ಒಟ್ಟು 318 ಕಡೆಗಳಲ್ಲಿ , 64 ದಾಸರು , 291 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನ್ಯಾಯದ ನುಡಿ ನರಲೀಲೆಗಿದು ಬಲ್ಲವರಲಿ ಸಲ್ಲದು ನ್ಯಾಯದ ನುಡಿ ನರಲೀಲೆಗಿದು ಪ. ಮಾಯಾತೀತ ಮನೋಭವತಾತ ಪ ರಾಯಣ ತವ ಗುಣ ನಾನೆಂತರಿವೆನು ಅ.ಪ. ಪಾದ ಶ್ರೀದ ಚೆಲುವೆ ರಮಾಕರನಳಿನಾಶ್ರಯಕರಮಾದ ಜಲಜಭವಾದಿ ಸುರಾಳಿಗಳರ್ಚಿಪ ಸುಲಲಿತ ತವ ಪದದೊಲವೆಂತರಿವೆನು 1 ಶರಣಾಗತಜನ ದುರಿತನಿವಾರಣ ನೀನು ಇನ್ನೇನು ತರುಣೀಮಣಿಯಳ ಸೆರೆಯನು ಬಿಡಿಸುವದಿನ್ನು ಕರುಣಾಕರ ನಿನ್ನ ಸ್ಮರಿಸುವಳನುದಿನ ಸ್ಥಿರಚರ ಜೀವಾಂತರ ಪರಿಪೂರ್ಣನೆ2 ಆಕ್ಷೇಪಿಸದಿರು ರಕ್ಷಿಸು ರಘುಕುಲಚಂದ್ರ ರಾಜೇಂದ್ರ ಲಕ್ಷ್ಮೀನಾರಾಯಣ ಸದ್ಗುಣ ಗಣಸಾಂದ್ರ ಈಕ್ಷಿಸು ಕರುಣಾಕಟಾಕ್ಷದಿ ಪೂರ್ವದ ಲಕ್ಷಣ ಹೊಂದಲಿ ಲಕ್ಷ್ಮಣಾಗ್ರಜನೆ3
--------------
ತುಪಾಕಿ ವೆಂಕಟರಮಣಾಚಾರ್ಯ
ಪಂಚಮಿಯ ದಿನ ವಿಭವ ನಮ್ಮ ಶ್ರೀನಿವಾಸನ ಮಹಾತ್ಮವ ಮಾನಿನಿ ರನ್ನೆ ನೀ ಪೇಳೆ ಭಕ್ತಾ- ಧೀನದ ಚರಣದ ಲೀಲೆ ಭಾನು ಉದಯದಲಿ ವೀಣಾದಿ ಸು- ಗಾನ ವಾದ್ಯ ನಾನಾವಿಧ ರಭಸದಿ1 ಎತ್ತಲು ನೋಡಿದಡತ್ತ ಜನ- ಮೊತ್ತವಿಲಾಸವಿದೆತ್ತ ಚಿತ್ತದಿ ನಲಿನಲಿದಾಡಿ ತೋಷ- ವೆತ್ತಿರುವನು ಒಟ್ಟುಗೂಡಿ ಸುತ್ತುಮುತ್ತು ಒತ್ತೊತ್ತಿಲಿಹರು ವಿ- ಪ್ರೋತ್ತಮ ಶ್ರೀಹರಿಭಕ್ತರ ಮಯವಿದು2 ಚಾಮರ ಛತ್ರ ಸಿಗುರಿಯು ಜನ- ಸ್ತೋಮ ಪತಾಕೆ ತೋರಣವು ಹೇಮದ ಕಂಚುಕಿ ಈಟಿ ಗುಣ- ಧಾಮನ ಬಿರುದುಗಳ್ ಕೋಟಿ ಆ ಮಹಾಭೇರಿ ಪಟಹ ನಿಸ್ಸಾಳಕ ಸಾಮಗಾನ ಸಾಮ್ರಾಜ್ಯವೋಲಿಹುದು3 ಬಾಲರು ವೃದ್ಧ ಯೌವನರು\ಜನ- ಜಾಲವೆಲ್ಲರು ಕೂಡಿಹರು ಲೋಲ ಸ್ರೀಮುಂದ್ರಾಂಕಿತದಿ ಬಹು ವಿ- ಶಾಲ ದ್ವಾದಶನಾಮ ಮುದದಿ ಆಲಯದೊಳಗಿಹ ಬಾಲಕಿಯರು ಸಹ ಸಾಲಂಕೃತ ಸಮ್ಮೇಳದಿ ನಲಿವರು4 ಒಂದು ಭಾಗದಿ ವೇದಘೋಷ ಮ- ತ್ತೊಂದು ಭಾಗದಿ ಜನಘೋಷ ಇಂದಿನ ದಿನದತಿಚೋದ್ಯ ಏ- ನೆಂದು ವರ್ಣಿಸುವದಸಾಧ್ಯ ಚಂದಿರಮುಖಿ ಯಾರೆಂದೆನಗುಸುರೆಲೆ ಮಂದರಧರ ಗೋವಿಂದನ ಮಹಿಮೆಯ5 ಊರ್ವಶಿ : ಕೇಳಿದ್ಯಾ ನಳಿನಾಕ್ಷಿ ಶ್ರೀಹರಿಲೀಲೆ ಪೇಳಲೇನದಾ ಮೂರ್ಲೋಕದೊಳಗೀ ವಿ- ಶಾಲವ ನಾ ಕಾಣೆಪ. ಸೋಜಿಗ ಸೌಭಾಗ್ಯ ಸಂಪದಕಿದು ಬೀಜ ಕಾಣೆಲೆ ರಾಜೀವನಾಭನ ಪೂಜಾವಿನೋದದಿ ರಾಜವದನೆ ವನಭೋಜನದಿಂದಿನ1 ನೇತ್ರದ ಕಲ್ಮಷವಡಗುವದು ಪವಿತ್ರವಾಗಿಹ ಗೋತ್ರಕುಮಾರಿ ಪ್ರೀತ್ಯರ್ಥದಿ ಕೊಟ್ಟಿಹ ರಾತ್ರಿ ಪೂಜೆ ಗೈವ ಮಾತ್ರದಿ ಪೊರಟರು2 ನೂತನವೆಂದು ನೀ ಪೇಳುವಿ ಚಂದಿರ ಮುಖಿ ಜನಸಂದಣಿಗಳು ಮಹಾ ಮಂದಿ ಓಲೈಸುವರಿಂದು ಮುಕುಂದನ3 ಬಾರೆ ನಾರೀಮಣಿ ವೈಯ್ಯಾರೆ ನೀರೆ ಬಾರೆಪ. ನಿನ್ನಿಂದಾಯಿತ್ತು ಪುಣ್ಯ ಸಂಪಾದನೆ ಕಣ್ಣಾರೆ ಕಾಣುವ ಯೋಗಭೋಗ1 ಎನಗತಿ ಮನವು ನಿನಗತಿ ಛಲವು ಜನುಮಾಂತರ ಪುಣ್ಯವೈಸೆ ನೀ2 ರಂಭೆ : ಏನಮ್ಮ ಬಾರಿತ್ತಲು ನೋಡೀತನ್ಯಾರಮ್ಮಾ ಭಾನುಕೋಟಿ ಪ್ರಕಾಶದಿಂದ ಮೆರೆವನಮ್ಮಾಪ. ಅನವರತದಿಂದ ಬರುವ ಪುರುಷನಲ್ಲ ಮೀನಕೇತನ ಶತರೂಪ ಕಾಣೆ1 ನೂತನ ಪುರುಷನಿವನ್ಯಾರೆಂದರಿಯೆನಮ್ಮಾ ಶಾತಕುಂಭದ ಮಂಟಪವೇರಿ ಬರುವನಮ್ಮಾ2 ಸುರುಚಿರಫಣಿಪ ಪೆಡೆ ಶಿರದೊಳಿರುವದಮ್ಮಾ ತರತರ ರತ್ನವರದ ಬಾಯೊಳಿರುವದಮ್ಮಾ3 ಕೊರಳೊಳು ಕೌಸ್ತುಭವ ಧರಿಸಿಕೊಂಡಿಹನಮ್ಮಾ ಪರಮ ಪುರುಷನಂತೆ ತೋರುವನು ಅಮ್ಮಾ4 ಬಾಲಾರ್ಕನಂತೆ ಮುಖ ಪ್ರಜ್ವಲಿಪುದು ನೀಲಮಾಣಿಕ್ಯ ಕಾಂತಿಯ ಸೋಲಿಪುದು5 ತೋರಲರಿಯೆ ಕಾಲಿಗೆರಗುವೆನು ಪೇಳಬೇಕು ಸಖಿಯೆ6 ಕರದೊಳು ಶಂಖಚಕ್ರವ ಧರಿಸಿಕೊಂಡಿಹನಮ್ಮಾ ಬೆರಳೊಳು ವಜ್ರದುಂಗುರವನಿಟ್ಟವನಮ್ಮಾ7 ವರರತ್ನಖಚಿತದಾಭರಣದಿಂದ ಮೆರೆವ ಚರಣ ಸರೋಜದೊಳು ರೇಖೆಯಿಂ ಶೋಭಿಸುವ 8 ವಲ್ಲಭೆಯರ ಸಹಿತುಲ್ಲಾಸದಿ ಬರುವ ಖುಲ್ಲರ ಮಾನಸಕೆ ಝಲ್ಲೆನಿಸಿ ಮೆರೆವ9 ಬಲ್ಲಿದ ಪುರುಷನಿವನೆಲ್ಲಿಂದ ಬಂದ ಎಲ್ಲವ ಪೇಳೆಲೆಗೆ ನಲ್ಲೆ ಸದಾನಂದ10 ಊರ್ವಶಿ : ನೋಡು ನಿತ್ಯಾನಂದಕರನ ಮೂಡಗಿರಿಯಿಂದೋಡಿ ಬಂದನ ನೋಡೆಪ. ಛಪ್ಪನ್ನೈವತ್ತಾರು ದೇಶ ಸರ್ಪಶೈಲ ರಾಜವಾಸ ಚಪ್ಪರ ಶ್ರೀ ಶ್ರೀನಿವಾಸ1 ತಿರುಗುತ್ತಿಪ್ಪಾ ತಿರುಮಲೇಶ ಶರಣ ರಾಮನ ಭಕ್ತಿಪಾಶ ದುರುಳಿನಲಿ ನಿಂದಿರ್ಪಶ್ರೀಶ ತರಿಸುವನು ಕಾಣಿಕೆ ವಿಲಾಸ2 ಪಟ್ಟದರಸನಾದ ದೇವ ಸೃಷ್ಟಿಯಾಳುವಜಾನುಭಾವ ದೃಷ್ಟಿಗೋಚರವಾಗಿ ಕಾಯ್ವ ಇಷ್ಟವೆಲ್ಲವ ಸಲಿಸಿ ಕೊಡುವ 3 ಊರ್ವಶಿ : ಬಂದ ಗೋವಿಂದ ಸಾನಂದದಿ ಭಕ್ತರ ವೃಂದ ನೆರಹಿ ವನಕೆ ಅಂದಣವೇರಿ ಮುಕುಂದನೊಲವಿನಲಿ ಕುಂದಣ ಮಂಟಪವೇರಿ ಮತ್ತೊಬ್ಬನು ಸಂದರುಶನವಂ ನೀಡುತ ಯಿಬ್ಬರು ಒಂದಾಗುತ್ತಾನಂದವ ಬೀರುತ್ತ 1 ಅಕ್ಕ ನೀ ನೋಡು ಬಹುಮಾನದಿ ಸಿಕ್ಕಿದಿ ಬಿರುದು ಪೊತ್ತಾ ಉಕ್ಕುವದತಿ ತೋಷ ಸ್ತುತಿಪಾಠಕ ಜನಗಳ ಮಿಕ್ಕಿ ನೊಡುವ ನೋಟಕೆ ಮನಸಿನೊಳು ಝಕ್ಕೆನ್ನುವ ಕ್ಷಿತಿಗಕ್ಕಜ ತೋರುತ್ತಾ 2 ಪವಿತ್ರ ನಿಶಾನಿಧಾರಣಾ ಪವಿತ್ರಗೈಯುವ ಕಾರಣ ಮಿತ್ರಮಂಡಳವನು ಮೀರಿ ಪೊಳೆವುತಿಹ ರತ್ನಖಚಿತ ಮಂಟಪದಲಿ ಮಂಡಿಸಿ ಧಾತ್ರಿಯೊಳಗೆ ಅನ್ಯತ್ರವಿಲ್ಲೆಂಬುವ ಕೀರ್ತಿಯ ಧರಿಸಿ ಜಗತ್ರಯಪಾವನ 3 ನಿಸ್ಸಾಳ ಪಟಹ ಭೂರಿ ಜನ ಜಾಲ ಕೂಡಿರುವ ಮೇಳವಿಸುತ್ತನುಕೂಲಿಸಿ ಬಹು ಬಿರು ದಾಳಿಗೆ ಸಂಭ್ರಮದೇಳಿಗೆಯಿಂದಲಿ ಕೋಲು ಪಿಡಿದು ಓಹೋಯೆಂಬಂಥ ವಿ- ಶಾಲ ಭಕ್ತರ ಮೇಲು ಸಂತೋಷದಿ 4 ದೇಶದೇಶದ ಜನರು ನಾನಾ ವಿಧ &ಟಿ
--------------
ತುಪಾಕಿ ವೆಂಕಟರಮಣಾಚಾರ್ಯ
ಪನ್ನಗ ನಗಾಧೀಶ ಅಗಣಿತ ಗುಣಾನಂದ ಚಿದ್ಘನ ಪರೇಶ ಪ. ಜಗದ ಜೀವರಿಗೆ ಬಗೆ ಬಗೆ ವೇಷವ ತೊಡಿಸಿ ಸೊಗಸಿನಿಂದಲಿ ನೋಡಿ ನಗುತಲಿಹೆಯೊ ತ್ರಿಗುಣಮಾನಿನಿಯೊಡನೆ ಹಗಲಿರುಳು ಕ್ರೀಡಿಸುತ ಮಿಗೆ ಹರುಷದಿಂದಿರುವ ಖಗವರಧ್ವಜ ಹರಿಯೆ 1 ನಾನಾವತಾರದಲಿ ನಂಬಿದ ಸುರಾದಿಗಳಿ- ಗಾನವಾರಿಧಿಯ ಸ್ನಾನ ಮಾಡಿಸುವಿ ದೀನತ್ವದಲಿ ನಿನ್ನ ಧ್ಯಾನವೇ ಗತಿಯೆಂದು ನಾನಿದಿರು ಬಂದೆರಗೆ ಮಾನಿಸದೆ ಮರುಳಾಗಿ 2 ಅಂತರಾತ್ಮಕನಾಗಿ ಚಿಂತನಾದಿಗಳ ಬಲ ವಂತದಲಿ ನೀನೆ ಮಾಡಿಸಿದ ಮೇಲೆನ್ನ ಇಂತು ಬಳಲಿಸುವ ದುರಂತ ಮಹಿಮನೆ ನಿನಗೆ ಕಂತು ಬ್ರಹ್ಮರ ಜನಕ 3 ನಾನು ನನ್ನದು ಎಂಬ ಮಾನವಿತ್ತದರಿಂದ ಈ ನಳಿನಜಾಂಡವದೊಳು ನಾನು ಸಿಲುಕಿಹೆನು ಮಾನಾಭಿಮಾನಿಗಳ ನೀನೀವುದರಿಂದ ದೀನತನ ಕಳದು ಸನ್ಮಾನ ಪಾಲಿಸು ದೇವ 4 ತಂದೆತಾಯಿಗಳು ನಿಜ ಬಂಧುಬಳಗಗಳೆಲ್ಲ ಒಂದೊಂದು ಜನ್ಮದಲಿ ಬ್ಯಾರೆಬ್ಯಾರಹರು ಎಂದೆಂದಿಗೂ ನೀನೆ ತಂದೆ ನಿನ್ನರಸಿ ತಾ- ಯ್ಯೆಂದು ತಿಳಿಹೆನು ಮುಚಕುಂದ ರಕ್ಷಕ ಸ್ವಾಮಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಪರಸಿರಿಗೆ ಕರಗುತಿಹುದು ಸರಿಯೇ ಯೋಚಿಸು ಪ ಹರಿಯು ಕರುಣದಿಂದ ಕೊಟ್ಟ ಸಿರಿಗೆ ತೃಪ್ತನಾಗದÀಂತೆ ಅ.ಪ ಉರಗನ ನೆರಳಲ್ಲಿ ಕಪ್ಪೆಯು ಚಿರಕಾಲ ಜೀವಿಸುವುದೇ ಧರೆತಲದಲಿ ನರರ ಸಿರಿಯು ಸ್ಥಿರವಲ್ಲವೆಂದರಿಯದಂತೆ 1 ಹಲವು ಜನುಮಗಳ ಕರ್ಮದ ಫಲವನರಿತು ಮೋಸವಿಲ್ಲದೆ ನಳಿನನಾಭ ನಾರಾಯಣನೊಲಿದು ಕೊಡುವನೆಂದರಿಯದೆ 2 ಎನ್ನದೆಂದು ನಿನ್ನದೆಂದು ಖಿನ್ನನಾಗುವುದು ಸರಿಯೆ ಸನ್ನುತ ಪ್ರಸನ್ನ ಹರಿಯು ತನ್ನ ಭಾಗ್ಯವನರಿತು ನೀಡಲು 3
--------------
ವಿದ್ಯಾಪ್ರಸನ್ನತೀರ್ಥರು
ಪಾಥೇಯವ ಕಟ್ಟಿರೊ ವೈಕುಂಠಕೆ ಪಯಣ ಸ-ಮ್ಮತವಾದರೆ ಪ. ಮಾತಾಪಿತರುಯೆಂಬೊ ಭಕ್ತಿಚಿತ್ರಾನ್ನವಪಾರ್ಥಸೂತನ ಪಾದಪದ್ಮಪತ್ರವ ಹಾಸಿ ಅ.ಪ. ಹರಿಭಕ್ತಿಹರಿಗೋಲಿಂದ ಮೆಲ್ಲನೆ ನೀವುವಿರಜಾನದಿಯ ದಾಟಿರೊಕರಜಾಗ್ರಗಳಿಂದ ಹಿರಣ್ಯಕನನು ಸೀಳಿದಪರವಾಸುದೇವನ ದರುಶನವಾಹೋದಯ್ಯ 1 ಪ್ರಳಯದ್ಹಾವಳಿಯಿಲ್ಲವೊ ಪೇಳುವುದೇನುಚಳಿ ಮಳೆ ಬಿಸಿಲಿಲ್ಲವೊಬೆಳಸು ಬಿತ್ತಿಲ್ಲದ ಬೇಕಾದ ಸಂಪತ್ತುನಳಿನನಾಭನ ಪುರದೊಳಗೆ ನೆಲಸಿಹುದಯ್ಯ 2 ಶುದ್ಧ ಸಾತ್ವಿಕ ಪುರವು ತಾಮಸರಿಗೆ[ಪೊದ್ದಲಳವಲ್ಲವೊ]ಅಧ್ಯಾತ್ಮ ಅರ್ಜುನಗೆ ನಿರ್ಧಾರ ಪೇಳಿದತದ್ಧಾಮ ಪರಮಂ ಮಮವೆಂಬೊ ಪುರವೊ 3 ಕೂಗಳತೆಗೆ ಕೊಂಚವೊ ಹರಿಯ ಪುರನಾಗರಾಜನ ಸಾಕ್ಷಿಯೊನಾಗಶಯನನಲ್ಲಿ ನಮ್ಮ ಕಂಡರೆಹೋಗಬೇಡಿರೆಂದು ಹುಟ್ಟ ತಡೆವನೊ 4 ಬರವೆಂಬ ಮಾತಿಲ್ಲವೊ ಒಂದುಕಾಸುತೆರಿಗೆಯ ಕೊಡಬ್ಯಾಡಿರೊಪರಮಕರುಣಿ ಹಯವದನ ವೈಕುಂಠದಿಸರುವಮಾನ್ಯವನಿತ್ತು ಶರಣರ ಪೊರೆವನು 5
--------------
ವಾದಿರಾಜ
ಪಾಲಿಸೋ ಫಂಡರಿಪುರಾಯಾ ಪಾವನ ಕಾಯಾ ಪ ಶ್ಲೋಕÀ : ತರುಣ ತುಲಸಿಮಾಲಾ ತಪ್ತಗಾಂಗೇಯ ಚೇಲಾ ಶರಧಿ ತನಯಲೋಲಾ ಶಕ್ವರೀಕಾರಿ ಫಾಲ ಶಿರಿ ಅಜಭವ ಮೂಲಾ ಶುದ್ಧ ಕಾರುಣ್ಯ ಲೀಲಾ ವೈಜಯಂತಿ ಮಾಲಾ ಕುಂಡಲ ಕೇಯೂರ ಕೌಸ್ತ್ತುಭ ಲೋಕದಿ ವ್ಯಾಪ್ತಾ ದೋಷ ಸಿರ್ಲಿಪ್ತ ದೇವರ ದೇವಾ ಧರುಮಾದ್ಯರ ಭಾವಾ 1 ಅಮಿತ ಸುಗುಣಧಾಮಾ ಆತ್ಮಭೂಪೂರ್ಣ ರಾಮಾ ಅಮರಕುಲಲಲಾಮ ಅಬ್ಜಧಾಮಾಭಿರಾಮಾ ಯಮಿಕುಲೋದಧಿ ಸೋಮ ಯಜ್ಞ ಭೃದ್ಯಜ್ಞ ನಾಮಾ ಕರ್ಮ ಸಂರಕ್ಷಿತ ಸರ್ವ ಲೋಕಾ ವಿತತ ಮಹಿಮ ವಿಶ್ವನಾಟಕ ವತ್ಪ್ರ ಘೋಟಕಾ ಶೋ ನಳಿನ ಜಾಂಡೋದರಾ ಸರ್ವರಾಧಾರಾ ಸಂತತ ನಿರ್ವಿಕಾರಾ ಮತಿ ಮಂದನಾಗಿ ನಿನ್ನನು ಬಿಟ್ಟೆ ಮ ಬಟ್ಟೆ 2 ಶ್ಲೋಕ : ಜನನ ಮರಣ ದೂರ ಜಂಗಮಾಚಾg ವಿಹಾರಾ ದನುಜವನ ಕುಠಾರಾ ದೀನಮಂದಾರ ಧೀರಾ ಪ್ರಣತ ಭಯ ವಿಹಾರಾ ಪ್ರಾಕೃತಾತೀತ ಸಾರಾ ದಿನಪನಿಭ ಶರೀರಾ ದುಃಖವಾರಿಹ ಸಮೀರಾ 3 ವನಧಿ ಜಿತಾಸುರಯೂಥ ನಿರ್ಮಲ ಶ್ರುತಿಗಾಥಾ ಎನ್ನ ಸಂತತ ಸಂಪ್ರಸನ್ನಾ ಜೀಯ ಕರಣಾದಿ ಪಿಡಿಕಯ್ಯಾ ಗೋಪಕುಮಾರಾ 3 ಕಮಠ ಕೋಲಾ ಶತ್ರುಕಾಶ್ಯಪಿಬಾಲಾ ನೃಪಕುಲ ಈರವಾಳಾ ನೀಲಕಂಠಾಸ್ತ್ರಕಾಲಾ ದ್ರುಪದತನಯ ಪಾಲಾ ದುರವರ್ಜಿತದುಕುಲಾ ನಿರ್ಮಲ ಓಂಕಾರಾ ಪರಮ ಪ್ರೀಯ ಜಾಮಿ ಕಳೆದ್ಯೊ ತಾಪವಾ 4 ಶ್ಲೋಕ : ನಗಧರ ನಳಿನಾಕ್ಷ ನಾಕನಾಥಾದ್ಯ ಪಕ್ಷ ನೃಗ ನಗಪತಿ ಶಾಪಾ ನಿರ್ವಹಕಾರ ಶ್ರೀಪಾ ಭೃಗು ಮುನಿಗೇಯಾ ಭೂತನಾಥ ಸಹಾಯ ಅಗಣಿತ ಅಹಿತರನಳುಹಿದಾ ತೋರಿದೆ ಸತ್ಪುತ್ರರಾ ವಒತ್ತಿ ಕುಂತಿನಂದನಾ ಖಂಡ್ರಿಸಿದ್ಯೊ ಕೃಪಾಳು 5 ಶ್ಲೋಕ :ಶುಭತಮ ಸುಖತೀರ್ಥಾರಾಧ್ಯ ಸದ್ದಾನಪಾತ್ರಾ ಇಭವರರಿಪು ಹತಾನ ವಿಶ್ವಜನ್ಮಾವಿಕರ್ತಾ ಯುಗ್ಮ ಪ್ರಸಾದಾ ತರುಜನ್ಮ ವಿದೂರಾ ನಿರ್ಗುಣ ನಿರಂಜನಾ ಗೋಪರೊಡಗೂಡಿ ಮೆದ್ದೆ ತೋರಿದೆ ದಯಸಿಂಧೂ 6 ಶ್ಲೋಕ :ಅತಿವಮಲಸುಗಾತ್ರ ಅಖಿಳಲೋಕೈಕ ಪಾತ್ರಾ ಷತತಿಜದಳನೇತ್ರಾ ವೃತ್ತಹಾದ್ಯ ಮರಮಿತ್ರಾ ಶ್ರುತಿಕಮಂಜ ಸೂತ್ರಾ ಸ್ತುತ್ಯ ಪಾವನ ಪವಿತ್ರಾ ಕಳತ್ರ ನಿನ್ನಯ ದಿವ್ಯ ಖ್ಯಾತಿ ಈ ನಿತ್ಯ ಸುಖಿಸೋರು ಆನಂದಾಬ್ಧಿ ಸದ್ಗತರೋ ಮಾನವ ಜನಕ್ಲೇಶ ಭಂಜನಾ ಭಾಷಾ ಎನ್ನಯ ಅಭಿಲಾಷಾ 7 ಶ್ಲೋಕ :ವನರುಹಭವತಾತಾ ವೀತ ತನ್ಮಾತ್ರಭುತ ದ್ಯುನದಿ ಜಲವಿಧೂತ ದಿವ್ಯ ಪಾದಾಂಬುಜಾತಾ ಅನಿಲತನಯ ಪ್ರೀತಾ ಅತ್ರಿಸದ್ವಂಶಜಾತಾ ಅನಿಮಿಷಜಯಸೂತಾ ಆನತೇಷ್ಟಪ್ರದಾತಾ ಮಂಗಳಶ್ರೇಣಿ ಲೋಕೈಕಸತ್ರಾಣಿ ಶರಣು ಹೊಕ್ಕರ ಕಾಯುವ ಛಲದಂಕಾ ಕಾಳಿಂಗನ ಬಿಂಕಾ ಬಿಡಿಸಿದ್ಯೊ ನಿಷ್ಕಳಂಕಾ ಮುರ ದಂತವಕ್ತ್ರಾದ್ಯರ ಹಿಂಸಾ ಬಿಡಿಸಿದೆಯೋ ಓಜಿಷ್ಠಾ 8 ಶ್ಲೋಕ :ಹನುಮನತ ಪಾದಾಬ್ಜಹಂಸ ಸಂವಕ್ತ್ರುಕುಬ್ಜಾ ತನುವಿಕೃತ ವಿನಾಶಂ ಕಾಳಿ ಜಿಹ್ವಾಶುದೇಶಂ ದನುಜವಿಕರಾಳ ಮತ್ತೆ ಪೌಂಡ್ರೇ ಶೃಗಾಲಂ ಮೋದ ಸುಪದ ಮೂರುತಿಯನ್ನು ತೋರು ಮಾತಾ ಲಾಲಿಸು ಜಗನ್ನಾಥ ನಿನ್ನವರಿಗೀಯೋ ಶ್ರೀಶಾ 9
--------------
ಜಗನ್ನಾಥದಾಸರು
ಪೊಗಳಲರಿಯೆನೆ ಲೋಕಮಾತೇ ನಿನ್ನ ಸೊಗಸಾದ ರೂಪುರೇಖೆಯ ಸಿಂಧುಜಾತೇ ನಿಗಮವಿಖ್ಯಾತೇ ಪ ಅಳಕ ನಿಚಯವು ಇಂದ್ರನೀಲಗಳು ತುಂಬಿಗಳು ತಳಪುಗಳು ಯೆಸೆವ ನಳಿನಗಳು ಬಾಳೆಗಳು ಚೆಲುವಹಿ ಸುನಾಸಿಕವು ಅಲಕೆ ಸುಮವು ಚಂಪಕವು ಅಲರ್ವಿಲ್ಲಿನ ಧನುವೋ ಪುರ್ಬುಗಳೋ ಪೊಳೆವರದನದಸಾಲುಗಳುಕಳಸಗಳೋ ಕುಂಡಲಗಳೋ ವಿಲಸದಧರವು ಬಿಂಬಫಲವೋ ನವವಿದ್ರುಮವೋ ಅಳವಟ್ಟ ಸವಿನುಡಿಯು ಗಿಣಿಯ ಸೋಲಿಪ ಪರಿಯೋ ಕಳೆ ಪೆರ್ಚಿದಾನನವೋ ಶಶಿಯೋ ಭಳಿರೆ ಮಳಯಜಗಂಧಿನಿ ಮಹೇಶರಿಪು ಜನನೀ 1 ಗಳವು ಶಂಖವು ಮೆರೆವ ಕದಪುಗಳು ಮುಖರಗಳು ಕುಸುಮ ಮಾಲೆಗಳು ಸುಲಲಿತವಯವವೋ ಲತಾವಳಿಗಳ ತರಂಗವೋ ತಳಿವ ಪೂಜಡೆಯೋ ಸುಲಿಪಲ್ಲವವೋ ತೊಳಗುವ ತೊಡೆಯೆನಲೋ ಸಲಿಲಜಾಗಾರೇ ಸಮ್ಮೋಹನಾಕಾರೇ ಸೌಂದರ್ಯಭರಿತೆ 2 ವರಜಂಘೆಗಳು ಪಂಚಶರನ ಶರಧಿಗಳೋ ಸರಸೀರುಹ ಕೆಂದಳಿರೋ ಚರಣಗಳು ನಖಗಳು ಸುರುಚಿರಾಂಬಕೀ ದಯಾಕಾರೇ ಶುಭಚರಿತೆ ವಿಖ್ಯಾತೆ ಪುರಹರ ಸುರೇಶ್ವರ ಸುಪೂಜಿತಾಂಘ್ರಿಸರೋಜೇ ಭಕ್ತ ಮಂದಾರೇ ವರವೇಲಾನಗರವಾಸಿ ವೈಕುಂಠಚನ್ನಿಗರಾಯನರಸಿ ಗುಣರಾಸಿ ದುರಿತಾಸಿ ನಮೋ ಪರಮಪದದಾಯಕಿಯೆ ಸೌಮ್ಯನಾಯಕಿಯೆ 3
--------------
ಬೇಲೂರು ವೈಕುಂಠದಾಸರು
ಪೊಂದಿ ಭಜಿಸೊ ನಿರುತ ಮಾನವ ಮಹಿವೃಂದಾರಕವ್ರಾತ ಪ ವಂದಿತ ಶ್ರೀ ಸುಯಮೀಂದ್ರರ ಹೃದಯಾರ ವಿಂದ ಭಾಷ್ಕರ ಸುವೃತೀಂದ್ರ ಪದಮುಗ ಅ.ಪ ಧರೆಯೊಳು ದ್ವಿಜನಿಕರ ಉದ್ಧರಿಸಲು ಗುರುವರ ಸುಶೀಲೇಂದ್ರರ ಕರದಿ ತುರಿಯಾಶ್ರಮ ಧರಿಸುತ ಶ್ರೀಮೂಲ ತರಣಿ ಕುಲೇಂದ್ರನ ಚರಣವ ಪೂಜಿಸಿ ಮರುತ ಶಾಸ್ತ್ರವ ಭಕ್ತಿ ಪೂರ್ವಕ ನಿರುತ ಪ್ರವಚನ ಗೈದು ಶಿಷ್ಯರಿ ಗೊರೆದು ಕರುಣದಿ ಪೊರೆದ ಪಾವನ ಚರಿತರಡಿದಾವರೆಗಳ್ಹರುಷದಿ 1 ಸತಿಭಕ್ತಿ ಸುವಿರಕತಿ ಶಾಂತಾದಿ ಹಲವು ಸದ್ಗುಣ ಪ್ರತತಿ ಕಲಿಯಾಳಿಕೆಯೊಳು ಸ್ಥಳವಕಾಣದೆ ವಿಧಿ ಬಳಿಗೆ ಬಿನ್ನೈಸಲು ನಳಿನಜ ಯೋಚಿಸಿ ಇಳೆಯೊಳಗೆ ಸುವೃತೀಂದ್ರ ತೀರ್ಥರ ಚಲುವ ಹೃದಯ ಸ್ಥಾನ ತೋರಲು ಬಳಿಕ ಸುಗುಣಾವಳಿಗಳಿವರೊಳು ನೆಲಸಿದವು ಇಂಥ ಅಲಘು ಮಹಿಮರ 2 ಸಿರಿಯಾಸ್ಯ ಸಂವತ್ಸರದಿ ಸುವೈಶಾಖ ವರಮಾನ ಶಿತಪಕ್ಷದಿ ಹರಿದಿನದಲಿ ದಿವ್ಯ ಮೂರನೆಯಾಮದಿ ವರ ಮಂತ್ರ ಮಂದಿರ ಪರಮ ಸುಕ್ಷೆತ್ರದಿ ಸಿರಿಮನೋಹರ ಶಾಮಸುಂದರ 3
--------------
ಶಾಮಸುಂದರ ವಿಠಲ
ಪೋಗದೋ ಛಳಿ ಪೋಗದೋ ಪ ಹಳೆಯ ಹಚ್ಚಡ ಸಕಲಾತಿ ಚಿಮ್ಮುರಿ ಟೊಪ್ಪಿಗೆಬಿಳಿಯ ಕಂಬಳಿ ಪೊತ್ತರೆ ಪೋಗದೋನಳಿನಾಕ್ಷಿಯ ತನ್ನ ತೊಡೆಯ ಮೇಗಡೆ ಇಟ್ಟುಕಳಸ ಕುಚದ ಮೇಲೆ ಕೈಯಿಕ್ಕಿದಲ್ಲದೆ1 ಬಡನಡುವಿನ ಬಟ್ಟಕುಚದ ಕಾಮಿನಿರನ್ನೆಬೆಡಗಿನಲಿ ನಗುತ ನಲ್ಲನ ಬಳಿಗೆ ಬರಲುಒಡನೆಯೆ ಮೋಹದಿಂ ಪಿಡಿದೆತ್ತಿ ಲಲನೆಯನಡುಮಂಚದ ಮೇಲೆ ಕೆಡಹಿಕೊಂಡಲ್ಲದೆ2 ಛಳಿಗಾರದೆ ವಿಷ್ಣು ಛಳಿಗಾರದೆ ಶಿವಘಳಿಲನೆ ಗಂಗೆಯ ಬೀಸಾಡಲುಛಳಿಯ ಕಾರಣವೇನು ನೆಲೆಯಾದಿಕೇಶವತಿಳಿದು ನೀ ಹೇಳಯ್ಯ ಕಳಿಯ ವಿವರವನು 3
--------------
ಕನಕದಾಸ
ಬಂತವ್ವಾ ತಂಗಿ ಬಂತವ್ವಾ ಈ ಗೊಂದು ಮಾತು ನೆನಪು ಬಂತವ್ವಾ ಪ ಅಂತರಂಗದೊಳು ಕಂತುಜನಕ ತನ್ನ ಚಿಂತಿಪರ್ಹಂತೆಲಿ ನಿಂತಿಹ್ಯನಂತೆ ಅ.ಪ ಮರುಳು ಬುದ್ಧಿಯನು ನೀಗವ್ವ ಬರೆ ತಿರುತಿರುಗಿ ಮರುಗಬೇಡವ್ವ ಕರಿರಾಜ ದ್ವರದನು ತರುಣಿಯ ಪೊರೆದನು ಸರಸದಿ ಪಾಂಡವರ ನೆರಳಾಗಿ ನಿಂತನು 1 ಹಂಚಿಕೆ ಪೇಳುವೆ ನಿನಗವ್ವ ನಿನ್ನ ವಾಂಛಲ್ಯ ಗುಣವೊಂದು ಕಳೆಯವ್ವ ಕಿಂಚಿತ್ತು ಮನದೊಳು ವಂಚನಿಲ್ಲದೆ ವಿ ರಂಚಿಪಿತನ ನಂಬಿ ಭಜಿಸವ್ವ 2 ಸುಳ್ಳೆ ಕಳವಳಿಸುವುದ್ಯಾಕವ್ವ ತಿಳಿ ನಳಿನಾಕ್ಷನ ಘನ ಮಹಿಮ್ಯವ್ವ ಹೊಲಸು ದೇಹದಾಸೆ ನೀಗಿದ ಭಕ್ತಗೆ ಸುಲಭನು ಶ್ರೀರಾಮ ಕೇಳವ್ವ 3
--------------
ರಾಮದಾಸರು
ಬಂದ ಶಿರಿ ರಾಘವೇಂದ್ರಮೂರುತಿ ಮನ ಮಂದಿರದೊಳಗೆ ಸರಸದಿ ಪ ಬಂದನು ಭಕುತನ ಬಂಧನ ಬಿಡಿಸ್ಯಾ - ನಂದನೀಡುತ ಮುದದಿಂದಲಿ ಭರದಿಂದಅ.ಪ ಮುದದಲಿ ಶೋಭಿಪ ವದÀನದೊಳೊಪ್ಪುವ ರದನದಿ ಶೋಭಿತನು ಉದಿಸಿದ ಎನ್ನಯ ಹೃದಯಾಂಬರದೊಳು ಸದಯ ಮೂರುತಿ ಧರನು ಆಗಾಡಿದ ಮೃದು ನುಡಿಯಾ ಅತಿ ಭಿಡಿಯಾ ಪದಸಕಿತ - ಸುಖನೀಡುತ ಇದು ಮೊದಲಾ ಗಿಹ - ಅದ್ಭುತ ಮಹಿಮೆಯ ಪದÀದಲಿ ತೋರುತ ಸದಮಲ ಮನದೊಳು 1 ಕುಣಿದಾಡುತ ಗುಣಗಳ ಗಣಿಸುವ ಭಕ್ತರ ದಣಿಸೆನೊ ಭವದೊಳಗೆ ಗಣಿಸುವೆ ದಾಸರ ಗಣದೊಳಗವನಿಗೆ ಉಣಿಸುವೆ ಪರಸುಖ ಕೊನಿಗೆ ಬೇಡಿದ ಇಷ್ಟವ ಕೊಡುವೆ ದುರಿತವ ತಡಿವೆ ಪೊರೆಯುತಾ ಬೆರೆಯುತಾ ಮಣಿಸುತಾ ತಿಳಿಸುತಾ ಕ್ಷಣ ಕ್ಷಣದಲಿ ವೀಕ್ಷಣದಿಂದಲಿ ಶÀ್ರಮ ತೃಣ ಸಮವೋ ಧಣಿ ನಾ ನಿನಗೆಂದು 2 ಧಿಟಜ್ಞಾನ - ಭಕುತಿಯ ಥಟನೆ ಕೊಡುವೊ ಉತ್ಕಟ ಮಹಿಮನೋ ನಾನು ಪಟುತರ ಎನಪದ ಚಟುಲ ನಳಿನಯುಗ ಷಟ್ಪದ ಸಮ ನೀನೋ ನಾನಾಡಿದ ನುಡಿ ಖರೆಯಾ - ಮರೆಯಾ ಕೊಂಡಾಡೆಲೋ ನೀಡೆಲೋ ಘಟಿಸುವೆ ಸಮಯಕೆ - ಧಿಟ ಗುರುಜಗನ್ನಾಥ ವಿಠಲನ ಹೃತ್ಯಂ - ಪುಟದಿ ತೋರುವೆನೆಂದು 3
--------------
ಗುರುಜಗನ್ನಾಥದಾಸರು
ಬಂದ-ಬಂದ _ ಇಂದಿರೇಶ ನಂದನಂದನಾ ನಿಖಿಳ ಜನಕ ಕಂಧರಾಶ್ರಯಾ ಪ ಬಂದ ಬಂದ ಭಜಕ ಬಂಧು ಮಂದರಾದ್ರಿಧರ ಅರ- ವಿಂದನಯನ ಸುಂದರಾಂಗ ಸಿಂಧುಶಯನ ನಳಿನನಾಭ ಅ.ಪ. ನೀಲಮೇಘ ಶ್ಯಾಮಸುಂದರಾತನಿಗೆ ಮೇಲುಸಮರು ಇಲ್ಲವೆನಿಸಿದ ಲೀಲೆಯಿಂದ ಜಗವ ಸೃಜಿಸಿ ಪಾಲಿಸುತ್ತ ಮತ್ತೆ ಅಳಿಸಿ ಆಲದೆಲೆಯಮೇಲೆ ಸಿರಿ ಲೋಲನಾಗಿ ಮೆರೆವ ಕೃಷ್ಣ 1 ಐದು ರೂಪದಿಂದ ಕ್ರೀಡಿಪಾ ಪ್ರಕೃತಿ ಬೋಧ್ಯ ಸಿರಿಗುನಾಥ ನಾಯಕಾ ಆದಿಮಧ್ಯ ಅಂತ್ಯ ಶೂನ್ಯ ಮೋದಪೂರ್ಣ ಜ್ಞಾನಕಾಯ ಮೋದ ಮುನಿಯ ಹೃದಯಸದನ ಗೋಧರಾತಪತ್ರ ಶ್ರೀಪ 2 ಆದಾನಾದಿ ಕರ್ತ ಬ್ರಹ್ಮನೂ ದಿವಿಜ ಸಾಧುಸಂಘ ಸೇವೆ ಗೊಂಬನೂ ವೇದವೇದ್ಯ ವೇದ ವಿನುತ ವೇದ ಭಾಗಗೈದು ಪೊರೆದ ಛೇದ ಭೇದರಹಿತ ಗಾತ್ರ ಸಾಧು ಪ್ರಾಪ್ಯ ಬಾದರಾಯಣ 3 ದಾಸಜನಕೆ ಮುಕ್ತಿನೀಡುವ ಮಹಿ- ದಾಸಕಪಿಲ ಪೂರ್ಣ ಕಾಮನೂ ದೋಷ ದೂರ ನಾಶರಹಿತ ವಾಸುದೇವ ಕ್ಲೇಶವಿದೂರ ಈಶವಿಧಿಗಳನ್ನು ಕುಣಿಪ ಕೇಶವಾದ್ಯನಂತ ರೂಪ4 ಮೊತ್ತಜಗಕೆ ಸತ್ತೆನೀಡುವಾ ನಿಖಿಳ ಸತ್ಯ ಜಗದ ಚೇಷ್ಟೆನಡೆಸುವಾ ಮೊತ್ತಶಬ್ದ ಘೋಷವರ್ಣ ಮತ್ತೆ ಪ್ರಣವ ಮಂತ್ರಗಣದಿ ನಿಖಿಳ ಯಜ್ಞ ಭೋಕ್ತನಾಥ ಅಂಗಭೂತ 5 ಜಿಷ್ಣುಸೂತ ಕೃಷ್ಣೆಕಾಯ್ದವಾ ಸ್ವರತ ವಿಷ್ಣು ಪುರುಷಸೂಕ್ತ ಸುಮೇಯಾ ವಿಶ್ವಕರ್ತ ವಿಶ್ವಭೋಕ್ತ ವಿಶ್ವರೂಪ ವಿಶ್ವಭಿನ್ನ ವಿಶ್ವವ್ಯಾಪ್ತ ಶಶ್ವದೇಕ ತೈಜಸ ಪ್ರಾಜ್ಞತುರ್ಯ 6 ಸತ್ಯಧರ್ಮಗಳನು ಕಾಯುವಾ ದುಷ್ಟ ದೈತ್ಯತತಿಯ ದಮನಗೈಯ್ಯುವಾ ಮತ್ಸ್ಯಕೂರ್ಮ ಕೋಲ ಚರಿತ ಭೃತ್ಯಭಾಗ್ಯ ನಾರಸಿಂಹ ಸತ್ಯಶೀಲ ಬಲಿಯವರದ ಕ್ಷಿತಿಪದಮನ ಕ್ಷಾತ್ರವೈರಿ ಪರಶುಧಾರಿ7 ವಿಶ್ವ ಬಿಂಬನು ರಾ ಜೀವಪೀಠನನ್ನು ಪಡೆದನೂ ರಾವಣಾರಿ ಕೃಷ್ಣ ಬುದ್ಧ ಭಾವಿಕಲ್ಕಿ ನಿತ್ಯಮಹಿಮ ಭಾವಜಾರಿ ಪ್ರೀಯ ಸಖನು 8 ಹಯಗ್ರೀವ ದತ್ತ ಋಷಭನೂ ಅಪ್ರ- ಮೇಯ ಹಂಸ ಶಿಂಶುಮಾರನು ಜಯಮುನೀಂದ್ರ ವಾಯುಹೃಸ್ಥ ಜಯೆಯ ರಮಣ ಕೃಷ್ಣವಿಠಲ ದಯದಿ ಪೊರೆಯಲೆಮ್ಮನೀಗ ಜಯವು ಎನುತ ನಲಿದು ನಲಿದು 9
--------------
ಕೃಷ್ಣವಿಠಲದಾಸರು
ಬಂದೆಯಾ ಬಂಧುವೆ ಭಾಗ್ಯದ ನಿಧಿಯೆ ಮಂದರದರ ನಿನ್ನ ಮಂದಿರಕ್ಕೆ ಪ ತಂದೆಯ ಮಮ ಹೃನ್ಮಂದಿರಕಾಗಲೇ ಬಂದೆಯೊ ಕರುಣಾಸಿಂಧುವೆ ಸ್ವಾಮಿ ಅ.ಪ ಆಗಮನುತ ನಿನ್ನಾಗಮನದಿ ಇನ್ನು ನೀಗಿತು ಚಿಂತೆಯು ನೀರಜನಯನ ಯಾಗ ಸಾಫಲ್ಯಕೆ ಸೂಚನೆಯಿದು ಮಹಾ ಭಾಗವತ ಪ್ರಿಯ 1 ಮುಂದಿನ ಕಾರ್ಯವ ನೀನೆ ವಹಿಪುದು ಎಂದೆಂದಿಗೂ ನೀನೆ ಗತಿಯು ನಂದನಂದನ ಗೋವಿಂದ ಮುಕುಂದನೆ ನಿಂದಿರಿಸಯ್ಯಾ ನಿನ್ನಾಜ್ಞೆಯಲೆಮ್ಮನು 2 ನಾಗಶಯನ ನಳಿನಾಯತ ಲೋಚನ ಯೋಗಿನಿಲಯ ಕಮಲಾಲಯವಾಸ ಯಾಗರಕ್ಷಕನೆ ಯಾಗ ಫಲಪ್ರದ ಬಾಗುವೆ ಚರಣಕೆ ಕರಿಗಿರೀಶನೆ 3
--------------
ವರಾವಾಣಿರಾಮರಾಯದಾಸರು
ಬಲವಂತರೋಳಗೆ ಬಲವಂತ ಹನುಮಾ | ನಳಿನಸಂಭವ ಕರ್ತನಾದ ಮಹಿಮಾ ಪ ಗಾವುದೈದತ್ತು ಸಾವಿರದಲಿಹ ಪರ್ವತವ | ಝಾವ ಮೂರಕೆ ತಂದ ನೋಡಿನೇಮಾ1 ಪೋಗಲಾಗಮ್ಯವಾಗಿದ್ದ ಸ್ಥಳವನೇ ಪೊಕ್ಕು | ಸೌಗಂಧಿಕಾ ಪುಷ್ಪ ತಂದ ಭೀಮಾ2 ವೇದಾಂತ ಸಾಗರದಿ ಖಳನಬಳಿಪ ಹಲವು | ದು- ರ್ವಾದಿ ಜಲಚರರ ಬಾಯಿಬಿಗಿದ ಮಹಿಮಾ 3 ಗುರು ಮಹೀಪತಿ ಸ್ವಾಮಿ ರಾಮಚಂದ್ರ ಪ್ರೀಯ | ದುರಿತೌಘದ್ಯುಮಣಿ ಎನಿಪ ನಾಮಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಳೆಯ ತೊಡಿಸಿದ ಭಾಗ್ಯಪುರುಷನೂ ನಳಿನಾಕ್ಷಿಕೈಗೆ ಪ ಮಣಿ ಕರಗಳಿಗೆ ತಕ್ಕ ಅರುಣಮಯ1 ಬಳೆಗಳನೆ ತಂದು ಕರಗಳನೆ ಪಿಡಿದು 1 ಇಳೆಯಪತಿ ಬಳೆಗಾರನಾಗುತ ಪೊಳಲು ಎಲ್ಲ ಸಂಚರಿಸುತ ನಳಿನಮುಖಿಯ2 ಕಂಡು ನಗುತಲಿ ಕರವ ಪಿಡಿದು3 2 ಮಾನನಿಧಿ ಪ್ರಾಣನಾಥವಿಠಲನುಸಾನುರಾಗದಿಭಜಿಸುವರ ಸುರ ಧೇನು ವಂದದಿ ಸಲಹುವನಂತೆ ಮಾನಿನಿಯಮನಕೆ ಒಪ್ಪುವೊ 3
--------------
ಬಾಗೇಪಲ್ಲಿ ಶೇಷದಾಸರು