ಒಟ್ಟು 1103 ಕಡೆಗಳಲ್ಲಿ , 93 ದಾಸರು , 906 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದೆಂದಿಗೂ ನಾ ಬಿಡೆ ನಿನ್ನ ಚರಣಾ ಬಂದೆನ್ನ ಕಾಯೊ ಶ್ರೀ ವೇಂಕಟರಮಣಾ ಪ ಪಟ್ಟಿ ಪೀತಾಂಬರ ತೊಟ್ಟ ಮುತ್ತಿನ ಹಾರಾ ವೈಜಯಂತಿ ಸುಂದರ ವದನ ಶುಭಾಂಗ ಮನೋಹರಾ ಮಕರ ಕುಂಡಲಧರ ಮೋಹನ ರೂಪಾ1 ನಿತ್ಯ ಕಲ್ಯಾಣನೆ ನಿಗಮ ಗೋಚರನೆ ಅಕಳಂಕ ಚರಿತನೆ ಸಕಲರಪಾಲಿಪ ಅನಂತ ರೂಪಾ ಶ್ರೀ ವೆಂಕಟೇಶಾ2 ಪರಮ ಕಲ್ಯಾಣ ಗುಣಾರ್ಣವನೇ ದುರಿತ ವಿದೂರನೆ ಪರಮದಯಾ ನಿಧೆ ವರಗಿರಿವಾಸಾ 3 ಘಾಸಿ ಗೊಂಡಿಹೆ ಭರದಿ ಕ್ಲೇಶ ಪಾಶಂಗಳ ಪರಿಹರಿಸಯ್ಯಾ ವಾಸುದೇವನೆ ನಿಮ್ಮ ನಾಮ ಸ್ಮರಿಸುವಂತೆ ನಿತ್ಯ ಪಾಲಿಸು ಪ್ರಭುವೆ4 ಸುರಮುನಿ ವಂದ್ಯನೇ ಸುರನರ ಸೇವ್ಯನೇ ಶರಣರ ಪಾಲಿಪ ಸರ್ವೋತ್ತಮನೇ ತಿರುಪತಿವಾಸನೆ ತಿರುಮಲೆ ಶ್ರೀಶನೇ ಶೇಶಗಿರೀಶನೆ ಶ್ರೀ ವೇಂಕಟವಿಠಲನೇ 5
--------------
ರಾಧಾಬಾಯಿ
ಎಂದೆಂದು ಎನಗೆ ನೀನೆ ಅಖಿಳದೊಳು ಎಂದೆಂದು ಎನಗೆ ನೀನೆ ಅಂದಿಗಿಂದಿಗೆ ಎನ್ನ ತಂದೆ ತಾಯಿಯು ನೀನೆ ಬಂಧು ಬಳಗವು ನೀಯೆನಗೆ ಹರಿಯೆ ಧ್ರುವ ಸುಖಸೌಖ್ಯದಲಿ ಸದಾನಂದ ಘನ ಬೀರುತಿಹ್ಯ ಭಗುತ ಜನರಿಗಹುದು ನೀ ಪ್ರೀಯ ಸಕಲದೇವಾದಿಗಳ ಕೈಯಲೊಂದಿಸಿಕೊಂಬ ಮಕುಟ ಮಣಿಯಹುದೊ ನೀ ಎನ್ನಯ್ಯ ಲೋಕಾಧಿಲೋಕಪಾಲನೆಂದು ಶ್ರುತಿಸ್ಮøತಿ ಅಖಿಳ ಭುವನದಲೆನ್ನ ಸಾಕಿ ಸಲಹುವ ಸ್ವಾಮಿ 1 ಏಕೋದೇವನೆ ನೀನದ್ವಿತೀಯ ಶ್ರೇಯಧೇನುವಾಗಿ ಸಾರಸಗರವುತಿಹ್ಯ ಸುಖ ದಾಯಕಹುದಯ್ಯ ನೀ ಸಾಕ್ಷಾತ ದಯಕರುಣದಿಂದಭಯಕರ ನಿತ್ಯಸಂಗಪೂರ್ಣ ತೋಯಜಾಕ್ಷ ನೀ ಪೂರ್ಣಪರಮ ಭಕ್ತರ ಪ್ರಾಣ ನಾಯಕನೆ ನೀನೆ ಪ್ರಖ್ಯಾತ ಕ್ಷಯರಹಿತನೆಂದು ಜಯವೆನಿಸಿಕೊಳುತಿಹ್ಯ ದಯಭರಿತನಹುದುಯ್ಯ ಸದೋದಿತ 2 ನೀನೆ ಗತಿಯೆಂದು ಧರೆಯೊಳು ಕೊಂಡಾಡುವ ನೆನಹುತಿಹ್ಯ ನÀಹುದುಯ್ಯ ಬಾಲಕನು ನಾ ನಿನ್ನ ಫನದೊಲವಿನಿಂದ ಪಾವನಗೈಸುತಲಿಹ್ಯ ದೀನ ದಯಾಳು ನೀನೆ ಎನ್ನ ಅನುದಿನದಲಾಧಾರಿ ಮುನಿಜನರ ಸಹಕಾರಿ ನೀನಹುದಯ್ಯ ಜಗಜ್ಜೀವನ ಮನೋಹರನ ಮಾಡುತಿಹ್ಯ ದಾಸ ಮಹಿಪತಿಸ್ವಾಮಿಭಾನುಕೋಟಿಯು ನೀನು ಪ್ರಸನ್ನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಂದೊಡನಾಡುವೆ ಎಂದರ್ಥಿಬಡುವೆ ಎಂದಿಗೆ ತಕ್ರ್ಕೈಸಿ ಸಂತೋಷಬಡುವೆ ಪ ಉತ್ಸವ ಮಂಟಪದೊಳಗೆ ಕುಳಿತು ಭಕ್ತ ವತ್ಸಲನೆಂದು ನುತಿಸಿಕೊಂಬನ ಕೂಡ 1 ಸಕಲ ಭೂಷಿತನಾಗಿ ಅಜಹರ ಸುರಮುನಿ ನಿಕರ ಕೈಯಿಂದ ಸ್ತುತಿಸಿಕೊಂಬನ ಕೂಡ 2 ಆಪೋಹಿಷ್ಠಾ ಮಯೋಭುವನೆಂಬೋ ಮಂತ್ರ ಆ ಪುರೋಹಿತರಿಂದ ಕಲಿತುಕೊಂಬನ ಕೂಡ 3 ನಾಲ್ವತ್ತುಮೂರು ಪದಂಗಳು ಮಾಡೆಂದು ಹೇಳಿದ ಹೇಮಾದ್ರಿ ಶಿಖರಾಕಾರನಕೂಡೆ 4 ದಂಡಿಗೆ ಕರೆದಲ್ಲಿ ಕೊಟ್ಟು ಅಮೃತದ ಕರ ಮಂಡೆಯಲ್ಲಿಟ್ಟ ಮಹಮಹಿಮನ ಕೂಡ 5 ಪಲ್ಲಕ್ಕಿ ಏರಿ ಪವಳಿಯ ಸುತ್ತಿ ಸರ್ರಗೆ ನಿಲ್ಲದೆ ಗುಡಿಪೊಕ್ಕ ನಿರ್ಮಳನ ಕೂಡ6 ವಾರಶನಿ ಚತುರ್ದಶಿ ಕೃಷ್ಣಪುಷ್ಯದಿ ಈ ರೀತಿಯಲಿ ಕೂಡ ಇಂದಿರೇಶನ ಕೂಡ 7 ರೌದ್ರಿ ಸಂವತ್ಸರ ಅರ್ಧರಾತ್ರಿಯಲಿ ಭದ್ರ ಮೂರುತಿಯಾದ ಭವಹರ ಕೂಡ 8 ಗುರುಪುರಂದರ ಉಪದೇಶನ ಬಲದಿಂದ ಸಿರಿ ವಿಜಯವಿಠ್ಠಲನ ಚರಣ ತಕ್ರ್ಕೈಸಿ 9
--------------
ವಿಜಯದಾಸ
ಎನಗೆ ಕಾರಣವೇನು ಪಾಪಕ್ಕೆ ುನ್ನುನಿನಗೆ ಕಾರಣವೆಂಬ ಮಾತಿನ್ನದೇಕೆ ಪಎನ್ನ ಸ್ಟೃಯ ಮಾಡ ಹೇಳಿದೆನೆ ಮತ್ತೆಅನ್ನವನಿತ್ತುಣ್ಣ ಕಲಿಸೆಂದೆನೆಮನ್ಮಥ ನೆಲೆಯಾಗಬೇಕೆಂದೆನೆ ಬೇಗಕನ್ನೆಯೊಬ್ಬಳ ಮುಂದೆ ನಿಲಿಸೆಂದೆನೆ ಸ್ವಾಮಿ 1ಜಾತಾದಿ ಷೋಡಶ ಕರ್ಮಗಳ ನಿತ್ಯಪ್ರೀತಿುಂದಲಿ ಮಾಡಿ ಸ್ವರ್ಗಗಳವೋತು ಪಾಪಗಳಿಂದ ನರಕಗಳ ಹೊಂದಿಯಾತನೆಗೊಳಿಪಂತಾಗೆಂದೆನೆ ವಿಧಿಗಳ 2ಮಡದಿ ಮಕ್ಕಳು ಮನೆವಾರ್ತೆಯೆಂಬ ಬಲುತೊಡಕಿನೊಳನ್ಯರೆನ್ನವರೆಂತೆಂಬಬಡಿಶಕ್ಕೆ ಸಿಲುಕಿಯೊದ್ದಾಡಿಕೊಂಬ ುಂಥಹೆಡಗುಡಿಯನು ಕಟ್ಟಿ ಕೊಲ್ಲೆಂದೆನೆ ಸ್ವಾಮಿ 3ಆಡಿಸಿದಂತೆ ನೀನಾಡುವೆನು ುೀಗನೋಡಿದರಿಲ್ಲ ಸ್ವತಂತ್ರವಿನ್ನೇನುಬೇಡಿಕೊಂಬೆನು ಪಾದಕ್ಕೆರಗೀಗ ನಾನು ನೀನುಕೂಡಿ ರಕ್ಷಿಸಬೇಕು ಕಪಟವಿನ್ನೇನು 4ಸೂತ್ರಧಾರಕ ನೀನು ಸಕಲಕ್ಕೆ ಮಾಯಾಮಾತ್ರವೀ ಜಗವಿದನಾಡಲಿನ್ನೇಕೆಪಾತ್ರ ಕೃಪೆಗೆ ನಾನು ಗುರು ನೀನಾಗಲ್ಕೆ ಸುಪವಿತ್ರ ಚರಿತ್ರ ವೆಂಕಟ ಮರೆಹೊಕ್ಕೆನು 5ಓಂ ಸತ್ಯಭಾಮಾಧವಾಯ ನಮಃ
--------------
ತಿಮ್ಮಪ್ಪದಾಸರು
ಎನ್ನ ಪಾಲಿಸುವದಾಗದೇ|ಸಿರಿ ರಮಣಾ| ಪ್ರಸನ್ನ ವಿಮಲ ಅತುಳ ಶೇಷಗಿರಿಯ ವಾಸಾ ವೆಂಕಟೇಶಾ ಪ ದುರುಳ ದೈತ್ಯನ ಕರುಳ ಬೆರಳ ಸರಳ ಉಗುರಿನಿಂದ ವಿರಳ| ವಿರಳ ಮಾಡಿ ಪೊಸರಂತೆ ಕೊರಳಿಗಾಕಿ ಮರಳೆ| ತರಳಗೊಲಿದು ಹರಣಗಾಯ್ದೆ|ಆದೇಶದಲ್ಲಿ| ಅರಸುತನುವ ಕೊಟ್ಟು ನಿಲಿಸಿದೇ|ಕ್ಷಿತಿಯೊಳಗ| ಪರಮ ನಿಜ ಭಕ್ತನೆನೆಸಿದೇ 1 ನೆಗಳಿ ಬಂಧನ ಬಿಡೆ ಹರಿಗಳರಿಗಳ ಸಂಗಡಿಭಗಳ ಸಮೂ| ಪತಿ ನೀರ್ಗುಡಿಯೆ ಪೋಗಲಾಗಳೆ| ನೆಗಳಿ ಪಿಡಿಯೆ ಶ್ರೀ ಪಾದಗಳ ಯುಗಳ ನೆನಿಯ ಕೇಳದೇ| ಸಕಲ ಪಕ್ಷಿಗಳ ಶ್ರೇಷ್ಠ ನಿಲ್ಲದೊದಸಿದೇ|ಕರುಣದಿಂದ ಸುಗತಿ ಕೊಟ್ಟು ಜನಮ ಹರಿಸಿದೇ2 ಇಳೆಯ ಮದದಿ ದ್ರೌಪತಿಯನು| ತಿಳಿಯದೆಳಿಯೆ ಕಳಿಯೆ ಸೀರೆಯಾ| ಕಳಿಯೆ ಮಾನ ವಿಜಯಗೆಳೆಯ ಇಳೆಯ ಭಾರರ್ಬಳಿಯೆ| ಸುಳಿಯೆ ದಾಟಿಸೆನುತ ನುತಿಸೆ ತ್ವರಿತದೀ|ನೀನು ಸಭೆ| ಯೊಳಗ ಪೊರಯಿಸಿದೇ ವಸ್ತ್ರದೀ|ಮಹಿಪತಿ| ನಂದನೊಡೆಯ ವ್ಯಾಳ್ಯಕ್ಕೊದಗಿದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎನ್ನ ಸಲಹೋ ಚರಣವನ್ನು ದೋರಿ ಪರಮ| ನಿನ್ನ ಕಿಂಕರನೆಂದು ಘನ್ನದಯವನು ಬೀರಿ ಎನ್ನಾ ಪ ಶರಣ ಜನ ಮಾನ ರಕ್ಷಕನೇ ವರಕಮಲ ಕರಕಮಲ ಪದವಿಮಲ ಮಹಿಮನೇ ಸಕಲ ಗುಣಧಾಮ ಘನಶ್ಯಾಮ ಸುರ ರಿಪು ಮಥನ| ಗೋಕುಲರಿ ಸೋದರಾನಂತ ಗುಣಾ ಶ್ರೀ ಹರಿ ಭಕ್ತರ ವಸರಕೊದಗುವೆ ನೀ ಪರೋಪರಿ| ಸುಕಲ್ಪತರು ದನುಜ ಕುಲಸಂಹಾರ ಸರ್ವದುರಿತ ನಿವಾರಾ 1 ಅಖಿಳ ಶೃತಿ ಸ್ಮøತಿ ನಿಕರಲಿಂದ ನುತಿಸಿಕೊಂಬೆ| ವಿಕಸಿತನುಪಮ ವದನಬ್ಜ ಕುಲ ಅಬ್ಜರವಿ ಪ್ರಕಟದೊಳೊದಗಿ ಬಂದೆ ಸರಸೀರುಹ ನಯನ ಜಗದ ತಂದೇ| ಸಿರಿನಂದ ನಂದನ ಪರಮುದಾರೇ| ಸುರವೃಂದ ರಕ್ಷಕ ವರ ಮುರಾರೇ 2 ಶರಣಾಗತ ಜನರ ಪಾಲಾ| ಸಿರಿ ಉರಗಾರಿಗಮನ ಸೂರಾರಿ ಸಿಬಿಕುಲ| ಶೌರಿ ನರಸಹಕಾರಿ ಗಿರಿಧರನೇ| ಕರುಣಾಕರ ತ್ರಯದಿ ಸ್ಮರಣ ಮಾಳ್ಪರ ಭಯವ| ಹರಣ ಶರಣ ಕೌಸ್ತುಭಾಭರಣ ನೀಲವರಣಾನಂದ3 ವರ ಶ್ರೀರಮಣ ದೇವ ಜಗಜೀವ ಮಹಿಪತಿ ನಂದ ನೊಡಿಯ| ಪರಮಾನಂದ ಜೀವದೊರಿಯೇ| ಭವ ವಿನುತ ಮತಿ ಚರಿತಾ ಸಿಂಧೂರ| ನವನೀತ ಚೋರ ಜಗದೀಶ ಹರಿಯೇ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎನ್ನಳವೆ ಯೋಗದಭ್ಯಾಸ ಹರಿಯೇ ಎನ್ನಕೈ ನೀ ಪಿಡಿಯದಿಹುದು ಸರಿಯೇ ಪ ದಿವ್ಯಯೋಗದ ಬಗೆಯ ಪೇಳಿದೈ ಗೋಪಾಲ ಸವ್ಯಸಾಚಿಯ ಧನ್ಯನೆನಿಸಿದೈ ಶ್ರೀಲೋಲ ಭವ್ಯವಾದಾಕೃತಿಯ ತೋರ್ದೆ ಗೋಪಿಬಾಲಾ ಅವ್ಯಯಾನಂದ ಮಾಂಗಿರಿರಂಗ ವಿಠಲ 1 ನಿರ್ಮಮತೆಯೇ ಬೀಜ ಸರ್ವಸೇವೆಯೇ ಬೇರು ಕರ್ಮದೊಳಗುತ್ಸಾಹವಿರಲದೇ ಸುರಿನೀರು ಮರ್ಮವಿಲ್ಲದ ಹೃದಯವೈಶಾಲ್ಯವೇ ಕುಸುಮ ನಿರ್ಮಲತೆಯೇ ಫಲವು ಇದು ಕರ್ಮಯೋಗ 2 ಭಕ್ತಿಯೆಂಬುದೆ ಬೀಜ ಸಮ್ಮತಿಯೆ ತಾಬೇರು ಭಕ್ತಜನರ ಸೇವೆಯೇ ಮೇಲೆರೆವ ನೀರು ಏಕಾಗ್ರಚಿತ್ತವೇ ಸರಸಪರಿಮಳಪುಷ್ಪ ಮುಕ್ತಿಯೇ ಫಲಮಿದೆ ಭಕ್ತಿಯೋಗ3 ಆಸನವೇ ಬೀಜ ಪ್ರಾಣಾಯಾಮವೇ ಬೇರು ಆಸೆಯಿಂ ಗೈವ ದಿನಚರ್ಯೆಯೇ ನೀರು ಮಾಸದಿರುವಾರೋಗ್ಯ ಪುಷ್ಪತಾನೊಮ್ಮನಮೆ ಭಾಸಿಪಾ ಫಲಮಿದೆ ಹಟಯೋಗವಯ್ಯ 4 ಯಮನಿಯಮಗಳೆ ಬೀಜಧಾರಣವೆ ತಾಂಬೇರು ಕ್ರಮಮಾದಘ್ರಣಿದಾನ ಮೇಲೆರೆವ ನೀರು ವಿಮಲಮಾಗಿಹ ಧ್ಯಾನ ಪೂರ್ವಸಂಪ್ರಜ್ಞತಾ ಕ್ರಮಸಮಾಧಿಯೆ ಫಲವು ಇದು ರಾಜಯೋಗ 5 ವರವಿವೇಕ ಬೀಜ ವೈರಾಗ್ಯವೇ ಬೇರು ಗುರುಕರುಣಮೆಂಬುದೇ ಮೇಲೆರೆವ ನೀರು ಪರಬ್ರಹ್ಮ ಜ್ಞಾನವೇ ಪರಿಮಳಿಸುವ ಪುಷ್ಪ ವರಮೊಕ್ಷವೇ ಫಲವು ಇದು ಜ್ಞಾನಯೋಗ 6 ಯೋಗಮಾರ್ಗವ ತಿಳಿದು ಅನುಸಂಧಿಯಿಂ ಸಕಲ ತ್ಯಾಗ ಮಾಡುವ ನಿಯಮವೆನಗಸಾದ್ಯ ಆಗಾಗ ನಿನ್ನ ನಾಮಂಗಳನು ಪೇಳ್ವುದೇ ಯೋಗವೆಂದೆನಿಸುವ ಮಾಂಗಿರಿರಂಗ ನೀಲಾಂಗ 7
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎಮ್ಮಳವೇ ಪೊಗಳಲಮ್ಮಮ್ಮಾ ಬೊಮ್ಮನರಿಯ ನಿಮ್ಮ ಮಹಿಮಾ ಪ ಭೂತಳದೊಳರವು ಸಕಲ ಉಂಟೆಂದು ಖ್ಯಾತಿಯಿಂದ ನಾನಾತೆರದಿ ಸ್ತುತಿಸೆ ಮಾತಿಗೆ ವಿಗತ ಕಗತ ವಾಗೆ ಶೃತಿಗಳು ನೇತಿ ನೇತಿ ತಿರುಗಿದ ಬಳಿಕಾ 1 ಕುಸುಮನಾಭೇನನ ಸಾಮೀಪೆಂಬಾ ತವಕದಿ ಅಸಮ ತೆರದಿ ಪೊಗಳಲು ಚರಿತಾ ದ್ವಿಸಹಸ್ರ ಜಿವ್ಹಕ ಮೀರಿ ಪೊಗಳುತ ಅತಿ ಕುಶಿದು ತಲೆವಾಗಿ ತಾ ನಾಚಿದ ಬಳಿಕ2 ತರಣಿ ಕೋಟಿತೇಜ ಸ್ವರೂಪ ಜ್ಯೋತಿಯ ಅನ ವರತ ಹೃದಯ ಮಂದಿರದೊಳಿರಿಸಿ ಮೆರವುತ ನಿನಗತಿ ಬ್ರಯರಾದಾ ಭಕುತರಾ ಸ್ಮರಣೆ ಯೋಗ್ಯವಲ್ಲದೆ ಮಹಿಪತಿಸುತ ಪ್ರಿಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಲ್ಲಿ ನೋಡಿದರಲ್ಲಿ ಚನ್ನಕೇಶವನು ಪುಲ್ಲಲೋಚನನಾದ ಶ್ರೀ ಕೃಷ್ಣನು ಪ ಭೂತಳ ಪಾತಾಳ ಸಕಲ ಲೋಕಗಳಲ್ಲಿ ಭೂತ ಪ್ರೇತಾಳ ಕ್ರಿಮಿ ಜಂತುಗಳಲ್ಲಿ ಮಾತು ಚೇಷ್ಟಗಳಲ್ಲಿ ಕೆರೆ ಭಾವಿ ವನದಲ್ಲಿ ಕೋತಿ ಖಗವೃಂದ ಪಶುವರ್ಗಂಗಳಲ್ಲಿ 1 ವೇದ ಶಾಸ್ತ್ರಗಳಲ್ಲಿ ಸರ್ವ ಧರ್ಮಗಳಲ್ಲಿ ಬೋಧಕ ಮೊದಲಾದ ಗುರು ವರ್ಗದಲ್ಲಿ ಪಾದ ಪಾದಗಳಲ್ಲಿ ಸಾಧು ಸಜ್ಜನರಲ್ಲಿ ವಾದ್ಯ ಮೃದಂಗಾಗಿ ನಾದಂಗಳಲ್ಲಿ 2 ಕಣ್ಣುಗಳಿಗೆಸೆಯುವ ಸಕಲ ವಸ್ತುಗಳಲ್ಲಿ ಮಣ್ಣಿನಲಿ ಸರ್ವತ್ರ ಘನ ಸೃಷ್ಟಿಯಲ್ಲಿ ಬಣ್ಣಿಸಲ್ಕಾಗದ ಹರಿ ಕೀರ್ತನೆಗಳಲ್ಲಿ ಹೆಣ್ಣು ಹೊನ್ನು ಮಣ್ಣು ತ್ರಿವರ್ಗದಲ್ಲಿ 3 ಸಕಲ ಚರ ಪ್ರಾಣಿಯಲಿ ಅಚರ ಜೀವಗಳಲ್ಲಿ ಸಕಲ ಸ್ತ್ರೀ ಪುರುಷರಲಿ ಸುರದನುಜರಲ್ಲಿ ಸಕಲ ಧಾನ್ಯಗಳಲಿ ತಿಂಡಿ ತಿನಸುಗಳಲ್ಲಿ ಸುಖ ದುಃಖ ಬಹಿರಂಗ ಅಂತರಂಗದಲಿ 4 ದಿನದಲ್ಲಿ ನಿಶೆಯಲ್ಲಿ ಅನ್ನಪಾನಗಳಲ್ಲಿ ಅಣುರೇಣು ತೃಣಕಾಷ್ಟ ಸರ್ವ ದಿಕ್ಕಿನಲೀ ಕನಸಿನಲಿ ಮನಸಿನಲಿ ಪಂಚ ಭೂತಗಳಲ್ಲಿ ಜನನ ಮರಣಾತೀತ ಚನ್ನಕೇಶವನು 5
--------------
ಕರ್ಕಿ ಕೇಶವದಾಸ
ಎಲ್ಲಿ ಪೋದ ಶಿರಿನಲ್ಲತಾ ನೆಲ್ಲಿ ಪೋದ ಶಿರಿನಲ್ಲ ಪ ಎಲ್ಲಿ ಪೋದ ಪದಪಲ್ಲವಭಜಿಪರ ನಲ್ಲೆ ಬಿಟ್ಟು ಪರನಲ್ಲೇರಿಗೊಲಿದು ತಾ ಅ.ಪ ಸತಿ ಸುತ ಮುನಿಕಿಂತತಿಹಿತ ಪ್ರೀಯರು ಮತಿವಂತರೆ ಎನಗತಿ ಎಂಬುವ ತಾ 1 ಸಕಲಭಾಗ್ಯ ಪರಸುಖವೆಂಬುವ ತಾ 2 ಕಟ್ಟು ಕಾವಲಿ ಪರರಟ್ಟುಳಿ ಇಲ್ಲವೊ ಬಿಟ್ಟರೆ ಭಕುತರು ಕಟ್ಟೋರು ಎಂಬುವ 3 ಎಲ್ಲಿರಿಗತಿ ನಾ ಬಲ್ಲಿದ ಎನಪಾದ ಪಲ್ಲವ ಭಜಕರು ಬಲ್ಲಿದರೆಂಬುವ 4 ದಾತಗುರು ಜಗನ್ನಾಥವಿಠಲ ನೀ ರೀತಿಯ ಪೇಳಿದ ದೂತ ಪಾಲಕ ತಾ 5
--------------
ಗುರುಜಗನ್ನಾಥದಾಸರು
ಎಲ್ಲಿ ಶ್ರೀ ಗುರುವಿನ ದಯದೊಲವಿಹುದು | ದುರಿತ ಭಯ ಮುಟ್ಟ ಲರಿಯದು 1 ದಿವಸಾಧಿಪನಾ ಮಂಡಲವನು ಸಾರಿಹಗ | ಜವದಿ ಕತ್ತಲೆಯು ಮುಸುಕುವದೇನವಗ 2 ಸಕಲ ಗಜಗಳು ಮುದದಲಿ ಒಂದಾಗಿ | ಶಕ್ತಿ ಸಿಂಹನ ಮುಂದೆ ನಿಲ್ಲುವವೇ ಪೋಗಿ 3 ಪ್ರತ್ಯಕ್ಷದಲಿ ಅನಳನಿಹು ಸ್ಥಳದಲಿ | ಮತ್ತೆದೋರುದೇ ಮುಖ ಹಿಮವು ಇದಿರಲಿ 4 ಕಂದನ ಪ್ರಿಯ ಮಹಿಪತಿಯ | ಸ್ಮರಿಸದೇ | ಅಂಧಕನಂತೆ ಬಾಳುತಿಹಾವರಿಗಲ್ಲದೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಲ್ಲಿ ಹುಟ್ಟಿದರೇನು ಎಲ್ಲಿ ಮಡಿದರೇನು ಸೊಲ್ಲು ಸೊಲ್ಲಿಗೆ ಬರುತಿರಲು ಪ ಇಹವು ಎಂಬತ್ತನಾಲ್ಕು ಲಕ್ಷ ಜೀವ ರಾಶಿಯಲ್ಲಿ ಮರಳಿ ಮರಳಿ ಹುಟ್ಟಿ ಸತ್ತು ಬರುವ ಜನ್ಮದೊಳಗೆ ಜ್ಞಾನವಿರಲಿ ಕಲ್ಲಿ ಹರಿಯ ಸ್ಮರಣೆ ನಿರುತ ವಿರಲು ಬಂದರದು ಆನಂದ 1 ನೊರಜು ಕೀಟ ಸರಿಸೃಪಾದಿ ಕ್ರಿಮಿ ಮೃಗಾದಿ ಪಕ್ಷಿನಿಚಯ ತರು ಲತಾದಿ ಸಕಲ ಜೀವ ಜಂತು ಜ್ಞಾನ ವಿರಲಿ ಕಾವ ಜನ್ಮದಲ್ಲಿ ಬಂದರೇನು ಅಳಿದರೇನು ಜಿಹ್ವೆ ಕೊನೆಯೊಳಿರಲಿಕದು ಆನಂದ 2 ಕರ್ಮ ವಶದಿ ಕೂಚುಮಾಡಿ ಜನ್ಮಕಿಕ್ಕಿ ಚಾಚಿ ಬರಗುತಿಹಳುಮಾಯೆ ಈಚ - ರಾಚರಂಗಳೆಲ್ಲ ಬ್ರಾಹ್ಮವೆಂದು ತಿಳಿದವರಿಗೆ ಕೀಚಕಾರಿ ಕೋಣೆ ಲಕ್ಷ್ಮೀಪತಿಯ ಸ್ಮರಣೆಯೊಂದು ಆನಂದ 3
--------------
ಕವಿ ಪರಮದೇವದಾಸರು
ಎಲ್ಲಿರಲಾರನು ಚೆಲುವ ಗೋಪಾಲ ಮೆಲ್ಲುಲಿಗೊಲಿವನು ಇಲ್ಲಿರಲಾರನೆ ಪ ಕ್ಷುಲ್ಲಕರಿರುವೆಡೆ ನಿಲ್ಲಲಾರನು ದಿಟ ಎಲ್ಲ ಭಕ್ತರ ಮನೆಯಲಿ ನಲಿವನಿವ ಅ.ಪ ಸಕಲ ತೀರ್ಥಂಗಳ ಸಕಲಕ್ಷೇತ್ರಂಗಳ ಸಕಲೋತ್ಸವಗಳ ದರ್ಶನಯಾತ್ರೆ ಭಕುತಿಗೆ ಸಾಧನ ಮಂತ್ರವು ಮಾನವ ಭಕುತಿಯ ಭಜನೆಯೆ ಮುಕುತಿಯ ಮಾರ್ಗವು 1 ಮಲಗಿ ಪಾಡಲು ಅವ ಕುಳಿತು ಕೇಳುವನಂತೆ ಕುಳಿತು ಪಾಡಲು ಅವ ನಿಲ್ಲುವನಂತೆ ನಿಲುತ ಪಾಡಲು ಅವ ನಲಿಯುವನಂತೆ ನಲಿದರೆ ಒಲಿವ ಮಾಂಗಿರಿಪತಿಯಂತೆ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎಷ್ಟು ಸಾಹಸವಂತ ನೀನೆ ಬಲವಂತದಿಟ್ಟಮೂರುತಿ ಭಳಭಳಿರೆ ಹನುಮಂತ ಪ. ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಗಳಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೊ ಅ.ಪ. ರಾಮರಪ್ಪಣೆಯಿಂದ ಶರಧಿಯ ದಾಟಿಆ ಮಹಾ ಲಂಕೆಯ ಕಂಡೆ ಕಿರೀಟಸ್ವಾಮಿಕಾರ್ಯವನು ಪ್ರೇಮದಿ ನಡೆಸಿದಿಈ ಮಹಿಯೊಳು ನಿನಗಾರೈ ಸಾಟಿ1 ದೂರದಿಂದಸುರನ ಪುರವ[ನ್ನು] ನೋಡಿಭರದಿ ಶ್ರೀರಾಮರ ಸ್ಮರಣೆಯನು ಮಾಡಿಹಾರಿದೆ ಹರುಷದಿ ಸಂಹರಿಸಿ ಲಂಕಿಣಿಯನುವಾರಿಜಮುಖಿಯನು ಕಂಡು ಮಾತಾಡಿ 2 ರಾಮರ ಕ್ಷೇಮವ ರಮಣಿಗೆ ಪೇಳಿತಾಮಸ ಮಾಡದೆ ಮುದ್ರೆನೊಪ್ಪಿಸಿಪ್ರೇಮದಿಂ ಜಾನಕಿ ಕುರುಹನು ಕೊಡಲಾಗಆ ಮಹಾ ವನದೊಳು ಫಲವನು ಬೇಡಿ 3 ಕಣ್ಣ್ಣಿಗೆ ಪ್ರಿಯವಾದ ಹಣ್ಣ[ನು] ಕೊಯ್ದುಹಣ್ಣಿನ ನೆವದಲಿ ಅಸುರರ ಹೊಯ್ದುಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತಬಣ್ಣಿಸಿ ಅಸುರರ ಬಲವನು ಮುರಿದು4 ಶೃಂಗಾರವನದೊಳಗಿದ್ದ ರಾಕ್ಷಸರಅಂಗವನಳಿಸಿದೆ ಅತಿರಣಶೂರನುಂಗಿ ಅಸ್ತ್ರಗಳ ಅಕ್ಷಯಕುವರನಭಂಗಿಸಿ ಬಿಸುಟಿಯೊ ಬಂದ ರಕ್ಕಸರ 5 ದೂರ ಪೇಳಿದರೆಲ್ಲ ರಾವಣನೊಡನೆಚೀರುತ್ತ ಕರೆಸಿದ ಇಂದ್ರಜಿತುವನೆಚೋರಕಪಿಯನು ನೀ ಹಿಡಿತಹುದೆನ್ನುತಶೂರರ ಕಳುಹಿದ ನಿಜಸುತನೊಡನೆ 6 ಪಿಡಿದನು ಇಂದ್ರಜಿತು ಕಡುಕೋಪದಿಂದಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದಗುಡುಗುಡುಗುಟ್ಟುತ ಕಿಡಿಕಿಡಿಯಾಗುತನಡೆದನು ಲಂಕೆಯ ಒಡೆಯನಿದ್ದೆಡೆಗೆ 7 ಕಂಡನು ರಾವಣನುದ್ದಂಡ ಕಪಿಯನುಮಂಡೆಯ ತೂಗುತ್ತ ಮಾತಾಡಿಸಿದನುಭಂಡುಮಾಡದೆ ಬಿಡೆನೋಡು ಕಪಿಯೆನೆಗಂಡುಗಲಿಯು ದುರಿದುರಿಸಿ ನೋಡಿದನು 8 ಬಂಟ ಬಂದಿಹೆನೊಹಲವು ಮಾತ್ಯಾಕೊ ಹನುಮನು ನಾನೆ 9 ಖುಲ್ಲ ರಕ್ಕಸನೆತೊಡೆವೆನೊ ನಿನ್ನ ಪಣೆಯ ಅಕ್ಷರವ 10 ನಿನ್ನಂಥ ದೂತರು ರಾಮನ ಬಳಿಯೊಳುಇನ್ನೆಷ್ಟು ಮಂದಿ ಉಂಟು ಹೇಳೊ ನೀ ತ್ವರಿಯಾನನ್ನಂಥ ದೂತರು ನಿನ್ನಂಥ ಪ್ರೇತರುಇನ್ನೂರು ಮುನ್ನೂರು ಕೋಟಿ ಕೇಳರಿಯಾ11 ಕಡುಕೋಪದಿಂದಲಿ ಖೂಳರಾವಣನು ಸುಡಿರೆಂದ ಬಾಲವ ಸುತ್ತಿ ವಸನವನುಒಡೆಯನ ಮಾತಿಗೆ ತಡೆಬಡೆಯಿಲ್ಲದೆಒಡನೆಮುತ್ತಿದರು ಗಡಿಮನೆಯವರು 12 ತÀಂದರು ವಸನವ ತಂಡತÀಂಡದಲಿಒಂದೊಂದು ಮೂಟೆ ಎಂಬತ್ತು ಕೋಟಿಯಲಿಚಂದದಿ ಹರಳಿನ ತೈಲದೊಳದ್ದಿಸೆನಿಂದ ಹನುಮನು ಬಾಲವ ಬೆಳೆಸುತ 13 ಶಾಲು ಸಕಲಾತ್ಯಾಯಿತು ಸಾಲದೆಯಿರಲುಬಾಲೆರ ವಸ್ತ್ರವ ಸೆಳೆದುತಾರೆನಲುಬಾಲವ ನಿಲ್ಲಿಸೆ ಬೆಂಕಿಯನಿಡುತಲಿಕಾಲಮೃತ್ಯುವ ಕೆಣಕಿದರಲ್ಲಿ14 ಕುಣಿಕುಣಿದಾಡುತ ಕೂಗಿ ಬೊಬ್ಬಿಡುತಇಣಿಕಿನೋಡುತ ಅಸುರರನಣಕಿಸುತಝಣಝಣಝಣರೆನೆ ಬಾಲದಗಂಟೆಯುಮನದಿ ಶ್ರೀರಾಮರ ಪಾದವ ನೆನೆಯುತ 15 ಮಂಗಳಂ ಶ್ರೀರಾಮಚಂದ್ರ ಮೂರುತಿಗೆಮಂಗಳಂ ಸೀತಾದೇವಿ ಚರಣಂಗಳಿಗೆಮಂಗಳವೆನುತ ಲಂಕೆಯ ಸುಟ್ಟುಲಂಘಿಸಿ ಅಸುರನ ಗಡ್ಡಕೆ ಹಿಡಿದ 16 ಹತ್ತಿತು ಅಸುರನ ಗಡ್ಡಮೀಸೆಗಳುಸುತ್ತಿತು ಹೊಗೆ ಬ್ರಹ್ಮಾಂಡಕೋಟಿಯೊಳುಚಿತ್ತದಿ ರಾಮರು ಕೋಪಿಸುವರು ಎಂದುಚಿತ್ರದಿ ನಡೆದನು ಅರಸನಿದ್ದೆಡೆಗೆ 17 ಸೀತೆಯಕ್ಷೇಮವ ರಾಮರಿಗ್ಹೇಳಿಪ್ರೀತಿಯಿಂ ಕೊಟ್ಟಕುರುಹ ಕರದಲ್ಲಿಸೇತುವೆ ಕಟ್ಟಿ ಚತುರಂಗ ಬಲಸಹಮುತ್ತಿತು ಲಂಕೆಯ ಸೂರೆಗೈಯುತಲಿ 18 ವೆಗ್ಗಳವಾಯಿತು ರಾಮರ ದಂಡುಮುತ್ತಿತು ಲಂಕೆಯ ಕೋಟೆಯ ಕಂಡುಹೆಗ್ಗದ ಕಾಯ್ವರ ನುಗ್ಗುಮಾಡುತಿರೆಝಗ್ಗನೆ ಪೇಳ್ದರು ರಾವಣಗಂದು 19 ರಾವಣಮೊದಲಾದ ರಾಕ್ಷಸರ ಕೊಂದುಭಾವಶುದ್ಧದಲಿ ವಿಭೀಷಣ ಬಾಳೆಂದುದೇವಿ ಸೀತೆಯನೊಡಗೊಂಡಯೋಧ್ಯದಿದೇವ ಶ್ರೀರಾಮರು ರಾಜ್ಯವಾಳಿದರು 20 ಶಂಖದೈತ್ಯನ ಕೊಂದೆ ಶರಣು ಶರಣಯ್ಯಶಂಖಗಿರಿಯಲಿ ನಿಂದೆ ಹನಮಂತರಾಯಪಂಕಜಾಕ್ಷ ಹಯವದನನ ಕಟಾಕ್ಷದಿಬಿಂಕದಿ ಪಡೆದೆಯೊ ಅಜನಪದವಿಯ21
--------------
ವಾದಿರಾಜ
ಏ ನೀರೇ ತೋರೇ ರಂಗನಾ ಪ ರಂಗನಾ ಸಕಲಾಂತ ರಂಗನಾ | ಕೋಮಲ ಸುಂದ | ರಾಂಗನಾ ಭೂ ಭುಜ ಯದು ತುಂಗನಾ 1 ಸಿರಿ ಲೋಲನಾ | ನಯನಸುವಿ | ಮೃಗ ಮದಾಂಕ ಬಾಲನಾ2 ತಪನ ನಂತೆತೇಜಸ್ವರೂಪನಾ | ಪಾಂಡವರಸಂ ಸ್ಥಾಪನಾ ಮಹಿಪತಿಜ ರಕ್ಷಿಪನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು