಿಗೆರಗಲಿಭವರನನಾ- |ದರದಿಂದಲೆತ್ತುತಲಿ ಕೇಳ್ಮಗನೆ ನೀನೆನ್ನ |ವಿರಜಶರಪರಿಧಿಯಾ ಸರವನಹಿಪತಿಯನ್ನುಪರಜನ್ಮನೀ ಲಕುಮಿಯ ||ಪರಮೇಷ್ಟಿ-ಭವರ ಮನು-ಮುನಿಗಳನು ಧರಣಿಯನು |ಆವಾವನಿದನುದಯದಲ್ಲೆದ್ದು ಭಕ್ತಿಯಲಿ |ಭಾವಶುದ್ಧಿಯಲಿ ತಾ ಹೇಳಿಕೊಳುವನೊ ಅವನ- |ಘಾವಳಿಯ ಪರಿಹರಿಸಿ ಸುಙ್ಞÕನವೀವೆ ದೇ-ಹಾವಸಾನದಲೆನುತಲಿ ||ಶ್ರೀವಾಸುದೇವನಾಜಾÕನೆಸಿ ಗಜೇಂದ್ರ ಸಹಿ- |ತಾವಿಹಂಗಾಧಿಪನನೇರಿ ವೈಕುಂಠಕ್ಕೆ |ದೇವ ಬಿಜಯಂಗೈದಪುರಂದರವಿಠಲನ
--------------
ಪುರಂದರದಾಸರು
ಗಂಗಾಪಿತ ವೆಂಕಟ ಪರ್ವತನಿಲಯಕೌಸಲ್ಯತನಯಾ |ಮಂಗಳವಲ್ಲಭಭವಕರಕರೆಯ ಪರಿಹರಿಪುದು ತ್ವರಿಯಾ |ಅಂಗಜಜನಕನೆ ಸಂಗರಹಿತ ಸತ್ಸಂಗ ಕೃಪಾಬ್ಧಿ ವಿಹಂಗವಾಹನನೇ ಪಸ್ವಾಮಿಲಾಲಿಸುಯನ್ನಯ ಮನದುಸರ ನೀನಲ್ಲದಿತರರ |ಭೂಮಿಯೊಳ್ಕಾಣೆನೋ ಉದ್ಧರಿಸುವರನವನೀತಚೋರ |ಸಾಮಜದ್ರೌಪದಿ ಆ ಮುಚುಕುಂದ ಸುಧಾಮರ ಪೊರೆದ ತ್ರಿಧಾಮ ಮಹಾತ್ಮ 1ವಾಸುಕೀ ಶಯನ ದಯಾ ಸಂಪನ್ನ ನಾರಾಯಣ ನಿನ್ನ |ದಾಸರೊಳಗಾಡಿಸೊ ಸದ್ಗುಣ ಪೂರ್ಣ ಸಾರ್ವರಿಗೆ ಪ್ರಸನ್ನ |ಈಸಲಾರೆ ಈ ಸಂಸಾರಶರಧಿಕೈ ಸೋತಿತೆಲೋ ಪರಾಶರ ತನಯ 2ನಿತ್ಯಾನಂದ ನಿಗಮೋದ್ಧಾರ ಪೂತನೀ ಸಂಹಾರ |ಮೃತ್ಯುಂಜಯಸಖರವಿದರ ಗದಾಧರ ಸುಖಪಾರಾವಾರ|ಭೃತ್ಯವತ್ಸಲ ಸುರೋತ್ತಮ ಪಾರ್ಥನ ತೊತ್ತಿಗನಾದಿ ಸುಸತ್ಯ ಸಂಕಲ್ಪ ಗಂಗಾ3ಮಂದರಾಚಲ ಧರಿಸಿದ ಗೋವಿಂದ ಶ್ರೀ ಯಶೋದಾನಂದ |ನಂದನ ಶ್ರೀ ಕೇಶವ ಮುಕುಂದ ವಾಮನ ಸುಖಸಾಂದ್ರ |ತಂದೆ ಸಲಹೊ ನಿನ್ನ ಬಂಧಕ ಶಕುತಿಯಲಿಂದ ದಣಿಸದೆ ಅರಿಂದಮ ಪ್ರಭುವೇ 4ಅಂತರಂಗವ ಬಲ್ಲ ಮಧುದ್ವೇಷಿ ಯನ್ನಯ ಮನದಾಸೀ |ಅಂತು ಪೂರ್ತಿಸಿ ದುಷ್ಕರ್ಮದ ರಾಶಿ ಉಳಿಸದೆ ಪರಿಹರಿಸಿ |ಸಂತತ ಹೃದಯದಿ ನಿಂತು ಪೊಳೆವುದೋ ಅನಂತ ಮುರಾಂತಕ ಚಿಂತಾರಹಿತನೆ 5ಶಕ್ರವರಪೂಜಿತ ಬಲವಂತ ರುಕ್ಮಣೀಪತಿ ದಂತ |ವಕ್ತ್ರಾರಿ ಬಾಧಿಸದಂತೆಕೃತಾಂತಮಾಳ್ಪುದು ಕೆಡದಂಥ |ಸುಕೃತಪೀಡಿಸೋ ತ್ರಿವಿಕ್ರಮ ಮೂರುತಿ ಶುಕ್ರ ಯುಕ್ತಿ ಹರ ಅಕ್ರೂರ ವರದ 6ಕಂಕಾನುಜ ಮಂದಿರ ಪ್ರಾಣೇಶ ವಿಠಲ ಗೋಕುಲ ಗೋಪಾಲ |ಪಂಕಜಾಸನ ಜನಕ ಶಕಟಕಾಲಜಾಂಬವತೀಲೋಲ|ಶಂಕರಾದ್ಯಮರರ ಕಳಂಕೆಣಿಸದ ಗರುಡಾಂಕಉರಗಪರ್ಯಂಕ ಸುಖಾತ್ಮ 7
--------------
ಪ್ರಾಣೇಶದಾಸರು
ಗಂಡಬಿಟ್ಟ ಗೈಯಾಳಿ ಕಾಣಣ್ಣ - ಅವಳಕಂಡರೆ ಕಡೆಗಾಗಿ ದಾರಿ ಪೋಗಣ್ಣ ಪ.ಊರೊಳಗೆ ತಾನು ಪರದೇಶಿಯೊನ್ನವಳುಸಾರುತ ತಿರುಗುವಳು ಮನೆಮನೆಯಕೇರಿ - ಕೇರಿಗುಂಟ ಕಲೆಯತ ತಿರುಗುವಳುನಾರಿಯಲ್ಲವೊ ಮುಕ್ಕಾ ಮಾರಿಕಾಣ್ಣ 1ಅತ್ತೆ ಮಾವನ ಕೂಡ ಅತಿ ಮತ್ಸರವ ಮಾಡಿನೆತ್ತಿಗೆ ಮದ್ದನೆ ಊಡುವಳುಸತ್ಯರ ದೇವರ ಸತ್ಯ ನಿಜವಾದರೆಬತ್ತಲೆ ಅಡ್ಡಂಬಲೂಡೇನೆಂಬುವಳು 2ಹಲವು ಜನರೊಳು ಕಿವಿಮಾತನಾಡವಳುಹಲವು ಜನರೊಳು ಕಡಿದಾಡವಳುಹಲವು ಜನರೊಳ ಕೂಗಿ ಬೊಬ್ಬೆಯನಿಡುವಳುತಳವಾರ ಚಾವಡಿಯಲಿ ಬರಲಿ ಹೆಣ್ಣು 3ಪರಪುರುಷರ ಕೂಡಿ ಸರಸವಾಡುತ ಹೋಗಿನೆರೆದಿದ್ದ ಸಭೆಯಲಿ ಕರೆಯುವಳುಮರೆಸಿ ತನ್ನವಗುಣ ಗಾಡಿಯೆಂದು ಮೆರೆವಳುಕರಿರೂಪದವಳ ನೀ ಕೆಣಕದಿರಣ್ಣ 4ಏಸು ಗೃಹಗಳೆಂದು ಎಣಿಸಿ ನೋಡಿಬಂದುಬೇಸರದೆ ಜನಕೆ ಹೇಳುವಳುಲೇಸಾಗಿ ಪುರಂದರವಿಠಲನು ಹೇಳಿದಹೇಸಿ ತೊತ್ತನು ನೀನು ಕೆಣಕದಿರಣ್ಣ 5
--------------
ಪುರಂದರದಾಸರು
ಗಂಭೀರೆಯರ ನಿಲ್ಲಿಸಿದಿಪೋರಬುದ್ಧಿಯ ಬಾಲೆನೀರೆಮನಕೆ ತಾರೆ ಪ.ನೀರಜಾಕ್ಷೆಯರ ನಿನ್ನದ್ವಾರದಿ ನಿಲ್ಲಿಸಿದಿಪೋರಬುದ್ಧಿಯನೆಲ್ಲತೋರಿಸಿದೆ ಈಗ 1ನೋಡಿ ನಮ್ಮನು ಕರೆಯದೆಓಡಿದೆ ಒಳಗಿನ್ನುಮಾಡಿದ ಕಪಟದ ಸೇಡುತೆಗೆಯುವೆ ನೀಗ 2ಮೂಡಲಗಿರಿವಾಸನೋಡುವಂತೆಮಾರಿಬಾಡಿಸಿ ಕಳಿಸುವೆನೋಡಿಕೊ ರುಕ್ಮಿಣಿ 3ಹೀನಗುಣದ ಬಾಲೆಮಾನವು ನಿನಗಿಲ್ಲಶ್ರೀನಿವಾಸನು ನಿನ್ನಏನೆಂದು ಮದುವೆಯಾದ 4ರಜವೆಂಬೊಗುಣಸೇರಿರಾಜ್ಯ ಭೋಗವಬಟ್ಟೆತ್ರಿಜಗವಂದನ ಕೂಡಭುಜಗಾಲಿಂಗನೆಯಾಕೆ 5ಸತ್ವಗುಣವ ಸೇರಿಅತ್ಯಂತ ಸುಖಿಸಿದಿಚಿತ್ತಜನಯ್ಯಗೆಪತ್ನಿ ತಕ್ಕವಳಲ್ಲ 6ತಮವೆಂಬೊ ಗುಣಗಳಸುಮ್ಮನೆ ಗುತ್ತಿಗೆ ಹೊತ್ತಿರಮಿ ಅರಸನ ಕೂಡರಮಿಸೋದು ತರವಲ್ಲ 7
--------------
ಗಲಗಲಿಅವ್ವನವರು
ಗುರುಪದವ ನಂಬಿ ಹರಿಪದವ ಕಾಂಬೆಮರುತ ಸಂತತಿಗೆ ನಮಿಸುವೆ ನಮಿಸುವೆ ಪ.ಹರಿಪದಕೆ ಅಚ್ಛಿನ್ನ ಭಕುತಿ ಪರಿಪೂರ್ಣ ಶ್ರೀಹರಿಕಾರ್ಯದಲಿ ಧುರಂಧರನೆನಿಸುವಹರಿಭೃತ್ಯಜನಕೆ ಹಿತಕಾರಿ ಔದಾರಿ ಜಗದ್ಗುರು ಪರಮಹಂಸ ಮಧ್ವತ್ರಿರೂಪಿಯ 1ತತ್ವಸಾಗರ ತಿಮಿಂಗಿಲ ಪದ್ಮನಾಭಮುನಿಕರ್ತಮೂಲರಾಮ ಮೆಚ್ಚಿದ ನರಹರಿಯಮತ್ರ್ಯ ಮಾಯಿಜನ ತುಹಿನರವಿಭಮಾಧವಾಭಿಜÕ ಅಕ್ಷೋಭ್ಯತೀರ್ಥೆನಿಪ ಮಲ್ಲರ 2ಸುಖತೀರ್ಥಗಂಭೀರ ವಾಕ್ಯವಾರಿಧಿಚಂದ್ರಅಕಳಂಕ ಜಯವರ್ಯ ಯತಿಸಮೂಹಮಕುಟಮಣಿ ವಿದ್ಯಾಧಿರಾಜ ನಿರ್ಮಲಕಾಯಸುಕವೀಂದ್ರ ವಾಕ್ಸಿದ್ಧ ವಾಗೀಶರ 3ಗುರುಭಕುತಿ ನಿಸ್ಸೀಮ ರಾಮಚಂದ್ರಾಖ್ಯಯತಿಗುರುಆಜ್ಞಾಪಾಲ ವಿದ್ಯಾನಿಧಿಗಳದುರುವಾದಿಗಜಮೃಗಪ ರಘುನಾಥ ತೀರ್ಥಶ್ರುತಿಪರಮಾರ್ಥ ಪರಿಚರ್ಯ ರಘುವರ್ಯರ 4ವೈರಾಗ್ಯ ವೈಭವಾನ್ವಿತ ರಘೋತ್ತಮ ಮುನಿಪವೈಷ್ಣವ ತತ್ವಜÕ ವೇದವ್ಯಾಸರಕೈವಲ್ಯಮಾರ್ಗಜÕ ವಿದ್ಯಾಪತಿಯು ಹೊನ್ನಮೈಯ ಮರುತಂಶ ವಿದ್ಯಾಧೀಶರ 5ವೇದಾಮೃತಾಬ್ಧಿಯೊಳು ಮಗ್ನ ವೇದನಿಧಿಗಳಸಾಧುನಿಕರಲಲಾಮ ಸತ್ಯವ್ರತರಬಾದರಾಯಣರಾಮಪಾದರತ ಸತ್ಯನಿಧಿಮೇದಿನಿಗೆ ಕಲ್ಪತರು ಸತ್ಯನಾಥರ 6ಶ್ರೀ ಸತ್ಯನಾಥರತ್ನಾಕರಕರೋದ್ಭವಕುಮುದಅಶೇಷಯಾಚಕ ಸುಖದ ಸುಗುಣಶ್ರೀ ಸತ್ಯಾಭಿನವ ಮುನಿ ಭಾಗವತೇಢ್ಯಜÕಶಾಶ್ವತ ಪರೋಕ್ಷ ಗುರುಪದನಿಷ್ಠರ 7ದುಷ್ಟ ಪರವಾದಿ ನರಕುಲಿಶ ಜಿತಕಾಮ ತಪೋನಿಷ್ಠ ವಿದ್ಯೋನ್ನತ ವಿಚಾರಶೀಲಶಿಷ್ಟ ಜನಪಾಲಶ್ರುತಿಜಲಾಭ್ಧಿ ಕಲ್ಲೋಲಇಷ್ಟಾರ್ಥದಾತ ಸತ್ಯಾಧೀಶರ 8ಕೃಷ್ಣ ಪಾದಾಸಕ್ತ ಗುರುಕೃಪಾಸಂಯುಕ್ತಇಷ್ಟಾರ್ಥದಾತ ಸತ್ಯಾಧಿರಾಜರಸೃಷ್ಠೇಶ ಪ್ರಸನ್ನವೆಂಕಟಪತಿಯಅನವರತತುಷ್ಟೀಕರಿಸುವ ವಾಯುಮತ ಮಹಿಮರ 9
--------------
ಪ್ರಸನ್ನವೆಂಕಟದಾಸರು
ಗುರುವೇ ಶ್ರೀ ವಸುಧೇಂದ್ರ ಕರಜಾತ ಸದ್ಗುಣಸಾಂದ್ರ |ವರದೇಂದ್ರರಾಯ ಜಿತೇಂದ್ರ | ಮರುತ ಮತಾಬ್ಧಿ ಚಂದ್ರ ||ಶರಣು ನಿನ್ನಯ ಪದಸರಸಿಜಯುಗಗಳಿಗೆ |ಎರವುಮಾಡದೆ ಕಾಯೊಪರಮದಯಾಳು ಪದಾತಾಧರಿತ್ರೀ ಸುತೀನಾಥ ಶ್ರೀರಘುಪತಿ |ದೂತ ಭುವನದೋಳ್ ಖ್ಯಾತಿಯೋ ತವ ಸತ್ಕೀರುತಿ ||ಭೂತ ಭಯ ರೋಗವಾ ತಂದಟ್ಟುವಾ |ನಾಥ ರಕ್ಷಕ ಜಲಜಾತಾಂಬಕನೇ 1ದೋಷರಹಿತ ಯನ್ನಕ್ಲೇಶಹಿಂಗಿಸೊ ಸಂ |ನ್ಯಾಸಶಿರೋಮಣಿಯೆ ಮುನ್ನಾ ಆಶೆ ಬಿಡಿಸಿ ನಿನ್ನ ||ದಾಸನೆನಿಸಿಕೋ ಉದಾಸಿಸದಲೆ ಬಹು |ಘಾಸಿಮಾಡದೆ ರವಿಭಾಸ ಗುಣಾಢ್ಯ 2ಏನಾದರೇನು ಕೀಳು ಮಾನವರಾಶ್ರಯ ಧರೆಯೊಳು |ನಾನಿಚ್ಛಿಸೆನೊ ಕೃಪಾಳುಮಾನನಿನ್ನದು ಕೇಳು ||ನೀನೆವೆ ಗತಿಯೆಂದು ಧ್ಯಾನ ಮಾಡುವರಿಗೆ |ಪ್ರಾಣೇಶ ವಿಠಲನ ಕಾಣಿಸಿಕೊಡುವಿ 3
--------------
ಪ್ರಾಣೇಶದಾಸರು
ಗುರುಸತ್ಯಾಧಿರಾಜಸುಜನತಾರಾರಾಜಪೊರೆಎನ್ನ ಕಲ್ಪಭೂಜಸ್ಮರನಯ್ಯನ ಸಿರಿಚರಣಕಮಲಭೃಂಗವಿರತ್ಯಾದಿ ಗುಣೋತ್ತುಂಗ ಶುಭಾಂಗ ಪ.ಕರಿವಿಂಡು ಶಂಕೆಯಿಲ್ಲದೆ ತಿರುಗುತ ಕೇಸರಿಯ ಕಂಡೋಡುವಂತೆಧರೆಯೊಳು ದುರ್ವಾದಿಗಳು ನಿನ್ನಿದಿರು ಸಂಚರಿಸಲಂಜುವರಮ್ಮಮ್ಮ ಮಹಿಮ 1ಕಾಲವರಿತ ಸ್ನಾನ ಮೌನ ಜಪ ಸೃಕ್ಜಾಲವ್ಯಾಖ್ಯಾನಗಳಪೇಳಿ ಶ್ರೀರಾಮನ ಮೆಚ್ಚಿಸುವಪೂತಶೀಲ ತತ್ವಕಲ್ಲೋಲ ವಿಶಾಲ 2ಹಾಟಕಕುವಧುಕಾಂಕ್ಷೆರಹಿತ ಪ್ರಸನ್ನವೆಂಕಟಪತಿ ಪದದ್ವಯವತ್ರುಟಿಯೊಳಗಲ ಸತ್ಯಾಭಿನವ ತೀರ್ಥಕರಕಟ ಸಂಜಾತ ಸುಪ್ರೀತ 3
--------------
ಪ್ರಸನ್ನವೆಂಕಟದಾಸರು
ಗೆಲಿಸು ಭವವಗುರುಹನುಮಂತಖಳಜಲಧಿ ವಡವಾನಳ ಬಲವಂತ ಪ.ದಾಶರಥಿüಯ ಪದವನೆ ನಂಬಿ ಇತರಾಶೆಯಿಲ್ಲದೆ ಭಕ್ತಿರಸತುಂಬಿತೋಷವೃತ್ತಿಗೆ ಕಡೆಮೊದಲಿಲ್ಲ ಕ್ಷುದ್ರದೇಶ ಕೋಶದೆಣಿಕೆ ನಿನಗಿಲ್ಲ 1ಅಂಧಕಾತ್ಮಜ ತೃಣಸುರಧೇನುಗೋವಿಂದಾಂಘ್ರಿಬಿಸಜಮಧುಪನೀನುಸಂಧಕಾಯನ ಸದೆದ್ಯೈ ದೇವ ದಯಾಸಿಂಧುವೈಷ್ಣವಜನ ಸಂಜೀವ2ಶ್ರೀ ಸತ್ಯವತಿಜನ ನೇಮದಲಿಹರಿದ್ವೇಷಿಗಳನು ಗೆದ್ದೆ ಭೂಮಿಯಲಿಶ್ರೀಸುಖತೀರ್ಥಭೀಮ ಕಪಿವರದ ಸ್ವಾಮಿಪ್ರಸನ್ನವೆಂಕಟೇಶ ಭೃತ್ಯಗಣಮುದದ 3
--------------
ಪ್ರಸನ್ನವೆಂಕಟದಾಸರು
ಗೋಪಿಯ ಭಾಗ್ಯವಿದು |ಆ ಪರಮಾತ್ಮನ ಅಪ್ಪಿ ಮುದ್ದಿಡುವುದು ಪಅಂಬೆಗಾಲಿಡು ಹರಿಕುಣಿದಾಡೈ ತೋ-|ಳಂಬಲಿ ತಾ ಹೊಂಗುಬ್ಬಿಯನು ||ಅಂಬುಜನಾಭ ನೀನಾನೆಯನಾಡೆಂದು |ಸಂಭ್ರಮದಿಂದ ಮುದ್ದಾಡುವಳೊ 1ನಿತ್ಯನಿರ್ಮಲನಿಗೆ ನೀರನೆರೆದು ತಂದು |ಎತ್ತಿ ತೊಡೆಯೊಳಿಟ್ಟು ಮುದ್ದಿಸುತಾ ||ಸತ್ಯಲೋಕವನಾಳುವ ವಿಧಿಜನಕನ |ಪುತ್ರನೆಂದರಿತು ತಕ್ಕೈಸುವಳೊ 2ಪಾಲುಗಡಲು ಮನೆಯಾಗಿ ಮೂಲೋಕವ |ಪಾಲಿಸುತಿಪ್ಪ ನಾರಾಯಣನ ||ಕಾಲಮೇಲೆ ಮಲಗಿಸಿ ಬಟ್ಟಲ ತುಂಬ |ಹಾಲು ಕುಡಿಸಿ ಸಂತೈಸುವಳೊ 3ಹರಿನಿತ್ಯತೃಪ್ತನೆಂದರಿಯದೆ ಹೊನ್ನಿನ |ಹರಿವಾಣದೊಳಗೆ ಮೃಷ್ಟಾನ್ನವನು ||ನೊರೆಹಾಲು ಘೃತ-ಸಕ್ಕರೆ ಕೂಡಿಸಿ ಕರೆ-|ಕರೆದು ಉಣಿಸಿ ತೃಪ್ತಿ ಬಡಿಸುವಳೊ 4ಅಂಗಜಪಿತನಿಗೆ ಮೋಹದಿಂದ ಹೊಸ |ಅಂಗಿಯ ತೊಡಿಸಿ ಟೊಪ್ಪಿಗೆ ಇರಿಸಿ ||ಬಂಗಾರದರಳೆಲೆ ಬಿಂದುಲಿಗಳನಿಟ್ಟು |ಸಿಂಗರವನು ಮಾಡಿ ನೋಡುವಳೊ 5
--------------
ಪುರಂದರದಾಸರು
ಗೋವಿಂದ ನಮೋ ಗೋವಿಂದಹರಿಗೋವಿಂದಂ ನಮೋ ಗೋವಿಂದ ಪಗೋವಿಂದಂ ನಮೋ ಗೋವಿಂದೆಂದೊಡೆಬಂದ ಜರಾಮರಣ್ಹರಿದುಪೋಪುದು ಅ.ಪಶರಧಿಮುಳುಗಿದ ಗೋವಿಂದಂ ನಮೋಶರಧಿಈಸಿದ ಗೋವಿಂದಕರಿಕೆಯನು ಮೆದ್ದ ಗೋವಿಂದಂ ನಮೋನರಮೃಗಾಕಾರ ಗೋವಿಂದಪರಶು ಧರಿಸಿದ ಗೋವಿಂದಂ ನಮೋಧರೆಯ ಬೇಡಿದ ಗೋವಿಂದಶರಧಿಹೂಳಿದ ಗಿರಿಯನೆತ್ತಿದಪುರವ ಭಂಗಿಸಿದ ತುರಗವೇರಿದ 1ಸಿಂಧುಕಲಕಿದ ಗೋವಿಂದಂ ನಮೋಸಿಂಧುಮಂದಿರ ಗೋವಿಂದಮಂದರೋದ್ಧಾರ ಗೋವಿಂದಂ ನಮೋಇಂದಿರೆಯ ಪ್ರಿಯ ಗೋವಿಂದಬಂದ ಭುವನಕೆ ಗೋವಿಂದಂ ನಮೋನಿಂದ ಗಿರಿಯಲಿ ಗೋವಿಂದಬಂದ ಭಕುತರ ಬಂಧ ಕಳೆದಾನಂದ ನೀಡುತ ಚೆಂದದಾಳುವ 2ದನುಜಸಂಹರ ಗೋವಿಂದಂ ನಮೋಚಿನುಮಯಾತ್ಮಕ ಗೋವಿಂದಮ(ನುಮುನಿಯಾ) ನಂದಗೋವಿಂದಂ ನಮೋಚಿನುಮಯಾತ್ಮಕ ಗೋವಿಂದವಿನಮಿತಾಗಮ ಗೋವಿಂದಂ ನಮೋಜನಕಜೆಯವರಗೋವಿಂದವನಜಸಂಭವವಿನುತ ವಿಶ್ವೇಶಜನಕ ಜಾಹ್ನವೀಸುಜನಶುಭಕರ3ನೀಲಶ್ಯಾಮಹರಿಗೋವಿಂದಂ ನಮೋಲೋಲಗಾನ ಸಿರಿಗೋವಿಂದಕಾಲಕುಜ(ನ) ಕುಲ ಗೋವಿಂದಂ ನಮೋಪಾಲಮೂಲೋಕ ಗೋವಿಂದಮಾಲಕೌಸ್ತುಭ ಗೋವಿಂದಂ ನಮೋಮೇಲುಆಲಯಗೋವಿಂದಕಾಳಿಮದ್ರ್ನ ಕಾಲಭಯಹರಲೀಲಸಮ ವಿಶಾಲಮಹಿಮ 4ಸತ್ಯ ಸಂಕಲ್ಪ ಗೋವಿಂದಂ ನಮೋಸತ್ಯಸನ್ನುತಗೋವಿಂದಭಕ್ತವತ್ಸಲ ಗೋವಿಂದಂ ನಮೋನಿತ್ಯನಿರ್ಮಲ ಗೋವಿಂದಚಿತ್ತಜನಪಿತ ಗೋವಿಂದಂ ನಮೋಮೃತ್ಯು ಸಂಹರ ಗೋವಿಂದಭಕ್ತಜನರಾಪತ್ತು ಪರಿಹರಮುಕ್ತಿದಾಯಕಕರ್ತುಶ್ರೀರಾಮ5
--------------
ರಾಮದಾಸರು