ಒಟ್ಟು 8605 ಕಡೆಗಳಲ್ಲಿ , 133 ದಾಸರು , 4891 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಶಾವತಾರ ಸ್ತೋತ್ರ ನಾರಾಯಣ ಗೋವಿಂದ | ಹರಿ |ನಾರಾಯಣ ಗೋವಿಂದ |ಪಾರಾಶರ ಸುತನಂದ | ಹರಿ |ನಾರಾಯಣ ಗೋವಿಂದ ಪ ವೇದವ ಕದ್ದೊಯ್ಯಲು ಆತಮನಾ |ಬಾಧಿಸಿ ನಿಗಮವ ತಂದ 1 ದಿವಿಜರು ಚ್ಯುತಬಲರಾಗಿರಲಮೃತವ |ದಿವಿಜರಿಗುಣಿಸಿದ ನಂದಾ 2 ಖಳನು ಭೂಮಿಯ ಕದ್ದೊಯ್ಯಲುತಾ |ಪೊಳೆವ ಕೋರಿಯಲಿ ತಂದಾ 3 ತರುಳನ ಪರಿಪರಿ ಬಾಧಿಸುತಿರಲಾ |ದುರುಳ ದೈತ್ಯನ ಕೊಂದ 4 ಬಲಿಯಪರಾಧವ ನೊಂದೆಣಿಸದೆ ತಾ |ವರಿದು ಬಾಗಿಲಲಿ ನಿಂದ 5 ಕ್ಷತ್ರಿಯ ಬಲವನೆಲ್ಲ ಸವರಿ ನಿ |(ಶ್ಚ) ಕ್ಷತ್ರರ ಮಾಡಿದ ನಂದಾ 6 ವರಮುನಿ ಶಾಪದಿ ಶಿಲೆಯಾಗಿರಲು |ದ್ಧರಿಸಿದ ಪರಮಾನಂದಾ 7 ಮಡದಿ ಗೋಪಿಯರ ಒಡನಾಡಿದ |ಪಾಲ್ಗಡಲ ಶಯನ ಮುಕ್ಕುಂದಾ 8 ತ್ರಿಪುರದ ಸ್ತ್ರೀಯರ ವೃತಗೆಡಿಸಿದ | ವಟು |ವಪು ಮೃಡಮುಖ ಸುರವಂದ್ಯಾ 9 ಪುರುಷೋತ್ತಮ ಯವನರ ಸಂಹರಿಸಿ |ತುರಗವನೇರಿ ನಿಂದಾ 10 ಶ್ರೀಶ ಪ್ರಾಣೇಶ ವಿಠಲ ಈ ಸರ್ವರ |ಪೋಷಕ ನಾನಹುದೆಂದಾ 11
--------------
ಶ್ರೀಶಪ್ರಾಣೇಶವಿಠಲರು
ದಾತ ತ್ರೈಲೋಕ್ಯಕೀತ ಧ್ರುವ ದೂರ ಸಗುಣ ಸಹಕಾರ ಧೀರ ಪರಮಉದಾರ ದುರಿತ ಸಂಹಾರ ಪರಾತ್ಪರ ಪರಾಕಾರ 1 ಈಶ ಭವಭಯನಾಶ ಶೇಷಶಯನ ಸರ್ವೇಶ ದೋಷಹರ ಕರುಣೀಶ ಕ್ಲೇಶನಾಶ ದೇವೇಶ 2 ಮಾತಾ ವಿಶ್ವನಿರ್ಮಿತ ಪಿತಾಮಹನ ಪಿತ ಈತ ಮಹಿಪತಿ ಹಿತ ನಾಥಾ ಭಕ್ತಪುನೀತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾನಿಗಳೊಳು ಪ್ರತಿಗಾಣೆನೊ ನಿನಗೆಸ ನ್ಮೌವಿ ಶ್ರೀ ಸುಶೀಲೇಂದ್ರ | ನೀನೇವೆ ಗತಿ ಎಂದ ದೀನರ ಮನೋಭೀಷ್ಟ ಸಾನುರಾಗದಿ ಕೊಡುವಿ | ಕೈಪಿಡಿಯುವಿ ಪ ಶ್ರೀಸುವೃತೀಂದ್ರ ಸುಯಮೀಂದ್ರಗಳಿಂದಲಿ ಸ | ನ್ಯಾಸತ್ವ ಸ್ವೀಕರಿಸಿ ಪತಿ ಮೂಲ | ದಾಶರಥಿಯ ಪಾದ ಲೇಸಾಗಿ ಒಲಿಸಿದೆ ನೀ | ಸುಜ್ಞಾನಿ 1 ಕರಿವರದನ ಪೂರ್ವ ಕರುಣ ಪಡೆದು ದಿವಾ ಕರನಂತೆ ರಾಜಿಸುತ | ಗುರುರಾಘವೇಣದ್ರಾಖ್ಯ | ಸುರಧೇನುವಿಗೆ ಪುಟ್ಟ ಕರುವೆನಿಸುತ ಮೆರದಿ ಭೂವಲಯದಿ 2 ಮೋದತೀರ್ಥಾಗಮ ಸಾಧು ಸಜ್ಜನರಿಂದ ಶೋಧಿಸಿ ಬಹುವಿಧಧಿ ಪಂಚಭೇದ | ಶಿಷ್ಯರಿಗೆಲ್ಲ ಬೋಧಿಸುತಲಿ ಪೊರೆದಿ ದಯಾಂಬುಧಿ 3 ಸಿಂಧುತೀರದಿ ನೆಲಸಿ ಮಂದ ಜನರಿಗೆ | ಕ ರ್ಮಂದಿ ಪವರಗಳನು | ನೀಡುವಿ ನೀನು 4 ಶ್ರೀ ಶಾಮಸುಂದರ ವಿಠಲ ವಾಸಿಸುವ | ಕಾ ಪ್ಯಾಸನ ವರಕ್ಷೇತ್ರದಿ | ದೇಶ ದೇಶದಿ ಬಂದ | ಭೂಸುರರಿಗೆ ಧನ ರಾಶಿ ಸೂರೆ ಮಾಡಿದಿ | ಸನ್ಮೋಹದದಿ 5
--------------
ಶಾಮಸುಂದರ ವಿಠಲ
ದಾಮೋದರ ವಿಠಲನೆ | ಸಲಹ ಬೇಕಿವಳಾ ಪ ಸನ್ನುತ ಹರಿಯೆ | ಸ್ವಾಮಿ ಪಾಲಿಪುದೊ ಅ.ಪ. ತರಳೆ ದ್ರೌಪತಿ ವರದ | ಕರಿಯು ಮೊರೆಯಿಡೆ ಕಾಯ್ದವರ ಅಹಲ್ಯೆಯ ಪೊರೆದ | ತರಳ ಧ್ರುವ ವರದಕರುಣದಿಂದಲಿ ಮನದ | ಪರಿಪರಿಯ ಸತ್ಕಾಮಗರೆದು ಪಾಲಿಪುದಿವಳ | ಶಿರಿ ರಾಮಚಂದ್ರಾ 1 ಪತಿ ಸೇವೆ ಪರಳೆನಿಸು | ಗತಿಗೋತ್ರ ನೀನೆನಿಸುಸತತ ನಿನ್ನಯ ನಾಮ | ಸ್ಮøತಿಗೊದಗಿಸೊತತುವೇಶರೊಲಿಮೆಯಲಿ | ಸತತ ಗೈಯ್ಯುವ ಕಾರ್ಯವಿತತವಾಗಲಿ ನಿನ್ನ | ಹಿತಸೇವೆ ಎಂದೂ 2 ಕಾಲ ಕಾಲಕೆ ನಿನ್ನಓಲಯಿಪ ಭಾಗ್ಯದಲಿ | ಕೀಲಿಪುದು ಮನವಾ 3 ಮೂರೆರಡು ಭೇದಗಳ | ತಾರತಮ್ಯವನರುಹಿತೋರೊ ತವರೂಪ ಹೃ | ದ್ವಾರಿಜದನಡುವೇಕಾರುಣಿಕ ನೀನೆಂದು | ಸಾರುತಿವೆ ವೇದಗಳುಮಾರಾರಿ ಸಖ ನಿನ್ನ | ಕಾರುಣ್ಯ ತೋರೋ 4 ಪಾವಮಾನಿಯ ಪ್ರೀಯ | ಭಾವದಲಿ ಪ್ರಾರ್ಥಿಸಲುಪೂವನಿತ್ತಭಯವನು | ಓದಿ ಪಾಲಿಸಿಹೇಕೇವಲಾ ನಂದಮಯ | ಗೋವಿದಾಂಪತಿಯೆ ಗುರುಗೋವಿಂದ ವಿಠ್ಠಲನೆ | ಭಿನ್ನಪವ ಸಲಿಸೋ 5
--------------
ಗುರುಗೋವಿಂದವಿಠಲರು
ದಾರ ಕಂದನಮ್ಮ ಕೇರಿಗೆ ಬಂದು ಗಾರುಮಾಡುವ ನೋಡಲಾರೆ ಗೋಪ್ಯಮ್ಮ ಈರೇಳು ಲೋಕದೊಡೆಯನೊ ದಾರಮ್ಮ ಪ ಪಿಡಿದಿದ್ದ ಕೊಳಲೂದುವ ಬಾಯಲಿ ಬೆಣ್ಣೆ ಕಡಗೋಲ ಪಿಡಿದಿದ್ದ ಬೆಡಗು ನೋಡಮ್ಮ ಬಿಡಿಮುತ್ತಿನ ಉಡಿದಾರವು ಉಡಿಗಂಟೆ ಮುಡಿದ ಮಲ್ಲಿಗೆ ಕುಸುಮಗಳು ನೋಡಮ್ಮ ಕುಡಿಹುಬ್ಬು ಕಡೆಗಣ್ಣನೋಟದ ಚೆಲುವ ತಾ ಹುಡುಗರಂತಾಡುವ ತುಡುಗ ತಾನಮ್ಮ 1 ಕಮಲ ನಕ್ಷತ್ರದ ಪತಿಯಂತೆ ಇಪ್ಪೊ ವಜ್ರದ ಪದಕಗಳ ನೋಡಮ್ಮ ಅರ್ಕನಂತಿರಲತಿ ಕೋಮಲಪಾದಕೆ ಶುಕ್ಲಗೆ ಮಿಗಿಲಾದ ಗುರು ಕೇಳಮ್ಮ ಕತ್ತಲೊಳಗೆ ಕಳ್ಳತನದಿಂದೋಡಾಡುತ ಕಟ್ಟಿದ ಪಂಜಿನಂತ್ಹೊಳೆವೊ ಕೇಳಮ್ಮ 2 ಕಟ್ಟಿದ ನೆಲವಿನೊಳ್ ಮಕ್ಕಳ ಮಲಗಿಸಿ ಎಷ್ಟು ಘಾತಕÀ ತಾ ಕೈಬಿಟ್ಟ ನೋಡಮ್ಮ ತೊಟ್ಟಿಲೊಳಗೆ ಕೆನೆಮೊಸರಿನ ಚಟ್ಟಿಗೆ ಇಟ್ಟು ತೂಗುತ ಮೆಲ್ಲುವನು ಕೇಳಮ್ಮ ಕಟ್ಟಿದ್ದಾಕಳ ಕಣ್ಣಿ ಬಿಚ್ಚಿ ಮೊಲೆಗೆ ಬಾಯ್ಹಚ್ಚಿ ಕ್ಷೀರವ ಸುರಿದುಂಬುವನಮ್ಮ 3 ತೋಳ ಬಾಪುರಿ ವಂಕಿ ತೋಡ್ಯ ಬಿಂದಲಿ ಚಕ್ರ- ಪಾಣಿಯಲ್ಲೊ ್ಹಳೆವೊ ಮುದ್ರಿಕೆಯ ನೋಡಮ್ಮ ಆಣಿ ಮುತ್ತಿನ ಸರ ಅರಳೆಲೆ ಪದಕವು ಕಾಲ ಕಿಂಕಿಣಿ ನಾದಗಳ ಕೇಳಮ್ಮ ತೋರ ಮುತ್ತುಗಳೋಣಿಯಲುದುರುತ ಒ- ಯ್ಯಾರದೊಲಪಿನ ಚೆದುರ್ಯಾರು ಪೇಳಮ್ಮ4 ಮನ್ಮಥನಿಗೆ ಮಿಗಿಲಾದ ಸ್ವರೂಪಲಾವಣ್ಯನೆ ನೀಲದ ವರ್ಣ ಕೇಳಮ್ಮ ಹುಣ್ಣಿಮೆ ಚಂದ್ರಮನ್ನ ಸೋಲಿಸೋಮುಖ ಇನ್ನು ಇವನÀ ಸೌಂದರ್ಯ ನೋಡಮ್ಮ ಹೆಣ್ಣು ಮಕ್ಕಳ ಸೆರಗನ್ನು ಕೈಯ್ಯಲಿ ಸುತ್ತಿ ಬೆನ್ನು ಬೆನ್ಹತ್ತಿ ತಾ ತಿರುಗುವನಮ್ಮ 5 ಚೀನಿ ಅಂಗಿಯ ಮ್ಯಾಲೆ ಚಿತ್ರದ ನಡುಕಟ್ಟಿ ಜಾರ ಜರದ ಛಾದರವ ನೋಡಮ್ಮ ಸೋಗೆ ನವಿಲು ಗಿಳಿ ಕೋಗಿಲೆ ಸ್ವರದಂತೆ ವೇಣು ಕೊಳಲ ಗಾಯನವ ಕೇಳಮ್ಮ ಮೇಘಮಂಡಲ ತಲೆತಾಕುವ ಹರಿಯದೆ ತಾ ಜಿಗಿದಾಡೋನಂಗಳದಿ ಕೇಳಮ್ಮ 6 ಎಷ್ಟು ಹೇಳಿದರೀ ಮಾತು ಮನಕೆ ನಿಜ ಹುಟ್ಟವಲ್ಲದೇನೀಗ ಬಾರೆ ಗೋಪಮ್ಮ ಬಿಟ್ಟು ಕೆಲಸ ಭೀಮೇಶಕೃಷ್ಣಗೆ ಬುದ್ಧಿ ಎಷ್ಟು ಹೇಳುವಿ ಮುಂದ್ಹೇಳಲೇಕಮ್ಮ ಸಿಟ್ಟು ಮಾಡುವರೇನೆ ಸಿರಿಪತಿ ಆಟ ನಿನ್ನ ದೃಷ್ಟಿಂದ ನೋಡೆ ನಿಜಹುಟ್ಟುವುದಮ್ಮ7
--------------
ಹರಪನಹಳ್ಳಿಭೀಮವ್ವ
ದಾರಿ ತೋಚದಲ್ಲಾ ನನಗೆ ಏನು ಪ ನೀರಜಾಕ್ಷ ನಿನ್ನ ನೊಲಿಸುವ ಅ.ಪ ವಿಧಿ ಸಾಧಿಸುತ ವೇದವ್ಯಾಸ ನಿನ್ನ ಪ್ರೀತಿ ಸಾಧಿಸಲು ಮೂಢನಾನು 1 ದಂಡಕಾಲ ಕಳೆದುದಯ್ತು ಮಂಡೆಗೀಗ ಹತ್ತದವು ಫಂಡರೀಶ ಕೃಪೆಯಮಾಡೊ 2 ಹಾಡಿಪಾಡಿ ವಲಿಸಾಲು ರಾಗ ಈ ಭಾವ ತಾಳ ಕಾಣೆ ಕಾಡು ಕೋಣನಂತೆ ಇರ್ಪೆ ನೀಡಿ ಸಲಹೊ ಸರ್ವ ಶಕ್ತಿ 3 ದಾನಧರ್ಮತೀರ್ಥಯಾತ್ರೆ ನಾನು ಮಾಡೆ ಹುಟ್ಟು ಬಡವ ಶ್ವಾನನಂತೆ ತಿರಿದು ಉಂಬೆ ಸಾಧ್ಯವೇನು ನೀನೇ ನುಡಿಯೊ4 ನೆಂಟರಿಷ್ಟರೆಲ್ಲ ಎನ್ನ ಕೈಯ ಬಿಟ್ಟು ಹೋದರೈಯ ಒಂಟಿಯಾಗಿ ಅಲೆದು ಅಲವೆ ಭಂಟನೆನಿಸಿ ಕಾಯಬೇಕೊ 5 ದಾಸನಾಗಿ ಬಾಳೋದಕ್ಕೆ ಆಶೆಯಿನ್ನು ತೊಲಗಲಿಲ್ಲ ಮೊಸವೇನೆ ಬರಿಯ ವೇಷ ದೋಷದೂರ ಶ್ರೀಶವಲಿಯೊ 6 ಹಿಂದಿನವರ ಕಾಯ್ದಬಗೆಯು ಇಂದಿನವರಿಗೆ ಬರಿಯ ಕಥೆಯು ಮಂದನೆನ್ನ ಈಗ ಪಿಡಿದು ಮುಂದು ಮಾಡೊ ನಿನ್ನ ಖ್ಯಾತಿ7 ಶರಣ ಜನರ ಬಿಡನು ಎಂಬ ಖರೆಯಬಿರುದು ನಿನ್ನದೆಂದು ಹಿರಿಯರಿಂದ ಅರಿತುಬಂದೆ ಪರಮ ಕರುಣಿ ಕೈಯ ಪಿಡಿಯೊ8 ನಿನಗೆ ಯೆನ್ನ ಪೊರೆಯೆ ಕ್ಷಮಿಸಿ ದೋಷ ಪೊರೆಯೊ ಬೇಗ ನಮಿಪೆ ನಂಬಿ ನಿನ್ನನೀಗ 9
--------------
ಕೃಷ್ಣವಿಠಲದಾಸರು
ದಾರಿ ದೋರೆನಗ ಮುಕುಂದಾ ಪ ದಾರಿ ತೋರೆನಗೆ ಶ್ರೀ ಹರಿ ನಿನ್ನ ಭಕುತಿಯಾ| ಸಾರಿದೆ ನಿನ್ನವನಾನು ಮುಕುಂದಾ ಅ.ಪ ಜನುಮಾನುಜನುಮದಲಿ|ನಾಮವಾ| ನೆನೆಯದ ತಪ್ಪಿನಲಿ|| ಜ್ಞಾನದೃಷ್ಟಿಯಲಂಧನಾದೆನು ಹರಿ ನಿಮ್ಮ| ಕಾಣದ ಕಂಗಳನಾ ಮುಕುಂದಾ1 ಭ್ರಾಂತತನವ ಬಿಡಿಸಿ|ವಿವೇಕ| ಶಾಂತಿಯ ನೆಲೆಗೊಳಿಸಿ| ಅಂತರಂಗದ ನಿಜ ಸುಖವ ಸೂರ್ಯಾಡುವ| ಸಂತರೊಳಗ ಕೂಡಿಸೋ ಮುಕುಂದಾ2 ಅರಹುನಯನ ದೆರಿಸಿ|ನಿಜರೂಪ| ಗುರುತದ ನೆಲೆ ತೋರಿಸೀ| ಗುರುವರ ಮಹಿಪತಿ ನಂದನ ಪ್ರಭು ನಂದನ ಪ್ರಭು ನಿಮ್ಮ| ಸ್ಮರಣೆ ಪಡೆಯ ನಡಿಸೋ ಮುಕುಂದಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾರೇನೆಂಬುರೈ|ಹರಿ ಭಕ್ತರಿಗೆ|ದಾರಲ್ಲವೆಂಬುರೈ ಪ ಗುರುವಿನಂಘ್ರಿವಿಡಿದು|ಗುರುತುಕೀಲವರಿತು ನಿಜಾ| ಪರಮಾನಂದ ಸುಖಾ|ಸುರಸನುಂಬುವರಿಗೇ 1 ಕುತ್ಸಿತ ಮಾರ್ಗವನೆಲ್ಲಾ|ಕೊಚ್ಚಿಜರಿದು ಧರಿಯೊಳು| ಅಚ್ಯುತ ಪರದೈವನೆಂದು|ನೆಚ್ಚಿದ ಮಹಿಮೆಗೆ 2 ಮಾಧವ ಮುದ್ರೆಯಿಂದ|ದ್ವಾದಶ ನಾಮವನಿಟ್ಟು| ಪದುಮಾ ತುಳಸೀಸರ|ಹೃದಯದಲ್ಲಿ ಮೆರೆವಂಗೆ 3 ನಷ್ಟನೃಪರಾ ಮನೆಯಾ|ತನಿಷ್ಟೆಯೊಳು ಲೆಕ್ಕಿಸದೆ| ಹುಟ್ಟಿದ ಲಾಭದಲ್ಲಿ|ತುಷ್ಟಿ ಬಟ್ಟಿರುವಂಗೆ 4 ಅವರವರಂತೆ ಲೋಕ|ದವರಿಗೆ ತೋರುತಾ| ವಿವರಿಸಿ ವಿವೇಕ ಹಾದಿ|ಭವದಾ ಬೇರಿಳಿದಂಗೆ 5 ತಾಳದಂಗಡಿಗೆಯ ಸಿಡಿದು|ಮೇಳ ಭಾಗವತರೊಳು| ಶ್ರೀಲೋಲನನು ಪಾಡಿ|ನಲಿದಾಡುತಿಹರಿಂಗೆ 6 ತಂದೆ ಮಹಿಪತಿ ನಿಜಾ|ನಂದನ ಸಾರಿದ ನುಡಿ| ಹೊಂದಿ ಭಾವಭಕ್ತಿಯಿಂದ|ಛಂದವಾಗಿಪ್ಪರಿಂಗೆ7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾವಗಿಲ್ಲ ಖೂನ ತನ್ನೊಳಗ ಅವಗೆಲ್ಲಿಯ ಜ್ಞಾನ ಜಗದೊಳಗ ಧ್ರುವ ತಿಳಿದುಕೊಳ್ಳದವ ಆತ್ಮವಿಚಾರ ಕಳೆದು ಕೊಂಡವನೆ ಹಿತ ಅಪಾರ ಹೊಳಿಯದವಗ ಎಂದು ವಸ್ತುದಾಧಾರ 1 ದಾವಗಿಲ್ಲ ಖೂನ ಗುರುಮುಖ ಅವನೆ ತಾಳಿ ಬಾಹ್ವ ಜನ್ಮ ಅನೇಕ ಭಾವಿಸದು ದಾವಗಿನ್ನ ವಿವೇಕ ಅವಗೆಲ್ಲಿಹದು ನೋಡಿ ಸ್ವಸುಖ 2 ಖೂನ ತನ್ನ ತಿಳಿವದು ತ್ವರಿತ ಅನುಭವಕಿದೆ ತಾಮ ಸನ್ಮತ ದೀನ ಮಹಿಪತಿಗೆ ಸ್ವಹಿತ ಭಾನು ಕೋಟೆ ತೇಜನಾದ ಉದಿತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾಸ ದಾಸರು ಪೇಳುತಿಹರಲ್ಲಾ ಕೇಶವಾ ಎಂದು ತಾಸು ತಾಸಿಗೆ ಪೇಳುತಿಹರಲ್ಲಾ ಪ ರಾಮನೆಂಬರು ನಿಮಿಷ ನಿಮಿಷಕೆ ನೇಮದಿಂದಲಿ ಹರಿಯ ಭಜಿಪರು ರಾಮನಾಮವ ಹಲವು ವಿಧದಲಿ ಪ್ರೇಮದಿಂದಲಿ ಸ್ಮರಿಸುತಿಹರು 1 ಮಾತು ಮಾತಿಗೆ ಕೃಷ್ಣಯೆಂಬರು ನೀತಿ ನೀತಿಗೆ ವಿಠಲಯೆಂಬರು ಸೇತು ಬಂಧನ ಸ್ವಾಮಿ ನಾಮವ ನಿತ್ಯ ನುಡಿಯಲಿ ನೆನೆಯುತಿಹರು 2 ಕಾಲ ಕಾಲಕೆ ಶೇಷಶಾಯಿಯ ನೀಲರೂಪನ ನಾಮ ಸವಿಯುತ ಮೂರ್ತಿ ಕೀರ್ತನೆ ವೇಳೆ ವೇಳೆಗೆ ಮಾಡುತ 3 ನಿತ್ಯ ಮಾರ್ಗದಿ ನಾವೆ ರೂಪವ ಧರಿಸಿ ಭವದೊಳು ರಾವಣಾಂತ ಕನಡಿಯ ಸೇರುವ 4
--------------
ಕರ್ಕಿ ಕೇಶವದಾಸ
ದಾಸ ನಾನೆಂಬೇ ಗುರು ಭಕುತರಾ ಪ ಗುರುವೇ ಜನಕ ಘನ ಗುರುವೇ ಜನನಿಯ | ಗುರುವೇ ಗೆಳೆಯ ನಿಜ ಗುರುವೇ ಆತ್ಮನು | ಗುರುವೇ ಬಂಧುವು ಗುರುವೇ ಇಷ್ಟನು | ಗುರುವೇ ಗತಿಮತಿ ಗುರುವೆಂದವರಾ 1 ಗುರುವೇ ಚತುರ್ಮುಖ ಗುರು ಕಮಲಾಂಬಕ | ಗುರುವೇ ಸದಾಶಿವ ಗುರುವೇ ಸಂತರು | ಗುರುವೇ ಸುರಭಿಯ ಗುರು ಚಿಂತಾಮಣಿ | ಗುರು ಧನದ್ರವ್ಯನು ಗುರುವೆಂದವರಾ 2 ಗುರು ವಚನವೇ ಶೃತಿ ಗುರುದಯ ಮುಕ್ತಿಯು | ಗುರು ಗೃಹ ಕ್ಷೇತ್ರವು ಗುರು ನೋಟ ಪರಸವು | ಗುರು ಸ್ಮರಣೆಯೇ ಜಪ ಗುರು ಮಹಿಪತಿ ಪ್ರಭು | ಗುರು ಭಕ್ತಿಯೇ ತಪ ಗುರುವೆಂದವರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾಸನಾಗುವೆ ಭಜಿಪ ಭಕ್ತಿಯನು ನೀಡೆನ್ನ ನಾನೇನೂ ಮಾಡಲಾರೆ ರಂಗಯ್ಯ ನೀನೆನ್ನ ಸಲಹ ಬೇಕು ಪ ಗಾನಲೋಲನ ನಾಮ ಭಜನೆಯೊಂದುಳಿದು ನಾ ನನ್ಯರೀತಿಯ ಕಾಣೆ ಸಲಹಯ್ಯ ಹರಿಯೇ ಅ.ಪ. ತರಳಾ ಧ್ರವನಂತೆ ತಪನ ನಾನರಿಯನು ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ ಹರಿದಾಸರಂತೆ ದಾಸತ್ವ ನಾನರಿಯೆನು ಪರಮ ಸೇವಕರಂತೆ ಸೇವೆಯ ನರಿಯೇ 1 ಅಸುರನಂದನನಂತೆ ಕೀರ್ತನೆಯರಿಯೆನು ವಸುಧೀಶನಂತೆ ನಾ ವ್ರತಗಳನರಿಯೇ ವಸುಮತಿಯಂತೆ ನಾ ಯಾಚನೆಯರಿಯೆನು ಋಷಿ ವೃಂದದಂತೆ ನಾ ಭಕ್ತಿಯನರಿಯೇ 2 ಸಿರಿಯಂತೆ ನಿನ್ನನು ಸೇವಿಸಲರಿಯನು ಕರಿಯಂತೆ ಸ್ಮರಣೆಯ ಮೊದಲು ನಾನರಿಯೆ ಸುರಮುನಿಯಂತೆ ನಾ ಗಾಯನವರಿಯೆನು ಸಿರಿ ಚನ್ನಕೇಶವ ಭಜನೆಯನರಿವೇ 3
--------------
ಕರ್ಕಿ ಕೇಶವದಾಸ
ದಾಸನಾಗೋ ಭವಪಾಶನೀಗೋ - ವಿಶೇಷನಾಗೋ ಪ ಏಸೊ ಕಾಯಂಗಳ ಕಳೆದು ಎಂಬತ್ತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದೆ ಈ ಶರೀರ ತಾನಲ್ಲ ತನ್ನದಲ್ಲಆಶೆಯು ತರವಲ್ಲ ಸ್ಥಿರವಲ್ಲ ಮುಂದೆ ಬಾಹೋದಲ್ಲಆಶಾಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನಪಾಶಕ್ಕೊಳಗಾಗದೆ ನಿರ್ದೋಷಿಯಾಗೊ - ಸಂತೋಷಿಯಾಗೊಅ ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರಏಸು ದೇಶ ತಿರುಗಿದರೆ ಬಾಹೋದೇನೊ - ಅಲ್ಲಿ ಆಹೋದೇನೊದೋಷನಾಶೆ ಕೃಷ್ಣವೇಣಿ ಗಂಗೆ ಗೋದಾವರಿ ಭವನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ - ಉಪವಾಸದಲ್ಲಿಮೀಸಲಾಗಿ ಮಿಂದು ಜಪತಪ ಹೋಮನೇಮಗಳಏಸು ಬಾರಿ ಮಾಡಿದರೂ ಫಲವೇನೊ - ಇದು ಚೆಲುವೇನೊವಾಸುದೇವನೆಂಬ ಒಳಗಿಹ ಹಂಸನ ಸೇರಿಲೇಸನುಂಡು ಮೋಸಗೊಳದೆ ಮುಕ್ತನಾಗೊ - ನೀ ಶಕ್ತನಾಗೊ1 ಅತ್ತಲೋ ಇತ್ತಲೋ - ಎತ್ತಲೋ ಈ ಸಂಸಾರಬತ್ತಲೆಗೆ ಬತ್ತಲೆ ನಿತ್ಯವಲ್ಲ - ಪರಿಮಿತಿ ಇಲ್ಲಕತ್ತಲೆ ಕಾವಳದೊಳು ಕಾಣಲಾರದೆ ನೀನುಸತ್ಯವೆಂಬ ದಾರಿಯನು ಸೇರಲಿಲ್ಲ - ಲೇಸು ತೋರಲಿಲ್ಲಉತ್ತಮ ಅ ಉ ಮ ಎಂಬ ಓಂಕಾರ ಬೀಜಾಕ್ಷರಚಿತ್ತದಲಿ ಗ್ರಹಿಸು ನೀ ಬಿಡಬೇಡ - ಬಿಟ್ಟು ಕೆಡಬೇಡಹೊತ್ತಾರೆಯಲೊ ಬೈಗಿನಲೊ ಆಗಲೊ ಈಗಲೊ ಕಾಯನಿತ್ಯವೆಂದು ಸ್ಥಿರವೆಂದು ನಂಬಬೇಡ - ನಿನಗೆ ಡಂಬ ಬೇಡ 2 ಆಯಿತೊ ಹೋಯಿತೊ ಏನಾಯಿತೊ ಈ ದೇಹಕ್ಕೆತಾಯಿ ಯಾರೊ ತಂದೆ ಯಾರೊ ಮಡದಿ ಯಾರೊ ಮಕ್ಕಳ್ಯಾರೊಮಾಯದೊಳು ಸಿಲುಕಿ ಬಲು ಕಾಲದಿಂದ ಶ್ರೀರಘುರಾಯನೆಂಬ ವಸ್ತುವಿನ ಸ್ಮರಣೆ ಬಿಟ್ಟು - ಭವದಿ ಮಮತೆ ಇಟ್ಟುನಾಯ ಬಾಯ ಅರಿವೆಯಂತೆ ನಾನಾ ಕೋಟಲೆಯಲಿ ಬಿದ್ದುಬಾಯಿ ಬಾಯಿ ಬಿಡುತಲಿ ಸಾವುದೇನೊ - ನೀ ನೋವುದೇನೊತ್ರಾಯಿ ತ್ರಾಯಿ ತ್ರಾಯಿಯೆಂದು ತ್ರೈಲೋಕ್ಯದೊಡೆಯ ಪುಣ್ಯದಾಯಕನ ಹೊಂದಿ ನೀ ಧನ್ಯನಾಗೊ - ಮುಕ್ತ ಮಾನ್ಯನಾಗೊ 3 ಸಿರಿ ಕಮಲೇಶನನ್ನುಒಂದು ಬಾರಿ ಅರುಹಿಂದ ನೆನೆಯಲಿಲ್ಲ - ಮನ ತಣಿಯಲಿಲ್ಲಬಂದು ಬಂದು ಭ್ರಮೆಗೊಂಡು ಮಾಯಾಮೋಹಕೆ ಸಿಕ್ಕಿನೊಂದು ಬೆಂದು ಒಂದರಿಂದ ಉಳಿಯಲಿಲ್ಲ - ಬಂಧ ಕಳೆಯಲಿಲ್ಲಸಂದೇಹವ ಮಾಡದಿರು ಅರಿವು ಎಂಬ ದೀಪ ಹಿಡಿದುಇಂದು ಕಾಣು ದೇಹದಲಿ ಪಿಂಡಾಂಡ - ಹಾಗೆ ಬ್ರಹ್ಮಾಂಡಇಂದಿರಾ ರಮಣನ ಧ್ಯಾನವನ್ನು ಮಾಡಿ ವಿವೇಕದಿ ಮುಕುಂದನಿಂದ ಮುಕುತಿಯ ಬೇಡು ಕಂಡ್ಯ - ನೀ ನೋಡು ಕಂಡ್ಯ 4 ತುಂಬಿ ಲಂಡ
--------------
ಕನಕದಾಸ
ದಾಸನೆನಿಸಿಕೊ ಎನ್ನನು ದಾಸನೆನಿಸಿಕೊ ಹರಿ ಪ ದಾಸನೆನಿಸಿಕೊ ಶ್ರೀಶ ನಿ ಮ್ಮ ಶ್ರೀಪಾದಕಮಲದಾಸನೆನಿಸಿಕೊ ಅ.ಪ ದೇಶ ದೇಶ ತಿರುಗಿ ನಾನು ಆಶಬದ್ಧನಾಗಿ ಇನ್ನು ಏಸುಕಾಲ ಕಳೆಯಲ್ಹೀಗೆ ಭಾಸುರಾಂಗ ದಯವನಿತ್ತು 1 ಏಸು ಜನ್ಮ ಸುಕೃತವಡೆದು ವಾಸನ್ಹಿಡಿದು ನಿನ್ನ ಪಾದ ಆಸೆಯಿಂದ ಬೇಡ್ವೆ ನೆನ್ನ ಧ್ಯಾಸದಲ್ಲಿ ವಾಸಮಾಡಿ2 ಭಕ್ತರಿಷ್ಟಪೂರ್ಣನೆಂದು ನಿತ್ಯ ಬಿಡದೆ ಕೂಗುವಂಥ ಸತ್ಯವೆನಿಸು ವೇದದೋಕ್ತಿ ನಿತ್ಯ ನಿರ್ಮಲಾತ್ಮ ರಾಮ 3
--------------
ರಾಮದಾಸರು
ದಾಸರ ನೆರೆನಂಬಿರೊ ಚಲುವ ವಿಜಯದಾಸರ ನೆರೆನಂಬಿರೊ ಪ ದಾಸರ ನೆರೆನಂಬಿ ಯೇಸು ಜನ್ಮದ ಭವಪಾಶವ ಹರಿಸಿ ರಮೇಶನ್ನ ಮಹಿಮೆಯಲೇಸಾಗಿ ವಿರಚಿಸಿ ಪರಮೋಲ್ಹಾಸದಲಿ ಜೀ-ವೇಶ ಭೇದವ ಯೇಸು ಬಗೆಯಲಿ ತಿಳಿಯುತಲೆ ನೆರೆ-ದೋಷ ಬುದ್ಧಿಯ ನಾಶಗೈವರ ಅ.ಪ. ಇಂದು ನಿಜವು ಕಂದುಗೊರಳಮ-ರೇಂದ್ರವಂದ್ಯ ಮುಕುಂದನನು ಬಿಡ-ದಂದು ಭಜಿಪ ಪುರಂದರನ ಪದದ್ವಂದ್ವಯುಗಳರವಿಂದ ಮಧುಪರ ನಂದದಲಿ 1 ಕಂಟಕ ಬಂಧಹರವೆಂದು ಮನದಲ್ಲಿ ನೆರೆ ತಿಳಿದರಿಂದ || (ದುಡುಕು) ಪರಮ ಧನ್ಯರು ಧರಿಗೆ ಯಾದವ-ರರಸೆ ಪೊರೆವನು ಕರುಣದಲಿ ಭೂಸುರರಗುರುದೊರೆ ಮರುತ ಪೊರೆವನುಸುರರವರ ಕಾದಿಹರು ಯೆನಿಪರ2 ಸಿರಿ ಮಾ-ಧವ ಮೋಹನ ವಿಠಲರೇಯನಅವಸರದ ಕಿಂಕರರ ಭಜಕರು 3
--------------
ಮೋಹನದಾಸರು