ಒಟ್ಟು 253 ಕಡೆಗಳಲ್ಲಿ , 4 ದಾಸರು , 252 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಜಯಂಗೈವುದು ಹಸೆಗೀಗಾ ಪ ಅಜಮುಖ ಸುರನುತೆ ಅಖಿಳಲೋಕೈಕ ಮಾತೆ ಅ.ಪ ಕೃಷ್ಣನ ಮೋಹದ ಪಟ್ಟದ ಜಾಯೆ ಅಷ್ಟ ಸೌಭಗ್ಯಗಳ ಅಮರರಿಗೀವಳೆ 1 ಶೃಂಗಾರ ಮಂಟಪದಿ ಅಂಗನೆಯರೆಲ್ಲರು ಸಂಗೀತವ ಪಾಡಿ ಸರಸದಲಿ ಮಂಗಳದೇವತೆ ಬಾರೆಂದು ಕರೆವರು 2 ಅರುಂಧತಿ ಶಚಿ ಮುಖರ್ನೆರದಿಹರು ಗುರುರಾಮವಿಠಲನ ತರುಣೀ ಮಣಿಯೆ ಬೇಗಾ 3
--------------
ಗುರುರಾಮವಿಠಲ
ಬಿಡು ಬಿಡು ಮನದ ಸಂಶಯವನು ಪ ನಡಿ ನಡಿ ಪಿಡಿಯೊ ಗುರುಪಾದವನು ಅ.ಪ ಎವೆ ಮಾತ್ರ ವ್ಯತ್ಯಾಸವಿಲ್ಲದಿರು 1 ಯೋಗ್ಯತಾನುಸಾರ ಭಾಗ್ಯಬರುವದದು ಶ್ಲಾಘ್ಯವೆನ್ನುತ ದಾಸನಾಗಿರು 2 ಎರಡು ಸುಖಗಳನ್ನು ಗುರುರಾಮವಿಠಲನೇ ಕರುಣಿಸುವನು ಎಂದರಿತು ನಂಬು 3
--------------
ಗುರುರಾಮವಿಠಲ
ಬ್ರಹ್ಮದೇವರು ಪರಮೇಷ್ಠಿ ನಿನ್ನನಾ ಸ್ಮರಿಸುವೆನನುದಿನ ಕರುಣದಿಂದ ಅಭಯವಿತ್ತು ಕಾಯೊ ಎಂದೆ ನಾ ಪ ಸೃಷ್ಟಿ ಕರ್ತನೆ ಜಗಕೆ ವಸಿಷ್ಠನಯ್ಯನೆ ಶ್ರೇಷ್ಠ ಮದ್ಯಮಾಧಮರಿಗಭೀಷ್ಟ ಕೊಡುವನೆ 1 ಹಿರಣ್ಯಗರ್ಭನೆ ಸುರಾಸುರೇಶನೆ ಸರಸ್ವತಿ ಮನೋಹರನೆ ದಯಾ ಸಮುದ್ರನೆ 2 ಗುರುರಾಮವಿಠಲನಾ ನೆರೆ ನಂಬಿದವರನಾ ಪರಮ ಸುಖದೊಳಿಟ್ಟು ಮುಕ್ತಿ ಪಥವ ತೋರ್ಪನಾ 3
--------------
ಗುರುರಾಮವಿಠಲ
ಬ್ರಾಹ್ಮಣನುಣಲಿಕೆ ರಾಗಿ ಹಿಟ್ಟು ತನ್ನ ಬಂಧು ಜನಕ್ಕೆ ಒಬ್ಬಟ್ಟು ಪ ಪಾಮರ ಜನರಲಿ ವಾಡಿಕೆಯಿದು | ಶ್ರೀ ರಾಮನೊಲಿವನೆ ಎಂದಿಗಾದರು ಅ.ಪ ಮಾತು ಮಾತಿಗೆ ಸಾಲಮಾಡಿ | ಬಹ ಳಾತುರದಲಿ ಓಡಾಡಿ ಜಾತುಕನಂದದಿ ಜನಗಳ ಮೆಚ್ಚಿಸಿ ಪಾತಕವಾದರು ಲಾಭವಧಿಕ 1 ದೊಡ್ಡದಾಗಿ ಮನೆಕಟ್ಟಿದರೆ -ಸಾಲ ಹೆಡ್ಡಗಾದರು ಹುಟ್ಟುವುದು ದುಡ್ಡುದೇವರಿಗಿಂತ ದೊಡ್ಡದೇವರು ಯಾವುದು? ಬಡ್ಡಿ ಹಚ್ಚು ಬರುವನೆ ಮಹರಾಯನು2 ಹೊಟ್ಟೆಗೆ ತಿಂಬುವದ್ಯಾರು ಬಲ್ಲರು? ವುಟ್ಟ ಬಟ್ಟೆಯಲ್ಲರು ನೋಡುವರು ಸಿಟ್ಟು ಬಂದರೆ ಬೆಂಕಿಯಂತವ ನಾನು ಹೊಟ್ಟೆ ಚಿಕ್ಕದು ಕಣ್ಣು ದೊಡ್ಡದು 3 ಪರಲೋಕವು ಉಂಟೆಂದು ಪೇಳು ವರರಿಯದವರು ತಾವು ಮುಂದು ನರಕವುಸ್ವರ್ಗವು ಯಾರು ನೋಡಿರುವರು ಪುರಾಣ ಶಾಸ್ತ್ರಗಳು ಯಾತಕೆ ಬಿಡಿ4 ಅತಿಥಿಗಳಿಗೆ ನೀರುಮಜ್ಜಿಗೆ | ಮೊಸರು ಸತಿಸುತರಿಗೂ ಮತ್ತು ತನಗೆ ಯಿತರರಿಗೆಲ್ಲಾ ಎಣ್ಣೆಕರೆದ ಭಕ್ಷ್ಯ ಘೃತಭಕ್ಷ ತನಗೆ ಮಾತ್ರ 5 ಎಣ್ಣೆಯು ಬಲುರುಚಿ ನಮಗೆ | ತುಪ್ಪ ವಿನ್ನೇತಕೆ ಹೆಚ್ಚು ಬೆಲೆಗೆ ಕಣ್ಣಲಿ ಕಂಡದು ಮಾತ್ರ ಸತ್ಯ | ನಾ ವನ್ಯರ ನುಡಿ ನಂಬುವುದಿಲ್ಲವು 6 ವೊರಿಗೆಲ್ಲ ನಾ ಮೇಟಿ | ಯನ್ನ ನಾರು ಪೋಲುವರು ಸಾಟಿ ನೂರೆಲೆ ಬೀಳ್ವುದು ನಮ್ಮ ಮನೇಲೀ ಘೋರ ಕ್ಷಾಮದಲಿ ನಾನೆ ಪೊರೆವೆ 7 ಪರರಂತೆ ನಾನಿರಬೇಕು | ಶ್ರೀ ಹರಿ ಇಷ್ಟು ಕೊಟ್ಟರೆ ಸಾಕು ಗುರುಹಿರಿಯರು ನುಡಿಯೇತಕವರು ಮುದು- ಕರು ಏನು ಬಲ್ಲರು ಲೌಕೀಕವ 8 ಗುರುರಾಮವಿಠಲೆಲ್ಲಿ ಭ್ರಾಂತು -ಈ ಕರೆಕರೆ ನಮಗೇಕೆ ಬಂತು ಸೇರಿತು ಬಡವರಾವು 9
--------------
ಗುರುರಾಮವಿಠಲ
ಭಕ್ತಿ ಒಂದೇ ಸಾಕು ಸಜ್ಜನರಿಗೆ | ಕು ಯುಕ್ತಿಯಾತಕೆ ಹಲವು ಬಗೆ ಪ ಶಕ್ತರಾಗಿಹ ಅಧಿಕಾರಿಗಳಿಗೆ ಕು- ಯುಕ್ತಿ ಏತಕೆ ಹಲವು ಬಗೆ ಅ.ಪ ದೀನರು ನಾವೆಂದು ದಿನ ದಿನದೀ ನಾನು ಎಂಬುದು ಬಿಟ್ಟಿರುವವಗೆ 1 ಲೇಸಾದ ದಾರಿಯೊಳ್ ನಡಿಯುವರಿಗೆ2 ಹರುಷ ಶೋಕಗಳೊಂದೆ ಸಮನಾಗಿ ತಿಳಿದು ಪುರುಷ ಪ್ರಯತ್ನಗಳನು ಮೆರೆದು ಗುರುರಾಮವಿಠಲನ ಸ್ಮರಿಪರಿಗೆ 3
--------------
ಗುರುರಾಮವಿಠಲ
ಭಂಜನ ಶರಣು ತ್ರಿಭುವನ ರಂಜನ ಶರಣು ರವಿಕುಲವರ್ಧನ ಶರಣು ಪ ಪರಮಭಕ್ತ ಸರೋಜ ಭಾಸ್ಕರ ಪಾಹಿ ಪಾಹಿ ಕೃಪಾಕg À 1 ಪಾವಕ ದುರಿತಹರ ರಘುನಾಯಕ 2 ವಾಸುದೇವ ಜನಾರ್ಧನÀ ವಾಸವನುತ ವನಜಲೋಚನ ವಂದಿತಾಖಿಲ ಬುಧಜನ 3 ಬ್ರಹ್ಮಪಿತ ಪ್ರಹ್ಲಾದವರದ ನೃಸಿಂಹದೇವ ನಮೋಸ್ತುತೇ 4 ಎನುತ ಭಜಿಸುವ ಭಕ್ತ ಜನರಿಗೆ ಮನದಭೀಷ್ಟವ ಪಾಲಿಪ ಜನವರನೆ ಗುರುರಾಮವಿಠ್ಠಲ ಜಾನಕೀ ಪ್ರಾಣವಲ್ಲಭ 5
--------------
ಗುರುರಾಮವಿಠಲ
ಭದ್ರ ಮೂಜಗದಂತರ್ಯಾಮಿ ಪ ಸಾರ ಸಾಕ್ಷಿಯರೆಲ್ಲಾ ಮುದ್ದು ಸೀತೆ ಸಹಿತ ಹುವ್ವಿನ ಮಂಚದಿ ಮಲಗಿ ಅ.ಪ ಪೋಗಿ ನಿಮ್ಮಯ ಸದನಗಳಿಗೇ | ಉದಯ ವಾಗೋದು ಬನ್ನಿ ಸನ್ನಿಧಿಗೇ ಯೋಗೀ ಜಾಣರು ಪರಮ ಭಾಗವತೋತ್ತಮರು ಸಾಗಿ ಪೋದರು ನಿಜಾಶ್ರಮಗಳಿಗೆಲ್ಲರು 1 ತುಂಬುರಾ ನಾರದಾದಿಗಳು | ವೀಣೆ ತಂಬೂರಿ ದಿವ್ಯನಾದದೊಳು ಗಂಭೀರಾ ಸ್ವರದಿಂದಾಗಾಯನಗಳ ಮಾಡೆ ಸಂಭ್ರಮದಲಿ ಇತರ ಹಂಬಲ ಮರೆತೀಗ 2 ಹದಿನಾಲ್ಕು ಲೋಕಾವನಾಳಿ | ತಾದ- ಣಿದೆನೆಂದು ಜನರಿಗೆ ಪೇಳಿ ಸದಮಲಾತ್ಮಕ ಶ್ರೀ ಗುರುರಾಮ ವಿಠಲ ನಂ-ಬಿದವರಿಗಭಯವ ಕೊಡುವ ಇಚ್ಛೆಯಿಂದ 3
--------------
ಗುರುರಾಮವಿಠಲ
ಭವ ಹರಣ ನತ ಶರಣ ಪ ಲೀಲಾ ವಿನೋದದಲಿ ಮೂಜಗವ ಸೃಜಿಸಿ ಪಾಲಿಸುವೆ ನಿನ್ನ ವ್ಯಾಪಾರವನುಸರಿಸಿ ಕಾಲಕಾಲಾರ್ಚಿತನೆ ಕಲುಷಹರನೆಂದು ನೀಲಾಹಿವೇಣಿಯರು ನಿನ್ನ ತೂಗುವರು 1 ಶೇಷ ಪರಿಯಂಕದಲಿ ಶ್ರೀ ಸಮೇತದಲಿ ತೋಷದಿಂ ಪವಡಿಸುವೆ ಪ್ರಳಯ ವಾರಿಯಲಿ ಭಾಷಾಪತಿಯ ಪಡದೆ ನಾಭಿ ಕಮಲದಲಿ ಪೋಷಿಸುವೆ ಜೀವರನು ಸರ್ವಕಾಲದಲಿ 2 ಶ್ರೀರಾಮ ಮಾಧವಾಶ್ರಿತಜನೋದ್ಧಾರಾ ನಾರಾಯಣಾಚ್ಚುತಾನಂತಾವತಾರ ವಾರಿಜಾಯತ ನೇತ್ರ ಗುರುರಾಮವಿಠಲಾ 3
--------------
ಗುರುರಾಮವಿಠಲ
ಭಾಗವತ 342 ಆಗಮದಸಾರ ಶಾಸ್ತ್ರವಿಚಾರ ಪೌರಾಣ ಯೋಗತತ್ವಗಳ ಶೃಂಗಾರವೆನಿಸುತಿಹ ಶ್ರೀ ಭಾಗವತಮಂ ಪೇಳ್ವೆಸಂಕ್ಷೇಪದಿಂದ ಹನ್ನೆರಡು ಪದ್ಯಂಗಳಾಗಿ ಗುರುಸುತನ ಬಾಣದುಪಹತಿಗೆ ಮೊರೆಯಿಡುವಉ ತ್ತರೆಯ ಗರ್ಭವ ಶೌರಿರಕ್ಷಿಸಲ್ ಬಳಿಕಧರೆ ರಾಜ್ಯವಾಳುತಿರೆವಿಷ್ಣುರಾತಂ ವರಶಮೀಕಾತ್ಮಜನ ಶಾಪಬರೆತಾಕೇಳಿ ಪರಮವೈರಾಗ್ಯದಿ ಕುಶಾಸ್ತರಣದೊಳಿರಲ್ ಪ್ರಥಮಸ್ಕಂಧದೋಳ್ ತಿಳಿವುದು 1 ಸಾರವಾಗಿಹ ಭಕ್ತಿಯೋಗಮಂ ಪೂರ್ವದೋಳ್ ನಾರದಗೆ ವಿಧಿವೇಳ್ದ ಸೃಷ್ಟಿಯಕ್ರಮಂ ಪ್ರಳಯ ತನ್ನಪುರಮಂ ತೋರಿಸಿ ಚಾರುಭಾಗವತ ತತ್ವೋಪದೇಶದಿ ಸೃಷ್ಟಿ ಗಾರಂಭ ಮಾಡಿಸಿದನೆಂದು ಶುಕಮುನಿವರಂ ತಿಳಿವುದು 2 ವಿದುರ ಮೈತ್ರೇಯ ಸಂವಾದಮಂ ಸೃಷ್ಟಿಯ ಭ್ಯುದಯವಂ ಸ್ವಾಯಂಭುವಿನಜ ನನವಹರೂ ಪದ ಹರಿಯಚರಿತ ಸನಕಾದಿಗಳ್ ಜಯವಿಜಯರಿಗೆ ಕೊಟ್ಟ ಶಾಪತೆರನು ಉದಿಸಿದಂಹರಿಕರ್ದಮಂಗೆ ಕಪಿಲಾಖ್ಯದಿಂ ವಿದಿತವಾಗಲ್ ತಾಯಿಗರುಹಿದಂಸಾಖ್ಯಯೋ ತೃತೀಯಸ್ಕಂಧದೋಳ್ ತಿಳಿವದು 3 ಶಿವನ ವೈರದಿನಕ್ಷಯಾಗವಂ ಮಾಳ್ಪುದಂ ತವಕದಿಂ ಕೆಡಿಸಿ ಶಂಕರನು ಕರುಣಿಸುವದಂ ಧೃವಚರಿತಮಂಗವೇನರಚರಿತ್ರೆಗಳ್ ಪೃಥುಚಕ್ರವರ್ತಿ ಜನನ ಅವನಿಗೋರೂಪಿಯಾಗುತ ಸಕಲವಸ್ತುಸಾ ರವಕೊಡುವದುಂ ಪ್ರಚÉೀತಸರುಪಾಖ್ಯಾನಮಂ ತವೆಪುರಂಜನನುಪಾಖ್ಯಾನಮಂ ಯಿದುಚತುರ್ಥ ಸ್ಕಂಧದೋಳ್ ತಿಳಿವದು 4 ವರಪ್ರಿಯ ವ್ರತಚರಿತೆಯಾಗ್ನೀಧ್ರಚರಿತೆಯುಂ ಹರಿಯ ಋಷಭಾವತಾರದ ಮಹಾಮಹಿಮೆಯಂ ಭೂಗೋಳವಿಸ್ತಾರವು ಎರಡನೆ ಖಗೋಳದೋಳ್ ವಾಯ್ವಾದಿಮಂಡಲವಿ ವರಗಳುಂ ನರಕಾದಿ ವರ್ಣನೆಯ ಸಂಖ್ಯೆಯುಂ ಯಿದುಪಂಚಮಸ್ಕಂಧದೋಳ್ ತಿಳಿವದು 5 ಯರ ಜನನಮಂ ವಿಶ್ವರೂಪಾಖ್ಯಭೂಸುರಂ ವೃತ್ರಾಸುರನ ಕೊಲ್ವುದುಂ ಭರದಿ ಬೆನ್ಹತ್ತಿಬಹ ಬ್ರಹ್ಮಹತ್ಯವ ಸುರಪ ಧರಣಿಜಲ ವೃಕ್ಷಸ್ತ್ರೀಯರಿಗೆ ಭಾಗಿಸಿದುದಂ ತಿಳಿವದೂ 6 ವಿಧಿಯವರದಿ ಹಿರಣ್ಯಕಶ್ಯಪನು ಗರ್ವದಿವಿ ಬುಧರಂ ಜಯಿಸುವದುಂ ತರಳ ಪ್ರಹ್ಲಾದನ ನರಸಿಂಹನಾಗಿ ಹರಿಯು ಮದಮುಖನ ಸೀಳ್ವುದಂಪ್ರಹ್ಲಾದನೃಪನಜಗ ರದಮುಖದಿ ವರ್ಣಾಶ್ರಮದ ಧರ್ಮಕೇಳ್ವುದಂ ತಿಳಿವದು 7 ಮನುಗಳ ಚರಿತ್ರೆಗಳ್ ಗಜರಾಜ ಮೋಕ್ಷವಂ ದನುಜ ದಿವಿಜರು ಶರಧಿಯಂಮಥಿಸೆವಿಷವರು ಹರಿಸುರರಿಗೀಯ್ಯೆ ಅನಿಮಿಷರ ಗೆದ್ದು ಬಲಿ ಶತಕ್ರತುವಮಾಳ್ಪುದಂ ವನಜಾಕ್ಷ ವಟುವೇಷದಿಂ ದವಗೆಲ್ವುದಂ ತಿಳಿವದು 8 ಇನವಂಶ ರಾಜರಚರಿತ್ರೆಯೋಳಂಬರೀ ಷನ ಮಹಿಮೆ ಯಿಕ್ಷಾ ್ವಕುರಾಜನಚರಿತ್ರ ರಾ ಚಂದ್ರವಂಶಾನುಚರಿತಂ ವನಿತೆಯುಂ ಪುರುಷನಾಗಿದ್ದಿಳನ ಚರಿತಶು ಕ್ರನ ಮಗಳ ಶರ್ಮಿಷ್ಠೆಯರಚರಿತೆಯದುವೂರು ನವಮಸ್ಕಂಧದೋಳ್ ತಿಳಿವದು 9 ಹರಿ ದೇವಕೀ ಪುತ್ರನಾಗಿ ಗೋಕುಲದಿ ಪರಿ ಪರಿಲೀಲೆಗಳತೋರಿ ದುಷ್ಟರಂಸದೆದುತಾಂ ಪಿತೃಮಾತೃಗಳಸೆರೆಯಬಿಡಿಸಿ ವರವುಗ್ರಸೇನಂಗೆ ಪಟ್ಟಮಂಗಟ್ಟಿಸಾ ಗರದಿ ಪುರವಂರಚಿಸಿ ಬಲುತರುಣಿಯರ ಕೂಡಿ ತಿಳಿವದು 10 ನೆಸಗಿದಂ ಯದುಕುಲಕೆ ಹರಿಯಸಂಕಲ್ಪದಿಂ ಪರಮಾತ್ಮತತ್ವಬೋಧೆಯನರುಪಿದಂ ಮುಸಲದಿಂ ಯಾದವರಕ್ಷಯವೈದಲನ್ನೆಗಂ ಬಿಸಜನಾಭಂ ರಾಮನೊಡನೆ ತಾತೆರಳಿದಂ ಕರೆದೊಯಿದನೇಕಾದಶಸ್ಕಂಧದೊಳ್ 11 ಪರೀಕ್ಷಿತ ಮಹಿಪಾಲತಾಂ ಕೇಳಿದಂ ಶುಕನಿಂದಸಕಲಮುಂ ಕಲಿಕಾಲ ಸೂತಶೌನಕಾದಿಗಳಿಗಿದನು ಪೇಳಿದಂ ಬಾದರಾಯಣನ ಕೃಪೆಯಿಂದಲಿದ್ವಿ ಜಾಳಿ ಹರುಷದ ಕಡಲೊಳೀಜಾಡಿದುದುರಮಾ ಲೋಲನ ಮಹಾಲೀಲೆಯವತಾರಮದ್ಭುತಂ- -ದ್ವಾದಶಸ್ಕಂಧವಿದುವೆ 12 ಇಂತೀ ಪರಿಭಾಗವತ ಶಾಸ್ತ್ರಮಂ ಸಂತರಡಿಗಳಿಗೆರಗಿ ಪೇಳ್ದೆ ಸಂಕ್ಷೇಪದಿಂ ಕಂತುಪಿತಗÀುರುರಾಮವಿಠಲತಾಂಹೃದಯದೋಳ್- -ನಿಂತುನುಡಿಸಿದತರದೊಳು ಸ್ವಾಂತನಿರ್ಮಲರಾಗಿ ಪಠಿಸುವರಿಗನುದಿನಂ ಚಿಂತಿತಾರ್ಥಂಗಳಿಹಪರಸೌಖ್ಯವಿತ್ತುಶ್ರೀ ಕಾಂತ ಗುರುರಾಮವಿಠಲ ಪೊರೆವಜಯ- -ಜಯಮನಂತಮಹಿಮಂಗೆನಿರತಂ 13
--------------
ಗುರುರಾಮವಿಠಲ
ಭೋಜನ ಮಾಡೈಯ ಶ್ರೀರಾಮಚಂದ್ರ ಪ ರಾಜೀವಾನಯನ ಸ್ವರಾಜಾನುಜ ಮಹಾ ರಾಜ ವಂದಿತ ರಾಜಾರಾಜ ಸಖಾರ್ಚಿತ ಅ.ಪ ಉಪ್ಪು ಉಪ್ಪಿನಕಾಯಿ ಪಚ್ಚಡಿಗಳು ಗೊಜ್ಜು ಹಪ್ಪಳ ಸಂಡಿಗೆ ಶಾಖಗಳೂ ಒಪ್ಪುವ ರಸ ಕೂಟು ಹುಳಿ ಫಳಿದ್ಯವು ಸೂಪ ತುಪ್ಪ ಶಾಲ್ಯೋದನ ಚಿತ್ರಾನ್ನಗಳನ್ನು 1 ಹೊರೀಗೆ ಶಷ್ಕುಲಿ ಹೋಳಿಗೆ ಕಡುಬು ಮು- ಚ್ಚೋರೆಯು ಅತಿರಸ ಹೊಯಗಡಬೂ ಕೀರುಆಂಬೊಡೆ ಬೋಂಡ ಶಾವೀಗೆ ಹುಳಿದೋಸೆ ಕ್ಷೀರ ಶರ್ಕರ ಜೇನು ತುಪ್ಪವೆ ಮೊದಲಾಗಿ2 ಮಂಡೀಗೆ ಲಾಡು ಚಿರೋಟಿ ಘೀವರು ಪೇಣಿ ಬೆಂಡು ಸೋಮಾಶಿಬತ್ತಾಸು ಫೇಡಾ ಖಂಡ ಶರ್ಖರೆ ಕಬ್ಬು ಖರ್ಜೂರ ದ್ರಾಕ್ಷಿಗ- ಳುಂಡು ತ್ರಿಲೋಕಳುದ್ಧರಿಸುವ ಸ್ವಾಮಿ 3 ಪನಸು ಜಂಬೂ ಕದಳಿನಾರಂಗ ಎಳನೀರು ಪಾನಕ ತಕ್ರಬೆಣ್ಣೆಯು ಮೊಸರೂ ಸ್ವಾದೋದಕ ಮೊದಲಾಗಿ ಶ್ರೀ ಯರ್ಪಿಸುವಳು ಭಕ್ತಿಯಿಂದಾ ಕೈಕೊಂಡು ನೀ 4 ಸತ್ಯತಾಂಬೂಲ ವರ್ಪಿಸಲು ಯಥಾಶಕ್ತಿ ವಿತ್ತಸಮೇತವಾದಿದನು ಕೈಕೊಂಡು ನೀ 5 ಭೋಗದ್ರವ್ಯವು ಮುಕ್ತಚೂರ್ಣ ದಕ್ಷಿಣೆ ಸಹ ಈಗ ತಾಂಬೂಲ ವೊಪ್ಪಿಸಲು ಕೈಕೊಂಡು ನೀ6 ನವ್ಯ ಸುಗಂಧ ಪುನರ್ಧೂಪವರ್ಪಿಸಿ ಸೇವ್ಯಸೇವಕನಾಗಿ ಸೇವೆ ಕೈಕೊಳ್ಳೆಂದು ಭವ್ಯಚರಿತ ನಿನ್ನ ಪೊಗಳುತ್ತ ಕುಣಿವರು 7 ಅವ್ಯಯಾನಂತ ಜಗದ ಬದುಕು ನೀನೆಂದು ಸೇವ್ಯಸೇವಕನಾಗಿರುವೆ ಎಂದು ಭವ್ಯಚರಿತ್ರರು ಪೊಗಳುವರೈ ನಿನ್ನ ಸವ್ಯಸಾಚಿಯ ಸೂತ ಗುರುರಾಮ ವಿಠಲನೆ 8
--------------
ಗುರುರಾಮವಿಠಲ
ಮಂಗಳಂ ಮಂಗಳಂ ಮಾರಮಣಗೆ ಪ ಕುಂಡಲಿ ಶಯನಗೆ ಗುಣನಿಧಿಗೆ ಪುಂಡರೀಕಾಕ್ಷ ಶ್ರೀ ಪುರುಷೋತ್ತಮಗೆ 1 ಸರ್ವಪ್ರಾಣಿಗಳ ಹೃತ್ಕಮಲನಿವಾಸಗೆ ಉರ್ವಿಭಾರವ ಪರಿಹರಿಸಿ ಭಕ್ತರ ಕಾಯ್ವ ಸಾರ್ವಭೌಮ ಹರಿಸರ್ವೋತ್ತಮಗೆ 2 ಭಾಗ್ಯವಲ್ಲಿ ಹನುಮನೊಡೆಯನಮ್ಮ ಗುರುರಾಮ ವಿಠಲ ಶ್ರೀ ಕೃಷ್ಣಮೂರುತಿಗೆ3
--------------
ಗುರುರಾಮವಿಠಲ
ಮಂಗಳಂ ಸೀತಾಮನೋಹರ ಪ ಮಂಗಳಂ ಜಗದೇಕ ಸುಂದರ ಅ.ಪ ಮಂಗಳಂ ವಿಧಿರುದ್ರಮುಖ ಸುರವಿನುತ ಪದಯುಗಳ ಸೂರ್ಯ ಕುಲಭೂಷಣ ಮಂಗಳಂ ಮರುತಾತ್ಮಜ ಪ್ರಿಯ ಮಂಗಳಂ ಪರಾತ್ಪರಾನಂತ ಗುಣಾರ್ಣವ ಪ್ರಭೋ ಪಾದ ಪಂಕಜ ಸರೋಜಮಿತ್ರಾನ್ವಯ ಪೂರ್ಣ ಚಂದ್ರಮಾ ನಮಾಮ್ಯಹಂ ತೇ ಗುರುರಾಮವಿಠ್ಠಲ
--------------
ಗುರುರಾಮವಿಠಲ
ಮಂಗಳಾರತಿ ಎತ್ತುವೆ ಮಾರಮಣಗೆ ಪ ಅಂಗಜ ಜನಕ ಶುಭಾಂಗ ಶ್ರೀರಂಗಗೆ ಅ.ಪ ವೈರಾಜ್ಯ ಸ್ಯಾರಾಜ್ಯ ಮಹ ಪರಮೇಷ್ಠಿ ರಾಜ್ಯ ಸಾರ್ವಭೌಮ ನೀನೆಂದು 1 ವೇದೋಕ್ತ ಮಂತ್ರ ಪುಷ್ಪಾಂಜಲಿಯಿಂದ ನಿನ್ನಯ ಪಾದಕ್ಕೆರಗಿ ಪುನಃ ಪ್ರಾರ್ಥನೆಗೆಯ್ಯುತ 2 ಪಾಪಿಗಳೊಳಗತಿ ಪಾಪಿಯು ನಾನೆನ್ನ ತಾಪತ್ರಯವ ಬಿಡಿಸಿ ಕಾಪಾಡು ನೀನೆಂದು 3 ಪದಜಾನುಕರಗಳಿಂ ಉದರ ಹೃದಯದಿ ಶಿ- ರದಿ ದೃಷ್ಟ್ಯಮನಸವಚನಸಾಷ್ಟಾಂಗದಿಂ ಮಣಿದು 4 ಕಂದರ್ಪ ಕೋಟಿ ಲಾವಣ್ಯ ಸರ್ಪಶಯನ ನಮ್ಮಪ್ಪಾ ತಿಮ್ಮಪ್ಪನೆಂದು 5 ವಾಹನ ವಸ್ತೂಗಳರ್ಪಿಸಿ ಸರ್ವೋತ್ತಮ ನೀನೆಂದ್ಹೊಗಳಿ 6 ಅಪರಾಧವೆಮ್ಮಿಂದಲಾಗುವುದೆಲ್ಲ ಕ್ಷಮಿಸು ಕಪಟನಾಟಕ ಸೂತ್ರಧಾರೀ ಗುರುರಾಮವಿಠಲ 7
--------------
ಗುರುರಾಮವಿಠಲ
ಮಂಗಳಾರತಿಎತ್ತಿ ಮಾಮನೋಹರನಿಗೆ ಪ ಅಂಗನೆಯರೆಲ್ಲ ಬಂಗಾರದ ತಟ್ಟೆಯಲ್ಲಿ ಅ.ಪ ವೇದಚೋರನ ಕೊಂದು ಭೂಧರವನು ಪೊತ್ತು ಮೇದಿನಿಯನು ಎತ್ತಿ ಕಂಬದಿ ಬಂದವಗೇ 1 ಭೂಮಿದಾನವ ಕೇಳಿ ಭೂಮಿಪರನು ಸೀಳಿ ಭೂಮಿಜಾತೆಯನಾಳಿ ಭೂ ಭಾರವಳಿದವಗೆ 2 ಮುದ್ದುಕುದುರೆಯ ಏರಿದ ಗುರುರಾಮ ವಿಠಲಗೆ 3
--------------
ಗುರುರಾಮವಿಠಲ
ಮಂದಮತಿಯೇ ಮಾನವಾ ಪ ಹಿಂದೊ ಮುಂದೊ ಎಂದು ಯೋಚಿಸದಿರು ಅ.ಪ ಸತತವು ಲಕ್ಷ್ಮೀಪತಿಯ ಭಜಿಸು 1 ಭಾವದಿ ತಿಳಿದತಿಭಕ್ತಿಯೊಳಿರು 2 ಈ ಚರಾಚರಕು ಗೋಚರಿಸುವ ಕಂಜ- ಲೋಚನನೆಂದು ನಿನ್ನ ನಾಚಿಕೆ ಬಿಡು 3 ಕೊರಳು ನೋಯುವಂತೆ ಕೂಗುತಲಿರು 4 ಪರದಲಿ ಮುಕ್ತಿಯು ಇಹದಲಿ ಸೌಖ್ಯವು ಗುರುರಾಮವಿಠಲನೆ ಕರುಣಿಸುವನು 5
--------------
ಗುರುರಾಮವಿಠಲ