ಒಟ್ಟು 5088 ಕಡೆಗಳಲ್ಲಿ , 132 ದಾಸರು , 3232 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪುರಂದರ ದಾಸರಾಯರ ಪೋಷಿಸುವ ಸಂತೋಷದಿಂದಲಿ ಪ ಪುರಂದರಗಡಾದ ಒಳಗೆ ಹಿರಿಯ ಸಾವುಕಾರನೆನಸಿ ಪರಿಪರಿಯ ಸೌಖ್ಯಗಳ ಸುರಿಸುತ್ತ ಇರುತಿರಲು ನರಹರಿ ತ್ವರಿತದಿಂ ಬ್ರಾಹ್ಮಣನಾಗುತ್ತ ಪೋಗುತ್ತ ಯಜಮಾನ ಕಂಡು ಜರಿದು ಬ್ರಾಹ್ಮಣನ್ಹೊರಗೆ ಹಾಕಲು ಮರುದಿವಸ ಮತ್ಹೋಗಿ ನಿಂತ 1 ಭಾರಿಭಾರಿಗೆ ಸಾವುಕಾರನ ಮೋರೆಗ್ಹೊತ್ತಿ ಮೇರೆಯಿಲ್ಲದೆ ಆರು ತಿಂಗಳು ಬೆನ್ನು ಬೀಳುತ್ತ ನಾಯಕರು ಈತನ ಆರು ಅಟ್ಯಾರೆಂದು ಬೈಯುತ್ತ ಬೇಸತ್ತು ಎರಡು ಹೇರು ರೊಕ್ಕಾ ಮುಂದೆ ಸುರಿಯುತ್ತ ಅದರೊಳಗೊಂದು ಡ್ಡಾರಿಸಿಕೋ ಎಂದು ಹೇಳಲು ನಾರಾಯಣ ಬಿಟ್ಹೋದ ನಗುತ2 ಹಿತ್ತಲಾ ಬಾಗಿಲಿಗೆ ಹೋಗಿ ಮತ್ತೆ ಆತನ ಮಡದಿಗಾಗಿ ವಿತ್ತ ತಾ ಯೆನುತ ತನ ಮಗನ ಮುಂಜ್ಯೆಂ ದೆತ್ತಿ ಕರದಿಂ ಬಾಯಿ ತೆರೆಯುತ್ತ ಆ ಪ್ರಾಣಿ ನುಡಿದಳು ಎತ್ತಣ ದ್ರವ್ಯವು ತನಗೆನುತ ನಿನ್ನ ಮೂಗಿನ ಮುತ್ತಿನ ಮೂಗುತಿಯ ಕೊಡು ಎನೆ ಉತ್ತುಮಳು ತೆಗೆದಿತ್ತಳಾಕ್ಷಣ 3 ಆಕಿ ಗಂಡನ ಕಣ್ಣೆದುರಿಗೆ ಹಾಕಿದನು ತಾ ಪಾಕಿ ಕೊಡೆಯೆನುತ ಅದು ಕಂಡು ಇದು ನ ಮ್ಮಾಕಿದೆಂದು ಈತ ನುಡಿಯುತ್ತ ಅನ್ಯರದು ಯಿಂಥಾ ದ್ಯಾಕೆ ಯಿರಬಾರದೆನ್ನುತ್ತಾ ಬೆಲೆ ಹೇಳು ಎನಲು ಎಂದಾಕೆ ಹೋದನು ತಿರೂಗಿ ಬಾರದೆ 4 ತಿರುಗಿ ಬ್ರಾಹ್ಮಣ ಬಾರದಿರಲು ಕರೆದು ತನ್ನ ಹೆಂಡತಿಯ ಬರಿಯ ನಾಶಿಕವನ್ನೆ ಕಂಡುನು ಮೂಗುತಿಯ ಎಲ್ಲೆನೆ ಮುರಿದಿಹುದು ಯೆಂದಾಕೆ ಹೇಳಲು ಒಳಗ್ಹೋಗಿ ನೀ ತಾರದಿರೆ ಅರೆವೆ ನಿನ್ನಯ ಜೀವವೆಂದನು ವಿಷಕೊಂಬೆನೆಂದು ಕರದಿ ಬಟ್ಟಲು ಧರಿಸಲಾಕ್ಷಣ ತ್ವರಿತದಲಿ ಹರಿ ಅದರೊಳಾಕಿದ 5 ಪುರುಷನಾ ಕೈಕೊಳಗೆಯಿಡಲು ತರಿಸಿ ತನ್ನಲ್ಲಿದ್ದ ಪೆಟ್ಟಿಗೆಯಾ ಅದು ಕಾಣದಿರಲು ಬೆರಗಾಗಿ ನೋಡಿದನು ಮಡದಿಯ ನಿಜ ಪೇಳುಯೆನಲು ಅರಸಿ ಪೇಳ್ದಳು ಕೊಟ್ಟ ಸುದ್ದಿಯಾ ಅಭಿಮಾನಕಂಜಿ ಅರದು ವಿಷವನು ಕುಡಿವೆನಲು ಸಿರಿರಮಣಾ ಕೊಟ್ಟ ಖರಿಯಾ 6 ಬಂದಿದ್ದ ಪರಿಪಕ್ವವೆನಗೆ ನ್ನಾವ ಕಾಲಕೆ ಆಗಬೇಕೆಂದ ವೈರಾಗ್ಯಭಾವದಿ ಜೀವಿಸಿಕೊಂಡಿರುವುದೇ ಛಂದ ಹೀಗೆನುತ ಮನೆ ಧನ ಕೋವಿದರ ಕರೆದಿತ್ತ ಹರುಷದಿ ಕಾವನಯ್ಯನ ದಾಸನಾದ 7 ಲಕ್ಷ್ಮಿಪತಿಯ ಪಾದದಲ್ಲಿ ಲಕ್ಷ್ಯವಿಟ್ಟು ವ್ಯಾಸರಾಯರ ಶಿಕ್ಷೆಯಿಂದಲಿ ಅಂಕಿತವ ಕೊಳುತ ತಿರಿಪಾದ ಐದು ಲಕ್ಷಪದ ಸುಳಾದಿ ಪೇಳುತ್ತ ಪ್ರತಿದಿವಸದಲ್ಲು ಅಪರೋಕ್ಷ ಪುಟ್ಟಲು ಮೋಕ್ಷಸ್ಥಾನಕ್ಕೆ ಕರೆದೊಯ್ದು ಅ ಧೋಕ್ಷಜನು ಸಂರಕ್ಷಿಸಿದ 8 ಘೊರ ನರಕದೊಳಗೆ ಬಿದ್ದಾ ಪಾರ ಜನರು ಚೀರುತಿರಲು ದ್ಧಾರ ಮಾಡಿದ ನಾರದಾರಿವರು ಅವ ತಾರ ಮಾಡಿ ಧಾರುಣಿಯಲಿ ಮತ್ತೆ ಬಂದರು ಸರುವೋತ್ತಮ ಹರಿ ನಾರಾಯಣನೆ ಎಂದು ಸಾರಿದರು ಹೀಗೆಂದು ತಿಳಿಯಲು ಮಾರ ಜನಕ ವಿಜಯವಿಠ್ಠಲ ಆರಿಗಾದರು ಒಲಿವ ಕಾಣಿರೊ 9
--------------
ವಿಜಯದಾಸ
ಪುರಂದರ ದಾಸರಾಯಾ | ನಮಿಸೆ ನಿಮ್ಮಚರಣ ಸರಸೀರುಹವಾ ಪ ಮೊರೆಹೊಕ್ಕ ಜನರ ನೀ | ಪೊರೆಯದೆ ಬಿಡುವರೆವರಪ್ರಹ್ಲಾದ್ ಗರುಹಿದಂ | ತರುಹು ಮಂತ್ರಾರ್ಥಿವ ಅ.ಪ. ದ್ವಾರಕ ಪುರದೊಳಗೆ | ನರ್ತನ ಗೈಯ್ಯೆವಾರ ಕಾಂತೆಯರೆಲ್ಲರೂ |ಭೋರಿಟ್ಟು ಮೊರೆಯುವ | ಸ್ವರಕೇಳಿ ಸುರರೆಲ್ಲಹರಿಯ ಓಲಗವಾರು | ಹೊಗುವರು ಎಂದರು1 ಓಲಗ ಸೇರ್ದ 2 ಷೋಡಶದ್ವಯ ಸ್ವರದಿ | ಮೈ ಮರೆಯುತ್ತಪಾಡಿ ಪೊಗಳಿ ಮುದದೀ |ಮೃಡವಂದ್ಯ ಹರಿಯವನ | ಕಡುಭಕುತಿಗೆ ಮೆಚ್ಚಿನೀಡುವೆ ವರವ ನೀ | ಬೇಡು ಬೇಡನೆ ಪೇಳ್ದ3 ಎಚ್ಚತ್ತು ಮುನಿ ನೋಡಿದ | ನಗುತಿರ್ಪಅಚ್ಚ್ಯುತನ್ನಾ ಬೇಡಿದ |ಸಚ್ಛಾರಿತ್ರನೆ ಕೇಳು | ನಿಚ್ಚಾಟೆನ್ನಯ ಕೂಡೆಪೆಚ್ಚ ಪೇರ್ಮಲಿ ಆಡು | ಲಕ್ಷಣಾಗ್ರಜನೇ 4 ಪುರಂದರ | ಗಡದಲ್ಲುದೀಸಿದ 5 ಚಿನಿವಾರ ವರದನಲ್ಲೀ | ಜನಿಸುತ್ತಧನ ನವಕೋಟಿಯ ಗಳಿಸೀ |ಘನ ಲೋಭಿ ದ್ವಿಜನ | ಜ್ಞಾನೋದಯ ಮಾಡುತಘನಗುಣ ಸಿರಿಪತಿ | ಅಣುಗನ್ನ ಪೊರೆದ 6 ಪುರಂದರ ದಾಸರ 7 ಹಿರಿಯ ವೈರಾಗ್ಯ ಪೊಂದಿ | ಸಕಲವನ್ನುಸಿರಿಕೃಷ್ಣಗರ್ಪಣೆಂದೀ |ಗುರು ವ್ಯಾಸರಲಿ ಪುರಂ | ದರನೆಂಬಂಕಿತ ಪೊಂದಿಪರಿಸರ ಮತ ಸರ್ವೋತ್ತಮವೆಂದು ಬರೆದಂಥ8 ಸಾರ ವಿಸ್ತಾರದಿವೇದ ಗಮ್ಯಾನಂದ | ಮಯನ ಬೋಧಿಸಿದ 9ನಾಲ್ಕಾರು ಜನ ಶಿಷ್ಯರ | ಜ್ಞಾನೀಗಳ ಲೋಕೋದ್ದಾರಕೆ ಈಯುತೆ ಕಾಕು ಮಾಯ್ಮತಗಳ | ಸಾಕಷ್ಟು ಖಂಡಿಸಿಮಾಕಳತ್ರನ ಮಹಿಮೆ | ಮನೆಮನೆ ಬೀರಿದ 10 ಮಾಸ ಪುಷ್ಯವದ್ಯದೀ | ಪರಮೋತ್ತಮಶಶಿ ರವಿಗಳ ಮೇಳದೀ |ರಸೆಯ ತ್ಯಜಿಸಿ ಗುರು ಗೋವಿಂದ ವಿಠಲನಎಸೆವ ಪಾದಗಳ್ಬಿಸಜ | ಸೇರುತ ಮೆರೆದಾ 11
--------------
ಗುರುಗೋವಿಂದವಿಠಲರು
ಪುರಂದರದಾಸರು ಎಂತು ಪೊಗಳಲಿ ನಾನು ಪ ಕಂತುಪಿತನೇಕಾಂತ ಭಕ್ತನ ಪಂಥವನು ಪದ ಪಂಕ್ತಿಯಲಿ ತುಂಬಿಟ್ಟು ಸಲಹಿದ ದಾಸವರ್ಯರ ಅ.ಪ. ನಿತ್ಯ ನೆನೆಯುತ್ತ ಪಂಡಿತೋತ್ತಮರೊಡನೆ ಸುಖಿಸುತ್ತ ಕಂಡು ಹರಿಯನು ಮುಂದೆ ಕುಣಿಯುತ್ತ ಕುಂಡಲಿಗೆ ನಿಜ ಭೂಷಣವು ಎನಿಸುತ್ತ ಭಂಡಜನರಾ ಪುಂಡುಮಾರ್ಗವ ಕಂಡಕಂಡೆಡೆ ಖಂಡ್ರಿಸುತ ಬ್ರಹ್ಮಾಂಡ ದೊಡೆಯನ ಭಕ್ತಿ ಬಿತ್ತುತ ಹಿಂಡಿ ಮತಿಮತ ರಸವ ಕುಡಿಸಿದ ದಾಸವರ್ಯರ 1 ಮೊದಲು ಗಾಯಕ ದೇವಸಭೆಯಲ್ಲಿ ಮುದದಿ ಕಾಮುಕ ಚೇಷ್ಟೆ ನಡೆಸುತಲಿ ಪದವಿಯಿಂ ಚ್ಯುತನಾಗಿ ದಾಸಿಯಲಿ ಉದಿಸಿ ಬಂದು ಸಾಧು ಸಂಗದಲಿ ಬದಿಗೆ ತಳ್ಳುತ ಭವದ ಕೋಟಲೆ ಮುದದಿ ಜಪಿಸುತ ವಾಸುದೇವನ ಪದವಿ ಸಾಧಿಸಿ ದೇವ ಋಷಿ ತಾ ಪದುಮನಾಭನ ನೆನೆದು ನರಕವ ಬ ರಿದು ಮಾಡ್ಡ ಮಹಾನುಭಾವನ 2 ಕಾಸಿನಾಶಯವು ಮೋಸವೆಂತೆಂದು ಹೇಸಿವಿಷಯದಿ ಲೇಸು ಸಿಗದೆಂದು ಶ್ರೀಶ ಸಿಗುವನು ದಾಸಗೆಂತೆಂದು ಆಶೆಯಿಂದಲಿ ಸಾರಬೇಕೆಂದು ಓಸು ಸಂಪದ ನೂಕಿ ಭರದಿಂ ವ್ಯಾಸರಾಯರ ಶಿಷ್ಯನೆನಿಸುತ ವಾಸುದೇವನ ದಾಸನಾಗುತ ದೋಷಜ್ಞಾನವ ನಾಶಮಾಡಿದ ದೇಶ ತಿರುಗಿದ ದಾಸವರ್ಯರ 3 ಭಕ್ತಿಯಿಲ್ಲದ ಗಾನ ತಾನಿನ್ನು ಕತ್ತೆಕೂಗನುಮಾನವಿಲ್ಲೆಂದು ನಿತ್ಯದೇವನ ಗಾನ ಗೈಯಲು ಗಾತ್ರವಿದು ನಿಜವೀಣೆಯೆಂತೆಂದು ಸಪ್ತಸ್ವರಗಳ ಕ್ಲಪ್ತಮರ್ಮಗ ಳೆತ್ತಿ ತೋರುತ ಶ್ರೇಷ್ಠತರ ಸಂಗೀತ ಸೂತ್ರ ಸಂಮತ ನೀತಿ ನುಡಿದಿಹ ದಾಸವರ್ಯರ 4 ಪೊಂದಿ ಪುಸ್ತಕ ದೀಚೆ ಬರದೆಂದು ಛಂದ ಮರ್ಮವ ತಂದಿಡುವೆ ನಮ್ಮೀ ಅಂದ ಕನ್ನಡ ದೊಳಗೆ ಎಂತೆಂದು ಕಂದ ವೃತ್ತ ಸುಳಾದಿ ಪದಗಳ ಛಂದ ಭೂಷಣವೃಂದ ನೀಡುತ ನಂದದಿಂ ಕರ್ಣಾಟಮಾತೆಯ ಮುಂದೆ ತಾ ನಲಿವಂತೆ ಮಾಡಿದ ದಾಸವರ್ಯರ 5 ನಾರಿ ಮನೆ ಪರಿವಾರ ಹರಿಗೆಂದು ಸಾರವನ್ನೆ ಮುರಾರಿ ಮನೆಯೆಂದು ಚಾರು ಶ್ರುತಿಗತಸಾರ ನಡತೆಯಲಿ ಸೂರಿಯಾದವ ತೊರಬೇಕೆಂದು ನೀರಜಾಕ್ಷನ ಧೀರ ದೂತನ ಸಾರ ಮನವನು ಸಾರಿ ಸಾರುತ ದೂರ ಒಡಿಸಿ ಮೂರು ಮತಗಳ ನೇರ ಸುಖಪಥ ತೋರಿಸಿದ ಮಹರಾಯ ದಾಸರ 6 ಕರ್ಮಕೋಟಲೆಗಿಲ್ಲ ಕೊನೆಯೆಂದು ಮರ್ಮತಿಳಿಯುತ ಬಿಂಬಹೃದಯಗನ ನಿರ್ಮಮತೆಯಿಂದೆಸಗಿ ಕರ್ಮಗಳ ಕರ್ಮಪತಿಗೊಪ್ಪಿಸುತ ಸರ್ವಸ್ವ ಭರ್ಮಗರ್ಭನ ಭಕ್ತಿ ಭಾಗ್ಯದಿ ಪೇರ್ಮೆಯಿಂ ಹರಿದಾಸನೆಸಿಸುತ ಶರ್ಮ ಶಾಶ್ವತವಿತ್ತು ಸಲಹುವ ವರ್ಮ ನೀಡಿದ ವಿಶ್ವಬಾಂಧವ 7 ಇಂದಿರೇಶನು ಮುಂದೆ ಕುಣಿಯುತಿರೆ ಕುಂದುಂಟೆ ಮಹಿಮಾತಿಶಯಗಳಿಗೆ ತಂದೆ ಕೌತಕ ವೃಂದ ಮಳೆಗರೆದು ಕಂದನನು ಪೊರೆದಂದವೇನೆಂಬೆ ಬಂದು ಸತಿಸಹ ಮಂದಿರಕೆ ಗೋ ವಿಂದ ಪಾಕವಗೈದು ಬ್ರಾಹ್ಮಣ ವೃಂದಕಿಕ್ಕುತ ದಾಸರಿಗೆ ಮುದ ಮಾಧವ ಭಾಗ್ಯಕೆಣೆಯುಂಟೆ 8 ದೀನ ಹೊಲೆಯಗೆ ಪ್ರಾಣ ಬರಿಸಿದನು ಏನು ಒಲ್ಲದೆ ಹರಿಯ ಯಜಿಸಿದನು ಜ್ಞಾನ ಭಾಗ್ಯದಿ ಮುಳುಗಿ ತೇಲಿದನು ದೀನ ಜನರುದ್ಧಾರ ಮಾಡಿದನು ದಾನಿ ಜಯಮುನಿ ವಾಯು ಹೃದಯಗ ಚಿನ್ಮಯ ಶ್ರೀ ಕೃಷ್ಣವಿಠಲನ ಗಾನ ಸುಧೆಯನು ಬೀರಿಸುತ ವಿ ಜ್ಞಾನವಿತ್ತ ಮಹೋಪಕಾರಿ ವಿಶೇಷ ಮಹಿಮನ 9
--------------
ಕೃಷ್ಣವಿಠಲದಾಸರು
ಪುರಾಣ ಅಕ್ಕರವುಳ್ಳ ನಮ್ಮಕ್ಕ ರುಕ್ಮಿಣಿ ಕೇಳೆ ರಕ್ಕಸಾಂತಕ ಕೃಷ್ಣ ಮತ್ತೆಲ್ಲೆ ಪೋದ 1 ಸತ್ಯಭಾಮೆಯೆ ನಿನ್ನ ಚಿತ್ತದ್ವಲ್ಲಭ ನೀರೊಳು ಪೊಕ್ಕು ವೇದವ ತಂದು ಪುತ್ರಗಿಡಹೋದ 2 ಪನ್ನಂಗಶಯನ ಲಾವಣ್ಯರೂಪನು ಎನ್ನ ಕಣ್ಣಿಗೆ ಮರೆಯಾಗಿ ಇನ್ನೆಲ್ಲೆ ಹೋದ 3 ಪತಿ ಶರಧಿಯೊಳು ಬೆನ್ನಲಿ ಗಿರಿಯೆತ್ತಿ ತನ್ನ ಭಕ್ತರಿಗೆ ಸುಧೆಯ ನೀಡಲು ಹೋದ 4 ವನಜನಾಭನ ಕಾಣದೆ ಘನಕ್ಲೇಶದಿಂದೀಗ ಮನದ ವಿರಹತಾಪವನು ಸೈರಿಸಲ್ಹ್ಯಾಗೆ 5 ಅವನಿ ಕದ್ದವನ ಸಂಹರಿಸಿ ಕೋರೆಗಳಿಂದ ಭುವನಾಧಿಪತಿಯು ಬರುವನೆ ಸತ್ಯಭಾಮೆ 6 ಹಂಬಲ ಬಿಡದರವಿಂದನೇತ್ರನ ಬಿಟ್ಟು ಸುಂದರಾಂಗನ ಕರೆತಂದು ತೋರೆನಗೆ 7 ಕಂಬದಿಂದೊಡೆದು ಕಂದನ ತಂದೀ(ದೆಯ?) ಕರುಳ್ಹಾರ ಕಂದರದಿ ಧರಿಸಿ ತಾ ಬಂದನು ಭಾಮೆ 8 ಸೃಷ್ಟಿಕರ್ತನುಯೆನ್ನ ದಿ(ದೃ?) ಷ್ಟಿಂದೆ ನೋಡದೆ ಎಷ್ಟು ಹೇಳಲೆ ಪ್ರಾಣ ಬಿಟ್ಟು ಹೋಗುವುದೆ 9 ಪುಟ್ಟ ಬ್ರಾಹ್ಮಣನಾಗಿ ದಿಟ್ಟತನದಲಿ ದಾನವ ಕೊಟ್ಟ ಬಲಿ ಪಾತಾಳಕೆ ಮೆಟ್ಟಿ ಬಾಹುವನೆ 10 ತ್ವರಿತದಿಂದಲಿ ಯಾದವರರಸು ಶ್ರೀಕಾಂತನ ಸರಸವಾಡಲೀಗ ಕರೆಸಿ ತೋರೆನಗೆ 11 ಅರಸರ ಕುಲವ ಸಂಹರಿಸಿ ಕ್ಷತ್ರೇರನೆಲ್ಲ ನಿರುತ ನಿಷ್ಠೆಯಲಿ ತಪ ಚರಿಸಿ ಬಾಹುವನೆ 12 ಹೇಮಪುತ್ಥಳಿಗೊಂಬೆ ಸಾಮಜವರದನ ಆ ಮಾಸುರರೊಡೆಯ ಮೇಘಶ್ಯಾಮನ ತೋರೆ13 ಮಾಡಿ ಯುದ್ಧವ ಲಂಕಾ ನೋಡಿ ದಶಶಿರವ ಚೆಂಡಾಡಿ ಜಾನಕಿಯ ಒಡಗೂಡಿ ಬಾಹುವನೆ 14 ವಾಸುದೇವನ ಕಾಣದೊಂದರಘಳಿಗೀಗ ನಾಲ್ಕು ಯುಗವಾಗಿ ತೋರುವುದೆನ್ನ ಮನಕೆ 15 ಶ್ರೀಶ ತಾ ಸೋಳಸಾಸಿರ ಮಂದಿ ಸತಿಯೇರ ವಿ- ಲಾಸದಿಂದಿದ್ದನೀಗಿಂದೀವರಾಕ್ಷ 16 ಸಿರಿವೊಬ್ಬಳಲ್ಲದೆ ಪರನಾರಿಯರ ಕಣ್ಣು ತೆರೆದು ನೋಡುವ ತಾ ಭೂರಮಣನೆಲ್ಲಿಹನೆ 17 ಖರೆಯವೀಮಾತು ತ್ರಿಪುರದ ಸತಿಯರ ಲಜ್ಜೆ ತೊರೆದು ಕೂಡಿದನೆಂಬೋದು ಪರಮ ಮೋಹಕವೆ18 ನಾಡೊಳಗಧಿಕಶ್ವಾರೂಢ ರುಕ್ಮಿಣೀಕಾಂತನ ನೋಡದÉನಜೀವ ನಿಲ್ಲದು ನೀರಜಾಕ್ಷಿ 19 ಬೇಡಿಕೊಂಬುವೆನೆಂ(ಯೆ?)ದು ಭೀಮೇಶಕೃಷ್ಣನ ಕೂಡಿಸುವೆನೆ ಕರೆತಂದು ಕಮಲಾಕ್ಷಿ 20
--------------
ಹರಪನಹಳ್ಳಿಭೀಮವ್ವ
ಪುರುಷರೈವರು ಕೂಡಿ ಹರುಷದಿ ಬರುತಿರೆ ಸರಸದಿ ಕೃಷ್ಣೆ ಕದವಿಕ್ಕೆ ಸರಸದಿ ಕೃಷ್ಣೆ ಕದವಿಕ್ಕೆ 1 ನಾಗವೇಣಿಯೆ ನೀನು ಸಾಗಿ ಮುಂದಕ್ಕೆ ಬಂದು ಬಾಗಿಲಿಕ್ಕಿದ ಬಗೆ ಪೇಳೆ 2 ಸರ್ಹ್ಯಾಗೆ ತೆಗೆಯಲಿ ಕದವನು ಹ್ಯಾಗೆ ತೆಗೆಯಲಿ ಕದವನು 3 ಹರದಿ ದ್ರೌಪದಿ ಕೇಳೆ ದೊರೆಯು ಧರ್ಮರು ನಾವು ತ್ವರಿತದಿ ಬಂದೆವು ತೆಗೆ ನೀನು 4 ದೊರೆಗಳಾದರೆ ರಾಜ್ಯ ಪರರಿಗೆ ಕೊಟ್ಟು ತಾ- ನಡವಿ ಯಾತಕೆ ತಿರುಗೀರಿ ಅಡವಿ ಯಾತಕೆ ತಿರುಗೀರಿ5 ಪಟ್ಟದರಸನ ಕೂಡ ಇಷ್ಟು ಮಾತುಗಳ್ಯಾಕೆ ಶ್ರೇಷ್ಠ ಭೀಮನು ನಾ ಬಂದೀನೆ ಶ್ರೇಷ್ಠ ಭೀಮನು ನಾ ಬಂದೀನೆ 6 ಶ್ರೇಷ್ಠನಾದರೆ ಕೈಯ್ಯೊಳ್ಹುಟ್ಟು ಹಿಡಿದು ರಾಜ- ಗಟ್ಟ್ಟಿ ಅಡಿಗೆ ಉಣೀಸ್ಹೋಗೋ ರಾಜ- ಗಟ್ಟಿ ಅಡಿಗೆ ಉಣೀಸ್ಹೋಗೋ 7 ಪುಂಡಕೌರವರಿಗೆ ಗಂಡನೆನಿಸುವಂಥ ಗಾಂಡೀವರ್ಜುನ ನಾ ಬಂದೀನೆ ಗಾಂಡೀವರ್ಜುನ ನಾ ಬಂದೀನೆ 8 ದುಂಡು ಹರಡಿನಿಟ್ಟು ಗೊಂಡ್ಯದ್ಹೆರಳನ್ಹಾಕಿ- ಕೊಂಡು ವಿದ್ಯವ ಕಲಿಸ್ಹೋಗೊ ಹಾಕಿ- ಕೊಂಡು ವಿದ್ಯವ ಕಲಿಸ್ಹೋಗೊ 9 ಸಕಲವಿದ್ಯೆಗಳಲ್ಲಿ ಕುಶಲ ಸಂಪನ್ನನಾದ ನಕುಲರಾಯನು ನಾ ಬಂದೀನೆ ನಕುಲರಾಯನು ನಾ ಬಂದೀನೆ 10 ಸಕಲವಿದ್ಯೆಗಳಲ್ಲಿ ಕುಶಲನಾದರೆ ತೇಜಿ ಕೆಲಸ ರಾಯರಿಗೆ ತಿಳಿಸ್ಹೋಗೊ ಕೆಲಸ ರಾಯರಿಗೆ ತಿಳಿಸ್ಹೋಗೊ 11 ಪಾವಕÀತನುಜೆ ಮಾದೇವಹಾರದವೇಣಿ ಸ(ಹ) ದೇವರಾಯನು ನಾ ಬಂದೀನೀಗ ಸ(ಹ)- ದೇವರಾಯನು ನಾ ಬಂದೀನೀಗ 12 ಗೋವ ಕಾಯುತಲಿ ಗೋಪಾಲಕನಾಗಿ ಕೊಳಲೂದಿ ಗೊಲ್ಲರೊಳಾಡಹೋಗೊ ಕೊಳಲೂದಿ ಗೊಲ್ಲರೊಳಾಡಹೋಗೊ 13 ಮಾತುಳಾಂತಕನಲ್ಲಿ ಮಾತು ಕಲಿತು ಬಂದಿ(ಲ್ಲಿ) ಸೋತೆವೆ ನಿನಗೆ ಸುಂದರಾಂಗಿ ಸೋತೆವೆ ನಿನಗೆ ಸುಂದರಾಂಗಿ 14 ಸೋತರೇನಾಯಿತು ದ್ಯೂತಪಗಡೆ ಬಿಟ್ಟು ಅ- ಜ್ಞಾತವಾಸವನೆ ಚರಿಸ್ಹೋಗೊ ಅ- ಜ್ಞಾತವಾಸವನೆ ಚರಿಸ್ಹೋಗೊ15 ತಿರುಗಿ ತಿರುಗಿ ಭಾಳ ಬಳಲಿ ಬಂದೆವೆ ನಾವು ಕರುಣವಿಲ್ಲವೆ ಕಮಲಾಕ್ಷಿ ಕರುಣವಿಲ್ಲವೆ ಕಮಲಾಕ್ಷಿ 16 ಭಾಳ ಬಳಲಿದೆವೆಂದು ಹೇಳಿಕೊಂಡರು ಕರು- ಣಾಳು ನಾನಲ್ಲ ಕರೆಯಲು ಕರು- ಣಾಳು ನಾನಲ್ಲ ಕರೆಯಲು 17 ಕಾಮನಯ್ಯನ ಕರುಣಕ್ಕೆ ಪಾತ್ರರೆ ನಾವು ಸಾಮಜಗಮನೆ ಸರಸ್ಯಾಕೆ ಸಾಮಜಗಮನೆ ಸರಸ್ಯಾಕೆ 18 ಹೇಮಮಾಣಿಕ್ಯದ ಕದವ ತೆಗೆದು ಪತಿಗಳಿಗೆ ಪ್ರೇಮದಿಂದೆರಗಿ ಕರೆದಳು ಪ್ರೇಮದಿಂದೆರಗಿ ಕರೆದಳು 19 ಆದರದಿಂದ ಕರೆಯಲರ್ಜುನ ಭೀಮ ಧರ್ಮ ಸಾದೇವ ನಕುಲ ಸಹಿತಾಗಿ ಸಾದೇವ ನಕುಲ ಸಹಿತಾಗಿ 20 ಪಂಚಪಾಂಡವರು ಬಂದು ಪರಮ ಸಂಭ್ರಮದಿಂದ ಮಂಚದ ಮ್ಯಾಲೆ ಕುಳಿತಾರೊ ಮಂಚದ ಮ್ಯಾಲೆ ಕುಳಿತಾರೊ21 ಥsÀಳಕು ಬೆಳಕಿನಿಂದ ಝಳಕು ಮಿಂಚುಗಳಂತೆ ಬಳುಕುತ ಬಾಳೆಸುಳಿಯಂತೆ ಬಳುಕುತ ಬಾಳೆಸುಳಿಯಂತೆ22 ಗಂಡರೈವರ ಮುಂದೆ ಗರುವಿಲೆ ನಿಂತಳು ದುಂಡುಮಲ್ಲಿಗೆ ಶಿರ ಬಾಗಿ 23 ಕರಕಮಲವ ಪಿಡಿದು ಕರೆದು ಸಾದೇವ ಕೃಷ್ಣೆ- ತುರುವಿಗ್ಹೂಮಾಲೆ ಮುಡಿಸಿದ ಕೃಷ್ಣೆ- ತುರುವಿಗ್ಹೂಮಾಲೆ ಮುಡಿಸಿದ 24 ಮುಖಬೆವರ್ವೊರೆಸುತ ನಕುಲರಾಯನು ಭಾಳ ಸುಖದಿ ಮುದ್ದಿಸಿದ ಮಡದಿಯ ಸುಖದಿ ಮುದ್ದಿಸಿದ ಮಡದಿಯ 25 ಅರ್ಜುನಾಗಲೆ ಮೋಹದಿಂದ ಮುಂಗುರುಳು ತಿದ್ದಿ ವಜ್ರದಾಭರಣನಿಡಿಸಿದ 26 ಭೀಮ ನಗುತ ಬಿಗಿದಪ್ಪಿ ದ್ರೌಪದಿಯ ಧರ್ಮ- ರಾಯನ ತೊಡೆಯಲ್ಲಿರಿಸಿದ ಧರ್ಮ- ರಾಯನ ತೊಡೆಯಲ್ಲಿರಿಸಿದ 27 ಧರ್ಮ ಮುತ್ತಿನ ಹಾರ ಪದಕ ಕೊರಳಿಗೆ ಹಾಕಿ ವರಮೋಹನಾಂಗಿ ಒಲಿಸಿದ ವರಮೋಹನಾಂಗಿ ಒಲಿಸಿದ 28|| ಸಿಂಧುಸುತನ ಮುಖಬಿಂಬ ಸೋಲಿಸುವಂಥ ಚಂದ್ರವದನೆ ಮುನಿಸ್ಯಾಕೆ ಚಂದ್ರವದನೆ ಮುನಿಸ್ಯಾಕೆ 29 ಮಾತಿನರಗಿಳಿಯೆ ನೀ ಜ್ಯೋತಿ ಮುತ್ತಿನ ಗೊಂಬೆ ಪ್ರೀತಿಪತಿಗಳ ನೀ ನೋಡೆ ಪ್ರೀತಿಪತಿಗಳ ನೀ ನೋಡೆ 30 ಪ್ರಾಣಪದಕವೆಂದು ತಿಳದೆವೈವರು ನಿನ್ನ
--------------
ಹರಪನಹಳ್ಳಿಭೀಮವ್ವ
ಪುರುಷಾರ್ಥ ಪ ವರದ ಅಭೀಷ್ಟೆಯ ಕರದು ಎನಗೆ ನೀ ವರದನೆಂಬೊ ನಿನ್ನ ಬಿರುದನ ರಕ್ಷಿಸು ಅ.ಪ ಅಜನ ಜನಕನÀಲ್ಲಿ ಇರುವಿಯೊ ವಿಜನ ದೇಶದಲ್ಲೀ ಸುಜನರು ಇದ್ದಲ್ಲಿ ಬರುವೆಯೊ ಭಜನೆಮಾಡುವಲ್ಲೀ ಸುಜನರ ತಾಪಕೆ ವ್ಯಜನನು ನೀನೂ ಸುಜನಕಲ್ಪತರು ಕುಜನಕುಠಾರಾ 1 ನಂದನಂದನನೂ ಅವನಿನ್ನ ಬಂಧನದೊಳಗಿಹನೂ ಅಂಧನಾಗಿ ನಾನೂ ಸಂಸೃತಿ ಬಂಧನದೊಳಗಿನ್ನೂ ನೊಂದೆನು ಬೆಂದೆನು ಬಂದೆನು ನಿನ್ನಲಿ ಕಂದನ ಲಾಲಿಸು ಒಂದಿನ ಬಿಡದೆ 2 ಮರೆತೆನು ನಾನಿನ್ನಾ ಅವಗುಣ ಮರೆತು ಪಾಲಿಸು ಮುನ್ನಾ ಪರತರಗುರು ನಿನ್ನಾ ಹೊರತು ಗತಿ ಗುರುತತಿಲ್ಲ ಮುನ್ನಾ ಅರಿತು ಅನಂತಾದ್ರಿ ನಿರತನ ತೋರಿಸು ಮೋದ ಪುರನಿರತ ಸದ್ಗುರುವೆ 3
--------------
ಅನಂತಾದ್ರೀಶರು
ಪುಷ್ಟಿ ಎಲ್ಲಿಯದು ಪ ದೃಷ್ಟಿ ಕಡಿಮೆಯು ಕಿವಿಯು ಕೇಳದು ಶ್ರೇಷ್ಠ ನಾನೆಂದು ಕುಣಿವುದಕೆಅ.ಪ ಪರಿವ್ರಾಜಕನಾಗಬೇಕೆಂ- ದುರುತರಾಶ್ರಮ ಧರ್ಮಶಾಸ್ತ್ರಗ- ಳೊರೆಯುತಿಹುದದರರ್ಥ ತಿಳಿಯದೆ 1 ಕಾಮ್ಯಕರ್ಮಳನು ತ್ಯಜಿಸಿ ಭ್ರಾಮ್ಯಜನಗಳ ನಡತೆ ಬಿಟ್ಟು ರಮ್ಯವೆಂದರಿಯುವುದು ಸೌಖ್ಯವು 2 ಎಮ್ಮೆಯೋಲ್ ತಿನ್ನುತಲಿ ಬಾಯಲಿ ಹೆಮ್ಮೆ ಮಾತುಗಳಾಡುತಿರುತಿಹ ಗ್ರಾಮ್ಯ ಜನಗಳ ಸಂಗವೆಂದಿಗು ಗತಿವಿದೂರನ ಮಾಡದೆ ಬಿಡದು 3 ಗಣ್ಯತಾನೆಂದುಕೊಳ್ಳದೆ ದಾ- ಅನ್ನಕೋಸುಗ ಪರರ ಪೊಗಳದೆ ಧನ್ಯರಡಿಗಳ ಠಾವಿನಲಿ ನಲಿ ಸುಖ 4 ಪಾಮರರು ಪ್ರತಿದಿನವು ದುಸ್ತರ ತಾಮಸ ನರಕದೊಳು ಮುಣುಗುತ್ತ ಸ್ವಾಮಿಯಾಗಿ ಮೆರೆವ ಶ್ರೀಗುರು- ರಾಮವಿಠಲನ ಮರೆತು ಕೆಡುವರು 5
--------------
ಗುರುರಾಮವಿಠಲ
ಪುಷ್ಯೋತ್ಸವ ಗೀತೆ ಮಕರಪುಷ್ಯದ ಶುದ್ಧ ಷಷ್ಟಿಯಲಿ ನಗರಶೋಧನೆ ಮಾಡಿ ಮಂತ್ರಿಯು 1 ಮೊದಲು ದಿವಸದಿ ಧ್ವಜವನೇರಿಸಿ ಭೇರಿಯಿಡೆ ಸುರರ ಕರೆದರು 2 ಯಾಗಶಾಲೆಯ ಪೊಕ್ಕು ರಂಗನು ಯಾಗಪೂರ್ತಿಯಾ ಮಾಡಿ ನಿಂದನು 3 ಯಾತ್ರದಾನವ ಬೇಡಿ ಹರುಷದಿ ಸೂತ್ರ ಧರಿಸಿದಾ ಧಾತ್ರಿಗೊಡೆಯನು 4 ಕಂದರ್ಪನಾಪಿತ ದರ್ಪಣಾಗ್ರದಿ ಹ ನ್ನೊಂದು ದಿನದಲಿ ನಿಂದ ಹರುಷದಿ 5 ಸೂರ್ಯಚಂದ್ರರು ಹಂಸಯಾಳಿ[ಸಹಿತ] ಏರಿ ಬಂದನು ಸಿಂಹ ಶರಭವ 6 ಸರ್ಪವಾಹನ ಕಲ್ಪವೃಕ್ಷವು [ಗರು ಡ] ಪಕ್ಷಿ ಹನುಮನ ಏರಿ ಬಂದನು 7 ಏಳು ದಿವಸದಿ ಚೂರ್ಣಾಭಿಷೇಕವ ಸೀಳೆಸಹಿತಲೆ ಗ್ರಹಿಸಿ ಮಿಂದನು 8 ಎಂಟು ದಿವಸದಿ ಏರಿ ತೇಜಿಯ ಬಿಟ್ಟನು ಪೇರಿ ತೇರಿನಿದಿರಲಿ 9 ಒಂಬತ್ತು ದಿನದಲಿ ಶೃಂಗರಿಸಿದಾರು ಸಂಭ್ರಮದಿಂದಲೆ ಬೊಂಬೆರಥವನು 10 ಪುನರ್ವಸುವಿನಲ್ಲಿ ಪುರುಷೋತ್ತಮನು ರಥ ವನೇರಲು ಪೊರಟುಬಂದನು11 ಸಿಂಧುಶಯನನ ಹಿಂದೆಬಂದರು 12 ಅಷ್ಟಪತಿಯನು ಅಷ್ಟು ಕೇಳುತಾ ಸೃಷ್ಟಿಗೀಶ್ವರ ರಥವನೇರಿದ 13 ಪತ್ನಿ ಸಹಿತಲೇ ಹತ್ತಿ ರಥವನು ಉತ್ತರಬೀದಿಯ ಸುತ್ತಿಬಂದನು 14 ಇಂದಿರಾಪತಿ ಇಳಿದು ರಥವನು ಚಂದ್ರಪುಷ್ಕರಿಣಿಯಲಿ ತೀರ್ಥವಿತ್ತನು 15 ಕರೆತಂದರು ಕರಿಯಮೇಲಿಟ್ಟು ಚ ದುರಂಗಗೆ ನಜರು ಕೊಟ್ಟರು 16 ಸಪ್ತಾವರಣವ ಶಬ್ದವಿಲ್ಲದೆ ಸುತ್ತಿಬಂದನು ಭಕ್ತವತ್ಸಲ 17 ಸುತ್ತಿ ಲಕ್ಷ್ಮೀಗೆ ಇತ್ತು ಸೇವೆಯ ಭಕ್ತ ಭಾಷ್ಯಕಾರರಿಗೆ ಒಲಿದು ನಿಂದನು 18 ತನ್ನ ಚರಿತೆಗಳನು ಕೇಳುತ ಪನ್ನಗಶಯನನು ಪರಮ ಹರುಷದಿ 19 ಬಂದ ಸುರರ ಆನಂದದಿಂದಲೇ ಮಂದಿರಕ್ಕೆ ತಾ ಕಳುಹಿ ರಂಗನು 20 ಬಿಚ್ಚಿ ಕಂಕಣ ನಿಂದ ಹರುಷದಿ ಅರ್ಥಿಯಿಂದಲೆ ಅಚ್ಚುತಾನಂತ 21 ಏರಿ ಆಳಂಪಲ್ಲಕ್ಕಿ ಹರುಷದಿ ಒ ಯ್ಯಾರದಿಂದ ಬಂದ ರಂಗನು 22 [ಮೋಕ್ಷ] ಕೊಡುವನು ಮುದ್ದುವೆಂಕಟರಂಗನು 23
--------------
ಯದುಗಿರಿಯಮ್ಮ
ಪುಸಿಬಲು ಆಶ್ಚರ್ಯವೆಲ್ಲ ಪ ಬಲ್ಲದ ಗಂಡುತಾನಲ್ಲ ಬೇಡಿ ಗೋಕುಲಕೆಲ್ಲ 1 ಅಷ್ಟ ವರುಷವಿನ್ನು ತುಂಬಿದುದಿಲ್ಲ ಇಷ್ಟರೊಳಗೆ ಹೆಣ್ಣು ಮಮತೆಗಳಿಲ್ಲ ಸೃಷ್ಟಿಗೆ ಬಲು ಚೋದ್ಯವಾಗಿದೆಯಲ್ಲ ದೃಷ್ಟಿಗೆ ನಮಗೇನು ದಿಟ ಕಾಣೊದಿಲ್ಲ 2 ಬಲರಾಮಗೋವಳರಲ್ಲಿ ಮಂಗಳಮಹಿಮ ಲಕ್ಷ್ಮೀಶನೇಬಲ್ಲ 3
--------------
ಕವಿ ಪರಮದೇವದಾಸರು
ಪೂಜಾ ಮಾಡೋಣ ಬಾರೆ ಶ್ರೀ ಲಕುಮಿಯ ಪೂಜಾ ಮಾಡೋಣ ಬಾರೆ ಪ. ವನಜನ ನೇತ್ರೆಯ ತ್ರಿಜಗನ್ಮಾತೆ ಪ್ರಖ್ಯಾತೆ ಅ.ಪ. ಅರ್ಥಿಯಿಂದಲಿ ಇಟ್ಟು ಚಿತ್ತದೊಲ್ಲಭನ ಸ್ತುತಿಸಿ ಬೇಡಿಕೊಂಡು ಮತ್ತೆ ನಿಮಗೆ ಕರವೆತ್ತಿ ಪ್ರಾರ್ಥಿಸುತಲಿ 1 ಗಂಧಪುಷ್ಪ ವಸ್ತ್ರಾಭರಣ ಆನಂದ ದೀಪಗಳಿಂದ ಇಂದು ನಾ ಪೂಜಿಪೆ ಮಂದಿರದೊಳು ಆನಂದಭರಿತಳಾಗಿ ಬಾ 2 ರುಕ್ಮೀಶವಿಠಲನ ಪಟ್ಟದ ರಾಣಿ ವಕ್ಷಸ್ಥಳದಲಿನಿಂತು ನಲಿಯುತ ಬಾ ಭಕ್ತಜನರ ಮನೋಭೀಷ್ಟವ ಸಲಿಸುತ ಬಾ 3
--------------
ಗುಂಡಮ್ಮ
ಪೂಜಾನುಷ್ಠಾನವ ಯೋಚಿಸಿ ಮನದೊಳುಪೂಜೆ ಷೋಡಶಗಳ ಮಾಜದೆ ಮಾಡಿರೋ ಪ ಉಷಃ ಕಾಲದಲೆದ್ದು | ಝಷಕೇತು ಪಿತ ನಾಮಉಸುರು ತಿಪ್ಪುದೇ ಪೂಜೆಯೋ 1 ಶೌಚ ಬಾಹ್ಯವು ಮೃತ್ತು ಶೌಚ ಮಾಡಿಕೊಂಡುಶುಚಿಷತ್ತು ನಿನ ನಾಮ ಉಚ್ಚರಿಪುದೆ ಪೂಜೆಯೋ2 ತುಲಸಿ ಮೃತ್ತಿಕೆ ಹಚ್ಚಿ | ತುಲಸಿ ವಂದನೆ ಮಾಡಿಅಲಸಾದೆ ಕೃಷ್ಣನ ವಲಿಸೂವುದೇ ಪೂಜೆಯೋ 3 ಗೋವನೆ ಬಳಸುತ್ತ ಗೋಪುಚ್ಛ ಪಿಡಿಯುತ್ತಗೋವ ವಂದಿಪುದೆಲ್ಲ ಗೋಪಾಲ ನಿನ ಪೂಜೆಯೋ4 ಸ್ನಾನ ಸಂಧ್ಯಾನ ಮೇಣೂಧ್ರ್ವ ಪುಂಡ್ರವ ಧರಿಸಿಭಾನುಗಘ್ರ್ಯವ ನೀಯೆ ಶ್ರೀನಿವಾಸ ಪೂಜೆಯೋ 5 ಪಾದ ತೀರ್ಥ ಸೇವನೆ ಪೂಜೆಯೋ 6 ಅಷ್ಟ ಮಹಾಮಂತ್ರ ಶಿಷ್ಪನಾಗುತ ಹೃದಯಅಷ್ಟ ಕಮಲದಲ್ಲಿ ಧ್ಯಾನ ಮಾಳ್ಪುದೆ ಪೂಜೆಯೋ 7 ಮಂಟಪೋತ್ತಮ ಪೂಜೆ ಸುಷ್ಠು ಕಲಶ ಪೂಜೆಶ್ರೇಷ್ಠ ಪಂಚಾಮೃತ ಪೀಠ ಶಂಖ ಪೂಜೆಯೋ 8 ಘಂಟನಾದಾ ಅಖಂಡ ಶ್ರೇಷ್ಠ ದೀವಿಗೆ ಪೂಜೆಪೀಠಾವರಣ ಹೃತ್ಪೀಠ ಚಿಂತನೆ ಪೂಜೆಯೋ 9 ಮೂರ್ತಿ ಗುರುಮೂತ್ರ್ವೆಕ್ಯವೆ ಪೂಜೆಯೋ || ಚಿಂತಿಸಿ ಸ್ವಾಂತಸ್ಥ ಬಿಂಬನೋಳೈಕ್ಯವಚಿಂತಿಸುತ್ತಾನೇಕ ಗೈವ ವೈಭವ ಪೂಜೆಯೋ 11 ಹೃತ್ಪುಂಡರೀಕಗೆ ಕಲ್ಪ ತರುವನೆ ಬೇಡುತ್ತಪ್ರೀತ್ಯಾದ ಮಾನಸ ಪದಾರ್ಥಗಳ ಪೂಜೆಯೋ 12 ಪೂರ್ಣ ಶೃತಿಯ ಭಾವ ಚೆನ್ನಾಗಿ ಗ್ರಹಿಸುತ್ತಪೂರ್ಣನ ಕಳೆಯೊಂದು ಪ್ರತಿಮಾದಲ್ಲಿರಿಸೋ 13 ನಿಷುಸೀದ ಶ್ರುತಿಯಂತೆ ವಸುದೇವ ಕೃಷ್ಣನೆಅಸಮ ಪೂಜಕ ಪೂಜ್ಯ ಅವನೇವೆ ತಿಳಿಯೊ 14 ಬಾಹ್ಯದರ್ಚನೆಗಳು ಶ್ರೀ ಹಸ್ತದಿಂದಲಿವ್ಯಾಹರಣೆಂಬೋದೆ ಹರಿ ಪೂಜೆಯೋ 15 ಆವಾಹನಭಿಷೇಕ ನೈವೇದ್ಯಾದಿ ಪೂಜೆದೇವಗಾರುತಿ ಶಂಖ ಭ್ರಮಣಾದಿ ಪೂಜೆಯೋ 16 ಸರ್ವವನರ್ಪಿಸಿ ಅಸ್ವಾತಂತ್ರ್ಯವ ಗ್ರಹಿಸಿಶರ್ವಾದಿ ವಂದ್ಯ ಬಿಂಬಗೆ ಸರ್ವ ಪೂಜೆಯೋ 17 ಸರ್ವಾಪರಾಧವ ಸರ್ವೇಶನಲಿ ಪೇಳಿವೈಶ್ವ ದೇವಾದಿಗಳ್ ಸತ್ಕರ್ಮಗಳೆ ಪೂಜೆಯೋ 18 ಯತಿಗಳರ್ಚನೆಯನ್ನು ಮತಿಯಿಂದ ಗೈಯುತ್ತಸುತ ವಿಪ್ರಾದಿಯ ಸಹ ಹುತಶೇಷ ಮೆಲ್ಲೋದೆ ಪೂಜೆಯೋ 19 ಪ್ರಾಣಾಗ್ನಿ ಹೋತ್ರಾನು ಸಂಧಾನದಲಿ ಮದ್ದುಪ್ರಾಣನ ಪ್ರಾಣ ವೈಶ್ವಾನರಗೀಯೋದೆ ಪೂಜೇ 20 ಅಂತರಂಗದ ಪೂಜೆಗೊಲಿದ ಸಂತತ ಹರಿಕಂತು ಪಿತನು ಗುರು ಗೋವಿಂದ ವಿಠಲಾ 21
--------------
ಗುರುಗೋವಿಂದವಿಠಲರು
ಪೂಜಿ ಮಾಡುವ ಬನ್ನಿರೊ ಗುರುಪಾದ ಪೂಜಿ ಮಾಡುವ ಬನ್ನಿರೊ ಧ್ರುವ ತಿಳುಹು ತಿಳಿಯ ನೀರಿಲೆ ತನುವಿಲೆ ಅಭಿಷೇಕವ ಮಾಡುವ ಮಾಡುವ ಬನ್ನಿರೊ 1 ಶುದ್ಧ ಸುವಾಸನೆಯ ಗಂಧದಾರತಿ ಅಕ್ಷತಿಡುವ ಮಾಡುವ ಬನ್ನಿರೊ 2 ಅರವ್ಹೆಂಬ ದೀಪದಲಿ ಗುರುಸ್ವರೂಪವ ನೋಡುವ ಬನ್ನಿರೊ ನಲಿದಾಡುವ ಬನ್ನಿರೊ 3 ಭಕ್ತವತ್ಸಲ ಮೂರ್ತಿಗೆ ಸುಖದು:ಖ ಧೂಪಾರತಿ ಮಾಡುವ ಮಾಡುವ ಬನ್ನಿರೊ 4 ನೆನವು ನೈವೇದ್ಯದಲಿ ಮನ ಬುದ್ಧಿ ತಾಂಬೂಲವ ನೀಡುವ ಮಾಡುವ ಬನ್ನಿರೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪೂರ್ಣಭೋಧ ಮುನಿರಾಯಾ ಎನ್ನಲಿ ಕರುಣವ ಮಾಡಯ್ಯಾ ಪ ಚರಣವ ನಂಬಿದ ತರುಣನ ಭವ ಅರಣವ ದಾಟಿಸಿ ಶರಣನ ಪೊರೆಯೋ ಅ.ಪ ನಿನ್ನ ಮತದಿ ದೀಕ್ಷಾ ಪೊಂದಿಸಿ ನಿನ್ನ ಕರುಣ ಕಟಾಕ್ಷ ನಿನ್ನ ಶಾಸ್ತ್ರದಲನನ್ಯ ಭಾವವ ಮನ್ನಿಸೊ ದಿನದಿನ ಎನ್ನೊಳು ನೆಲೆಸಿದ್ದು 1 ಪಂಚಭೇದಮತಿಯಾ ತರತಮ ಪಂಚಕ ಭಾವದ ಪರಿಯಾ ವಂಚನೆÀ ಮಾಡದೆ ಪಂಚಿಕಿ ತಿಳಿಸೆಲೊ ಮಂಚಿಗೆ ಮರುತ ವಿರಿಂಚಿಯಾಗುವಿ ನೀ 2 ಮಾತರಿಶ್ವ ಹನುಮಾ ಭೀಮಾ ಯತಿನಾಥ ಮಧ್ವನಾಮಾ ಖ್ಯಾತ ಮಾಯಿಮತ ವ್ರಾತವನಳಿದ ದಾತಗುರುಜಗನ್ನಾಥ ವಿಠಲ ಪ್ರಿಯ 3
--------------
ಗುರುಜಗನ್ನಾಥದಾಸರು
ಪೇಳಲೇನು ವಿಧಿಯ ಲೀಲೆಯ ಮಹಿಮೆ ಪ ವ್ಯಾಳಶಯನನ ಸಂಕಲ್ಪದಂತಿಹುದು ಅ.ಪ. ಮೂರ್ತಿ ನೋಡುವ ಕಂಗಳು ಅಂಗನೆಯರ ರೂಪ ನೋಡಲೆಳಸಿದವು 1 ಶ್ರೀ ರಮಣನ ಕಥೆ ಕೇಳುವ ಕರ್ಣಗಳು ವಾರನಾರಿಯರ ವಾರ್ತೆಗೆ ಸೋತವು 2 ಮಂಧರಧರನ ನಿರ್ಮಾಲ್ಯವನೊಲ್ಲದೆ ಸುಂದರಿಯರ ಮೈ ಗಂಧ ಬಯಸಿತು ಘ್ರಾಣ 3 ಹರಿಯ ಪ್ರಸಾದವು ಭುಜಿಸದೆ ಜಿಹ್ವೆಯು ಪರಮ ನಿಷಿದ್ಧ ಪಾನ ಭೋಜನ ಬಯಸಿತು 4 ರಂಗನ ಭಕ್ತರ ಸಂಗವ ಬಿಟ್ಟು ಸ್ಪರ್ಶ ಅಂಗನೆಯ ದೇಹಾಲಿಂಗನ ಬಯಸಿತು 5 ಶ್ರೀನಿಕೇತನ ನಾಮ ನುಡಿಯುವ ನಾಲಿಗೆ ದೀನ ಕಾಮಾತುರ ನುಡಿಯಲಿ ನಲಿಯಿತು 6 ಪಾದ ಸ್ಮರಣೆಯ ಬಿಟ್ಟಾ ಮನ ತರುಣಿಯರು ಸದಾ ನೆನೆಸಿತು ಅಕಟಾ 7
--------------
ವರಾವಾಣಿರಾಮರಾಯದಾಸರು
ಪೇಳಾರು ತಾಯಿಯು ಪ ಕೋಟಿರೂಪಯುತನು ಸಾಟಿಯಿಲ್ಲದವನು ಲೋಕಪಾಲಕನು 1 ನೇಕ ಮಹಿಮೆಯ ತೋರುವ ಪರಶಿವನು | ಪರಾತ್ಪರನು ನಿಗಮ ಮಂದಿರನು 2 ಜಲಧಿ | ವಿ ಮಾರುತಿ ಸುಯಿಲುದಲಾ ಸಕಲ ಮೂಲಮಾಂಗಿರೀಶನಲಾ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್