ಒಟ್ಟು 515 ಕಡೆಗಳಲ್ಲಿ , 69 ದಾಸರು , 456 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವತಾಸ್ತುತಿ ಮತ್ತು ಗುರುಸ್ತುತಿ ಅರಸಿನಂತೆ ಬಂಟನೋ ಹನುಮರಾಯ ಪ ಅರಸಿನಂತೆ ಬಂಟನೆಂಬುದ ನೀನುಕುರುಹು ತೋರಿದೆ ಮೂರು ಲೋಕಕೆ ಹನುಮ ಅ ಒಡೆಯನಂಬುಧಿಯೊಳು ಪೊಕ್ಕು ದೈತ್ಯನ ಕೊಂದುತಡೆಯದೆ ಶ್ರುತಿಯನಜಗಿತ್ತನೆಂದುಸಡಗರದಿಂದ ಶರಧಿಯ ದಾಂಟಿ ಮಹಿಜೆ ಪೆ-ರ್ಮುಡಿಯ ಮಾಣಿಕವ ರಾಘವಗಿತ್ತೆ ಹನುಮ 1 ಮಂದರಧರ ಗೋವರ್ಧನ ಗಿರಿಯನು ಲೀಲೆ-ಯಿಂದಲಿ ನಿಂದು ನೆಗಹಿದನೆಂದುಸಿಂಧು ಬಂಧನಕೆ ಸಮಸ್ತ ಪರ್ವತಗಳತಂದು ನಳನ ಕೈಯೊಳಗಿತ್ತೆ ಹನುಮ2 ಸಿರಿಧರ ವರ ಕಾಗಿನೆಲೆಯಾದಿಕೇಶವಸುರರಿಗಮೃತವನು ಎರೆದನೆಂದುವರ ಸಂಜೀವನವ ತಂದು ಸೌಮಿತ್ರಿಗಂದುಎರೆದು ಶ್ರೀರಾಮನ ನಿಜದೂತನೆನಿಸಿದೆ ಹನುಮ 3
--------------
ಕನಕದಾಸ
ದೇವದೇವತಾಸ್ತುತಿ ಅಜಸುರಸನ್ನುತ ಸುಜನವಂದಿತ ಹರೇ ಭುಜಗ ಭೂಷಣ ಪ್ರಿಯ ಪ ಅತಿಶಯ ಕಾಮದಿ ಸತಿಯನಪಹರಿಸಿದ ಪತಿತ ರಾವಣನನು ಖತಿಯಲಿ ಕೊಂದೆ ನೀಂ 1 ಪರಿ ಪರಿಸಲು ವಾಲಿಯ ತರಿದೆಯೊ ಶರದಿಂದ 2 ದಶರಥನುದರದಿ ದಶರಥನಾಗಿಯು ಪಶುಪತಿ ಮಿತ್ರನೆ ಜನಿಸಿದೆ ಕರುಣದಿ 3 ಮಾನವ ಜಿತಾಸುರ ಮಾನವ ರೂಪನೆ ಪೊರೆ 4 ಧೇನುನಗರಪತಿ ದಾನವಖಂಡನ ಧ್ಯಾನ ಸ್ವರೂಪನೆ ಜ್ಞಾನವ ಪಾಲಿಸು 5
--------------
ಬೇಟೆರಾಯ ದೀಕ್ಷಿತರು
ಧಾಮ ನಮೋ ಜಿತಾಮಿತ್ರಾಖ್ಯ ಮುನೀಂದ್ರ ನಮೋ 1 ವಿಭುದೇಂದ್ರಕುಮಾರ ಯತೀಂದ್ರ ನಮೋ ವಿಮೋಚಕ ನಮೋ ನಮೋ2 ಪುರುಹೂತ ವ್ರಾತ ವಿನುತತೇ ನಮೋನಮೋ ಜಿತಾಹಿತ ಪಾಲಯಮಾಂ 3 ದುರಿತ ತಿಮಿರ ಕರುಣಾಕರ ನಮೋ ಪರಮ ಸಮರ್ಥನಮೋ 4 ತರು ಸುಸ್ಥಾನಗತ ನಮೋನಮೋ 5 ಪಾತ್ರ ಸುಚರಿತ್ರ ನಮೋ ಮಾಮುದ್ಧರತೆ ನಮೋನಮೋ 6
--------------
ಕಾರ್ಪರ ನರಹರಿದಾಸರು
ಧುರ ಧೀರಾ ಉದಾರಾ ಗಂಭೀರ ಕುಮಾರ ಪ ಕಂದರ್ಪ ರೂಪಾರ್ಧ ಚಂದ್ರಫಾಲಾ ಗುಣಮಾಲಾ ಜನಲೋಲಾ ಉಮೆ ಬಾಲಾ ಸುಶೀಲ 1 ನಿಗಮಾಳಿ ಪೊಗಳುವ ಖಗಧ್ವಜ ಮಿತ್ರಾ | ಜಗಪಾವನ ಶಶಿಮೊಗ ಕಂಜನೇತ್ರಾ ತ್ರಿನೇತ್ರಾ ಪ್ರಿಯಮಿತ್ರಾ ಸುಚರಿತ್ರಾ ಪವಿತ್ರಾ 2 ಪಾವನ ಮೂರುತಿ ಪಾವಂಜೆ ವಾಸಾ | ಕೋವಿದರೊಡೆಯ ರಕ್ಷಕ ದಾಸಾ ಗುಹೇಶಾ ಸರ್ವೇಶಾ ಸೇನೇಶಾ ಜಗದೀಶಾ 3
--------------
ಬೆಳ್ಳೆ ದಾಸಪ್ಪಯ್ಯ
ಧ್ಯಾನಿಸಿ ಆತ್ಮನ ಧ್ಯಾನಿಸಿ ಬ್ರಹ್ಮನ ಧ್ಯಾನಿಸಿ ಸಂತತ ಗುರುವರ್ಯನ ಪ ದುರಿತ ಮೋಹ ದುಃಖ ದೂರ ನೂಂಕಿ ಕಾಯ್ವ ಪರಮ ಪಾವನಮೂರ್ತಿಯ 1 ಕಾಮಿತಾರ್ಥಗಳನು ಪ್ರೇಮದಿಕೊಡುವನ ಭೀಮಮಿತ್ರನ ನೀವು 2 ಪಾಪಪುಣ್ಯವೆಲ್ಲ ಶ್ರೀಪತಿಗರ್ಪಿಸಿ ಗೋಪತಿಯನು ನಂಬಿ ಧ್ಯಾನಿಸಿ 3 ಧರೆಯೊಳು ಮಹದೇವಪುರದ ಶ್ರೀರಂಗನ ಮರೆಯದೆ ಭಾವ[ಶುದ್ಧ]ದೊಳ್ 4
--------------
ರಂಗದಾಸರು
ನಗುವಿನಿಂದಾರೋಗ್ಯ ಉಂಟೆಂಬರಯ್ಯ ನಗುವಿನಲಿ ಹಲವಾರು ಬಗೆಗಳುಂಟಯ್ಯ ಪ ನಗುವಿಂದ ಸನ್ಮಿತ್ರ ಹಗೆಯಪ್ಪುದುಂಟಯ್ಯ ನಗುತ ಬಾಳೆಂಬುದೇ ಸೊಗವೋ ರಂಗಯ್ಯ ಅ.ಪ ಗೊಳ್ಳೆಂಬ ನಗೆಯುಂಟು ಬಲ್ಲವನ ಸಭೆಯಲಿ ಕಳ್ಳನಗೆಯೊಂದುಂಟು ಪೊಳ್ಳುಕಡೆಗಳಲಿ ಸುಳ್ಳುನಗೆಯೊಂದುಂಟು ಜಳ್ಳು ಡಾಂಭಿಕರಲಿ ಮುಳ್ಳುಕಲ್ ನಗೆಯುಂಟು ಕಳ್ಳಕಾಕರಲಿ 1 ನಸುನಗೆಯು ಮನದ ಸಂತಸದ ಕುರುಹು [ಎಸೆ]ವ ರಸನೆ ನಗುವುದೇ ಹಾಸ್ಯವಯ್ಯಾ ರಸಪೂರ್ಣ ನಗುವುಂಟು ಬಿಸಜಾಕ್ಷನಲ್ಲಿ ಹೊಸದಾದ ನಗು ಮಾಂಗಿರಿನಲವಿನಲಿ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನದಿಗಳು ಗೋದಾವರೀ ದೇವಿ ನಿನಗೆ ಶರಣಾರ್ಥಿ ಪ ಮೇದಿನಿಯ ಪಾಪ ಸಂಹಾರಿಣೀ ಕಲ್ಯಾಣಿ ಅ.ಪ ಹೇಮಾದ್ರಿಸಂಜಾತೆ ಸೋಮಸಮಕಾಂತಿಯುತ ಭೂಮಿಜಾಖೇಲನಾ ಪುಳಿನಭರಿತೆ ಕ್ಷೇಮ ಸಂದಾತೆ ಶ್ರೀರಾಮ ಕರಪೂಜಿತೇ ಕಾಮಿತಾರ್ಥದೆ ಮಾತೆ ಪ್ರಾಙ್ಮುಖೀ ವರದಾತೆ 1 ದೇವಗಂಗೋಪಮೆ ಪಾವನತರಂಗಿಣೆ ವಿಪ್ರ ಸುಖದಾತೆ ಮೌನಿವಿನುತೆ ಕಾವೇರಿಸನ್ಮಿತ್ರೆ ಪರಮಶುಭಚಾರಿತ್ರೆ ಜೀವಪೋಷಕಶಾಲಿ ವಸನಾಂಬಿಕೆ 2 ದಂಡಕಾರಣ್ಯ ಸಂಚಾರಿಣಿ ನಾ ನಿನ್ನ ಕಂಡು ಧನ್ಯತೆಯಾಂತೆ ಮಿಂದು ನಲಿದೆ ಅಂಡಜಾಧಿಪಗಮನ ಮಾಂಗಿರೀಶನ ಸುತ ಎಂತು ಕಂಡಂತೆ ಮನದೊಳಾನಂದವಾಂತೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಂಬಿದೆ ಕುಮಾರ ತವ ಪಾದಾಂಬುಜವ ಧೀರಾ ಪ ಶ್ರೀ ಶಂಭು ಸುಕುಮಾರ ಅ.ಪ ಯೋಗಿಜನವಂದ್ಯ ಸದ್ಗುಣ ಸಾಗರಾನಂದ ನಿರುಪಮ ರಾಗ ಲೋಭವ ತ್ಯಾಗಗೈದಿಹ ಶ್ರೀ ಗಿರಿಜೆಕಂದಾ 1 ಶಕ್ತಿ ಮೊದಲಾದ ಆಯುಧ ಹಸ್ತದೊಳು ಪಿಡಿದಾ ನಿರ್ಮಲ ಚಿತ್ತ ಶ್ರೀಧರ ಮಿತ್ರ ಪರಮ ಪವಿತ್ರ ಖಳ ಛೇದಾ 2 ವಾಸವಾರ್ಚಿತನೇ ಸರ್ವದಾ ದಾಸ ರಕ್ಷಕನೇ ರವಿಶತ ಭಾಸ ಚಂಪಕನಾಸ ಪಾವಂಜೇಶ ಷಟ್ಶಿರನೇ 3
--------------
ಬೆಳ್ಳೆ ದಾಸಪ್ಪಯ್ಯ
ನಂಬಿದೆನೊ ನಿನ್ನ ಅಂಬುಜನಯನ ಕೃ ಪಾಂಬುಧೆ ದೃಢದಲಿ ಪ ಸಂಭ್ರಮದಲಿ ಕಿವಿ ತುಂಬುತಿರುವ ಆ ಡಂಬರ ವಚನಕೆ ಮುಂಬರಗೊಳ್ಳುತ ಅ.ಪ ನವ ಘನ ನಿಭಕಾಯ ನಿನ್ನಯ ಕರುಣಮಯ ಸಹಾಯ ವಿಲ್ಲದೆ ಬಿಗಿಯುತಿರುವ ಮಾಯಾ ಪಾಶವ ತೊರೆಯಲಳವೆ ಜೀಯಾ ನಿನ್ನಯ ದಯವ ಪಡೆದ ಪರಿಯನರುಹುವ ಯತಿವರೇಣ್ಯ ಗುರುಮಧ್ವರಾಯರ ಪರಮ ಸಮಯ ಸಾರಗಳನು ಸಂತತ ಶ್ರವಣ ಮನನ ಧ್ಯಾನಗಳಿಂದ ಪರಿಚಯ ಪಡೆದು ದು ಷ್ಟ ವಿಷಯಗಳಲಿ ಮತಿಯನು ಮುರಿಯುವಂತೆ ಕರುಣಿಸೋ ಸುಗುಣಾಲಯ 1 ನೀರಜದಳ ನೇತ್ರ ವರ ಸುಖ ಚಿನ್ಮಯೈಕ ಗಾತ್ರ ಸುಜನ ಮಿತ್ರ ಸುರವರ ಸರಸಿಜಭವ ಪುತ್ರ ರುಚಿರರ ಮುಕುಟಾಕ್ಷಪಾತ್ರ ನಿನ್ನಯ ವಿವಿಧ ಲೀಲೆಗಳು ಚಿತ್ರವಿಚಿತ್ರವು ಅರಿತೆನೆಂದು ತಿಳಿದು ಮೆರೆಯುತಲಿರುವ ನರರ ಮದವ ಮುರಿದು ದೈನ್ಯದಿಂದಲಿ ಮರೆತೆನೆಂದು ದಿನದಿನದಲಿ ಭಜಿಪರ ಪೊರೆವ ಪರಮ ಕರುಣಾರಸಮಯನೆ 2 ದೀನಭಕುತರನ್ನು ಪೊರೆಯುವ ದಾಸಿಯೆಂದು ನಿನ್ನ ಪೊಗಳುವ ಮಾನತತಿಗಳನ್ನು ಸಂತತ ಧ್ಯಾನ ಮಾಡಿ ಎನ್ನ ಕ್ಲೇಶವ ಮೌನದಿಂದ ಇನ್ನೂ ಸಹಿಸುತ ಜಾನಕೀಶ ತವ ಪಾದಕಮಲದ ರೇಣುವನ್ನು ಶಿರದಿ ಧರಿಸುತಲಿ ಅನು ಮಾನವನ್ನು ತೊರೆದು ಮುದದಿ ಸುವಿಮಲ ಜ್ಞಾನಮೂರ್ತೆ ಜ್ಞಾನಿವರ ಪ್ರಸನ್ನನೆ ನೀನೆ ಎನ್ನ ರಕ್ಷಕನೆಂದರಿಯುತ 3
--------------
ವಿದ್ಯಾಪ್ರಸನ್ನತೀರ್ಥರು
ನಮೋ ನಮಸ್ತೇ ನರಸಿಂಹ ದೇವಾ ಸ್ಮರಿಸುವವರ ಕಾವಾ ಪ ಸುಮಹಾತ್ಮ ನಿನೆಗೆಣೆ ಲೋಕದೊಳಾವಾ ತ್ರಿಭುವನ ಸಂಜೀವಾ ಉಮೆಯರಸನ ಹೃತ್ಕಮಲದ್ಯುಮಣಿ ಮಾ ರಮಣ ಕನಕ ಸಂಯಮಿ ವರವರದಾ ಅ ಕ್ಷೇತ್ರಜ್ಞ ಕ್ಷೇಮಧಾಮ ಭೂಮಾ ದಾನವ ಕುಲಭೀಮಾ ಸನ್ನುತ ಬ್ರಹ್ಮಾದಿ ಸ್ತೋಮಾ ಸನ್ಮಂಗಳ ನಾಮಾ ಚಿತ್ರ ಮಹಿಮನಕ್ಷತ್ರನೇಮಿಸ ರ್ವತ್ರಮಿತ್ರ ಸುಚರಿತ್ರ ಪವಿತ್ರ 1 ಅಪರಾಜಿತ ಅನಘ ಅನಿರ್ವಿಣ್ಣ ಲೋಕೈಕ ಶರಣ್ಯ ಶಫರಕೇತು ಕೋಟಿಲಾವಣ್ಯ ದೈತ್ಯೇಂದ್ರ ಹಿರಣ್ಯಕ ಶಿಪುಸುತನ ಕಾಯ್ದಪೆನೆನುತಲಿ ನಿ ಷ್ಕಪಟ ಮನುಜಹರಿವಪುಷ ನೀನಾದೆ 2 ತಪನ ಕೋಟಿ ಪ್ರಭಾವ ಶರೀರಾ ದುರಿತೌಘವಿದೂರಾ ಪ್ರಪಿತಾಮಹ ಮಂದಾರ ಖಳವಿಪಿನ ಕುಠಾರಾ ಕೃಪಣಬಂಧು ತವ ನಿಪುಣತನಕೆ ನಾ ನುಪಮೆಗಾಣೆ ಕಾಶ್ಯಪಿವರವಾಹನಾ 3 ವೇದವೇದಾಂಗವೇದ್ಯಾ ಸಾಧ್ಯ ಅಸಾಧ್ಯ ಶ್ರೀದ ಮುಕ್ತಾಮುಕ್ತರಾರಾಧ್ಯಾ ಅನವದ್ಯ ಮೋದಮಯನೆ ಪ್ರಹ್ಲಾದವರದ ನಿ ತ್ಯೋದಯ ಮಂಗಳ ಪಾದಕಮಲಕೆ 4 ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ ನಿನಗೆ ಬಿನ್ನೈಸುವೆ ಎನ್ನಯ ಮಾತಾ ಲಾಲಿಸುವುದು ತಾತಾ ಗಣನೆಯಿಲ್ಲದವ ಗುಣವೆನಿಸಿದೆ ಪ್ರತಿ ಕ್ಷಣಕೆ ಕಥಾಮೃತ ಉಣಿಸು ಕರುಣದಿ 5
--------------
ಜಗನ್ನಾಥದಾಸರು
ನಮೋ ನಮೋ ಶಂಕರ ಉಮೆಪ್ರಿಯ ಶಶಿಧರ ಕಮಲನಾಭನ ಭಕ್ತಿಕೊಡು ಸುಖಸಾರ ಪ ಹಿಮಗಿರಿಜೇಶ ಸುಮಶರನಾಶ ಅಮಿತಮಹಿಮ ನಿಮ್ಮ ವಿಮಲ ಪಾದದಿಬೇಡ್ವೆ 1 ಕಾಲಮರ್ದನ ತ್ರಿಶೂಲಿಯೆ ಪುರತ್ರಯ ಕಾಲನೊಶವಗೈದ ಫಾಲನಯನ ಕಾಯೊ 2 ಭೂಮಿತ್ರಯಕೆ ತಾನೆ ಸ್ವಾಮಿಯೆನಿಪ ಶ್ರೀ ರಾಮ ನಾಮಾಮೃತ ಪ್ರೇಮದಿ ಕರುಣಿಸು 3
--------------
ರಾಮದಾಸರು
ನರದೇಹ ನಿತ್ಯವಲ್ಲ ನಾಳೆ ಮೃತ್ಯು ಬಿಡುವದಲ್ಲ ಪ ಮರುಳುಮನವೆ ಕೇಳು ಸೊಲ್ಲ ಹರಿಯ ಮರೆವುದುಚಿತವಲ್ಲ ಅ.ಪ ಹಿಂದಿನವರು ಪಟ್ಟಪಾಡು ಇಂದು ನೀನು ತಿಳಿದು ನೋಡು ಸಂದೇಹಗಳೀಡಾಡು ಒಂದೇ ಮನದಿ ಹರಿಯ ಕೊಂಡಾಡು 1 ಹರಿ ನಮಗನಾದಿ ಮಿತ್ರ ವರಶೋಭನ ಚಾರಿತ್ರ ಪೊರೆವದೇನು ನಮ್ಮ ಚಿತ್ರ ಕರುಣಿಸುವನು ಕಮಲನೇತ್ರ 2 ಹೊನ್ನು ಹೆಣ್ಣು ಮಣ್ಣು ಮೂರು ನಿನ್ನದೆಂದು ಹಿಗ್ಗದಿರು ಬೆನ್ನು ಹೊಡೆವರು ಯಮನವರು 3 ಏನು ಸುಖವು ಕಾಣಲೇಶ ಜೋಕೆ ಬಿಡುಬಿಡು ದುರಾಶಾ ಬೇಕು ಸುಜನರ ಸಹವಾಸ 4 ಗುರುರಾಮವಿಠಲ ಮುಕುಂದ 5
--------------
ಗುರುರಾಮವಿಠಲ
ನಾನಾನಂತಪರಾಧಿ ಎನ- ಗೇನಿಲ್ಲವು ದೃಢಬುದ್ಧಿಪ. ನೀನೇ ಗತಿ ನಿನ್ಹೊರತು ಕಾವರನು ಕಾಣೆನು ಕರುಣಾಂಬೋಧಿಅ.ಪ. ಹಂದಿಯಂತೆ ತಿಂದು ಬೆಳದೆ ಎನ್ನ ಮುಂದಣ ಗತಿಯನು ಮರೆತೆ ಹಿಂದಿಲ್ಲವು ಮುಂದಿಲ್ಲವು ಲೋಕದಿ ನಿಂದ್ಯಾಪಾತ್ರ ತಾನಾದೆ1 ಮುತ್ತಿತು ಯೆನಗಜ್ಞಾನ ಎನ್ನ ಚಿತ್ತದಿ ಕೊಡು ನಿನ್ನ ಧ್ಯಾನ ನಿತ್ಯ ತವಚರಣ ಭಕ್ತಿಜ್ಞಾನವ ನಿತ್ತು ಕಾಯೊ ಸುತ್ರಾಣ2 ಗತಿಯಾರಿಲ್ಲನ್ಯತ್ರ ಶ್ರೀ- ಪತಿಯೆ ಕಾಯೊ ಸುಚರಿತ್ರ ಕ್ರತುಪಾಲ ಲಕ್ಷ್ಮೀನಾರಾಯಣ ಭಾ- ರತಿಪತಿನುತ ಸುರಮಿತ್ರ3
--------------
ತುಪಾಕಿ ವೆಂಕಟರಮಣಾಚಾರ್ಯ
ನಾನು ನಿನ್ನ ಏನು ಅಂದೆನೊ ರಂಗರಾಯಾ ನಾನು ನಿನ್ನ ಏನು ಅಂದೆ ನಾಲ್ಕು ದಿಕ್ಕಿನೊಳಗೆ ನಿಮ್ಮ ಧ್ಯಾನಪಥವು ದೊಡ್ಡದೆಂದು ದೃಢವು ಮಾಡಿ ಹೇಳ್ದೆನಲ್ಲದೆ ಪ ಕುಂಡಲೀಶ ಶಯನನಾದ ಪುಂಡಲೀಕವರದ ಬ್ರ ಹ್ಮಾಂಡವೆಲ್ಲ ನಿಮ್ಮ ಉದರ ಅಂಡದಲ್ಲಿ ಇರುವುದೆಂದೆ ಮಂಡಿಗೊರಳನು ಇದೆವೆಂದನೆ ಮತ್ತೆ ಮತ್ತೆ ಕುಂಡಗೊಳರ [ಪುಂಡಗೊಲ್ಲರ] ಕುಲದೈವವೆಂದೆನೆ ಹಿಂಡುಲೋಕಗಳಿಗೆಲ್ಲ ಹಿರಿಯ ನೀನೆಯಂದೆನಲ್ಲದೆ 1 ಸಕಲಯೋಗಿ ಜನರ ಹೃದಯ ನಿಖರವಾಗಿ ನಿಂತು ಎಲ್ಲ ಭಕುತರನ್ನು ರಕ್ಷಿಸುವ ಲಕುಮಿರಮಣಾನಂದೆ ನಲ್ಲದೆ ಕಕುಲಾತಿಯ ಮಾಡೆನೆಂದೆನೆ ಅಕಳಂಕ ಮಹಿಮನಾದ ಆದಿ ಮೂರುತಿ ಎಂದೆನಲ್ಲದೆ 2 ಬೊಟ್ಟಿನಿಂದ ಧರೆಯನೆತ್ತಿ ಚೇಷ್ಟೆಜನರ ಉರಳಿಸಿದ ಕೃಷ್ಣ ಮೂರುತಿನೀನೆಯೆಂದು ಇಷ್ಟದಿಂದ ಪಾಡುವೆನಲ್ಲದೆ ಸೃಷ್ಟಿನೀಟಗೊಲ್ಲನೆಂದೆನೆ ನಿನ್ನ ಮಗನ ಸುಟ್ಟು ಅವನ ಮಿತ್ರನೆಂದೆನೆ ಸೃಷ್ಟಿಗಧಿಕವಾದ `ಹೊನ್ನವಿಠ್ಠಲ' ರಾಯನಂದೆನಲ್ಲದೆ 3
--------------
ಹೆನ್ನೆರಂಗದಾಸರು
ನಾಮರೆತರು ನೀಮರೆವರೆ ಹರಿಯೇ ಪ ಅಭಿ | ರಾಮಪೂರ್ಣ ಕಾಮದುಷ್ಟರಾಕ್ಷಸಾಂತಕಅ.ಪ ಸರ್ವತ್ರ ಸರ್ವವಾಗಿ ವ್ಯಾಪಿಸಿನೀನಿರುವೇ ಸರ್ವೇಶ ಸರ್ವಾಧಾರಣಶರಣಜನ ಸುರತರುವೇ 1 ಸುಜ್ಞಾನಮಯ ಸ್ವರೂಪಾಂತರ್ಯಾಮಿಯು ನೀನು 2 ಪರಿ ಎಲ್ಲ ಭಕ್ತರಾ ತ್ವರ | ದಿಂದ ಬಂದು ಪೊರೆವೆ ನೀ ಕರುಣಾ ಸಾಗರಾ 3 ಶುಕ | ಶೌನಕಾದಿ ಮೌನಿ ಹೃದಯ ಪದ್ಮಮಿತ್ರನೆ ನಿನ್ನ | ಧ್ಯಾನ ಮಾಳ್ಪಗುಂಟೆ ಹಾನಿ ದೇವದೇವನೆ 4 ಕರೆದರೆ ಬರದಿರÀಲು ನಮ್ಮ ಕಾವರ್ಯಾರೆಲಾ ವಿಧಿ | ಹರಮುಖಾಮರವಂದಿತ ಗುರುರಾಮ ವಿಠ್ಠಲ 5
--------------
ಗುರುರಾಮವಿಠಲ