ಒಟ್ಟು 5094 ಕಡೆಗಳಲ್ಲಿ , 122 ದಾಸರು , 3288 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದಿಹ ನೋಡಿರಿ ಸುಂದರ ಸುಕುಮಾರನಂದ ಸುನಂದನ ಯದು ಕಂದಾ ಪ ಮಾಧವ ಮಧುಸೂದನಾ ಮಂದಸ್ಮಿತಾನನ ಕುಂದರ ವದನ ಪೂರ್ಣ ಚಂದ್ರ ಶತಾನನ ಗುಣ ಪೂರ್ಣಾ ಅ.ಪ. ವೇಣುನಾದ ವಿಶಾರದಾ ಗಾನಾಪಹೃತಸ್ತ್ರೀ ಮಾನಾಪಹರಣ ಮಾನಸ ಮಂದಿರ ಸ್ತ್ರೀಲೋಲಾ 1 ಶಿಖಾಮಣಿ ಮಾನವ 2 ಜಾರ ಖ್ಯಾತಾತ್ಮ ನರವೀರ ಪ್ರೀತಾತ್ಮ 3 ಭೂಧರಾರ ಮಾಧರ ಸುಧಾಪಾನದಿ ಮತ್ತಸದಮಾಲಾ ಚಿತ್ತ ಮುದಾ ಪೂರಿತಗಾತ್ರ ಸರ್ವತ್ರ 4 ಮಾಧವ ರಾಧಾ ಪ್ರಿಯ ತಂದೆ ಶ್ರೀನೃಹರಿಯೆ ಇಂದೂ ವಂದಿಪೆ ನಿನ್ನ ಬಂಧನ ಬಿಡಿಸೆಯ್ಯ ಗೋವಿಂದ 5
--------------
ತಂದೆ ಶ್ರೀನರಹರಿ
ಬಂದು ಕೂಡೋ ನಂದ ಬಾಲನೆ ಪ ಇಂದು ಮುಖವನೋಡಿ ಸ್ತುತಿಪೆಬಂಧದೊಳು ವಂದಿಸುತ ಆನಂದವನು ಪೊಂದುವೆನಾ 1 ಬಾಲಕೃಷ್ಣ ನಿನ್ನವೆರಡು ತೋಳು ತಾರೋ ಅಪ್ಪಿಕೊಂಬುವೆಭಾಳಾ ದಿನ ತವಲೀಲೆ ಕೇಳದೆ ಮನ ತಾಳದಿಹುದು2 ಮುರಳಿ ಸ್ವರದಿ ಭೂಷಿತಾನನ ತ್ವರದಿ ತೋರೋಉಮ್ಮ ಕೊಡುವೆಕರುಣಾನಿಧಿ ಇರಲಾರೆನು ಮರುಳಾದೆನು ತವ ಪಾದಕೆ 3 ಇಂದಿರೇಶ ಇಷ್ಟು ಜನುಮ ಹಿಂದೆ ಕಳೆದೆ ನಿನ್ನ ನೋಡದೆಇಂದಿರೆಯ ಪೊಂದಿಹ ನಂದಾತ್ಮಜ ಬಂದು ಪೊರೆಯೋ 4
--------------
ಇಂದಿರೇಶರು
ಬಂದು ನಿಲ್ಲೋ | ಕಣ್ಣ ಮುಂದೆ ಪ ಬಂದು ನಿಲ್ಲೋ ನಿನ್ನ ಪಾದಕ್ಕೆ ವಂದಿಪೆ ಇಂದಿರೆಯರಸಾ ಗೋವಿಂದ ಮುಕುಂದಾ ನೀ ಅ.ಪ. ಅರಳಿದ ಕೆಂದಾ | ವರೆಯ ಧಿಕ್ಕರಿಸುವ ಚರಣಾರವಿಂದವ | ನಿರುತ ತೋರು ನೀನು 1 ಭ್ರಮರ ಕುಂಡಲ ಮಂಡಿತ || ಮೇಲಾದ ರಾಕೇಂದು | ಮುಖವ ತೋರಿಸುತಲೀ2 ಪದುಮನೇತ್ರನೆ ನಿನ್ನ | ಸದನವೆನುತಯೆನ್ನ || ಹೃದಯದೊಳಗೆ ನಿಂತು ನಾ | ಮುದದಿ ಭಜಿಸುವಂತೇ 3 ಕರಿಯ ಮೊರೆಯ ಕೇಳಿ | ಕರುಣದಿಂ ಬಂದಂತೆ || ಕರೆದಾಗ ನಿನ್ನ ದಿವ್ಯ | ಚರಣಾವ ತೋರಿಸುತಾ4 ಅಜಭವಾದಿಗಳಿಗೆ | ನಿಜಪದವನಿತ್ತಂತೆ || ಭಜಿಪ ಭಕ್ತರಿಗೊಲಿವ | ವಿಜಯವಿಠ್ಠಲರೇಯಾ5
--------------
ವಿಜಯದಾಸ
ಬದುಕಿಸೀ ಪಶುಗಳನೂ ಭಗವಂತ ನೀನು ಪ ಕದಲಿಸೀರೋಗವ-ಕರುಣಿಗಳರಸನೆ ಅ.ಪ. ಗೋವುಗಳೆಲ್ಲಾ ಹೊಟ್ಟೆ-ನೊವಿನಿಂ ಕಂಗೆಟ್ಟು ಮೇವನುಬಿಟ್ಟ ವಿದಾವರೊಗವೋ ಕಾಣೆ 1 ಹೊಟ್ಟೆ ಕಳೆದು ಕಂಗೆಟ್ಟುಧಾತುಗಳೆಲ್ಲಾ ಕೆಟ್ಟು ಜೀವಂಗಳ ಬಿಟ್ಟುಬಿಡದಮುನ್ನ 2 ನಾಲಿಗೆ ನೀಡವು ಕಾಲು ಕೆಟ್ಟವು ಕಂ ಣಾಲಿ ಕೆಂಣಾಲಿ ಕೆಂಪಾದವು ಮೂಲವೆ ತಿಳಿಯದು3 ಗೋವುಗಳಿಗೆ ಭೂದೇವರುಗಳಿಗೆಲ್ಲ ದೇವ ನೀನಲ್ಲವೆ-ದೇವಕೀ ತನಯನೆ 4 ಸತ್ತವರಿಗೆ ಜೀವವಿತ್ತು ಬದುಕಿಸಿದೆ ಮೃತ್ಯುದೇವತೆ ನಿನ್ನ ತೊತ್ತಹಳಲ್ಲವೆ 5 ದಾಸನು ನಾನೆಂಬ ವಾಸಿಯುಳ್ಳರೆ ಬೇಗ ವಾಸಿಯ ಮಾಡಯ್ಯ ನೀ ಮೋಸವ ಮಾಡದೆ 6 ಇಷ್ಟದಿನೆನೆವರ ಕಷ್ಟವ ಕಳೆವ ಪುಲಿ ಬೆಟ್ಟದೊಳಿಹ ವರದ ವಿಠಲ ಕೃಷ್ಣನೀ 7
--------------
ಸರಗೂರು ವೆಂಕಟವರದಾರ್ಯರು
ಬದುಕಿಸೀ ಪಶುಗಳನ್ನು ಭಗವಂತ ನೀನು ಪ ಬದುಕಿಸೀ ಪಶುಗಳ ಭವರೋಗ ವೈದ್ಯನೆ ಕದಲಿಸೀ ರೋಗವ ಕರುಣಿಗಳರಸನೆ ಅ.ಪ ಗೋವುಗಳೆಲ್ಲಾ ಹೊಟ್ಟೆ ನೋವಿಂ ಕಂಗೆಟ್ಟು ಮೇವನು ಬಿಟ್ಟವಿದಾವ ರೋಗವೋ ಕಾಣೆ 1 ಹೊಟ್ಟೆ ಕಳೆದು ಕೆಂಗೆಟ್ಟಧಾತುಗಳೆಲ್ಲಾ ಕೆಟ್ಟು ಜೀವಂಗಳ ಬಿಟ್ಟ ಬಿಡದ ಮುನ್ನ 2 ನಾಲಿಗೆ ನೀಡವು ಕಾಲು ಕೆಟ್ಟವು ಕಂ ಣ್ಣಾಲಿ ಕೆಂಪಾದವು ಮೂಲವೆ ತಿಳಿಯದು 3 ಗೋವುಗಳಿಗೆ ಭೂದೇವರುಗಳಿಗೆಲ್ಲ ದೇವ ನೀನಲ್ಲವೆ ದೇವಕೀ ತನಯನೆ 4 ಸತ್ತವರಿಗೆ ಜೀವವಿತ್ತ ಬದುಕಿಸಿದೆ ಮೃತ್ಯು ದೇವತೆ ನಿನ್ನ ತೊತ್ತಹಳಲ್ಲವೆ 5 ದಾಸನು ನಾನೆಂಬ ವಾಸಿಯುಳ್ಳರೆ ಬೇಗ ವಾಸಿಯ ಮಾಡಯ್ಯ ನೀ ಮೋಸವ ಮಾಡದೆ 6 ಇಷ್ಟದಿ ನೆನೆವರ ಕಷ್ಟವ ಕಳೆವ ಪುಲಿ ಬೆಟ್ಟದೊಳಿಹ ವರದ ವಿಠಲ ಕೃಷ್ಣನೀ 7
--------------
ವೆಂಕಟವರದಾರ್ಯರು
ಬಂದೆ ಭಗವತ್ಪಾದಯುಗಾರ ವಿಂದಕೆ ಮಿಳಿಂದನಾಗಿ ವಂದನೀಯರೆ ಯತಿಕುಲಾಬ್ಧಿ ಚಂದ್ರರ ಭುವನೇಂದ್ರತೀರ್ಥರೆ1 ಪರಮ ಪಾವನ ಭುವನೇಂದ್ರರ ಕರಸಂಜಾತ ವರದೇಂದ್ರರ ಕರಸರೋರುಹಭವರೆ ಮಹಾ ಕರುಣಾಂತಃಕರಣ ಧೀರರೆ2 ಸುಮತೀಂದ್ರಾದಿ ಯತೀಂದ್ರರ ವಿಮಲ ಹೃದಯಕಮಲಭಾಸ್ಕರ ಅಮಮ ನಿಮ್ಮ ಕಾಂಬ ಯೋಗ ಸುಕೃತ ಭೋಗಪೂಗ3 ಪೂರ್ಣಪ್ರಜ್ಞಾಚಾರ್ಯವರ್ಯ ಸನ್ನುತ ಮತಧೈರ್ಯ ಧುರ್ಯ ಧನ್ಯನಾದೆನು ನಾನಿಂದು ಸನ್ನಿಧಾನವನು ಕಂಡೆನು4 ಶ್ರೀಶ ಲಕ್ಷ್ಮೀನಾರಾಯಣ ವ್ಯಾಸ ರಘುಪತಿಯ ಚರಣೋ- ಪಾಸಕರೆ ಪಾವನರೆ ಕಾಶೀವiಠಾಧೀಶ್ವರರೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಬಂದೆನೊ ರಂಗ ಬಂದೆನೊ ಹಿಂದಿನ ಸುಕೃತದಿ ತಂದೆ ನಿನ್ನ್ಹುಡುಕುತ ಪ ಹಲವು ಜನುಮಜನುಮಗಳಲಿ ತಿರುತಿರುಗಿ ತೊ ಳಲಿತೊಳಲಿ ಬಂದು ಬಳಲಿ ಮರುಗಿ ಹೊಲಸಿನ ಮಲಮೂತ್ರ ಕುಣಿಲಿ ಕೊರಗಿ ಎಲುವೊಂದು ಗಿರಿಯೋಪಾದಿಯಲಿ ಆಹ ಇಳೆಯೊಳು ಬಿದ್ದಿಹ್ಯವು ಬಲು ಬಲು ಹೊಲೆಬವಣೆ ಯಲಿ ನೋಯಲಾರದೆ ಕಳವಳಗೊಳುತ 1 ಜಡÀಸದೃಸ ಶರೀರಗಳ್ಹೊತ್ತು ಬಿಡದೆ ಎಡರು ತೊಡರಿನೊಳಗೆ ಬೆರೆತು ಕೆಡುವ ಪೊಡವಿಸುಖಕೆ ಮನವಿತ್ತು ದೃಢವನ್ಹಿಡಿಯದೆ ಮರೆವಿನಿಂ ಸಂಪತ್ತು ಆಹ ಒಡನೊಡನ್ಹುಟ್ಟ್ಹುಟ್ಟ ಕಡುಕಷ್ಟಬಡುವಂಥ ಸುಡಗಿಯ ತಡಿಯದೆ ಗಡಗಡ ನಡುಗತ್ತ 2 ನೋಡೆಲೊ ಕರುಣಾಂತರಂಗ ದಯವ ಮಾಡೆಲೊ ಸುಗುಣ ಶುಭಾಂಗ ಅಭಯ ನೀಡೆಲೊ ನಿರುತ ನೀಲಾಂಗ ದುರ್ಭವ ಕಡಿಯೆಲೊ ಭವಭಯಭಂಗ ಆಹ ತೊಡರು ಕಡೆಮಾಡಿ ಎನಗೆ ಮುಕ್ತಿ ನೀಡಿ ಸಲಹು ಎಂದು ಬೇಡುತ ಶ್ರೀರಾಮ 3
--------------
ರಾಮದಾಸರು
ಬಂದೆಯಾ ಬಂಧುವೆ ಭಾಗ್ಯದ ನಿಧಿಯೆ ಮಂದರದರ ನಿನ್ನ ಮಂದಿರಕ್ಕೆ ಪ ತಂದೆಯ ಮಮ ಹೃನ್ಮಂದಿರಕಾಗಲೇ ಬಂದೆಯೊ ಕರುಣಾಸಿಂಧುವೆ ಸ್ವಾಮಿ ಅ.ಪ ಆಗಮನುತ ನಿನ್ನಾಗಮನದಿ ಇನ್ನು ನೀಗಿತು ಚಿಂತೆಯು ನೀರಜನಯನ ಯಾಗ ಸಾಫಲ್ಯಕೆ ಸೂಚನೆಯಿದು ಮಹಾ ಭಾಗವತ ಪ್ರಿಯ 1 ಮುಂದಿನ ಕಾರ್ಯವ ನೀನೆ ವಹಿಪುದು ಎಂದೆಂದಿಗೂ ನೀನೆ ಗತಿಯು ನಂದನಂದನ ಗೋವಿಂದ ಮುಕುಂದನೆ ನಿಂದಿರಿಸಯ್ಯಾ ನಿನ್ನಾಜ್ಞೆಯಲೆಮ್ಮನು 2 ನಾಗಶಯನ ನಳಿನಾಯತ ಲೋಚನ ಯೋಗಿನಿಲಯ ಕಮಲಾಲಯವಾಸ ಯಾಗರಕ್ಷಕನೆ ಯಾಗ ಫಲಪ್ರದ ಬಾಗುವೆ ಚರಣಕೆ ಕರಿಗಿರೀಶನೆ 3
--------------
ವರಾವಾಣಿರಾಮರಾಯದಾಸರು
ಬಂದೊದಗಿತು ಪುಣ್ಯಫಲವು ಮುಚುಕುಂದವರದ ವಾಸುದೇವಾರ್ಯರೊಲವು ಪಸಂಚಿತಾಗಾಮಿಪ್ರಾರಬ್ಧವೆಂಬ ಕಂಚುಕಿಯಾದ ಕರ್ಮದ ಬಹುಬದ್ದದಂಚುಗಾಣುವುದಾವ ಸಿದ್ಧ ಇದು ಕಿಂಚಿದಾದುದು ಗುರುಚರಣರೇಣಿಂದ 1ಏನು ಸುಕೃತವ ಮಾಡಿದೆನೊ ನಿನಗಾನತ ನಾನಾದ ಬಗೆಯು ತಾನೇನೊನೀನೆ ಕರುಣವಿತ್ತುದೇನೊ ನಾನು ಜ್ಞಾನವೆಂತೆಂಬ ಸ್ವರೂಪವನರಿಯೆನೊ 2ಪರಿಹರಿಸಿತು ಜನ್ಮ ಮರಣ ದುಃಖ ದುರವಣೆ ದಹಿಸಿತು ಲಕ್ಷ್ಮಿಯರಮಣತಿರುಪತಿ ವೆಂಕಟರಮಣ ನೀನೆ ಗುರು ವಾಸುದೇವರೂಪಿನಲಿತ್ತೆ ಕರುಣ3ಓಂ ನರನಾರಾಯಣಾತ್ಮಕಾಯ ನಮಃಕಂ||ಭೃಗುವಾರದರ್ಚನೆಯನಿದನಿಗಮಾಗಮವೇದ್ಯ ಗ್ರಹಿಸಿ ಸಿರಿ ಧರಣಿಯು ಸಹಭಗವಂತ ನಿನ್ನ ಭಕ್ತರೊಳಗಲದೆ ನಾನಿಹುದ ಮಾಡು ವೆಂಕಟರಮಣಾ
--------------
ತಿಮ್ಮಪ್ಪದಾಸರು
ಬಂದ್ಯಾ ಬಾ ಮಂದಗಾಮಿನಿ ಚಂದಿರವದನೆ ಸುಂದರವದನೆ ಬಂದ್ಯಾ ಪ ಬಂದ ಭಕ್ತವೃಂದಭೀಷ್ಟ ನೀಡ್ವೆನೆಂದು ಚಂದ ಕರಗಳಿಂದ ಶೋಭಿಸುತಾ ಬಂದ್ಯಾ 1 ಪದುಮನಿಲಯ ಪದುಮಾನನೆ ಪದುಮಾಯತಾಕ್ಷಿ ಪದುಮನಾಭನ ರಾಣಿ 2 ನರಸಿಂಹವಿಠ್ಠಲನರಸಿ ಪ್ರಸನ್ನಮುಖಿ ಇರಿಸು ಶರಣರಲ್ಲಿ ಕರುಣಾಕಟಾಕ್ಷ 3
--------------
ನರಸಿಂಹವಿಠಲರು
ಬಂಧಕವಾಗದ ಹಾಂಗೆ | ಕರ್ಮಛಂದಾಗಿ ಮಾಡಿಸೊ ಹರಿಯೆ ಪ ದಾತ | ನೀನೆನ್ನ ಸಲಹೊ ಸತ್ರಾಣ1 ಸತಿಸುತ ಧನಧಾನ್ಯ ಅಯ್ಯ | ಎನ್ನ | ಮತಿ ಭ್ರಮಣೆ ಮಾಡಿದ ಪರಿಯಪ್ರತಿಕ್ರಿಯೆ ನೀನೆಲ್ಲ ತಿಳಿಯ | ಎನ್ನ | ಹಿತದಿಂದ ಪಾಲಿಸೋ ಜೀಯಾ 2 ಸರ್ವ ಕರ್ಮವು ಕ್ರೀಯಗಳಲಿ | ಅಲ್ಲಿ ಸರ್ವಸ್ವಾಮ್ಯವು ನಿನ್ನದಿರಲಿಸರ್ವದ ನಾಮ ನಾಲಿಗೆಲಿ | ನಿಂತು | ಸರ್ವತ್ರ ಎನ್ನ ಪಾಲಿಸಲಿ 3 ಕಾರಕ ಕ್ರಿಯ ದ್ರವ್ಯವೆಂಬ | ಭ್ರಮೆ | ಮೂರುಗಳನು ಕಳೆಯೆಂಬಸಾರ ಪ್ರಾರ್ಥನೆ ಇದೆಯೆಂಬ | ಎನ್ನ | ದೂರ ವ5À್ಪುದು ಮಾಣು ಬಿಂಬ 4 ತನು ಕರಣ ವಿಷಯಾದಿಗಳು | ಜಡ | ಮನದಿಂದಾಗುವ 5iರ್Àುಗಳುಅಣು ಜೀವಕ್ಕಾರೋಪಗಳು | ಮಾಡಿ | ಜನನ ಮರಣದ ಭವಣೆಗಳು 5 ಇತ್ತೆ ನೀ ಸ್ವಾತಂತ್ರ ಎನಗೆ | ಎಂಬ | ಶಾಸ್ತ್ರದ ಸೊಲ್ಲಿನ ಬಗೆಸುತ್ತು ಹುಟ್ಟುವ ಪರಿಯಾಗೆ | ಕಾಯೊ | ಭಕ್ತವತ್ಸಲ ದಯಾವಾಗೆ6 ಕರ್ಮ | ಮರ್ಮವ ತಿಳಿಸಲೋ ಧೊರೆಯೆ |ನಿರ್ಮಲಾತ್ಮನೆ ಮೊರೆಯಿಡುವೆ | ಎನ್ನ | ಕರ್ಮವ ಸುಡುವುದು ಹರಿಯೆ7 ಕರ್ಮ | ಗುರು | ಪ್ರಾಣಾಂತರ್ಗತಗೀವ ಮರ್ಮಜ್ಞಾನಾನು ಸಂಧಾನ ಪರ್ಮ | ಇತ್ತು ನೀನಾಗಿ ಪಾಲಿಸೊ ಧರ್ಮ 8 ಭಾವ ಕ್ರಿಯ ದ್ರವ್ಯಾದ್ವೈತ | ಮೂರು | ಭಾವಗಳಿಂದನುಷ್ಠಾತಶ್ರೀವರ ಎನಿಸೆನ್ನ ತಾತ | ಗುರು | ಗೋವಿಂದ ವಿಠಲ ಸುಪ್ರೀತ 9
--------------
ಗುರುಗೋವಿಂದವಿಠಲರು
ಬಯಲ ಜಾತ್ರೆಗೆ ನಡೆಹೋಗುವ ಬಾರದಲೆ ಅಲ್ಲಿರುವ ಪ ಶಾಂತಿ ಎಂದೆಂಬ ಕಂಟಲೆಗಳು ಶಮೆ ಹುರಿಗೆಜ್ಜೆ ಎತ್ತುಗಳುದಾಂತಿ ಎಂದೆಂಬ ಕಾವಡಿಗಳು ದಮೆ ಎಂಬ ಹೂಜೆಗಳು1 ಮಂಗಳವೆಂಬ ಬಾಲಕರು ಮುಕ್ತಿ ಎಂಬ ಮುತ್ತೈದೆಯರುಸಂಗ ಹರರಹ ವಿಟಗಾರರು ಸೈರಣೆ ಎಂಬ ಹಿರಿಯರು 2 ಸಂತೋಷವೆಂಬ ಅಂಗಡಿಗುಂಪು ಸಹಜದ ಹೂಕಂಪುಶಾಂತರೆನಿಪ ದೊರೆಗಳ ಗುಂಪು ಸುಖ ಛತ್ರಿಯ ತಂಪು 3 ಓಂಕಾರನಾದದ ನಗಾರಿ ವೀಣಾನಾದದ ತುತ್ತೂರಿಸಂಕಲ್ಪ ಸುಳ್ಳೆಂಬ ತಂಬೂರಿ ಸಾಮವೆನಿಸುವ ಭೇರಿ 4 ಅಮೃತ ಬಿಂದುವಿನ ಮೊಗೆಯುದಾರಿದಾರಿಗೆ ಸೋಹಂಸ್ಮರಣೆ ದೃಢ ಮನವದು ಚಡಿಯು 5 ಆನಂದ ವನಗಳ ಸಾರುತ ಆಯಾಸ ಕಳೆಯುತ್ತಸ್ವಾನಂದ ಗೋಪುರ ಕಾಣುತ ಸುಮ್ಮಾನವ ಪಡೆಯುತ6 ಮೃಢನಾಳ ದ್ವಾರವ ಪೋಗುತ ಮುಂದೆ ಚಂದ್ರನ ಕಾಣುತಅಡರಿದ್ವಿದಳ ಸದರೇರುತ ಅತ್ತತ್ತ ಸಾರುತ 7 ಕಮಲ ಪೀಠವನೇರುವರ ಮಹೇಶನೆನ್ನು ಅವರ8 ತುರೀಯವೆಂದೆಂಬ ಬಯಲಗೂಡಿ ತಾವು ಹೋಗುವ ನಾಡಿಹರ್ಷದ ಧೂಳ ದರ್ಶನ ಮಾಡಿ ಹಾಯಿಗುಡಾರ ಹೂಡಿ9 ಶಿಂಶುಮಾರವೇ ದೇವರ ಪೀಠ ಸಿದ್ಧವೆಂಬ ಕವಾಟಸಂಶಯವಿಲ್ಲದ ಎಡೆಯಾಟ ತತ್ಪುರುಷರ ಕೂಟ10 ಸೂರ್ಯ ಕೋಟಿಗೆ ಘನವುಒತ್ತೊತ್ತು ಪೂರ್ಣಾಭಿಷೇಕ ಓಂ ಎಂದೆಂಬ ಸ್ವರವು 11 ಸುವಾಸನೆ ಎಂದೆಂಬ ಧೂಪವು ಸುಂದರ ಪುಷ್ಪಗಂಧತಾವು ಮಾಡುವ ಭಾವದಲಿಂದ ತೃಪ್ತಿ ನೈವೇದ್ಯ ಚಂದ12 ಎರಡಿಲ್ಲದೇಕಾರ್ತಿ ಬೆಳಗುತ ಎಲ್ಲೆಡೆ ತಾ ಹೊಳೆಯುತಹೊರ ವೊಳಗೆಂಬುದ ಮರೆಯುತ ಹೇಮದ ತಗಡಾಗಿ ಇರುತ13 ಬೆಳಕ ಕಂಡಾರತಿ ಎತ್ತುತ ಬೆಳಗನು ಬೆಳಗುತ್ತತಿಳಿದು ಪ್ರದಕ್ಷಿಣೆ ಮಾಡುತ ತೋರುವುದು ಬ್ರಹ್ಮವದೆನ್ನುತ 14 ಭಯದ ವಿಸರ್ಜನೆ ಮಾಡುತ ಬಯಲಾಗಿಯೆ ತೋರುತಬಯಲ ಚಿದಾನಂದನಿಗೆರಗುತ್ತ ಬ್ರಹ್ಮನಾಗಿ ತಾನಿರುತ 15
--------------
ಚಿದಾನಂದ ಅವಧೂತರು
ಬಯಸದಿರೈಹಿಕ ಸುಖಗಳನುದಿನ ನಿ ಪ ರ್ಭಯದಿ ಭಜಿಸು ಹರಿಯ ವಯನಗಮ್ಯ ವಾಂಛಿತ ಫಲಗಳ ಸ ದ್ದಯದಿ ಕೊಡುವುದರಿಯ ಅ.ಪ. ಮೃಗ ಪಶು ವಾರಿ ಖೇಚರ ಶ ರೀರಗಳಲಿ ಬಂದೆ ಮಾರಿ ಮಸಣಿ ಬಿಕಾರಿ ಭವಾನಿಗ ಳಾರಾಧಿಸಿ ನೊಂದೆ ನಾರಾಯಣ ಪದಾರವಿಂದ ಯುಗ ಳಾರಾಧನೆ ಒಂದೇ ಶರಧಿ ತೋರುವುದೋ ಮುಂದೆ 1 ಅನಿರುದ್ಧನು ನಿಜ ಮನಕೆ ಸಹಿತ ತಾ ಧನ ಧಾನ್ಯದೊಳಿಪ್ಪ ಸುಖಗಳ ತೋರ್ಪಾ ಗುಣವಂತರೊಳು ಜಯಪತಿ ಸಂಕರ್ಷಣ ಕರ್ಮವ ಮಾಳ್ಪಾ ಧರ್ಮ ಕರ್ಮಗಳ ಕೊನೆಗೀತನು ಒಪ್ಪ 2 ವಾಸುದೇವ ವಿಜಯಪ್ರದನಾಗೀ ನರ ರಾ ಶರೀರಗಳೊಳು ಕ್ಲೇಶ ಸುಪುಣ್ಯಗಳ ತಾ ಸಮನಿಸುವನು ಸಂದೇಹಿಸದಿರು ಆಶಾಪಾಶಗಳನು ತಾ ಸಡಲಿಸುವನು ಶೀಘ್ರದಿಂದ3 ನಾರಾಯಣ ಕರುಣಾಸಮುದ್ರ ಕೇಳು ತನ್ನಾರಾಧಕರಿಗೆ ದೂರಗೈದು ದುರಿತಾ ಕೈವಲ್ಯ ಪ್ರದಾಯಕ ತೋರುವ ಸರ್ವಜಿತ ಹಾರೈಸದಿರು ಅಲ್ಪಾಹಿಕ ಸುಖಗಳ ನರಕದ್ವಾರಗಳವು ನಿರುತ ಸೂರಿಗಳನು ಸಂಸೇವಿಸು ಮುಕ್ತಿಗೆ ದ್ವಾರವಹುದು ಸತತಾ4 ಪಂಚರೂಪಿ ಪರಮಾತ್ಮನು ತಾ ಷ ಟ್ಟಂಚ ರೂಪದಿ ಪೊರೆವಾ ಪಾತಕ ತರಿವ ಸಂಚಿತಾಗಾಮಿಗಳಪರಾಧವ ಮುಂಚಿನವಂಗೀವಾ ಮಿಂಚಿನಂದದಿ ಪೊಳೆವಾ 5
--------------
ಜಗನ್ನಾಥದಾಸರು
ಬರಬಾರದೇನೋ ಹರಿಯೇ | ಹೇ ದೊರೆಯೆ ಪ ಕರೆದು ಚೀರುತಲಿರೇ | ಮರೆಯಲಿಪ್ಪುದು ಥರವೇ ಅ.ಪ. ಅಕ್ಷಯ ಹಾಕೀ | ಭರದಿ ಸಲಹಿದೆ ಅಂದೂ1 ಸರಿ ಅಧಿಕರು ನಿನಗೇ | ನರ ಸುರರಲಿ ಯಾರೂಇರರು ಎಂಬುದ ತಿಳಿದು | ಗರುವ ಮಾಡುವಿ ಏನೊ 2 ಬಂಧು ನೀನಲ್ಲವೇನೋ | ಎಂದೆಂದಿಗೂ ನೀನುಇಂದು ಎನ್ನಯ ಕಣ್ಣಾ | ಮುಂದಕೆ ಬಂದು ನಿಲ್ಲೋ3 ದೇಹದಿ ಜೀವಾಂತರದೀ | ಬಹಿರಂತರದಿ ವ್ಯಾಪ್ತಮುಹುರ್ಮುಹು ಪ್ರಾರ್ಥಿಸುವೇ | ಮಹ ಮಹಿಮನೆ ಬಾರೊ 4 ಗುರು ಗೋವಿಂದ ವಿಠಲಾ | ಸುರ ಶತೃಗಳು ಪಟಳಾಹರಿಸೆನ್ನ ವಿದ್ಯಾಪಟಲಾ | ತೋರೋ ನಿನ್ನ ಮುಖ ಕಮಲಾ 5
--------------
ಗುರುಗೋವಿಂದವಿಠಲರು
ಬರಬೇಕು ಇಂದಿಲ್ಲಿಗೆ ಇಂದಿರೆರಮಣಾ ಪಬಾರಯ್ಯಾ ಶ್ರೀಹರಿ 'ಠ್ಠಲ ವೆಂಕಟರಮಣಾಉಡುಪಿಯ ಶ್ರೀಕೃಷ್ಣಾ ಬದರಿನಾರಾಯಣಾ ಅ.ಪಕರಿರಾಜ ಕರೆಯಲು ಕರುಣಸಾಗರ ನೀನುಗರುಡವಾಹನನಾಗಿ ಭರದಿಂದ ಬಂದಂತೆ 1ಭಕ್ತ ಬಾಲನ ಮಾತು ಸತ್ಯಮಾಡಲು ನೀನುತತ್ಕ್ಷಣ ಸ್ತಂಭದಿಂ ಪುಟಿದು ನೀ ಬಂದಂತೆ 2ಸಚ್ಚಿದಾನಂದಾತ್ಮ ಸರ್ವತ್ರ ಪರಿಪೂರ್ಣಭಕ್ತವತ್ಸಲ ಶ್ರೀ ಭೂಪತಿ'ಠ್ಠಲ ಸ್ವಾ'ು 3
--------------
ಭೂಪತಿ ವಿಠಲರು