ಒಟ್ಟು 397 ಕಡೆಗಳಲ್ಲಿ , 80 ದಾಸರು , 333 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೆ ಪಾರ್ವತಿ ಸಾರೆ ಸುಖವ ತೋರೆ ನಿನ ದಯವ ಪ ಬಾರಿ ಬಾರಿಗು ಪ್ರಾರ್ಥಿಸುವೆನೆ ಸಾರಸಾಕ್ಷಿಯೆ ಸರ್ಪವೇಣಿಯೆ ಅ.ಪ ದಕ್ಷಕುವರಿಯೆ ಈಕ್ಷಿಸೆನ್ನನು- ಪೇಕ್ಷೆ ಮಾಡದಲೆ ಅಕ್ಷಿತ್ರಯನ ಸತಿಯೆ ಭಕ್ತರ ಕಷ್ಟ ಬಡಿಸುತಲಿ ಸೂಕ್ಷ್ಮ ಮತಿಯನಿತ್ತು ಕೃಷ್ಣನ ಸ್ತೋತ್ರಗಾನದಲಿ ಅ- ಪೇಕ್ಷೆಯೊದಗುವ ಮನವ ಪಾಲಿಸು ರಕ್ಷಿಸೀಗಲೆ ಭಕ್ತವತ್ಸಲೆ 1 ಮಂದಗಮನೆ ಮತ್ತೊಂದು ಪೇಳುವೆ ನಂದಿವಾಹನನಾ ಮುಂದೆ ಸ್ತುತಿಪ ಭಕ್ತವೃಂದ ವಿ- ದೆಂದು ಪೇಳಿದೆ ನಾ ಸುಂದರ ಶ್ರೀ ಹರಿಯ ಸೇವೆಗೆ ಪೊಂದಿಸೆನ್ನ ಮನ ಚಂದದಿಂದ ಪ್ರಾರ್ಥಿಸುವೆನೆ ಸುಂದರಾಂಗಿಯೆ ನಿನ್ನನನುದಿನ 2 ಕಮಲನೇತ್ರೆಯೆ ವಿಮಲ ಸದ್ಗುಣಗುಣಿಯೆ ಪಾರ್ವತಿ ಕಮಲಸಂಭವ ಭವಸುರಾರ್ಚಿತನ ಸ್ಮರಿಸುವ ಮತಿ ಹೃ- ತ್ಕಮಲದೊಳಗೆ ನಿಲಿಸುವಂತೆ ಮಾಡು ಸದ್ಗತಿ ಕಮಲನಾಭ ವಿಠ್ಠಲ ಕೊಡುವ ನೆನುತ ಕೀರುತಿ 3
--------------
ನಿಡಗುರುಕಿ ಜೀವೂಬಾಯಿ
ಬಾಳು ಬಾಳು ಹರಿ ಪೂಜಾಲೋಲುಪÁಳೊ ಬಾಳೊ ಮುನಿವಾದಿರಾಜಬಾಳೆಂದಕ್ಷತಿನಿಟ್ಟು ದೇವಕ್ಕಳೆಲ್ಲಬಲು ಕೃಪೆಯಲಿ ಹರಸಿದರೊಪ. ಮಕ್ಕಳ ಮ್ಯಾಲೆಂದೆಂದು ಬಲುಅಕ್ಕರುಳ್ಳ ತಾಯಿ ಬಳಗಅಕ್ಷತಿನಿಕ್ಕಿ ಹರಸುವಂದದಿ ದೇ-ವಕ್ಕಳೆನ್ನ ಹರಸಿದರೊ 1 ಸಾಲಿಗ್ರಾಮ ತೀರ್ಥವನು ಮ್ಯಾಲೆಫಲವೀವ ಕ್ಷೇತ್ರವನುಕಾಲಕಾಲದಿ ಹರಿಸ್ಮರಣೆಯ ಬಿಡದಿರುಕೀಳು ಭವವೆಂಬ ಶತ್ರುವನು 2 ತುಲಸಿ ಪದ್ಮಾಕ್ಷಿಯ ಸರವ ನಿನ್ನಕೊರಳ ರವದಲ್ಲಿ ಮೆರೆವಅಲಸದೆ ಹರಿವಾಸರವನೆ ಬಿಡದಿರುಸುಲಭದಿ ಹರಿ ನಿನ್ನ ಪೊರೆವ 3 ಭ್ರಾಮಕರೊಡನಾಡದಿರು ಕಂಡಕಾಮಿನಿಯರ ಕೂಡದಿರುನೇಮನಿಷ್ಠೆಗಳನ್ನು ಬಿಡದಿರು ಎಂದೆಂದುತಾಮಸನಾಗಿ ಕೆಡದಿರು 4 ಹಯವದನಗೆ ನಮಿಸುತಿರು ನಿ-ರ್ಣಯದ ಶ್ರುತಿಯಸೇವಿಸುತಿರುಪ್ರಿಯ ಪುರಾಣಗಳ ಕೇಳುತಿರು ನಿ-ರ್ಭಯದಿಂದವನ ಪೊಗಳುತಿರು 5 ಹರಿಭಕುತರೊಳೆಂದೆಂದಾಡಿರೊ ನರ-ಹರಿಯ ನಾಮಗಳನು ಪಾಡಿರೊ ಹರಿ ಅರ್ಚನೆಯನು ಮಾಡಿರೊ ಶ್ರೀಹರಿಯ ಮೂರುತಿಯನು ನೋಡಿರೊ 6 ದೂರಕ್ಕೆ ದೂರನು ದಾವನ ಹ-ತ್ತಿರ ಬಂದ ಭಕುತರ ಕಾವನಆರಾಧಿಸಲು ಫಲವೀವನ ಹ-ತ್ತಿರ ಸೇರುವ ಭಾವ ದಾವನ 7 ಕಾಮದೇವನ ಪೆತ್ತ ಕರುಣಿಯ ಸುತ್ತಸೇವಿಪರಘತಮ ತರಣಿಯ- - - - - - - - - - -- - - - - - - - - - -8 ಜಯಿಸಿ ಕಂಸನೆಂಬ ಮಾವನ ಆಶಯವಿತ್ತು ಭಕುತ ಸಂಜೀವನಹಯವದನನಾಗಿ ಪಾವನ ಶ್ರು-ತಿಯ ತಂದ ದೇವರದೇವನ9
--------------
ವಾದಿರಾಜ
ಬಿಲ್ವಪತ್ರೆಯ ಪೂಜೆಗೊಲಿವನು ಜಗದ್‍ವಲ್ಲಭನಾದ ರಾಮೇಶ್ವರನು ಪ ಕೋಟಿ ಕನ್ಯಾದಾನವ ಮಾಡಿದ ಫಲಕೋಟಿ ತುರಗದಾನದ ಫಲವುಕೋಟಿ ಸಂಖ್ಯಾ ಗಜದಾನದ ಫಲ ಶಶಿಜೂಟಗೊಂದೆ ಬಿಲ್ವಪತ್ರೆಯೇರಿಸಿದರೆ 1 ಕೋಟಿ ಗಂಗಾಸ್ನಾನವ ಮಾಡಿದ ಫಲಕೋಟಿ ಪ್ರಯಾಗ ಸ್ನಾನದ ಫಲವುಕೋಟಿ ಗೋದಾನದ ಫಲ ಬರುವುದು ಶಶಿಜೂಟಗೊಂದೆ ಬಿಲ್ವಪತ್ರೆಯೇರಿಸಿದರೆ2 ಲಕ್ಷ ಪಂಚಾಕ್ಷರಿ ಜಪವ ಮಾಡಿದ ಫಲಲಕ್ಷಭೂಮಿಯ ಪ್ರದಕ್ಷಿಣ ಫಲವುಲಕ್ಷಾಶ್ವಮೇಧಯಾಗವ ಮಾಡಿದ ಫಲತ್ರ್ಯಕ್ಷಗೊಂದೆ ಬಿಲ್ವಪತ್ರೆಯೇರಿಸಿದರೆ 3 ವೇದಪುರಾಣವ ಪಠಿಸಿದ ಫಲ ಸರ್ವಮೇದಿನಿ ದಾನವನಿತ್ತ ಫಲವುಭೂದಿವಿಜರ ಸಂರಕ್ಷಿಸಿದ ಫಲ ಶ್ರೀಮಾದೇವಗೇಕ ಬಿಲ್ವವನೇರಿಸಿದರೆ4 ಸೋಮವಾರದ ದಿನ ನೇಮದಿಂದಲಿ ಬಹುಕೋಮಲ ಬಿಲ್ವಪತ್ರೆಗಳ ತಂದುಶ್ರೀ ಮಹಾದೇವಗರ್ಪಿಸಿದಂಥ ಭಕ್ತರ್ಗೆರಾಮೇಶಲಿಂಗ ಮುಕ್ತಿಯನೀವನು 5
--------------
ಕೆಳದಿ ವೆಂಕಣ್ಣ ಕವಿ
ಬೆಳಗಾಗಲು ಅರಘಳಿಗೆಯು ಇರುತಿರೆ ಸ್ಮರಿಸುವೆ ವಿಶ್ವಮೂರುತಿಯನ್ನು ಬೆಳಗಾಗಲು ಹರಿಧ್ಯಾನವ ಮಾಡುತ ಬಹಿರ ಭೂಮಿಗ್ಹೋಗುತ ಮುನ್ನು 1 ಕಲಿ ಮೊದಲಾಗಿಹ ದೈತ್ಯರನೆಲ್ಲಾ ವಿ- ಸರ್ಜನೆ ಮಾಡುತ ಮತ್ತಿನ್ನೂ ದಂತ ಧಾವನೆಯ ಮಾಡುತ ಶ್ರೀ ಮಾ- ಧವನನು ಸ್ಮರಿಸುವೆ ನಾನಿನ್ನೂ 2 ಮುಖವನು ತೊಳೆಯುತ ಮುರಹರಿ ಧ್ಯಾನದಿ ಶ್ರೀತುಳಸಿಯ ನಮಿಸುತಲಿನ್ನೂ ಮೀಸಲ ನೀರನು ಎರೆಯುತ ಬೇಗದಿ ಮೃತ್ತಿಕಿ ಫಣಿಗಿಡುತಲಿ ಇನ್ನು 3 ಮೂರು ಪ್ರದಕ್ಷಿಣಿ ಮಾಡುತ ಬೇಗದಿ ಮುದದಿ ನಮಸ್ಕರಿಸುತಲಿನ್ನೂ ದೇವರ ಮನೆಕಡೆ ಪೋಗುತ ನಿಂದಿಹ ಜಯವಿಜಯರಿಗೊಂದಿಸಿ ಮುನ್ನು 4 ದೇವರ ದರ್ಶನಕಾಜ್ಞೆಯ ಕೇಳುತ ದೇವರ ಗೃಹದೊಳು ಪೋಗುತಲಿ ಮಾಯಾ ಪತಿಯನು ಮನದೊಳು ಧ್ಯಾನಿಸಿ ವಂದನೆ ಮಾಡುತ ಬೇಗದಲಿ 5 ದೇವರ ಮನೆಯನು ಸಾರಿಸಿ ಶಂಖುಚಕ್ರವುಗದೆ ಪದುಮನ್ಹಾಕುತಲಿ ಗಜವರದನ ಕೊಂಡಾಡುತ ಮುದದಿ ಗಜೇಂದ್ರ ಮೋಕ್ಷನ ಸ್ಮರಿಸುತಲಿ 6 ಗೋವೃಂದದ ಕಡೆ ಪೋಗುತ ಶ್ರೀ- ಗೋವಿಂದನ ಸ್ಮರಿಸುತ ನಿತ್ಯದಲಿ ಗೋಪೀ ಬಾಲನ ಗೋಕುಲವಾಸನ ಗೋವ್ಗಳ ಮಧ್ಯದಿ ಸ್ಮರಿಸುತಲಿ 7 ಬಾಲಕೃಷ್ಣನ ಲೀಲೆಯ ಪೊಗಳುತ ಬಾಲಲೀಲೆಗಳ ಕೇಳುತಲಿ ಪುರಾಣವ ಪೇಳುವ ದ್ವಿಜರಿಗೆ ವೃದ್ಧರಿಗೆರಗುತ ಪ್ರತಿನಿತ್ಯದಲಿ 8 ಮುರಳಿಯನೂದುತ ಮೆರೆಯುವ ಕೃಷ್ಣನ ಅನುದಿನ ಮಾಡುತಲಿ ಸರಸಿಜನಾಭನ ಸ್ಮರಿಸುತ ಮನದಲಿ ಸ್ನಾನಕೆ ತೆರಳುತ ಶೀಘ್ರದಲಿ 9 ನದಿಯ ಸ್ನಾನಕೆ ಪೋಗುವ ಸಮಯದಿ ನಾರದವಂದ್ಯನ ಸ್ಮರಿಸುತಲಿ ಭಾಗೀರಥಿಯಲಿ ಸ್ನಾನವು ಮಾಡುತ ಬಾಗುತ ಸಿರವನು ಬೇಗದಲಿ10 ಫಣಿರಾಜನ ಶಯನದಿ ಮಲಗಿಹ ಶ್ರೀ- ಪರಮಾತ್ಮನ ನೋಡುತ ಬೇಗ ಪಾದಗಳ ಸೇವಿಪ ಶ್ರೀ ಭೂದೇವಿಯ- ರೇನುಧನ್ಯರೆಂದೆನುತಾಗ11 ಪೊಕ್ಕಳ ಮಧ್ಯದಿ ಪೊರಟಿಹ ನಾಳದ ತುದಿಯಲಿ ರಂಜಿಪ ಕಮಲದಲಿ ಉದ್ಭವಿಸಿದ ನಾಲ್ಮೊಗನನು ನೋಡುತ ಬಗೆ ಬಗೆ ಪ್ರಾರ್ಥಿಸುತಲಿ ಇನ್ನು 12 ನೆರೆದಿಹ ಸುರ ಪರಿವಾರವೆಲ್ಲ ಶ್ರೀ- ಹರಿಯನು ವಾಲೈಸುತಲಿನ್ನೂ ಪರಮವೈಭವದಿ ಮೆರೆಯುವ ದೇವನ ಸ್ಮರಿಸುವೆ ಜಲಮಧ್ಯದೊಳಿನ್ನು 13 ದೇವರ ರಥವನು ತೊಳೆಯುವೆನೆಂಬ- ನುಸಂಧಾನದಿ ಸ್ನಾನವು ಮಾಡಿ ದೇವರ ರಥ ಶೃಂಗರಿಸುವೆನೆನ್ನುತ ಶ್ರೀಮುದ್ರೆಗಳ್ಹಚ್ಚುತ ಪಾಡಿ 14 ನಿತ್ಯ ಕರ್ಮಮುಗಿಸುವ ಬೇಗದಿ ಶ್ರೀ- ಹರಿಪೂಜೆಗೆ ಅಣಿಮಾಡುತಲಿ ಪುಷ್ಪಗಳನು ಗಂಧಾಕ್ಷತೆ ಶ್ರೀ ತುಳಸಿಯ ತಂದಿಡುವೆನು ಮೋದದಲಿ 15 ಪಂಚಭಕ್ಷ ಪಾಯಸಗಳ ಮಾಡುತ ಪಂಚಾತ್ಮಕ ನ ಸ್ಮರಿಸುತಲಿ ಮಿಂಚಿನಂತೆ ಹೊಳೆಯುವ ತಬಕಿಲಿ ತಾಂಬೂಲವ ನಿರಿಸುತ ಬೇಗದಲಿ 16 ಬ್ರಹ್ಮನು ಈ ವಿಧ ಪೂಜೆಯ ಪ್ರತಿದಿನ ಬ್ರಹ್ಮನ ಪಿತಗರ್ಪಿಸುತಲಿರಲು ಸುಮ್ಮಾನದಿ ಮಹಲಕುಮಿಯು ಇದ- ನೊಯ್ಯತ ಸುರಮುನಿ ವಂದ್ಯನಿಗೆ ತಾನರ್ಪಿಸಲು17 ಪರಮಾತ್ಮನು ಈ ವಿಧ ಸೇವೆಯ ಕೈ- ಗೊಳುತಲಿ ಸಂತಸ ಪಡಲಿನ್ನು ಅರಿತವರೆಲ್ಲರು ನಿರುತದಿ ಹರಿ ಧ್ಯಾ- ನವ ಮಾಡುತಲಿರೆ ತಾವಿನ್ನು 18 ದೇವಪೂಜೆ ವೈಶ್ವದೇವವು ನಿತ್ಯದಿ ಗೋಬ್ರಾಹ್ಮಣನರ್ಚಿಸಿ ಇನ್ನು ಸಾಯಂ ಸಮಯದಿ ಸಾಧುಗಳೊಡನೆ ದೇವರ ಕಥೆ ಕೇಳುತಲಿನ್ನೂ 19 ಝಾಮಝಾಮದಿ ಜಯಶಬ್ದಗಳಿಂ ಜಯಾಪತಿಯನು ಪೊಗಳುತಲಿ ಆರತಿ ಜೋಗುಳ ಹಾಡುತ ಮುದದಲಿ ಮಧ್ವೇಶಾರ್ಪಣ ಪೇಳುತಲಿ 20 ಮಲುಗುವಾಗ ಮುಕುಂದನ ಸ್ಮರಿಸುತ ಲಯ ಚಿಂತನೆಯನು ಮಾಡುತಲಿ ಕರಮುಗಿಯುತ ಕಾಯೇನ ವಾಚಾ ಎಂ- ದ್ಹೇಳುತ ಪ್ರಾಜ್ಞನ ಸ್ಮರಿಸುತಲಿ 21 ಝಾಮಝಾಮದಿ ಶ್ರೀ ಹರಿ ಮಾಧವ ಆಗಲು ಬೆಳಗಿನ ಝಾವದಿ ಸೃಷ್ಟಿಯ ಚಿಂತನೆ ಮಾಡಿ ಎಂದೆನುತ22 ಮಳಲಗೌರಿ ನೋಂತಿಹ ಸತಿಯರಿಗೆ ಮುರಳೀಧರ ಒಲಿದಿಹನೆನ್ನುತ ಉದಯವಾಗಲು ವಿಶ್ವನ ಸ್ಮರಿಸುತ ವಿಧಿ ನೇಮಗಳನುಸರಿಸುತ್ತ 23 ನಿತ್ಯದಿ ಈ ತೆರವಾಚರಿಸುವ ನರ ಮುಕ್ತನು ಧರೆಯೊಳಗೆಂದೆನುತ ಅತ್ಯುತ್ಸಾಹದಿ ಬರೆದೋದುತಲಿ- ದರರ್ಥವ ತಿಳಿದಾಚರಿಸುತ್ತ24 ಈ ವಿಧ ಚಿಂತನೆ ಮಾಡುವ ಮನುಜಗೆ ದಾರಿದ್ರ್ಯವು ದೂರಾಗುವದು ಮಾರಮಣನು ತನ್ನವರೊಡಗೂಡುತ ವಾಸವಾಗುವನೆಂಬುವ ಬಿರುದು25 ಕರೆಕರೆಗೊಳ್ಳದೆ ಕೇಳಿರಿ ನಿತ್ಯವು ಕನಕಗಿರಿವಾಸನ ಮಹಿಮೆ ಕನಲಿಕೆ ಕಳೆವುದು ಕಮಲನಾಭ- ವಿಠ್ಠಲನು ಕೊಂಡಾಡುತ ಮಹಿಮೆ 26
--------------
ನಿಡಗುರುಕಿ ಜೀವೂಬಾಯಿ
ಬೇಲೂರು ಬೇಲೂರ ಚೆನ್ನಿಗನ ನೋಡುವ ಬನ್ನಿ ಬಾಲಾರ್ಕತೇಜನ ಪಾಡುವ ಬನ್ನಿ ಪ ಮೇಲಾದ ವರಗಳ ಬೇಡುವ ಬನ್ನಿ ನೀಲಾಂಗನಿಗೆ ಪೂಜೆ ಮಾಡುವ ಬನ್ನಿ ಅ.ಪ ಕ್ಷೀರಸಮುದ್ರದಿ ಮೀಯುವ ಬನ್ನಿ ಇಲ್ಲಿ ದ್ವಾರದೇಶದಿ ನಿಂತು ಕಾಯುವ ಬನ್ನಿ ಚಾರುಸುಗಂಧವ ತೇಯುವ ಬನ್ನಿ ನಮ್ಮ ಕಾರುಣ್ಯದಿಂದವ ಕಾಯುವ ಬನ್ನೀ1 ಸುತ್ತು ಪ್ರದಕ್ಷಿಣೆ ಮಾಡುವ ಬನ್ನಿ ಅಲ್ಲಿ ಚಿತ್ತಾಕರ್ಷಕ ಚಿತ್ರ ನೋಡುವ ಬನ್ನಿ ಅತ್ತಿತ್ತ ವಂದನೆ ಮಾಡುವ ಬನ್ನಿ ಎಲ್ಲ ಮತ್ತೆ ಕೈ ಜೋಡಿಸಿ ಪಾಡುವ ಬನ್ನಿ 2 ಎಂಥ ಚೆಲುವ ಚೆನ್ನನಿವನಬ್ಬ ಮ ತ್ತಿಂಥ ಚೆಲುವನಿಲ್ಲ ಇನ್ನೊಬ್ಬ ಎಂಥ ಲಾವಣ್ಯವಿದಬ್ಬಬ್ಬ ಮ ತ್ತಿಂಥಾವ ಮಾಂಗಿರಿ ರಂಗನೊಬ್ಬ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೋಧ ಬಂದನು ಮಾ | ಪ್ರಪಂಚ ಗೆಲುವವ ನಾರೆಲಮಾ ನಮ್ಮ | ಪತಿ - ಭಕ್ತರು ಕಾಣಿಲಮಾ ಪ ಎನಗಾರು ಇದಿರಿಲ್ಲ ಸ್ವರಾಜ್ಯದೊಳಗಿಂದು | ನೀನಾರೋ ಪರದೇಶಿ ಹೇಳಲಮಾ | ನಾನೆಂಬ ಹಮ್ಮಿನ ಬಿರುದನ ಬಿಡಿಸುವ | ನಾನೆಂಬ ಹಮ್ಮಿನ ಬಿರುದವ ಬಿಡುಸುವ | ಜ್ಞಾನ ಶಸ್ತ್ರಧಾರಿ ಬೋದನುಮಾ 1 ಸರಸಿದ ಭವರುದ್ರ ಇಂದ್ರರ ಬಗೆಯದ | ನೆರೆ ಕಾಮ ಗೆಲುವವ ರಾರೆಲಮಾ | ಭಾಗವತ ಶುಕ ಹನುಮಂತನು ಮೆರೆವ ಭೀಷ್ಟ ದೇವ ನಲ್ಲೇನುಮಾ 2 ವೈಕುಂಠದೊಳು ಸನಕಾದಿಕರೊಳು ಹೊಕ್ಕ | ಆ ಕೋಪ ಕಾನುವ ನಾರೆಲಮಾ | ಸಾಕಿ ಬೆಳೆಸಿದ ಶಾಂತಿಯ ನೆಲೆಯಿಂದ | ಪ್ರಖ್ಯಾತ ಕದರಿಯು ಕೇಳಲಮಾ 3 ಧರಿಯಿತ್ತ ರಾಮಗ ಸ್ಥಳ ವಿಲ್ಲೆಂದರು ಬ್ರಾ | ಹ್ಮರು ಲೋಭಗೆದ್ದ ವನಾರೆಲಮಾ | ಮರುಳ ಕೇಳು ಧನ ತೃಣ ಸಮ ಬಗೆದರು | ಕರ್ಣ ರಲ್ಲೇನು ಮಾ 4 ಬೆಟ್ಟದಿ ಉಡಿಹಾಕಿ ಕೊಳ್ಳಲು ಹೋದನ | ಶಿಷ್ಯ ಮೋಹನ ಗೆಲುವ ನಾರೆಲ ಮಾ | ಮುಟ್ಟಿ ಬೇಡಲುಳಿವ ಮಹನ ತಂದಿಟ್ಟನು | ಸೃಷ್ಟಿ ಮನುಜ ಚಿಲ್ಹಾಳಲ್ಲೇನು ಮಾ 5 ಭ್ರಗು ಮುನಿದಕ್ಷನು ಕಾರ್ತೃ-ವೀರ್ಯಾದಿಯ | ಬಗೆಯದ್ದ ಮದ-ವಳಿ ದಾರೆಲ ಮಾ | ಜಗ ಹೊಡೆತನವಿದ್ದು ಬಾಗಿ ನಡೆದ ನಮ್ಮ | ಸುಗುಣ ಜನಕರಾಯ ನಲ್ಲೇನು ಮಾ 6 ಹುಚ್ಚಾದ ವಶಿಷ್ಟನೊಳು ವಿಶ್ವಾಮಿತ್ರನು | ಮತ್ಸರಿಲ್ಲದವ ನಾರೆಲ ಮಾ | ಎಚ್ಚರಿಸಿದ ಸುಯೋಧನಗ ವಿಜಯತನ | ಸಚ್ಚರಿತ ಧರ್ಮ ನಿಲ್ಲೇನು ಮಾ 7 ಬಗೆ ಬಗೆ ವಿಷಯ ದುಪಾಯಗಳೆನಗುಂಟು | ನಿಗದಿಯ ನಡೆನುಡಿ ಕೇಳೆಲ ಮಾ | ಭಗವದ್ಭಾವ ಸರ್ವ ಭೂತದಿ ನೋಡಲು | ವಿಗುಣವೆ ಸದ್ಗುಣ ಭಾಸುದ ಮಾ 8 ನಿನ್ನ ಬಲವ ಕಂಡೆ ಶರಣವ ಹೊಕ್ಕೆನು | ಬೋಧ ಕೇಳೆಲ ಮಾ | ಸನ್ನುತ ಮಹಿಪತಿ ಸುತ ಪ್ರಭು ನೆಲೆದೋರಿ ಮನ್ನಿಸಿ ಹೊರೆವನು ಬಾರೆಲಮಾ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬ್ರಹ್ಮಾದಿವಂದ್ಯ ಪರಬ್ರಹ್ಮಾನೆ ಕಾಯೊ ಅಹಂಬ್ರಹ್ಮಭಾವವ ಬಿಡಿಸೋ ಪ ಬ್ರಹ್ಮಾನ ಜನಕನೆ ಬ್ರಹ್ಮಾಂಡದೊಡೆಯ ಬ್ರಹ್ಮಾಂಡಾಂತರ್ಯಾಮಿ ಸಲಹೋ ಅ.ಪ ಸತ್ಯವ್ರತನೆ ನೀ ಸತ್ಯಪರನು ಜಗ ಸತ್ಯ ಸೃಜಿಸಿ ಪೊರೆವೇ ನಿತ್ಯ ನಿರ್ಲಿಪ್ತನಹುದೋ 1 ಏಕರೂಪನೆ ಅನೇಕ ರೂಪದಿ ಎಲ್ಲಾ ಲೋಕಗಳೆಲ್ಲಾ ಪಾಲಿಪೆ ಲೋಕಗಳನೆಲ್ಲ ಮಾಳ್ವೆ 2 ನಿನ್ನಾಶ್ರೈಸಿದ ಭಿನ್ನಪ್ರಕೃತಿ ತ್ರಿಭಿನ್ನಗೈಸಿ ಅಂದು ಜಗದಾ ಬನ್ನ ಪಣ್ಣನ್ನ ನಿರ್ಮಿಸಿದೆಯೋ 3 ಪಣ್ಣಿಗೆ ನಾಲ್ಕು ರಸವೋ ಘನ್ನಷಡೂರ್ಮಿಗಳನ್ನೆ ನಿರ್ಮಿಸಿ ಪೊರೆವೇ 4 ಕೊಟ್ಟೆ ಸಪ್ತಧಾತು ಅಷ್ಟವಿಟಪಿಗಳನಿಟ್ಟೆ ನವಾಕ್ಷಪೊಟರೆ ದಟ್ಟದಶಚ್ಛದ ಕೊಟ್ಟು ಜಗವೃಕ್ಷ ಸೃಷ್ಟಿಯ ಮಾಡಿ ಮೆರೆದೇ 5 ಅಟ್ಟಹಾಸದಿ ಫಲಮುಟ್ಟದೆ ಇಹ ಖಗಶ್ರೇಷ್ಟನೆ ನೀ ತುಷ್ಟನೋ ಕೊಟ್ಟ ಫಲವನುಂಡಷ್ಟೂ ಸುಖಿಪ ಜೀವರೆಷ್ಟೋ ಜಗವರಿಯೇ 6 ವ್ಯಷ್ಟೀಸಮಷ್ಟಿಯ ಸೃಷ್ಟೀಯೊಳು ನೀನೆ ಶ್ರೇಷ್ಠನೇ ವ್ಯಾಪಿಸಿರುವೇ ದೃಷ್ಟಿಗೋಚರವಲ್ಲ ಅಷ್ಟಕರ್ತೃ ಪರಮೇಷ್ಟೀಜನಕ ಸಲಹೋ 7 ಅಪ್ರಾಪ್ಯಮನೋವಚ ತ್ವತ್ ಪ್ರಾಪ್ತಿಎಂತಯ್ಯ ತ್ವತ್ಪ್ರಸಾದವಿಲ್ಲದೇ ಎನ್ನ ಬಂಧಪ್ರಕೃತಿಯನೆ ಹರಿಸೋ 8 ಸೃಷ್ಟಿಯೊಳಗೆ ಸ್ವನಿಷ್ಠೆಯಿಂದಲೀ ಜಗದೃಷ್ಟೀಗೋಚರನಾಗುವೆ 9 ಮುಮುಕ್ಷುಗಳಿಗೆ ಸಾಕ್ಷಿ ಮನದಕ್ಷಿಯೊಳು ಪೊಳೆವೇ 10 ಭಕ್ತಿವಿರಹಿತ ದುರ್ಯುಕ್ತಕಾರ್ಯದಿ ಮನ ಸಕ್ತವಾಗಿಹುದು ತ್ವಧ್ಭಕ್ತಿಯ ಕೊಡು ನಿತ್ಯ11 ಹತ್ತಿಬಹುದೂ ಬೆನ್ಹತ್ತಿಕರ್ಮವು ಮತ್ತೆ ಸುತ್ತೀಸುತ್ತುತ ಜನ್ಮವಾ ಎನಗೆ ಉತ್ತಮಗತಿ ತೋರದೇ12 ಘೋರದುರಿತ ಪರಿಹಾರ ಮಾಡಿ ಪೊರೆ ಮಾರಾರಿಪಿತವಂದ್ಯ ಚಾರು ಚರಣಸ್ಮರಣಾರಾಧನೆ (ಅದು) ಸಾಕೋ 13 ಸಾರಿದೆನೋ ಶ್ರೀ ವೇಂಕಟೇಶಾಭಿನ್ನ ಉರಗಾದ್ರಿವಾಸ ವಿಠಲಾ ಪಾರುಗಾಣಿಸಿ ಪೊರೆಯೋ 14
--------------
ಉರಗಾದ್ರಿವಾಸವಿಠಲದಾಸರು
ಭಕುತರ್ಗೆ ಭಯಬಾರದು ಸುಖವೀವ ಕಾವದೇವನಕಾಕುಜನರಿಂದ ಬಂದಾನೇಕ ಶೋಕಂಗಳ ಕಳೆವÀಶ್ರೀರಂಗನ ದೇವೋತ್ತುಂಗನ ಭವಭಂಗನ ಪ. ಹಿರಣ್ಯಕನುದರ ವಿದಾರಣನ ಸ್ವಚರಣಕರಣ ಪ್ರಹ್ಲಾದನ ಭಯನಿವಾರಣನಕರಿವರ ಕರೆಯೆ ಮಕರಿಯ ಸೀಳಿದ ಸಿರಿಯನಾಳಿದಪಿರಿಯ ಶ್ರೀಹರಿಯ ಧೂರ್ತಾರಿಯ ಬಕವೈರಿಯ 1 ಯತಿಕುಲಪತಿಯ ಮಧ್ವಾಚಾರ್ಯರಕೃತಿಯಾಶ್ವರ್ಯ ಚಾತುರ್ಯಕೊಲಿದನಸತಿ ಸಭೆಯಲ್ಲಿ ಸಿರಿಪತಿ ನೀನೆ ಗತಿಯೆನೆಅತಿ ದೂರದಿಂದಕ್ಷಯವೆಂದ ಗೋವಿಂದನ ಮುಕುಂದನ2 ಕುಂಡಲ ಕೌಸ್ತುಭ ನೂಪುರ ಮೊದಲಾದ-ಲಂಕೃತಿಯಿಂದೊಪ್ಪುವ ನೀಲಗಾತ್ರನಪಂಕಜನೇತ್ರನ ಪರಮಪವಿತ್ರನ ಸುಚರಿತ್ರನ ಸುರಮಿತ್ರನ 3 ಗುರುವೆಂದರಿವ ಹರಿಯೆಂದು ಕರೆವ ತ-ಮ್ಮಿರವ ಮರೆವ ಸದ್ಗುಣ ವಿಸ್ತಾರವ-ನ್ನೊರೆವ ನಯನದಿ ಸುರಿವ ಪರಿವ ಸುಖಾಂಬುಧಿಕರೆವ ತೋರುವ ಖಳನಿರವ ಮುಕ್ತಿಗೆ ಕೂರುವ 4 ಹರಿಯನೆ ಪಾಡುವ ಹರಿಯ ಕೊಂಡಾಡುವಹರಿಯ ನೋಡುವ ಹರಿಯನೆ ಬೇಡುವದುರುಳರ ಕಾಡುವ ತಪದಿಂ ಬಾಡುವದುರಿತವ ಬಿಡುವ ಸುಕೃತವನೆ ಕೊಡುವ ಪಾಡಪಾಡುವ ನಲಿದಾಡುವ 5 ಹರಿಯನೆ ಸ್ಮರಿಸುವ ಹರಿಯನನುಸರಿಸುವಹರಿಯನೆ ಪರಿಹರಿಸುವ ಹರಿಯನೆಬೆರಿಸುವಹರಿಯನೆ ತೋರಿಸುವ ಹರಿಯನೆ ಮರೆಸುವಹರಿಪಾದಕೇರಿಸುವ ಸುಖರಸವ ಎರೆಸುವ 6 ಒಂದು ಕೈಯಲಿ ಕಡೆಗೋಲನೆ ಪಿಡಿದು ಮ-ತ್ತೊಂದು ಕೈಯಲಿ ನೇಣನಾಂತ ಶ್ರೀಕಾಂತನಮುಂದೆ ನಿಂದು ಒಲಿವುತ್ತ ನಲಿವುತ್ತತಂದೆ ಹಯವದನನರ್ಚಿಸುವ ಮೆಚ್ಚಿಸುವ ಹೆಚ್ಚಿಸುವ 7
--------------
ವಾದಿರಾಜ
ಭಜನೆ ಭಾಗ್ಯ ಒಂದೇ ಸಾಲದೇ | ಹರೀ ಪ. ಭಜಕರಾದವರಿಗೆ ಹಗಲು ಇರುಳು ಮಾಳ್ಪಾ ಭಜನೆ ಭಾಗ್ಯ ಒಂದೇ ಸಾಲದೆ ಅ.ಪ. ಭಕ್ತರೆಲ್ಲರು ಕೂಡೀ ಮುಕ್ತಿಗೊಡೆಯನ ಪಾಡಿ ಭಕ್ತಿ ಭಾಗ್ಯವ ಬೇಡಿ ನೃತ್ಯವ ಗೈಯುವಾ 1 ತಾಳ ತಂಬೂರಿ ಗೆಜ್ಜೆ ಮೇಳನದಿಂದಲೀ ತೋಳುಗಳೆತ್ತಿ ಪಾಡೀ ವೇಳೆಯ ಕಳೆವಂಥಾ 2 ಹಿಂದೆ ಮುಂದಾಡುವ ನಿಂದಕರಾ ನುಡಿ ಒಂದು ತಾರದೆ ಮನಕಾನಂದವ ಬೀರುವಾ 3 ಕಟ್ಟಳೆ ಮೀರದೆ ಬಿಟ್ಟು ಬಿಡದೆ ನಿತ್ಯ ನಿಷ್ಠೆಯಿಂದಲಿ ಗುರು ಕೊಟ್ಟ ಅಜ್ಞೆ ಎಂಬಾ 4 ಮೂರ್ತಿ ನಿಂತು ಒಳಗೆ ಹೊರಗೆ ಸಂತಸಪಡಿಸೆ ಏಕಾಂತ ಭಕ್ತರು ಮಾಳ್ಪ 5 ಸಾಸಿರ ಸತ್ಕರ್ಮ ಮೀಸಲು ಫಲಗಳೂ ಶ್ರೀಶನ ಧ್ಯಾನಕೆ ತ್ರಾಸಿಗೇರದೆಂಬ 6 ಪದ್ಧತಿಯಂತೆ ತಂದೆ ಮುದ್ದುಮೋಹನ್ನ ಗುರು ಪದ್ಮ ಪಾದಕೆ ಸೇರಿ ಪೊದ್ದಿದ ದಾಸ್ಯದ 7 ತ್ರಿಗುಣದ ಕಲ್ಮಶ ವಗೆದು ದೂರಕೆ ಮನ ಮಿಗಿಲಾಗಿ ಹರಿಪದ ತಗಲಿಕೊಂಬುವುದಕ್ಕೆ 8 ನರ್ತಗೈಯ್ಯುತ ಸುತ್ತಿ ಪ್ರದಕ್ಷಿಣೆ ಎತ್ತಿ ಸ್ವರವ ಹರಿ ಮೂರ್ತಿಯ ಪಾಡುವಾ 9 ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನನು ಇಟ್ಟು ಹೃತ್ಕಮಲದಿ ಮುಟ್ಟುವೋ ಹರಿ ಪುರ 10
--------------
ಅಂಬಾಬಾಯಿ
ಭಜಿಸಿದ್ಯಾ | ವೆಂಕಟನಾ ನೀ | ಭಜಿಸಿದ್ಯಾ ಪ ಭಜಿಸಿದ್ಯ ಈ ಭಾಗ್ಯನಿಧಿಯ | ನೋಡು | ತ್ರಿಜಗವಂದಿತ ಗುಣಾಂಬುಧಿಯಾ ||ಆಹ|| ಪಂಕಜ ಕರ್ಣಿಕೆ ವಾಸ | ಅಜ ಸುರಾರ್ಚಿತ ಪಾದರಜ ತಮದೂರನ್ನ ಅ.ಪ. ಮನ ಸೋಲಿಸುವ ಸುಲಲಾಟ | ಚನ್ನ | ಫಣಿಗೆ ಕಸ್ತೂರಿನಾಮ ಮಾಟ | ನ ಮ್ಮನು ಪಾಲಿಸುವ ವಾರೆನೋಟ |ಆಹ| ಕನಕ ಮೋಹನ ಕುಂಡಲಾ ಕರ್ಣ ಮಿನುಗುವ ಕದವು ಆವಿನ ಸೋಲಿಪ ನಿತ್ಯಾ1 ಭೃಂಗಕುಂತಳ ನೀಲಕೇಶ | ಹುಬ್ಬು | ಚಾಪ ವಿಲಾಸ | ಉ | ತ್ತುಂಗ ಚಂಪಕ ಕೋಶನಾಸ | ರಸ ರಂಗು ತುಟಿ ಮಂದಹಾಸ || ಆಹ || ತಿಂಗಳು ಯೆಳೆ ಬೆಳೆದಿಂಗಳು ಮೀರಿ ಭೂ ಕೃತಿ ತಿರುವೆಂಗಳ ಸ್ವಾಮಿಯ 2 ಪರಿಮಳವೀಳ್ಯ ಕರ್ಪೂರ | ಇಟ್ಟು | ಜಲಧಿ ಗಂಭೀರ | ದಂತ ಪರಿಪಜ್ಞೆ ಸಮ ವಿಸ್ತಾರ ||ಆಹ || ಮಿನುಗುವನಂತ ಚಂದೀರ ತೇಜಾಧಿಕ ಮುಖ ಪರಿಪರಿ ವೇದ ಉಚ್ಚರಿಸುವ ಚತುರಾರ 3 ಬಕುಳಾರವಿಂದ ಮಲ್ಲೀಗೆ | ಅದು | ಕುರುವಕ ಪನ್ನೀರು ಸಂಪಿಗೆ | ಭೂಚಂಪಕ ಜಾಜಿ ಯಿರುವಂತಿಗೆ | ಪೂಕೇತಕಿ ಮರುಗ ಶಾವಂತಿಗೆ ||ಆಹ|| ಸಕಲ ಪೂತರುವಿರೆ ವಿಕಸಿತ ಮುಕುಳಿತ ಮಕರಂದ ಮೊರದ್ವಂದ್ವ ಕಸ್ತೂರಿಯ ನಿಂದು4 ಕರತಾಳರೇಖೋಪರೇಖ | ಕಾಂತಿ | ಅರುಣಸಾರಥಿ ಮಯೂಖ | ಬೇರೆ | ಪರಿ ಶೊಭಿತ ಹಸ್ತ ಶಂಖ | ಗದೆ | ಧರಿಸಿದ ಚಕ್ರ ನಿಶ್ಶಂಕ || ಆಹ | ಸರಿಗೆ ಕೌಸ್ತಭಮಣಿ ಸಿರಿವತ್ಸವನ ಮಾಲೆ ವೈಜಯಂತಿ ಮಂಜರಹೀರ ಹಾರನ್ನ5 ಕಡಗ ಕಂಕಣ ಮುದ್ರೆ ಬೆರಳ | ಪಾಣಿ | ನಿಡಿತೋಳ ಕಕುಭುಜಿ ಕೊರಳ ಸ್ಕಂಧ ವಿಡಿ ಸಪ್ತವರಣ ವಿಸರಳ | ಬೆನ್ನು | ಮುಡಿಯವಿಟ್ಟ ಮಣಿಹವಳ ||ಆಹ | ಝಡಿತದ ಪವಳ ವಡಸೀದ ಕೇಯೂರ ವಡನೆ ಕಾಯಿಕ ಕೀರ್ತಿ ವಡಲೀಲಿ ಮೆರೆವನ್ನ6 ಮುತ್ತು ವೈಢೂರ್ಯ ಪ್ರವಾಳ | ಪಚ್ಚೆ | ಕೆತ್ತಿದ ಪದಕನ್ಯಾವಳ ಸುತ್ತ ಸುತ್ತಿದ ಸನ್ಮುಡಿವಾಳ | ಇತ್ತ ತುತಿಪ ಜನಕೆ ಜೀವಾಳ ||ಆಹ || ಪ್ರತ್ಯೇಕವಾಗಿ ತೂಗುತ್ತಿಹ ಸರಗಳ ಸುತ್ತುಲಸಿಯ ಮಾಲೆ ಚಿತ್ರವಾಗಿರೆ ಬಹಳ 7 ಕೇಸರಿ ಅಂಬರ | ಗೋರೋ ಚನ ನಖಚಂದ ನಗಾರು | ಪೆಚ್ಚಿ | ತೆನೆ ಮೃಗನಾಭಿ ಪನ್ನೀರ | ವೆಳ | ಘನಪರಿಮಳ ಗಂಧಸಾರ ||ಆಹ || ಸೊಗಸು ಸಲಿಸುತ್ತ ಒಪ್ಪುವ ಘನರುಹ ತ್ರಿವಳಿಯಾ 8 ತ್ರಿವಳಿ ಉಪಗೂಢ ಜಠರ | ಅಖಿ | ಳಾವನೀ ಧರಿಸಿದಾ ಧೀರಾ | ಮೇಲೆ | ಕುಸುಮ ಮಂದಿರಾ | ಮೃಗದೇವ ಉಡಿನಡು ಧಾರಾ ||ಆಹ || ಭಾವ ಕಿಂಕಿಣಿ ತೋಳಲಿವಾಸನಾ ಬಿರು ದಾವಳಿಕೊಂಡರು ದೈತ್ಯಾವಳಿ ಹಾರನ್ನಾ 9 ಊರು ಜಾನು ಜಂಘ ಗುಲ್ಫ | ವಿ ಚಾರ ಶಕ್ರ ಮಾತು ಅಲ್ಪ | ಎನ್ನ ತೋರುನೆಯ ಅಗ್ರ ಸ್ವಲ್ಪ | ಗುಣ | ಸಾರಮಾಡಿಪ್ಪ ಸಂಕಲ್ಪ ||ಆಹ || ವಾರಣಕರದಂತೆ ಹಾರೈಸು ಈ ತನೂ ಪುರ ಕಡಗಾ ಗೆಜ್ಜೆ ಚಾರುಚರಣ ಪೆಂಡ್ಯಾ10 ಪಾದ | ಪಾಪ ಪಾದ | ಕಾಮ ಪಾದ | ಬಹು ಪಾದ ||ಆಹಾ|| ಅನಂತ ಚಿನ್ಮಯ ಒಮ್ಮೆ ನೀನೇ ಗತಿಯೆಂಬ ಮಾನವಗೆ ಬಂದು ಕಾಣಿಸಿಕೊಂಬನ11 ಮೃದುತಾಳಾಂಗುಲಿನಿಸಿ ಭಾಸ | ರಕ್ತ ಪದತಳ ಧ್ವಜ ವಜ್ರಾಂಕುಶ | ಚಕ್ರ ಪದುಮ ಚಿಹ್ನೆ | ನಿರ್ದೋಷ | ಸುಧಿ ಸುಧ ಕಥಾಪಾಠ ಸರಸÀ ||ಆಹ|| ತ್ರಿದಶನಾಯಕ ಶಿವ ವಿಧಿಗಮುಗುಟ ಪಾದದಲಿ ಸಮರ್ಥವಾದರು ನೋಡು ತರುವಾಯ 12 ಆಪದ್ರಕ್ಷಕ ಸುರಾಧ್ಯಕ್ಷ | ಜಗ | ದ್ವ್ಯಾಪಕ ಕರುಣಾಕಟಾಕ್ಷ | ಜಾಗ್ರತ್ | ಸ್ವಪ್ನದಲಿ ನೀನೆ ದಕ್ಷಾ | ನಗೆ | ಆಪನ್ನರಿಗೆ ನೀನೆ ವೃಕ್ಷಾ ||ಆಹ || ರೂಪರೂಪಾಂತರ ವ್ಯಾಪಾರ ಮಾಳ್ಪನ್ನ ಆಪಾದ ಮೌಳಿ ಪರಿಯಂತರ ನೀನು 13 ಹಿಂದಾಣ ಅನುಭವ ಧಾನ್ಯ | ಲೋಹ | ತಂದು ಸಂಪಾದಿಸೋ ಜ್ಞಾನ | ಭಕ್ತಿ | ಯಿಂದ ಮುಂದಕೆ ನಿಧಾನ | ಚಿತ್ತ | ಯಿಂದು ಕೊಂಡಾಡೋ ಮುನ್ನೀನ ||ಆಹ|| ಬಂಧನ ಹರಿಸಿ ಆನಂದಾವ ಕೊಡುವ ಮು- ಕುಂದ ಅನಿಮಿತ್ತ ಬಂಧು ವೆಂಕಟನಾ ನೀ14 ನಿತ್ಯ | ನೀಲ | ಪುಣ್ಯ | ವ್ರಜವ ಪಾಲಿಸುವ ವಿಶಾಲ | ವಿತ್ತು | ನಿಜದೊಳಗಿಡುವ ಈ ಕೋಲ ||ಆಹ|| ವ್ರಜದಲ್ಲಿ ಪುಟ್ಟಿದ ಸುಜನಾರಾಂಬುಧಿ ಸೋಮ | ವಿಜಯವಿಠ್ಠಲರೇಯ ಗಜರಾಜವರದನ್ನ 15
--------------
ವಿಜಯದಾಸ
ಭಜಿಸಿದ್ಯಾ ಈ ಭಾಗ್ಯನಿಧಿಯಾ ನೋಡು ಸುಜನರ ಹೃದಯ ಪಂ ರಜತಮೋ ದೂರನ್ನ ಪ ಮನ ಸೋಲಿಸುವ ಲಲಾಟ ಫಣಿ ನಮ್ಮನು ನೋಡುವ ವಾರೆ ನೋಟಾ ಹಾಹಾ ಮಕರ ಕುಂಡಲ ಕರ್ಣ ಕದಪು ಆವಿನ ಸೋಲಿಸೆ ನಿತ್ಯಾ 1 ಭೃಂಗ ಕುಂತಳ ಕೇಶಾ ಪುಬ್ಬು ಅಂಗಜ ಚಾಪಾ ವಿಲಾಸ ಉ ತ್ತುಂಗ ಚಂಪಕ ಕೋಶಾ ನಾಸಾರಸಾ ರಂಗುದುಟಿಯ ಮಂದಹಾಸಾ ಹಾಹಾ ತಿಂಗಳ ಎಳೆ ಬೆಳ ದಿಂಗಳಾ ಮೀರೆ ಭೂ ಮಂಗಳಾಕೃತಿ ತಿರುವೆಂಗಳ ಸ್ವಾಮಿಯ 2 ಪರಿಮಳ ವೀಳ್ಯೆ ಕರ್ಪುರಾ ವಿಟ್ಟಾ ಜಲಧಿ ಗಂಭೀರಾ ದಂತ ಪರಿಪಙË್ತ ಸಮ ವಿಸ್ತಾರ ಹಾಹಾ ಮಿರುಗುವಾನಂತ ಚಂ ಚರಿಸುವ ಚತುರನ್ನ 3 ಪನ್ನೇರು ಸಂಪಿಗೆ ಪೊಂಗೇ ಜಾಜಿ ಇರುವಂತಿಗೆ | ಹಾಹಾ | ಮಕರಂದಾ ಮಾರಂದೋದಕ ಸುರಿಯಲಿಂದು4 ನಿಡಿದೋಳು ಕಕುಭುಜಾ ಕೊರಳಾ ಸ್ಕಂಧಾ ಮಣಿ ಹರಳಾ | ಹಾಹಾ| ಒಡನೆ ತಾಯಿತ ಕೀರ್ತಿ ವಡಿವೇಲಿ ಮೆರೆವನ್ನ 5 ಸುರವಿ ಮಯೂಖಾ ಮೇಲು ಧರಿಸಿದ ಚಕ್ರಾದಿ ಶಂಖಾ | ಹಾಹಾ | ಕೌಸ್ತುಭ ಮಣಿ ಸಿರಿವತ್ಸ ವನಮಾಲಾ ಉರವೈಜಯಂತಿ ಮಂದಾರ ಹೀರ ಹಾರನ್ನ6 ಮುತ್ತು ವೈಢೂರ್ಯ ಪ್ರವಳಾ ಪಚ್ಚ್ಚೆ ಕೆತ್ತಿದ ಪದಕ ನ್ಯಾವಳಾ ಸ್ತುತಿಪ ಜನಕೆ ಜೀವಾಳಾ | ಹಾಹಾ | ಪ್ರತ್ಯೇಕವಾಗಿ ತೂಗುತಿಹ ಸರಗಳು ತತ್ತುಲಸಿಧಾಮ ಚಿತ್ರವಾಗಿರೆ ಬಲು 7 ನಖ ಚಂದನಾ ಅಗರಾ ಪಚ್ಚೆ ಘನ ಪರಿಮಳ ಗಂಧ ಸಾರಾ | ಹಾಹಾ | ತನುವಿಗೆ ತನುವು ಲೇಪನವಾದಾ ಸೊಗಸು ವಾ ಸನೆ ಸುತ್ತ ಘಮಘಮ ತನರು ಹಾವಳಿ ತಿಳಿ 8 ತ್ರಿವಳಿ ಉಪಗೂಢ ಜಠರಾ ಅಖಿಳಾವನಿ ಧರಿಸಿದ ಧೀರಾ ನಾಭಿ ಕುಸುಮ ಮೃಗ ದೇವ ಉಡಿ ಉಡದಾರಾ | ಹಾಹಾ | ಭವಕಿಂಕಿಣಿ ತಳಲಾವಿ ವಸನ ಬಿರು ತೊಡರು ದೈತ್ಯಾವಳಿ ಹರನನ್ನಾ 9 ಊರು ಜಾನು ಜಂಘೆ ಗುಲ್ಫಾ ವಿಚಾರಿಸೆ ಕ್ರಮಾತು ಅಲ್ಪಾ ತನ್ನ ಸಂಕಲ್ಪಾ | ಹಾಹಾ| ವಾರಣಾ ಕರದಂತೆ ಹಾರೈಸುಯಿಂತು ನೂ ಚಾರು ಚರಣ ಪೆಂಡೆ10 ನಖ ವಜ್ರಾಂಕುಶ ಚಕ್ರ ಸುಧಿಯಾ ಸುರಿವ ಪೀಠ ಸರಸಾ | ಹಾಹಾ | ತ್ರಿದಶನಾಯಕ ಶಿವ ವಿಧಿಗಳ ಮುಕುಟ ಪಾದದಲಿ ಸಮ್ಮರ್ದವಾದುದು ನೋಡಿ ತರುವಾಯಾ 11 ದಹಿಸುವ ಪಾದಾ ಕಾಮ ಕಾನನ ದಹಿಸುವ ಪಾದಾ | ಹಾಹಾ | ಅನಂತ ದಿನಕ್ಕೊಮ್ಮೆ ನೀನೇ ಗತಿಯೆಂದಾ ಮಾನವಗೆ ಬಂದು ಕಾಣಿಸಿಕೊಂಬನ್ನ12 ಅಪದಕ್ಷ ಸಾರಾಧ್ಯಕ್ಷ ಸರ್ವವ್ಯಾಪಕ ಕರುಣಿಕಟಾಕ್ಷ ಜಾಗ್ರತ್ ಸ್ವಪ್ನದಲ್ಲಿ ಪ್ರಾಜ್ಞಾದಕ್ಷ ನಿಜ ಆಪನ್ನರಿಗೆ ದಾವಾ ವೃಕ್ಷ | ಹಾಹಾ | ರೂಪ ರೂಪಾಂತರ ವ್ಯಾಪಾರ ಮಾಳ್ಪನ್ನ ಆಪಾದ ರತುನ ಮೌಳಿಪರಿಯಂತರಾ13 ಸಂಪಾದಿಸು ಜ್ಞಾನಾ ಭಕ್ತಿ ಕೊಂಡಾಡು ಮುನ್ನಿನಾ | ಹಾಹಾ | ಬಂಧನ ಹರಿಸಿ ಆನಂದವ ಕೊಡುವ ಮು ಕುಂದ ಅನಿಮಿತ್ತ ಬಂಧು ವೆಂಕಟನ್ನ 14 ನಿತ್ಯ ಭಜಿಸುವ ಜನರಿಗೆ ಶೀಲಾ ಪುಣ್ಯ ನಿಜರೊಳಗಿಡುವ ಈ ಕೂಲಾ | ಹಾಹಾ | ವ್ರಜದಲಿ ಪುಟ್ಟಿದಾ ಸುಜನಾಂಬುಧಿ ಸೋಮ ವಿಜಯವಿಠ್ಠಲರೇಯಾ ಗಜರಾಜವರದನ್ನಾ 15
--------------
ವಿಜಯದಾಸ
ಭಾರ ನಿನ್ನದು ತಂದೆ ಸಿಂಧು ಎಂದೆಂದು | ಗುರುವರ್ಯ ಬಂದು ಕರುಣಿಸುವನು ಮದ್ಬಂಧೊ 1 ಮಂಗಳಾತ್ಮನೆ ಎನ್ನ ಅಂಗದಲಿ ನೀನಿಂದು ಪೊಂಗಳಧರನ ತೋರಯ್ಯ | ಅಜರಾಯ ಭಂಗಬಡಲಾರೆ ಭವದೊಳÀು 2 ನಾರಾಯಣನ ಪುತ್ರ ನಾರಾಯಣಗೆ ಮಿತ್ರ ನಿರವದ್ಯ | ನೀಡಭಯ ಕರುಣಾತ್ಮ ಗುರುವೆ ಒಲಿದಿಂದು 3 ಕಾಮರೂಪನೆ ಹರಿಯನೇಮದಲಿ ಕಪಿಯಾಗಿ ಆ ಮಹಿಮೆಗುಂಗುರ ಅರ್ಪಿಸಿ | ಅಗ್ನಿಯಲಿ ತಾಮಸರ ಹುರಿದೆ ಪುರದಲ್ಲಿ 4 ಮರಳಿ ಶರಧಿಯ ದಾಂಟಿ ಭರದಿ ರಘುಪತಿ ಚರಣ ಸರಸಿಜದಿ ಚೂಡಾಮಣಿಯನ್ನು | ಒಪ್ಪಿಸಿ ಹರಿ ಅಂಗ ಸಂಗ ಪಡೆದಯ್ಯ 5 ಸಿಂಧÀುವನು ಬಂಧಿಸಿ ಬಂದ ವಿಭೀಷಣಗೆ ಕುಂದದೆ ಅಭಯ ಕೊಡಿಸಿದೆ | ದಯಸಿಂಧು ನಿಂದೆನ್ನ ಒಳಗೆ ಮುದವೀಯೊ 6 ದೇವೇಶನಾಜ್ಞೆಯಲಿ ಜೀವೇಶ ಸಂಜೀವ ಪರ್ವತ ತಂದು ಕಪಿಸೈನ್ಯ | ಎಬ್ಬಿಸಿ ಮೊದಲೆಡೆಗೆ ಬಗೆದ ಕುಶಲಾತ್ಮ 7 ದಶಶಿರನ ಕೊಲ್ಲಿಸಿ ವಸುಧಿಪುತ್ರಿಯ ತಂದು ನಸುನಗುತ ರಾಮಚಂದ್ರಾಗೆ | ಒಪ್ಪಿಸಿ ವಿ ಭೀಷಣಗೆ ರಾಷ್ಟ್ರ ಕೊಡಿಸಿದೆ 8 ಪ್ರೇಮದಿ ಭರತನು ಸ್ವಾಮಿ ಬರಲಿಲ್ಲೆಂದು ಕಾಯ ಬಿಡುತೀರೆ | ಉಳುಹಿದೆ ಶ್ರೀ ರಾಮನಾಗಮನ ತಿಳುಹೀಸಿ9 ತುಷ್ಟನಾದೆನು ಹನುಮ ಇಷ್ಟ ನೀ ಬೇಡೆನಲು ಪಾದ ಪಿಡಿಯಲು | ಭಕ್ತಿಯಲಿ ಪಟ್ಟಾಭಿರಾಮ ತನ್ನಿತ್ತ 10 ಆಖಣಾತ್ಮಕಾಯನೆ ಅಕಳಂಕ ಗುಣಧಾಮ ನಿಖಿಲಾತ್ಮ ಹರಿಯ ಪೂಜಿಪ | ದೃಢಮಹಿಮ ಶ್ರೀಕೃಷ್ಣ ಭಕ್ತಾ ಕಲಿಭೀಮ 11 ಶಿಶುಭಾವದಲಿ ನೀನು ಶತಶೃಂಗ ಗಿರಿವಡೆದು ನಸುನಗುತ ಜನನಿಗಭಯವ | ನಿತ್ತಂಥ ಪಶುಪಾಲ ಪರನೆ ಪೊರೆಯೆನ್ನ 12 ದುರ್ಯೋಧನನ ತ್ರಾಣ ತಂತುಗಳ ಹರಿದಾಡಿ ಸರ್ವೇಶ ಹರಿಗೆ ಪ್ರಿಯಮಾಡಿ | ನಲಿದಂಥ ಸರ್ವಜ್ಞ ಭೀಮ ಬಿಡೆ ನಿನ್ನ 13 ದುಶ್ಯಾಸನನ ಮಹಾದುಶ್ಯೀಲ ಸ್ಮರಿಸುತ್ತ ಪಶುವಂತೆ ವಧೆಯ ಮಾಡಿದಿ | ರಣದೊಳು ಸುಸ್ವಾದ ಗುಣಸಾರ ಮಹವೀರ 14 ಮಾನಿನಿಯ ಸಂಕಲ್ಪ ತ್ರಾಣನೀ ಪೂರೈಸಿ ಪ್ರಾಣಸಖನಾಗಿ ಸಲಹಿದೆ | ಜಯಭೀಮ ಪಾಣೆ ಪಿಡಿಯೆನ್ನ ಮಹಘನ್ನ 15 ದುರಾರಾಧಕ ದುಷ್ಟ ಜರಸಂಧನ ಸೀಳಿ ಮುರಾರಿ ಮತ್ಪ್ರೀತಿ ಬಿಡಿಸಿದೆ | ದೀಕ್ಷೆಯಲಿ ತ್ರಿ ಪುರಾರಿ ವಂದ್ಯಾಗತಿ ನೀನೆ 16 ನಾರಾಯಣಾಸ್ತ್ರವನು ವೀರ ಗುರುಸುತ ಬಿಡಲು ಚೀರಿ ನಮೋಯೆನ್ನೆ ನೃಪರೆಲ್ಲ | ಸ್ಮøತಿ ತಪ್ಪೆ ಧೀರ ಎದುರಾಗಿ ನೀ ನಿಂತೆ 17 ಗರಡಿಯಲಿ ಕೀಚಕನ ಮುರಿದು ಮುದ್ದೆಯ ಮಾಡಿ ಮರಿಯದೆ ಅವನ ಅನುಜರ | ಸದೆಬಡಿದು ಮೋದ ನೀನಿತ್ತೆ 18 ಉರಗ ಬಂಧವ ಹರಿದು ಕರಿ ಮುಂದೆ | ನೀನಿಂತೆ ಸರ್ವನಿತ್ಯಾತ್ಮ ಕೃಷ್ಣಾತ್ಮ 19 ಮಧುವೈರಿ ಧ್ಯಾನದಲಿ ಕುದುರೆ ಆಟವನಾಡಿ ಮುದದಿಂದ ಕುರುಪನ್ಹೆಗಲೇರಿ | ಹುದುಗ್ಯವನ ಮುದದಿಂದ ನಲಿದೆ ಕಮಲಾಕ್ಷ 20 ಅರಗಿನ ಮನೆಯಲ್ಲಿ ವೈರಿಜನರ ಕೊಂದು ಪೊರೆದೆ ನೀ ಜನನಿ ಅನುಜರ | ಪಂಜರನೆ ಧರೆಯೊಳಗೆ ಎನ್ನ ಸಲಹಯ್ಯ 21 ಹಿಡಿಂಬನ ಕೊಂದು ವರ ಹಿಡಿಂಬಿಯ ಕೈಪಿಡಿದು ನಡೆದೇಕ ಚಕ್ರಪುರದಲ್ಲಿ | ಬಕನೊರಸಿ ನಡಕ ಬಿಡಿಸೀದಿ ಸುಜನರ 22 ವ್ಯಾಸದೇವನ ಕಂಡು ಸೂಸಿದ ಸದ್ಭಕ್ತಿ ಪಾಶದಲಿ ಕಟ್ಟಿ ಒಳಗಿಟ್ಟು | ಪೂಜಿಸುತ ಲೇಸಾಗಿ ಮುಂದೆ ನಡೆದಯ್ಯ 23 ನೀ ಸ್ವಯಂವರ ಸಭೆಯ ವೇಷಾಂತರದಿ ಪೊಕ್ಕು ವಾಸುದೇವನ ಕಂಡು ಆನಂದ | ತುಳುಕುತ್ತ ಆ ಸತಿಯ ತಂದೆ ವಿಜಯಾತ್ಮ 24 ರಾಜರೆಲ್ಲರ ಹಿಡಿದು ರಾಜಸೂಯಯಾಗವನು ಪೂಜೆಯನು ಮಾಡಿ ಮೆರದಯ್ಯ 25 ಲಕ್ಷ್ಮೀವನಕ್ಹೋದಂತೆ ಪಕ್ಷಿಯರ ಒಡಗೂಡಿ ದಕ್ಷನೆ ನೀನು ವನವಾಸ | ಅಜ್ಞಾತ ಪಕ್ಷವ ಕಳೆದು ಮರಳಿದೆ26 ಸಂಗರವ ನೀ ಹೂಡಿ ಭಂಗಿಸಿ ಕೌರವನ ರಂಗನ ಮುಂದೆ ಅರ್ಪಿಸಿ | ವಂದಿಸಿ ಮಂಗಳಾತ್ಮಕನೆ ಸಲಹೆಮ್ಮ 27 ನಿರ್ಮಲ ರಾಜ್ಯವನು ಧರ್ಮಂಗೆ ನೀನಿತ್ತೆ ನಿರ್ಮೂಲಗೈದು ಅರಿಗಳ | ಕೊಂದ ಪರ ಧರ್ಮಪರರನ್ನು ಪೊರೆದಯ್ಯ 28 ಮಧ್ವಾಖ್ಯ ಮಹವೀರ ಶುದ್ಧ ಸತ್ವ ಶರೀರ ಉದ್ಧರಿಪುದೊಂದೆ ವ್ಯಾಪಾರ | ಕೈಕೊಂಡ ವಿದ್ಯಾಧಿಪತಿಯೆ ಸಲಹೆನ್ನ 29 ಶ್ವಾಸ ನಿಯಾಮಕ ಪ್ರಭುವಾಸವೆ ನಿನ್ನಿಂದ ಉಸರಲೇನಯ್ಯ ನಿನ್ನಲ್ಲಿ | ಜೀವೇಶ ಸೂಸುವ ಭಕ್ತಿ ನೀಡಯ್ಯ 30 ವೇದ ಚೋರನ ಮಡುಹಿ ಸಾದರದಿ ಸುಜನಕ್ಕೆ ಬೋಧ ಮಾಡೆಂದು ಶ್ರೀ ವಿಷ್ಣು | ಕಳುಹಿದ ಮಧ್ವಾಖ್ಯ ಗುರುವೆ ಪರಿಪಾಹಿ 31 ಸುರರು ದುಂದಭಿ ಮೊರೆಯೆ ದುರುಳರ ಎದೆಯು ನಡುಗಲು | ಹರುಷದಲಿ ಮೆರೆದು ನೆರೆದರು ಸುಜನರು 32 ಕೈವಲ್ಯ ನೀನಿತ್ತೆ ಶ್ರೀವಲ್ಲಭನ ಪ್ರಥಮಾಂಗ | ಪ್ರಸನ್ನ ನೀವಲಿದು ಹರಿಯ ತೋರಯ್ಯ 33 ಹುಣಿಸೆ ಬೀಜದಿ ಪಿತನ ಘನೃಣವ ತೀರಿಸಿದಿ ಅಣಿಮಾದಿ ಸಿದ್ಧಿ ತೃಣವಯ್ಯ | ನಿನಗಿನ್ನು ಗುಣಪೂರ್ಣ ಹರಿಯ ಪ್ರತಿಬಿಂಬ 34 ಶಿವಭಟ್ಟನನು ಗೆದ್ದು ಜಯಾಂಕ ರಸ ತೋರೆ ವಿಪ್ರ ಸುರರು ಪೂಜಿಸೆ | ನಲವಿಂದ ಅವನಿಯೊಳು ಪೊಳೆದೆ ರವಿಯಂತೆ 35 ವಿದ್ಯಾಧಿಪತಿ ಗುರುವೆ ವಿದ್ಯೆ ಪೇಳಿದ ದ್ವಿಜಗೆ ಸದ್ಭಕ್ತಿ ದಕ್ಷಿಣೆ ನೀನಿತ್ತೆ | ಕರುಣಾತ್ಮ ಉದ್ಧರಿಸು ಎನ್ನ ದ್ವಿಜರತ್ನ 36 ಜನನಿ ಜನಕರು ತಡಿಯೆ ಅನುವಾದ ಸುತನಿತ್ತು ಘನವಾದ ತುರ್ಯ ಆಶÀ್ರಮ | ಕೈಗೊಂಡು ಸುನವ ಪದ್ಧತಿಯ ತೋರಿದೆ 37 ಅಚ್ಯುತ ಪ್ರೇಕ್ಷಕರಿಗೆ ಹೆಚ್ಚಾದ ದಯದಿ ಹರಿ ನಿನ್ನ | ವೊಯ್ದಿತ್ತ ಅಚ್ಚುಮೆಚ್ಚುವ ನೀ ಹರಿಗೆಂದು 38 ವಾದಿಗಳ ಭಂಗಿಸಲು ಸಾದರದಿ ಯತಿ ಕರಿಯೆ ಛೇದಿಸಿ ಖಳರ ಮದವನ್ನು | ಹರಿಸಿದೆ ಸ್ವಾದ ಗುಣಸಿಂಧು ಮದ್ಬಂಧು 39 ಬಾಳೆಗೊನೆಗಳ ಮೆದ್ದು ಬಾಡಲೇತಕೆ ಉದರ ಪೇಳೆಂದ ಯತಿಗೆ ಜಠರಾಗ್ನಿ | ಬ್ರಹ್ಮಾಂಡ ಕೊಳ್ಳುವದುಯೆಂದು ವರದಯ್ಯ 40 ವಾದಗಳ ಪರಿಹರಿಸಿ ಬೋಧಿಸಲು ಆ ದ್ವಿಜರು ಪಾದಕ್ಕೆ ಎರಗಿ ನಮೋ ಎಂದು ಅಮರರಿಗೆ ಆ ಬೋಧವೊ ಮಹಿಮೆಯೆಂದಾರು 41 ಬದರಿಯಾತ್ರೆಯಲಿ ಸುರನದಿಯು ತಾ ಮಹಿಪಡೆದು ಮುದದಲ್ಲಿ ಬಂದು ನಮಿಸಲು | ಶಿಷ್ಯಜನ ಯೈದಿ ಭಕ್ತಿಯನು ನಮೋ ಎಂದು 42 ಹರಿಯಂತೆ ನರಿಗಳನು ತುರಕ ದೂತರ ಜರಿದು ನರಪನಿಂದರ್ಧ ಮಹಿಮೆಯನ್ನು | ಪಡೆದಂಥ ಯರಡೇಳು ಭುವನ ಅಧಿಪತಿ 43 ಸತ್ಯತೀರ್ಥರ ಬಳಿಗೆ ದೈತ್ಯ ವ್ಯಾಘ್ರನು ಬರಲು ಮೃತ್ಯುವಿನ ಪುರಕೆ ಕಳುಹಿದೆ | ಲೀಲೆಯಲಿ ಭೃತ್ಯತ್ವಯೆನಗೆ ನೀಡಯ್ಯ 44 ಸೂಸುವಾ ಭಕ್ತಿಯಲಿ ವ್ಯಾಸದೇವನ ಕಂಡು ಈಶ ಸಲಹೆಂದು ಎರಗಲು | ಮನವುಬ್ಬಿ ಬಾ ಸುತನೆ ಎಂದು ತಬ್ಬಿದ 45 ಆನಂದ ಮೂರ್ತಿಯ ಆನಂದ ಸಂಗವನು ಆನಂದದಿಂದ ನೀ ಯೈದಿ | ನಂದ ಆನಂದ ತೀರ್ಥ ಕೊಟ್ಟೆಯೊ 46 ನಾರಾಯಣನಲಿ ಕರೆದೊಯ್ಯೆ ಬದರಿಪನ ಚರಣಾಬ್ಜಕೆರಗಿ ಹರಿಲೀಲೆ | ಸ್ಮರಿಸಿದ ಗುರುರತ್ನ ಸಲಹೊ ಧನ್ಯಾತ್ಮ 47 ಅಚ್ಯುತನ ಸಂಗದಲಿ ಚಿತ್ಸುಖವ ಉಂಡುಬ್ಬಿ ಹೆಚ್ಚಿನ ಪದವಿ ಇಲ್ಲೆಂದು | ನಲಿದಂಥ ಅಚ್ಯುತಾತ್ಮಾನೆ ಸಲಹೆನ್ನ 48
--------------
ಜಯೇಶವಿಠಲ
ಭಾಸ್ಕರನುದಿಸುತಿರಲು ದೋಷ ನಿಲ್ಲಲ್ಯಾಕೆ ಪ ಭಂಗಾರ ದೊರಕಿರಲು ಬ್ಯಾಗಡಿಯ ಬಯಕ್ಯಾಕೆಗಂಗಾಂಬು ಇರಲು ಕೂಪೋದ(ಕ ?)ವ್ಯಾಕೆಶೃಂಗಾರ ಗುಣನಿಧಿ ಶ್ರೀನಿವಾಸಾರ್ಯರಾಅಂಗಾರವಿರಲನ್ಯ ಔಷಧಗಳ್ಯಾಕೆ1 ಕರಿ ದುರಿತ ತಿರುಗಿ ಬರಲ್ಯಾಕೆ 2 ಲೌಕಿಕಾಚಾರ ವರ್ಜಿತರೆಂಬ ಬಿರದಿನಲಿ ವೈ-ದಿಕಾಚಾರದಲಿ ದಕ್ಷ ದೀಕ್ಷಾಭವರೋಗ ವೈದ್ಯ ಮೋಹನ್ನ ವಿಠಲನ್ನ ಪ್ರೀಯಕವಿಕುಲ ತಿಲಕನಿರೆ ಕಳವಳಿಸಲ್ಯಾಕೆ 3
--------------
ಮೋಹನದಾಸರು
ಭೀಮಶೇನಾರ್ಯರು | ಭೂಮಿತ್ಯಜಿಸಿ ಪರಂ ಧಾಮವ ಸೇರಿದರು || ಶ್ರೀಮತ್ ಕಾರ್ಪರ ಕ್ಷೇತ್ರ | ಸ್ವಾಮಿಯ ಸಂಪೂರ್ಣ ಪ್ರೇಮ ಪಡೆದವರು | ಕೇಳಿದವರು ಪ ಪರಿಮಳ ಗಾತ್ರರ ಕರುಣ ಪ್ರಸಾದದಿ ಧರೆ ಸುರಾಗ್ರಣಿ ಎನಿಪ ವರ ಜಯಾರ್ಯರ ಪತ್ನಿ | ನರಸಾಂಬೆಯಗರ್ಭ ಶರಧಿಗೆ ಹರಿಣಾಂಕರು ಸುಶಾಂತರು 1 ಎಡರೇಸು ಬಂದರೂ ಬಿಡದೆ ಸ್ವಧರ್ಮವ ಕಡುಭಕ್ತಿ ಪೂರ್ವಕದಿ ಹುಡುಗನ ಮಾತಿಗೆ | ಒಡೆದುಸ್ತಂಭದಿ ಬಂದ ಒಡೆಯನರ್ಚಿಸಿದವರು | ಕೋವಿದರು 2 ಪಂಚಬಾಣನ ಗೆದ್ದು | ಪಂಚ ಭೇದವನರಿತು ಪಂಚಾಸ್ಸನುತ ಮಾನವ ಪಂಚಾಶ್ಯದಯದಿ ಪ್ರಪಂಚ ಸಾಗಿಸುವಂಥ ಪಾಂಚಾಲಿಪತಿ ಪ್ರಿಯರು | ನಿಷ್ಕಿಂಚನರು 3 ವತ್ಸರ ಪರಿಯಂತ ನಿಷ್ಟೆಯಲಿ ನಿರುತ ತಪ ಚಳಿ ಮಳೆ ಸಹಿಸಿ ಪರಮೇಷ್ಟಿ ಜನಕನ ನಿರುತ ಸೇವಿಸಿದವರು | ನಿರ್ಮಮರು 4 ವಿನಯ ಸುಶೀಲ ಸದ್ಗುಣದಿ ಭೂಷಿತರಾದ ತನಯರೀರ್ವರ ಕರೆದು ರಿಣವಿನು ತೀರಿತು ಎನುತ ಪೇಳುತ ದ್ವಿಜಗಣಿಕೆ ದಕ್ಷಿಣೆ ನೀಡಿ ನಮನ ಮಾಡಿ 5 ಹರುಷ ಭರಿತರಾಗಿ ಸರ್ವಜಿತು ನಾಮದ ವರುಷದೊಳ್ ಯುಗ ಮಾಸದಿ | ಶರದಪಕ್ಷ ಪ್ರತಿಪದ ಪ್ರಥಮ ಕಾಯ 6 ವರುಷಂ ಪ್ರತಿ ತಪ್ಪದೆ | ಚರಿಸುತ ದೇಶದೋ ಳಿರುವ ಸದ್ಭಕ್ತರಿಗೆ | ವರಶಾಮ ಸುಂದರ ನರಹರಿದರುಶನ | ಗರೆದ ಪಾಲಿಸಿದವರು ಪಾವನ್ನರು 7
--------------
ಶಾಮಸುಂದರ ವಿಠಲ
ಭುಜಗ ಭೂಷಣ ಪಾಹಿ ಪ ಗಜ ಅಜಿನಾಂಬರ ಅ.ಪ. ಗಿರಿಜೆಯ ಮನೋಹರ | ಸುರಪತಿ ಗುರುವರಕರುಣದಿಂದಲಿ ತವ | ಚರಣ ಸ್ಮರಣೆ ಕೊಡು 1 ಪಂಚಸುವದನನೇ | ಸಂಚಿತಪ ಕೆಡಿಪನೇಪಂಚ ಬಾಣನ ಪಿತ | ಮಂಚ ಪದಾರ್ಹನೆ 2 ತ್ರಿಶೂಲ ಡಮರುಗಾ | ಭಸುಮಾದಿ ಭೂಷಿತಾದಶ ಶಿರ ಮದಹರ | ನಿಶಿಚರ ಗುರುವರ3 ಪಕ್ಷೀಂದ್ರ ವಂದ್ಯರಾ | ಅಕ್ಷಾರಿ ಹರಿವರಾಕುಕ್ಷ್ಯುದ್ಭವ ಹರ | ದಕ್ಷಾದ್ವರ ಹರ 4 ವಿಷಧಿಯೋಳುದಿಸಿದಾ | ವಿಷಗಣ ಭುಜಿಸಿದಾವಿಷಕಂಠನೆನಿಸಿದ | ನಿಶಿಚರ ವರಪ್ರದ 5 ಗಗನೇಶಾ ಜನಕಾ | ಮೃಗಾಂಕ ಶ್ರೀ ಶುಕಾನಗಪಗೆ ಪೋಷಕ | ಷಣ್ಮುಖ ಜನಕಾ 6 ತ್ರೈರೂಪಾ ತ್ರಿನಯನಾ | ಗುರು ಗೋವಿಂದ ವಿಠಲನಾನಿರುತದಿ ಸ್ಮರಣಾ | ಭರಣ ಶೋಭನ 7
--------------
ಗುರುಗೋವಿಂದವಿಠಲರು