ಒಟ್ಟು 182 ಕಡೆಗಳಲ್ಲಿ , 48 ದಾಸರು , 170 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆ ಸ್ವತಂತ್ರ ಚತುರದಶ ಭುವನಕೆ | ಪರಮೇಷ್ಠಿ ಶಿವಾದ್ಯರಾತಗೆ ದಾಸರೆನ್ನು ಪ ಹರಿಹರರ ಒಂದೇ ಸ್ಥಾನದಲಿ ಕಾಣುವೆನೆಂದು | ಪರಮ ಭಕುತಿಯಿಂದ ಕ್ರೋಧಮುನಿಪ || ಧರಣಿಯೆಲ್ಲ ತಿರುಗಿ ಶುಕ್ಲವತೀ ತೀರಕೆ ಬರಲು | ವಸಂತ ಕಾಲದಂತೆ ಪೊಳಿಯೇ1 ತಪಸಿ ತಪವನೆ ಮಾಡುತಿರಲು ಖರಾಟಖಳ | ಉಪಹತಿ ಕೊಡುತಿಪ್ಪ ವರಬಲದಿ || ವಿಪುಳದೊಳಗಿವಗೆಲ್ಲಿ ಎದುರಾರು ಇಲ್ಲದಿರೆ | ಸುಪರ್ಣಾದಿ ಮೊರೆ ಇಡಲು ಬೊಮ್ಮಗೆ2 ಪರಮೇಷ್ಠಿ ಹರಿಯ ಬಳಿಗೆ ಬಂದು | ಖಳನ ಕೋಲಾಹಲವ ಬಿನ್ನೈಸಲು || ಪುಲಿತೊಗಲಾಂಬರನ ಸಹಿತ ಸರ್ವೋತ್ತಮನ | ಒಲಿಮೆಯಿಂದ ಬಂದು ಸುಳಿದರಾಗಂದು 3 ದಾನವನ ಕೊಂದು ದೇವತೆಗಳ ಸುಖಬಡಿಸಿ | ಜ್ಞಾನಕ್ರೋಢಮುನಿ ಮನಕೆ ಪೊಳೆದು || ಆನಂದದಿಂದಲಿ ನಿಂದು ಮೆರೆದ ಲೀಲೆ | ಏನೆಂಬೆನಯ್ಯ ಹರಿಹರ ವಿಚಿತ್ರಾ 4 ಪ್ರವಿಷ್ಠ ಕೇ| ಶವನು ತಾನೆ ಕಾಣೊ ಸ್ವಾತಂತ್ರನು || ಇವರು ಶಂಕರನಾರಾಯಣನೆಂಬೊ ಪೆಸರಿನಲಿ | ಅವನಿಯೊಳು ಪ್ರಖ್ಯಾತರಾಗಿ ನಿಂದಿಹರೋ 5 ಎರಡು ಮೂರುತಿಗಳು ನೋಳ್ಪರಿಗೆ | ಶ್ರೀ ನಾರಾಯಣಗೆ ಈಶ ಸಮನೇ 6 ಚಕ್ರ ಶಂಖ ಗದೆ ಪದುಮ ಹರಿಗೆ ನೋಡು | ಮುಕ್ಕಣ್ಣಗೆ ಡಮರುಗ ತ್ರಿಶೂಲವು || ಮುಖ್ಯ ದೇವತಿ ಹರಿ ಅವಾಂತರ ಶಿವನು | ಶಕ್ರಾದ್ಯರೊಲಿದು ಭೇದವನು ಪೇಳುವರು 7 ಸತ್ಯಂ ವದವೆಂಬ ಶ್ರುತಿವರದು ಪೇಳುತಿದೆ | ಭೃತ್ಯ ರುದ್ರನು ಕಾಣೊ ಲಕುಮಿವರಗೆ || ಸತ್ಯದಲಿ ಸಿದ್ಧವಯ್ಯ ಎಂದು ತಿಳಿದು | ಸ್ತೌತ್ಯ ಮಾಡಿದವಗೆ ವೈಕುಂಠ ಪದವಿ 8 ಕ್ರೋಢ ಪರ್ವತವಿದೆ ತೀರ್ಥ ಪಾವನಕರ | ನಾಡೊಳಗೆ ಕ್ಷೇತ್ರ ಉತ್ತಮ ಮಾನವಾ || ಪಾಡಿದರೆ ವಿಜಯವಿಠ್ಠಲರೇಯ ಒಲಿದು |ಕೂಡಾಡುವನು ದೃಢ ಭಕುತಿಯಿತ್ತು ಅನುದಿನಾ 9
--------------
ವಿಜಯದಾಸ
ಹರಿಯೆನ್ನೋ ಹರಿಯೆನ್ನೋ ಹರಿಯೆನ್ನೋ ಖೋಡಿ ಹರಿಯದಾಸರ ಸಿರಿಸಂಪದ ನೋಡಿ ಪ ಎರವಿನ ಸಿರಿಗೆ ನೀ ಮರುಳಾದಡಿ ಹರಿಯೆಂದು ನುಡಿಲಿಕ್ಕೆ ನೀನಗೇನು ಧಾಡಿ ಧರೆಯೊಳಾರಿಲ್ಲ್ಹರಿದಾಸರ ಜೋಡಿ ಮರುಳ ಯಮದೂತರಂಜಿ ಹೋಗುವರೋಡಿ 1 ಭವಚಕ್ರದೊಳುಬಿದ್ದು ಬೆಂಡಾದೆ ಕಾಗಿ ಅವನಿಸುಖ ನೀನಿನ್ನು ತಿಳಿವಲ್ಲಿ ಗೂಗಿ ಭವಹರನರ್ಚಿಸಿ ನೋಡೋ ದೃಢಮಾಗಿ ಭವತಾಪ ನಿನಗೆಂದಿಗಿರದೋ ನಿಜವಾಗಿ 2 ಮತಿಶೂನ್ಯನಾಗಧೋಗತಿ ಕಾಣಬೇಡೋ ಮತಿಯಿಂದ ನಿಜಸ್ಥಿತಿ ವಿಚಾರಮಾಡೋ ಕೃತಕೃತ್ಯರೆನಿಪ ಹರಿದಾಸರೊಳಾಡೋ ಪತಿತ ಶ್ರೀರಾಮನರಸಿ ಮುಕ್ತಿಯ ಕೂಡೋ 3
--------------
ರಾಮದಾಸರು
ಹಿತ ನೋಡೀ ಮಾಡಿ ಸುಜನರ | ಪಥವನೆಕೂಡಿ ಪ ಗುರುವಿಗೆ ಬಾಗಿ ಶರಣವ ಹೋಗಿ | ತರಳತೆ ನೀಗಿ ಅರಹುತರಾಗಿ 1 ಭ್ರಾಂತರಕೂಡಿ ಮತಿಗಳ ಬ್ಯಾಡೀ | ಸಂತರೊಳಾಡಿ ಅನಂತನ ಪಾಡಿ 2 ಸಂಧಿಸಿ ತಂದ ಸುಕೃತಗಳಿಂದ | ಹೊಂದುವವೆಂದೇ ನರದೇಹ ಮುಂದೆ 3 ವಿವೇಕದಿಂದಾ ವಿಡಿರಿದೆ ಛಂದಾ | ಅವನಿಲಿ ಬಂದಾ ಜನುಮಕ ಛಂದಾ 4 ಗುರುಮಹಿಪತಿಯಾ ಚರಣದ್ವಿತಿಯಾ | ವರಿಸಿ ಮುಕುತಿಯಾ ಪಡೆವದು ಗತಿಯಾಜ್ಞ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹುಚ್ಚರಾಗಿ ಕೆಡಬೇಡಿರೆಚ್ಚರವ ಪಡಿರೋ ಮೆಚ್ಚಿ ಸ್ತ್ರೀಯರ ಇಚ್ಛೆಗೊಳಗಾಗದಿರಲೊ ಪ ಬಡಿವಾರತನದಿಂದ ಕಡುದೈನ್ಯದೋರುವರು ಒಡಲೊಳಗಿನ ಹರಳು ಒಡೆದರಳುವಂತೆ ಒಡಲೊಳೊಂಚನೆ ಬಿಡರು ಕಡೆತನಕ ಸ್ಥಿರವಲ್ಲ ಕಡುಪಾಪಿರೂಪಿನ ಮಡದಿಯರ ಮನವು 1 ಮನವ ಕರಗಿಸಿ ತನ್ನ ಮನೆಯ ಪುರುಷನ ಜರೆದು ಮನಮೋಹಿಸಿನ್ನೊಬ್ಬ ಗೆಣೆಯನಂ ಕೂಡಿ ತಿನುವಳು ಬಿಡದೊಂದುದಿನ ಪತಿಯ ಪ್ರಾಣಮಂ ಘನಪಾಪಿ ವನಿತೆಯರ ಮನನಂಬಿಗಲ್ಲ 2 ತನ್ನ ಪುರುಷನಮುಂದೆ ಬಣ್ಣದಮಾತಾಡಿ ಹಣ್ಣಿಗೆತಂದವನ ತನ್ನೊಶದಲಿರಿಸಿ ಮುನ್ನ ಜನನೀ ಜನಕರನ್ನು ಅಗಲಿಸಿ ಒಡನೆ ತನ್ನಯ ಅನುಕೂಲವನ್ನೆ ಸಾಧಿಪಳು 3 ಅವಗೆ ಹಿತವನೆ ತೋರಿ ಇವಗೆ ಕಾಲನೆ ಎತ್ತಿ ಅವನಿಗೆ ಕೈಕೊಟ್ಟು ದಿವರಾತ್ರಿಯೆನದೆ ಭ ಭವ ಭವವ ತಿರುಗುವರು ಜೀವಘಾತಕಿಯರದಾವ ಭರವಸವೊ 4 ಹರಿದಿಯರ ಒಡನಾಟ ನರಕಕ್ಕೆ ಮೂಲವು ದುರಿತಕ್ಕೆ ತವರಿದು ಮರೆಮೋಸದುರುಲು ದುರುಳೆಯರ ಚರಿತಕ್ಕೆ ಮರುಳಾಗಿ ಕೆಡದೆ ಭವ ಹರ ಶ್ರೀರಾಮನ ಪದಸ್ಮರಣೆ ಸಂಪಾದಿಸಿರೊ 5
--------------
ರಾಮದಾಸರು
ಹೊಡೀ ನಗಾರಿ ಮೇಲೆ ಕೈಯಾ ಕಡ ಕಡ ಪ ದೃಢಮತಿಯಲಿ ಕಡು ವಾದಿರಾಜರು ರುಜುಗುಣಪರೆಂದ್ಹೊಡೇ ಅ.ಪ. ಕಾಮನಯ್ಯನ ನೇಮದಿ ಸ್ಮರಿಸುವ ಕಾಮರಹಿತ ನಿಷ್ಕಾಮ ಕರೆವರೆಂದ್ಹೊಡೀ 1 ಅವನಿಯೊಳಗೆ ತಾ ಬಂಧುರ ಕುಲೇಂದ್ರಿನಿ ಗೊಲಿದವ ನಿಂದ್ಯಂದ್ಯರೆಂದೊಡಿ2 ಮೋದ ಮುನಿಯ ಮತ ಮೋದದಿ ಸಾಧಿಪ ಸದ್ವಾದಿರಾಜ ಗುರು ಮೋದತೀರ್ಥರು ಸಮರೆಂದ್ಹೊಡಿ 3 ಶೋಣಿತ ಶೂನ್ಯರಿವತೆಂದ್ಹೊಡಿ4 ಕಾಮಿನಿಗೋಸುಗ ಪ್ರೇಮದಿ ಕುಸುಮವ ತಂದಿಟ್ಟತುಳ ಭೀಮನ ಸರಿಸಮರಿವತೆಂದ್ಹೊಡಿ 5 ಸೀತೆಯಗೋಸುಗ ಸೇತುವೆಗಟ್ಟಿದ ರಘುನಾಥನ ಪ್ರೀತಿಯ ಘನವಾತನಪದ ಪೊಂದುವರೆಂದ್ಹೊಡಿ 6 ಇಂದಿರೇಶನ ಪದಮಂದಿರದಲಿ ಭಜಿಸುವ ನಂದಿವಾಹ ಮುಖವೃಂದ ವಂದ್ಯರೆಂದ್ಹೊಡಿ 7 ವೃಂದಾವನದೊಳು ಕೂತುಚ್ಛಂದದಿ ದ್ವಿಜರಿಗೆ ಬೋಧಿಪರಿವರೆಂದ್ಹೊಡಿ 8 ಕಂತುವಿನಲಿ ತಾನಿಂತು ಜಪಿಸುವ ತಂದೆವರದಗೋಪಾಲವಿಠಲನ ಪ್ರೀತಿಮಂತ್ರಿಯೆನಿಪವರೆಂದೊಡಿ 9
--------------
ತಂದೆವರದಗೋಪಾಲವಿಠಲರು
ಹೌರನೆ ಮತಿಯಿತ್ತು ಸಲಬೇಕೆನ್ನ ಪ ಗೌರವ ಗಾತುರ ತೌರ ಮನೆಯ ಹರ ಕೌರವಾಂತಕನೊಳು ಶೌರಿಯ ತೋರಿಸೋ ಅ.ಪ. ಮೃಗಲಾಂಛನ ಸನ್ಮೌಳಿ ಶಿವ ಮಹಾದೇವ ತ್ರಿಗುಣಾತುವ ಗಾತುರ ಭಕ್ತ ಸಂಜೀವ ನಿಗಮತುರಗ ಪಾವ ವನಮಾಲ ಪಾವಾ ಮೃಗಪಾಣಿ ಮೃತ್ಯುಂಜಯ ಸುಪ್ರಭಾವ ನಗೆಪಗೆ ಮಗನನು ಮೃಗನೆವನದಿ ಕಾ ಅಗಣಿತ ಗುಣಮಣಿ ವಾಲಗ ನಿನ್ನವರೊಳು ಮಗಳೆ ಮಗುಳೆ ಕೊಡು ಗಗನೇಶ ಜನಕ 1 ಅವನಿಯೋಳ್ ಕೈಲಾಸ ವಾಸ ಅಪ್ರತಿ ನವ ವಿಧ ಭಕುತಿ ಕೊಡು ಶಂಭು ಪಶುಪತಿ ದಿವಸ ದಿವಸ ವೈಶ್ರವಣ ಬಾಂಧವ ದೇ ಹವೆ ನಿನಗೊಪ್ಪಿತು ಅವನಿಯೊಳುತ್ತಮ ಶ್ರವಣದೊಳಗೆ ರಾಘವನ ಕಥಾಮೃತ ಸವಿದೋರುವುದೋ ಭುವನ ಪವಿತ್ರ 2 ಅಜಭೃಕುಟ ಸಂಭೂತ ಭೂತಗಣೇಶ ಕುಂಡಲ ವಿಭೂತಿ ಭೂಪ ನಿಜ ಮಹಾ ಸ್ಮಶಾನವಾಸ ಉಗ್ರೇಶ ತ್ರಿಜಗಪಾವನ ಗಂಗಾಧರ ವಿಶ್ವೇಶ ಸುಜನರ ಹೃದಯ ಪಂಕಜದೊಳ್ ಮಿನುಗುವ ಗಜ ಪಾಲಕ ರಂಗ ವಿಜಯವಿಠ್ಠಲನಂಘ್ರಿ ಭಜನೆಯ ಕೊಡು ಭೂಭುಜ ದೇವೋತ್ತಮ ಗಜ ಅಜಿನಾಂಬರ 3
--------------
ವಿಜಯದಾಸ
139-3ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಹರಿದಾಸ ಶ್ರೇಷ್ಠವರ ಕರುಣಿ ಪುರಂದರಾರ್ಯಗುರುಮಹಂತರು ಕೃಪಾನಿಧಿಯು ವಿಜಯಾರ್ಯಈರ್ವರನು ಸಂಸ್ಮರಿಸಿ ಗೋಪಾಲದಾಸರುಪರಮದಯ ತೋರಿದರು ಆಚಾರ್ಯರಲ್ಲಿ1ಹರಿದಾಸ ಪಂಥದಲಿ ಆಚಾರ್ಯರು ಸೇರಿಹರಿವಾಯು ಸೇವೆಯು ಸಜ್ಜನೋದ್ಧಾರಧರೆಯಲ್ಲಿ ಮಹತ್ಕಾರ್ಯ ಆಗುವುದು ಎಂದುಅರಿವರು ಗೋಪಾಲದಾಸರು ಮೊದಲೇ 2ಹರಿದಾಸಗೋಷ್ಠಿಯು ವೆಂಕಟಾಚಲ ಯಾತ್ರೆಚರಿಸೆ ವೆಂಕಟ ರಮಣನಾಲಯದಲ್ಲಿಶ್ರೀ ಶ್ರೀನಿವಾಸನು ಈ ಆಚಾರ್ಯಗೆನೇರವಾಗಿ ತಾನೆ ಕೊಟ್ಟಿಹ ಪ್ರಸಾದ 3ನೆನೆದರು ಈಗ ಗೋಪಾಲದಾಸಾರ್ಯರುತನ್ನ ರೂಪದಿ ಅಂದುಬಂದು ವಾತ್ಸಲ್ಯದಿಅನ್ನ ನಾಮಾವೆಂಕಟಕೃಷ್ಣ ಜಗದೀಶಅನ್ನ ಕೊಟ್ಟು ಒಲಿದಿಹನು ಆಚಾರ್ಯಗೆ 4ಪುರಂದರದಾಸಾರ್ಯರು ಒಲಿದು ದಯದಿ ತಾನೆಯಾರಿಗೆ ತಿಮ್ಮಣ್ಣಾರ್ಯರದ್ವಾರ ಉಪದೇಶಅನುಗ್ರಹ ನಾಮಾಂಕಿತವ ಇತ್ತರೋ ಆನರಸಿಂಹ ದಾಸಾರ್ಯರ ಪುತ್ರರು ಇವರು 5ಹರಿದಾಸರ ಪುತ್ರರಿವರು ಯೋಗ್ಯರು ಎಂದುಹರಿದಾಸಪದ್ಧತಿ ಆರಾಧನಾಕ್ರಮಶಾಸ್ತ್ರ ಜಿಜ್ಞಾಸೆಅನುಸಂಧಾನರೀತಿಯೂಅರುಪಿದರು ಆಚಾರ್ಯರಿಗೆ ದಾಸಾರ್ಯ 6ನೆರೆದಿದ್ದರೂ ಗೋಪಾಲದಾಸಾರ್ಯರಪರಮಪ್ರೀತಿ ಪಾತ್ರ ಈಮಹಂತರುವರದ ಗೋಪಾಲರು ತಂದೆ ಗೋಪಾಲರುಗುರುಗೋಪಾಲದಾಸಾದಿಸೂರಿಗಳು7ಭಾರತೀಪತಿ ಅಂತರ್ಗತಹರಿಶ್ರೀಶಗುರುಗಳ ಒಳಗಿದ್ದು ಜ್ಞಾನೋಪದೇಶಹರಿದಾಸತ್ವದ ವರನಾಮಾಂಕಿತವಕಾರುಣ್ಯದಿಈವಅಧಿಕಾರಿಗಳಿಗೆ8ವನರುಹೇಕ್ಷಣ ಯಜÕನಧಿಷ್ಠಾನ ಯಜÕನವನಜಪಾದ ದ್ವಯವು ಮನವಾಕ್ಕಿಲಿಹುದುಅನಿಲ ಸೋಕಿದ ತೂಲರಾಶಿಯಂದದಲಿಏನು ಮೈಲಿಗೆಯಾದರು ಸುಟ್ಟು ಪೋಪುವು 9ತುಳಸಿದಳ ನಿರ್ಮಾಲ್ಯ ಹರಿಗೆ ಅರ್ಪಿತವಾದ್ದುಜಲಸ್ನಾನ ತರುವಾಯ ಧ್ಯಾನ ಸ್ನಾನಜಲಜನಾಭನ ದಿವ್ಯನಾಮ ಸಂಕೀರ್ತನೆಎಲ್ಲ ಮೈಲಿಗೆ ದೋಷ ಪರಿಹರಿಸುವುವು 10ಶೀಲ ತನುಮನದಿಂದಗುರುಪರಮಗುರುದ್ವಾರಮಾಲೋಲ ಪ್ರಿಯತಮ ಜಗದೇಕ ಗುರುವೆಂದುಗಾಳಿದೇವನು ಮಧ್ವ ಭಾವಿಬ್ರಹ್ಮನ ಸ್ಮರಿಸಿಕಾಲಿಗೆ ಎರಗಿ ಶ್ರೀಹರಿಯ ಚಿಂತಿಪುದು 11ವಾಯುದೇವನ ಒಲಸಿಕೊಳ್ಳದ ಜನರಿಗೆಭಯಬಂಧ ನಿವೃತ್ತಿಯು ಸದ್ಗತಿಯು ಇಲ್ಲಮಾಯಾಜಯೇಶನಪರಮಪ್ರಸಾದವುವಾಯು ಒಲಿದರೆ ಉಂಟು ಅನ್ಯಥಾ ಇಲ್ಲ 12ಬಲಜ್ಞಾನಾದಿಗಳಲ್ಲಿ ಹ್ರಾಸ ಇಲ್ಲವು ಇವಗೆಎಲ್ಲ ಅವತಾರಗಳು ಸಮವು ಅನ್ಯೂನಶುಕ್ಲಶೋಣಿತಸಂಬಂಧವು ಇಲ್ಲವೇ ಇಲ್ಲಇಳೆಯಲಿ ಜನಿಸಿಹ ಹನುಮ ಭೀಮ ಮಧ್ವ 13ಮಾತರಿಶ್ವಸೂತ್ರಪವಮಾನ ಮುಖ್ಯ ಪ್ರಾಣತ್ರೇತೆಯಲಿ ಹನುಮ, ದ್ವಾಪರದಲಿ ಭೀಮಈತನೇ ಕಲಿಯುಗದೆ ಮಧ್ವಾಭಿದಾನದಿಬಂದಿಹನು ಸಜ್ಜನರ ಉದ್ಧಾರಕಾಗಿ 14ರಥನಾಭಿಯಲಿ ಅರವೋಲ್ ಪ್ರಾಣನಲಿ ಸರ್ವವೂಪ್ರತಿಷ್ಠಿತವು ಜೀವರ ದೇಹಕಾಧಾರತತ್ವದೇವಾದಿಗಳ ವರಿಷ್ಟ ಚೇಷ್ಟಕನುಈ ವಾಯುವೇ ಬ್ರಹ್ಮಧಾಮನಾಗಿಹನು 15ಬ್ರಹ್ಮಧಾಮನುಜೀವೋತ್ತಮವಾಯು ಆದುದರಿಂದಬ್ರಹ್ಮ ಸುಗುಣಾರ್ಣವ ಸರ್ವೋತ್ತಮ ವಿಷ್ಣೂನಅಹರ್ನಿಶಿಸ್ಮರಿಪುದು ಈ ಬ್ರಹ್ಮಧಾಮನಲಿಬ್ರಹ್ಮಪ್ರಸಾದ ಆಕಾಂಕ್ಷಿ ಅಧಿಕಾರಿ 16ಬ್ರಹ್ಮಗುಣಪೂರ್ಣಹರಿಗೋಪಾಲ ವೆಂಕಟನೆಬ್ರಹ್ಮಾಂಡ ಸರ್ವವ ಪಾಲಿಸುವ ಪ್ರಭುವುಅಹೋರಾತ್ರಿ ಏಳುದಿನ ಗಿರಿ ಎತ್ತಿ ಮಳೆ ತಡೆದಮಹಾದ್ರಿಧೃಕ್ ಅನ್ನಾದ ಅನ್ನದ ಜಗನ್ನಾಥ 17ಗೋವರ್ಧನಗಿರಿ ಎತ್ತಿ ಜನ ಪಶು ಕಾಯ್ದಶ್ರೀವರ ಗೋಪಾಲ ವಿಠ್ಠಲ ರುಕ್ಮಿಣೀಶದಿವ್ಯ ಮಂದಿರದಲ್ಲಿ ಭೀಮರತಿಯ ತೀರದಲಿದೇವ ನಿಂತಿಹ ಶ್ರೀನಿವಾಸ ಜಗನ್ನಾಥ 18ಶ್ರೀನಿವಾಸ ವೆಂಕಟನೆ ಗೋಪಾಲ ವಿಠ್ಠಲನುತನ್ನ ಭಕ್ತನಿಗೊಲಿದು ಪಂಢರೀಪುರದಿತಾನೆ ಬಂದು ಅಲ್ಲೇ ನಿಂತು ಭಕ್ತರು ಮಾಳ್ಪಗಾನ ಸೇವಾ ಕೇಳುತ ಪಾಲಿಸುತಿಹನು 19ಸರ್ವಕ್ಷರ ಉತ್ತಮನು ಸರ್ವೇಶಸರ್ವ ಐಶ್ವಯಾದಿ ಸಚ್ಛಕ್ತಿ ಪೂರ್ಣಶಿವ ಸುರಪುರಿಗೆ ಸುಖಜ್ಞಾನಾದಿಗಳನೀವದೇವಿ ಶ್ರೀ ಲಕ್ಷ್ಮೀಶ ಠಲಕ ವಿಠ್ಠಲನು 20ಜಡಭವ ಅಂಡದ ಸೃಷ್ಟ್ಯಾದಿ ಕರ್ತನಿವತಟಿತ್ಕೋಟಿಅಮಿತ ಸ್ವಕಾಂತಿಯಲಿ ಜ್ವಲಿಪಜಡಜ ಭವಪಿತ ಡರಕ ಜಗನ್ನಾಥ ವಿಠ್ಠಲನುನೋಡಲಿಕೆ ಕಾಣುವ ಅವನಿಚ್ಛೆ ದಯದಿ 21ಜಲದಲ್ಲಿ ಜಲರೂಪ ಜಲಜೇಕ್ಷಣನಿಹನುಜಲದಲ್ಲಿ ನೀ ಮುಳುಗಿ ಮೇಲೇಳುವಾಗಜ್ವಲಿಸುವ ಶಿರೋಪರಿ ಜಗನ್ನಾಥ ವಿಠ್ಠಲನುಒಳನಿಲುವ ಹೊರಕಾಂಬ ಎಲ್ಲರ ಸ್ವಾಮಿ 22ಇಂಥಾಸುವಾಕ್ಯ ಧಾರಾನುಗ್ರಹವಹಿತದಿ ಗೋಪಾಲದಾಸಾರ್ಯರು ಎರೆಯೆಮುದಬಾಷ್ಪ ಸುರಿಸುತ್ತ ಶ್ರೀನಿವಾಸಾಚಾರ್ಯಭಕ್ತಿಯಲಿ ನಮಿಸಿದರು ಗುರುಚರಣಗಳಿಗೆ 23ವಾಸುದೇವನ ಒಲಿಸಿಕೊಂಡ ಐಜೀಯವರುಈಶಾನುಗ್ರಹ ಪಡೆದ ದಾಸಾರ್ಯರುಗಳುಆ ಸಭೆಯಲಿ ಇದ್ದ ಹರಿಭಕ್ತ ಭೂಸುರರುಆಶೀರ್ವದಿಸಿದರು ಆಚಾರ್ಯರನ್ನು 24ಉತ್ಕøಷ್ಟ ನಿಗಮಘೋಷಗಳು ಮಂಗಳಧ್ವನಿಹರಿನಾಮ ಕೀರ್ತನ ಸುಸ್ವರ ಸಂಗೀತದಾರಿಯಲಿ ಎದುರ್ಗೊಂಡ ಶುಭಕರ ಶಕುನವುಹೊರಟರಾಚಾರ್ಯ ವಿಠ್ಠಲ ದರ್ಶನಕೆ 25ವಾರಿಜಾಸನ ಪಿತನು ಪೂರ್ಣಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರುಪುರಂದರವಿಜಯಗೋಪಾಲ ದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 26- ಚತುರ್ಥ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಅಂದಿಂದ ನಾ ನಿನ್ನನೆರೆನಂಬಿದೆನೊ ಕೃಷ್ಣತಂದೆ ಗೋವಿಂದ ಮುಕುಂದ ನಂದನ ಕಂದ ಪಬಲವಂತ ಉತ್ತಾನಪಾದರಾಯನ ಕಂದಮಲತಾಯಿ ನೂಕಲು ಅಡವಿಯೊಳು ||ಜಲಜಾಕ್ಷ ನಿನ್ನ ಧ್ಯಾನದಿ ತಪವಿರಲಾಗಿಒಲಿದು ಧ್ರುವಗೆ ಪಟ್ಟಕಟ್ಟಿದ್ದಕೇಳಿ1ನಕ್ರರಿಗೆ ಗಜರಾಜ ಸಿಕ್ಕಿ ಸರಸಿಯೊಳುದುಕ್ಖದಿ ಶ್ರೀಹರಿ ಸಲಹೆನ್ನಲು ||ಚಕ್ರದಿ ನೆಗಳ ಕಂಠವ ತರಿದು ಭಕ್ತನಅಕ್ಕಸಪರಿದಾದಿಮೂಲನೆಂಬುದಕೇಳಿ2ದ್ರುಪದನ ಸುತೆಯ ದುಃಶ್ಯಾಸನ ಸಭೆಯೊಳುಕಪಟದಿ ಸೀರೆಯ ಸೆಳೆಯುತಿರೆ ||ಸುಪರ್ಣವಾಹನ ಕೃಷ್ಣ ಸಲಹೆಂಬಬಲೆಯನುಅಪಮಾನದಿಂದ ಕಾಯ್ದ ಹರಿಯೆಂಬುದನುಕೇಳಿ3ಹರಿನಾರಾಯಣನೆಂದು ಪ್ರಹ್ಲಾದ ಬರೆಯಲುದುರುಳದಾನವ ಅವನಿಗೆ ಮುನಿದು ||ಕರೆ ನಿನ್ನ ಒಡೆಯನ ಎಂದು ಗರ್ಜಿಸೆನರಹರಿಬಂದು ಒಡನೆಯೆ ಕಾಯ್ದನೆಂಬುದಕೇಳಿ4ಅಂಬರೀಷಗೆದೂರ್ವಾಸಶಾಪವ ಕೊಡೆಅಂಬುಜಲೋಚನ ಚಕ್ರದಿಂದ ||ಬೆಂಬತ್ತಿ ಮುನಿಯ ಶಾಪವ ಪರಿಹರಿಸಿದಕಂಬುಚಕ್ರಧರಹರಿಯೆಂಬುದಕೇಳಿ5ಛಲಬೇಡ ರಾಮನ ಲಲನೆಯ ಬಿಡು ಎಂದುತಲೆಹತ್ತರವಗೆ ಪೇಳಲು ತಮ್ಮನ ||ಬಳಲಿಸಿ ಹೊರಡಿಸೆ ಅವ ನಿನ್ನ ಮೊರೆಹೊಗಲುಸಲೆ ವಿಭೀಷಣಗೆ ಲಂಕೆಯನಿತ್ತುದನುಕೇಳಿ6ಸುರ-ನರ-ನಾಗಲೋಕದ ಭಕ್ತ ಜನರನುಪೊರೆಯಲೋಸುಗ ವೈಕುಂಠದಿಂದ ||ಸಿರಿಸಹಿತದಿ ಬಂದು ಶೇಷಾಚಲದಿ ನಿಂತಪುರಂದರವಿಠಲ ನಿನ್ನಯ ಚರಣವ ಕಂಡು 7
--------------
ಪುರಂದರದಾಸರು
ಅರಿಯರು ಮನುಜರು ಅರಿತೂ ಅರಿಯರುಧರೆಗೆ ಒಡೆಯ ಶ್ರೀ ಹರಿಯಲ್ಲದಿಲ್ಲವೆಂದು ಪಶಿವಬಲ್ಲ ಧ್ರುವಬಲ್ಲ ದ್ರೌಪದಿ ಬಲ್ಲಳುಅವನಿ ಪಾಲಿಪ ಜನಕನೃಪ ಬಲ್ಲನು ||ಯುವತಿಗೆ ಶಾಪವಿತ್ತ ಗೌತಮ ಬಲ್ಲನುಭವರೋಗ ವೈದ್ಯ ಶ್ರೀಹರಿಯಲ್ಲದಿಲ್ಲವೆಂದು 1ನಾರದ ಮುನಿ ಬಲ್ಲವಾರಿಜೋದ್ಭವ ಬಲ್ಲಪಾರಾಶರನು ಬಲ್ಲ ಮನು ಬಲ್ಲನು ||ಧೀರ ಭೀಷ್ಮನು ಬಲ್ಲ ಪಾರ್ವತಿ ಬಲ್ಲಳುಕಾರಣಕರ್ತ ಶ್ರೀಹರಿಯಲ್ಲದಿಲ್ಲವೆಂದು 2ದಿಟ್ಟ ಪ್ರಹ್ಲಾದ ಮೊರೆಯಿಟ್ಟ ಗಜೇಂದ್ರ ಬಲ್ಲದೃಷ್ಟಾಂತ ಕಂಡ ಭೃಗುಮುನಿ ಬಲ್ಲನು ||ಕೊಟ್ಟ ಬಲಿಯು ಬಲ್ಲ ಕೆಟ್ಟಜಾಮಿಳ ಬಲ್ಲಸೃಷ್ಟಿಗೆ ಪುರಂದರವಿಠಲನಲ್ಲದಿಲ್ಲವೆಂದು 3
--------------
ಪುರಂದರದಾಸರು
ಇರಲೇ ಬಾರದು - ಇಂಥಲ್ಲಿಇರಬಾರದಿಂದ ......... ವರೆ ಭಯಂಕರದುರುಳ ಜನ ಸಹವಾಸದಲ್ಲಿ ದುಷ್ಟಮೃಗವಿದ್ದಡವಿಯಲ್ಲಿ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಉರಗಗಳು ಸೇರಿಕೊಂಡ ಸದನಗಳಲ್ಲಿಕರುಬರಿದ್ದ ಊರಗಳಲಿ ಕಲಹ ಹೆಚ್ಚಿದ ರಾಜ್ಯದಲ್ಲಿಪರಹಿಂಸೆಯ ಮಾಡಲಂಜದ ಪಾಪಿಗಳಿದ್ದಲ್ಲಿ 1ಅವಿವೇಕದ ಪ್ರಭುಸೇವೆಯಲ್ಲಿ ಆತ್ಮಸೌಖ್ಯವಿಲ್ಲದಲ್ಲಿಲವಶೇಶವು ಸದ್ವಿದ್ಯಾ ಮಾತ್ರ ಲಾಭವಿಲ್ಲದಲ್ಲಿನವಯೌವನಭರಿತ ನಾರಿ ತಾನೊಬ್ಬಳಿದ್ದಲ್ಲಿಅವನಿಯೊಳಗರ್ಥಪ್ರಾಪ್ತಿಇಲ್ಲದಂಥಲ್ಲಿ2ಮಾನವಲ್ಲದ ಸಭೆಯಲ್ಲಿ ಮಾತ ಕದಿವ ನ್ಯಾಯದಲ್ಲಿನೂನ್ಯಪೂರ್ಣ ಎನ್ನವವನ ಉಟ್ಟಕಾಲದಲ್ಲಿಶ್ರೀನಾಥ ಶ್ರೀ ಪುರಂದರವಿಠಲ ರೂಪಗಳುಅನಂತಾನಂತವೆಂದು ಅರಿಯದ ಅದ್ವೆಷ್ಣವರಲ್ಲಿ 3
--------------
ಪುರಂದರದಾಸರು
ಇಲ್ಲಿ ನೋಡಲು ರಾಮ ಅಲ್ಲಿ ನೋಡಲು ರಾಮ |ಎಲ್ಲೆಲ್ಲಿ ನೋಡಲು ರಾಯಚಂದ್ರನು ಪಮೂಲೋಕದಲ್ಲಿ ತ್ರೈಮೂರ್ತಿರೂಪಗಳಲ್ಲಿಎಲ್ಲೆಲ್ಲಿ ನೋಡಲು ಅಲ್ಲಲ್ಲಿ ರಾಮರೂಪ ಅ.ಪರಾವಣನ ಮೂಲಬಲವ ಕಂಡು ಕಪಿಗಳುಆವಾಗಲೆ ಹೊರಟೋಡುತಿರೆಈವಾಗ ನರನಾಗಿ ಇರಬಾರದೆಂದೆನುತದೇವ ರಾಮಚಂದ್ರ ಬಹುರೂಪ ತಾನಾದ 1ಅವನಿಗೆ ಇವ ರಾಮ ಇವನಿಗೆ ಅವ ರಾಮಬುವಿಯೊಳಗೆ ಬೇರೆ ರೂಪವುಂಟೆಅವನಿಯೊಳಿರುತಿಪ್ಪದುರುಳ ಜನರೆಲ್ಲಅವರವರೆ ಹೊಡೆದಾಡಿ ಹತವಾಗಿ ಹೋದರು 2ಹನುಮಂತಾದಿ ಸಾಧುಜನರು ಅಪ್ಪಿಕೊಂಡುಕುಣಿದಾಡಿದರು ಅತಿ ಹರುಷದಲಿಕ್ಷಣದಲಿ ಪುರಂದರವಿಠಲರಾಯನುಕೊನೆಗೆ ರಾಮಚಂದ್ರನೊಬ್ಬನಾಗಿ ನಿಂತ 3
--------------
ಪುರಂದರದಾಸರು
ಜಯ ಪಾಂಡುರಂಗ ಹೋ ಜಲದ ನಿಭಾಂಗ ಹೋ|ಜಗದಂತರಂಗ ಹೋ ಜಯ ಪಾಂಡುರಂಗ ಹೋ ಪನೀಲಭೂಧರವಾಸಕೌಸ್ತುಭಭೂಷ ರಮೆಯಾಧೀಶಸುಮನಸ|ಪಾಲ ಗುಣಗಂಭೀರ ನವನೀತಚೋರ ಕುಜನಕುಠಾರ| ನರಹರಿ ||ಫಾಲಲೋಚನಬಂಧು ದೈತ್ಯನ ಕೊಂದು ವೇದವ ತಂದು ದ್ರುಹಿಣಗೆ |ಮೇಲು ಶರುಣುದಲಿತ್ತೆ,ಮಂದರಪೊತ್ತೆ ಸುಂದರ ಮೂರ್ತಿ 1ನಿಗಮವಂದಿತ ರಾಮಹರಿಪೂರ್ಣ ಕಾಮ ಸದ್ಗುಣಧಾಮ, ವಾಮನ |ಮಗನ ಮೂಗಿಲಿ ಪುಟ್ಟಿ, ಹೇಮನ ಕುಟ್ಟಿ,ಅವನಿತಂದಿಟ್ಟಿ, ಈರೇಳು ||ಜಗದಿ ಪೂಜಿತನಾದಿ ಕೈಟಭ ಭೇದಿ ಇಭಪನ ಕಾಯ್ದಿ, ಪ್ರಣತರ |ಅಘವನೋಡಿಸುತಿಪ್ಪ ಹಲಾಯುಧತಲ್ಪಮನ್ಮಥನಪ್ಪ 2ವೇದ ವಿಸ್ತರ ಮಾಡ್ಡೀ, ದಾನವ ಬೇಡ್ಡೀ, ದನುಜನಿಗ್ಯೋಡ್ಡೀ, ಕುರುಕುಲ |ಸೂದನ, ಕಿರೀಟ ಸೂತ, ಪವಮಾನ ತಾತ, ದುರ್ಬಲನಾಥ ಎನ್ನನು ||ಆದರದಿ ಕೈಪಿಡಿಯೋ, ದುರಿತವ ತಡೆಯೊ, ದುರ್ಮತಿ ಕಡಿಯೊ,ಅಗಣಿತ|ಮೋದಪ್ರಾಣೇಶ ವಿಠಲ, ನರಮೃಗ, ನಿಟಿಲನೇತ್ರ, ಅಕುಟಲ3
--------------
ಪ್ರಾಣೇಶದಾಸರು
ಜಲಧಿತಕ್ಕದೊ ನಿನ್ನಳಿಯಗೂ ನಿನಗೂ |ಹಲವು ಬಗೆಯಿಂದಲಿ ಪರೀಕ್ಷಿಯನು ಮಾಡಿದರೆ ಪಮೊದಲೆ ತಿಳದಷ್ಟು ನಿನ್ನ ಮಹತ್ಮಿ ವರ್ಣಿಸುವೆ |ತುದಿಗಂಡು ಬಲ್ಲೆನೇ ಅಧಮ ನಾನೂ ||ಎದುರಿಗಂಬುವದಾಡಿಕೊಂಡ ಬಗೆ ಬ್ಯಾರೆಲ್ಲೀ |ಮುದದಿಂದ ದಯಮಾಡಿ ಕೇಳೊ ರತ್ನಾಕರನೇ 1ನಿನ್ನಿಂದ ಹುಟ್ಟಿಹುದು ವಿಷವು, ಗುರುವಿನ ಪತ್ನಿ |ಯನ್ನು ಸ್ವೀಕರಿಸಿದನು ನಿನ್ನ ಮಗನೂ ||ಘನ್ನತರ ಮಕರಾದಿಗಳು ನಿನ್ನ ಪರಿವಾರ |ಇನ್ನೆಷ್ಟು ಪೇಳಲಿ ಚರಿತ್ರ ಪಾರಾವಾರ 2ನಿನ ಒಡಲಿಗೆಷ್ಟಾದರನ್ನ ಸಾಕೆನಿಸದೂ |ದಣಿದು ಬಂದವರಿಗಾಶ್ರಯವು ಕಾಣೇ ||ಉಣಲಿಕ್ಕೆ ಅನ್ನೆಂಬದೆಂಟನೆ ರಸದಂತೆ |ಘನಖ್ಯಾತಿ ದೂರದಲಿ ಬಳಿಗೆ ಬರಲಿಂತಿಹದು 3ಪ್ರೀತಿಯಂ ಬಂದವರು, ಗ್ರಹಣ ವೈಧೃತಿ ವೇತೀ |ಪಾತದಲಿ ನಿನ ದರುಶನಾಗಬೇಕೂ ||ಭೂತ ಬಡದವರಂತೆ ನಿನ್ನ ಕಲ್ಲುಗಳಿಂದ |ಘಾತಿಸಲಿ ಬೇಕು ನೋಡಲ್ಕೆ ಬಹು ಸೋಜಿಗವು 4ತುಳಿದದಕೆ ಹಿಗ್ಗಿದಿಯೋ ಬಹುಮಾನಿ ನೀನೆಲವೊ |ಲಲನಿ ಹಡದೇಳು ಶಿಶುಗಳ ಕೊಂದಳೂ ||ಬಲುಭಂಟಹಿರಿಯಮಗಗರಸುತನ ಕೊಡಲಿಲ್ಲ |ಇಳಿಯೊಳಗೆ ನೀ ಮಾಡಿದನ್ನ್ಯಾಯಕೆಣಿಯುಂಟೆ 5ಸತಿಸಂಗ ಬಿಡಲೊಲ್ಲಿ ಪರ್ವಕಾಲಗಳಲ್ಲಿ |ಸುತಗೆ ಕಡಿಮೆದರಿಂದೆ ಆದಿ ಹ್ಯಾಗೊ ||ಪತಿವ್ರತಾ ಮಗಳಾದಳೊಂದೆ ಸುಗುಣದರಿಂದೆ |ಕ್ಷಿತಿಯೊಳನವರತ ಪೂಜಿಸಿಕೊಂಬಿ ಜನರಿಂದ 6ಜಾಮಾತನಿಗೆ ಇಹವು ಮುಖವು ಹತ್ತೊಂಬತ್ತು |ಆ ಮಧ್ಯ ಗಜಲಪನದಂತೆ ಒಂದೂ ||ಭೂಮಿಯೊಳಗಾಶ್ಚರ್ಯ ತಾನೆ ಮಕ್ಕಳ ಪಡೆವ |ಈ ಮಗಳು ಬಹುಸುಖವ ಬಡುವಳಿವನಿಂದಲ್ಲಿ 7ಬೆರಳು ಚೀಪುವನೋಡುಸುಳ್ಳಲ್ಲ ದಾನ |ಪುರುಷ ಬದುಕುವ ಚೋರತನದಿ ಜಾರಾ ||ತರುಣಿಯಾಗಿದ್ದ ನಿನ ಬಳಿಯಲ್ಲಿ ನೀ ಬಲ್ಲಿ |ತುರುಗಾಟವ ಕೊಡಲಿ ಕೊಂಡಡವಿಯೊಳಗಿರುವ 8ಗುರುಸ್ವಾಮಿ ಪಿತ ಬ್ರಹ್ಮ ವಂಶದ್ರೋಹಿಗಳವನ |ಪರಿವಾರ ಮಕ್ಕಳಿಗೆ ಮಾವನಾದಾ ||ಉರುಗ ಶಯನಂಡಜಾಧಿಪ ವಹನ ನೀಲಾಂಗ |ಅರಿತನೃಪಋಷಿಗಳೊಳಗೊಬ್ಬರಿಗ್ಯು ಮಗನಲ್ಲ 9ಕುಲಸೂತ್ರವಿಲ್ಲ ಒಂದೇ ರೂಪನಲ್ಲ ನಿ- |ಶ್ಚಲನಲ್ಲ ವತಿ ಕಠಿಣ ವಕ್ರವದನಾ ||ಬಲು ಕೋಪಿ ತಿರದುಂಬ ಸ್ತ್ರೀಯರಿಬ್ಬರ ಕೊಂದ |ಅಲವಜಾರನು, ಬತ್ತಲಿರುವ, ಕಲಹಕೆ ಪ್ರೀಯ 10ಕೊಟ್ಟೆಲ್ಲ ಅವನಿಗೀ ಕನ್ನಿಕಿಯ ಸವತಿಯರು |ಎಷ್ಟೋ ಮಲಸುತರಿಹರದಕೆ ದಶ ಮಡೀ ||ಸಿಟ್ಟಾಗ ಬ್ಯಾಡವನ ವಾರ್ತಿ ಕೇಳಲು ಜನರು |ಬಿಟ್ಟು ಸಂಸಾರವೆಂದಿಂದಿಗೊಲ್ಲದಿಹರೂ 11ನಿನ್ನ ಮಗಳವನಿತ್ತವನ ಮಗಳ ಮದಿವ್ಯಾದಿ |ಕನ್ಯ ವಿಕ್ರಯ ಪರಸ್ಪರವೆನಿಸಿತೂ ||ಇನ್ನೇಸೊ ನಿಮ್ಮ ನಿಮ್ಮಲ್ಲಿದ್ದ ನಡತಿಗಳು |ಅನ್ಯರಿದುಕೇಳಿಭಜಿಸರೊ ಶುದ್ಧ ಭಕುತಿಯಲೀ 12ಏನಾದರೇನು ಶ್ರೀ ಪ್ರಾಣೇಶ ವಿಠಲನಿಗೆ |ನೀನೆಗತಿನಿರ್ದೋಷ ವಸ್ತುವೆಂದೂ ||ಶ್ರೀನಳಿನಭವಮುಖರುನಿತ್ಯವಂದಿಸುತಿಹರೊ |ನೀನವನ ಮಾವನಾದಿನ್ನು ಪೂಜಿತನಲ್ಲೆ 13
--------------
ಪ್ರಾಣೇಶದಾಸರು
ದಾಸರಿಗೆ ದುರಿತದೋರದುಶೇಷಾಧೀಶ ಶ್ರೀ ಶ್ರೀನಿವಾಸನದ್ವೇಷಖಳ ಮೋಳಿಗೆಯ ನಿ:ಶೇಷವೆನಿಸಿ ನಿಜಜನರ ವರ್ಧಿಪನ ಸುರಾಧಿಪನ ಸುಪ್ರತಾಪನ ಪ.ಅವನಿಯ ಕೊಂಡಿಳಿದವನ ಕೊಂದವನಿ ತಂದ ವನಜಭವ ಸನಕಾದ್ಯರಿಗೊಲಿದನಕುವರ ತನ್ನವರಿದ್ದಾಟವಿಯಲಿದ್ದವನ ಭಯವ ನಿವಾರಿಸಿ ಕುವರಗೆ ವರದನ ಪೊರೆದನ ಮೆರೆದನ 1ವಿಧಿಪದಕರ್ತರ ಗುರುಸುಖತೀರ್ಥರಹೃದಯ ಮಂಗಳ ಮಾನಸದ ಮರಾಳನಪದಸೋಂಕಿಸಿ ಪಾರಾಕಿಯನು ತ್ವರಿಯದಿಸುದತಿಯ ಮಾಡಿದುದರಿಯಾಘಹಾರಿಯ ಅರಿದಾರಿಯಮುರಾರಿಯ 2ಕಿರುಗೆಜ್ಜೆ ನೂಪುರ ವರಜಾಂಬೂನದಾಂಬರದಾಮಕೌಸ್ತುಭಸಿರಿವತ್ಸ ಕೇಯೂರಹಾರ ಕರವಲಯಕುಂಡಲಮಣಿಮಕುಟಾಭರಣಭೂಷಿತ ಘನಗಾತ್ರನಬ್ಜನೇತ್ರನ ಮಾಕಳತ್ರನ ಖಗಪತ್ರನ3ಸಿರಿದೊರೆತಿರೆ ಬೆರೆತಿರದೆ ಆ ಹರಿಶರಣರವೆರೆಸಿ ಗರ್ವಜರಿದು ಶ್ರೀಹರಿಯಗುರುನಿರೂಪದಪರಿಅರಿದೆಡರದರಿದುಅರಿಅರುವರಿಗಂಜದಿಹ ಅಳುಕದಿಹ ದೃಢದಲ್ಲಿಹ ಮುಕ್ತನಾಗಿಹ4ಪಂಚಬೇಧ ವಿವರ ತಿಳಿದು ತತ್ವ ಜಪಿಸಿಪಂಚರಾತ್ರಾಗಮ ತಂತ್ರಸಾರಾರ್ಥಗಳಿಂಮಿಂಚುವ ಭಕ್ತಿ ಪಥದಲಿ ನಿಜಾಯುವಹಿಂಚುಮಾಡುವ ಭವಾರ್ಣವವನೀಸಾಡುವ ಕಡೆಗೋಡುವನಲಿದಾಡುವ 5ವೆಂಕಟೇಶನ ನಾಮ ಪಾಡಿಕೊಂಡಾಡುವವೆಂಕಟೇಶನಾಕೃತಿ ನೋಡೊಲೆದಾಡುವವೆಂಕಟೇಶನ ಕಥಾಮೃತಕೇಳಿಬಾಳುವವೆಂಕಟೇಶನ ಚರಣವೆ ಶರಣೆನುವ ಕಾರಣೆನುವ ಪೂರಣೆನುವ 6ಮೊದಲೆ ಸ್ವಾಮಿ ಪುಷ್ಕರಣಿ ಶ್ರೀವರಾಹನಸದಮಲ ಸುವಿಮಾನ ಶ್ರೀನಿವಾಸನಇದೀಗೆ ಭೂವೈಕುಂಠವೆನಿಪಾನತರಾದರ ಪ್ರಸನ್ವೆಂಕಟೇಶನ ಕಾಣುವ ಶಮಮಾಣುವ ಕೊಬ್ಬಿಕುಣಿವ 7
--------------
ಪ್ರಸನ್ನವೆಂಕಟದಾಸರು
ದೇವಿ ಅಂಬುಜವಲ್ಲಿ ರಮಣನೆ ಭೂವರಾಹ ದಯಾನಿಧೆಪವಮಾನನ ದಿವ್ಯ ಕರದಲಿ ಸೇವೆ ಸಂತತಗೊಳ್ಳುವಿಅವನಿಯೊಳು ಶ್ರೀಮುಷ್ಣಕ್ಷೇತ್ರದಿ ನೀ ವಿಹಾರವ ಮಾಡುವಿಅತ್ಯಗಾಧ ಸುಶೀಲಜಾಹ್ನವಿಸುತ್ತು ಷೋಡಶತೀರ್ಥದಿಮತ್ತು ವರ್ಣಿಪೆ ತೀರ್ಥ ತಟದಲಿ ಉತ್ತಮಾಗ್ನೇಯಭಾಗದಿಕರಗಳೆರಡು ಕಟಿಯಲಿಟ್ಟು ಕೋರೆಹಲ್ಲನೆ ತೋರುತಘನ್ನಶ್ವೇತವರಾಹಮೂರುತಿ ಎನ್ನ ಪೂರ್ವದ ಪುಣ್ಯದಿಸುಂದರಾನನ ಕಂಜಮಧುಪನಇಂದುನೋಡಿದ ಕಾರಣಮಲ್ಲಮರ್ದನವೈಕುಂಠದಿಂದ ಮೆಲ್ಲಮೆಲ್ಲನೆ ಬಂದೆಯಸೂಕರಾಸ್ಯನೆ ನಿನ್ನ ಪಾದಕನೇಕ ವಂದನೆ ಮಾಡುವೆ
--------------
ಗೋಪಾಲದಾಸರು