ಒಟ್ಟು 14553 ಕಡೆಗಳಲ್ಲಿ , 132 ದಾಸರು , 6967 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚದುರೇ ವೃಂದಾವನದೊಳು ನಿಂತಿಹನ್ಯಾರೇ ಪೇಳಮ್ಮಯ್ಯಾ ಪ ಸತ್ ಸಖಿಯರಿಗುಣಿಸುವ ಜಾರಚೋರ ಶ್ರೀಕೃಷ್ಣ ಕಾಣಮ್ಮಾ ಅ.ಪ. ನೀರೇ ನೋಡೋಣು ಬನ್ನಿರಿ ಎಂದುಈ ಬಾಲೇರು ಗೋಪಾಲನ ಗಾನಕೆ ಬಂದು ಬೆದರುತ ಮನದೊಳು ಮದನಾಟಕೆ ನಿಂದೂಮೋರೆಯ ತಿರುವುತ ಅಂದು ಮಾರನಯ್ಯ ತವ ಚಾರುಧರಾಮೃತ ಸೂರೆಗೈಯ್ಯೋ ಸದ್ಧೀರಿಯರೊ ನಾವು 1 ಬಾಲೆ ನಿನ್ನಾಳುವ ದಾರಿ ಬ್ಯಾರಿಲ್ಲಾ ಕಾಲಬಂದೊದಗದು ಕೇಳೆನ್ನ ಸೊಲ್ಲ ಮತ್ತಾವದೊ ತಂಗಾಳಿ ಬೀಸುವ ವ್ಯಾಳೆ ಬಂತಲ್ಲಾ ಮೋಹಿಸಿ ಬಂದೆವೊ ನಲ್ಲಾ ಫುಲ್ಲಲೋಚನ ಮೃದು ಮಲ್ಲಿಗೆ ಮುಡಿಸಿ ಮೆಲ್ಲಗೆ ಮರ್ದಿಸು ಮೃದು ಚಲ್ವಯರುಹರೆ 2 ಸಿಂಧೂ ರಾಜಕುಮಾರಿಯ ರಮಣ ಶರದಿಂದೂ ಮಂಡಲ ಮುಟ್ಟುತಲಿದೆ ಧ್ವನಿ ಹಸನಾ ಶಂಭೂರ ಶತ್ರಾದಿಗಳುಗರೆವರು ಪೂಮಳಿ ನಾನಾ ಗಣಶಿರಿಸುತ ಮರುಳಾಗಿ ಪೂ ಬಾಣಾನಾಟವನೋಡುತ ನಾರಿಯ ತ್ಯಜಿಸದೆ ಪರನಾರಿಯ ರೂಪದಿಂದ್ರಮಿಪ ಮುರಾರೇ 3 ಸುರನದಿ ಸ್ಮರಸುತ ರಾಣಿ ನಾಟ್ಯವನಾಡುತ ನವನವ ಪಾಡುತ ದಿದ್ಧಿದ್ಧಿಮಿಕಿಟ ತಾಂ ತಾಳದಿ ನಲಿಯುತ 4 ಶಶಿಸೂರ್ಯನೆಳಸನ್ನಿಭ ಪ್ರಖನಕರಾ ಸರಸೀಜಾದಳ ನುತ ಭಾವಿ ಸಮೀರಾ ಷಟ್ ಶತ ಬಂದು ವಿಂಶತಿಹಂ ಸಾಖ್ಯ ಮಂತ್ರ ಸಹಸ್ತಾದಿಂದ ಸೇವಿಪ ಮಧ್ವಮಧೀಶನ ಲೀಲೆಯನೆನಿಪರ ಬಂದು ತೋರುವಾತ ತಂದೆವರದಗೋಪಾಲವಿಠಲನು 5
--------------
ತಂದೆವರದಗೋಪಾಲವಿಠಲರು
ಚಂದ್ರಭಾಗ ಹರಿ ವಿಠಲ | ಸಲಹ ಬೇಕಿವಳಾ ಪ ಇಂದೀವರಾಕ್ಷ ಹರಿ | ಮಂದರೋದ್ಧಾರೀ ಅ.ಪ. ಮೋದ ಬಡಿಸುವ ಭಾರಮೋದ ಮಯ ನಿನಗಲ್ಲ | ದಧಾರಿಸಿಹುದೋಆದಿ ಮೂರುತಿ ಹರಿಯೆ | ಸಾಧನ ಸಾಧ್ಯವಾಗಿಕಾದುಕೋ ಬಿಡದಿವಳ | ಮಾಧವನೆ ದೇವಾ 1 ತರತಮಾತ್ಮಕ ಜ್ಞಾನ | ಅರುಹುತಿವಳಿಗೆ ಭೇದಎರಡು ಮೂರರ ಅರಿವು | ನೆರೆ ಕೈಗೂಡಲೀಹರಿಯೆ ಸರ್ವೋತ್ತಮನು | ಸುರಪಾದಿ ಸುರರೆಲ್ಲಹರಿಯ ಕಿಂಕರರೆಂಬ | ವರಜ್ಞಾನ ವಿರಲಿ 2 ಆಗು ಹೋಗುಗಳಲ್ಲಿ | ವೇಗ ಸಮತೆಯು ಬರಲಿಜಾಗು ಮಾಡದೆ ದ್ವಂದ್ವ | ಸಹನೆ ಬರುತಿರಲೀನಾಗಾರಿ ವಾಹನನ | ನಾಮ ಸುಧೆ ಸರ್ವದಾಸಾಗಿ ಮನ ಸವಿವಂತೆ | ಹಗಲಿರುಳು ಇರಲೀ 3 ಕಾಲ | ಮೋದದಿಂ ಕಳೆವಂತೆನೀ ದಯದಿ ಪಾಲಿಸುತ | ಕಾದುಕೋ ಇವಳಾಬೋಧ ಮೂರುತಿಯಾಗಿ | ಹೇ ದಯಾಕರ ಕೃಷ್ಣಾಆದರದಿ ಸುಜ್ಞಾನ | ಭಕ್ತಿಯನ್ನೀಯೋ 4 ಭವ ಬಂಧ ಬಿಡಿಸುವುದುಶ್ರೀವರನೆ ಶ್ರೀಗುರೂ | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಚನ್ನಕೇಶವ ಇನ್ನೇನಿನ್ನೇನಿನ್ನು ಯನಗಿನ್ನೇನಿನ್ನೇನಿನ್ನು ಪ. ಚನ್ನಕೇಶವನಿವನನ್ನು ಹೃದಯದೊಳ್ ಚೆನ್ನಾಗಿ ನೆಲಸಿರಲಿನ್ನೇನ ಬೇಡುವೆ 1 ಭುವಿಜಾತೆಯೆನ್ನ ಮಾತೆ - ಭುವಿನಾಥನೆನ್ನ ತಾತ ಇವರೆನ್ನೊಳಿರುತಿರೆ ಭವಕ್ಲೇಶ ಪರಿದಿರೆ 2 ಅಂಡಜವಾಹನಾಖಂಡಲಾರ್ಚಿತನ ಪುಂಡರೀಕಾಕ್ಷನ ಕಂಡು ಕೊಂಡಾಡಿದೆ 3 ಧರೆಯೊಳಧಿಕ ಶೇಷಗಿರಿಯೊಳು ನೆಲಸಿರ್ಪ ವರದ ಶ್ರೀನರಹರಿ ವರದನೆನ್ನೊಳಿರೆ 4
--------------
ನಂಜನಗೂಡು ತಿರುಮಲಾಂಬಾ
ಚನ್ನಕೇಶವ ಪನ್ನಗಶಯನ ಪ ಚನ್ನಪಾದಪೂಜೆಯನ್ನು ಕರುಣಿಸಯ್ಯ ಅ.ಪ ಸಾಕಲಾರದೆ ನೂಕುತಿರುವೆಯಾ ವಿ ವೇತಕವೇ ಇದು ಸಾಕು ಸುತನ ಸಲಹು 1 ದೂರನುಯೋಚಿಸು ದಾರಿಯಬಿಡದೆ ಸಾರಿಸ್ಮರಿಸುವ ಪಾರುಗಾಣಿಸಯ್ಯ 2 ಶ್ರೀದೇವಿಯ ಸಾಧುವೇನೊ ಕೇಳು ಆಧಾರಿಯೇ ಭೇದ ಸರಿಯೆ ಹೇಳು 3 ತಪ್ಪುಮಾಡದೆ ಇಪ್ಪರಾರೊ ಹರಿ ಅಪ್ಪುತೆಮ್ಮ ಬಂದು ಒಪ್ಪಿ ಪೊರೆಯೊ ಬಂಧು4 ಅಮ್ಮನಾನುಡಿ ಆಲಿಸಂತೆ ನಡಿ ನೆಮ್ಮದಿಯೊಳಡಿಯಿಟ್ಟು ಯೆನ್ನ ಕೈಪಿಡಿ5 ಸುಮನಸಗುಣಾ ಕಮಲಾಕ್ಷದಾ ಅಮರವಾಣಿಪೇಳು ಅಮಿತಸುಖದ ಬಾಳು 6 ಆಗಲೈಮಗು ಭೋಗ ಭಾಗ್ಯಹೊಗು ಯೋಗಿ 7 ನಂಬಿನಡೆವೆ ಸಂಭ್ರಮದ ಕಣಿ ಅಂಬುಜೋದರಾನಂದಸಾಗರಾ ನಾಂ8 ಜಯ ಜಯ ಜಯ ಮಂಗಳಮಯ ಭಯನಿವಾರಣ ಭಕ್ತ ಸಂರಕ್ಷಣಾ 9 ಇದ ಪಾಡುವಾ ಮುದ ಪಡೆಯುವಾ ಅಧಿನಾಥನೆಡೆ ಸುಧೆಸವಿಯಾವಾ 10 ವಿಧಿಪಿತನ ಸೇವೆ ನಿಧಿಯೆಂದರಿತು ಬುಧಮಂಡಲಿಯೊಳಧಿಕರಿಸುವಾಂ 11 ಜಾಜೀಶ್ವರಾ ಶ್ಯಾಮಸುಂದರಾ ರಾಜರಾಜಪೂಜ್ಯ ಸ್ವಾರಾಜ್ಯ ಸಾಮ್ರಾಜ್ಯ ಚನ್ನಕೇಶವಾ 12
--------------
ಶಾಮಶರ್ಮರು
ಚನ್ನಾಗಿ ಸ್ತುತಿಸುವ ರಾ ಆಶ್ರಿತ ಜನರಾಧಾರಾ ಪ ನಾರದವರದನ ಯೋಗಿಗಳ ಹೃದಯ ಯೋಗವಿಲಾಸನ ಯಾದವ ಕುಲೋದ್ಭವನ ಭಾಗೀರಥಿಯ ಪಡೆದ ಧೀರನಾ ಪಾಂಡವ ಪಕ್ಷಕನಾ 1 ವೇದಗೋಚರನೆ ವೇಣುನಾದ ಶ್ರೀ ವೇಂಕಟ ಶ್ರೀಶನಾ ಸಾಧು ಸಜ್ಜನರ ಸರ್ವದಿ ಸಲಹುವ ಸಕಲಲೋಕ ಕರ್ತನಾ ಆದಿ ಮೂರುತಿ ಅನೇಕ ಚರಿತನ ಅನಂತ ಅವತಾರನಾ ಮನುಜರ ಪೋಷಕನಾ 2 ಗಾನಲೋಲ ಶ್ರೀಕರುಣಕೃಪಕ್ಷಾನ ಕಾಮಿತ ಫಲವೀವನಾ ಕಮಲಸಂಭವ ವಪಿತನ ಮಾನಾಭಿಮಾನ ಮಹಾನುಭಾವ---------------- ಆದ ಅವನಾ 3
--------------
ಹೆನ್ನೆರಂಗದಾಸರು
ಚರಣಕಮಲಯುಗಕೆ ನಮಿಪೆ ನಿರುತವನುದಿನ | ಶ್ರೀ ರಾಘವೇಂದ್ರ ಪ ಕರುಣಾಸಾಂದ್ರ ಯತಿಕುಲೇಂದ್ರ ಅ.ಪ ವೇನಮತವಿದಾರ ಸುಂದರ ಜ್ಞಾನದಾತ ಗುರುವರ | ಶ್ರೀನಾಥನ ಪದಪಂಕಜಧ್ಯಾನನಿರತ ಸುಗುಣಭರಿತ 1 ಮಧ್ವಶಾಸ್ತ್ರಪಠಿಸಿ ಬಹುಪ್ರಸಿದ್ಧಟೀಕೆ ರಚಿಸುತ | ಸದ್ವೈಷ್ಣವ ಸಿದ್ಧಾಂತವೇ ಶುದ್ಧವೆನಿಸಿ ಮೆರೆದ ಧೀರಾ 2 ನರಹರಿ ಸಿರಿರಾಮಕೃಷ್ಣ ವರವೇದವ್ಯಾಸರು | ಇರುತಿರುವರು ನಿನ್ನೊಳು ತವ ಪರಿಜನ ಸೇವೆಗಳ ಕೊಳುತ3 ವಾರಾಹಿ ಸುಕ್ಷೇತ್ರನಿಲಯ ಚಾರುಚರಿತ ಗುಣಮಯ | ಆರಾಧಿಪ ದೀನಾಳಿಗೆ ಸಾರಸೌಖ್ಯವೀವ ಕಾವ 4 ಶ್ರೀಶಕೇಶವಾಂಘ್ರಿದೂತ ದಾಸಜನನುತ | ಲೇಸಾಗಿಹ ಭೂಸುರ ಸಹವಾಸವಿತ್ತು ಕರುಣಿಸಯ್ಯ 5
--------------
ಶ್ರೀಶ ಕೇಶವದಾಸರು
ಚರಣಕಮಲವನು ತೋರೋ ಪ ಮನವೆಂಬ ಮನೆಯನು ನಿರ್ಮಲಗೊಳಿಸು ತನುಮನಧನದಾಶೆಯ ನೀ ಬಿಡಿಸೊ 1 ಆರು ಮಂದಿಯು ಯನ್ನ ಗಾರುಮಾಡುವರು ಪಾರಗಾಣಿಸು ಬೇಗ ಶ್ರೀ ರಾಮದೇವ 2 ದಶರxಸುತ ನೀನು ಶಶಿಮುಖಕಾಂತನು ಶಶಿಧರನುತನೀ ಅಪಮಸಾಹಸನೊ 3 ಮೂರಾವತ್ಸೇಗಳಲ್ಯು ದೂರಾಪೋಗದೆ ನೀ ಕಾರುಣ್ಯದಿಂದ ಯೆನ್ನ ಶೇರಿರು ಹರುಷದಿ 4 ಸಿರಿವತ್ಸಾಂಕಿತ ನೀನು ತರಣಿಸುತನ ಸರವ ಕರಕರೆ ಬಿಡಿಸಲು ಸುರರ ವೃಂದವ ಬಿಟ್ಟು 5
--------------
ಸಿರಿವತ್ಸಾಂಕಿತರು
ಚರಣಯುಗವ ತೋರೋ ಪ ಶರಣರ ಪೊರೆಯುವ ಕರುಣಿಗಳರಸನೆ ನಿರುತವು ನಿನ್ನನೆ ನೆರೆನಂಬಿದೆ ಹರಿ ಅ.ಪ ದಿಕ್ಕು ನೀನೆ ಎಂದು ನಂಬಿದೆನಕ್ಕರಿಂದ ಬಂದು ತಕ್ಕುದೇನು ಘನ ರಕ್ಕಸವೈರಿಯೆ 1 ಇಷ್ಟದೇವನಾರೋ ಮನಸಾಭೀಷ್ಟವ ಕೊಡುಬಾರೋ ಕೃಷ್ಣಮೂರ್ತಿ ನೀಂ ದೃಷ್ಟಿಸು ನಮ್ಮನು2 ಕೇಣವ್ಯಾಕೋ ಹರಿಯೆ ಕಣ್ಣಲಿ ಕಾಣು ಬಾರೋ ದೊರೆಯೇ ಕಾಣೆನಿನಗೆ ಸರಿ ಜಾಣತನದಿ ಹರಿ 3 ವಾರಿಧಿಕೃತಶಯನ ವಿಕಸಿತ ವಾರಿಜದಳನಯನ ಕ್ಷೀರದೊಳದ್ದುನೀ ನೀರೊಳಗದ್ದು ಕಂ ಸಾರಿ ನಿನ್ನನೆ ಸಾರಿದೆ ನರಹರಿ 4 ಧರೆಯೊಳಧಿಕವಾದ ಶ್ರೀ ಪುಲಿಗಿರಿಯೊಳು ನೆಲೆಯಾದ ವರದವಿಠಲ ದೊರೆ ದಯಾನಿಧೆ 5
--------------
ವೆಂಕಟವರದಾರ್ಯರು
ಚರಣವನೆನೆಮನವೆ | ನಂಬಿ ಚರಣವ ನೆನೆಮನವೆ | ಶ್ರೀರಾಮವೇದವ್ಯಾಸರ ಪಾದಕಮಲವ | ನಿರುತದಿ ಪೂಜಿಪಗುರು ಸತ್ಯಪೂರ್ಣರ ಪ ಶ್ರೀ ಮಧ್ವಶಾಸ್ತ್ರದಾ | ಸರೋವರ | ಪ್ರೇಮದಿಹಂಸರಾ | ವ್ಯೋಮ ಕೇಶನಪ್ರಿಯನಾಮ ಮುಕ್ತಾಫಲ | ಪ್ರೇಮದಿಸೇವಿಪ ಕೋಮಲ ಕಾಯರ 1 ಪೋಕದುರ್ವಾದಿಗಳಾ | ವದನಕೆ | ಹಾಕಿದ ಕೀಲಿಗಳಾ | ಬೇಕಾದ ಸಂಪದನೇಕವನುಣಿಸುವ | ಲೋಕಕೆ ಮಾನ್ಯಾಗಿ ಸಾಕುವರೊಡೆಯರ 2 ಮುನಿ ಅಭೀನವತೀರ್ಥರ | ಶುಭಕರ | ವನಜದಿಜನಿಸಿದರಾ | ವನಿಯೊಳು ಮಹೀಪತಿಜನ ಸಲಹುವರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚರಣಾರಾಧಿಸೋ ಚಾರುತರ ಭೂ ವರಹ ವೇಂಕಟೇಶನಾ ಉರಗಾದ್ರಿವಾಸನಾ ವರ ಶ್ರೀನಿವಾಸನಾ ಪ ದುರಿತಕೋಟಿಯ ಹರಿವ ಸ್ವಾಮಿ ಪು ಷ್ಕರಿಣಿ ತೀರ ವಿಹಾರನಾ ಸಿರಿಮನೋಹರನಾ ಪರಮ ಉದಾರನಾ 1 ವಾಹನೋತ್ಸವದಲ್ಲಿ ಪರಿಪರಿ ಮಹಿಮೆ ಜನರಿಗೆ ದೋರ್ವನಾ ಸಹಜದಿ ಮೆರೆವನಾ ಬಹಳ ಪೂರ್ವನಾ 2 ನಡೆದು ಯಾತ್ರೆಗೆ ಬರಲು ಹಯಮೇಧ ಅಡಿಅಡಿಗೆ ಫಲ ನೀವನಾ ಬಿಡದೆವಾ ಕಾವನಾ ಮೃಡಜರ ದೇವನಾ3 ಸಕಲರಿಗೆ ನೈವೇದ್ಯನುಣಿಸುವಿ ಅಖಿಳ ಸಂಶಯ ಹಾರಸೀ ವೈಕುಂಠ ಸೇರಿಸೀ ಸ್ವಕರದಿ ತೋರಿಸೀ 4 ಇಂದು ನಮ್ಮನಿ ದೈವವಾಗಿಹ ತಂದೆ ಮಹಿಪತಿ ಪ್ರೀಯನಾ ಸುಂದರ ಕಾಯನಾ ವೃಂದಸುರ ಧ್ಯೇಯಾನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚರಿತೆಯ ಪೇಳಬೇಕೆ ಪ ಕೊರತೆಗಳೆಣಿಸದೆ | ಸ್ಥಿರಸುಖದೊಳು ಬಾಳಿ ಅ.ಪ ಚದುರ ಚೆನ್ನಿಗ ಮುದ್ದು | ಪದುಮದಳಾಕ್ಷನ 1 ಕಾಲಿನೊಳೊದೆದೆಲ್ಲ | ಶ್ರೀಲೋಲನುಣಲೊಲ್ಲ 2 ಹರಿಣಾಕ್ಷಿಯರಿರೇನು | ಮರುಳರಂತೊರೆವಿರೆ 3 ಮೆಚ್ಚಿನ ಮಾತಿದು | ಸಚ್ಚರಿತವಿದೆಂದು 4 ಬಿಗಿವೆ ಸದಾನಂದ | ವಾಗಲಿ ನಿಮಗೆಲ್ಲ 5
--------------
ಸದಾನಂದರು
ಚರಿಯ ಪೇಳುವೆನು ಚರಿಯ ಪೇಳುವೆವು ಪ. ಕೃಷ್ಣ ಬಂದೆಮ್ಮಾಲಯದೊಳು ಲೂಟಿಗೈದಿಪನೆ ಅ.ಪ. ಗುಲ್ಲು ಮಾಡದೆ ಘುಲ್ಲ ಲೋಚನ ಮೆಲ್ಲಡಿ ಇಡುತ ಬಂದೂ ಗಲ್ಲಕೆ ಮುತ್ತು ಕೊಟ್ಟು ಎಮ್ಮಾ ಗಲ್ಲ ಪಿಡಿಯುವನೆ ಶ್ರೀಕೃಷ್ಣ ಗುಲ್ಲು ಮಾಡುವನೆ ಯಶೋದೆ 1 ನೆಲುವಿಲಿದ್ದ ಬೆಣ್ಣೆ ಕದ್ದ ಚೆಲುವ ಕೃಷ್ಣನೆ ದೇವಾ ಛಲದಿ ಪಿಡಿಯಾಪೋದರೆಮ್ಮಾ ಅಣಕ ಮಾಡುತ್ತಾ ಮುರಾರಿ ಪರಾರಿಯಾದನೇ ಯಶೋದೆ 2 ಹಿರಿಯಕಾಲದ ಸಾಲಿಗ್ರಾಮ ಕರಿಯ ಕಲ್ಲೆಂದು ಶ್ರೀ ಕೃಷ್ಣ ಭರದಿ ಬಾಯೊಳ ನುಂಗಿ ಜಗಕೆ ತಾನ್ಹಿರಿಯನೆಂಬುವನೆ ಯಶೋದೆ ಹಿರಿಯನೆಂಬುವನೆ 3 ಗೊಲ್ಲಸತಿಯೇರೊಡನೆ ಪೋಗಿ ಮೆಲ್ಲ ಮೆಲ್ಲನೆ ಶ್ರೀಕೃಷ್ಣ ಚೆಲ್ಲಿಮೊಸರ ಗಡಿಗೆಯೊಡೆದು ಸಲ್ಲಾಪತೋರೆಂಬುವನೆ ಯಶೋದೆ ಸರಸತೋರೆಂಬುವನೆ 4 ಸಿರಿರಮಣನ ಕರೆದು ನೀನು ಬರೆಯ ಬೇಕಮ್ಮಾ ಬುದ್ಧಿ ಥರವೆಯಮ್ಮಾ ಕೂಡಿ ತರಳಾ ಸರಸವಾಡುವುದು ಶ್ರೀ ಶ್ರೀನಿವಾಸ 5
--------------
ಸರಸ್ವತಿ ಬಾಯಿ
ಚರ್ಯನಾಮುಗಿವೆನು ಕೈಯ್ಯಾ ಪ ಮಂತ್ರಸದನ ಪದ ಚಿಂತಕ ಶ್ರೀ ರಘು ಕಾಂತಕರಜ ರಘು ದಾಂತ ಯತೀಂದ್ರರ ಅ.ಪ ಅಂತರಂಗದಿ ಸಂತತ ಶ್ರೀಹರಿಯ ಚಿಂತಿಸುತಲಿ ಭೂಮಿಯ ಕಾಂತ ದಂಷ್ಟ್ರದಿ ಸಂಜನಿಸಿದ ನದಿಯ ಸಂಗಮ ಶುಭನಿಲಯ ವಿಶ್ರಾಂತ ಸುಮಹಿಮರ 1 ಪತಿ ಲಕ್ಷ್ಮಣರ ಪಾದಾಂಬುಜ ಮಧುಪರ ಮೋದಾಶ್ರು ಸುರಿಸುತ ಪೂಜಿಸಿದವರ ಪುಲಕೀತ ವಿಗ್ರಹರ ವಾದಿವಾರಣ ಮೃಗಾಧಿಪರೆನಿಸುತ ಮೋದತೀರ್ಥ ಸುಮ ತೋದಧಿ ಚಂದಿರ 2 ಇಳಿಯೊಳು ಚರಿಸುತ ಬುಧ ಜನರನ್ನು ಚಲಿಸುತ ಛಾತ್ರರನು ತಿಳಿಸೀ ಸಚ್ಛಾಸ್ತ್ರವ ಮರ್ಮಗಳನ್ನು ಉದ್ಧರಿಸ್ಯವರನ್ನು ಯಳಮೇಲಾರ್ಯರ ಒಲುಮೆ ಪಡೆದು ಭವ ಕಲುಷ ವಿದೂರರ 3 ದಾಸರ ಶುಭಚರಿಯ ಸ್ತುತಿಸಿ ಶೇವಿಸಿ ಪಡೆದರು ಗುರುಕೃಪೆಯ ನೋಳ್ಪರಿಗಾಶ್ಚರ್ಯ ನತ ಜನರಘ ಪರ್ವತ ಪವಿ ಸನ್ನಿಭ ಕ್ಷಿತಿ ಸುರತತಿ ಸೇವಿತ ಪದ ಪದ್ಮರ 4 ಜಾಣ ಮಾನವರನ ಸಾನುರಾಗದಿ ಧ್ಯಾನಿಸಲಿವರನ್ನ ಕಾಮಿತ ಗರಿವರನ ಶ್ರೀನಿಧಿ ಕಾರ್ಪರ ಸ್ಥಾನಗ ನರಪಂಚನನನೊಲಿಸಿದ ಮೌನಿವರೇಣ್ಯರ 5
--------------
ಕಾರ್ಪರ ನರಹರಿದಾಸರು
ಚಾಮರವನು ಹಾಕಿರೆ ಕೋಮಲಾಂಗಿಯರುಶ್ರೀ ಮಹಾಮಾರುತನ ಸ್ಮರಿಸುತ ನೀವೆಲ್ಲರು ಪ. ರಾಮ ನರಹರಿ ಕೃಷ್ಣ ಶ್ರೀಮಹಿಧರಗೆಇಹ ಆಲದೆಲೆಯ ಮೇಲಿದ್ದು ಕ್ರೀಡಿಪಗೆ ಅ.ಪ. ಗೋಪಿ ಪುತ್ರಗೆ ನೀವು 1 ರಾಮ ಕುಳಿತಿರುವ ನಿಜ ಕಾಮಿನಿಯ ಸಹಿತಶ್ರೀ ಮಹೀ ಸಹಿತ ಭೂಮಿಧರನುತಾತಾಮಸರ ನಯನ ಮುನಿ ಕಾಮಿನಿವರ ಪ್ರೀತಶ್ರೀಮಲಸಹಾರ ಸಿರಿಧಾಮ ವಿಖ್ಯಾತ 2 ಸುಂದರಾಂಗಿಯರು ತ್ವರದಿಂದ ಪಾಡುತಲಿಮಂದಾಕಿನಿಯರ ಪ್ರಮುಖರಿಂದ ಸರತಿಗಳೇಮಂದಹಾಸ್ಯಗಳ ಮುಖದಿಂದ ನೋಡುತಲಿಇಂದಿರೇಶನ ಹತ್ತಿರ ಹೊಂದಿ ನಿಲ್ಲುತ್ತಲೆ3
--------------
ಇಂದಿರೇಶರು
ಚಾರು ಚರಣವ ಸಾರಿದೆ ಶರಣ ಮಂದಾರ ಕರುಣವ ಬೀರಿ ಭವವನಧಿ ತಾರಿಸು ತವಕದಿ ಸೂರಿ ಸುಧೀಂದ್ರ ಕುಮಾರ ಉದಾರ ಪ ಪಾದ ವನರುಹ ಧ್ಯಾನ ಪ್ರಣವನ ಸ್ತವನ ಅರ್ಚನೆ ಮಾಳ್ಪ ನಾನಾ ಜನರ ವಾಂಛಿತವೀವಗುಣ ಪೂರ್ಣ ಜ್ಞಾನ ಧನಪ ಪಾಲಿಸೆನಗೀಕ್ಷಣ ನಿನ್ನಾಧೀನ ಮನುಜನ ನೀ ಪ್ರತಿದಿನದಿ ದಣಿಸುವುದು ಘನವೆ ಗುರುವೆ ಪಾವನತರ ಚರಿತ 1 ಪಾದ ಕೀಲಾಲಜ ಮಧುಪಾ ಬಾಲಕನ ಬಿನ್ನಪವ ಲಾಲಿಸೋ ಮುನಿಪ ತಾಳಲಾರೆನೊ ತಾಪತ್ರಯದ ಸಂತಾಪ ಕೇಳೋವಿಮಲಜ್ಞಾನ ಶೀಲ ಸ್ವರೂಪ ಭೂಲಲನಾಧವ ಕೋಲನಂದನಾ ಕೂಲಗವರ ಮಂತ್ರಾಲಯ ನಿಲಯ 2 ಕಲಿಕಲ್ಮಷವಿದೂರ ಕುಜನ ಕುಠರಾ ನಳಿನಾಕ್ಷ ವಿಮಲ ಶ್ರೀ ತುಲಸಿಯ ಹಾರ ಗಳ ಸುಶೋಭಿತ ಕಮಂಡಲ ದಂಡಧರಾ ಜಲಧಿ ವಿಹಾರಾ ಸುಲಲಿತ ಕರುಣಾಂಬುಧಿಯೆ ಜಗನ್ನಾಥ ವಿ ಠಲನೊಲಿಮೆಯ ಪಡೆದಿಳೆಯೊಳು ಮೆರೆದಾ 3
--------------
ಜಗನ್ನಾಥದಾಸರು