ಒಟ್ಟು 2370 ಕಡೆಗಳಲ್ಲಿ , 104 ದಾಸರು , 1557 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನಸು ನಿನ್ನ ಮೇಲೆ ಬಹಳ-ಕಾಲ |ಅನುಕೂಲಿಸದೊ ಗೋಪಾಲ ಪನಿನ ಕೂಡೆ ಈಗ ಕೂಡುವೆನೆಂದರೆ ಮನೆ-|ಜನರೆಲ್ಲರು ಕೂಡಲೀಸರೊ ಕೃಷ್ಣ ಅ.ಪಗಂಡನೆಂಬವನು ಉದ್ದಂಡ-ಎನ್ನ |ಕಂಡರೆ ಸೇರನುಭಾವಪ್ರಚಂಡ ||ಭಂಡೆ ಅತ್ತೆಯು ಲಂಡೆಅತ್ತಿಗೆಕೇಳೊ |ಕಂಡರಿಬ್ಬರನು ದಂಡಿಸುವರೊ ರಂಗ 1ನೆರೆಹೊರೆಯವರೆನ್ನನೆಲ್ಲ-ಮೈಯ |ನೆರಳ ಕಂಡರೆ ಸೇರರಲ್ಲ ||ಸರಿಸಖಿಯರು ಎಲ್ಲ ಸುಮ್ಮನಿರುವರಲ್ಲ |ಮರೆಮಾತನಾಡಲು ವೇಳೆ ಕೂಡದೊ ರಂಗ 2ಮದುವೆ ಮಾಡುವರೊ ಮನೆಯೊಳು-ನಾಳೆ |ಅದರ ಸಂದಣಿಯ ಹೊಂಚಿನೊಳು ||ಮುದದಿಂದ ಕೂಡುವೆನಾವ ಪರಿಯೊಳು |ಮದನತಂತ್ರದಿಂದ ಪುರಂದರವಿಠಲ3
--------------
ಪುರಂದರದಾಸರು
ಮರವನೇರಿ ಮಡುವದು ಮುಂದಾ ಶ್ರೀ ಕೃಷ್ಣ ಕಾಳಿಶಿರವನೇರಿ ತಾಂಡವವಾಡಿದಾಸ್ಮರಿಸಲವನ ತರುಣಿಯರಿಗೆ ವರವ ಪ್ರಾಣವಿರಿಸಿ ಕೊಟ್ಟುಶಿರದಿಚರಣಗುರುತನಿರಿಸಿ ಪೊರೆದ ಕಾಳಿಂಗನನು ಕೃಷ್ಣ 1ರಜತಗಿರಿಗೆ ಸದೃಶವೆನಿಸಿದ ಶ್ರೀಕೃಷ್ಣ ಯಮ-ಳಾರ್ಜುನವೆಂಬ ಮರವ ಕೆಡಹಿದಅಜಗರನ ನಿಜ ಉರಕೆ ಬಿಜಯಂಗೈದು ಸುಜನೋದ್ಭಾರಿಭಜಿಸೆ ಗೋವ್ರಜವ ಕಾಯ್ದ ಅಜಗರನ ಸೀಳಿ ಕೃಷ್ಣ 2ಚಂದ್ರಮುಖಿಯರುಡುವ ಶೀರೆಯ ಶ್ರೀಕೃಷ್ಣನು ಮರದಿಬಂಧಿಸಿಟ್ಟು ಮಾನಗಳೆವೆಯಾನಂದನನ್ನು ಬಂದು ತುಡುಕಿದಂದು ಫಣಿಯ ಹೊಂದಿಸಿದೆನಂದಗೋಪಿ ಕಂದ ಗೋವಿಂದದಾಸವಂದ್ಯ 3
--------------
ಗೋವಿಂದದಾಸ
ಮರೆಯದಿರು ಶ್ರೀ ಹರಿಯನು ಪ.ಮರೆಯದಿರು ಶ್ರೀ ಹರಿಯ ಮರಣಾತುರದಿ ಮಗನಕರೆದವಗೆ ಸಾಯುಜ್ಯವಿತ್ತ ನಾರಾಯಣನಸ್ಮರಣೆಯನು ಮಾಡುವರಚರಣ ಸೇವಕರಿಂಗೆಪರಮಪದವೀವ ಹರಿಯಅಪದೇವಕಿಯ ಬಂಧುವನು ಪರಿದವನ ಪೂತನಿಯಜೀವರಸವೀಂಟಿದನ ಮಾವನನು ಮಡುಹಿದನಪಾವನ ತರಂಗಿಣಿಯ ಪದನಖದಿ ಪಡೆದವನಗೋವರ್ಧನೋದ್ಧಾರನ ||ದಾವಾನಲನ ಪಿಡಿದು ನುಂಗಿದನ ಲೀಲೆಯಲಿಗೋವತ್ಸ ಗೋಪಾಲ ರೂಪವನು ತಾಳ್ದವನದೇವಮುನಿ ಮುಖ್ಯ ಸುರರಾರಾಧಿಸುವನ ಶ್ರೀ ಪಾದವನುಭಜಿಸು ಮನವೆ 1ಕಂಜಸಂಭವಪಿತನ ಕರುಣಾಪಯೋನಿಧಿಯಕುಂಜರನ ನುಡಿಕೇಳಿ ಒದಗಿದನ ರಣದೊಳು ಧ-ನಂಜಯನ ಜೀವವಂ ಕೃಪೆಯಿಂದ ಕಾಯ್ದವನಆಂಜನೇಯನ ನಾಳ್ದನ ||ರಂಜಿಸುವ ಕೌಸ್ತುಭವಿಭೂಷಣನ ಜಲಧಿಯಲಿನಂಜಿನೊಡೆಯನ ಮೇಲೆ ಮಲಗಿದನ ತಮದೊಳಗೆ ಪ -ರಂಜ್ಯೋತಿಮಯನಾಗಿ ಬೆಳಗುವನಶ್ರೀ ಚರಣಕಂಜವಂ ಭಜಿಸು ಮನವೆ 2ವಾರಿಧಿಯೊಳಾಡಿದನ ವರಗಿರಿಯ ತಾಳಿದನಧಾರಿಣಿಯ ತಂದವನ ದೈತ್ಯನನು ಕೊಂದವನಮೂರಡಿಯಲಳೆದವನ ಮೊನೆಗೊಡಲಿ ಪಿಡಿದವನ ನೀರಧಿಯಬಂಧಿಸಿದನ||ದ್ವಾರಕೆಯನಾಳ್ದವನ ತ್ರಿಪುರಗಳ ಜಗುಳ್ದವನಚಾರುಹಯವೇರಿದನ ಸಕಲ ಸುಜನರ ಪೊರೆವಧೀರ ಪುರಂದರವಿಠಲನ ಚರಣಕಮಲವನುನಂಬಿ ನೀ ಭಜಿಸು ಮನವೇ 3
--------------
ಪುರಂದರದಾಸರು
ಮಾಧವಭವಂತು ತೇ ಮಂಗಳಂಮಧುಮುರಹರತೇ ಮಂಗಳಂಪ.ದಶರಥನಂದನ ತಾಟಕಿಭಂಜನದಾನವ ಸಂಹಾರ ದಯಾನಿಧೇಆದಿದೇವ ಸಕಲಾಗಮ ಪೂಜಿತಯಾದವ ಕುಲಮೋಹನರೂಪಾವೇದೋದ್ಧರ ತಿರುವೇಂಕಟನಾಯಕನಾದಪ್ರಿಯ ನಾರಾಯಣತೇ ನಮೋ ನಮೋ 1ಗೋವಿಂದ ರಾಮಕೃಷ್ಣÀ ನಮೋ ನಮೋಗೋವಿಂದ ಸೀತಾರಾಮ ನಮೋಗೋವಿಂದಮಾಧವಗೋಪಾಲ ಕೇಶವಗೋವಿಂದ ನಾರಸಿಂಹಾಚ್ಯುತ ನಮೋ 2ರಾಮಾಗೋವಿಂದ ರಾಮ ರಾಘವಾರಾಮಾ ರಾಜೀವಲೋಚನಕಾಮಿತ ಫಲದಾಯಕ ಕರಿವರದಾರಾಮಕೃಷ್ಣ ತುಳಸಿವರದಗೋವಿಂದ3
--------------
ತುಳಸೀರಾಮದಾಸರು
ಮಾವನ ಮನೆಯೊಳಗೆ ಕೋವಿದರಿರಬಹುದೆ ? ಪ.ಹಾವ ಹಿಡಿಯಲು ಬಹುದುಹರಣ ನೀಡಲು ಬಹುದು |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬೇವ ಕಿಚ್ಚನು ಹಿಡಿದು ನುಂಗಬಹುದು ||ಭಾವೆಯ ತಂದ ಮನೆಯಲಿ ಜೀವಿಪುದಕಿಂತಸಾವುದೇ ಲೇಸು ಅಭಿಮಾನಿಗಳಿಗೆ 1ಪರರ ಸೇರಲುಬಹುದು ಪತಿತರಲ್ಲಿರಬಹುದು |ಕೊರಳ ಘಾತಕರಲ್ಲಿ ಸೆರಗೊಡ್ಡಬಹುದು ||ತರುಣಿಯ ತಂದೆಯ ಮನೆಯವಾಸಕ್ಕಿಂತ |ತರುಗಿರಿಗುಹೆಗಳಲಿ ಇದ್ದು ಜೀವಿಸಬಹುದು 2ಮಾವ - ಅತ್ತೆಯ ನೊಂದು ಅತ್ತಿಗೆಯು ತಾ ಜರೆದು |ಹೇವವನಿಕ್ಕಿ ಚೂರ್ಣವ ಮಾಡಲು ||ಆವಾಗ ನೋಡಿದರೂ ಎನಗೆ ಹಿತರಿಲ್ಲೆಂದುಮಾವ ಹೊರಗಾಡುವನು ಚಿಕ್ಕ ನುಡಿಗಳನು 3ಒಂದೊಂದು ತೆಂಗಳೂಳು ಬಹುಮಾನ ನಡತೆಗಳು |ಒಂದೆರಡು ತಿಂಗಳೊಳಗೆ ಹಿತವಾದವು ||ಒಂದೊಂದಭದ್ರ ನುಡಿ ಒಳಗೊಳಗೆ ಹುಟ್ಟಿದುವು |ಸಂದೇಹವೇಕೆ ಸಂಸಾರಿಗೂ 4ಈ ಪರಿಯಲುಂಬಂಥ ಅಳಿಯ ಭೋಜನದಿಂದ |ಗೋಪಾಳ ಲೇಸು ಅಭಿಮಾನಿಗಳಿಗೆ ||ಶ್ರೀಪತಿ ನಮ್ಮ ಪುರಂದರವಿಠಲನಈಪರಿಭಜಿಸಿ ಸುಖಿಯಾಗೊ ಮನವೆ* 5
--------------
ಪುರಂದರದಾಸರು
ಯಾಕಿಂತು ಮನಸೋತೆ ಏ ರುಕ್ಮಿಣೀದೇವಿಲೇಖನವ ಬರೆದು ನೀನಾ ಕೃಷ್ಣಗೆಪಲೋಕಮಾನ್ಯಳೆ ನೀನು ಬೇಕಾಗಿ ಮರುಳಾದೆಈ ಕೃಷ್ಣ ಯಾದವರ ಕುಲಕೆ ತಿಲಕಅ.ಪಜನಿಸಿದನು ಮಧುರೆಯೊಳು ದೇವಕಿಯ ಜಠರದಲಿತನಯನೆನಿಸಿದ ಗೋಪಿಗಿವನು ಗೋಕುಲದಿದನುಜೆ ಪೂತನಿಯಳ ಮೊಲೆಯುಂಡು ತೇಗಿದನುಮನೆ ಮನೆಯ ಪಾಲ್ಮೊಸರು ಕದ್ದು ಮೆದ್ದಾ1ತುರುವ ಕಾಯ್ದನ ವನದಿ ತಿರಿಯ ಬುತ್ತಿಯನುಂಡಶಿರಕೊರಳಿಗಾಭರಣ ನವಿಲ್ಗರಿಯ ತುಂಡುತರಳತನದಲಿ ಹಲವು ತರುಣಿಯರ ವ್ರತವಳಿದಕರಿಯನಿವ ಸ್ತ್ರೀಯರುಡುವ ಸೀರೆ ಕದ್ದೊಯ್ದ2ನಂದಗೋಕುಲದಿ ಸಾಕಿದ ಸ್ತ್ರೀಯರನು ಬಿಟ್ಟುಬಂದು ಮಧುರೆಯೊಳು ಮಾತುಳನ ಮರ್ದಿಸಿದಾಚಂದವೆ ಆ ಕುಬುಜೆ ಡೊಂಕ ತಿದ್ದಿಯೆ ನೆರೆದಸಿಂಧುಮಧ್ಯದಿಂzÀಗೋವಿಂದ ಮಾಗದಗಂಜಿ3xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಯಾದವ ಯದುಕುಲ ಬಾಲನೆ ಬಾರೋಮಾಧವಮದನಗೋಪಾಲನೆ ಬಾರೋ ಪಸಾಧುಗಳೊಡೆಯ ಯಶೋದೆ ನಂದನೆ ಬಾರೋಶ್ರೀಧರ ಸುಗುಣ ಶರೀರನೆ ಬಾರೋ ಅ.ಪಮನೆಮನೆಯೊಳು ಮೊಸರ ಕಡೆವರು ಬಾರೋವನಜಾಕ್ಷಿಯರು ಬೆಣ್ಣೆ ಕೊಡುವರು ಬಾರೋತನಯರೊಡನೆ ಚಂಡಿನಾಟವಾಡಲು ಬಾರೋಕೊನೆ ಬೆರಳೊಳು ಪಿಡಿದ ಕೊಳಲನೂದುತ ಬಾರೋ 1ಸುರರುನಾರದರೆಲ್ಲ ಸ್ಮರಿಸುವರ್ ಬಾರೋಕರವಮುಗಿವೆ ನಿನ್ನ ಚರಣಕ್ಕೆ ಬಾರೋನರನಸಾರಥಿಕೃಷ್ಣ ಹರುಷದಿ ಬಾರೋ 2ಪಾಂಡುಪುತ್ರರ ಪಾಲ ಪಾಹಿಯೆಂಬೆನು ಬಾರೋಕಂಡು ರಕ್ಷಿಸೋ ಎನ್ನಕಮಲನಯನ ಬಾರೋಪಂಡರೀಪುರವಾಸ ಚಂಡವಿಕ್ರಮ ಬಾರೋಅಂಡಜವಾಹನಮಾರ್ತಾಂಡನಂತಿಳಿದು ಬಾರೋ 3ಗಂಧಚಂದನ ಪುಷ್ಪದಿಂದ ಪೂಜಿಪೆ ಬಾರೋಸುಂದರ ಚಿನುಮಯ ಮೂರ್ತಿಯೆ ಬಾರೋಮಂದರಧರಮದನಜನಕನೆ ಬಾರೋಇಂದಿರೆಯರಸ ಗೋವಿಂದನೆ ಬಾರೋ 4
--------------
ಗೋವಿಂದದಾಸ
ಯಿದ್ದ ಪಾಂಡವರ ಬಳಿಯ ಶುದ್ಧಮಾನವಮುದ್ದುಮೋಹದ ಮುದ್ದು ಗೆಳೆಯಾ ಪಕರುಗಳ ಬಿಟ್ಟ ಕುರುಗಳ ಕರಮಾ | ಕರದಲಿಆಕಳ ಮೊಲೆಗಳ ಪಿಡಿದೂ | ಸುರಿದುಚ್ಚಪ್ಪರಿದು ಕಂಡಕಟಾವಾಯುಲ್ಲಿ ನೊರೆವಾಲ 1ತುಡುಡಿಯಂಬ ಕಡವಧನಿಗೆ | ಅಡಗಿ ಅಡಗಿಯೊಳತೊಳನಾಡಿಸುತ | ಮಡದಿಯರೆಲ್ಲರು ಮೋಹಸಿ ಕರೆದರೆ |ತುಡುಕಿ ಬೆಂಣ್ಣೆಯ ಮೆದ್ದಕಾಣೆ 2ಒಂದಾಂಲೊಂದೊಂದುಕಡವು| ವೊಂದಿತು ಗೋಪಿಯರಮುಂದಕೆ | ತಂದೆಪುರಂದರವಿಠಲ ರಾಯನ ವಂದಿಸುತ3
--------------
ಪುರಂದರದಾಸರು
ರಂಗ ಕುಣಿದ ಮುದ್ದು ರಂಗ ಕುಣಿದ ಪ.ರಂಗ ಕುಣಿದ ಗೋಪಿಕಂಗಳ ಮುಂದೆಪೊಂಗೆಜ್ಜೆ ರವದೊಳು ಅಂಗಳದೊಳು 1ಗೆಳೆಯರೆಂದೆನಿಸುವ ಎಳೆಮಕ್ಕಳೊಡಗೂಡಿಬಳುಕುತ ಬಾಗುತ ನಲಿನಲಿದಾಡಿ 2ಮೊಳೆವಲ್ಲು ಬಾಯಿಜೊಲ್ಲು ಗಿಳಿಸೊಲ್ಲಿನಿಂದಲಿಕಳಕಳಿಸಿ ನಕ್ಕು ನಗಿಸಿ ಬಿದ್ದೆದ್ದು 3ಸುಳಿಗುರುಳು ಪಣೆಯಲಿ ಒಲಿದಾಡಲುಬಲರಾಮ ತಿದ್ದಿದರಳುತ ಅಳುಕುತ 4ಅರಳೆಲೆ ಮಾಗಾಯಿ ಬೆರಳ ರನ್ನುಂಗುರಕಿರುಗೆಜ್ಜೆ ಭಾರೆಂದು ತರಳರಿಗಿತ್ತು 5ಮಕ್ಕಳ ರತುನ ಶ್ರೀ ಚಿಕ್ಕಕೃಷ್ಣಯ್ಯನುಬೆಕ್ಕಿಗೆ ಬೆದರ್ಯೆವೆ ಇಕ್ಕದೆ ನೋಡಿ 6ನಗುತತಿ ಮುದ್ದಿಸಿ ಬಿಗಿದಪ್ಪಲೆಶೋದೆಯಮಗ ಪ್ರಸನ್ವೆಂಕಟೇಶ ಚಿಗಿದುಡಿಯಲ್ಲಿ 7
--------------
ಪ್ರಸನ್ನವೆಂಕಟದಾಸರು
ರಂಗ ಕೊಳಲನೂದಲಾಗ |ಮಂಗಳಮಯವಾಯ್ತುಧರೆ-ಜ -ಪನಂಗಳು ಚೈತನ್ಯ ಮರೆದು |ರಂಗಧ್ಯಾನಪರರಾದರು ಅ.ಪಬಾಡಿದ ಮಾಮರಗಳು ಗೊನೆಯೊಡೆದವು |ತೀಡುತ ಮಾರುತ ಮಂದಗತಿಗೊಯ್ಯೆ ||ಬಾಡಿದ ಬರಲು ಫಲದ ಗೊಂಚಲು |ಪಾಡಲೊಲ್ಲವಳಿಕುಲಗಳು ||ಹೇಡಿಗೊಂಡವು ಜಕ್ಕವಕ್ಕಿ ಗಿಳಿ ಮಾ-|ತಾಡದೆ ಕಳೆಗುಂದಿದವು ಕೋಗಿಲೆ ||ಓಡಾಟ ವೈರಾಟ ಬಿಟ್ಟು ಖಗಮೃಗ |ಗಾಢ ನಿದ್ರಾವಶವಾದವು 1ಕೆಳಗಿನುದಕ ಉಬ್ಬೇರಿ ಬಂದುವು |ತುಳುಕಿ ಚೆಲ್ಲಾಡಿ ನಿಂದಳು ಯಮುನೆ ||ಮಳೆಯ ಮೋಡೊಡ್ಡಿ ಮೇಘಾಳಿ ಧಾರಿಟ್ಟುವು |ಕಲುಕರಗಿ ಕರಗಿ ನೀರಾದುವು ||ನಳಿನಚಂಪಕನಾಗಪುನ್ನಾಗಪಾ-|ಟಲ ಸೇವಂತಿಗೆ ಕುಂದ-ಮೊಲ್ಲೆ ಮಲ್ಲಿಗೆ ಬ-||ಕುಲ ಮಾಲತಿ ಜಾಜಿ ಪರಿಮಳಗೂಡಿ |ನೀಲಾಂಗನಂಘ್ರಿಗೆ ನೆರೆದುವು 2ಕೆಚ್ಚಲು ಬಿಗಿದು ತೊರೆದ ಮೊಲೆಯೊಳು |ವತ್ಸದೊಡಲಾಸೆಜರಿದುಎಳೆಹಲ್ಲ||ಕಚ್ಚದಲ್ಲಿಗಲ್ಲಿ ನಿಂದುವು ತಮ್ಮಯ |ಪುಚ್ಚವ ನೆಗಹಿ ನೀಂಟಿಸಿ ||ಅಚ್ಯುತನಾಕೃತಿ ನೋಡಲು ಸುರರಿಗೆ |ಅಚ್ಚರಿಯಾಯಿತು ಆವು ಕಂಡಾನಂದ ||ಪೆಚ್ಚಿ ಮುಕುಂದನ ಲೀಲಾವಿನೋದಕೆ |ಮೆಚ್ಚಿ ಕುಸುಮವ ಸುರಿದರು 3ಮುದ್ದು ಮೋಹನನ ಮಂಜುಳ ಸಂಗೀತ |ಸದ್ದನಾಲಿಸಿ ಗೋಪಾಂಗನೆಯರೆಲ್ಲ ||ಬುದ್ಧಿ ಸೂರಾಡಿ ತಮ್ಮಾಲಯವನೆ ಬಿಟ್ಟು |ಎದ್ದು ಪರವಶರಾದರು ||ಸಿದ್ದ ಮುನಿಜನರಿದ್ದ ಸಮಾಧಿಯಿಂ-|ದೆದ್ದೆದ್ದು ಕುಣಿದೆದ್ದರು ಎದುರಾಗಿ ||ಗದ್ದುಗೆಯರಸನ ಒಲಿಸಿಕೊಂಡರು |ಗೆದ್ದರು ಭವದ ಸಮುದ್ರವನು 4ಶ್ರೀಮನೋಹರ ಗೋಪಾಲ ಮೂರುತಿ |ಆ ಮಧು ಕುಂಜ ವನದಿ ತ್ರಿಭಂಗಿಯಲಿ ||ಹೇಮಾಂಬರವುಟ್ಟು ಗೀರುಗಂಧ ಕಸ್ತೂರಿ |ನಾಮ ಮುಕುಟದ ಬೆಳಕಿನಲಿ ||ದಾಮವನಮಾಲೆ ಶ್ರೀವತ್ಸಕೌಸ್ತುಭ|ಸ್ವಾಮಿ ಪುರಂದರವಿಠಲರಾಯನ |ರಾಮಶ್ರಿ-ಗುಂಡಶ್ರಿ ಮೇಘರಂಜನೆ ಪಾಡಿ |ಸಾಮಗಾನಪ್ರಿಯ ನಮೊ ಎಂದರು 5
--------------
ಪುರಂದರದಾಸರು
ರಂಗ ಬಾ ಮೋಹನಾಂಗ ಬಾ ದೇವೋತ್ತುಂಗ ಬಾರೆಂದು ಕರೆದಳುಗೋಪಿಪ.ಚೀರುತ ಬಂದ ಚಿನ್ನ ಹಸಿದನೆಂದುಘೃತಕ್ಷೀರವೆರೆಸಿ ಕೊಟ್ಟರೆ ಒಲ್ಲದೆಚೋರತನಕೆ ಮೆಚ್ಚಿ ಪೋಗುವೆ ನಿನ್ನನುದೂರುತ ನಿರುತ ಬಾಹರು ಗೋವಳೆಯರು 1ತುರುಗಾವೊ ನೆವದಲಿ ಪೋಗಿ ಗೋಪಾಲರಕುರುಳಿಗೆ ತುರದ ಬಾಲಕೆ ಗಂಟಿಕ್ಕಿದÀುರುಳತನಗಳನ್ನು ಮಾಡಿ ಮಾಡಿ ಮತ್ತ್ತೆಅರಿಯದಂತೆ ಬಿಕ್ಕಿ ಬಿರಿಯಬೇಡೆಲೆ ಕಂದ 2ಚೆಲ್ಲೆಗಂಗಳೆಯರ ಶಯನಕೆ ಪೊಂದಿಹನಲ್ಲರ ಬಡಿದೋಡಿ ಬರುತಲಿಹೆಸಲ್ಲದು ನಿನಗಿದು ಬಾಲಕತನದೊಳುಫುಲ್ಲಲೋಚನ ಮುದ್ದು ಗೋಪಾಲಕೃಷ್ಣ 3ಶಕಟ ಪೂತನಿತೃಣಾವರ್ತಮೊದಲಾದಶಕುತ ದನುಜರ ಮರ್ದನ ಕೃಷ್ಣಯ್ಯಭಕುತರ ಬವಣೆಯನಳಿಯದಿದ್ದರೆ ಗಡಸಕಲರುಜಾರಚೋರೆಂದು ಸಾರುವರೊ4ಎನ್ನ ಬೇಡು ನೀ ಮನದಣಿ ನೀಡುವೆಅನ್ಯರ ಮನೆಗೆ ಪೋಗಲಿ ಬೇಡವೊಚಿನ್ಮಯ ಮೂರುತಿ ಪ್ರಸನ್ವೆಂಕಟ ಕೃಷ್ಣನನ್ನಾಣೆ ಮನೆಯ ಬಿಟ್ಟಗಲದಿರೊ 5
--------------
ಪ್ರಸನ್ನವೆಂಕಟದಾಸರು
ಲಾಲಿಲಾಲಿ ನಮ್ಮ ಹರಿಯೆಲಾಲಿ ಸುರ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನರರಿಗೆ ಒಲಿದು ಕರುಣವ ಬೀರುವ ದೊರೆಯೆಲಾಲಿಪ.ರಾಮಲಾಲಿ ಮೇಘಶ್ಯಾಮಲಾಲಿಮಾಮನೋಹರಅಮಿತ ಸದ್ಗುಣಧಾಮಲಾಲಿ1ಕೃಷ್ಣಲಾಲಿ ಸರ್ವೋತ್ಕøಷ್ಟಲಾಲಿದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆವ ಸಂತುಷ್ಟಲಾಲಿ2ರಂಗಲಾಲಿ ಮಂಗಳಾಂಗಲಾಲಿಗಂಗೆಯ ಪಡೆದತುಂಗಮಹಿಮ ನರಸಿಂಗಲಾಲಿ3ನಂದಲಾಲಿ ಗೋಪಿಕಂದಲಾಲಿಮಂದರಗಿರಿಧರ ಮಧುಸೂದನ ಮುಕುಂದಲಾಲಿ4ಶೂರಲಾಲಿ ರಣಧೀರಲಾಲಿಮಾರನಯ್ಯ ನಮ್ಮ ಪುರಂದರವಿಠಲಲಾಲಿ5
--------------
ಪುರಂದರದಾಸರು
ವನಜನಾಭನ ಧಾಳಿ ಘನವಾಯಿತಿಂದಿಲಿಂದಮನೆಯೊಳು ನಿಲ್ಲಲಾರೆವಮ್ಮ ಪಚಿನ್ನನ ಸುದ್ದಿನಿತ್ಯಹೇಳುವರು ಹತ್ತರಗೂಡಾ |ಹನ್ನೊಂದೆನ್ನ ಬೇಡವಮ್ಮ ||ಅನ್ಯಾಯದ ಮಾತುಹುಸಿಹುಟ್ಟಿಸಿಯಾಡಿದರೆ ನಮ್ಮ |ಸಣ್ಣವರಾಣೆ ಗೋಪೆಮ್ಮ 1ಪೋರರಾಟಿಕೆಯಾದರೆ ಜನನೋಡೆ ನಿರ್ಭಯದಿ |ಕ್ಷೀರವ ಕುಡಿಯಬೇಕಮ್ಮ ||ಆರೂ ಮನೆಯೊಳಿಲ್ಲದ ಸಮಯದಲ್ಲಿ ಪಾಲು |ಸೋರೆ ಕದ್ದೊಯ್ಯುತಿದ್ದನಮ್ಮ2ಚಿಕ್ಕವರನ್ನು ರಂಬಿಸಿ ಸಕ್ಕರೆ ಕೊಟ್ಟು ಕದ್ದು |ರೊಕ್ಕವ ತನ್ನಿರೆಂಬುವನಮ್ಮ ||ಮಕ್ಕಳಾಟಿಕೆ ಆದರಾಯಿತೆ ನಿನ್ನ ಕಂದ |ರೊಕ್ಕವನೇನು ಮಾಡ್ಯಾನಮ್ಮ 3ಏಕಾಂತ ಮನೆಯೊಳು ಸರು ಹೊತ್ತಿನಲ್ಲಿ ಬಂದು |ಶ್ರೀಕಾಂತನಡಗಿದ್ದನಮ್ಮ ||ಹೇ ಕಾಂತೆ ನಿನ್ನ ಸಲಿಗಿಲ್ಲದೆಂತು ಬಂದನೆಂದು |ಆ ಕಾಂತ ಸಂಗ ಬಿಟ್ಟನಮ್ಮ 4ನೀರೊಳು ನೆರಳೆಂದು ತಿಳಿಯದ ಮಗುವಿಗೆ |ಪೋರನೆಳೆದು ತಾಯಂಬೊನಮ್ಮ ||ಹಾರುತಿರಲು ಸ್ವಾಮಿಯ ದಯೆಯಿಂದ ಕಂಡು ಒಬ್ಬ |ನಾರಿ ಕರಕೊಂಡು ಬಂದಳಮ್ಮ 5ತರಳರಿಗೆಲ್ಲ ಇದರಂತೆ ಹತ್ತಿರೆಂದು ಹೇಳಿ |ಹರಿವಂದು ಹತ್ತಿಕೊಂಬೊನಮ್ಮ ||ಕರುಗಳೆಲ್ಲವು ಹೀಗೆ ಹತವಾಗಿ ಪೋಪವು |ತುರುಗಳ ಗಡಹವಮ್ಮ6ಬಾಲನ ಮನೆಯೊಳಗಿರ ಹೇಳಿ ಉದಕವ |ವಾಲಯಕೆ ತರಹೋದೆನಮ್ಮ ||ಮೂಲೇಶ ಹುಡುಗನ ಕೈಯಕಟ್ಟಿಮನೆಯೆಲ್ಲ |ಹಾಳು ಮಾಡಿಯೇನೋ ತಂದನಮ್ಮ 7ಹುಡುಗರ ಅಂಬೆಯಾಗಿಯೇರಿಸಿಕೊಂಡಾಡಿಸಿ |ಕೆಡಹಿ ಕೈಕಾಲು ಮುರಿದನಮ್ಮ ||ಬಡವರೆಂದರೆ ಪುನಃ ಬಿಡದಲೆ ತಾ ಹತ್ತಿ |ನಡುವ ನೋಯಿಸೀಹ ನೋಡಮ್ಮ 8ಬಾಲೆ ಅದೇನು ಕಾರಣವೋ ತಿಳಿಯದು ನಮ್ಮ |ಮೂಲೆಯಲಡಗಿದ್ದನಮ್ಮ ||ಛೀ ಲಕುಮೀಶ ನಡೆಯೆಂದೆ ಕೈ ಸಂಧಿಸದಾಕಳ |ಮೊಲೆ ಉಂಡಿದ್ದನಮ್ಮ 9ಗಂಡಅತ್ತೆಯ ಮನೆಘೋಗಿ ನಡುವ ಹೆಣ್ಣಾ |ಪುಂಡ ಬಂದಪ್ಪಿಕೊಂಡನಮ್ಮ ||ಕಂಡು ನಾನಿದು ತರವೇನೆಲೆ ರಂಗಾಯೆನ್ನಲು |ಭಂಡು ಮಾಡಿದನು ನೋಡಮ್ಮ 10ಭ್ರಷ್ಟ ಮಾತಲ್ಲವೆ ಬಾಣಂತಿ ಮಂಚದಡಿ ಕೆಂಡ- |ವಿಟ್ಟರೆ ಕಾಸಿಕೊಂಡನಮ್ಮ ||ಥಟ್ಟನೆ ಕಂಡಂಜಿ ಪ್ರಾಣಾಂತಿಕ ಆಯಿತು ಪ್ರಾಣೇಶ |ವಿಠಲನಿಂಥವ ಕಾಣಿರಮ್ಮ 11
--------------
ಪ್ರಾಣೇಶದಾಸರು
ವಾದಿರಾಜ ಮುನಿಪ ಹಯಮುಖನೀ ದಯದಲಿ ತವ ಪಾದಧ್ಯಾನವನುಮೂಷಕಬಿಲದಿಂದ ಉದರ ಪೋಷಕ ಬರಲಂದುಮುಂದೆ ಭೂತನರನ ಪ್ರೇರಿಸಿ ಹಿಂದೆ ಒಬ್ಬ ನರನಶಾಸ್ತ್ರ ಪ್ರಸಂಗದಲಿ ನಾರಾಯಣಭೂತರ ಗೆಲಿದಲ್ಲೆತುರಗವದನಪಾದಭುಜ(ದಲಿ)ಗಳಲಿಆ ಮಹಾ ಗೋಪಾಲವಿಠಲ ತಾಮರಸದಳಗಳ
--------------
ಗೋಪಾಲದಾಸರು
ವಾಸೂಕಿ ಶಯನ ಅಶೋಕ ಪರಾಕೂ |ವಾಸುದೇವಾನಿರುದ್ಧ ಶ್ರೀ ಕೃಷ್ಣ ಪರಾಕೂ ||ಸಾಸಿರನಾಮದ ಹರಿಯೆ ಪರಾಕೂ |ದೋಷರಹಿತ ರಘುಪತಿಯೆ ಪರಾಕೆಂದು ||ಮೀಸಲಾರುತಿಯಾ ಬೆಳಗೀರೆ ಪವೃಂದಾವನದೊಳಗಿಹನೆ ಪರಾಕೂ |ತಂದಿ ತಾಯ್ಗಳ ಬಿಡಿಸಿಹನೆ ಪರಾಕೂ ||ಸಿಂಧುರವರದ ಗೋಪಾಲ ಪರಾಕೂ ||ಸಿಂಧುಶಯನಪದ್ಮನಾಭಪರಾಕೆಂದು ||ಛಂದದಲಾರುತಿಯಾ ಬೆಳಗೀರೆ1ಸತ್ಯಾಭಾಮಿ ರುಗ್ಮಿಣಿ ರಮಣಾ ಪರಾಕೂ |ಮುತ್ಯಗ ಪಟ್ಟಗಟ್ಟಿದವನೆ ಪರಾಕೂ ||ಭಕ್ತ ಪೋಷಕ ತ್ರಿವಿಕ್ರಮನೆ ಪರಾಕೂ |ಸತ್ಯಸಂಕಲ್ಪಹೃಷಿಕೇಶ ಪರಾಕೆಂದು ||ಮುತ್ತಿನಾರುತಿಯಾ ಬೆಳಗೀರೆ 2ಮಾಧವಖರ ದೂಷಣಾರಿ ಪರಾಕೂ |ಬಾದರಾಯಣಪುರುಷೋತ್ತಮ ಪರಾಕೂ ||ಯಾದವರೊಳು ಪುಟ್ಟಿದನೆ ಪರಾಕೂ |ವೇದ ಉದ್ಧರ ಮತ್ಸ್ಯರೂಪಿ ಪರಾಕೆಂದು ||ಮೋದದಲಾರುತಿಯಾ ಬೆಳಗೀರೆ3ಇಂದ್ರ ಬಲಿಯನುಂಡಾ ಧೀರ ಪರಕೂ |ಕಂದಗೊಲಿದ ನರಸಿಂಹ ಪರಾಕೂ ||ನಂದನಂದನಶೌರಿಪರಾಕೂ |ಮಂದರಪರ್ವತ ಧರನೆ ಪರಾಕೆಂದು ||ಕುಂದಣದಾರುತಿಯಾ ಬೆಳಗೀರೆ 4ಜಟ್ಟೇರ ಹುಡಿಗುಟ್ಟೀದವನೆ ಪರಾಕೂ |ದುಷ್ಟ ಕಂಸನ ತರಿದವನೆ ಪರಾಕೂ ||ಕೆಟ್ಟಾಜಾಮಿಳಗೊಲಿದವನೆ ಪರಾಕೂ |ಅಷ್ಟು ಲೋಕವ ಸಲಹುವನೆ ಪರಾಕೆಂದು ||ತಟ್ಟಿಯೊಳಾರುತಿಯಾ ಬೆಳಗೀರೆ5ಮಾರನಯ್ಯಾ ಪ್ರಾಣೇಶ ವಿಠಲ ಪರಾಕೂ |ನೀರಜಾಂಬಕ ಶ್ರೀನಿವಾಸ ಪರಾಕೂ ||ದ್ವಾರಕಿನಿಲಯಮುರಾರೆ ಪರಾಕೂ |ಕ್ಷೀರಾಬ್ಧಿ ಸುತಿಯ ವಲ್ಲಭನೆ ಪರಾಕೆಂದು ||ನಾರಿಯರಾರುತಿಯಾ ಬೆಳಗೀರೆ 6
--------------
ಪ್ರಾಣೇಶದಾಸರು