ಒಟ್ಟು 5542 ಕಡೆಗಳಲ್ಲಿ , 129 ದಾಸರು , 3523 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮಾತ್ಮನೆ ಪರಿಪೂರ್ಣನೆ ವರವೇಂಕಟರಮಣನೆ ರಾಮ ಪ ಪೊರೆಯೋ ಸದಾ ಭಕ್ತ ಸುಪ್ರೇಮ ಅ.ಪ ನಿತ್ಯತೃಪ್ತ ನಿರ್ಮಲಾತ್ಮ ಸತ್ಯಮೂರ್ತಿ ಷಡ್ಗುಣಭರಿತ ಭೃತ್ಯವರ್ಗ ಸಂರಕ್ಷಣ ಶಕ್ತ ಪ್ರತ್ಯಕ್ಷ ಪಾವನ ಚರಿತ 1 ನಿನ್ನ ಮಹಿಮೆಯನ್ನು ಪೊಗಳೆ ಪನ್ನಗೇಶನಿಂದಲಸದಳ ಇನ್ನು ನಾನು ಪೊಗಳಲಪ್ಪನೆ ಸನ್ನುತಾಂಗ ಸದಯರಂಗ2 ಮುನಿಗಳಿಂದ ಪೂಜೆಗೊಂಬ ಘನಗುಣಾತ್ಮ ನಿನ್ನ ಯಾಜಿಪೆ ಅಣುಗನಿಂದಲಾಗಲಹುದೆ ತನುಮನ ಪೊರೆ ಆನಂದ3 ಉಣ್ಣಲಿಡಲಿದೆಲ್ಲ ನಿನ್ನದೊ ಇನ್ನದೇನ ತಂದು ಕೊಡಲೊ ಮನ್ನಿಸುವುದೊ ಹೆಜ್ಜಾಜಿಯ ಚನ್ನಕೇಶವ 4
--------------
ಶಾಮಶರ್ಮರು
ಪರಮಾನಂದ ಪರಿಪೂರ್ಣಾ ನೀ ಗುರುವರಾ ಜ್ಞಾನಾದಾತಾ ಮಾನಿತಾ ನೀ ದೇಹಾದಿಸಂಘಾತವಾ ಮೀರಿರ್ದ ಸ್ವರೂಪವಾ ಮಹಾಗೂಢವಾ ಬೋಧಿಸೀ ಮುಕುತಿ ನೀಡುತಿರುವಾ ನೀ ಸ್ವರೂಪಾಜ್ಞಾನಾ ಮಹಾಸಾಧನಾ ಪೇಳಿದ ನೀನೇ ದಯಾಘನಾ ಮಾನಿತನೇ ಪರಾತ್ಪರಾ ನಿರಾಮಯಾ ನೀನೇ ಸ್ವರೂಪಾತ್ಮನೈ ನೀನೇ ನಾನಾದೆ ದೇವಾಗುರುವೇ ಶಂಕರಾರ್ಯ
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಮೇಶ್ವರ ಪೂರ್ಣ ತುಂಬ್ಯಾನ ಪರಾಮರಿಸಿ ನಿಮ್ಮೊಳಗೆ ಪರದೆ ಇಲ್ಲದೆ ಪರವಸ್ತುದೋರುವ ಕರುಣಿಸಿ ನಿಮಿಷದೊಳಗೆ ಸದ್ಗುರು ಜಗದೊಳಗೆ ಎರಡಿಲ್ಲದೆ ಗುರುಚರಣಕ ಮನಬೆರೆದನುಭವಿಸುವದಾವಾಗೆ ತ್ರಾಹಿ ತ್ರಾಹಿ 1 ನಿಜಮಾಡುವದೆಲ್ಲ ಡಾಂಭಿಕ ಮಾಡದು ತಾ ನಿಜಸುಖ ಕೂಡಲು ಪುಣ್ಯೊದಗ್ಯಾಗಲು ಗುರುಕೃಪೆ ನೋಡುದು ಕೌತುಕ ಗೂಡಿನೊಳನೇದಾ ತ್ರಾಹಿ ತ್ರಾಹಿ 2 ರಾಜಿಸುತಿಹ್ಯ ಶ್ರೀಪಾದ ಅನುದಿನ ತಾ ಸೇವಿಸಬೇಕು ಸುಬೋಧ ಮಾಜದೆ ಗುರುಚರಣಕ್ಕೆ ತನುಮನಧನ ಭಜಿಸಬೇಕು ಸರ್ವದಾ ರಾಜಯೋಗಪ್ರಸಾದ ತ್ರಾಹಿ ತ್ರಾಹಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪರಮೇಷ್ಠಿ ನಿರುತನಿಷ್ಠಿ ಮಾಣದೆ ಕೊಡು ಮನಮುಟ್ಟಿ ಪ ನಾನಾ ನಾಡಿನೊಳು ನೀನೆ ಪಿರಿಯನೆಂದು ಆನಂದ ಮತಿಯಿಂದ ಗಾನವ ಮಾಡುವೆ ಅ.ಪ. ಪುರುಷನಾಮಕ ವಿಧಾತ ಹಂಸವರೂಥ ಸರಸಿಜ ಗರ್ಭ ಶಿವತಾತ ಪರಮ ಗುರುವೆ ವಿಖ್ಯಾತ ಪೂರ್ವ ಮಾರುತ ತಾರತಮ್ಯದೊಳುನ್ನತ ಸಿರಿ ಪರಮಾಣು ಪ್ರದೇಶ ವರ ಶಬ್ದ ಪಿಡಿದು ಪರಿ ಪರಿಯಿಂದಲಿ ಶತಾನಂದ 1 ಜಗವÀ ಪುಟ್ಟಿಸುವ ಮಹಾಧೀರ ತತ್ವಶರೀರ ಮಗುಳೆ ಅನಿರುದ್ಧಕುಮಾರ ಝಗಿಝಗಿಪ ಮಕುಟಧರ ಜೀವನೋದ್ಧಾರ ನಿಗಭಿಮಾನಿ ಚತುರ-ಮೊಗನೆ ಪ್ರಬಲ ಅಹಿಗರುಡಾದ್ಯರಿಗೆಲ್ಲ ಅಗಣಿತ ವಾಕ್ಯನೆ ಹಗಲಿರುಳು ಮನಸಿಗೆ ಸುಖವಾಗುವ ಬಗೆ ಕರುಣಿಸು ನಮ್ಹಗೆಗಳ ಕಳೆದು 2 ವಾರಿಜಾಸನ ಲೋಕೇಶ ಭಕುತಿವಿಲಾಸ ಚಾರುಸತ್ಯ ಲೋಕಾಧೀಶ ಸಾರಹೃದಯ ವಿಶೇಷ ಮಹಿಮನೆ ದೋಷ ದೂರ ನಿರ್ಮಲ ಪ್ರಕಾಶ ಧಾರುಣಿಯೊಳಗವತಾರ ಮಾಡದ ದೇವ ಸಾರಿದೆ ನಿನ್ನಂಘ್ರಿವಾರಿಜಯುಗಳವ ಸಾರಿಸಾರಿ ವಿಜಯವಿಠ್ಠಲನ್ನ ಆರಾಧಿಪುದಕೆ ಚಾರುಮತಿಯ ಕೊಡು 3
--------------
ವಿಜಯದಾಸ
ಪರಲೋಕವಿಲ್ಲೆಂಬೊ ಪರಮ ಪಾಪಿಗಳಿಗೆ ನರಲೋಕವೇ ನರಕವಣ್ಣ ಪ ಪರಲೋಕವಿಹುದೆಂದು ಗುರುಕರುಣವನು ಪಡೆದ ಕುರುಬನದ ಅರಿತನಣ್ಣ ಅ.ಪ ಈಶ ಜಡ ಜೀವರೆಂಬುವ ಭಿನ್ನ ತತ್ವಗಳು ಈಶನೊಬ್ಬನೆ ಕರ್ತನಣ್ಣ ಸಾಸಿರದಿ ಆಸೆ ಭಂಗಗಳ ಪೊಂದುತಲಿರಲು ಮೀಸೆಯನೇತಕೆ ತಿರುವಬೇಕಣ್ಣ 1 ಹರಿಯು ಪರನಲ್ಲದಿದ್ದರೆ ಸರ್ವಭುವನಗಳು ಹರಿಯಧೀನದಲಿರುವುದೇಕೆ ಹರಿಯಧೀನಲಿಲ್ಲದಿದ್ದರೀ ಜಗದೊಳಗೆ ಕೊರತೆಯೇತಕೆ ಮಂದಿಗಳಿಗೆ 2 ದೇವದತ್ತನು ಧನಿಕ ಪ್ರೇತದತ್ತನು ಬಡವ ಯಾವ ಕಾರಣ ವಿಷಮಗತಿಗೆ ಸಾವು ನೋವುಗಳ ಪ್ರತಿಕ್ಷಣಗಳಲಿ ನೋಡಿ ದೊರೆ ಭಾವವಿರುವುದು ನ್ಯಾಯವೇ 3 ಈಶನಿಲ್ಲೆಂಬುವರು ಹೇಸಲಾರರು ಪಾಪ ರಾಶಿ ರಾಶಿಯ ಗಳಿಸಲು ಆಶೆಬಡುಕರ ಜಗವ ನಾಶಮಾಡಲು ರಾಜ ಶಾಸನಕೆ ಬುಡವೆಲ್ಲಿಯಣ್ಣ 4 ಇಂದು ಇದನು ಪಡೆಯುವೆ ಮುಂದೆ ಅಧಿಕ ಧನವನು ಗಳಿಸುವೆ ಸದೆ ಬಡಿಯುವೆನು ಪರರನೆಂಬ ನುಡಿ ತಮಗುಣದ ಬೆದೆಯಲಿರುವನು ನುಡಿವನು 5 ಎಲ್ಲಿಂದ ಬಂದೆ ಹೋಗುವುದೆಲ್ಲಿಗೆಂಬುದನು ಬಲ್ಲವಗೆ ಮುಕುತಿ ಇಲ್ಲೇ ಒಳ್ಳೆ ಮನವನು ಪಡೆದು ಬಲ್ಲವರ ಸೇವೆಯಿಂ ದೆಲ್ಲವನು ತಿಳಿಯಲಳವಣ್ಣ 6 ಕಾಯವಾಚಾಮನಸದಿ ತಪವಗೈಯುತ ಶುದ್ಧ ಭಾವವನು ಗಳಿಸಿರಣ್ಣ ದೇವಗುರು ಪ್ರಾಜ್ಞ ಪೂಜನ ಲಾಭವಿದು ವಿನಯ ಭಾವಕೆ ಪ್ರಸನ್ನರಿವರು 7
--------------
ವಿದ್ಯಾಪ್ರಸನ್ನತೀರ್ಥರು
ಪರಸೌಖ್ಯ ಪ್ರದ ವಿಠಲ | ಪೊರೆಯ ಬೇಕಿವಳಾ ಪ ದುರಿತ ದುಷ್ಕøತವೆಲ್ಲ | ದೂರ ಓಡಿಸುತಾ ಅ.ಪ. ಅಚ್ಯುತ ಕ್ಷಿತಿ ರಮಣ ಸೇವಾ 1 ಸಾಧನಕೆ ಸಹಕಾರಿ | ಸಾಧು ಜನ ಸತ್ಸಂಗನೀ ದಯದಿ ಒದಗಿಸುತ | ಕಾಪಾಡೊ ಹರಿಯೇ |ಮೋದ ತೀರ್ಥರ ಮತವ | ಭೋಧಿಸುತ ಇವಳೀಗೆಮೋದ ಪಾಲಿಸಿ ಹರಿಯೆ ಉದ್ಧಾರ ಮಾಡೋ2 ಮಾತೃದತ್ತವು ಎನ್ನೆ | ವೆಂಕಟೇಶನ ಪೂಜೆಸಾರ್ಥಕೆನಿಪುದು ಹರಿಯೆ | ಪಾರ್ಥ ಸಾರಥಿಯೇಕಾರ್ತಸ್ವರ ಮೊದಲಾದ | ಅರ್ಥಗಳ ಯೋಚಿಸಳುವಾರ್ತೆ ಎನ್ನನು ಭವವು ಆರ್ತರುದ್ಧರಣಾ 3 ತಂದೆ ಮುದ್ದು ಮೋಹನ್ನ | ಗುರುವನುಗ್ರಹವಿಹುದುಇಂದು ನಿಮ್ಮದಿ ನಮಿಸಿ | ಅಂಕಿತದ ಪದವಾಛಂದದಲ್ಯುದ್ಧರಿಸಿ | ಉಪದೇಶಿಸುತ್ತಿಹೆನುಮಂದನುದ್ಧಟ ತನವ | ತಂದೆ ಮನ್ನಿಪುದೋ 4 ಇಂದು ಮುಖಿ ಹೃದಯದಾ | ಅಂಬರದಿ ಪ್ರಕಾಶಿಸೆನೆನಂದ ತೀರ್ಥಸುವಂದ್ಯ | ಪ್ರಾರ್ಥಿಸುವೆ ನಿನಗೇತಂದೆ ಮುದ್ದು ಮೋಹನ್ನ | ವಿಠ್ಠಲನೆ ಗುರು ಗೋ-ವಿಂದ ವಿಠ್ಠಲ ಎನ್ನ | ಭಿನ್ನಪವ ಸಲಿಸೋ 5
--------------
ಗುರುಗೋವಿಂದವಿಠಲರು
ಪರಾಕು ಸಜ್ಜನಪ್ರೇಮಿ ಪ. ಕರುಣಾಕರ ಕೋಟಿದಿವಾಕರ ಪೂರ್ಣ ಸುಧಾ- ಕರ ಮಕುಟಲಲಾಮ ಅ.ಪ. ಭೋಗೀಂದ್ರ ಫಣಾಮಣಿಮಂಡನ ಸ- ದ್ಯೋಗೀಂದ್ರ ಮನೋವಿಶ್ರಾಮಿ ಭಾಗೀರಥಿ ಸುತರಂಗೊತ್ತುಂಗ ಮಹಾ ಸಾಗರ ತೇ ನೌಮಿ 1 ಕೇವಲ ಪಾಪಿ ಸದಾವ್ರತಹೀನನ ಕಾವುದು ಗೋಪತಿಗಾಮಿ ನೀನೊಲಿದರೆ ಮತ್ತಾವುದು ಭಯ ಮಹಾ- ದೇವ ವಶೀಕೃತಕಾಮಿ 2 ಲಕ್ಷ್ಮೀನಾರಾಯಣದಾಸಾರ್ಯ ಮ- ಹೋಕ್ಷಧ್ವಜ ಸುರಸುಕ್ಷೇಮಿ ದಕ್ಷಾಧ್ವರಹರ ವರಪರಮೇಶ ಮು- ಮುಕ್ಷುಜನಾಂತರ್ಯಾಮಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪರಿ ಪಾಹಿ ಶಿವ ಪ ಭವ ಶರಣಾಗತ ಪರಿಪಾಲ ಶಿವ ಗಿರಿಜಾ ಹೃದಯವಿಲೋಲ ಶಿವ 1 ಖಂಡಚಂದ್ರಧರ ಪಾಹಿ ಶಿವ ಕುಂಡಲೀಂದ್ರಧರ ಪಾಹಿ ಶಿವ ಚಂಡದನುಜ ಸಂಹಾರ ಶಿವ ತಾಂಡವೇಶ ಜಿತಮಾರ ಶಿವ 2 ಭಾನು ಸೋಮ ಶಿಖಿ ನೇತ್ರ ಶೀವ ಧೇನುನಾಥ ವರವಾಹ ಶಿವ ಸ್ವಾನುಭೂತಿ ಪರಿಪೂರ್ಣ ಶಿವ ಧೇನುನಗರ ಸುವಿಲಾಸ ಶಿವ 3
--------------
ಬೇಟೆರಾಯ ದೀಕ್ಷಿತರು
ಪರಿ ಮೋಸ ವಚನಗಳು ನಾಚಿಕೆಯಿಲ್ಲವೇನೊ ಕೃಷ್ಣ ಪ ಯೋಚಿಸುತಿರೆ ನಿನ್ನ ಸತತ ಮನದಲಿ ಯಾಚಿಸುತಿರುವೆಯೋ ಪರರನ್ನು ಅ.ಪ ಚಂಚಲತನದಲಿ ನಿನ್ನ ಸೇವಕಳನು ವಂಚಿಸುತಿರುವುದು ಸರಿಯೇನೊ ಪಂಚಬಾಣನು ತನ್ನ ಜನಕನಾಗಿಹ ನಿನ್ನ ಮಿಂಚಿ ನುಡಿಯುವುದು ಅಚ್ಚರಿಯು 1 ಸಾರಸಲೋಚನೆ ಬೇರೆ ಯೋಚಿಸದಿರು ಮಾರನು ಎನ್ನಯ ಮೀರುವನೆ ಜರನೆಂದರಿಯುವ ನಾರೇರಿಗೆನ್ನ ವಿ ಚಾರವನರುಹಲು ಸೇರಿದೆನು 2 ಅಂಬುಜಮುಖಿಯರ ಸಂಭ್ರಮದಲಿ ನೀ ಹಿಂಬಾಲಿಸುತಿರೆ ನಂಬುವೆನೆ ರಂಭೆಯರವರು ನೀ ಹಿಂಬಾಲಿಸುವೆ ಡಂಭದ ವಚನವ ನಿಲ್ಲಿಸೆಲೊ3 ಪೋತ ನಾನಾಗಿರೆ ಪ್ರೀತಿಯ ನಟಿಸಿದ ಪೂತನಿಯನುಭವವೆನಗಿಹುದೇ ಘಾತಕರವರೊ ನೀತಿವಂತರೊ ಮಾತಿನಂದರಿಯೆ ಹಿಂಬಾಲಿಸಿದೆ 4 ಲಲನೆಮಣಿಯರ ಜಲವಿಹಾರದ ಸ್ಥಳಕೆ ನೀನೇತಕೆ ತೆರಳಿದೆಯೊ ತಿಳಿದು ಇದನು ನಿನ್ನ ಸುಳಿವನು ಅರಿಯಲು ಸುಲಭವೇನೆಲೊ ಶ್ರೀ ಕೃಷ್ಣ 5 ಹೊರಗಿನ ರೂಪದಿ ನರರನು ಸುಲಭದಿ ಮರುಳು ಮಾಡುತಿಹ ತರಳೆಯರು ಸರಳರೊ ಈ ಜನ ದುರುಳರೊ ಇವರ ಅಂ ತರಗಳನರಿಯಲು ತೆರಳಿದೆನು 6 ಅಂತರಂಗಗಳನರಿಯಲು ನಿನ್ನಯ ತಂತ್ರಗಳೆಲ್ಲವು ನಟನೆಗಳು ಚಿಂತೆಯ ಪಡದೆ ಸ್ವತಂತ್ರನಾಗಿರುವೆ ಸಂತಸದಲಿ ಪ್ರಸನ್ನನಾಗೆಲೊ 7
--------------
ವಿದ್ಯಾಪ್ರಸನ್ನತೀರ್ಥರು
ಪರಿಣಯ ಮಹೋತ್ಸವವು ಪ ಮಂಗಳ ಮಂಟಪವು ಚಪ್ಪರದಲ್ಲಿ .ಶೃಂಗಾರ ವರ ಪೀಠವು ಕಂಗೊಳಿಪ ರುಚಿರಾಂಬರಾಳಿಯು ಮಂಗಳ ಸುವಾದ್ಯಂಗಳಿಂದಲಿ 1 ಸುತ್ತ ದೀಪಾವಳಿಯು ಸುವರ್ಣದ ಮುತ್ತಿನ ತೋರಣವು ವಜ್ರ ಪದ್ಮವು ಸುತ್ತು ವೀಳೆಯ ಪುಷ್ಪ ನಿಚಯವು ಸುತ್ತೆ ಜವ್ವಾಜಿಗಳ ಪರಿಮಳ ಸುತ್ತಿ ಸುಳಿವ ಸುಗಂಧ ಲಹರಿಯು 2 ಬೀಗರು ಹಸೆಯೊಳಿರೆ ಆ ಮಧ್ಯದಿ ಬೀಗಿತ್ತಿಯರು ಕುಳ್ಳಿರೆ ಆಗ ನಿಶ್ಚಿತ ಲಗ್ನದಲ್ಲಿ ವಧೂವರರ ಪೂಜಿಯನು ಗೈಯಲು ತುಂಬಿರಲು ಸಭೆಯೊಳು 3 ದಾರಾ ಮಹೊತ್ಸವವು ಅಕ್ಷತೆಗಳ ಸೇರೆಯೊಳೆರೆಯುವುದು ನಾರಿಯರ ವರದೇವತಾಸ್ತುತಿ ಸಾರೆ ಭೂಸುರರಾಶಿಷಂಗಳು ಸೇರೆ ಸಂಗೀತಗಳ ವೈಖರಿ ಸಾರಿ ಸುರಗಣ ಜಯಜಯನ್ನಲು 4 ಮಾಡೆ ದಾನದಕ್ಷಿಣೆಯಾಗಲು ಬಾನುರಾಗದೆ ಸರ್ವರನ್ನು ವಿನೋದದಿಂದುಪಚರಿಸುತಿರಲು ಹರಸೆ ಸಂತೋಷದಿ 5
--------------
ಬೇಟೆರಾಯ ದೀಕ್ಷಿತರು
ಪರಿಪರಿ ಕೊಂಡಾಡೋ ಹರಿಯನ್ನು ಮರೆದು ನೀ ಕೆಡಬೇಡೋ ಮನವೆ ಪ ಮರವೆ ಮಾಯ ನೀಗಿ ಧರೆಭೋಗ ಮೆಚ್ಚದೆ ನಿರುತ ಭಜಿಪರ ಬಿಟ್ಟು ಅರಲವಗಲ ಹರಿ ಅ.ಪ ಕರುಣಸಾಗರನು ನರಹರಿ ಚರಣದಾಸರನ್ನು ತನ್ನಯ ಹರಣಸಮಾನ ಮಾಡಿ ಕರುಣದಿಂದವರ ಇರವ ಪೂರೈಸುತ ಪೊರೆವ ಪ್ರೇಮದಿಂದ 1 ಚಿಂತೆ ಭ್ರಾಂತಿಗಳನು ಬಿಡಿಸಿ ಸಂತಸ ಕರುಣಿಸಿ ಅವರ ಅಂತರಂಗದಿರ್ದು ಅಂತರ ತಿಳಿಯಿತು ಚಿಂತಿಸಿದ್ದನ್ನಿತ್ತು ಸಂತಸದಿಂ ಕಾಯ್ವ 2 ಸಾರಿಸಾರಿಗೆ ತನ್ನ ಚರಣಸೇರಿ ಭಜಿಪರನ್ನು ಬಿಡದೆ ಆರಭಾರ ಪೊತ್ತು ಸೇರಿ ಅವರ ಬಳಿಯ ಪಾರಸಂಭ್ರಮದಿಂ ಧೀರ ನಲೀತಿಹ್ಯ 3 ಅಮಲರೂಪ ತನ್ನ ನಿರುತ ವಿಮಲಚರಣವನ್ನು ನಂಬಿದ ಸುಮನಸರಹೃದಯಕಮಲದಿ ವಾಸಿಸಿ ನಿಮಿಷಬಿಟ್ಟಗಲದೆ ಕ್ರಮದಿ ಪಾಲಿಸುವ4 ಗೂಢದಿಂದ ಸ್ಮರಿಪ ಭಕುತರ ಗಾಢಮಹಿಮೆ ಕೃಪಾದೃಷ್ಟಿಯಿಂ ಬೇಡಿದ ವರಗಳ ಕಾಡದೆ ನೀಡುತ ರೂಢಿಯೋಳ್ ಬಿಡದೆ ಕಾಪಾಡುವ ಶ್ರೀರಾಮ 5
--------------
ರಾಮದಾಸರು
ಪರಿಪೂರ್ಣಕಾಮೆ ಶ್ರೀ ರಮೆ ಪ ಕಮಲದಳ ಸಮ ವಿಮಲ ಚರಣಯುಗೆ ಅಮಲ ಜಂಘಾನ್ವಿತೆ ಶುಭಗೆ 1 ಕರ ಸದ್ಯೋರು ಇಭರಿಪು ಸಮಕಟೆ ಶುಭತಮ ಶುಭತಮ ನಾಭಿ ಸುತ್ರಿವಳೆ2 ಗುರು ವಾಸುದೇವವಿಠಲ ಪರಮಪ್ರಿಯೆ ಭವ- ಶರಧಿ ತಾರಕೆ ಚಂದ್ರಫಲಕೆ3
--------------
ವ್ಯಾಸತತ್ವಜ್ಞದಾಸರು
ಪಲಿಮಾರು ಮಠದ ಶ್ರೀರಘುವರ್ಯರ ಕೃತಿಗಳು ಯುಗ್ಮ ಉಡುಪಿನ ಕೃಷ್ಣನೇ 1 ದ್ವಾರಕಾಪುರದಲ್ಲಿ ದೇವಕಿ ಸರಸ ಬಾಲಕ ಲೀಲೆಯಾ ತೋರು ಎನುತಲಿ ದಧಿಯ ಮಥಿಸಲು ಕರುಣಿ ಬಾಲ್ಯವ ತೋರಿದೆ2 ತೊಡೆಯನೇರಿ ಸ್ತನ್ಯಪಾನವ ಮಾಡಿ ಮೋದವ ತಾಯಿಗೆ ಕೊಡುತ ಕಡೆಗೋಲ್ ನೇಣು ಸಹಿತಲಿ ಪ್ರೌಢ ನೀನಪಹರಿಸಿದೆ 3 ಮೊಸರು ಭಾಂಡವನೊಡೆದು ಬೆಣ್ಣೆಯನಸುನಗುತಲೀ ಭಕ್ಷಿಸೀ ಶೇಷಶಯನನೆ ನೀನು ಕುಣಿಯೆ ಸಂ- ತೋಷಪಟ್ಟಳು ದೇವಕಿ4 ಸತಿ ನುಡಿದಳು 5 ವಿತತ ವೈಭವ ಈ ಪರಿಯಲಿಪ್ರತಿಮೆಯನ್ನೇ ಮಾಡಿಸಿ ಸತತ ಪೂಜೆಯ ಮಾಳ್ಪರೀ ಅತಿ ಪ್ರೀತಿಯಿಂದಲಿ ಕೊಡು ಎನಗೆ 6 ಪರಿ ಪೇಳೆ ವಿಶ್ವ-ಕರ್ಮನಿಂದಾ ಮಾಡಿಸಿ ಕಮಲನಾಭನು ಇತ್ತು(ದ್ದು) ಅದರಲಿ ವಿಮಲ ಪೂಜೆಯ ಕೊಂಡನು 7 ಶರಧಿ ತೀರದಲಿತ್ತನು8 ನಾವೆಯಲ್ಲಿ ಗೋಪಿಚಂದನ ಸಂವೃತಾರ್ಚಯು ಬರುತಿರೆ ನಾವೆಯೊಡೆಯಲು ಮಧ್ವಮುನಿಪನು ಭಾವದಿಂದಲೆ ತಂದನು 9 ಅವರರೊಡೆಯ ಶ್ರೀ ಮರುತಪತಿತತ್ ಪ್ರತಿಷ್ಠೆಯ ವಿರಚಿಸಿ ಕುಮುದ ಬಂಧು ಕ್ಷೇತ್ರದಲಿ ನಿ-ನ್ನಮಿತ ಪೂಜೆಯ ಮಾಡಿದ 10 ನನ್ನ ಹಿರಿಯರ ಪುಣ್ಯ ಫಲಿಸಲು ನಿನ್ನ ಪೂಜೆಯ ಮಾಡುತಧನ್ಯನಾದೆನು ಮುಕ್ತಿ ಕರಗತ ಎನ್ನಗಾಯಿತು ಕೃಷ್ಣನೇ 11 ಮಧ್ವಪೂಜಿತ ರಕ್ಷಿಸೆನ್ನನು ಸಾಧ್ವಸೋಝ್ಝಿತ ಸದ್ಗುಣ ಸಾಧ್ವಲಂಕೃತ ವೇಷ ಮುಕ್ತಿ ಪ-ದಾಬ್ಜನೇ ರಘುತಿಲಕನೇ 12
--------------
ಅನ್ಯದಾಸರು
ಪಲ್ಲಕ್ಕಿ ಸೇವೆಯವಧಾನ ಆಳಪಲ್ಲಕ್ಕಿಯಲಿ ಮಂಡಿಪುದು ಶಿವ ನಿಧಾನ ಪ ಮದನ ಕೈಗಳ ಸುಭುಜ-ವಲಯದೊಳ್ತಳದ ಪೂರುಷರ ಸರಪಂಸೆಗಳತೊಳಪಗಜಪಕ್ಷಿಯಗ್ರಗಳಾ ದೇವಲಲನೆಯರ ಚಾಮರದ ಕರದ ಚಲನೆಗಳಾ 1 ವಂದಿಮಾಗಧರೆಲ್ಲ ಕರವೆತ್ತಿ ಪೊಗಳುತಿರೆದಾಂಧಣಧಣಾ ಎಂದು ಮೊಳಗೆ ಮಂಗಳವಾದ್ಯಚಂದ್ರಸೂರ್ಯರು ಜಗಜ್ಯೋತಿಯನುಪಿಡಿದಿರಲು ಗಂಧರ್ವತತಿ ಪಾಡುತಿರಲುಮುಂದೆ ರಂಭಾದಿ ಗಣಿಕೆಯರು ನರ್ತಿಸಲು ದೇವೇಂದ್ರ ಮುಕ್ತಾಛತ್ರಮಂ ಪಿಡಿದಿರಲು ಧನದಕುಂದಣದ ಪಾದುಕೆಯ ಪಿಡಿದಿರಲುವಾಯು ನಲವಿಂದ ಸೀಗುರಿಯ ವೀಜಿಸಲುಸುರರು ಮುಂದೆ ಜಯಜಯವೆಂದು ಓಲೈಸುತಿರಲು 2 ಸುರರು ಹೂಮಳೆಗರೆಯೆ ಸುರದುಂದುಭಿಯು ಮೊಳಗೆಪರಮಋಷಿವರರು ವೇದಂಗಳನು ಪಠಿಸೆ ತುಂ-ಬುರನಾರದರು ವೀಣೆಯನು ಬಾಜಿಸಲು ಗಣನಿ-ಕರ ಖಡ್ಗಶರವ ಪಿಡಿದಿರಲುಸರಸಿಜೋದ್ಭವನು ನಿಮ್ಮುನ್ನತಿಯನರುಹುತಿರೆಸುರರಾಜಮಂತ್ರಿ ಸಮಯವ ಸೂಚಿಸುತಿರಲುವರಕೆಳದಿಪುರವಾಸ ರಾಮೇಶ ಜಯವೆಂದುಹರಿ ಹಸ್ತಲಾಘವನು ಕೊಡಲು ಗೌರಿಹರುಷದಿಂ ಮುಂಬಿನೊಳು ರಂಜಿಸುತ್ತಿರಲು 3
--------------
ಕೆಳದಿ ವೆಂಕಣ್ಣ ಕವಿ
ಪವನಾ ಸಂಭೂತಾ ಒಲಿದೂತವಕಾದಿ ಕಾಯಬೇಕೂ |ಇವನಾರೋ ಎಂದೂ ದಾಸಿನಾ | ಮಾಡದಲೆ ಎನ್ನಾ ಪ ಹರಿವೇಷಧರನೆ ನರ |ಹರಿಭಕುತರ ಪೊರೆಯುವದಕ್ಕೇ ||ಹರಿಯಂತೆ ಒದಗುವೆಯೋ ನೀನೂ | ಹರಿದಾಸ ನಾನೂ 1 ಕಪಿಪಾ ಕಪಿಯಾಜ್ಞದಂತೇ |ಕಪಿಲನ್ನ ಪತ್ನಿಯನ್ನೂ ||ಕಪಿಗಳು ಹುಡುಕಿ ಮಿಡುಕಲು | ಕಾಯ್ದೆ ಆವಾಗಲೂ 2 ಅಜಸುತನ ಶಾಪದಿಂದ |ಅಜಗರನಾದ ವನಪಾದ ||ರಜದೀ ಪೂನೀತನ ಮಾಡಿದನೇ | ಅಜಪದವಿಗೆ ಬಹನೇ3 ಕಲಿಯುಗದಿ ಕವಿಗಳೆಲ್ಲಾ |ಕಲಿಯಾ ಬಾಧೆಗೆ ಬಳಲಿ |ಕಲಿವೈರಿ ಮುನಿಯೆಂದೆನಿಸಿದೇ | ಕಲಿಮಲವಾ ಕಳೆದೆ 4 ಗುರು ಪ್ರಾಣೇಶ ವಿಠಲಾ |ಗುರುವರನೆಂಬೊ ಜ್ಞಾನಾ ||ಗುರು ಮಧ್ವರಾಯಾ ಕರುಣಿಸೋ | ಗುರುಮತಿಯನು ಬಿಡಿಸೋ 5
--------------
ಗುರುಪ್ರಾಣೇಶವಿಠಲರು