ಒಟ್ಟು 6420 ಕಡೆಗಳಲ್ಲಿ , 135 ದಾಸರು , 4140 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಮತ್ರಯ ನೆನೆಯಿರೊ ಕಾಮಕ್ರೋಧವು ಹರಿದು ಬೈಲಾಗಿ ಪೋಗುವುದು ಪ ಅಚ್ಯುತಾ ಅಚ್ಯುತಾ ಎಂದು ಸ್ಮರಣೆಯನು ಮಾಡಿದರೆ ದುಶ್ಚರಿತವೆಂಬ ಮಹ ಕಾನನಕ್ಕೆ ಕಿಚ್ಚಾಗಿ ದಹಿಸುವುದು ನಿಮಿಷದೊಳಗೆ ಶುದ್ಧ ನಿಚ್ಚಳವಾಗಿದ್ದ ಸುಜ್ಞಾನ ಪಾಲಿಪದು1 ಅನಂತ ಅನಂತ ಎಂದು ಮನದಲ್ಲಿ ನೆನೆಯೆ ನಾನಾ ಭವಬಂಧ ದುಷ್ಕರ್ಮದಿ ಹೀನಾಯವನು ಕಳೆದು ಹಿತದಿಂದಲಿ ವೊಲಿದು ಆನಂದ ಆನಂದವಾದ ಫಲ ಕೊಡುವುದು. 2 ಗೋವಿಂದ ಗೋವಿಂದ ಎಂದು ಧ್ಯಾನವ ಮಾಡೆ ಗೋವಿಂದ ಕಡೆಹಾಕಿ ಸಾಕುವದು ದೇವೇಶ ಶಿರಪತಿ ವಿಜಯವಿಠ್ಠಲೇಶನ ಸೇವೆ ಸತ್ಕಾರ್ಯದಲಿ ಪರಿಪೂರ್ಣವಾಗಿಹುದು 3
--------------
ವಿಜಯದಾಸ
ನಾರದ ಇಲ್ಲೆ ಬಂದಿಹ ಮುನಿ ಇಲ್ಲೇ ಬಂದಿಹಾಎಲ್ಲ ಲೋಕ ತಿರುಗಿ ಇಲ್ಲೆ ಬಂದಿಹಾ ಪ ಫುಲ್ಲನಾಭನ ಭಕ್ತರಲ್ಲಿ ಮಾಣಿಕ್ಯವೇಅ.ಪ. ಕರದಿ ವೀಣೆಯನ್ನು ಧರಿಸಿ ಶಿಷ್ಯರಿಂದಸುರಮುನಿಯು ಕೇಳಿ ಭರದಿ ಜಾಗರಕ್ಕೆ 1 ಹರಿಯ ದಿನದಿ ನಿನ್ನ ಚರಿತಾಮೃತವ ಪಾಡೆಹರಿಯ ನಿಲಯದಿ ಗಾನ ಭರದಿ ಮಾಡುತಲೆ 2 ನಂದ ಬಾಲಕನ ತಂದುತೋರುವನೇಇಂದು ನಿನ್ನ ತುತಿಪೆ ಇಂದಿರೇಶ ದಾಸಾ 3
--------------
ಇಂದಿರೇಶರು
ನಾರದ ದೇವಋಷಿಗಳ ನೋಡಿದೆ ಹರಿಪಾದ ಸೇವಕರ ಕೊಂಡಾಡಿದೆ ದೇವಋಷಿ ಹರಿಪಾದ ಸೇವಕರು ನಮ್ಮಾ ್ವಸು- ದೇವಸುತನಂಕದಲ್ಲುದಿಸಿದುತ್ತಮರಿವರು ಪ ವಾಣಿಪತಿಪಿತನ ಚರಣಾಂಬುಜ ಸೇವೆ ಮಾಡೋ ಜನರಲ್ಲೆ ಕರುಣ ಜಾಣ ನಾರಂದ ಜಗದೀಶನ ಗುಣಮಹಿಮೆ ವೀಣಾಪಾಣಿಗಳಿಂದ ಸ್ತುತಿಸಿ ಕೊಂಡಾಡುವರು 1 ಪ್ರೀತಿಯಿಂದ್ಹರಿಯ ನೋಡಿ ಸುರಪಾರಿ- ಜಾತವನು ತಂದು ನೀಡಿ ಮಾತುಳಾಂತಕನ ಮಡದಿ(ಯ)ರಿಗೆ ಕಲಹವನ್ಹೂಡಿ ಭೂತಳಕೆ ಸುರತರುವ ತರಿಸಿದರ್ಹರಿಕರಗಳಿಂದ2 ದಾಸಿಯಲ್ಲುದಿಸಿ ವಿಷಯಗಳು- ದಾಶ(ಸೀ?)ನವ ಮಾಡಿ ಬ್ಯಾಗ ಅಸುರಾಂತಕನ ಅತಿಭಕ್ತಿಯಿಂದಲಿ ಭಜಿಸಿ ಭೀ- ಮೇಶಕೃಷ್ಣನ ಗುಣವ ಪಾಡಿ ಕೊಂಡಾಡುವರು3
--------------
ಹರಪನಹಳ್ಳಿಭೀಮವ್ವ
ನಾರದ ಕೊರವಂಜಿ ಜಯ ಜಯ ದಯಾಕರನೆ ಹಯವದನ ಭಯಹರನೆ ಜಯ ಶೀಲಸಾಧ್ವರನೆ ಜಯ ದೀನೋದ್ಧರನೆ ಪ್ರಿಯಜನ ಮನೋಹರನೆÀ ಸುಯತಿ ಸಾಕಾರನೆ 1 ಹರಿಯೇ ಪತಿಯಾಗಬೇಕೆಂದು ರುಕುಮಿಣಿ ಪರದೇವತೆಯ ನೆನವುತಿರಲು ಕೊರವಂಜಿ ವೇಷದಿ ರುಕುಮಿಣಿದೇವಿಗೆ ಪರಮ ಹರುಷವೀವೆನೆಂದು ನಾರದ ಬಂದ 2 ಧರಣಿ ಮಂಡಲದಲ್ಲಿ ನಾರದ ಧರಿಸಿ ಕೊರವಂಜಿ ವೇಷವ ಸುರನರಾದಿಗಳೆಲ್ಲರಿಗೆ ತಾ ಪರಮ ಆಶ್ಚರ್ಯ ತೋರುತ್ತ 3 ಬಂದಳು ಕೊರವಂಜಿ ಚಂದದಿಂದಲಿ ಮಂದಹಾಸವು ತೋರುತ್ತ ಪಾದ ಧಿಂಧಿಮಿ ಧಿಮಿ- ಕೆಂದು ನಿಂದಭೀಷ್ಟವ ಪೇಳುತ 4 ಗಗನದಂತಿಹ ಮಧ್ಯವು ಸ್ತ- ನಘನ್ನ ಭಾರಕೆ ಬಗ್ಗುತ ಜಗವನೆಲ್ಲವ ಮೋಹಿಸಿ ಮೃಗ ಚಂಚಲಾಕ್ಷದಿ ನೋಡುತ 5 ಕನಕಕುಂಡಲ ಕಾಂತಿಯಿಂದಲಿ ಗಂಡಭಾಗವು ಹೊಳೆವುತ್ತ ಕನಕಕಂಕಣ ನಾದದಿಂದಲಿ ಕಯ್ಯ ತೋರಿ ಕರೆಯುತ್ತ 6 ಕುಂಕುಮಗಂಧದಿ ಮಿಂಚುವೈಯಾರಿ ಚುಂಗು ಜಾರಲು ಒಲವುತ್ತ ಕಿಂಕಿಣಿ ಸರಘಂಟೆ ಉಡಿಯೊಳು ಘಲ್ಲು ಘಲ್ಲೆಂದು ಬಂದಳು ಘಲ ಘಲ ಘಲ್ಲು ಘಲ್ಲೆಂದು ಬಂದಳು 7 ಕರೆದಾಳೆ ಸುಪಲ್ಲವ ಸುಪಾಣಿ ಕೀರವಾಣಿ ಪರಿಮಳಿಸುವ ಫಣಿವೇಣಿ 8 ಪರಿಪರಿ ಬೀದಿಯಲ್ಲಿ ನಿಂದು ಹಿಂದೂ ಮುಂದೂ ಸರಸವಾಡುತ್ತ ತಾನೆ ಬಂದು 9 ಕೊರವಂಜಿ ಯಾರೊಳಗೆ ನೋಡಿ ಕೂಡಿಯಾಡಿ ಸರಿಯಿಲ್ಲವೆಂದು ತನ್ನ ಪಾಡಿ 10 ಮನೆಮನೆಯಿಂದ ಬಂದಳು ಕೊರವಂಜಿ ತಾನು ಮನೆಮನೆಯಿಂದ ಬಂದಳು ರನ್ನವ ತೆತ್ತಿಸಿದ ಚಿನ್ನದ ದಿವ್ಯ ಬುಟ್ಟಿ ತನ್ನ ನೆತ್ತಿಯಲ್ಲಿಟ್ಟು ಬೆನ್ನಿಲಿ ಸಿಂಗಾನ ಕಟ್ಟಿ 11 ಗದ್ಯ : ಸುಗುಣಾಂಗಿಯರು ಪೇಳಲು ಮುದದಿಂದ ರುಕುಮಿಣಿದೇವಿ ತಾನೂ ಮುಗುಳು ನಗೆಯಂ ನಗುತ ಕೊರವಂಜಿಯನೆ ಅತಿಬೇಗ ಜಗವರಿಯೆ ಕರೆಯೆಂದಳು. ಶ್ರೀ ರುಗ್ಮಿಣಿ ತಾ ಬಂದಳು ಸ್ತ್ರೀಯರ ಕೂಡಿ ಚಾರುಹಾಸದಿಂದೊಪ್ಪುತ ಚೆಲ್ವ ದಿವ್ಯ ನೋಟಂಗಳಿಂದ ರಾಜಿಪ ಕಂಕಣದಿಂದ ರಮ್ಯ ನೂಪುರಗಳಿಂದ ರಾಜಚಿಹ್ನೆಗಳಿಂದ ರಾಜೀವನೇತ್ರೆ ಒಲವುತ್ತ12 ರಾಜಾಧಿರಾಜ[ರು]ಗಳಿಂದ ರಾಜಸಭೆಯಲ್ಲಿ ಪೂಜಿತಳಾದ ರಾಜಹಂಸಗ-ಮನೆಯು ಬರಲು ರಂಜಿತಳಾಗಿ ಒಲೆವುತ್ತ ಗದ್ಯ : ಆಗಲಾ ದೂತಿಕೆಯರು ಕೊರವಂಜಿಯನೆ ಅತಿ ಬೇಗ ಕರೆಯಲು ಬೇಕಾದ ವಜ್ರವೈಢೂರ್ಯ ರಾಗವಿಲಸಿತವಾದ ದ್ವಾರ ಭೂಭಾರದಿಂದೆಸೆವ ಭಾಗಧೇಯದಿಂ ರಾಜ ಸತ್ಕುಲವಾದ ದಿವ್ಯ ಮಂದಿರಕೆ ತ್ಯಾಗಿ ರುಕುಮಿದೇವಿ ನೋಡಲಾ ಶ್ರೀ- ರಾಗದಿಂ ಗಾನವಂ ಪಾಡುತ್ತ ಕೊರವಂಜಿಯು ಬಂದ ಚೆಂದ13 ಬಂದಾಳಂದದಲಿ ಬಾಗಿಲೊಳಗೆ ದಿಂಧಿಮಿಕೆನ್ನುತ 14 ಚೆಲುವ ತುರುಬಿನಿಂದಲಿ ಜಗುಳುವ ಚಲಿಸುವ ಪುಷ್ಪದಂದದಿ ನಲಿನಲಿ ನಲಿದಾಡುತ್ತ ಮಲ್ಲಿಗೆ ಝಲಝಲಝಲ ಝಲ್ಲೆಂದು ಉದುರುತ್ತ ಕಿಲಿಕಿಲಿ ಕಿಲಿ ಕಿಲಿ ಕಿಲಿಯೆಂದು ನಗುತ್ತ 15 ಗದ್ಯ :ಥಳಥಳನೆ ಹೊಳೆವುತ್ತ ನಿಗಿನಿಗೀ ಮಿಂಚುತ್ತ ರನ್ನದ ಬುಟ್ಟಿಯ ಕೊಂಕಳಲಿಟ್ಟು ಧಿಗಿಧಿಗಿಯೆಂದು ನೃತ್ಯವನ್ನಾಡುತ್ತ ಎತ್ತರದಲಿ ಪ್ರತಿಫಲಿಸುವ ಮುತ್ತಿನಹಾರ ಉರದೊಳಲ್ಲಾಡುತ ನಿಜಭಾಜ ಮಾರ್ತಾಂಡ ಮಂಡಲ ಮಂಡಿತಾ ಪ್ರಭು ಪ್ರತಿಮ ದಿಶದಿಶ ವಿಲಸಿತವಾದ ಭುಜಕೀರ್ತಿಯಿಂದೊಪ್ಪುವ ಆಕರ್ಣಾಂತ ಸುಂದರ ಇಂದೀವರದಳಾಯತ ನಯನ ನೋಟಗಳಿಂದ ಚಂಚಲಿಸುವÀ ಮಿಂಚಿನಂತೆ ಮಿಂಚುವ ಕಾಂತೀ ಸಂಚಯಾಂಚಿತ ಕಾಂಚನೋದ್ದಾಮ ಕಾಂಚೀ ಪೀತಾಂಬರಾವಲಂಬನಾಲಂಬಿತಾ ನಿತಂಬದಿಂದೊಪ್ಪುವ ಝೇಂಕರಿಸುವ ಭೃಂಗಾಂಗನಾಸ್ವಾದಿತ ಜಗುಳುವ ಜುಗುಳಿಸುವ ಪರಿಮಳಿಸುವ ಜಘನ ಪ್ರದೇಶಗಳಲ್ಲಿ ವಿವಿಧ ಪುಷ್ಪಗಳಿಂದ ಅಲಂಕೃತ ನಿತಾಂತಕಾಂತಿಕಾಂತಾ ಸುಧಾಕುಂತಳ ಸಂತತಭರದಿಂದೊಪ್ಪುವ ಪುಂಜೀಕೃತ ಮಂಜುಭಾಷಣ ಅಪರಂಜಿ ಬಳ್ಳಿಯಂತೆ ಮನೋರಂಜಿತಳಾದ ಕೊರವಂಜಿಯು ನಿಶ್ಶಂಕೆಯಿಂದ ಕಂಕಣಕ್ಷಣತೆಯಿಂದ ಕೊಂಕಳ ಬುಟ್ಟಿಯ ಪೊಂಕವಾಗಿ ತನ್ನಂಕದಲ್ಲಿಟ್ಟುಕೊಂಡು ಬೆನ್ನಸಿಂಗನ ಮುಂದಿಟ್ಟು ಚೆಂದವಾಗಿ ರುಕುಮಿಣಿ ದೇವಿಯ ಕೊಂಡಾಡಿದಳು. ಗದ್ಯ :ಅವ್ವವ್ವ ಏಯವ್ವ ಕೈಯ್ಯ ತಾರೆ ಕೈಯ್ಯ ತೋರೆ ನೀ ಉಂಡ ಊಟಗಳೆಲ್ಲ ಕಂಡ ಕನಸುಗಳೆಲ್ಲ ಭೂಮಂಡಲದೊಳಗೆ ಕಂಡ್ಹಾಗೆ ಪೇಳುವೆನವ್ವಾ. ಶಿಖಾಮಣಿ ಏನೇ ರುಕುಮಿಣಿ ನಿನ್ನ ಚೆಲುವಿಕೆಯನೇನೆಂತು ಬಣ್ಣಿಪೆ. ಮದನ ಶುಭ ಅಮಿತ ರಸಶೃಂಗಾರದಿಂದೊಪ್ಪುವ ನಿನ್ನ ಕೀರ್ತಿಯ ಕೇಳಿ ಬಂದೆನಮ್ಮಾ ಅಂಗ ವಂಗ ಕಳಿಂಗ ಕಾಶ್ಮೀರ ಕಾಂಭೋಜ ಸಿಂಧೂ ದೇಶವನೆಲ್ಲ ತಿರುಗಿ ಬಂದೆನಮ್ಮಾ 16 ಮಾಳವ ಸೌರಾಷ್ಟ್ರ ಮಗಧ ಬಾಹ್ಲೀಕಾದಿ ಚೋಳ ಮಂಡಲವನೆಲ್ಲ ಚರಿಸಿ ಬಂದೆನಮ್ಮಾ17 ಲಾಟ ಮರಾಟ ಕರ್ಣಾಟ ಸೌಮೀರಾದಿ ಅಶೇಷ ಭೂಮಿಯ ನಾನು ನೋಡಿ ಬಂದೆನಮ್ಮಾ 18 ಮಾಯಾ ಕಾಶೀ ಕಾಂಚಿ ಅವಂತಿಕಾಪುರೀ ದ್ವಾರಾವತೀ ಚೇದಿ|| ಮೆಚ್ಚಿ ಬಂದ ಕೊರವಿ ನಾನಮ್ಮ ಪುರಗಳಿಗೆ ಹೋಗಿ ನರಪತಿಗಳಿಗೆ ಸಾರಿ ಬರÀ ಹೇಳಿ ನಾ ಕಪ್ಪವ ತಂದೆ 19 ಸತ್ಯಮುಗಾ ಚೆಪ್ಪುತಾನಮ್ಮಾ ಸಂತೋಷಮುಗಾ ವಿನುವಮ್ಮ ಸತ್ಯ ಹರುಶ್ಚಂದ್ರನಿಕಿ ಚಾಲ ಚೆಪ್ಪಿತಿ 20 ಕನ್ನೆ ವಿನವೆ ನಾ ಮಾಟ ನಿನ್ನ ಕಾಲಂನೆ ನೇನಿಕ್ಕು(?) ಚಿನ್ನ ಸಿಂಗಾನೀ ತೋಡೂನೆ ಚೆಪ್ಪ್ಪೆಗಮ್ಮಾನೇ 21 ಗದ್ಯ :ಆಗ ರುಕುಮಿಣಿದೇವಿಯು ಚಿತ್ರವಿಚಿತ್ರ ಚಿತ್ತಾರ ಪ್ರತಿಮೋಲ್ಲಸಿತ ತಪ್ತ ರಜತರಂಜಿತಸ್ಫಟಿಕ ಮಣಿಗಣ ಪ್ರಚುರ ತಟಿಕ್ಕೋಟಿ ಜ್ವಾಲಾವಿಲಸಿತವಾದ ವಜ್ರಪೀಠದಲಿ ಕುಳಿತು ಚಿನ್ನದ ಮೊರಗಳಲ್ಲಿ ರನ್ನಗಳ ತಂದಿಟ್ಟುಕೊಂಡು ಕೊರವಂಜಿಯನೆ ಕುರಿತು ಒಂದು ಮಾತನಾಡಿದಳು. ವೊಲಿಸೀನ ಸೊಲ್ಮೂಲೆಲ್ಲ ವನಿತೆನೆ ನಿಂತೂ(?) 22 ಗದ್ಯ : ಆಗ ರುಕುಮಿಣಿದೇವಿಯಾಡಿದ ಮಾತ ಕೇಳಿ ಕೊರವಂಜಿಯುಯೇ-ನೆಂತೆಂದಳು. ನೆನೆಸಿಕೊ ನಿನ್ನಭೀಷ್ಟವ ಎಲೆ ದುಂಡೀ ನೆನೆಸಿಕೊ ವನಿತೆ ಶಿರೋಮಣಿಯೆ ಘನಮುದದಿಂದ ನೆನೆಸಿಕೊ 23 ರನ್ನೆ ಗುಣಸಂಪನ್ನೆ ಮೋಹನ್ನೆ ಚೆನ್ನಾಗಿ ಮುರುಹಿಯ ಮಾಡಿ ನೆನೆಸಿಕೊ 24 ಮಾಧವ ಸೇತುಮಾಧವ ವೀರರಾಘವ ಚಿದಂಬರೇಶ್ವರ ಅರುಣಾಚÀಲೇಶ್ವರ ಪಂಚನದೇಶ್ವರ ಶ್ರೀಮುಷ್ಣೇಶ್ವÀÀರ ಉಡುಪಿನ ಕೃಷ್ಣ ಮನ್ನಾರು ಕೃಷ್ಣ ಸೋದೆ ತ್ರಿವಿಕ್ರಮ ಬೇಲೂರು ಚೆನ್ನಪ್ರಸನ್ನ ವೆಂಕಟೇಶ್ವರ ಸೂರ್ಯನಾರಾಯಣ ಇವು ಮೊದಲಾದ ದೇವತೆಗಳೆಲ್ಲ ಎನ್ನ ವಾಕ್ಯದಲಿದ್ದು ಚೆನ್ನಾಗಿ ಸಹಕಾರಿಗಳಾಗಿ ಬಂದು ಪೇಳಿರಯ್ಯಾ ಮಂಗಳದ ಕೈಯ್ಯ ತೋರೇ ಎಲೆದುಂಡೀ ಕೈಯ ತೋರೆ ಕೈಯ ತೋರೆ 25 ಕೇಳೆ ರನ್ನಳೆ ಎನ್ನ ಮಾತ ಬೇಗ ಇಳೆಯರಸನಾದನು ಪ್ರಿಯ26 ಕಳಸಕುಚಯುಗಳೆ ಚಿಂತೆ ಬೇಡ ನಿನ್ನ ಕರೆದಿಂದು ಕೂಡ್ಯಾನು ರಂಗ 27 ನಾಡಿನೊಳಧಿಕನಾದ ನಾರಾಯಣನ ಪತಿ ನೀನು ಮಾಡಿ ಕೊಂಡೆನೆಂದು ಮನದಲ್ಲಿ ನೆನಸಿದೆ ಕಂಡ್ಯಾ ನಮ್ಮ ಕೃಷ್ಣ ಕುತೂಹಲದಿ 28 ಸುಂದರಶ್ಯಾಮ ಅಲ್ಲಿ ನÀಂದಾ ನಂದಾನಾಡುವಾನಂದಮುಗಾವಚ್ಚಿ ಕೂಡೇನಮ್ಮಾ 29 ಶಂಖಚಕ್ರಯುಗಲ ಪಂಕಜನಾಭುಂಡು ಪಂಕಜಮುಖೀ ನೀವು ಪ್ರಾಣಿಗ್ರಹಣಮು ಚೇಸಿ ಕೂಡೆನಮ್ಮಾ 30 ಚೆಲುವಾ ನಾ ಮಾಟಾ ನೀಕು ಪುಚ್ಚಾ ಚೆಲುವಾ ನಾ ಮಾಟ ಕಲ್ಲಗಾದು ನಾ ಕಣ್ಣೂಲಾನೂ ಪಿಲ್ಲ ವಿನುವಮ್ಮ ಪಲ್ಲವಪಾಣೀ ಚೆಲುವಾ ನಾ ಮಾಟ31 ದಮಯಂತೀಕೀನೇ ಚೆಪ್ಪಿತಿ ನಮ್ಮವೆ ಮಾಟ ಅಮರುಲಕೆಲ್ಲಾ ಅನುಮೈನವಾಡು ಚೆಪ್ಪೀ ಅಮಿತ ಬಹುಮಾನಾಮಂದೀತೀನಮ್ಮಾ ಚೆಲುವ ನಾ ಮಾಟ ಚೆಲುವ 32 ಬಂತೆ ಮನಸಿಗೆ ನಾ ಹೇಳಿದ್ದು ಚಿಂತೆ ಸಂತೋಷದಿ ನಾನಾಡಿದ ಶಾಂತ ಮಾತೆಲ್ಲ ಇದು ಪುಸಿಗಳಲ್ಲ ಬೇಗ ಬಂದಾನೋ ನಲ್ಲಾ ಆಹಾ ಆಹಾ ಬಂತೇ ಮನಸ್ಸಿಗೆ
--------------
ವಾದಿರಾಜ
ನಾರಸಿಂಹ ನಮಿಪೆ ನಿಮ್ಮ ನತಜನಾಶ್ರಯ ಪ ಘೋರ ದುರಿತದೂರ ಭಕ್ತಕುಮುದಕುಡುರಾಯ ಅ.ಪ ವಿವಿಧಗತಿಯಲಸುರ ಸುತನ ವೇಧೆಪಡಿಸಲು ತವ ಪದಾಂಬುರುಹವ ನೆನೆಯೆ ಒಂದೆ ಕ್ಷಣದೊಳು 1 ಕೋಟಿ ಸಿಡಿಲು ಬಡಿದ ತೆರದಿ ಕೂಗು ಪುಟ್ಟಲು ಚಾಟ ಸ್ತಂಭದೊಳುದಿಸೆ ದನುಜಕೂಟ ಬೆದರಲು 2 ತರಳಗೊಲಿದೆ ಗುರುರಾಮ ವಿಠಲ ನಂಬಿದೆ 3
--------------
ಗುರುರಾಮವಿಠಲ
ನಾರಸಿಂಹ ನಾರಸಿಂಹ ನಾರಸಿಂಹ ಪ ನಿತ್ಯದಲಿ ಬರುವ ಅಪಮೃತ್ಯುವಿನ ಬಾಧೆಯ ಕೃತ್ತಿ ಒತ್ತಿ ಪರಿಹರಿಸಿ ಭೃತ್ಯನಾದ ಜೀವನ್ನ ತೃಪ್ತಿಪಡಿಸುವ ದೇವ ಭಕ್ತವತ್ಸಲ ನಾರಸಿಂಹ 1 ಅಂದು ಸ್ವಪ್ನದಿ ಬಂದೆ ದ್ವಂದ್ವ ಪಾದಕ್ಕೆರಗಿ ನಿಂದು ನಾ ನಿನ್ನ ಬೇಡೆ ಸಂಧಿಸಿ ಕ್ರೂರ ದೃಷ್ಟಿಯಿಂದ ನೋಡಿ ಮಂದೀಗೆ ಕುಂದು ಮಾಡಬ್ಯಾಡೆಂದೆ 2 ಅಂದಿನಾರಭ್ಯ ಬಲು ಬಂಧನಕೆ ಸಿಲ್ಕಿ ನಾ ಪರಿ ಪೇಳಲಾರೆ ಹಿಂದಿನ ಅಘವೆಣಿಸದೆ ಬಂದು ನಾರಿ ಸಹಿತ ತಂದೆ ಈ ಸುತನ ಕಾಯೋ 3 ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ ಎಂದು ಎನ್ನಗಲದೆ ಬಂದು ನೆಲಸೆನ್ನಲ್ಲಿ ಅಜ್ಞಾನ ಕೊಡದಿರು ವಂದಿಸುವೆನು ನಾರಸಿಂಹ 4 ಮುಂದಾದರು ಹೃನ್ಮಂದಿರದಿ ನೆಲೆಗೊಂಡು ಸಂದರ್ಶನವನೀಯೊ ದೇವ ಕಂದರ್ಪಹರ ವಿಜಯ ರಾಮಚಂದ್ರವಿಠಲರೇಯ ವಂದೆ ಭಕ್ತಿಯ ಪಾಲಿಸು 5
--------------
ವಿಜಯ ರಾಮಚಂದ್ರವಿಠಲ
ನಾರಸಿಂಹನೆ ಘೋರರೂಪನೆ ತೋರು ಮೊಗವನು ಕರುಣದಿ ಚಾರುಗಾತ್ರನೆ ಭೀರು ತ್ರಾತನೆ ಸೇರಿಹೆನು ತವ ಚರಣದಿ ಪ ಘೋರತರ ಸಂಸಾರ ಶರಧಿಯ ತೀರ ಗಾಣೆನು ಧೀರನೆ ಪಾರಗಾಣಿಪೊದ್ಯಾರ ಕಾಣೆನುಯಾ ಭವರುಜಹಾರನೆ 1 ದಾನವನ ತಪಜ್ವಾಲೆಯಿಂದಲಿ ಮಾನುಷರು ಕಳವಳನೆಯಾ ಸೂನುತಾರಣ ನೆವದಿ ದಿವಿಜರ ಮಾನವನು ನೆರೆ ಕಾಯ್ದೆಯಾ 2 ದುಷ್ಟಸಂಹರ ಶಿಷ್ಟಪಾಲಕನೆಂಬ ಬಿರುದೆತ್ತಿಹುದಲಾ ಸೃಷ್ಟಿಗೀಶನೆ ಕಷ್ಟ ತೊಲಗಿಸೋ ಶಿಷ್ಟ ನರಸಿಂಹವಿಠ್ಠಲಾ 3
--------------
ನರಸಿಂಹವಿಠಲರು
ನಾರಸಿಂಹನೆ ಧೀರ | ನಂಬಿದೆನೊ ಪೊರೆಯೊ ಶ್ರೀ ರಮಾಪತಿ ವೀರ | ಕರಿಗಿರಿ ವಿಹಾರ ಪ. ಸಾರಿದೆನೊ ನಿನ್ನ ಪದವ ಅನುದಿನ ಸೇರಿಸೆನ್ನನು ಭಕ್ತಕೂಟದಿ ಗಾರು ಮಾಡುವುದುಚಿತವೇ ಹರಿ ಭವ ಸಮುದ್ರದಿ ಅ.ಪ. ತಾಪ | ನಾನಾರಿಗುಸುರಲೊ ಒಡಲ ದುಃಖವ ಭೂಪ | ನೀನಲ್ಲದಿಲ್ಲವೊ ಭವ ಶ್ರೀಪ | ತೋರದಿರು ಕೋಪ ಘುಡು ಘುಡುಸಿ ನೀ ಎನ್ನ ಬೆದರಿಸೆ ತಡೆವೆನೇ ನಿನ್ನ ಕೋಪದಗ್ನಿಗೆ ಬಿಂಕ ಎನ್ನೊಳು ತಡೆಯೊ ಎನ್ನ ದುರುಳತನಗಳ ಕಡುಕರುಣಿ ನೀನಲ್ಲವೆ ಹರಿ ಒಡಲೊಳಗೆ ಪ್ರೇರಕನು ನೀನೆ ನಡಸಿದಂದದಿ ನಡೆವೆನಲ್ಲದೆ ಒಡೆಯ ಎನ್ನ ಸ್ವತಂತ್ರವೇನೊ? 1 ದುರುಳತನದಲಿ ದೈತ್ಯ | ಭೂವಲಯವೆಲ್ಲವ ಉರವಣಿಸಿ ದುಷ್ಕುತ್ಯ | ಎಸಗುತಿರೆ ದುಃಖದಿ ಸುರರು ಮೊರೆಯಿಡೆ ಸತ್ಯ | ದೃಢಮನದಿ ಭೃತ್ಯ ಕರಕರೆ ಪಿತ ಬಡಿಸುತಿರಲು ದೊರೆಯೆ ನೀ ಪೊರೆ ಎಂದು ಮೊರೆಯಿಡೆ ಸರ್ವವ್ಯಾಪಕನೆಂದು ತೋರಲು ತ್ವರಿತದಲಿ ಕಂಭದಲಿ ಬಂದು ಸರಸಿಜವು ಕಂಗೆಡುವೊ ಕಾಲದಿ ಧರಿಸಿ ತೊಡೆಯ ಮೇಲಸುರ ಕಾಯವ ಕರುಳ ಬಗೆದು ಮಾಲೆ ಧರಿಸಿ ಪೊರೆದೆಯೊ ಸ್ತುತಿ ಕೇಳಿ ಬಾಲನ 2 ಅಜಭವಾದಿಗಳೆಲ್ಲ | ಸ್ತುತಿಸಿದರೆ ಮಣಿಯದ ಭುಜಗಶಾಯಿ ಶ್ರೀ ನಲ್ಲ | ನಾ ನಿನ್ನ ಸ್ತುತಿಸಿ ಭಜಿಸಲಾಪೆನೆ ಕ್ಷುಲ್ಲ | ಮಾನವನ ಸೊಲ್ಲ ನಿಜಮನವ ನೀ ತಿಳಿದು ಸಲಹೊ ಕಮಲ ತೋರಿ ಕುಜನನಲ್ಲವೊ ಹಿರಿಯರೆನಗೆ ಪಥ ತೋರುತಿಹರೊ ರಜ ತಮವ ದೂರಟ್ಟಿ ಶುದ್ಧದಿ ಭಜಿಸುವಂದದಿ ಕೃಪೆಯ ಮಾಡಿ ಸುಜನರೆನ್ನನು ಪಾಲಿಸುತ್ತಿರೆ ನಿಜದಿ ಗೋಪಾಲಕೃಷ್ಣವಿಠ್ಠಲ3
--------------
ಅಂಬಾಬಾಯಿ
ನಾರಾಯಣ ಉದಿಸುವನೆಂದು ಆ ಪೂರ್ವಾಂತರ್ಯಾಮಿ ಅವರ ಸಲಹಲು ಸರ್ವದಾ ಅಪೂರ್ವ ತೇಜೋವಂತನಾಗಿ ಅವರ ಹೃದಯದಿ ಸೂರ್ಯತೇಜದಿ ಮೆರೆಯುತಿರುವ ಸರ್ವದಾ ಎಂದು ಅಪೂರ್ವ ಜ್ಞಾನದಿ ನೆನಯುತಿರಿ ಹರಿಭಕ್ತರು 1 ಎದ್ದು ಮುಖ ತೊಳೆದು ನಿಮ್ಮಲ್ಲಿದ್ದ ಕಲ್ಮಷ ತೊಳೆದು ನಿಮ್ಮ ಶುದ್ಧ ಮನದಲಿ ನೆನೆದು ನಿಲಿಸಿ ಹರಿ ಧ್ಯಾನದಿ ಸ್ನಾನಾನ್ಹೀಕಬದ್ಧಕಂಕಣರಾಗಿ ಬ್ರಾಹ್ಮೀಮುಹೂರ್ತದಲಿ ಗೈಯೆ ನಿಮ್ಮಲ್ಲಿದ್ದ ಕಲ್ಮಶವೆಲ್ಲ ಕಳೆದತಿ ಹರ್ಷವೀವ ನಿಮ್ಮ ಶುದ್ಧಾಚರಣೆಗೆ ಮೆಚ್ಚಿ ನಿಮ್ಮ ಭಕ್ತಿಗೆ ನಿತ್ಯ ಬದ್ಧ ಕಂಕಣರಾಗಿ ಸ್ತುತಿಸೆ ನಿತ್ಯ ಹರಿ ಭಕ್ತರು 2 ಮಾಧ್ಯಾನ್ಹಿಕಾದಿಗಳಾಚರಿಸುತ ಹರಿಯ ಮಧ್ಯವರ್ತಿಯನೆನಿಸಿ ಆ ಸೂರ್ಯನಂತರ್ಯಾಮಿ ನಾರಾಯಣನಿ- - ಗಘ್ರ್ಯಪಾದ್ಯವನಿತ್ತು ಸುಭೋಜನವ ಮಾಡಿ ನಿಮ್ಮ ಪೂರ್ವಜರನುಗ್ರಹದಿ ಮಜ್ಜನ್ಮಸಾರ್ಥಕವೆಂದಾವನರಿವನೋ ಅವನ ಹೃದಯ ಮಧ್ಯವರ್ತಿಯಾಗಿದ್ದು ಕಾವ ಸದ್ಗುಣೋಪೇತ ಭಕ್ತರ ಕೈ ಬಿಡ ಮಧ್ವಾಂತರ್ಗತ ಶ್ರೀ ಶ್ರೀನಿವಾಸ ಅವನ ಮನದಿ ನೆನೆಯಿರಿ ಹರಿ ಭಕ್ತರು 3 ಜವÀನ ಬಾಧೆಯು ಇಲ್ಲ ಹರಿ ಭಕ್ತರಿಗೆ ಯವನ ರೂಪದ ಕಲ್ಕಿ ಹರಿಯ ನೆನೆವರಿಗೆ ಜವದಿ ಯಮನಾಳ್ಗಳು ಮುಟ್ಟಲಂಜುವರು ಹರಿಭಕ್ತರನು ಕವಿ ನಾರಾಯಣನ ಧ್ಯಾನಿಪರಿಗೆ ಅವನಿಯೊಳು ಭಯವಿಲ್ಲ ಅವರಿಗೆ ಸಮನಿಲ್ಲ ಅವರಲ್ಲಿ ಹರಿಯಿದ್ದ ಕಾರಣದಿ ಜವದಿ ಹರಿ ದಾಸರೆಲ್ಲ ಶ್ರೀ ಶ್ರೀನಿವಾಸನ ಭಕ್ತರ ಸಂಗದೊಳಿರಿ ಹರಿಭಕ್ತರು 4 ಯಾರ ಭಯವಿಲ್ಲ ಹರಿ ನಾಮಕೆ ದಾರಿ ಹೋಕರು ಬಾರರಿದಕೆ ಭಾರವಿಲ್ಲವು ಮನಕೆ ಸಂಸಾರಭಯವಿಲ್ಲವರಿಗೆ ಹರಿ ಎಂಬುದನೆ ಸಕಲ ಕಾರ್ಯವ ನಿರ್ವಹಿಸುವನೆಂದರಿತವರಿಗೆ ಯುಕುತಿ ಬುದ್ಧಿಯು ಯಾತಕೆ ಯಾರ ಭಯವೇಕೆ ಹರಿಸಖರಾಗಿರಲವರಿಗೆ ಅಂಜಿಕೆಯಾಕೆ ಯಾರನಾಶ್ರಯಿಸುವ ಶ್ರಮವಿಲ್ಲ ಇದನರಿತು ಹರಿಭಕ್ತರು ಶಕುನ ಅಪಶಕುನವೆನ್ನರು ಮನದಿ ಯುಕುತಿಯ ಮಾಡರು ಪರರ ಬೇಡೆ ಶ್ರೀ ಶ್ರೀನಿವಾಸ ಭಕ್ತರು ಅವರ ಮತ ಹಿಡಿದು ಬದುಕಿ ಹರಿಭಕ್ತರು 5 ಜತೆ ಕರುಣಾಕರ ಹರಿಭಕ್ತರಭಿಮಾನಿ ವರದಭಯ ಹಸ್ತವ ಕೊಡುವ ಶ್ರೀ ಶ್ರೀನಿವಾಸ
--------------
ಸರಸ್ವತಿ ಬಾಯಿ
ನಾರಾಯಣ ಎನ್ನಿರೊ ನರಹರಿ ನಾರಾಯಣ ಎನ್ನಿರೊ ಪ. ನಾರದ ವಂದಿತ ನಗೆಮೊಗ ಚನ್ನಿಗ ಅ.ಪ. ಆದಿ ಪ್ರಹ್ಲಾದನ ಮೋದದಿ ಪೊರೆದನ ಸಾಧಿಸಿ ಅಂತ್ಯದಿ ಅಜಮಿಳನಂತೆ 1 ಕರುಣವ ಬೀರುತ ಕರೆದು ಮಾರುತಿಯನ್ನು ಶರಣನ ಮಾಡಿದ ನಿರುತ ಶ್ರೀರಾಮನ 2 ಮುದ್ದು ಭೀಮಾರ್ಜುನರಲ್ಲಿದ್ದು ರಣದೊಳಾಗ ತಿದ್ದಿ ತಾ ಹೃದಯದೊಳಗಿದ್ದ ಶ್ರೀ ಕೃಷ್ಣರನ್ನ 3 ಮಧ್ವಮುನಿಯೊಳಗಿದ್ದ ಮನ ಮಧ್ವಮತವ ಗೆದ್ದ ಮುದ್ದು ಮಧ್ವಪತಿಯ ನೀವು 4 ಅಖಿಳಾಂಡನಾಯಕ ಸಖನಾದ ಪಾಂಡವರಿಗೆ ನಿಖಿಳಲೋಕದ ಪ್ರಿಯ ಭಕ್ತರ ಸಖನಾಗುವ ಶ್ರೀ ಶ್ರೀನಿವಾಸನೆಂದು 5
--------------
ಸರಸ್ವತಿ ಬಾಯಿ
ನಾರಾಯಣ ಕೃಷ್ಣ ಬೆಳಗಾಯಿತೇಳಯ್ಯ ಮೂರು ಲೋಕಂಗಳಿಗೆ ಮಂಗಳವ ಬೀರಯ್ಯ ಪ ಹರಿಹರಿ ಶ್ರೀನಿಲಯ ಪರವಾಸುದೇವ ಅ.ಪ ಬಂದಿರುವರೈ ಬ್ರಹ್ಮ ರುದ್ರೇಂದ್ರರು ತಂದೆ ತಂದಿರುವರೈ ಮಹನಿಧಿ ಕನಡಿ ಧೇನುಗಳ ನಿಂದು ಗಾನವಮಾಡುತಿರುವರಾನಂದದಿ ಗಂಧರ್ವರಪ್ಸರೆಯರಿಂದು ಕುಣಿದಾಡಿ ಕೂಡಿ 1 ದಾಸರೊಡೆ ತುಂಬುರರು ನಾರದರು ಜಯಜಯ ಶ್ರೀಶನೇ ಕೇಶವ ಗಜವರದ ಎಂದು ಆಶ್ರಯಿಸಿ ಚರಣಕ್ಕೆ ಶರಣೆಂದು ಮಣಿಯವರು ದೋಷನಾಶನ ಲೋಕಕಲ್ಯಾಣ ತ್ರಾಣ 2 ಪತಿವ್ರತಾ ಸ್ತ್ರೀಯರುಗಳತಿಶಯ ಮಡಿಯುಟ್ಟು ಹಿತವಾದ ಹುಗ್ಗಿ ಸಜ್ಜಿಗೆಯ ಗೈದು ಪತಿತಪಾವನ ನಿನಗೆ ದಧ್ಯನ್ನ ನೀಡುವರೊ ಕ್ಷಿತಿನಾಥ ನೀನವನು ತೋಷದಿಂ ಭುಜಿಸೊ 3 ರೋಗರುಜಿನಗಳಳಿದು ಆಯುವೃದ್ಧಿಯದಾಗಿ ಭಾಗವತ ಸಕುಟುಂಬ ಸಂತೋಷಗೂಡಿ ಭಾಗವತ ಭಾರತ ರಾಮಾಯಣಗಳ ಹಾಡಿ ಆಗಲೈ ಆಗಮಾರ್ಚನೆ ಆಲಯಗಳೊಳಗೆ 4 ಕಮಲಲೋಚನ ಕೆಟ್ಟ ಸ್ವಪ್ನ ಫಲವಳಿಸಿ ಯಮಕಂಟವಂ ಕಳೆದು ಭ್ರಮೆಗಳನು ನೀಗಿ ಸುಮನಸರ ಕೂಡಿ ಶ್ರೀಹರಿಯ ಗುಣಗಾನ ಮಾಡಿ ಅಮಿತ ಅಮೃತವುಣಿಸೈ 5 ಕ್ಷುಧ್ರಪಾಕೀ-ಚೀನ ಕೊಬ್ಬಿ ಛದ್ರಿಸುತು ಭದ್ರತೆಯನಾಡೊಳಗಸ್ಥಿರತೆಗೈಯುತ್ತ ಆದ್ರಿಅಂಬುಧಿ ಮಧ್ಯೆ ಭಾರತಿಯ ನಲಿಸುತ್ತ ಮುದ್ರೆಯುಂ ಧ್ವಜವನುಂ ನಿನ್ನವಾಗಿರಿಸೈ 6 ಕಾಲಕಾಲಗಳಲ್ಲಿ ಮಳೆಬಿಡದೆ ಸುರಿದು ಶಾಲಿಸಂತರ ಧಾನ್ಯ ಎಲ್ಲೆಲ್ಲು ಬೆಳೆದು ಮಹಿಷಿ ಶ್ರೀಲೋಲ ಕರುಣಿಸೈ ಕನಕವೃಷ್ಟಿಯನು 7 ಎದುರು ನೋಡುತ ನದಿಯು ಹರಿವುದು ಸಾಗರಕೆ ಮುದದಿಂದ ತಾವರೆಯು ಸೂರ್ಯನನ್ನು ವಿಧಿವಶದಿ ಪಾಪಿಗಳು ಯಮಲೋಕವನ್ನು ಸುಧೆಸವಿಯೆ ಭಕ್ತರು ಪರಮಪದವನ್ನು 8 ಮಕ್ಕಳಿಲ್ಲದ ಜನರು ಮಕ್ಕಳನು ಹಡೆದು ಲಕ್ಷ್ಮಿಯೊಲವನು ಹಾಡಿ ಜನರೆಲ್ಲ ದುಡಿದು ಭಕ್ತರಾಗುತ ಸರ್ವ ವಣಿಗೆಗಳು ನಡೆದು ಮುಕ್ತರಪ್ಪಂತೆಲ್ಲರ ಮಾಡು ಜಾಜೀಶ 9
--------------
ಶಾಮಶರ್ಮರು
ನಾರಾಯಣ ಕೃಷ್ಣನಂದ ಮುಕುಂದಾ ಪ ನಿನ್ನೆತ್ತಿ ಆಡಿಸಲು ನಂದ ಯಶೋದೆಯಲ್ಲಾ ನಿನ್ನೆಂತು ಸೇವಿಸುವೆ ಪೇಳು ಇಂದಿರೆರಮಣಾ1 ನಿನ್ನ ಸಹಪಾರಿ ಸುಧಾಮನಾನಲ್ಲಾ ನಿನ್ನೆಂತು ಸೇವಿಸಲೊ ಯದುಕುಲೋತ್ತಮನೇ2 ಅಗರು ಚಂದನ ಪರಿಮಳದ್ರವ್ಯಗಳನೆ ತಂದು ಅರ್ಪಿಸಲು ಕುಬುಜೆಯಲ್ಲಾ ಆದರದಿ ಪಾಲ ನೀಡೆ ವಿದುರನಲ್ಲಾ ಅನಂತ ಗುಣಪೂರ್ಣನೇ ಶ್ರೀ ಹರಿ3 ಗೋವುಪಾಲನು ತಂದು | ನಿನಗ ಭಿಷೇಕ ಮಾಡುವೆನೆ ವಿಧ ವಿಧ ಪುಷ್ಪಗಳ ತಂದು ಅರ್ಚಿಸಲು ಪೊಕ್ಕಳೊಳು ಪುಷ್ಪವನೆಪಡೆದಿರುವೆ ಹರಿಯೆ 4 ಕರಿರಾಜ ನಿನ್ನ ಕರೆಯೆ ಕರುಣದಿಂದ ಬಂದೆ ಪ್ರಹ್ಲಾದಗೋಲಿದು ಕಂಬದಲಿ ನಿಂತೇ ದ್ರೌಪದೀ ದೇವಿಗಕ್ಷಯಾಂಬರ ವಿತ್ತೆ ಅಂತೆ ಎನ್ನಪಾಲಿಸೊ ಲಕ್ಷ್ಮೀಕಾಂತನೇ 5 ಪರಿಪಯಲಿಭಕ್ತರ ಪಾಲಿಸಿದೆಯೊ ದೇವಾ ಪರಮ ದಯಾಳುವೆಂದೆನಿಸಿಕೊಂಡೇ ಪರಮ ಪುರುಷನು ನೀನು ಪಾಮರನು ನಾನಹುದೊ ದಾರಿ ಕಾಣದೆ ಇರುವೆ ದಯೆತೋರು ಮುರಾರಿ6 ಭಕ್ತವತ್ಸಲ ನೀನೆ ಭಯನಿವಾರಣ ನೀನೇ ಭಾಗವತಜನಪ್ರಿಯ ನೀನೆ ಸರ್ವರಕ್ಷಕ ನೀನೆ ಶ್ರೀ ವೇಂಕಟವಿಠಲಾ 7
--------------
ರಾಧಾಬಾಯಿ
ನಾರಾಯಣ ಕೃಷ್ಣವಿಠಲ | ಪೊರೆಯ ಬೇಕಿವನಾ ಪ ಕಾರುಣ್ಯನಿಧಿ ನಿನ್ನ | ಮೊರೆಯ ಹೊಕ್ಕವನಾ ಅ.ಪ. ತೈಜಸ ಸೂಚಿ | ಅಂಕಿತವ ನಿತ್ತೇ1 ಮುಕ್ತಿಗಿವು ಸೋಪಾನ | ಭಕ್ತಿವೈರಾಗ್ಯಗಳುತತ್ವ ತರತಮಜ್ಞಾನ | ಉತ್ತಮರೆ ಸೇವೇಕೃತ್ತಿವಾಸನ ತಾತ | ಇತ್ತು ಪೊರವುದು ಇವನಾಮತ್ತನ್ಯನ ಬೇಡೆ | ಉತ್ತರಿಸೊ ಇವನಾ 2 ಸಾಧನ ಸುಸಾಧ್ಯವೆನೆ | ಶ್ರೀಧರನ ನಾಮಸುಧೆಮೋದದಿಂದುಣಿಸಿವಗೆ | ಮೋದಮುನಿವಂದ್ಯನಾದ ಮೂರುತಿ ಗುರು | ಗೋವಿಂದ ವಿಠಲನೆನೀ ದಯದಿ ಬಿನ್ನಪವ | ಆದರಿಸಿ ಸಲಿಸೋ 3
--------------
ಗುರುಗೋವಿಂದವಿಠಲರು
ನಾರಾಯಣ ನರಹರಿ ನಾರದಪ್ರಿಯ ನರಸುರಮುನಿ ವರದಾಯಕ ಧ್ರುವ ವೇದ ಕದ್ದೊಯ್ದವನ ಮರ್ದಿಸಲಿಕ್ಕೆ ಸಾಧಿಸಿ ಬಂದ್ಯೊ ಮಚ್ಛರೂಪನೆ ಮಾಧವ ನೀ ಬಂದು ಕೂರ್ಮನಾಗಿ ನಿಂದು ಮೇದಿನಿಯ ಭಾರವ ತಾಳಿದೆ 1 ಧರೆಯ ಕದ್ದಸುರನ ಕೋರದಾಡಿಂದ ಸೀಳಿ ವರಾಹರೂಪಬಂದು ದೋರಿದೆ ಹಿರಣ್ಯಕಶ್ಯಪ ವಿದಾರಣ ಮಾಡಿ ನೀ ತರಳ ಪ್ರಲ್ಹಾದನ ರಕ್ಷಿಸಿದೆ 2 ವಾಮನ ರೂಪವದೋರಿದೆ ನೇಮದಿಂದಲಿ ಪಿತನಾಜ್ಞೆಯ ನಡೆಸಲು ಸ್ವಾಮಿ ಭಾರ್ಗವರೂಪ ತಾಳಿದೆ 3 ದೇವತೆಗಳ ಸ್ಥಾಪಿಸಲಿಕ್ಕೆ ಬಂದು ದೈತ್ಯ ರಾವಣನ ಕೊಂದ್ಯೊ ಶ್ರೀರಾಮ ನೀ ದೇವಕಿ ಉದರದಲಿ ಜನಿಸಿ ಬಂದು ಕೃಷ್ಣ ಗೋವಳರನ್ನು ಪ್ರತಿಪಾಲಿಸಿದೆ 4 ಪತಿವ್ರತೆಗಳ ವ್ರತ ಅಳಿಯಲಿಕ್ಕಾಗಿ ಬಂದು ಸುಳಹುದೋರಿದೂ ಬೌದ್ದ್ಯರೂಪನೆ ಹತ್ತಿ ಕುದರಿಯ ಒತ್ತಿ ಆಳಲಿಕ್ಕೆ ಮತ್ತೆ ಬಂದೆಯ ಕಲ್ಕಿರೂಪನೆ 5 ಹತ್ತವತಾರ ಧರಿಸಿ ಬಂದು ಕ್ಷಿತಿಯೊಳ ಪತಿತರ ಪಾವನಗೈಸಿದೆ ಭಕ್ತಜನರುದ್ದರಿಸಲಿಕ್ಕೆ ಬಂದು ಶಕ್ತಿಪರಾಕ್ರಮದೋರಿದೆ 6 ಸಾವಿರ ನಾಮದೊಡೆಯ ಸ್ವಾಮಿ ನೀ ಬಂದು ಭಾವಿಸುವರೊಡನೆ ಕೂಡಿದೆ ಭವಭಂಧನ ತಾರಿಸಿ ಮಹಿಪತಿಯ ಪ್ರಾಣ ಪಾವನ ನೀ ಮಾಡಿದೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಾರಾಯಣ ನಾರಾಯಣ ನಾರಾಯಣ ನಾರಾಯಣ ನಾರಾಯಣ ನರಹರಿಯೆ ಪ. ನಾರಾಯಣ ನರಹರಿಯೆ ಹಯವದನ ಸ್ವಾಮಿ ನೀ ಎನಗೆ ದಯವಾಗೊ ಅ.ಪ. ನಿಗಮವ ಕದ್ದೊಯ್ದ ದುಗುಡ ದೈತ್ಯನ ಕೊಂದು ಆಗಮವ ತಂದು ಅಜಗಿತ್ತೆ ಆಗಮವ ತಂದು ಅಜಗಿತ್ತೆ ಹಯವದನ ಆದಿಮೂರುತಿಯೆ ದಯವಾಗೊ 1 ಕೂರ್ಮರೂಪದಿ ಬಂದು ಆ ಗಿರಿಯನೆತ್ತಿದ ಪ್ರೇಮದಿ ಸುರರಿಗಮೃತವ ಪ್ರೇಮದಿ ಅಮೃತವನಿಕ್ಕಿದ ಹಯವದನ ಸ್ವಾಮಿ ನೀ ಎನಗೆ ದಯವಾಗೊ 2 ಕ್ರೋಡರೂಪದಿ ಬಂದು ಮೂಢದೈತ್ಯನ ಕೊಂದು ರÀೂಢಿಯ ನೆಗಹಿ ಜಗಕಿತ್ತೆ ರÀೂಢಿಯ ನೆಗಹಿ ಜಗಕಿತ್ತೆ ಹಯವದನ ಪ್ರೌಢ ನೀ ಎನಗೆ ದಯವಾಗೊ 3 ಶಿಶುವ ಬಾಧಿಸುತಿರ್ದ ಕಶಿಪನ್ನ ಸೀಳಿದಿ ಕುಶಲದಿಂ ಕರುಳ ಮಾಲೆಯ ಕುಶಲದಿಂ ಮಾಲೆ ಧರಿಸಿದ ಹಯವದನ ಬಿಸಜಾಕ್ಷ ಎನಗೆ ದಯವಾಗೊ 4 ವಾಮನರೂಪದಿ ಬಂದು ಭೂಮಿ ಓರಡಿ ಮಾಡಿ ವ್ಯೋಮಕ್ಕೆ ಚರಣವ ನೀಡಿದೆ ವ್ಯೋಮಕ್ಕೆ ಚರಣವ ನೀಡಿದ ಹಯವದನ ವಾಮನ ಎನಗೆ ದಯವಾಗೊ 5 ಕೊಡಲಿಯ ಪಿಡಿದು ಕಡಿದೆ ದುಷ್ಟನೃಪರ ಹಡೆದ ತಂದೆಯ ಮಾತು ಸಲಿಸಿದೆ ಹಡೆದ ತಂದೆಯ ಮಾತು ಸಲಿಸಿದ ಹಯವದನ ಒಡೆಯ ನೀ ಎನಗೆ ದಯವಾಗೊ 6 ಸೀತೆಗೋಸ್ಕರ ಪೋಗಿ ಸೇತುವೆಯ ಕಟ್ಟಿದೆ ಭೂತ ರಾವಣನ ಮಡುಹಿದೆ ಭೂತ ರಾವಣನ ಮಡುಹಿದೆ ಹಯವದನ ಖ್ಯಾತ ನೀ ಎನಗೆ ದಯವಾಗೊ 7 ಗೊಲ್ಲರ ಒಡನಾಡಿ ಬಲ್ಲಿದಸುರÀನ ಕೊಂದು ಮಲ್ಲರೊಡನಾಡಿ ಮಡುಹಿದೆ ಮಲ್ಲರೊಡನಾಡಿ ಮಡುಹಿದ ಹಯವದನ ಫುಲ್ಲಾಕ್ಷ ಎನಗೆ ದಯವಾಗೊ 8 ತ್ರಿಪುರರ ಸತಿಯರಿಗುಪದೇಶವನಿಕ್ಕಿ ತ್ರಿಪುರರನೆಲ್ಲ ಮಡುಹಿದೆ ತ್ರಿಪುರರನೆಲ್ಲ ಮಡುಹಿದ ಹಯವದನ ನಿಪುಣ ನೀ ಎನಗೆ ದಯವಾಗೊ 9 ತೇಜಿಯನೇರಿ ರಾಹುತನಾಗಿ ನೀ ಮೆರೆದೆ ಮೂರ್ಜಗಕ್ಕೆ ಕಲ್ಕಿಯೆಂದೆನಿಸಿದೆ ಮೂರ್ಜಗಕ್ಕೆ ಕಲ್ಕಿಯೆಂದೆನಿಸಿದೆ ಹಯವದನ ಭೋಜ ನೀ ಎನಗೆ ದಯವಾಗೊ 10 ವಾದಿರಾಜರಿಗೊಲಿದು ಸ್ವಾದೆಪುರದಲಿ ನಿಂದು ವೇದದ ಕಥೆಯನರುಹಿದೆ ವೇದದ ಕಥೆಯನರುಹಿದ ಹಯವದನ ಮಾಧವ ನೀ ಎನಗೆ ದಯವಾಗೊ 11
--------------
ವಾದಿರಾಜ