ಒಟ್ಟು 3136 ಕಡೆಗಳಲ್ಲಿ , 126 ದಾಸರು , 2157 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಸ್ವತಿಗೆ ಭಾರತಿಗೆ ಮಂಗಳವು ಹರಿಗೆ ಪ ವಾರುಣಿ ಸಾಪರಣಿ ಉಮೆಯರಿಗೆ ಅ.ಪ ಸುರಋಷಿಚಿರಪಿತ ರಾಜರಿಗೆ 1 ನರಶ್ರೇಷ್ಠ ವಿಪ್ರಾದಿ ಸುಜನರಿಗೆ2 ವಿಶ್ವವ್ಯಾಪಕ ಗುರುರಾಮವಿಠಲಗೆ 3
--------------
ಗುರುರಾಮವಿಠಲ
ಸರಸ್ವತಿದೇವಿ ಸ್ತುತಿ ಶುಕ ವಾಣಿ ಪ ಪ್ರೀಯಳೇ ಹರಿಯಾ |ನವ ವಿಧದಿ ಭಜಿಸುವಾ ||ಕವಿಗಳೊಳಿಡಬೇಕು | ನಿನ್ನನೇ ಒಂದರಿಯಬೇಕು1 ವೀಣಾಪಾಣಿಯೆ ಪಿತನಾ |ಧ್ಯಾನಾದೊಳಿರಿಸೆನ್ನ |ಹೀನಾ ವೈಷಿಕಗಳನ |ನಾನೊಲ್ಲೆನನುಗಾಲಾ 2 ಗುರುಪ್ರಾಣೇಶವಿಠ್ಠಲಾ |ತ್ವರಿತಾ ತಾನೊಲಿವಂತೆ ||ವರಮತಿಯನಿತ್ತೆಮ್ಮ |ಪೊರಿಯಲಿ ಬೇಕಮ್ಮಾ3
--------------
ಗುರುಪ್ರಾಣೇಶವಿಠಲರು
ಸರಿಯೇನು ನಿನಗಿದು ಸರಸಿಜನಯನನೆ ಚರಣ ಭಜಿಪರೊಳು ಕರುಣಿಸದಿರುವಿ ಪ ದೀನಜನರ ಬಂಧು ನೀನೆ ನಿರ್ದಯನಾದರಿ ನ್ನೇನು ಗತಿಯು ಎನಗೆ ಪ್ರಾಣಾಂತರ್ಗತನೆ ಹೀನ ನಿನಗಲ್ಲೇನೈ ಗಾನವಿಲೋಲ 1 ಇಂದಿರೇಶಾನಾಥಬಂಧುವೇ ನೀ ದಯಾ ಸಿಂಧು ನೀ ಸಲಹೆಂದು ಬಂದು ಮರೆಯ ಬಿದ್ದೆ ಬಂದ ಸಂಕಟದೊಳಗಿಂದ ಸಲಹದಿರೆ ಕುಂದು ನಿನಗಲ್ಲೇನೈ ಮಂದರನಿಲಯ 2 ನಂಬಿದ ಭಕ್ತರ ಇಂಬುದಾಯಕನು ನೀ ನೆಂಬ ಬಿರುದ್ಹೊತ್ತಿರುವಿ ಅಂಬುಜನಯನ ನಂಬಿದೆನು ನಿನ್ನ ಪಾದಾಂಬುಜ ದೃಢವಾಗಿ ಬೆಂಬಲಿ (ರ್ಪೊ) ರೆಯೆನ್ನ ಸಂಭ್ರಮದಿ ಶ್ರೀರಾಮ 3
--------------
ರಾಮದಾಸರು
ಸರ್ಪಾದ್ರಿ ವಾಸ ವಿಠಲ | ಅರ್ಪಿಸುವೆನಿವಳಾ ಪ ಶೂರ್ಪಕರ್ಣನ ಪಿತಗೆ | ಸಖ ನೆನಿಪ ಹರಿಯೇ ಅ.ಪ. ನೊಂದು ಸಂಸಾರದಲಿ | ಬಂಧನವ ಕಳೆಯಲ್ಕೆನಂದ ನಂದನನನ್ನು | ವಂದಿಸುತ ಬಹಳಾಕಂದರ್ಪನುಪಟಳವೇ | ಛಂದದಿಂ ದೂರಿರಿಸಿನಂದಾದ್ರಿ ನಿಯಲ ತವ | ಪಾದಕಾಂಕ್ಷಿಪಳಾ 1 ಪಾದ | ಶತಪತ್ರಕೀವಾ 2 ಪತಿ ಪ್ರೀಯಾ 3 ಪತಿ ಕರ್ಮ | ತುಂಬಿಸೆಂದಿವಳಲ್ಲಿಪೊಂಬಸಿರ ವಂದ್ಯ ಮ | ದ್ಭಿಂಭ ಪ್ರಾರ್ಥಿಸುವೆ 4 ಭಾವದ್ರವ್ಯ ಕ್ರಿಯವು | ಈ ವಿಧಾದ್ವೈತತ್ರಯತೀವ್ರುಪಾಸನೆ ಪಲಿಸಿ | ಹೃದ್ಗುಹದಿ ನಿನ್ನಾಆವ ತವ ಭವ್ಯ ಸ | ದ್ರೂಪ ತೋರಿಸು ಎಂದುಓವಿ ಪ್ರಾರ್ಥಿಪೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸರ್ವ ವಿಪತ್ ಪರಿಹಾರ ಸ್ತುತಿ ಕರ್ಮ ಫಲದಾತನು ಶೂನ್ಯ ಪ ವಾಹನ ಪತನ ಉಕ್ಕಿ ಪ್ರವಹಿಸುವ ನದಿ ಮೊದಲಾದ್ದರಿಂದ ಏಕ ಕಾಲದಿ ಸಂಗ ಮರಣ ಸಂಭವಿಸುವುದು ಏಕೆಂದು ಶಂಕಿಸುತಿ ಕೇಳು ಶ್ರದ್ಧಾಳು 1 ಏಕ ಕಾಲದಿ ನಾನಾ ಜನರು ಸಂಗದಿ ಕೂಡಿ ಮಂದ ಮಾರುತ ಪುಷ್ಪವನದಿ ಶ್ರೀಕರ ಕಥಾ ಶ್ರವಣ ನಾಟಕ ಕೇಳಿಕೆಯು ಹೀಗೆ ಜನ ಸಂಘದಲಿ ನಾನಾ ಸಂಭವವು 2 ಒಂದೊಂದು ಮನುಜನಿಗು ಇಂಥಾ ಕಾಲದಿ ಇಂಥಾ ರೀತಿಯಲಿ ಇಂಥಾ ಸ್ಥಳದಲ್ಲಿ ಇಂಥಾ ಹಿತಕರವೊ ಅಹಿತವೊ ಕರ್ಮಗತಿ ಸಂಭವವು ಶ್ರೀದ ನಿಯಮಿಸುವ ವೈಷಮ್ಯವಿಲ್ಲದಲೆ 3 ಮಳೆ ಬಿಸಿಲುಭೂಕಂಪ ಚಂಡಮಾರುತ ಸುಳಿಸುಳಿದು ಪ್ರವಹಿಸುವ ನದಿ ಹರಡುವ ದಾವಾಗ್ನಿ ಎಲ್ಲ ಇಂಥಾ ಅಹಿತ ಸಂಭವದಿ ಸಿಲುಕುವರು ಅಲ್ಲಲ್ಲಿ ಬಹುಜನರು ಕರ್ಮಗತಿಯಲ್ಲಿ 4 ಘೋರ ಭೂಕಂಪದ ಪೀಡೆಗೆ ಯೋಗ್ಯರು ಯಾರು ಯಾರೊ ಒಳ್ಳೆವರೋ ಕೆಟ್ಟವರೊ ಹರಿಯು ಆ ಜನರನ್ನು ಕಂಪನಕೆ ಒಳಮಾಡಿ ಮರಣಾಂಗ ಹೀನತೆಯು ರಕ್ಷಣೆಯು ಈವ 5 ಭಿನ್ನ ಜೀವರು ಭಿನ್ನ ಕರ್ಮಗತಿ ಉಳ್ಳವರು ಭಿನ್ನ ಫಲಯೋಗ್ಯರು ಆದ ಕಾರಣದಿ ಕ್ಷೋಣಿ ಕಂಪನದಲ್ಲಿ ಮರಣ ಕೆಲವರಿಗೆ ಅಂಗ ಹೀನತೆ ಕೆಲವರಿಗೆ ರಕ್ಷಣೆ ಕೆಲವರಿಗೆ 6 ಘೃಣಿ ಹರಿಯು ಭೂಕಂಪ ಆಗುವ ಪೂರ್ವದಲೆ ಜನರು ಕೆಲವರನ್ನು ಬೇರೆ ಊರಿಗೆ ಕಳುಹಿ ಹಾನಿಗೊಳಿಸುವ ಕಂಪನಕೆ ಸಿಲುಕದಂತೆ ಇನ್ನು ಕೆಲವರನ್ನು ಅಲ್ಲಿ ಬಾರದೇ ಮಾಳ್ಪ 7 ಸಿಂಧು ವಿಜ್ಞಾನಂದ ಹರಿಯೇ ಕರ್ಮಾಧ್ಯಕ್ಷನು ಕರ್ಮಫಲದಾತ ಕರ್ಮ ಕೊಡದು ಫಲ ಕರ್ಮಾಧ್ಯಕ್ಷ ಶ್ರೀಹರಿಯೇ ಫಲದಾತ 8 ಸಂಘ ದುಃಖ ಪ್ರಾಪ್ತಿಯು ಹಾಗೆ ಭವಿಸುವುದು ಐಹಿಕ ವಿಷಯಜವು ಉದಾನಿಸಿ ಅಘದೂರ ಗುರುಗ ಶ್ರೀ ಹರಿಯ ಸ್ಮರಿಸು 9 ನರಜನ್ಮ ಹೊಂದಿದವ ಹರಿನಾಮ ಸರ್ವದಾ ಸ್ಮರಿಸುವುದು ಕರ್ತವ್ಯ ದೊರಕಿದ ಸ್ಥಳದಿ ಹರಿನಾಮ ಭಕ್ತಿ ಪೂರ್ವಕದಿ ನುಡಿಯಲೇ ಬೇಕು ನರಪಶÀು ಜಡಮತಿ ಮೂಢನು ನುಡಿಯ 10 ಹರಿಯೇ ಸರ್ವೋತ್ತಮನು ಮುಖ್ಯಕಾರಣ ವಿಷ್ಣು ಶ್ರೀರಮಾಪತಿಯೇ ಸ್ವತಂತ್ರ ಜಗನ್ನಾಥ ಸರಸಿಜೋದ್ಭವ ಶಿವ ಶಕ್ರಾದಿ ಸರ್ವರಿಗೂ ಪ್ರೇರಕನು ಸ್ವಾಮಿಯು ಚಿತ್ ಅಚಿತ್ ನಿಯಂತ 11 ವಿಹಿತ ಸಾಧನಕ್ಕೊದಗೆ ನ್ಯಗ್ರೋಧೋದುಂಬರ ಹರಿ ದೇಹ ಬೆಳಸುವ ಪೋಷಿಸುವ ರಕ್ಷಿಸುವನು ಅಹರ್ನಿಶಿ ಪಾಲಿಸುವ ಭಕ್ತವಾತ್ಯಲ್ಯದಿ ಮಹಾರ್ಹರ ರಕ್ಷಿಸಿದ ಪ್ರಹ್ಲಾದ ಗಜಪತಿಯ 12 ಹರಿಯ ಪಾದಕೆ ಅಭಿಷೇಕ ಮಾಡಿದ ಬ್ರಹ್ಮ ಹರನು ಕೈಲಾಸ ವಾಸನು ಆ ತೀರ್ಥ ಸಹಸ್ರನಾಮ ಬೃಹತೀ ಸಹಸ್ರ ಸಹ ಪಠಿಸುತ್ತಾ ಸತಿ ಪಾರ್ವತಿಗೆ ಎರೆದ 13 ಹರಿನಾಮ ಸಂಸ್ಮರಣೆ ಪೂರ್ವಕದಿ ಈ ನುಡಿಯ ಬರೆಯುವ ಪಠಿಸುವ ಕೇಳುವ ಭಕ್ತರನ್ನು ಶ್ರೀರಮಾಯುತ ಹರಿ ಸುರವೃಂದ ಸಹ ಬಂದು ಸಂರಕ್ಷಿಸುವ ಸರ್ವವಿಪತ್ ದೂರ ಮಾಡಿ 14 ವರಾಹ ನರಸಿಂಹ ಭೂತಿದ ದಯಾಬ್ಧಿ ಶ್ರೀ ಪ್ರಸನ್ನ ಶ್ರೀನಿವಾಸ ನಮೋ ಸದಾ ಶರಣು ಮಾಂಪಾಹಿ ಸಜ್ಜನರ 15
--------------
ಪ್ರಸನ್ನ ಶ್ರೀನಿವಾಸದಾಸರು
ಸರ್ವದಾ ಕಾವ ದೈವ ನೀ ಶ್ರೀಹರಿ ಸರ್ವದಾ ಕಾವ ದೈವ ನೀ ಧ್ರುವ ಶರಣಾಗತ ವತ್ಸಲ ಕರುಣಾನಿಧಿ ಅಚಲ 1 ಭಾವಕ ನೀ ಸುಲಭ ಜೀವ ಪ್ರಾಣದೊಲ್ಲಭ 2 ಅನುದಿನ ಸದೋದಿತ 3 ಅನುಕೂಲದ ಸಾಧನಿ ಭಾನುಕೋಟಿ ತೇಜ 4 ಸ್ವಹಿತ ಸುಖದಾಯಕ ಮಹಿಪತಿ ಪ್ರಾಣನಾಯಕ5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸರ್ವಾಂತರ್ಯಾಮಿ ನಿನಗೆ ಪ ದೇವತಿರ್ಯಗ್ ಮನುಷ್ಯಾದಿ ಜಂತುಗಳಲ್ಲಿ ದಿವಿಭುವಿ ಪಾತಾಳದೊಳ ಹೊರಗಿರುವಗೆ ಅ.ಪ ಪ್ರಾಣ ಪ್ರತಿಷ್ಟೆಗೋಳಕತ್ರಯ ಚಿಂತನೆ ನೀನೆ ಕರುಣದಿ ಮನ್ಮಾನಸದೊಳು ಪೊಳ- ದೇನೇನು ಮಾಡಿಸಲದು ನಿನಗರ್ಪಿತ 1 ಅಣುವಿನೊಳಣುವಾಗಿ ಮಹತ್ತಿನೊಳ್ಮಹತ್ತಾಗಿ ಎಣÉಸಲೆನ್ನಳವೆ ನಿನ್ನಯ ಮಹಾಮಹಿಮೆಯ ವಿನುತಿಸುವುದು ಕೊನೆಗಾಣದೆ ಶೃತಿ ತತಿ 2 ಶ್ವೇತದ್ವೀಪಾನಂತಾಸನ ವೈಕುಂಠ ಆ- ಪ್ರೀತಿಯಿಂದಲಿ ನಿನ್ನ ಭಜಿಸುತಿರುವ ಭಕ್ತ- ವ್ರಾತವ ಸಲಹುವ ಗುರುರಾಮವಿಠಲನೆ 3
--------------
ಗುರುರಾಮವಿಠಲ
ಸರ್ವಾಂತರ್ಯಾಮಿ ನೀನೆ ಸರಿ ಸರ್ವಜ್ಞನು ಸ್ವಾಮಿ ಪ ಸರ್ವಶರೀರಕ ಸರ್ವನಿಯಾಮಕ ಅ.ಪ ಹರಿ ಕೊಡುವನು ಬಂದು ಹರಿಸುತನನು ಗುರಿಮಾಡಿದೆ 1 ಮನೆ ಕಾಣಿಸುವನು ಎಂದೂ ಜಾಣತನದಿ ಸಪ್ರಾಣರ ಮಾಡಿದೆ 2 ಕರದಪ್ಪುವನೆಂದು ಶರಣರ ಹರಣವನುಳುಹಿದೆ 3 ಶೈಲದ ಗುಹೆಯೊಳಗೆ ಮಲಗಿದ್ದ ನೃ ಪಾಲನ ಖತಿಯೊಳಗೆ ಮೇಲೆ ಶರಧಿಯೊಳಾಲಯ ಮಾಡಿದೆ 4 ದುರುಳ ಪುಲಿಯು ಬಂದು ಶರಣನ ಸಲಹಿದ ವರದವಿಠಲಹರಿ 5
--------------
ವೆಂಕಟವರದಾರ್ಯರು
ಸರ್ವೋತ್ತಮ ಸರ್ವಜೀವನ ಪ್ರಾಣ ಸರ್ವೋತ್ತಮ ಪರಿಪೂರ್ಣ ಸರ್ವೋತ್ತಮ ಧ್ರುವ ಸತ್ಯಜ್ಞಾನ ಅನಂತ ಬ್ರಹ್ಮ ಶ್ರುತಿ ಸಾರುತಲ್ಯದೆ ನೇಮ ಮತ್ಪಾತಕ ಹಿಡಿವುದು ಬರಿ ಭ್ರಮೆ ನಿತ್ಯನಾಗಿರೋ ಘನಮಹಿಮ 1 ಸರ್ವೋತ್ತಮ ಶ್ರೀ ಹರಿ ಸಾಕ್ಷಾತ ಪೂರ್ವಾಪರ ಪ್ರಖ್ಯಾತ ದೋರ್ವನು ತಾ ಘನಮಯ ಸದೋದಿತ ಸರ್ವಾನಂದಭರಿತ 2 ವಾಸುದೇವನೊಬ್ಬನೆ ಸರ್ವೇಶ ಭಾಸ್ಕರಕೋಟಿ ಪ್ರಕಾಶ ಭಾಸುತಲೀಹ್ಯ ವರ ಗುರುದೇವೇಶ ದಾಸ ಮಹಿಪತಿ ಪ್ರಾಣೇಶ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸರ್ವೋತ್ತಮನ ಪರಮ ಪುರುಷ ಪರಮಾತ್ಮನ ವರ ಶಿರೋಮಣಿ ಪುರುಷೋತ್ತಮನ 1 ಧರೆಯ ಗೆಲಿದ ಮಹಾಶೂರನ ವರವಿತ್ತ ಉಗ್ರಾವತಾರನ 2 ಧರೆಯ ಬೇಡಿದ ಬ್ರಾಹ್ಮಣೋತ್ತಮನ ಪರಶುಪಿಡಿದ ಪರಾಕ್ರಮನ ಸ್ಥಿರ ಪದವಿತ್ತ ದೇವೋತ್ತಮನ ಗಿರಿಯನೆತ್ತಿದ ಮಹಾಮಹಿಮನ 3 ಗುಪಿತ ಪೊಕ್ಕಿದ್ದನ ಅಪರಂಪಾರ ಮಹಿಮಾನಂದನ ಒಪ್ಪುವ ತೇಜಿನೇರಿದ್ದನ ಕಪಟನಾಟಕ ಪ್ರಸಿದ್ಧನ 4 ಭಕ್ತವತ್ಸಲ ಭವನಾಶನ ಮುಕ್ತಿದಾಯಕ ದೇವ ದೇವೇಶನ ಮಹಿಪತಿ ಆತ್ಮ ಪ್ರಾಣೇಶನ ಗುರು ಭಾನುಕೋಟಿ ಪ್ರಕಾಶನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಲಹು ಸಲಹು ಸಲಿಲಜನಯನಾ|ಎನ್ನಾ| ಇಳೆಯೊಳು ಮೊರೆಯ ಹೊಕ್ಕಿಹೆ ನಿನ್ನಾ ಪ ಕರುಣ ನೋಟಗಳಿಂದಲಿ ನೋಡಿ|ಸರ್ವ| ಭಾರ ಒಪ್ಪಿಸಿಕೊಂಡು ನಿಜ ನೀಡಿ| ದಾರಿದೋರುವ ಸುಮತಿಯ ನಿಲಿಸಿ|ಅತಿ| ತರಳನೆನುತ ಭಯವನೆ ಹರಿಸಿ 1 ಹರಿದುರಿತದ ಬಂಧನ ಬಲಿಯಾ|ತವ| ಚರಣದ ಭಕುತಿ ಕೊಡಲಿ ದೊರಿಯಾ| ಹರಿಗುಡದರಸನ ದಶಮುಖದಾ ಸಂಗ| ಲಿರಿಸು ದಾಸರ ಸಗಟವನೊದೆದಾ2 ತ್ರಿಪುಟಿಯ ಸಂಗ ಬಿಡಿಸು ಮನದಿ|ಎನ್ನ| ವಿಪುಳ ವಾಜಿಯೊಳಿರಿಸು ಧೃಡದಿ ಕೃಪೆಯಲಿ ಮಹಿಪತಿ ಸುತ ಪ್ರಾಣಾ|ಎನ್ನ| ಅಪರಾಧ ಕ್ಷಮಿಸಿ ಹೊರಿಯೊ ಪೂರ್ಣಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸವಿದುಣ್ಣ ಬಾರಯ್ಯ ಸಾರಾಭೋಕ್ತಾ ಪವನಾಂತರ್ಗತ ಕಪಿಲಾತ್ಮ ನರಸಿಂಗಾ ಪ ಉಪ್ಪು ಉಪ್ಪಿನಕಾಯಿ ಪತ್ರ ಶಾಖ ಸೂಪ ಒಪ್ಪುವ ಸಂಡಿಗೆ ವ್ಯಂಜನಗಳು ಇಪ್ಪವು ನಿರುಋತಿ ಪ್ರಾಣ ಮಿತ್ರ ಶೇಷ ಸರ್ಪವೈರಿ ದಕ್ಷ ಲೋಕೇಶನಲ್ಲಿಗೆ 1 ಅನ್ನ ಮಂಡಿಗೆ ತೈಲ ಪಕ್ವಂಗಳು ಪರ ಮಾನ್ನ ಭಕ್ಷ ತುಪ್ಪ ಹುಳಿ ಪದಾರ್ಥ ಬೊಮ್ಮ ಜಯಂತರೈ ಸೂರ್ಯ ಕನ್ಯ ಲಕುಮಿದೇವಿ ಪರ್ವತ ಸುತಿ ಇರೆ2 ಕ್ಷೀರ ನವನೀತಧಿಕಾರಣಾಮ್ಲ ಚಾರು ಉದ್ದಿನ ಭಕ್ಷ ಕಟು ದ್ರವ್ಯ ಪಾ ವಾರಿಜಾಸನ ರಾಣಿ ವಾಯು ಸೋಮ ವೈರಿ ಧರ್ಮ ಸ್ವಾಯಂಭುವಂಗಳು ಅಲ್ಲಿ ಹಾಕಿರೆ 3 ಇಂಗು ಯಾಲಕ್ಕಿ ಸಾಸಿವೆಯಿಂದ ವೊಪ್ಪುತಾ ಬಂಗಾರ ಪಾತ್ರಿಯೊಳಗೆ ತಂದಿಡೆ ಸ್ವಾದೋದಕ ಇಡೆ ಅಂಗಜಾ ದುರ್ಗಿಯ ಚಂದ್ರಮಸುತನಿರೆ 4 ವೀಳ್ಯವ ಕೈಕೊಳೊ ಗಂಗಾಜನಕ ಹರಿ ಅಲ್ಲಲ್ಲಿಗೆ ನಿನ್ನ ರೂಪವುಂಟು ಬಲ್ಲಿದಾ ವಿಜಯವಿಠ್ಠಲರೇಯ ಎನಗಿದೆ ಸಲ್ಲೊದೆ ಸರಿ ಲೇಶವಾಪೇಕ್ಷದವನಲ್ಲ5
--------------
ವಿಜಯದಾಸ
ಸಾಕು ಸಂಸಾರದ ವ್ಯಾಕುಲ ತೀರಿಸಿ ಲೋಕೇಶ ಸುಖ ಕರುಣಿಸೊ ಪ ಸಾಕು ಸಜ್ಜಾಗಿಲ್ಲ ಸಂಸಾರ ಶೋಕದಬ್ಧಿಲಿ ಬಿದ್ದು ಬಲುಬಲು ನೂಕುನುಗ್ಗಾಗಿ ಖೋಡಿಯೆನಿಪ ಲೌಕಿಕದ ಘನತಾಪದಿರುವ ಅ.ಪ ಮೂಢಮತಿಯಿಂದತಿ ರೂಢಿಸಂಪದ ನೆಚ್ಚಿ ನೋಡಿನೋಡಸೂಯೆ ಪಡುತ ಆಡಬಾರದ ನಾಡಮಾತುಗ ಳಾಡಿ ಮುಖವನು ಬಾಡಿ ಪರರನು ಹೇಡಿತನದಿಂ ಮಾಡಿಸ್ತೋತ್ರವ ಬೇಡಿಬದುಕುವ ಖೋಡಿದುರ್ಭವ 1 ಏನು ಎನ್ನುವರೆಂದು ಗೋಣುಮೇಲೆತ್ತದೆ ಪ್ರಾಣ ಕರದಲ್ಲಿ ಪಿಡಿದು ಹೀನ ಸ್ಥಿತಿಯಿಂ ನೀನೆ ಗತಿ ಎನ್ನ ಮಾನವುಳಿಸೆಂದು ನಾನಾ ಪರಿಯಲಿ ದೀನಸ್ವರದಿಂ ತ್ರಾಣಗುಂದಿ ದೈನ್ಯಬಡುವಂಥ ಹೀನಬವಣೆ 2 ಕಾನನಸಂಸಾರದ್ಹಾನಿಮಾಡದೆ ಎನ್ನ ಜ್ಞಾನಬೆಳಗಿನನೊಳಾಡಿಸೊ ಜ್ಞಾನಮೂರುತಿ ದೀನದಯಾಳು ಭಾನುಕೋಟಿಪ್ರಭೆ ಜಾನಕೀಶ ನಾನಾಲೋಕವ ನೀನೆ ಒಳಗೊಂಡು ಮಾಣದಿಹಿ ಮಮಪ್ರಾಣ ಶ್ರೀರಾಮ 3
--------------
ರಾಮದಾಸರು
ಸಾಕೇತಪುರ ವಾಸಿ ಕಪಟವೇಷ | ಶ್ರೀಕಮಲನಾಭನ ನಖದಲಿ ಕಾಶೀ ಪ ವಿಶ್ವತೋಮುಖ ಬ್ರಹ್ಮ ವಿಶ್ವತೋಚಕ್ಷು | ವಿಶ್ವ ವಿಶ್ವಬಾಹು ವಿಶ್ವರೂಪ ರೂಪ || ವಿಶ್ವ ಬ್ರಹ್ಮಾಂಡ ಆಧಾರ ಕಾರಣ | ವಿಶ್ವೇಶ್ವರ ಪ್ರಾಣ ಮಂತ್ರ ರಾಮ ರಾಮ 1 ಪರಿಯಂತ ರೋಮಕೂಪ | ಅಗಣಿತ ಕಮಲಜ | ಹಸ್ತಿ ಚರ್ಮಾಂಬರರು ಇದ್ದು ನೆಲೆಗಾಣರು | ನಾಸ್ತಿ ವಿಷ್ಣು ಪರದೈವ ಇಹಪರದಲಿ2 ಕಷ್ಟವಿಲ್ಲದೆ ಮಕ್ಕಳಾಟಕೆ ತ್ವರದಿಂದ | ಸೃಷ್ಟಿಸುವ ಕಣ್ಣು ಎವೆ ಹಾಕುವ || ಅಷ್ಟರೊಳನೇಕ ಬ್ರಹ್ಮಾಂಡ ನಾಟಕ | ವಿಷ್ಣು ಕರ್ಮಾಣಿ ಪಶ್ಯತೆ ಪಶ್ಯತೆ 3 ನಿತ್ಯ ತೃಪ್ತಿ ನಿರಾಹಾರಿ ನಿತ್ಯಾನಂದ | ಮೃತ್ಯು ಹಾ ಕಾಲಪ್ರಮಾಣ ಪರುಷಾ || ಶರಧಿ | ಸತ್ಯ ಸಂಕಲ್ಪ ನಿಷ್ಠನಾಹಂತೆ 4 ಅಜನಯ್ಯ ಅದ್ಭುತ ಮಹಿಮ ಪುರುಷೋತ್ತಮ | ಭುಜಧರನಯ್ಯಯಾ | ಅಮಿತಕಾಯಾ | ವಿಜಯಸಾರಥಿ ವಿಚಕ್ಷಣ ದೀಪ್ತ ಮೂರುತಿ | ಭುಜಗಂಗಿರಿ ವಿಜಯವಿಠ್ಠಲ ವೆಂಕಟೇಶಾ 5
--------------
ವಿಜಯದಾಸ
ಸಾಗರಕನ್ನಿಕೆಯ ಪ್ರಾಣಮನೋಹರ ಪ ಕಿಂಕರೋದ್ಧಾರಣ ಜಿಂಕೆಸಂಹರಣ ಲಂಕಾಪುರನಾಶನ ಶಂಖ ಚಕ್ರಧಾರಣ ಶಂಕರಾದಿವಂದನ ಪಂಕಜನಯನ 1 ತಾಪತ್ರನಿರ್ಮೂಲ ಪಾಪಮೋಚನ ಶೀಲ ಗೋಪೇರಾನಂದ ಲೀಲ ಗೋಪಾಲಬಾಲ ಪಾಪಿಜನಕುಲಕಾಲ ಆಪತ್ತಿನಲ್ಲನುಕೂಲ ದ್ರೌಪದಿಯ ಪರಿಪಾಲ ಶ್ರೀಪತಿಯ ವಿಠಲ 2 ದೀನಜನಮಂದಾರ ಧ್ಯಾನಿಪರ ಪ್ರಿಯಕರ ಜ್ಞಾನಿಗಳ ಆಧಾರ ವನಮಾಲಧರ ಬಾಣಾರಿ ಧುರಧೀರ ಭಾನುಕೋಟಿ ಪ್ರಭಾಕರ ಜಾನಕೀರಮಣ ಶ್ರೀರಾಮಪ್ರಭು ಸುಂದರ 3
--------------
ರಾಮದಾಸರು