ಒಟ್ಟು 16 ಕಡೆಗಳಲ್ಲಿ , 10 ದಾಸರು , 16 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲವು ನಿನ್ನಾಧೀನ | ನಾ ಬಲ್ಲೆನೆಂಬುದಜ್ಞಾನ ಪ ವಿಧಿ ಪರಿಯಂತವು ನೀ- ನಿಲ್ಲದೆ ಕದಲದು ನಿಜವಿದು ನಿಜವಿದು ಅ.ಪ ಸುಖವನಪೇಕ್ಷಿಸುತಿಹರು | ದು- ಸಖ ನೀನೆನ್ನದೆ ದಾರಾ ಪುತ್ರಾ- ದ್ಯಖಿಳ ಸಂಪದವ ಬಯಸಿ ಕೆಡುವರು 1 ಹಣ ಸಂಪಾದಿಸುವದಕು | ಸ- ದ್ಗುಣ ವಂತನೆನಿಸುವದಕೂ ಹೆಣಕೆ ಸಮಾನನು ಇವನೆಂಬುವದಕೂ | ಹಿರಿಯ- ನೆನಿಸಿ ಪೂಜಿಸಿ ಕೊಂಬುವುದಕೂ 2 ನೀನೊಲಿದರೆ ವಿಷವಮೃತ | ಬರಿ- ಜ್ಞಾನಿಗಳರಿಯುವರೀ ನಾನಾ ಬಗೆ 3 ಜ್ಞಾನ ಭಕ್ತಿಯು ವಿರಾಗ | ವೆಂ- ಬೀನಿದಾನವೇ ಯೋಗ ಆನಂದ ಪಡುವುದೇ ಬಲು ತ್ಯಾಗ 4 ಕ್ಷೇಮದಿಂದಲಿರುವದಕೂ | ನಿ- ರ್ನಾಮವೈದಿ ಕೆಡುವುದಕೂ ಪಾಮರ ಜೀವರು ತಾವರಿಯರು ಗುರು ರಾಮ ವಿಠಲ ನೀನಾ ಮಮತೆ ಕೊಡದಿರೆ 5
--------------
ಗುರುರಾಮವಿಠಲ
ಒಬ್ಬಟ್ಟಿಗೆ ಮಂಗಳಜಯ ಮಂಗಳಂ ಶುಭೋದಯ ಮಂಗಳಂನಯ'ದರಿಗೊಪ್ಪಾದ ಒಬ್ಬಟ್ಟಿಗೆ ಪಐದು ದ್ರವ್ಯಂಗಳೊಡನೈದಿತೊ ಇಚ್ಛೆಯಲಿ ುೀ ಕೃತಿಯಾಗಿನಾದಿ ತೇಜೋಬ್ಧಿಯಲಿ ಸರ್ವಜನಕೆಐದಿಸುತ ಸುಖವ ಸಂಪಾದಿಸುತ ಗುರುವರನಪಾದಸ್ಮರಣೆಗೆ ಮತಿಯನೀಯುವುದಕೆ 1ಹರಿಸಮಾರಾಧನೆಯೊಳರಸಿ ನೋಡಿದರೆ ತಾನಿರದೆಡೆಯೊಳಿಲ್ಲ ಮಂಗಳವೆನಿಸುತಬೆರೆದಿರಲು ತಾನು ಸರ್ವರಿಗು ಹರುಷವನಿತ್ತುಪೊರೆದು ಚೆನ್ನಾುತೆನಿಸುವ ವಡವೆಗೆ 2ಮೆರೆದು ಚಿಕ್ಕನಾಗಪುರದಲಿ ತನ್ನ ಮ'ಮೆಯನುಗುರುವಾಸುದೇವ ಕೃಪೆಯನ್ನು ಪಡೆದುಪರಮ ಭಾಗವತ ಗಂಗಾಧರಯ್ಯನ ಹೊಣೆಯನಿರದೆ ಸಂಪಾದಿಸಿದ ಒಬ್ಬಟ್ಟಿಗೆ 3
--------------
ತಿಮ್ಮಪ್ಪದಾಸರು
ಕೇಳಮ್ಮ ತಂಗಿ ಕೇಳಮ್ಮ ಪ ಕೇಳಿ ಪುರಾಣದಿ ಪೇಳಿದ ಕೃಷ್ಣನ ಲೀಲೆಯ ಪಾಡುತ ``ಬಾಳಮ್ಮ'' ಅ.ಪ ನಿಷ್ಟೆಯಿಂದಲಿ ಬಲು ಶಿಷ್ಟಳಾಗುತ ದುಷ್ಟರಿಂದ ದೂ``ರಾಗಮ್ಮ'' 1 ಹರಿದಾಸರಪದ ಹರುಷದಿ ಹಾಡುತ ಗುರು ಹಿರಿಯರ ಮನ ``ಕೊಪ್ಪಮ್ಮ'' 2 ಕಾಲ ಕಳೆಯದೆ ಶೀಲಮತಿ ನೀ “ನಾಗಮ್ಮ'' 3 ವಿದ್ಯೆಯ ಕಲಿತು ಬದ್ಧಿವಂತ | ಳಾ | ಗಿದ್ದರೆ ಸುಖ ಶತ “ಸಿದ್ಧಮ್ಮ'' 4 ವಂದಿಸಿ ತುಲಸಿ ವೃಂದಾವನ ಪೂಜಿಸು ಮುಂದೆ ನಿನಗೆ ``ಆನಂದಮ್ಮ'' 5 ಹೀನರ ಬೆರೆಯದೆ ಮೌನವ್ರತದಲಿ | ಜ್ಞಾನಿ ಜನರ ನೀ ``ನರಸಮ್ಮ'' 6 ಮೂಢ ಜನರ ಒಡನಾಡದೆ ಭಕ್ತಿಲಿ ಮಾಡುವ ಸಜ್ಜನರ ``ಸಂಗಮ್ಮ'' 7 ಧರ್ಮದಿಂದ ಸತ್ಕರ್ಮ ಮಾಡುತ ನಿರ್ಮಲಗೊಳಿಸಿ ಸಂತ ``ರಂಗಮ್ಮ'' 8 ಪವನ ಪಿತನ ಕಥಾಶ್ರವಣವೆ ಪುಣ್ಯವು ಭವ ವಿದು ಕತ್ತಲು ``ಕಾಳಮ್ಮಾ'' 9 ಸದನಕೆ ಬಂದಿಹ ಬುಧರಾವರಿಸಲು ಮಂದಬಲು ನಿನಗದ ``ರಿಂದಮ್ಮ'' 10 ಎಂದೆಂದಿಗು ಪರನಿಂದೆಯ ಮಾಡದೆ ಮಂದಿರದಿರುವದೆ ``ಚಂದಮ್ಮ'' 11 ಸಾರಿದ ಜನರಘದೂರಗೈದು ಹರಿ ತೋರುವ ನುಜಗುರು ``ಈರಮ್ಮ'' 12 ಅತ್ತಿಯ ಮನಿಗೆ ಹೆತ್ತವರಿಗೆ ಉತ್ತಮ ಕೀರ್ತಿ ``ತಾರಮ್ಮ'' 13 ಗೋವಿಪ್ರಾಳಿ ಸೇವಿಸುತಿರುವದೆ ಕೋವಿದರಿಗೆ ಬಲು ``ಜೀವಮ್ಮ'' 14 ಭಾವದೊಳಗೆ ಪರದೇವನೆ ಪತಿಯೆಂದು ಪಡಿ ``ಭೋಗಮ್ಮ'' 15 ಭೇದಜ್ಞಾನ ಸಂಪಾದಿಸು ಕ್ಷಮಿಸುವ ಶ್ರೀಧರ ನಿನ್ನಾಪ ``ರಾಧಮ್ಮ'' 16 ಕೋಪದಿ ಪರರಿಗೆ ತಾಪವ ಬಡಿಸಲು ಲೇಪವಾಗುವದು ``ಪಾಪಮ್ಮ'' 17 ಇಂಗಡಲಾತ್ಮಜನಂಘ್ರಿ ಸರೋಜಕೆ ಸತಿ ``ತುಂಗಮ್ಮ'' 18 ದಾಸಜನರ ಸಹವಾಸದೊಳಿರುವದೆ ಕಾಶಿಗಿಂತ ವಿ``ಶೇಷಮ್ಮ'' 19 ಕಲಿಯುಗದಲಿ ಸಿರಿನಿಲಯನ ನೆನೆದರೆ ಸುಲಭ ಮುಕ್ತಿ ತಿಳಿ ``ಕಂದಮ್ಮ'' 20 ಪತಿಯು ಸದ್ಗತಿಗೆ ಗತಿ ಎಂದರಿತಹ ಮತಿಯುತ ಸತಿಯೆ ``ಯವನಮ್ಮ'' 21 ಮಧ್ವಸಿದ್ಧಾಂತದ ಪದ್ಧತಿ ತಪ್ಪದೆ ಇದ್ದರೆ ಹರಿಗತಿ ``ಮುದ್ದಮ್ಮ'' 22 ಸೋಗಿಗೆ ನೀ ಮರುಳಾಗಿ ನಡೆದರೆ ಯೋಗಿ ಜನರ ಮನ ``ಕಲ್ಲಮ್ಮ'' 23 ಶೀಲೆ ಗುಣದಿ ಪಾಂಚಾಲೆಯು ಎಲ್ಲ ಬಾಲೆಯರೊಳು ``ಮೇಲಮ್ಮ'' 24 ನೇಮದಿ ನಡೆದರೆ ಪ್ರೇಮದಿ ಸಲಹುವ ಶಾಮಸುಂದರನು ``ಸತ್ಯಮ್ಮ'' 25
--------------
ಶಾಮಸುಂದರ ವಿಠಲ
ತೆರಳಿದರು ವಿಜಯರಾಯರು ವಿಜಯ ವಿಠಲನ ಪುರದೊಳಗೆ ಪರಮ ಭಕ್ತರ ಕಾಣಬೇಕೆನುತ ಪ ಯುವ ಸಂವತ್ಸರದ ಕಾರ್ತಿಕ ಶುದ್ಧ ದಶಮಿ ವಿಭಕ ರವು ಗುರುವಾರ ಪ್ರಥಮ ಯಾಮದೀ ಪವನಾಂತರಾತ್ಮಕ ಶ್ರೀ ಹರಿಯ ದರ್ಶನೋ ತ್ಸವ ಸಂಪಾದಿಸುವ ಬಹು ಲವಲವಿಕೆಯಿಂದ 1 ಧರಣಿಯೊಳು ಬಾಸ್ಕರ ಕ್ಷೇತ್ರವೆನಿಸುವ ಚಿಪ್ಪ ಗಿರಿಯೆಂಬ ಗ್ರಾಮದಿ ವಿಬುಧರ ಮುಖದಿ ಭಾಗವತ ಬ್ರಹ್ಮಸೂತ್ರ ಭಾರತ ಗೀತ ಮರುತ ಶಾಸ್ತ್ರಾರ್ಥ ಗ್ರಂಥಗಳನಾಲಿಸುತಲಿ 2 ಸುಖತೀರ್ಥ ಮುನಿಯ ಮನಕನುಕೂಲ ಸಚ್ಛಾಸ್ತ್ರ ನಿಕರಗಳ ಕವನ ರೂಪದಲ್ಲಿ ರಚಿಸಿ ಭಕತರಿಗೆ ಸನ್ಮಾರ್ಗ ತೋರಿ ಸಂತೋಷದಲಿ ವಿಖನಸಾರ್ಚಿತ ಜಗನ್ನಾಥ ವಿಠಲನ ಪದಕೆ 3
--------------
ಜಗನ್ನಾಥದಾಸರು
ಧ್ಯಾನ ಮಾಳ್ಪುದು ಮನಸಾ | ಹೃದಯಾರವಿಂದದಿಸಾನು ಕೂಲಿಪ ಅರಸ | ವಿಸ್ತರಿಸಿ ಗುಣಗಳಮೌನಿಯಾಗುತ ಸಹಸ | ಚಿಂತಿಸೆಲೊ ಅನಿಶಾ ಪ ಸಾನು ರಾಗದಿ ರೂಪಗುಣಗಳ | ಮಾನಮೇಯ ಜ್ಞಾನ ಸಹಿತದಿಏನು ಫಲದನು ರಾಗವಿಲ್ಲದೆ | ಶ್ರೀನಿವಾಸನ ಭಕುತಿಯಿಂದಲಿ ಅ.ಪ. ನತ ನಾ | ಸಾಗ್ರದಲಿ ದೃಷ್ಟಿಯನೆ ಇಡುತ 1 ಮಾನವ ಪ್ರಾಣ ನಿಯಮನ ವಾರ್ತಿ | ತಿಳಿಯುತ ಮನದಲಿಪ್ರಾಣ ರೇಚಕ ನೀತಿ | ಪೂರಕವು ಕುಂಭಕಜಾಣ ತನದಲಿ ಪೂರ್ತಿ | ಗೈದೋಂಕಾರ ಕೀರ್ತಿ ||ಪ್ರಾಣ ನಿರುತದಿ ಮಾಳ್ಪ ಅನು ಸಂಧಾನ ತಿಳಿದಾ ಚರಿಸೆ ವಿಹಿತದಿಪ್ರಾಣ ಸಂಯವ ಭಕ್ತಿ ಪೂರ್ವ ವಿ | ಧಾನ ಮಾಡಲು ವೇಗ ವಲಿದನು|2| ಹತ್ತು ಸಲ ಪ್ರತಿಸವನ | ಪ್ರಾಣನ್ನ ಸಂಯವ ಕರ್ತೃ ಹೀಗೆ ತ್ರಿಸದನ ಮಾಸಕ್ಕೆ ಮುಂಚೆಯೆಭರ್ತೃವಾಗಿಹ ಪ್ರಾಣ | ವಶನ ಹನು ಅವಗೆಂದುಉಕ್ತವಿದು ಸನ್ಮಾನ | ತಿಳಿದಾ ಚರಿಸು ಧ್ಯಾನ ||ಪೊತ್ತು ಕದಳಿಯ ಮೊಗ್ಗಿನಾಕೃತಿ | ಮತ್ತೆ ನಡು ಸತ್ಕರ್ಣಿಕವು ಇಹಹೃತ್ಸ ಅಷ್ಟದಳಾಖ್ಯ ಕಮಲವ | ಎತ್ತುವುದು - ಉದಯಾರ್ಕ ಮಂತ್ರದಿ |3| ಚಿಂತೆ ಕರ್ಣಕೆಯಲ್ಲಿ | ಮಾರ್ತಾಂಡ ಮಂಡಲಅಂತೆ ಅದರುಪರೀಲಿ | ತಾರೇಶ ಮಂಡಲಚಿಂತೆ ತದ್ದುಪರೀಲಿ | ಮಂಡಲ ವಿಭಾವಸುಅಂತೆ ತನ್ನಡುವೀಲಿ | ಹರಿಪದಾಜ್ಜಾಳಿ ||ಯಂತೆ ಚಿತ್ತ ಸ್ಥೈರ್ಯದಿಂದಲಿ | ಚಿಂತಿಸುತ ಗುಣರೂಪ ಕ್ರಿಯೆಗಳಕ್ರಾಂತನಾಗುವ ಹರಿಯ ಚರಣದಿ | ಶಾಂತ ಸತ್ಸಮಾಧಿಯನು ಪಡೆ 4 ಕಂಬು ಕುಂಡಲ ಮಕರ | ಶೋಭಿ ಕರ್ಣಾಪಾರ ||ಮಾರಪಿತ ಶಿರಿವತ್ಸ ಲಾಂಛನ | ಶ್ರೀ ರಮಾಪತೆ ಶ್ಯಾಮಸುಂದರಕಾರಣಿಕ ಕನಕಾಂಬರಾಧರ | ಹಾರ ಸುಮನ ವಿಶಾಲ ವಕ್ಷನ 5 ಕಂಬು ಕಟಿ ಸೂತ್ರಾಂಗದೈರ್ಯುತ | ವಸ್ತು ಸರ್ವಾಧಾರ ಹೃದ್ಯನ 6 ಧ್ಯಾನ ಬಹು ದುರ್ಭಾವ್ಯ | ಶ್ರೀಹರಿ ವಿಭೂತಿಯುಮನಕೆ ದುರ್ವಿಜ್ಞೇಯ | ಪೆಸರಿಹುದು ಕಾರಣಅನಘನಂಗವು ದೇಹ | ಒಂದೊಂದು ಸ್ಥಿರ ಪಡೆಪುನಹ ಸರ್ವಾವಯದ ಸ್ಥಿರ ತೆರದಿ ಧೇಯ ||ಎಣಿಸು ಪ್ರತ್ಯಾಹರಣ ಕಾರ್ಯವ | ವಿನಹವಿದು ಮನಸ್ಥೈರ್ಯವಾಗದುಅನಿಲದಯ ಸಂಪಾದಿಸುತ್ತಲಿ | ಗುಣಿಸು ನೈರಂತರ್ಯವೀತೆರ 7 ಶಿಷ್ಟನಾಗುತಲಿನ್ನು | ಅನ್ಯತ್ರ ಮನವನುಸುಷ್ಠು ಸೆಳೆಯುತಲಿನ್ನು | ಹರಿಪಾದ ವನಜದಿಘಟ್ಟ ಇಡುತಲಿ ಮುನ್ನ | ಸುಸ್ಥಿರದ ಚಿತ್ತದಿ ||ಪ್ರೇಷ್ಟ ತಮ ಅವನೆನ್ನು | ಸರ್ವಕಧಿಕೆನುನಷ್ಟವಾಗುತ ಭ್ರಾಮಕ ತ್ರಯ | ಶ್ರೇಷ್ಠ ಧ್ಯಾನಾಸಕ್ತನಾಗಲು ದೃಷ್ಟಿಸುತಲಿ ತತ್ವಪತಿಗಳ | ಇಷ್ಟ ಮೂರ್ತಿಯ ಕಾಂಬೆ ಕೊನೆಗೆ8 ಯೋಗವಿಹುದು ಸಮಾಧಿ | ಅಭ್ಯಾಸ ಸಾಧ್ಯ ನಿಯೋಗಿಸಿದನ ನಿರುತದಿ | ಸುಸ್ಥಿರದಿ ಚಿತ್ತವಯೋಗಿಸ್ಹರಿ ಚರಣದಿ | ಏನೊಂದು ಬೇಡದೆವೇಗ ಹರಿ ರೂಪದಿ | ನೋಡವನ ದಯದಿ ||ಆಗಮೈಕ ಸುವೇದ್ಯ ಭಕ್ತಿಯ | ಯೋಗ ಕೊಲಿಯುತ ಸಾಧಕಂಗೆಯೋಗಿ ಗುರು ಗೋವಿಂದ ವಿಠ್ಠಲ | ವೇಗತನ ದರ್ಶನವ ಪಾಲಿಪ 9
--------------
ಗುರುಗೋವಿಂದವಿಠಲರು
ನಿನ್ನವರ ಸಂಗ ಎಂತಹದಯ್ಯಾ ಅನಂತ ಜನ್ಮದ ಪಾಪ ಪುಂಜರ ನಾನು ಪ ಬಾರೆ ಸುಜನರ ಮನಕೆ ತಾರೆ ಗಂಗೋದಕವ ಸೇರೆ ನಿನ್ನಡಿಗಳಲಿ ಸಾರೆ ಉತ್ತಮರ ಕೀರ್ತಿ ಬೀರೆ ನಿನ್ನಯ ಮಹಿಮೆ ಕೋರೆ ನಿರ್ಮಳ ದಾರಿಯಾ ನೀರೆಯರ ಶಶಿಬಿಂಬ ಮೋರೆ ಬಣ್ಣಕೆ ಮೆಚ್ಚಿ ಕಾರ್ಯ ಕಾರಣ ಜರಿದು ಭಾರಿ ತಿರುಗವನಿಗೆ1 ಏಕಾದಶಿ ದಿನ ಬೇಕೆಂದು ಮನವಿಟ್ಟು ಪಾಕನ್ನ ಮಾಡಿಸುವನೊ ನೇಕಪರಿ ಮಾಡಿಸುವನೊ ಪೋಕತನದಲ್ಲಿ ವಿವೇಕ ರÀಹಿತನಾಗಿ ಗೋಕುಲವ ಹಳಿದು ಕೋ ವಾರೆವಿದ್ದವನಿಗೆ2 ಪರರ ವಡವೆಯ ನೋಡಿ ಧರಿಸಲಾರದೆ ಮನ ಮರಗಿ ನಿಷ್ಠುರನಾಡಿ ಇರಳು ಹಗಲೂತ್ತ- ಮರ ಬೈದು ಪಾಪಕ್ಕೆ ಗುರಿಯಾಗಿ ನಸುನಗುತ ಪಿರಿದು ದುರ್ವಿಷಯದೊಳು ಹೊರಳಿ ಹಕ್ಕಲನಾಗಿ ಮರಳಿ ಜನಗಳಲ್ಲಿ ಜನಮವಾಗುವನಿಗೆ 3 ಅತಿಥಿ ಅಭ್ಯಾಗತರ ಕಂಡು ಸ್ಮರಿಸದೆ ಮತಿಹೀನವಾಗಿ ಭ- ಕುತಿ ಲೇಸ ತಾ ತಾ ಕೊಂಬೆನಯ್ಯಾ ಆರನಾರನಾದರು ಕರಿಯೆ ಚತುರೋಕ್ತಿಯಲಿ ನೆನೆಸಿ ಪ್ರತಿ ಯಾರು ನಿನಗೆಂದು ಗರ್ವದಲ್ಲಿದ್ದವನಿಗೆ 4 ಆದಿಯಲಿ ಬಂದದ್ದು ಅಂತ್ಯದಲಿ ಪೋಗುವ ಹಾದಿಯನು ತಿಳಿತಿಳಿದು ಕ್ರೋಧವನು ಬಿಡದೆ ಕಾದುವೆನು ಹಲ್ಲು ಕಡಿದು ಸಾಧುಗಳ ನೋಡದಲೆ ವೇದಾರ್ಥಗಳ ಓದಿ ಶೋಧಿಸಿ ಕೇಳಿ ವಾದವನು ಮಾಡಿ ಸಂಪಾದಿಸುವ ದುರ್ಧರನಿಗೆ5 ದುರ್ಧನಕೆ ಕೈಕೊಡುವೆ | ಮೊದಲೆ ಕನಸಿನೊಳಗಾದರೂ ಗುಣಿಸುವೆ ಪರರ ಹಿಂಸೆಯನು ಬಿಡೆ ಕ್ಷಣವಾದರು ತನುವಿನ ಕ್ಲೇಶದಲಿ ದಿನವ ಹಾಕಿದೆ ವ್ಯರ್ಥ ದಣಿದಣಿದು ಈ ಪರಿಯನು ಮಾಡಿದವನಿಗೆ 6 ಹುಟ್ಟಿದಾರಭ್ಯವಾಗಿ ಶಿಷ್ಟಾಚಾರವ ತೊರೆದು ಕೆಟ್ಟ ಬಾಳಿದೆ ಧರಣೀಲೀ ಸುಟ್ಟ ಸಂಸಾರದೊಳು ಸಟಿಯಾಡಿ ಗುಟ್ಟಗುಂದಿದೆ ವಿಜಯವಿಠ್ಠಲ ನಿನ್ನ ನೆರೆ ಮರೆದು ಕೆಟ್ಟು ನರಕಕ್ಕೆ ಮನಮುಟ್ಟಿ ಬೀಳುವವನಿಗೆ 7
--------------
ವಿಜಯದಾಸ
ಪುಣ್ಯ ದೊರಕುವುದು ಅನು ಗಣ್ಯವಾಗಿದ್ದ ಸತಿಯಿದ್ದ ಜನರಿಗೆ ಪ ಬಡತನವಿದ್ದರು ನೆರೆಹೊರೆ ಮನೆಯಲ್ಲಿ ನುಡಿ ಬಿಚ್ಚಿ ಪೇಳದೆ ಸೌಮ್ಯಳಾಗಿ ಬಿಡದೆ ಮಾಡುವ ಗೃಹಕೃತ್ಯಂಗಳು ಜಗ ಅನುದಿನ 1 ವಿಪರೀತ ಕಾಲಗಳಟ್ಟಿದ ಕಾಲಕ್ಕು ಸ್ವಪನಾದಿಯಪ ಕಳವಳಿಸದಲೇ ಪತಿ ಸೇವೆ ಅಫಲದಲ್ಲಿ ಮಾಡಿ ಒಲಿದೊಲಿದಾಡುವ2 ಲಾವಣ್ಯ ಪುರುಷರ ಕಂಡರು ಮನದಲ್ಲಿ ಭಾವಿಸಬೇಕು ಸಹೋದರರು ಎಂದು ವಿಭೂತಿ ರೂಪವ ನಿತ್ಯ 3 ಬಂದು ತಂದರೆ ಸಾವಿರ ಮಾಡಿ ಚಿಂತಿಸಿ ಇಂದಿರೇಶನೆ ಪತಿರೂಪವೆಂದು ಅಂದದದಲಿದ್ದ ವಿಭವಾನುಸಾರ ಆ ನಂದವಾಗಿ ಸಂಸಾರದೊಳಗಿರೆ 4 ಪತಿಯ ಜನಕ ಮಾತೃ ಮಿಗಿಲಾದ ಜನರಿಗೆ ಹಿತವಂತಳಾಗಿ ನುಡಿಸಿಕೊಳುತಾ ಗಾತ್ರ ಸರ್ವದಾ ಪ್ರತಿದಿನ ಸುವಿನುವಳಾ ನಾರಿ ಅಧಿಕಾರಿ 5 ಚಕೋರ ಚಂದ್ರಮನಲ್ಲಿ ಮನಸು ಇಟ್ಟು ಸುಖಬಡುವಂತೆ ನಾನಾ ಪ್ರಕಾರ ಕಕುಲಾತಿಯಿಂದ ಕಾಮುಕಳಾಗದೆ ಮಹಾ ಭಕುತಿಯಿಂದಲಿ ಗುರು ಹಿರಿಯರ ಸಮ್ಮತ 6 ಸಂತಜನರೆಂಬ ಕ್ಷೀರಾಂಬುಧಿ ಮಧ್ಯ ಸಂತತ ಮೀನಿನಂದದಿ ಬೀಳುತಾ ಪತಿ ಧರ್ಮವಹಿಸಿ ಶ್ರೀ ಕಾಂತನ ಗುಣಕಥೆ ಕೇಳಿ ಪೊಗಳಲಾಗಿ 7 ನಾಮ ಮೊದಲು ಮಾಡಿ ಪ್ರಕೃತಿಯ ಪರಿಯಂತ ಪ್ರೇಮದಿಂದಲಿ ಗುಣಗಳ ಗುಣಿಸೀ ಕಾಮಾದಿ ಚತುರ್ವಿಧÀ ಪುರುಷಾರ್ಥ ತನ್ನಯ ಸ್ವಾಮಿಯಲಿಂದಲಿ ಸಂಪಾದಿಸುತಿಪ್ಪಾ 8 ಆವಾವ ಪ್ರಯೋಜನ ಮಾಡಲು ಸರ್ವದ ದೇವದೇವೇಶನಾಧೀನವೆಂದೂ ಭಾವದಲಿ ತಿಳಿದನ್ಯ ಕರ್ಮವ ಬಿಟ್ಟು ಪಾವನ ವಿಜಯವಿಠ್ಠಲನ ಭಕುತಿಯಿಂದಾ 9
--------------
ವಿಜಯದಾಸ
ಬರಿದಿದೇಕೆಲೋ ನಿನ್ನಂತರಿರವು ಸಿರಿಯರರಸ ಅರಿಯನೇನೆಲೋ ಪ ಮರೆಯ ಮೋಸದಿ ಕುಕ್ಕಲು ಮೀನ ಹರಿವ ಉದಕದಿ ಬಕನು ಮೌನ ಧರಿಸಿದಂದದಿ ಪರಮಮೌನ ಧರಿಸಿ ಕುಳಿತು ಮರುಳುಗೊಳಿಸಿ ಪರರ ಕೊರಳ ಮುರಿವ ದುರುಳತನದ ಕೃತಿಗೆ ಹರಿಯು ಒಲಿಯುವನೇನು ಮರುಳೆ1 ಕಪಟ ನೀಗದೆ ಹುಚ್ಚು ಬಿಡದೆ ಗುಪಿತ ತಿಳಿಸದೆ ಮುಚ್ಚಿ ಕಣ್ಣು ತಪಸಿಯಂದದಿ ಕುಪಿತ ಮಾನಿಸನಾಗಿ ಕುಳಿತು ತಪಸಿಯಂತೆ ತೋರಿ ಜನರ ಅಪಾಯಮಾಳ್ಪ ಕಪಟವೇಷಕೆ ಸುಫಲ ದೊರೆಯುವುದೇನು ಮರುಳೆ 2 ಉದಯದೇಳುತ ಓಡಿ ಹೋಗಿ ನದಿಯ ಮುಳುಗುತ ತೀಡಿಗಂಧ ಹದದಿ ಬರೆಯುತ ವಿಧವಿಧಮಂತ್ರೊದರಿ ಇತರರ ಸದನ ಮುರಿದು ಸತಿಯ ಸುತರ ಮುದದಿ ಪೊರೆವ ಅಧಮ ವ್ರತಕೆ ಸದಮಲಾಂಗೊಲಿವನೆ ಮರುಳೆ 3 ಕಪಟ ನೀಗದೆ ಜಟೆಯ ಬೆಳಸಿನ್ನು ಚಪಲತನದಿಂ ದುಟ್ಟು ಕೌಪೀನ ನಿಟಿಲದಲ್ಲಿ ಭಸ್ಮಧರಿಸಿ ನಟಿಸಿ ಸಾಧುವರ್ತನದಿಂ ದ್ಹೊಟ್ಟೆ ಹೊರೆವ ಭ್ರಷ್ಟತನಕೆ ಕೆಟ್ಟ ಬವಣಳಿಯುವುದೆ ಮರುಳೆ 4 ತತ್ವದರ್ಥವ ಬೋಧಿಸುತ್ತ ಭೃತ್ಯ ಸಮೂಹವ ಸಂಪಾದಿಸುತ್ತ ನಿತ್ಯಸತ್ಯವ ವಿತ್ತದಾಸೆಗುತ್ತರಿಸುವಸತ್ಯಭ್ರಷ್ಟ ವರ್ತನಕೆ ಮುಕ್ತಿದಾಯಕ ಸಿರಿಯರಾಮ ಮುಕ್ತಿಸುಖ ನೀಡುವನೆ ಮರುಳೆ 5
--------------
ರಾಮದಾಸರು
ಭಜಿಸಿದ್ಯಾ ಈ ಭಾಗ್ಯನಿಧಿಯಾ ನೋಡು ಸುಜನರ ಹೃದಯ ಪಂ ರಜತಮೋ ದೂರನ್ನ ಪ ಮನ ಸೋಲಿಸುವ ಲಲಾಟ ಫಣಿ ನಮ್ಮನು ನೋಡುವ ವಾರೆ ನೋಟಾ ಹಾಹಾ ಮಕರ ಕುಂಡಲ ಕರ್ಣ ಕದಪು ಆವಿನ ಸೋಲಿಸೆ ನಿತ್ಯಾ 1 ಭೃಂಗ ಕುಂತಳ ಕೇಶಾ ಪುಬ್ಬು ಅಂಗಜ ಚಾಪಾ ವಿಲಾಸ ಉ ತ್ತುಂಗ ಚಂಪಕ ಕೋಶಾ ನಾಸಾರಸಾ ರಂಗುದುಟಿಯ ಮಂದಹಾಸಾ ಹಾಹಾ ತಿಂಗಳ ಎಳೆ ಬೆಳ ದಿಂಗಳಾ ಮೀರೆ ಭೂ ಮಂಗಳಾಕೃತಿ ತಿರುವೆಂಗಳ ಸ್ವಾಮಿಯ 2 ಪರಿಮಳ ವೀಳ್ಯೆ ಕರ್ಪುರಾ ವಿಟ್ಟಾ ಜಲಧಿ ಗಂಭೀರಾ ದಂತ ಪರಿಪಙË್ತ ಸಮ ವಿಸ್ತಾರ ಹಾಹಾ ಮಿರುಗುವಾನಂತ ಚಂ ಚರಿಸುವ ಚತುರನ್ನ 3 ಪನ್ನೇರು ಸಂಪಿಗೆ ಪೊಂಗೇ ಜಾಜಿ ಇರುವಂತಿಗೆ | ಹಾಹಾ | ಮಕರಂದಾ ಮಾರಂದೋದಕ ಸುರಿಯಲಿಂದು4 ನಿಡಿದೋಳು ಕಕುಭುಜಾ ಕೊರಳಾ ಸ್ಕಂಧಾ ಮಣಿ ಹರಳಾ | ಹಾಹಾ| ಒಡನೆ ತಾಯಿತ ಕೀರ್ತಿ ವಡಿವೇಲಿ ಮೆರೆವನ್ನ 5 ಸುರವಿ ಮಯೂಖಾ ಮೇಲು ಧರಿಸಿದ ಚಕ್ರಾದಿ ಶಂಖಾ | ಹಾಹಾ | ಕೌಸ್ತುಭ ಮಣಿ ಸಿರಿವತ್ಸ ವನಮಾಲಾ ಉರವೈಜಯಂತಿ ಮಂದಾರ ಹೀರ ಹಾರನ್ನ6 ಮುತ್ತು ವೈಢೂರ್ಯ ಪ್ರವಳಾ ಪಚ್ಚ್ಚೆ ಕೆತ್ತಿದ ಪದಕ ನ್ಯಾವಳಾ ಸ್ತುತಿಪ ಜನಕೆ ಜೀವಾಳಾ | ಹಾಹಾ | ಪ್ರತ್ಯೇಕವಾಗಿ ತೂಗುತಿಹ ಸರಗಳು ತತ್ತುಲಸಿಧಾಮ ಚಿತ್ರವಾಗಿರೆ ಬಲು 7 ನಖ ಚಂದನಾ ಅಗರಾ ಪಚ್ಚೆ ಘನ ಪರಿಮಳ ಗಂಧ ಸಾರಾ | ಹಾಹಾ | ತನುವಿಗೆ ತನುವು ಲೇಪನವಾದಾ ಸೊಗಸು ವಾ ಸನೆ ಸುತ್ತ ಘಮಘಮ ತನರು ಹಾವಳಿ ತಿಳಿ 8 ತ್ರಿವಳಿ ಉಪಗೂಢ ಜಠರಾ ಅಖಿಳಾವನಿ ಧರಿಸಿದ ಧೀರಾ ನಾಭಿ ಕುಸುಮ ಮೃಗ ದೇವ ಉಡಿ ಉಡದಾರಾ | ಹಾಹಾ | ಭವಕಿಂಕಿಣಿ ತಳಲಾವಿ ವಸನ ಬಿರು ತೊಡರು ದೈತ್ಯಾವಳಿ ಹರನನ್ನಾ 9 ಊರು ಜಾನು ಜಂಘೆ ಗುಲ್ಫಾ ವಿಚಾರಿಸೆ ಕ್ರಮಾತು ಅಲ್ಪಾ ತನ್ನ ಸಂಕಲ್ಪಾ | ಹಾಹಾ| ವಾರಣಾ ಕರದಂತೆ ಹಾರೈಸುಯಿಂತು ನೂ ಚಾರು ಚರಣ ಪೆಂಡೆ10 ನಖ ವಜ್ರಾಂಕುಶ ಚಕ್ರ ಸುಧಿಯಾ ಸುರಿವ ಪೀಠ ಸರಸಾ | ಹಾಹಾ | ತ್ರಿದಶನಾಯಕ ಶಿವ ವಿಧಿಗಳ ಮುಕುಟ ಪಾದದಲಿ ಸಮ್ಮರ್ದವಾದುದು ನೋಡಿ ತರುವಾಯಾ 11 ದಹಿಸುವ ಪಾದಾ ಕಾಮ ಕಾನನ ದಹಿಸುವ ಪಾದಾ | ಹಾಹಾ | ಅನಂತ ದಿನಕ್ಕೊಮ್ಮೆ ನೀನೇ ಗತಿಯೆಂದಾ ಮಾನವಗೆ ಬಂದು ಕಾಣಿಸಿಕೊಂಬನ್ನ12 ಅಪದಕ್ಷ ಸಾರಾಧ್ಯಕ್ಷ ಸರ್ವವ್ಯಾಪಕ ಕರುಣಿಕಟಾಕ್ಷ ಜಾಗ್ರತ್ ಸ್ವಪ್ನದಲ್ಲಿ ಪ್ರಾಜ್ಞಾದಕ್ಷ ನಿಜ ಆಪನ್ನರಿಗೆ ದಾವಾ ವೃಕ್ಷ | ಹಾಹಾ | ರೂಪ ರೂಪಾಂತರ ವ್ಯಾಪಾರ ಮಾಳ್ಪನ್ನ ಆಪಾದ ರತುನ ಮೌಳಿಪರಿಯಂತರಾ13 ಸಂಪಾದಿಸು ಜ್ಞಾನಾ ಭಕ್ತಿ ಕೊಂಡಾಡು ಮುನ್ನಿನಾ | ಹಾಹಾ | ಬಂಧನ ಹರಿಸಿ ಆನಂದವ ಕೊಡುವ ಮು ಕುಂದ ಅನಿಮಿತ್ತ ಬಂಧು ವೆಂಕಟನ್ನ 14 ನಿತ್ಯ ಭಜಿಸುವ ಜನರಿಗೆ ಶೀಲಾ ಪುಣ್ಯ ನಿಜರೊಳಗಿಡುವ ಈ ಕೂಲಾ | ಹಾಹಾ | ವ್ರಜದಲಿ ಪುಟ್ಟಿದಾ ಸುಜನಾಂಬುಧಿ ಸೋಮ ವಿಜಯವಿಠ್ಠಲರೇಯಾ ಗಜರಾಜವರದನ್ನಾ 15
--------------
ವಿಜಯದಾಸ
ಮನವೇ ಮರೆವರೇನೊ ಹರಿಯಾ ಪ ಬಹು ಜನುಮಗಳಲ್ಲಿ ಬಟ್ಟ ಬವಣಿಗಳರಿಯಾ ಅ.ಪ. ವಿಷಯ ಚಿಂತನೆ ಮಾಡಸಲ್ಲ ಮೇಷ ವೃಷನನಾದನು ಹಿಂದೆ ಪೌಲೋಮಿ ನಲ್ಲ ಝಷ ಕೇತುವಿನ ಮ್ಯಾಳ ಹೊಲ್ಲ ನಿರಾ ಶಿಷನಾಗು ಯಮರಾಯನೆಂದೆಂದೂ ಕೊಲ್ಲ 1 ಧನವೆ ಜೀವನವೆಂಬಿ ನಿನಗೆ ಸುಯೋ ಧನ ನೋಡು ಧನದಿಂದ ಏನಾದ ಕೊನೆಗೆ ಅನಿರುದ್ಧ ದೇವನ ಮನೆಗೆ ಪೋಪ ಘನ ವಿಜ್ಞಾನವನೆ ಸಂಪಾದಿಸು ಕೊನೆಗೆ 2 ಹರಿದಾಸನಾಗಿ ಬಾಳೋ ಗುರು ಹಿರಿಯರ ಪಾದಕಮಲಕೆ ನೀ ಬೀಳೋ ನರರ ನಿಂದಾಸ್ತುತಿ ತಾಳೋ ದೇಹ ಸ್ಥಿರವಲ್ಲ ಸಂಸಾರ ಬಹು ಹೇಯ ಕೇಳೋ 3 ಹಲವು ತೀರ್ಥಗಳಲ್ಲಿ ಸ್ನಾನ ಮಾಡೆ ಮಲ ಪೋಯಿತಲ್ಲದೆ ನಿರ್ಮಲ ಜ್ಞಾನ ಫಲಿಸದೆಂದಿಗು ಹೀನ ಬುದ್ಧಿ ಕಳೆದು ಸೇವಿಸು ಸಾಧುಗಳನನುದಿನ 4 ಜಿತವಾಗಿ ಪೇಳುವೆ ಸೊಲ್ಲಾ ಹರಿ ಕಥೆಯಲ್ಲಿ ನಿರತನಾಗಿರು ಲೋಹ ಕಲ್ಲಾ ಪ್ರತಿಮೆ ಪೂಜಿಸಿದರೇ ನಿಲ್ಲ ಪರೀ ಕ್ಷಿತನೆಂಬ ರಾಯ ಈ ಮಹಿಮೆಯ ಬಲ್ಲಾ 5 ಜ್ಞಾನೇಚ್ಛಾ ಕ್ರಿಯಾ ಶಕ್ತಿ ತ್ರಯವಾ ತಿಳಿ ದಾನಂದ ಪಡು ಬಯಸದಿರುಭಯವಾ ಸಾನುರಾಗದಿ ಬೇಡು ದಯವಾ ನೀ ಮ ದ್ದಾನೆಯಂದದಿ ಚರಿಸು ಬಿಟ್ಟು ಭಯವಾ 6 ಭಾವ ಕ್ರಿಯಾ ದ್ರವ್ಯಾದ್ವೈತ ತ್ರಯ ಆವಾಗ ಚಿಂತಿಸು ಭೂಮ್ಯಾದಿ ಭೂತಾ ಜೀವಿಗಳೊಳು ಜಗನ್ನಾಥ ವಿಠಲ ಗಾವಾಸ ಯೋಗ್ಯವೆಂದರಿಯೋ ಸಂತತಾ 7
--------------
ಜಗನ್ನಾಥದಾಸರು
ಶ್ರೀನಿವಾಸಾರ್ಯರ ಶೃಂಗಾರ ಗುಣಂಗಳಆನೆಂತು ವರ್ಣಿಸುವೆನು ಪ ದಾನವಾಂತಕ ಹರಿಯ ಮಾನಸಾರ್ಚನೆ ಮಾಳ್ಪಮಾನಿಸಾ ವೇಷಧರರ ಇವರ ಅ.ಪ. ನಿರ್ಜರ ಪತಿಯ ಚಿತ್ತ ಸಂಪಾದಿಸುವರಮತ್ತು ಗಜವೆಂಬ ದುರ್ವಾದಿಗಳನೇ ಮುರಿದು ಹತ್ತು ದಿಕ್ಕಿಲಿ ಮೆರೆವರ ಇವರ 1 ಪಾದ ಅಂಗಾರ ಕರಮುಟ್ಟಿ ಪಾಲಿಸುತ್ತಿಹರ ||ವರ ಮಂತ್ರಾಕ್ಷತೆಯನ್ನಿತ್ತು ಮುದದಿಂದ ಪಾ-ಮರರನ್ನೆ ಪೊರೆವರ ಇವರ2 ಲಕ್ಷ್ಮೀಪತಿ ಶ್ರೀನಿವಾಸಾರ್ಯರೆಮ್ಮನು ಬಿಡದೆ ರಕ್ಷಿಸಲೆಂತೆಂಬೆನೊಅಕ್ಷರ ಪುರುಷ ಅಪ್ರಾಕೃತನ ತೋರಿ ಮದ ಮತ್ಸರವ ಬಿಡಿಸೆಂಬೆನೊ ||ಸೂಕ್ಷ್ಮಾಂಬರಧರ ಮೋಹನ ವಿಠಲನಈ ಕ್ಷಣದಿ ತೋರಿಸೆಂಬೆನೊ ನಾನು 3
--------------
ಮೋಹನದಾಸರು
ಸ್ಮಾರ್ತರ ನಿಂದನೆ ಮಾಡುವ ಕೆಟ್ಟ ಧೂರ್ತನ ಬಾಯ ಮೇಲೆ ಹೊಡೀ ಹೊಡೀ ಪ ಕರ್ತಾರ ಸ್ವರ ಸಮನೆನಿಸುವವರ ಪುರು- ಷಾರ್ಥಯುತ ಶೃತಿ ಶಾಸ್ತ್ರ ಪ್ರವರ್ತರ ಅ.ಪ ಪ್ರಮಾಣವನುಸರಿಸುವರ ವಿಹಿತವಾಗಿ ತಮ್ಮಂತೆ ಸರ್ವರನು ವಿಶೇಷದಿಂದರ್ಚಿಸುವವರ ಪ್ರಕಾಶಿಸುವವರ ಕರ್ಮ ಸಮ್ಯಜ್ಞಾನವಸಂಪಾದಿಸುವರ 1 ವೇದಾಭ್ಯಾಸದಿ ಕಾಲವ ಕಳೆಯುತ ವಿಹಿತರಿವರೆನಿಸಿಕೊಳ್ಳುವರ ಭೇದಾಭೇದಗಳರಿಯುತಲೀ ಬ್ರಹ್ಮವಾದದಲಿ ಸಂತೋಷಿಪರ ಪ್ರೀತಿಯ ಮಾಡುವರ ಹೃದ್ಗುಹೆಯಲಿ ನೋಳ್ಪರ 2 ನಂಬಿರುವವರ ವಿಧಿ ಪರೇಶನಲ್ಲಿಸಮನ್ವಯಿಸುವರ ಭಕ್ತಿಯಲಿ ಪೂಜಿಪರಾ ಸಂಪಾದಿಸೆ ಪಾತ್ರರಾದವರ 3
--------------
ಗುರುರಾಮವಿಠಲ
ಹರಣ ಪ ಜಗದಿ ಧರ್ಮಾ ಧರ್ಮವೆಂಬ ಅನುವರವು ಹುಟ್ಟುವ ಕಾರಣ ಅಗಣಿತಾಘಘನ ನಿವಾರಣ ಅರಿನಿಕರ ಸಂಹಾರಣ 1 ಸುಗುಣ ದುರ್ಗುಣಗಳ ಸಮೂಹಕೆ ಸುಲಭವಾಗಿಹುದೀ ಕಥಾ ಸುಜನ ಮೇಲುಪಂಕ್ತಿಯೆನಿಸುತಿಹುದು 2 ತಾಮಸರ ನಿರ್ನಾಮ ವೈದಿಸಿ ತಾಮನವಲಿದ ಸುಜನಕೆ ಸ್ವಾಮಿ ಶ್ರೀಗುರುರಾಮ ವಿಠಲನ ಪ್ರೇಮ ಸಂಪಾದಿಸುವುದಕೆ 3
--------------
ಗುರುರಾಮವಿಠಲ
ಹೇಳುವೆನು ಕೇಳಿ ಕರ್ಣಾಮೃತವ ಆಲೋಚನೆ ಸಲ್ಲ ತಿಳಿದ ಜ್ಞಾನರಿಗೆ ಪ ಲಕ್ಷಣ ಛಂದಸ್ಸು ಅಡಿಪ್ರಾಸ ಆದಿ ಅಂತಿ ಲಕ್ಷಕ್ಕೊಂದಾದರು ಮೊದಲೇ ಇಲ್ಲಾ ಅಕ್ಷಿ ಇಲ್ಲದವನು ಕೋಲು ಸಂಪಾದಿಸುವ ಅಕ್ಷಿ ಉಂಟಾದವಗೆ ಅದರಿಂದ ಫಲವೇನು 1 ಜ್ಞಾನ ಕರ್ಮರ ಲಂಬನ ಮಾಡಿ ತಿಳಿದಂಥ ಮಾನವನು ನಾನಲ್ಲ ಎಂದೆಂದಿಗೂ ಜ್ಞಾನಿಗಳ ಮನೆಯ ತೊಂಡರ ಪಾದರಕ್ಷೆಯಾ ಪಾಣಿಯಲ್ಲಿ ಪಿಡಿದವನ ನಖಧೂಳಿ ದಯದಿಂದ 2 ರಾಗತಾಳ ಭೇದ ಜತೆ ಜಾಣತನದಿಂದ ವಾಗರ ನಿಮಿತ್ಯ ಪೇಳಲಿಲ್ಲಾ ಹ್ಯಾಗಾದರೇನು ನಾರಾಯಣಚ್ಯುತನೆಂದು ಕೂಗಿ ಕಾಲವ ಕಳದೆ ಜನುಮ ಸಾಧನಕೆ 3 ಬೆಲ್ಲ ಕರದಲಿ ಪಿಡಿದು ಆವನಾದರೇನು ಎಲ್ಲಿ ತಂದರೆ ಅದು ಸೀ ಎಲ್ಲವೇ ಬಲ್ಲನವ ನರಿಯನಿವನೆಂದು ಆಡದಿರಿ ಪುಲ್ಲನಾಭನ ಸ್ಮರಣೆ ಒಂದು ಮುಕ್ತಾರ್ಥ 4 ಹರಿದೈವವೆಂದು ತಾ ಉತ್ತರೋತ್ತರ ತಿಳಿದು ಗುರುಮಧ್ವಮತದಲ್ಲಿ ಲೋಲಾಡಲು ಸಿರಿಯ ಅರಸ ವಿಜಯವಿಠ್ಠಲ ಬಂದು ವೊಲಿವನು ಗುರು ಪುರಂದರನ ದಯೆ ಎನ್ನ ಮೇಲಿರಲಾಗಿ5
--------------
ವಿಜಯದಾಸ
ಬರಿದೆ ಬಯಸದಿರಿಹಲೋಕಸುಖವೆಂಬ ಬರಗಿನ ಪಾಯಸವ |ಶರಿಧಿಶಯನನ ಬೇಡೊ ಪರಲೋಕಸುಖವೆಂಬಸೇವಗೆ ಪಾಯಸವ ಪ.ಮುಂದರಿಯದೆ ಮಾಳ್ಪ ಮೂಢನೃಪನ ಸೇವೆ ಮುಗ್ಗುರಾಗಿಯ ಹಿಟ್ಟು |ಮಂದಮತಿಯೆ ನೀನನ್ಯರಲಿ ಬಯಸುವ ನೀಚಮಾರ್ಗವ ಬಿಟ್ಟು ||ಕಂದರ್ಪಜನಕನ ಕಿಂಕರನೆಂಬುವ ಕಲಸೋಗರ ಕಟ್ಟು |ಸಂದೇಹಿಸದೆಪರಾತ್ಪರವಸ್ತು ಮುಕುಂದನಂಘ್ರಿಯ ತಟ್ಟು1ಅಗ್ಗದಾಸೆಗೆ ಸಂಗ್ರಹಿಸದಿರಘವೆಂಬ ಅಡಿಗಂಟು ದವಸವನು |ಬಗ್ಗನುಳಿದು ಸಂಪಾದಿಸು ಪರವೆಂಬ ಪುಣ್ಯದ ದವಸವನು ||ಯೋಗ್ಯರನರಿಯದೆ ಏತಕೆ ಬೇಡುವೆ ಸಾಕಾರ ಕೇಶವನು |ಕುಗ್ಗಗೊಡದೆ ಸಂಸಾರವೆಂತೆಂಬುವ ಕೋಟಲೆ ತಪ್ಪಿಸುವನು 2ಸಕ್ಕರಿ ಚಿಲಿಪಾಲು ಘ್ರತ ರಾಜಾನ್ನಕೆ ಸವಿಯೀವಹರಿಕಥೆಯ - ಬಿಟ್ಟು |ಅಕ್ಕರೆಯಿಂದಪೇಕ್ಷಿಸುವರೆ ನೀ ಅಲ್ಪರ ಸಂಗತಿಯ ||ಸೊಕ್ಕೊಳಿತಲ್ಲೆಲೊ ಮದಡು ಜೀವಾತ್ಮನೆ ಸ್ವಾಮಿಕಾರ್ಯಸ್ಥಿತಿಯ |ಗಕ್ಕನಂತು ಸೇರು ಪುರಂದರವಿಠಲನ ಚರಣಕಮಲದ್ವಿತಯ 3
--------------
ಪುರಂದರದಾಸರು