ಒಟ್ಟು 3495 ಕಡೆಗಳಲ್ಲಿ , 122 ದಾಸರು , 2470 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಜಯದಾಸರ ಸ್ತೋತ್ರ ನಂಬಿದೆ ನಾ ನಿನ್ನ ಚರಣಕಮಲವನ್ನು ವಿಜಯರಾಯ ಪ ಬೆಂಬಿಡದೆಲೆ ವಿಷಯ ಹಂಬಲ ಬಿಡಿಸಯ್ಯ ವಿಜಯರಾಯ ಅ.ಪ ತಾಯಿ ಎಳೆಯ ಶಿಶುವನು ಬಿಟ್ಟಿರುವುದುಂಟೆ ವಿಜಯರಾಯಬಾಯ ಬಿಡುವೆ ನಾ ಭವದಲ್ಲಿ ಸಿಗಬಿದ್ದು ವಿಜಯರಾಯನೋಯಲಾರೆನೂ ಎನ್ನ ಕಾಯೊ ಕರುಣದಿಂದ ವಿಜಯರಾಯಕಾಯ ಮನವು ನಿನ್ನ ಚರಣಕ್ಕೊಪ್ಪಿಸಿದೆನೊ ವಿಜಯರಾಯ 1 ಕರ್ಮ ಕತ್ತಲೆಯೊಳು ಸುತ್ತಿ ವಿಜಯರಾಯ ತತ್ತಳಗೊಳುತಿಪ್ಪೆ ಎತ್ತಿರೊ ಎನ್ನ ವಿಜಯರಾಯಪೆತ್ತ ತಂದೆಗೆ ಮಗ ಭಾರವಾಗುವುದುಂಟೆ ವಿಜಯರಾಯವಿತ್ತ ಭಾಗ್ಯವನೊಲ್ಲೆ ಎಂದೆಂದಿಗೂ ನಾನು ವಿಜಯರಾಯ 2 ತುಂಬಿದ ಭಂಡಾರ ಸಂಪತ್ತು ಎನಗೆಂದು ವಿಜಯರಾಯಹಂಬಲಿಸುತ ಬಲು ಸಂಭ್ರಮದಿರುತಿಪ್ಪೆ ವಿಜಯರಾಯಸಂಬಳಕಾರ ಶಿಷ್ಯ ನಿನಗಲ್ಲ ಕೇಳಯ್ಯ ವಿಜಯರಾಯಬಿಂಬ ಶ್ರೀ ವೆಂಕಟ ವಿಠ್ಠಲನ ತೋರೊ ನೀ ವಿಜಯರಾಯ 3
--------------
ವೆಂಕಟೇಶವಿಟ್ಠಲ
ವಿಜಯದಾಸರ ಸ್ತೋತ್ರ ವಿಜಯರಾಯರ ಪಾದಕಮಲ ಭಜಿಸಲಾಕ್ಷಣ ದಿ- |ಗ್ವಿಜಯ ಮಾಡಿ ಸುಜನರನ್ನು ಪೊರೆವನನುದಿನ ಪ ದಾಸಪ್ಪನೆಂಬ ನಾಮದಿಂದ ಕರೆಸುತ ಉದರ ಗೋಸುಗದಿ ಪರರ ಬಳಿಯ ಆಶ್ರಿಸುತ ||ಯೇಸುಪರಿಯ ಬಡತನವು ಸೋಸಿ ದಣಿವುತ |ಕ್ಲೇಶಗೊಂಡು ಸುಲಿಸಿಕೊಂಡು ಕಾಶಿಗ್ಹೋಗುತ 1 ನಿತ್ಯ ಬ್ಯಾಸರದಲೆ ವ್ರತಗಳು ಉಪವಾಸ ಮಾಡುತ ||ರಾಶಿ ರಾಶಿ ಜನರ ಕೂಡಿ ದೇಶ ಚರಿಸುತ ಮ್ಯಾಲೆಕಾಶಿ ಬಿಟ್ಟು ಸೇತು ರಾಮೇಶನ್ನ ಹುಡುಕುತ 2 ತಿರುಗಿ ತಿರುಗಿ ಚೀಕಲಾಪರಿಗೆ ಬಂದನು ಕಂಡುಗುರುತು ಹಿಡಿದು ಆ ಕ್ಷಣದಿ ಕರೆದು ವೈದ್ಯರು ||ಪರಮ ಸಂತೋಷದಿಂದ ಭರಿತರಾದರು ಮೈನೆರೆದ ಶೋಭನಾದಿಗಳನು ತ್ವರಿತ ಮಾಡ್ದರು 3 ನಿತ್ಯ ಸಂಸಾರದಲ್ಲಾಸಕ್ತರಾಗುತ ದೊಡ್ಡ ಹತ್ತು ಎಂಟು ಗ್ರಾಮವನ್ನು ವತ್ತಿ ಆಳುತಾ ||ಗುತ್ತಿಗೆಯ ಹೊತ್ತ ರೊಕ್ಕ ಮ್ಯಾಲೆ ಬೀಳುತ ಯಿನ್ನುಎತ್ತ ಸೇರಲೆಂದು ಭಾಗೀರಥಿಗೆ ಹೋಗುತ 4 ಕಾಶಿಯೊಳಗೆ ಮಲಗಿರಲು ಸ್ವಪ್ನ ಕಂಡರು ಪುರಂದರ-ದಾಸರೇವೆಂಬುದು ವ್ಯಾಸ ಕಾಶಿಗೊಯ್ದರು ||ಶ್ರೀಶನಿಂದಲಿವರಿಗೆ ಉಪದೇಶ ಕೊಡಿಸೋರು ವಿಜಯ ದಾಸರೆಂದು ಕರೆಸಿರೆನ್ನೆ ಎದ್ದು ಕುಳಿತರು 5 ಕನಸಿನೊಳಗೆ ದೇವರ ದರುಶನಾಗುತ ಶ್ರೀ-ಮನಸಿಜನ ಪಿತನ ದಯವು ಘನ ಘನಾಗುತ ||ಜಿನಸು ಜಿನಸು ಪದ ಸುಳಾದಿಗಳನು ಪೇಳುತ ಆಗನೆನಿಸಿದಾಕ್ಷಣದಲಿ ಮುಖದಿ ಕವಿತ ಹೊರಡುತಾ 6 ಮತ್ತೆ ಹೊರಟು ಆದವಾನಿ ಸ್ಥಳಕೆ ಬಂದರು ಏನುಹತ್ತು ಜನರಿಗೆ ಪೇಳಿದ ವಾಕ್ಯ ಸತ್ಯವೆಂದರು ||ಸುತ್ತು ಮುತ್ತು ನೂರಾರು ದಾಸರು ನೆರೆದರು ಆನಿಸತ್ತಿಗಿ ಪಲ್ಲಕ್ಕಿಯವರೆ ಶಿಷ್ಯರಾದರು 7 ಯಾತ್ರಿ ತೀರ್ಥಗಳನು ಬಹಳ ಚರಿಸಿ ನೋಡುತ ಸ-ತ್ಪಾತ್ರರಲ್ಲಿ ನೋಡಿ ಧರ್ಮಗಳನೆ ಮಾಡುತ ||ರಾತ್ರಿ ಹಗಲು ವಿಜಯ ವಿಠ್ಠಲನೆಂದು ಪಾಡುತ ಜನರಶ್ರೋತ್ರಿಯಿಂದ್ರಿಯಗಳ ಉದ್ಧಾರ ಮಾಡುತ 8 ಪೂರ್ತಿ ಜ್ಞಾನದಿಂದ ಕರ್ಮವೆಲ್ಲ ಕಡಿದರು ಸ-ತ್ಕೀರ್ತಿವಂತರಾಗಿ ಬಹಳ ಖ್ಯಾತಿ ಪಡೆದರು ||ಕಾರ್ತಿಕ ಶುದ್ಧ ದಶಮಿ ದಿವಸ ನಡೆದರು ಶ್ರೀಸತ್ಯರಮಣ ಕೇಶವ ವಿಠಲನ್ನ ಕಂಡರು9
--------------
ಕೇಶವವಿಠ್ಠಲರು
ವಿಜಯರಾಯರ ದಿನದಿ ವಿಜಯ ಪಯಣವ ಮಾಳ್ಪೆ ನಿಜದಾಸಕೂಟ ಪಥದಿ ಪ. ವಿಜಯಸಖಪ್ರಿಯ ತಂದೆ ಮುದ್ದುಮೋಹನ ಗುರು ವಿಜಯವಿತ್ತುದ್ಧರಿಸಲಿ ದಯದಿ ಅ.ಪ. ಧರೆಯಲ್ಲಿ ಪುಟ್ಟಿ ಮುವ್ವತ್ತಾರು ವತ್ಸರವು ಸರಿದುದೀ ಬಹುಧಾನ್ಯಕೆ ವರಗುರು ಉಪದೇಶ ಅಂಕಿತವು ಲಭಿಸಿ ಎಂ ಟೊರುಷವಾಗಲಿಂದಿಗೆ ಪರಮಕೃಪೆಯಿಂದ ದಾಸತ್ವ ಸಿದ್ಧಿಸಲೆಂಬ ಕಾಲ ಒದಗೆ ನರಹರಿಯೆ ನಿನ್ನ ಚರಣವೆ ಎನಗೆ ಗತಿ ಎಂದು ನೆರೆ ನಂಬಿ ಪೊರಟೆನೀಗ ಬೇಗ 1 ಸರುವ ವಸ್ತುಗಳಲ್ಲಿ ಇರುವ ಅಭಿಮಾನ ಶ್ರೀ ಹರಿ ನಿನ್ನ ಪದದಲಿರಿಸು ವರ ಗುರು ಚರಣದಲಿ ಸದ್ಭಕ್ತಿ ಸರ್ವದಾ ಸ್ಥಿರವಾಗಿ ನೆಲೆಯಗೊಳಿಸು ಹೊರಗೊಳಗೆ ಹಿಂದುಮುಂದರಘಳಿಗೆ ಬಿಡದೆ ನೀ ನಿರುತದಲಿ ಸಂರಕ್ಷಿಸು ಹರಿದಾಸ ಮಾರ್ಗದಲಿ ಹರುಷದಲಿ ನಲಿವಂತೆ ವರಮತಿಯ ದಯಪಾಲಿಸು ಹರಿಯೆ 2 ಗುರುಕರುಣ ಕವಚ ತೊಟ್ಟಿರುವ ಎನಗಿನ್ನಾವ ಪರಿಯ ಭಯವಿಲ್ಲವೆಂದು ಸ್ಥಿರವಾಗಿ ನಂಬಿ ಪೊರಮಡುವೆನೀ ಶುಭದಿನದಿ ಗುರುವಾರ ಗುರು ಕೃಪೆಯಲಿ ಪರಿಪರಿಯ ದುಷ್ಕರ್ಮ ಪರಿಹರಿಸಿ ಕಾಯುವೊ ಗುರುಚರಣ ಧ್ಯಾನಬಲದಿ ಮರುತಾಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ಕರುಣದಲಿ ಒಲಿದು ಪೊರೆಯೊ ಹರಿಯೆ 3
--------------
ಅಂಬಾಬಾಯಿ
ವಿಜಯವಿಠಲರಾಯಾ | ನಂಘ್ರಿಯುಗ ಭಜಿಸುವ ವಿಜಯರಾಯನೆ ಜೀಯ ರಜದೂರ ತವಪದ ಭಜಕ ನಾನೆನಿಸಯ್ಯ ಋಜುರಾಜ ಪ್ರೀಯ ಕುಜನ ಸಂಗದಿ ಬೆರೆದು ಮನಹರಿ ಭಜನೆಗೊದಗದು ಎಷ್ಟು ಬೇಡಲು ದ್ವಿಜವರೇಣ್ಯನೆ ಎಮ್ಮ ಬಾಂಧವ ಸೃಜಿಸು ಶ್ರೀಧರನೊಲಿಮೆ ಶಕ್ತಿಯ 1 ಸೂನು ಎನಿಸಿದೆ ನಾನು ಕುಲಸ್ವಾಮಿ ಕೃಷ್ಣನ ಧ್ಯಾನ ಪಾಲಿಸು ಇನ್ನು ದಾನಿ ಸುರಧೇನು ಜ್ಞಾನ ಭಕ್ತಿ ಧ್ಯಾನಯೋಗದಿ ವೇಣುಗೋಪಾಲನ್ನ ಹೃದಯ ಪ್ರ ಧಾನ ನಾಡಿಯ ಮಧ್ಯ ಕುಣಿಸುವ ತ್ರಾಣ ತರಿಸು ತೀವ್ರ ಮಹಿಮನೆ 2 ಲೋಕನಾಥನ ಪ್ರೇಮ | ಭೋಗಿಸುವ ಯೋಗಿಯೆ ಸಾಕು ಸದ್ಗುಣಧಾಮ ಬಾಗಿದಿನೊ ನಿನ್ನ ಅಂಘ್ರಿಗೆ | ಶೋಕ ಸಲ್ಲದೊ ನೇಮ ಸ್ವೀಕರಿಸು ಎಮ್ಮ ಏಕ ಭಕ್ತಿಯ ಭಾಗ್ಯ ಪಾಲಿಸು ಶ್ರೀ ಕಳತ್ರನ ಸಂಗಮತ್ತನೆ ಅ- ನೇಕ ಭಕ್ತಗ್ಹರಿಯ ತೋರಿದೆ ನಾಕ ತರು ಕರುಣಾಳು ಗುರುವರ 3 ದಾಸ ವರ್ಗದ ದೊರೆಯೆ | ಲಜ್ಜೆಯಾಗುತಿದೆನ್ನ ದೋಷರಾಶಿಗಳೊರಿಯೆ ಹಸಗೆಟ್ಟು ಬಗೆ ಬಿನ್ನೈಸಲಾಗದೊ ಖರಿಯೆ ಬ್ಯಾಸರದ ಪೊರಿಯೆ ಕಾಸು ಬಾಳದ ಎನ್ನಕರಗಳ ಶ್ರೀಶ ಪಿಡಿವನು ಲೇಸು ಕರುಣದಿ ವಾಸುದೇವಗೆ ದಾಸ ಜನರೊಳು ಸೂಸಿ ಸುರಿವುದು ಸ್ನೇಹ ಸಂತತ 4 ದಾತರೊಳು ಸರಿದಾರೊ | ಹರಿದಾಸವರ್ಯನೆ ಆತುಮಪ್ರದ ತೋರೋ ನಿನ್ನಂಥ ದಾತರ ನಾ ತಿಳಿಯ ದಯ ಬೀರೊ ಆರ್ತಿಯನು ಹೀರೋ ಖ್ಯಾತ ನಿನ್ನಯ ಮಾತು ಒಮ್ಮೆಗು ಮಾತರಿಶ್ವನನಾಥ ಮೀರನು ಆತುರದಿ ನಿನ್ನಂಘ್ರಿಗೆರಗುವೆ ಭೂತ ಪಾಲಿಸು ಹರಿಯ ಒಲುಮೆಗೆ 5 ಸುರತರು ಚಿಂತಾಮಣಿಗಳಂದದಿ ಮಹ ವರಗಳೀವ ಶ್ರೀಮಂತ ಭಾರತೀಶನ ಶ್ರೀ ಚರಣ ಬಿಡದಿಹ ಸ್ವಾಂತ ಪರಮ ನಿಶ್ಚಿಂತ ಚರಣ ಕಮಲದಿ ಮೊರೆಯನಿಟ್ಟನ ಕರದ ಶಿಶುಗಳಂತೆ ಪಾಲಿಸಿ ಮರುತ ಮಂದಿರ ಜಯೇಶವಿಠಲನ ಭರದಿ ತೋರಿದ ಕರುಣ ಸಾಗರ 6
--------------
ಜಯೇಶವಿಠಲ
ವಿಜಯವಿಠ್ಠಲ ನಾಮ ಭಜಿಸಿದಾ ಮಾನವಗೆ ಸತತ ಸಂಪದವಕ್ಕು ಪ ಕಾಯ ಶುಚಿಯಾಗುವದು ಕಠಿನತನ ಪೋಗುವದು ಆಯು ಹೆಚ್ಚುವುದು ನಿಯೋಗಿ ಯಾಹಾ ನಾಯಿ ಮೊದಲಾದ ಪ್ರಾರಬ್ಧ ಜನುಮಗಳಿರಲು ಬಾಯಿಲಿಂದಾಕ್ಷಣ ತೀರಿ ಪೋಪವು ಕೇಳಿ 1 ದ್ವೇಷಿಗಳು ಎಲ್ಲ ಬಾಂಧವರಾಗಿ ಇಪ್ಪರು ದ್ವೇಷ ಪುಟ್ಟದು ತನಗೇತರ ಮೇಲೆ ದೇಶ ಮಧ್ಯದಲಿ ತಾನೆ ಎಲ್ಲಿ ಇದ್ದರೂ ಕೋಶಾಧಿಪತಿಯಾಗಿ ಸಂಚರಿಸುತಿಪ್ಪರು2 ಹೀನ ವಿಷಯಂಗಳಿಗೆ ಅವನ ಮನವೆರಗಿದರೆ ಕಾಣಿಸುವನು ತಾನೆ ಮುಂದೊಲಿದು ಏನು ಹೇಳಲಿ ಹರಿಯ ಅನುಕಂಪನಾತನಕೆ ಕಾಲ ಕಡೆಗಾಣನು 3 ದೇವಾದಿ ಮುನಿತತಿಯ ಮೊದಲಾದವರು ನೆನೆದು ಆವಾವ ಸೌಖ್ಯದಲಿ ಇಪ್ಪರದಕೋ ಭಾವದಲಿ ತಿಳಿದು ಭಕುತಿಯ ಮಾಡಿರೋ ಜನರು ಕಾವುತಲಿಪ್ಪ ಸರ್ವಾಶ್ರಯನಾಗಿ ಹರಿ4 ಕಂಡವಗೆ ದೊರಕದು ಈ ನಾಮ ಜಪಿಸಿದರು ಕಂಡವಗೆ ಬಲು ಸುಲಭ ಭಯವೆಯಿಲ್ಲಾ ಮಂಡಲವ ಚರಿಸಿ ನಾನಾ ವ್ರತ ಮಾಡದಿರಿ ಕೊಂಡಾಡು ವಿಜಯವಿಠ್ಠಲನ ಆಸರ ಸೇರಿ5
--------------
ವಿಜಯದಾಸ
ವಿಠಲಾ ಎನ್ನಿರೊ ಸುಜನರೆಲ್ಲಾ ಪ ವಿಠಲಾ ಎಂದಾರೆ ಸುಟ್ಟುಹೋಗೊದು ಪಾಪ ಅ.ಪ ಪ್ರಾತಃ ಕಾಲದೊಳು ಸ್ನಾನಾದಿಕರ್ಮ ಮುಗಿಸೀವಿಠಲಾ.... ವಾತದೇವನ ದ್ವಾರ ಅರ್ಪಿಸುತ್ತಾ ನೀವು | ವಿಠಲಾ....1 ಗುರುಗಳಲ್ಲಿಗೆ ಪೋಗಿ ವಂದಿಸಿ ಮೆಲ್ಲಾನೆ ವಿಠಲಾ.... ಮರÀುತಮತದ ಸಚ್ಛಾಸ್ತ್ರಗಳ ನೋಡುತಾ ವಿಠಲಾ.... 2 ಪಂಚÀಭೇದ ಪ್ರಾಪಂಚ ಸರ್ವವು ತಿಳಿದು ವಿಠಲಾ... ಪಂಚಬಾಣನಯ್ಯ ಪಂಚರೂಪದಿ ತೋರುವಾ ವಿಠಲಾ.... 3 ಪ್ರಾರಂಭಮಾಡಿ ಪರಮೇಷ್ಠಿ ಪರಿಯಂತ ವಿಠಲಾ.... ಶ್ರೀಪ್ರಣವ ಪ್ರತಿಪಾದ್ಯಗಿವರು ಪ್ರತಿಬಿಂಬರೆಂದು ವಿಠಲಾ.... 4ಮಾತುಮಾತುಗಳೆಲ್ಲಾ ಶ್ರೀಹರಿಸ್ತೋತ್ರವೆಂದು ವಿಠಲಾ.... ಆತುಮಾಂತಾರಾತ್ಮನೆಂದು ಕೂಗುತ ಒಮ್ಮೆ ವಿಠಲಾ.... 5 ತೀರ್ಥಕ್ಷೇತ್ರಗಳಿಗೆ ಪೋಗಿ ಬರುವಾಗ ವಿಠಲಾ.... ಪಾರ್ಥಸಖನ ಪ್ರೇರಣೆಯಿಂದ ಮಾಡಿದೆವೆಂದು ವಿಠಲಾ.... 6 ನಂಬೀದ ಜನರೀಗೆ ಬೆಂಬಲನಾಗುವ ವಿಠಲಾ.... ಸಂಭ್ರಮದಿಂದಾ ಸಂರಕ್ಷಿಸುವನೆ ಇವನೂ ವಿಠಲಾ.... 7 ಕಂಚಿಕಾಳಾಹಸ್ತಿ ಶ್ರೀರಂU ಮೊದಲಾಗಿರುವ ವಿಠಲಾ... ವಂಚನೆಯಿಲ್ಲಾದೆ ಭಜಿಸಿದವರ ಪೊರೆವಾ ವಿಠಲಾ.... 8 ಪಂಚಪ್ರಾಣಾರಲಿನಿಂತು ಕಾರ್ಯಮಾಳ್ಪ ವಿಠಲಾ.... ಕರ್ಮ ಇವನಿಂದ ನಾಶವೆಂದು ವಿಠಲಾ.... 9 ಊಧ್ರ್ವಪುಂಡ್ರಗಳು ದ್ವಾದಶನಾಮ ಇಡುವಾಗ ವಿಠಲಾ.... ಶುದ್ಧನಾಗೀ ಶುಭ್ರಹೊಸ ವಸ್ತ್ರ ಹೊದುವಾಗ ವಿಠಲಾ..... 10 ಪಂಚಮುದ್ರೆಗಳಲಿ ಪಂಚರೂಪದಿ ಇರುವ ವಿಠಲಾ... ನಿರ್ವಂಚನಾಗಿ ಧರಿಸಿದವರಿಗೊಲಿವಾ ವಿಠಲಾ... 11 ಪರಿಯಂತ ವಿಠಲಾ... ವೇದೈಕವೇದ್ಯ ವಿಶ್ವಾಮೂರ್ತಿ ಕಾರ್ಯಗಳೆಂದು ವಿಠಲಾ.... 12 ಚೇತನಾ ಚೇತನ ಜಡದೊಳಗೆ ನೀವು ವಿಠಲಾ... ಪ್ರೀತಿಯಿಂದಾಲಿ ಪೂಜೆಮಾಡಿದವರಾಗೆ ಒಲಿವ ವಿಠಲಾ.... 13 ಪರಿ ಚಿಂತಿಸಿ ವಿಠಲಾ... ಶಾರೀರದೊಳಿÀರುವ ಪ್ರಾಜ್ಞನಲಿ ಕೂಡಿಸಿ ವಿಠಲಾ.... 14 ಮಧ್ವಾಂತರ್ಯಾಮಿಯಾಗಿ ಉಡುಪಿಯಲ್ಲಿ ನಿಂತ ವಿಠಲಾ... ಕರ್ತು ವಿಠಲಾ..... 15
--------------
ಮುದ್ದುಮೋಹನವಿಠಲದಾಸರು
ವಿದ್ಯಾವಿದ್ಯಕಮೀರಿದಾಗುಣತ್ರಯಾ ದಾವನು ಹೊಂದಾದಿಯಾ ನಿಚಯಾಸರ್ವಕ್ಕುದಾವಾಶ್ರಯಾ ಶುದ್ಧಾತ್ಮಾ ಸುಖದಾಲಯಾ ಸತುಚಿದಾನಂದೈಕರಸನಿಶ್ಚಯಾ ಸಿದ್ಧಾಂತ ಪ್ರತಿಪಾದ್ಯದಾವನುದಯಾ ಶ್ರೀ ದೇವ ದತ್ತಾತ್ರಯಾ 1 ಜಗದೋಳಾವನಸದುಗುಣಾ ನಿರಗುಣಾ ಸ್ವಾರೂಪದಾ ಲಕ್ಷಣಾ ಬಗೆ ಬಗೆಯಲಿ ಮಾಡಲು ವಿವರಣಾ ನೇತಿನೇತಿ ಶೃತಿ ವಚನಾ ಮುನಿಜನಾ ನಿಶ್ಚೈಸದಿಹ ರಾವನಾ ಪ್ರಗಟೀಸಿಹನು ನೋಡಿದೇ ನಿಜಘನಾ ಶ್ರೀದತ್ತ ನಿರಂಜನಾ 2 ನಿಶ್ಚಯಿಸದಿಹದಾವನಲಿ ತಾಂಪೌರಾಣಿತಿಹಾಸ ಭೇದಿಸುತಲೀ ನೆಲೆ ಗಾಣದೇ ನಿಲ್ಲಲೀ ಅಪದಿಂದ ಮೀಮಾಂಸತರ್ಕವರಲೀ ಬೆಂಡಾದವು ನೋಡಲೀ ಅಪರ ಘನ ಬಂದಿದೇಧರಿಯಲೀ ಬೆಂಡಾದವು ನೋಡಲೀ 3 ಪಾತಾಳಾದಿಯ ಲೋಕವೇಳುಸರಳು ದಾವನ ಪದ ಕಟಗಳು ಖ್ಯಾತಿಂದೇಭುವನೇಳು ಊಧ್ರ್ವಕಿರಲು ನಾಭಿಂದ ಸಿರವಾಗಲು ಸೀತಾಂಶು ರವಿದಾವನಂಬಕಗಳು ಅಶಾವೆ ಶ್ರೀತಂಗಳು ದತ್ತೆನಿಸಲು4 ಅಮರಂಗಣಾ ದಾವನುದರ ವಿಶ್ವಕಾಗಿ ಭುವನಾ ಶ್ರೀಮದ್ರಮಾರಮಣಾ ನಖದಾಧೀನಾ ಶ್ರೀದತ್ತ ಮನ ಮೋಹನಾ 5 ಸರ್ವೆಶ ಸರ್ವೋತ್ತಮಾ ಸರ್ವಾಧಾರನುದಾವ ದೇವಗರಿಮಾ ಪೂಜ್ಯನು ಸಕಲಾಗಮಾ ಸರ್ವಾತೀತನು ದಾವನಂಘ್ರಿ ಕಮಲಾ ಸೇವಿಸುವಳು ಶ್ರೀರಮಾ ಶ್ರೀದತ್ತ ಗುರುವೇನಮಃ 6 ಅನಸೂಯಾ ಕರರತ್ನನಾಗಿಜನಿಸೀ ಇಷ್ಟಾರ್ಥವನು ಪೂರಿಸೀ ಯೋಗಾಂಗವನು ಪ್ರಕಟಿಸಿ ಸ್ಮರಿಸೀದವರಲ್ಲಿ ಬಹುಕರುಣಿಸೀ ಶ್ರೀ ದತ್ತಪದ ಧ್ಯಾಯಿಸೀ 7 ಮೆರೆವಾ ಮುಪ್ಪುರದಿಂದೇರುವಾ ಸಾರೀ ಸಾವಿರದಳ ಪದ್ಮದಿರುವಾ ಸ್ವಾನಂದ ಭೋಗಿಸುವಾ ಮುದ್ರಾಂಕುರವ ಬೀರುವಾ ಶ್ರೀದತ್ತ ಗುರು ಎನಿಸುವಾ8 ಕಾತ್ರ್ಯವೀರ್ಯವರವಾಯದುರಾಯನುದ್ಧರಿ ಸಿದಾ ಗುರುಮಹೀಪತಿ ನುಡಿಸಿದಾ ಸ್ವಾನಂದ ಸುಖ ಬೀರಿದಾ ಸದಾ ಪಡೆವನು ಗತಿಸಂಪದಾ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಿಧಿ ಭವ ಸುರಾರ್ಚಿತಪಂಕಜಾಂಘ್ರಿ ಸುಪೋಷಾ | ಲಕ್ಷ್ಮೀ ನಿವಾಸಾ ಪ ಶಂಖ ಚಕ್ರ ವರಾಭಯಕರ ಶ | ಶಾಂಕ ವದನ ಕಳಂಕ ರಹಿತನೆಕಿಂಕರನ ಅವಗುಣಗಳೆಣಿಸದೆ | ಪಂಕಜಜ ಪರಿಪಾಲಕನೆ ಶ್ರೀ ಅ.ಪ. ಶುಭ ಭಾರ ಕಾರುಣಿಕ ಪರಿ | ವಾರ ಮಾಮನೊಹಾರ ಮೂರುತಿ1 ಭವ ಕೈಟಭಾರಿ ಮಹಾಮಹಿಮ ಗುಣ ||ಕೂಟದಿಂದಲಿ ಜಗವ ನಿರ್ಮಿಸಿ | ಹಾಟಕೋದರ ಹರ ಪ್ರಮುಖ್ಯರನೀಟು ಸೂತ್ರದಿ ಈಟದಿಂದದಿ | ಚೂಟದಲಿ ಚೆಲ್ಲಾಟವಾಡಿದ 2 ಪರ ಕಲುಷ ಕಾ | ನನವ ಖಂಡಿಸೊ ವ್ಯಾಸ ವಿಠ್ಠಲಮನ ವಚನ ಕಾಯದಲಿ ನಮಿಸುವೆ | ಘನ ಮಹಿಮ ಗಜವರದ ಸುಂದರ 3
--------------
ವ್ಯಾಸವಿಠ್ಠಲರು
ವಿನತಾನುತ ಮಣಿವರೂಥ ಜನಕಸುತಾ ನಾಥಪ್ರೀತ ಪ ಕನಕಾಂಬರ ಪಾರ್ಥಸೂತ ವನಮಾಲಾ ಮಣಿರಾಜಿತ ಅ.ಪ ಶುಕ ಶೌನಕ ಪರಿಪೂಜಿತ ಸಕಲಾಗಮ ವೇದವಿದಿತ ವಕುಳಸುಮಾಭರಣಾಯತ ಸುಕರಾರ್ಜಿತ ಮೋಕ್ಷದಾತ 1 ಪಾಹಿ ಪಾಹಿ ಪರಮನಾಮ ಪಾಹಿ ಪಾಹಿ ಪೂರ್ಣಕಾಮ ಪಾಹಿ ಪಾಹಿ ದನುಜಭೀಮ ಪಾಹಿ ಪಾಹಿ ಮಾಂಗಿರಿಧಾಮ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಿನುತ ಪದ ಪ ಭವ ಸರ್ವಜೀವ ಹೃದ್ವನಜ ನಿವಾಸಿ ಅ.ಪ ಕಾನನ ಗಂಭೀರ ಸುಗುಣದಾರ ಸುವಿಚಾರಧೀರ | ರಘು ಧರಣಿಜಾ ಕರುಣಾಕರ ದಿನಕರ ಕುಲಮಣಿ ಜನ ವರ ಶುಭಕರ1 ಖರವಿದಾರ ಕಲಿ ಕಲ್ಮಷನಾಶನ ನಾಮ ಶ್ರೀಕರ ಸುಂದರ ಶ್ಯಾಮ ಭಾಸುರ ಶರೀರ ಸಂಪೂರ್ಣ ಕಾಮ ತುಳ- ಸೀದಳಧಾಮ ವಿಭೀಷಣ ಪ್ರೇಮ 2 ಕಮಠ ಕಿಟ ನರಹರಿ ವಾಮನರೂಪ ಭಾರ್ಗವ ಕರಧೃತ ಚಾಪ ಸುಜ್ಞಾನದೀಪ ವಸುದೇವ ತನಯ ಜಿನ ಜಾತ ಕಲ್ಕಿ ಗುರುರಾಮ ವಿಠಲ 3
--------------
ಗುರುರಾಮವಿಠಲ
ವಿನುತ ಸಿರಿ | ರಾಮ ವಿಠಲ ಕಾಯೋ ಪ ಈ ಸತೀ ಮಣಿಯ ನೀ | ಸಲಹಬೇಕೆಂದುಶೇಷ ಸಂಜ್ಞಿತ ಹರಿಯೆ | ಪ್ರಾರ್ಥಿಸುವೆ ಧೊರೆಯೇ ಅ.ಪ. ಅಮೃತ ಕೂರ್ಮ | ರೂಪದಿಂದರುಹೀಉಪದೇಶ ನೀಡ್ವಗುರು | ರೂಪವನೆ ತೋರಿಸುತಅಪರಿಮಿತ ಕಾರುಣ್ಯ | ರೂಪನಾಗಿರುವೆ 1 ಪರಮ ಗುರು ನಿಜ ರೂಪ | ಎರಡು ಬಾರಿಯು ತೋರಿಸರಸನಾಬ್ಯಾದಿ ಹರುಷ | ಬೀರ್ದೆ ಭಯಹಾರೀಕರುಣವೆಂತುಟೊ ನಿನಗೆ | ಸುರಸಿದ್ಧ ಸಂಸೇವ್ಯಶಿರಿ ರಮಣ ಶ್ರೀರಾಮ | ಪರಮ ಪುರುಷನೆ 2 ಈ ಸತೀಮಣಿ ಬಯಕೆ | ನೀ ಸಲಿಸಿ ಲೌಕಿಕದಿಲೇಸು ಹೊಲ್ಲೆಗಳೆಂಬ | ಪಾಶಗಳ ಬಿಡಿಸೀದೋಷ ದೂರನೆ ಹರಿಯೆ | ನೀ ಸಲಹೆ ಪ್ರಾರ್ಥಿಸುವೆದಾಶರಥೆ ಪೊರೆ ಇವಳ | ಮೇಶ ಮಧ್ವೇಶಾ 3 ಮಧ್ವಮಾರ್ಗದಿ ಇಹಳು | ಶುದ್ಧ ಭಕ್ತಿಜ್ಞಾನಸಿದ್ಧಿಸುತ ಇವಳಲ್ಲಿ | ಉದ್ಧರಿಸೊ ಹರಿಯೇ |ಕೃದ್ಧ ಖಳ ಸಂಹಾರಿ | ಸದ್ಧರ್ಮ ಪಥತೋರಿಅಧ್ವಯನೆ ತವ ನಾಮ | ಶುದ್ಧ ಸುಧೆ ಉಣಿಸೋ 4 ಸರ್ವವ್ಯಾಪ್ತನೆ ದೇವ | ಪವನಾಂತರಾತ್ಮಕನೆದರ್ವಿ ಜೀವಿಯ ಕಾಯೊ | ಶರ್ವವಂದ್ಯಾ |ಸರ್ವ ಸುಂದರ ಗುರು | ಗೋವಿಂದ ವಿಠ್ಠಲನೆಈ ವಿಧದ ಬಿನ್ನಪವ | ನೀವೊಲಿದು ಸಲಿಸೋ 5
--------------
ಗುರುಗೋವಿಂದವಿಠಲರು
ವಿಪರೀತ ಮತಿವಂತೆ ಸರಸ್ವತಿಯೆ ನಿನ್ನ ಕೃಪೆ ಬಯಸಿ ಭಜಿಸುವೆನು ಸಫಲನೆನಿಸೆನ್ನ ಪ ಶುಂಭಾರಾವಣಗಿತ್ತ ಮತಿಯೆನಗೆ ಬೇಡಮ್ಮ ಗುಂಭದಿಂ ವಿಭೀಷಣಗೆ ಕೊಟ್ಟ ಮತಿ ನೀಡು ಕುಂಭಕರ್ಣನಿಗಿತ್ತ ಮತಿ ಕನಸಿನಲಿ ಬೇಡ ಕುಂಭಿನಿಯೊಳ್ಹನುಮನಂಥ ಮತಿ ನೀಡಿ ಸಲಹು 1 ಕೀಲ ಮಾರೀಚಗಿತ್ತ ಕೀಳಮತಿ ನೀಡದಿರು ಪಾಲಿಸು ಜಟಾಯುನಂಥ ಶೀಲಮತಿಯೆನಗೆ ವಾಲಿಗೆ ನೀನಿತ್ತ ಜಾಳುಮತಿ ನೀಡದೆ ಸುಗ್ರೀವಗಿತ್ತ ಮೇಲುಮತಿ ನೀಡು 2 ಮೂಡಣಾಧಿಪನಂತೆ ಕೇಡುಮತಿ ನೀಡದೆ ರೂಢಿಯೊಳ್ಕರಿಯಂಥ ಗಾಢಮತಿ ನೀಡು ನೀಡದಿರು ಶಶಿಯಂಥ ಖೋಡಿ ದುರ್ಮತಿಯನು ನಾಡಿನಲಿ ಧ್ರುವನಂತೆ ಮಾಡುದಯ ಸುಮತಿ 3 ದುರುಳ ಕೌರವನಂತೆ ಕಿರಿಮತಿಯ ಕೊಡಬೇಡ ಪರಮ ಪಾಂಡವರಂಥ ಖರೆಮತಿಯ ನೀಡು ಧರೆಯೊಳ್ಜಯದ್ರಥನಂತೆ ನರಿಮತಿಯ ಕೊಡದಿರು ವರ ವಿದುರನಂತೆ ಬಲು ನಿರುತಮತಿ ನೀಡು 4 ಮರವೆ ಮತಿ ಒಲ್ಲೆನೌ ಹರಿಯ ನಿಜ ದಾಸರಂಥ ಸ್ಥಿರತಿಮತಿಯ ನೀಡು ಹರಣ ಪೋದರು ಬಿಡದೆ ವರದ ಶ್ರೀರಾಮನಡಿ ಅರಿವಿಟ್ಟು ಭಜಿಸುವಪಾರಮತಿ ನೀಡು 5
--------------
ರಾಮದಾಸರು
ವಿಬುಧ ಪ್ರಿಯ ವಿಠಲ | ಶುಭದ ಪೊರೆ ಇವನಾ ಪ ಅಬುಜ ಜಾಂಡೋದರನೆ | ಕುಬುಜೆ ಸದ್ ವರದಾ ಅ.ಪ. ದಾಸನಾಗಲು ಇವಗೆ | ಆಶೆ ಪ್ರೇರಕನಾಗಿವಾಸು ದೇವಾಖ್ಯ ತೈ | ಜಸನೆ ಕಾರ್ಯರೂಪಿಸೂಸಿತವ ರೂಪವನು | ಲೇಸಾಗಿ ತೋರಿಸೆಹೆಕೇಶವನೆ ಅದನೆ ಉಪ | ದೇಶಿಸಿಹೆ ಹರಿಯೆ 1 ಪ್ರೀಯ ಅಪ್ರೀಯ ಉ | ಭಾಯಾನು ಭವದಲ್ಲಿಆಯುತನು ನೀನಾಗಿ | ಉದ್ವೇಗ ಕೊಡದೇನಿಯುತಕರ್ಮದಿ ರತನ | ದಯದಿಂದ ನೀಮಾಡಿಹಯಮೊಗಾಖ್ಯ ಹರಿಯೆ | ಕೈಯಪಿಡಿ ಇವನಾ 2 ಲೋಕವಾಕ್ಯದಿ ವಿರಸ | ಲೋಕೈಕನಾಥನುವಾಕ್ಯದೊಳು ರತಿಯನ್ನೆ | ನೀ ಕೊಟ್ಟಿ ಕಾಯೋ |ಮಾಕಳತ್ರನದಾಸ | ಸಂಕುಲದಿ ಸದ್‍ಭಕ್ತಿಶ್ರೀಕರನೆ ನೀನಿತ್ತು | ಸಾಕ ಬೇಕಿವನಾ 3 ಮಧ್ವಮತದಲಿ ದೀಕ್ಷೆ | ಶುದ್ಧ ಹರಿ ಗುರುಭಕ್ತಿಅದ್ವೈತ ಕ್ರಯವರಿಯೆ | ವಿದ್ಯೆ ಸಂಘಟಿಸೀಕೃದ್ಧಖಳ ನಿವಹಗಳ | ಪ್ರಧ್ವಂಸಗೈಯುತಲೀಉದ್ದರಿಸೋ ಇವನನ್ನು | ಮಧ್ವಾಂತರಾತ್ಮ 4 ವೇದ ಕದ್ದೊಯ್ದವನ | ಬಾಧೆ ನೀ ಪರಿಹರಿಸಿಸಾದುಗಳ ಪೊರೆದಂತೆ | ಆದರಿಸಲಿವನಾಮೋದಿ ಗುರು ಗೋವಿಂದ | ವಿಠಲನೆ ಬಿನ್ನವಿಪೆಮೈದೊರಿ ಸಲಹುವುದು | ಸಾಧುವಂದಿತನೇ 5
--------------
ಗುರುಗೋವಿಂದವಿಠಲರು
ವಿಮಲಮತಿಯ ಪಾಲಿಸಭವ ಅಮಿತದಯಾರ್ಣವ ದೇವ ಪ ದೀನಬಂಧು ಜ್ಞಾನಸಿಂಧು ದೀನನೊಳು ನೀನೆ ನಿಂದು ಹೀನಮತಿಯ ತರಿದು ತವ ಧ್ಯಾನ ಸದಾನಂದದಿಡುವ 1 ಆಶಾಪಾಶಗಳನು ತುಳಿದು ದೋಷರಾಸಿಗಳನು ಕಡಿದು ಶ್ರೀಶ ನಿಮ್ಮ ಸಾಸಿರನಾಮವ ಧ್ಯಾಸಕಿತ್ತು ಜ್ಞಾನ ಕೊಡುವ 2 ಸತ್ಯ ಶ್ರೀರಾಮ ನಿಮ್ಮ ಪಾದ ಭಕ್ತಿಯಿಂದ ಬೇಡ್ವೆ ಸದಾ ಚಿತ್ತ ಶುದ್ಧಿಗೈದು ಎನಗಾ ನಿತ್ಯ ಮುಕ್ತಿ ನೀಡಿ ಬೇಗ 3
--------------
ರಾಮದಾಸರು
ವಿಮಲಮಹಿಮನೆ ದಾಸನಾಸೆಪೂರೈಸೊ ಅಮಿತ ನಿಮ್ಮಯ ಬಿರುದು ಸತ್ಯವೆಂದೆನಿಸೊ ಪ ಕಷ್ಟಹರ ನೀನಹುದೆ ದಿಟ್ಟತನ ಕೊಡುಯೆನಗೆ ಶಿಷ್ಟರೊಡೆಯ ನೀನಹುದೆ ಗಟ್ಟಿಮನವ ಪಾಲಿಸು ಇಷ್ಟಪೂರ್ಣ ನೀನಹುದೇ ಕೊಟ್ಟು ರಕ್ಷಿಸೆನ್ನ 1 ದೀನರಾಸ್ಪದನಹುದೇ ಧ್ಯಾನ ದಯೆ ಪಾಲಿಸೈ ಗಾನಲೋಲಹುದೆ ನೀ ಜ್ಞಾನವನು ನೀಡೊ ಮಾನರಕ್ಷ ನೀನಹುದೇ ಅಭಿಮಾನಯೆನದಿರೆನ್ನ ಧ್ಯಾನಿಕಧೇನಹುದೇ ಆನಂದ ನೀಡೊ 2 ನ್ಯಾಯವಂತ ನೀನಹುದೇ ಮಾಯೆಮೋಹವನು ಬಿಡಿಸು ಪಾವನಾತ್ಮ ನೀನಹುದೇ ಸಾವು ಹುಟ್ಟು ಗೆಲಿಸು ಜಯವಂತ ನೀನಹುದೇ ದೇಹಿಯೆನಿಸದಿರಲ್ಪರಿಗೆ ಕಾವದೇವ ನೀನಹುದೇ ಭಾವದ್ವಾಸಿಸೆನ್ನ 3 ಪೃಥ್ವಿ ವ್ಯಾಪಕನಹುದೇ ಚಿತ್ತಶುದ್ಧಮಾಡೆನ್ನ ಸತ್ ಚಿತ್ತ ನೀನಹುದೇ ಸತ್ಸಂಗ ನೀಡೊ ಭಕ್ತವತ್ಸಲನಹುದೇ ಅನಿತ್ಯಗುಣ ಬಿಡಿಸೆನ್ನ ಕರ್ತನು ನೀನಹದೇ ಸತ್ಪಥದೆನ್ನಿರಿಸೊ 4 ಅಸಮಕರುಣಹುದೇ ನೀ ಪುಸಿಗೊಲಿಸಿದಿರು ಎನ್ನ ದೋಷಹರ ನೀನಹುದೇ ಹಸನೆನಿಸು ಎನ್ನ ದಾಸರಭಿಮಾನ್ಯಹುದೇ ಪೋಷಿಸೆಲೊ ತವಪಾದ ಧ್ಯಾನದಿರಿಸೆನ್ನ ಶ್ರೀಶ ಶ್ರೀರಾಮ5
--------------
ರಾಮದಾಸರು