ಒಟ್ಟು 28 ಕಡೆಗಳಲ್ಲಿ , 13 ದಾಸರು , 26 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಶ್ರೀರೂಪವ ಛಂದಾದಿಂದಲಿ ನೋಡುವೆನು ಆನಂದ ಪಡುವೆನು ಪ. ಬಿಳಿಯ ಕುಪ್ಪುಸವಾ ತೊಟ್ಟಳು ನೋಟವ ನೋಡುವಳು 1 ಪಾದಾಕೊಪ್ಪುವ ಋಳಿ ಪೈಜಣಿ ಕಾಲುಂಗರದಂದಾ ಸಾಲಿನೊಳಗೆ ಅಘಾದ ಪರಿಪೂರ್ಣ 2 ಗಳದಿ ಕಠಾಣೆಯಕಟ್ಟಿ ಅದರ ಮೇಲ್ ಗೆಜ್ಜೆಯ ಟೀಕಿ ಪುಥಲಿಸರ ಚಂದ್ರಹಾರಗಳು ವೈಯಾರದಿ ಬರುವೋಳೂ 3 ಮುದ್ದು ಮುಖಕ್ಕೆ ತಕ್ಕ ಮುಖುರೆ ಬುಲಾಕು ದ್ರಾಕ್ಷಝೂಲರ ಬುಗುಡಿಯ ಬೆಳಕು ಆನಂದ ಸುರಿಯೋಳು ಇವಳು ಮನಕ 4 ಚವರಿ ಚಂದ್ರಾ ಜಡಿ ಭಂಗಾರದ ರಾಗುಟಿ ಬೈತಲ ಮುತ್ತನಿಟ್ಟ ಹೇಳ ಭಂಗಾರ ಗೊಂಡೆವ ಕಟ್ಟಿ ಇವಳ್ಯಾರು ಧಿಟ್ಟಿ 5 ಮಂದರ ಮಲ್ಲಗಿ ಸುಗಂಧಿಯು ತ್ಯಾದಿಗಿ ನೂತನದ ಪಾರಿಜಾತವನ್ನು ಇಂದು ತಾಂಬೂಲ ಮೆಲುವುತ ಮುಗುಳು ನೆಗಿಯು ನಗುತ 6 ತರುಣಿಯೆನ್ನದಿರು ಹರಿಯಾ ರೂಪಾವ ವ್ಹಾ ನೋಡು ಛಂದಾಮನ ಕಾನಂದಾ 7 ನೀನು ಶ್ರೀರಂಗನಾಯಕನೆ ಕಾಳಿಂಗಶಯನನೆ ನರಶಿಂಗನೋ 8 ಯೇಷ್ಟುನೋಡಿದರು ಈ ಧಿಟ್ಟ ಮೂರುತಿಯ ದೃಷ್ಟಿ ತಾಕುವ ದಯ್ಯ ಕಾಳಿಯ ಮರ್ಧನ ಕೃಷ್ಣರಾಯಾ 9
--------------
ಕಳಸದ ಸುಂದರಮ್ಮ
ಉಯ್ಯಾಲೆ ಉತ್ಸವಗೀತೆ ಜೊ ಜೊ ಜೊ ಜೊ ಶ್ರೀರಂಗನಾಥ ಜೊ ಜೊ ರಂಗನಾಯಕಿರಮಣನೆ ಭೂಮಿಕಾಂತ ಪ. ಮಂಟಪವನು ಶೃಂಗರಿಸಿದರಂದು ಎಂಟುದಿಕ್ಕಿಗೆ ಪುಷ್ಪಗಳಲಂಕರಿಸಿ ವೈ ಕುಂಠವಾಸನ ಉಯ್ಯಾಲೆಮಂಟಪವನ್ನು ಭಂಟರು ಬಂದು ಶೃಂಗಾರ ಮಾಡಿದರು 1 ಆಶ್ವೀಜ ಮಾಸದ ಶುಕ್ಲಪಕ್ಷದಲ್ಲಿ ಆ ತುಲಾ ಮಾಸದ ಆರುದಿವಸದಲ್ಲಿ ವಾರಿಜಮುಖಿಯರ ಒಡಗೊಂಡು ರಂಗ ವೈ ಯ್ಯಾರದಿಂದಲೆ ಬಂದನು ಮಂಟಪಕೆ 2 ಮತ್ತೆ ಮರುದಿನದೊಳಗಚ್ಚುತನಂತ ಕುತ್ತನಿಅಂಗಿ ಕುಲಾವಿ ಧರಿಸಿ ರತ್ನದ ಪಾನುಪಟ್ಟಿಯು ಅರಳೆಲೆ ಕಟ್ಟಿ ಭಕ್ತವತ್ಸಲನಾಡಿದನುಯ್ಯಾಲೆ 3 ಮೂರುದಿವಸದಲಿ ಮುರವೈರಿ ತಾನು ಭಾರಿ ವಜ್ರದ ಮಕರಕಂಠಿಯಾ ಧರಿಸಿ ನೀರಜನೇತ್ರನು ನಿಗಮಗೋಚರನು ವೈ ಯ್ಯಾರದಿಂದಲಿ ಆಡಿದನುಯ್ಯಾಲೆ 4 ನಾಲ್ಕು ದಿವಸದಲಿ ನಂದನಕಂದ ನವ ರತ್ನದ ಮಕರಕಂಠಿಯಧರಿಸಿ ಧರಿಸಿ ನಾಗಶಯನನಾಡಿದನುಯ್ಯಾಲೆ 5 ಐದು ದಿವಸದಲಿ ಅಕ್ರೂರವರದಗೆ ಕರಿ ದಾದ ಕುಲಾವಿ ಕಲ್ಕಿಯ ತುರಾಯಿ ಗಂಡಭೇರುಂಡಪಕ್ಷಿಯ ಪದಕವನಿಟ್ಟು ಪುಂಡರಿಕಾಕ್ಪನಾಡಿದನುಯ್ಯಾಲೆ 6 ಆರು ದಿವಸದಲಿ ಅಂಗಜನಯ್ಯಗೆ ಕೂರೆ ಕುಲಾವಿ ವೈಯಾರದಿಂಧರಿಸಿ ಹಾರ ಮಾಣಿಕ ರತ್ನ ಸರಗಳಳವಡಿಸಿ ನೀರಜನೇತ್ರನಾಡಿದನುಯ್ಯಾಲೆ 7 ಸಪ್ತದಿವಸದಲಿ ರತ್ನ ಮೌಳಿಯ ಧರಿಸಿ ಹಸ್ತದಿ ರತ್ನಹಾರ ಗಂಧವಿರಿಸಿ ಅರ್ತಿಯಿಂದಲೆ ತನ್ನ ಮಿತ್ರರು ಸಹಿತಲೆ ಬತ್ತವಳಿಸಿ ಬಂದ ಭಕ್ತವತ್ಸಲನು 8 ಓರೆಗೊಂಡೆಯ ವೈಯಾರದಿಂ ಧರಿಸಿ ನಾರಿಯರೆಡಬಲದಲಿ ಕುಳ್ಳಿರಿಸಿ ವಾರಿಜನೇತ್ರನು ನಡುವೆ ಕುಳ್ಳಿರಲು ವಾರಾಂಗನೆಯರೆಲ್ಲ ಪಾಡುತಿರಲು 9 ಅಷ್ಟಮ ದಿವಸದಿ ಅರ್ತಿಯಿಂದಲೆ ಕೃಷ್ಣಮೂರುತಿಗೆ ರಾಜಮುಡಿಯನು ಧರಿಸಿ ಹಿಂದಿನ ತೋಳಿಗೆ ಬಂದಿ ತಾಯಿತನಿಟ್ಟು ಇಂದಿರೆ ರಮಣನಾಡಿದನುಯ್ಯಾಲೆ 10 ಎಡಬಲದಲಿ ಭಕ್ತರು ನಿಂತಿರಲು ಪಿಡಿದು ಚಾಮರ ವ್ಯಜನವ ಬೀಸುತಿರಲು ಬೆಡಗಿನಿಮ್ಮ[ಡಕೆ]ಲೆ ಕರ್ಪೂರದ ಗುಳಿಗೆಯ ಎ ನ್ನೊಡೆಯಗೆ ಭಕ್ತರು ಪಿಡಿದು ನಿಂದಿರಲು 11 ದಾಸರಿಸಂದವು ಧಗಧಗನುರಿಯೆ ಸಹ ಸ್ರ ಸೂರ್ಯನಂತೆ ಪದಕಗಳೊಳೆಯೆ ಲೇಸಾದ ರತ್ನದ ಪಾದುಕೆಯನು ಧರಿಸಿ ವಾಸುದೇವನು ಆಡಿದನುಯ್ಯಾಲೆ 12 ಇಂದಿರೆ ರಮಣ ಒಂಭತ್ತು ದಿನದೊಳು ಚಂದ್ರ ಪುಷ್ಕರಣೀಲಿ ತೀರ್ಥವನ್ನಿತ್ತು ಬಂದು ಮಜ್ಜನವನ್ನು ಮಾಡಿ ವೆಂಕಟರಂಗ ಇಂದಿರೆಸಹಿತಲೆ ನಿಂದ ಹರುಷದಲಿ 13
--------------
ಯದುಗಿರಿಯಮ್ಮ
ಎಷ್ಟು ಭಾಗ್ಯ ಎಷ್ಟು ಭಾಗ್ಯಕೃಷ್ಣನ ಮುಖವ ದಿಟ್ಟಿಸಿ ನೋಡಿ ಸುಖಿಸುವ ಸಭೆಯ ಜನರು ಪ. ಕಡಗ ಸರಪಳಿಯು ದಿವ್ಯ ಬೆಡಗಿನಾಭರಣಮುಕುಟ ಕಡಿಗಂಟೆ ಮುತ್ತುಗಳ ಜಡವುತಕಡಿಗಂಟೆ ಮುತ್ತುಗಳ ಜಡವುತಲಿ ರಂಗನಾಯಕನ ಎಡಬಲದಿ ಕುಳಿತ ಅರಸಿಯರು ಸಖಿಯೆ 1 ಕೆತ್ತಿಗೆ ಕುಸುರಾದ ಉತ್ತಮ ಆಭರಣಗಳುಮುತ್ತಿನ ಮಾಲೆಗಳು ಅಲಗುತಮುತ್ತಿನ ಮಾಲೆಗಳು ಅಲಗುತ ರಂಗಯ್ಯನ ಹತ್ತಿರ ಕುಳಿತ ದೊರೆಗಳು ಸಖಿಯೆ2 ಕುಂಡಲ ಮಂಡಿತ ಪಂಡಿತರೆಲ್ಲರುಭೂಮಂಡಲ ಪತಿಯ ಸ್ತುತಿಸುತ ಭೂಮಂಡಲ ಪತಿಯ ಸ್ತುತಿಸುತ ಸಭೆಯಲಿತಂಡ ತಂಡದಿ ಕುಳಿತಾರೆ ಸಖಿಯೆ 3 ಋಗ್ವೇದಾದಿಗಳೆಲ್ಲರು ಶಬ್ದವಾದದಿಂದಲಿರುಕ್ಮಿಣಿ ಪತಿಯ ಸ್ತುತಿಸುತರುಕ್ಮಿಣಿ ಪತಿಯನೆ ಸ್ತುತಿಸುತ ಸಭೆಯಲಿಹಿಗ್ಗಿ ಹರುಷದಲಿ ಕುಳಿತಾರೆ ಸಖಿಯೆ 4 ಮಿಂಚು ಮಡಿಯುಟ್ಟು ಪಂಚ ಮುದ್ರೆಯನೆ ಧರಿಸಿ ಚಂಚಲಾಕ್ಷನ ಸಭೆಯೊಳು ಚಂಚಲಾಕ್ಷನ ಸಭೆಯೊಳು ಜೋಯಿಸರುಪಂಚಾಂಗ ಹೇಳುತ ಕುಳಿತಾರೆ ಸಖಿಯೆ 5 ತಾಳ ಮದ್ದಳೆ ದಿವ್ಯ ಮೇಲೆ ತಂಬೂರಿಯವರು ಮೇಲು ಸ್ವರದಿಂದ ಸಭೆಯೊಳುಮೇಲು ಸ್ವರದಿಂದ ನುಡಿಸುತ ಕುಳಿತಾರೆ ಕಾಳಿ ಮರ್ದನನ ಸಭೆಯೊಳು ಸಖಿಯೆ 6 ಚಲುವ ರಾಮೇಶನ ಆದರದಿ ಸ್ತುತಿಸುತಲೆವೇದಗೋಚರನ ಸಭೆಯೊಳು ವೇದಗೋಚರನ ಸಭೆಯೊಳಗೆ ಹರುಷದಿಯಾದವರೆಲ್ಲ ಕುಳಿತಾರೆ ಸಖಿಯೆ 7
--------------
ಗಲಗಲಿಅವ್ವನವರು
ಕಂಡೆನಯ್ಯ ಚನ್ನಕೇಶವರಾಯನ ವೇಲಾಪುರದರಸನ ಸುಕೃತ ಫಲದಿಂದ ಪ ಹೇಯ ವಿಷಯದಿ ರಂಗನಾಕನ ಮರೆದ ಪಶುವಾನು ಹೇಯನಲ್ಲದೆ ನರಕದಲಿ ಬೀಳ್ವವನು1 ಕಂಡೆ ಶಂಖ ಚಕ್ರ ಪದುಮಧರನ ಕಿರೀಟ ಕುಂಡಲಧರನ ಪೀತಾಂಬರಧರನ 2 ಸುರಸಿಂಧು ಜನನ ಕಾರಣ ಚರಣಕಮಲ ವಿಕಾಸ ಧರನ ಕರುಣಾಪವರಧರನ ರಂಗನಾಯಕನ 3
--------------
ಬೇಲೂರು ವೈಕುಂಠದಾಸರು
ಕೋಲು ಉತ್ಸವಗೀತೆ ಕೋಲುವ ನೋಡುವ ಬನ್ನಿ ಶ್ರೀರಂಗನಾಯಕಿಯ ಕೋಲುವ ನೋಡುವ ಬನ್ನಿರೆಲ್ಲ ಪ ಚಪ್ಪರವನು ಶÀೃಂಗರಿಸಿ ಪಟ್ಟುಪೀತಾಂಬರದ ಮೇಲೆ ಕಟ್ಟುಗಳಿಂದ ವಿಸ್ತರಿಸಿ ಕದಳಿಯಕೊನೆ ಕಬ್ಬು ತೆಂಗಿನ ಫಲಗಳ ವಿಧವಿಧವಾಗಿ ಶೃಂಗಾರ ಮಾಡಿದರು 1 ಭಾದ್ರಪದ ಕನ್ಯಾಮಾಸದಲ್ಲಿ ಶುದ್ಧಪಾಡ್ಯದಲ್ಲಿ ಭದ್ರೆ ಶ್ರೀರಂಗನಾಯಕಿಯು ಬಂದು ಮಜ್ಜನವನು ಮಾಡಬೇಕೆನುತಲೆ ಮೂದ್ರ್ವಾರಮಧ್ಯದಲಿ ತಾ ನಿಂದಳು 2 ತಂದು ಹರವಿದರು ಬತ್ತವ ವಿಸ್ತಾರವಾಗಿ ತಂದಿಟ್ಟು ಕರ್ಪೂರಬಟ್ಟಲುಗಳು ತುಂಬಿ ಕಲ್ಪೋಕ್ತ ದಿಂದಲೆ ಪೂಜೆಯ ಮಾಡಿದರು 3 ಎಂಭತ್ತೊಂಬತ್ತು ಬಟ್ಟಲಲ್ಲಿ ಇರುವ ಉದಕವನು ರಂಭೆಗಭಿಷೇಕವ ಮಾಡೆ ಗಂಧವ ಅಂಬೆ ಶಿರದೊಳು ಧರಿಸಿ ಪೂಮಾಲೆಯ [ಸಂಭ್ರಮದಿ]ಧರಿಸಿ ನಿಂದಳು ದೇವಿ 4 ಸುಖನಿಧಿ ಪದ್ಮಾನಿಧಿಗೆ ಹಣ್ಣಿನ ಹರಿವಾಣವ ಶಂಕೆ ಇಲ್ಲದೆ ಭಕ್ತರು ಪಿಡಿದು [ನಿಂತಿರುವ] ಶಂಖನಾದವು ತಾಳಮೇಳ ವಾದ್ಯಗಳಿಂದ ಪಂಕಜಮುಖಿಗಭಿಷೇಕವ ಮಾಡಿದರು 5 ಪುಷ್ಪದ ಮಂಟಪದಲ್ಲಿ ಪುರುಷೋತ್ತಮನ ಒಪ್ಪವಾದ ಅಶ್ವವ ತಂದಿರಿಸಿದರು ಆನಂದದಿ ಕಲ್ಪೋಕ್ತದಿಂದಲೆ ಪೂಜೆ ನೈವೇದ್ಯವ ಮಾಡಿ ಒಪ್ಪುವ ಕಂಕಣವನು ಕಟ್ಟಿದರಾಗ 6 ರತ್ನದ ಕಿರೀಟವಿಟ್ಟು ಲಲಾಟದಲ್ಲಿ ಮತ್ತೆ ತಿದ್ದಿದ ಕಸ್ತೂರಿಬಟ್ಟು ರತ್ನದ ಪದಕವು ಇಟ್ಟು ಕೊರಳೊಳು ಇಂದಿರೆ ವಂದಾಳು 7 ಮಧ್ಯದ ಕೊಟ್ಟಿಗೆಯಲ್ಲಿ ವಿಪ್ರರು ಕೈಕಟ್ಟಿ ನಿಂದು ಸೇವೆಯ ಮಾಡುತಿರಲು ಅರ್ತಿ ಯಿಂದಲೆ ಧೂಪದೀಪ ನೈವೇದ್ಯದಿ ಲಕ್ಷ್ಮೀ ದೇವಿಗೆ ಪೂಜೆಯ ಮಾಡಿದರು 8 ಭೇರಿ ದುಂದುಭಿ ವಾದ್ಯಗಳಿಂದ ತಾಳಮೇಳವು [ನಾರಿಯರ] ರ ಸಾಲುಗಳಿಂದ ಬಾಣ ಬಿರುಸು ಮತಾಪು ಅಗರುಬತ್ತಿ [ಗಳ ನಡುವೆ] ನಾರಾಯಣನರಾಣಿ ಕೋಲುವಿನಲ್ಲಿ 9 ಛತ್ರಿಚಾಮರ ಸೂರೆಪಾನ ಪಿಡಿಯೆ ಮದ ಹಸ್ತಿಗಳು ಮಾಡುವ ಸಲಾಮು ಸುತ್ತಿ ದೀವಟಿಗೆಯು ತುತ್ತೂರಿ ನಾದವು ಮತ್ತಧಿಕಾರಿಗಳು ಮಂಟಪದಲಿ 10 ಆರುದಿವಸದಲ್ಲೊರೆಗೊಂಡು ಪಾನುಪಟ್ಟಿಯು ಸೂರ್ಯಚಂದ್ರರು ಮುತ್ತಿನಬಟ್ಟು [ಆ]ರಾಗಟೆಹೆರಳು ಭಂಗಾರಗೊಂಡೆಗಳಿಟ್ಟು ವ ಯ್ಯಾರದಿಂದಲೆ ಬಂದಳು ಮಂಟಪಕೆ 11 ಸಪ್ತದಿನದಲಿ ಲಕ್ಷ್ಮೀದೇವಿಗೆ ಉತ್ರಾಜಿಮಾಲೆ ಹಸ್ತವಡಗೆ ಹರಡಿವಂಕಿ ದಕ್ಷಿಣ ಹಸ್ತದಿ ರತ್ನದಹಂಸವು ವಾಮ ಹಸ್ತವ ಮೊಣಕಾಲಿನೊಳಿಟ್ಟಳು 12 ಅಂದುಗೆ ಗೆಜ್ಜೆ ಮುಂಗೈಮುರಾರಿ ಉಂಗುರವು ಕುಂದಣದ ಪಾಗಡವಿಟ್ಟು ಹಿಂದಿನತೋಳಿಗೆ ಬಂದಿ ತಾಯಿತನಿಟ್ಟು ಕುಂದಣದ ಮಂಟಪದಲಿ ಕುಳಿತಳು 13 ಅಷ್ಟಮ ದಿವಸದಲ್ಲಂದು ಸೃಷ್ಟಿಗಿರೀಶ್ವರಿಗೆ ಕಟ್ಟಿದರು ಕಲ್ಕೀತುರಾಯಿ ದೃಷ್ಟಿಯಬಟ್ಟು ರತ್ನದ ಕುಂಡಲ [ಇಟ್ಟು] ಮತ್ತರಗಿಣಿಯನು ಮಾತಾಡಿಸುತ 14 ಮುಕ್ತಿದಾಯಕಿಗೆ ಮೂರು ಪಾವಡೆಯನುಡಿಸಿ ಮತ್ತೆ ವಡ್ಯಾಣವನಿ[ಡಲು] ರತ್ನದ ಹಸ್ತದಿ ಅಭಯವ ಕೊಡುತ [ನಿಂತಳು] ಮೊರ್ನೋಮಿಯ ಮಂಟಪದಲ್ಲಿ 15 ಮುಂದೊಂಭತ್ತು ದಿನದಲ್ಲಿ ರಂಭೆರಂಗನಾಯಕಿಯು ಮಿಂದು ಮಡಿಗಳ ತಾನುಟ್ಟು ಚಂದದಿ ನೈವೇದ್ಯವ ಭಕ್ತರಿಗಿತ್ತು ಬಂದು ಆಸ್ಥಾನದಿ ನಿಂದಳು ದೇವಿ 16
--------------
ಯದುಗಿರಿಯಮ್ಮ
ಜನನಿ ಜಾನಕೀ ನೀದಯಮಾಡೇ ಜಗದೀಶ್ವರ ನಾಯಕೀ ಪ ಫಣಿವಿಲಾಸನ ಪ್ರೀಯೆ ಭಜಕರ ಮನವಿಗಳ ನೀಕಾಯೆ ತಾಯಳೇ ಪ್ರಣವರೂಪಳೆ ಪ್ರಣಮಿಸುವೆ ತ್ರಿಣಯಸಖನಾರಾಣಿ ಸುಂದರೀ 1 ಸರ್ವತಂತ್ರಳೆ ಸಾಕ್ಷರೂಪಿಣಿ ದುರ್ಮದಾಂತಕಿ ದುಃಖದೂರಳೆ ನಿರ್ವಿಕಲೆ ಗೀರ್ವಾಣೆ ಶುಭಕರಿ ಉರ್ವಿಪಾಲಿಕಳಾದ ಸೀತೆಯ 2 ಆದಿಶಕ್ತಿ ಅನಂತರೂಪಳೆ ವೇದಮಾನಿನಿ ವಾದಿಭೀಕರಿ ಪಾದಸೇವ ಕನಿಷ್ಟಮೊದಗಿಸೆ ಭೂಧರಗೆ ನಿಜರಾಣಿ ವೈಭವೆ 3 ರಂಗನಾಯಕಿ ರಾಧೆ ಶ್ರೀ ಜಯ ಮಂಗಳಾಂಗಿ ಸಮೋದೆ ನಿಚ್ಚಲೆ ಜಂಗಮಾರ್ಚಿತ ಗುರುವು ತುಳಸೀ ಬೆಂಗಳೂರೊಳಗಿರುವ ಕಾರಣ4
--------------
ಚನ್ನಪಟ್ಟಣದ ಅಹೋಬಲದಾಸರು
ಜಯಶ್ರೀ ರಾಮನ ಜಾನಕಿ ಪ್ರೇಮನ ಅನುದಿನ ಪ ಶುಭ ಕಲ್ಯಾಣನ ಮಾಧವ ಮುಕುಂದನ 1 ವಿಶ್ವ ಪ್ರಕಾಶನಾ --ನಂದದಿ ಹೃದಯ ಗೋವಿಂದನ ಬಿಡದಿನ್ನು 2 ಕಂದರ್ಪ ಜನಕನ ಕರಿರಾಜ ವರದನ ಸಿಂಧುಶಯನ ಹರಿ ಶ್ರೀ ಜಗನ್ನಾಥನ 3 ಸೌಂದರ್ಯ ರೂಪನ ಪುರುಷೋತ್ತಮನ ಕುಂದರದನ ಹರಿ ಕೋಮಲಾಂಗನ 4 ಪರಮ ಪುರುಷನ ಪತಿತಪಾವನನ ನರಹರಿರೂಪನ ನಾರಾಯಣನ 5 ಗರುಡಾರೂಢನ ಕರುಣಾಸಾಗರನ ಉರದಲಿ ಲಕ್ಷ್ಮಿಯ ಧರಿಸಿ ಕೊಂಡಿಹನ 6 ಉರಗಾದ್ರಿ ವಾಸನ ವಸುದೇವಸುತನಾ ಭವಪಾಪ ಸಂಹಾರನ 7 ಶರಣರ ಕಾಯುವನ ಶ್ರೀನಿವಾಸನ ಉರಗಶಯನನ ಹರಿವಾಸುದೇವನಾ 8 ಮಂಗಳಮೂರುತಿ ಮಹಾನುಭಾವನ ಗಂಗೆಯ ಪಡೆದನ ಘನ ಗಂಭೀರನ9 ಶೃಂಗಾರ ಭೂಷಣನ ಸುಗುಣ ಪ್ರತಾಪನ ಅಂಗನೆಯರೆಡ ಬಲದಲಿರುವನ 10 ರಂಗನಾಯಕನ ರಾಜಾಧಿರಾಜನ ಮಂಗಾರಮಣನ ಮಧುಸೂದನನಾ 11 ರಂಗವುಳ್ಳ ಪೀತಾಂಬರ ಧರನಾ ಕಂಬು ಕಂಧರನಾ 12
--------------
ಹೆನ್ನೆರಂಗದಾಸರು
ಜ್ಯೇಷ್ಠಾಭಿಷೇಕ ಗೀತೆ ನೋಡಿದೆ ಜ್ಯೇಷ್ಠಾಭಿಷೇಕದುತ್ಸವವ ಸೃಷ್ಟಿಯೊಳಾಶ್ಚರ್ಯವಾ ಪ. [ಒಪ್ಪುವ] ಮಿಥುನಮಾಸದ ಶುಕ್ಲಪಕ್ಷ ಚತುರ್ದಶಿಯಲ್ಲಿ ವಿಪ್ರರು ಕೂಡಿ ಸಹ್ಯೋದ್ಭವೆಯನ್ನು ತರುವೆವೆಂದೆನುತಲೆ ವಿಪ್ರರು ಪೋದ ವಿಚಿತ್ರ[ವ] ನೋಡಿದೆ 1 ಅಂದು ಗಜೇಂದ್ರನ ತಂದು ಸಿಂಗಾರ ಮಾಡಿ ಕುಂದಣದ ಛತ್ರಿ ಚಾಮರ ಬೀಸುತ್ತ ವಿಪ್ರರು ಬರುವುದ 2 ವೇದಘೋಷಗಳಿಂದ ವಿಪ್ರರು ಕೊಡಗಳ ವಿ ನೋದದಿಂದಲೆ ಪೊತ್ತು ತಾ[ಳ] ತಮ್ಮಟೆ ಭೇರಿ ನಾನಾ ವಾದ್ಯಂಗಳ ಮುಂದೆ ರಜತದಕೊಡ ಬರುವ ವೈಭೋಗವ 3 ಕರಿ ಕೊಡವನ್ನು ಇಳಿಸಲು ಅಸಮಾನ [2ನಿ2]ರಿಗಳ ಬಿಚ್ಚಿ ಹೊಸಬಟ್ಟೆಗಳ ಹಾಸಿ ಕುಶಲದಿಂದಲೆ ಹೊಲೆದು ಪೊಸದಾಗಿ ಕಟ್ಟುವತಿಶಯ[ವ] 4 ಗರ್ಭಗೃಹವು ಗಾಯಿತ್ರಿ ಮಂಟಪವನ್ನು ಶುಭ್ರವಾಗಿಯೆ ತೊಳೆದು ಘಮಘಮಿಸುವ ದಿವ್ಯ ಪರಿಮಳ ವು ಬರುವಂಥ ಗಂಧÀವ ತಳಿದರು ಅಂದು ಆಲಯಕ್ಕೆಲ್ಲ 5 ಭಕ್ತರಿಗೆ ತೊಟ್ಟಕವಚವ ಕಳೆದು ಅಭಯ ಹಸ್ತ ಪಾದವ ನಿತ್ತು ಕಸ್ತೂರಿ ಕಮ್ಮೆಣ್ಣೆ ಒತ್ತಿ ಸಂಭ್ರಮದಿಂದ ಮಿತ್ರಸಹಿತ ನಿಂದ ಭಕ್ತವತ್ಸಲ ರಂಗ 6 ಛಂದದಿ ಇಕ್ಷುರಸವು ಚೂತ ಕದಲಿ ರಸಂಗಳು ದಧಿ ತಿಂತ್ರಿಣಿ ನಿಂಬೆರಸ ಕ್ಷೀರ ಘೃತಗಳಿಂದ ಆ ನಂದದಿ ಯೆರೆದರು ಇಂದಿರೆರಮಣಗೆ 7 ಕೇಸರಿ ಪುನಗಿನ ತೈಲವನೆ ತೆಗೆದು ವಾಸುಕಿಶಯನಗೆ ಲೇಪವನು ಮಾಡಿ ಸ ಹಸ್ರಕೊಡದ ಅಭಿಷೇಕವ ಮಾಡಿದರು 8 ಪಟ್ಟುಪೀತಾಂಬರವನುಟ್ಟು ಶ್ರೀರಂಗನು ಕಳೆದ ಕವಚ ತೊಟ್ಟು ಹತ್ತುಸಾವಿರಸೇರಿನ ಅಕ್ಕಿ ಅನ್ನವ ನಿಟ್ಟು ವಿಪ್ರರು ಸುರಿದರು ವಿಸ್ತಾರವಾಗಿಯೆ9 ದಧಿ ಕದಳಿ ಫಲದಿಂದ ನೈ [ವೃಂದಕ್ಕೆ] ಕರೆಕರೆದು ಕೊಡುವ ಪರಿಯ ನಾ 10 ರಂಗನಾಯಕಿ ಪಟ್ಟದರಸಿ [ವೆರಸಿ]ನರಹರಿ ಚಕ್ರಮೂರುತಿಗೆ ಆಗ ಕಲ್ಪೋಕ್ತದಿಂದಭಿಷೇಕವ ಮಾಡೆ ಕರ್ಪೂರ ತೈಲವ [ಲೇ ಸಾಗಿ]ಹಚ್ಚಿ ಮಲಗಿದ ವೆಂಕಟರಂಗ[ನ] 11
--------------
ಯದುಗಿರಿಯಮ್ಮ
ನಂದಿವಾಹನ ಸಖನೆ ಯೆಂದಿಗೆ ನೋಡುವೆ ನಿನ್ನಾ ಪ ಅರಿಗೆನಿನ್ನಾಚಾರ್ಯರಪ್ಪಣೆ ಹೊಂದಿಸುಖಿಸುತಿರುವೆನೊನಂದಿ ಅ.ಪ ರಂಗನಾಯಕನೆ ಬಾರೊ ರಾಕ್ಷಸಾಂತಕನಲ್ಲವೆ ಮಂಗಳಾಂಗ ಮಾತನಾಡೊ ಮಾಯಧಾರಿ ಕೇಶವ 1 ಸಾಟಿಯೇನಹುದೊ ಹರಿ ಸಾಧು ಶಿಖರನಲ್ಲವೆ ಆಟವಾಡುವ ಬಾಲನನ್ನು ಕರುಣದಿ ಕಾಯಲಿಲ್ಲವೆ2 ಕೋಲುಪ್ಯಾಟಿಯೊಳು ನಿನ್ನ ಕೋರಿ ಕೊಸರಿ ಕೂಗುವೆ ಮೂಲಗುರುವು ತುಲಶಿರಾಮಾ ದಾಸರ ಸೇವಕನಾಗುವೆ ಹರಿದಾಸರ ಸೇವಕನಾಗುವೇ 3
--------------
ಚನ್ನಪಟ್ಟಣದ ಅಹೋಬಲದಾಸರು
ನಾ ನಿಮ್ಮ ದಾಸನಯ್ಯಾ ಸೀತಾರಾಮಾ ಪ ನಾನು ನಿಮ್ಮಯದಾಸನಹುದೊ ನೀನು ಯೀಜಗದೀಶನಹುದೊ ಭಾನು ಕೋಟಿ ಪ್ರಕಾಶನೇ ಸಂಗೀತ ಗಾನ ವಿನೋದರಂಗಾ 1 ಮತಿಹೀನ ನಾನಾದೆನೈ ಶಾಶ್ವತನಾ ಸ ದ್ಗತಿಯ ನೋಡದೆ ಹೋದೆನೈ ಹಿತವ ಪಾಲಿಸಬೇಕೊ ವೋ ಶ್ರೀ ಪತಿತಪಾವನ ರಂಗನಾಯಕ ಸತಿ ಶಿರೋಮಣಿ ಪರಮಸೀತಾ ಪತಿಯೆ ನಾನಿನ್ನ ಸುತನು ಕಾಣೈ 2 ಕಂದಯ್ಯಗಾರುಗತಿ ನಿನ್ನಯ ಚಲ್ವ ಚಂದಗಾದವೆ ಶೃತೀ ಹಿಂದೆ ಮಾಡಿದ ಕೊಲೆಗಳಂ ಬೆನ್ನ ಮುಂದೆ ಬಾರದಂತದ ಹರಿಯೋ ಇಂದಿರೇಶ ಮುಕುಂದ ಪರಮಾ ನಂದ ತುಲಸೀರಾಮ ದೇಶಿಕಾ 3
--------------
ಚನ್ನಪಟ್ಟಣದ ಅಹೋಬಲದಾಸರು
ಪಾಲಯಾಂಶು ಭೂಮಿಸುತೇ ಪುಷ್ಪಮಾಲಾ ಶೋಭಿತೇ ಪನೀಲ ಮೇಘಶ್ಯಾಮ ಮಹಿತೇ ಶ್ರೀಪ್ರಬಂಧ ವಿಲಸಿತೇ ಅ.ಪವಿಷ್ಣುಚಿತ್ತ ಪರಿಪೋಷಿತೇ ಕೃಷ್ಣ ಸುಧಾಮೃತ [ವಿಸ್ತ]ರತೇಕೃಷ್ಣಭಕ್ತ ಸ್ತುತಿಭಾಜಿತೇ ವಿಷ್ಣುಲೋಕದಾತೆ ಮಾತೇ 1ಮಂಗಳಾಂಗಿ ಸುಗುಣಭರಿತೇಇಂಗಿತಾರ್ಥದಾತೆ ಪ್ರೀತೆರಂಗನಾಯಕೀ ಸಮೇತ ಮಾಂಗಿರೀಶ ದಯಿತೇ ಮಹಿತೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪುಷ್ಪಧರಿಸುವ ಉತ್ಸವಗೀತೆ ಪುಷ್ಪವನ್ನುಧರಿಸುವ ಉತ್ಸವ ನೋಡುವ ಬನ್ನಿ ಭಕ್ತವತ್ಸಲನರಾಣಿ ರಂಗನಾಯಕಿಗಿಂದು ಪ. ವೈಶಾಖಮಾಸದಲಿ ಕೃಷ್ಣಪಕ್ಷದಲಿ ಲಕ್ಷ್ಮೀಗೆ ಪುಷ್ಪವನ್ನು ಧರಿಸುವ ಅರ್ತಿಯ ನೋಡುವ ಬನ್ನಿ 1 ವಿಧವಿಧದ ಪುಷ್ಪವ ಮುಡಿಸಿ[ದರು] ಮದನನಮಾತೆಯ ಶಿರಸಿಗೆ 2 ಪಂಕಜನಾಭನರಾಣಿ ಪರಮಕಲ್ಯಾಣಿ ನೀಲವೇಣಿ ಪಂಕಜಪಾಣಿ ಕೀರವಾಣಿ ಸುಶೋಣೀ 3 ಸುರರು ಅಸುರರು ಕೂಡಿ ಶರಧಿಮಥನವ ಮಾಡೆ ಭರದಿಂದ ಉದಿಸಿಬಂದ ವರಲಕ್ಷ್ಮೀದೇವಿಗಿಂದು 4 ಜಯವಿಜಯರಿಗಾಗಿ ಜನಿಸಿ ತಾ ಭೂಮಿಯಲಿ [ಗೆದ್ದ] ಇಂದು 5 ಸೃಷ್ಟಿಭಾರವನಿಳುಹಲೆಂದು ಕೃಷ್ಣಮೂರುತಿ ಜನಿಸಿ [ಒಲಿದ] ಭೀಷ್ಮಕನುದರದಿ ಬಂದ ರುಕ್ಮಿಣೀದೇವಿಗೆ ಇಂದು6 ಮಲ್ಲೆ ಮಲ್ಲಿಗೆ ವಕುಳ ಮಂದಾರ ಪಾರಿಜಾತ[ವ] ಫುಲ್ಲನಾಭನರಾಣಿಗೆ ಲೋಲಾಕ್ಷಿಯರು ಮುಡಿಸಿದರು 7 ತಾಳೆ ಚಂಪಕ ಕಮಲಮಾಲೆ ಸುರಗಿ ಜಾಜಿಯ ನೀಲವರ್ಣನರಾಣಿಗೆ ಲೋಲಾಕ್ಷಿಯರು ಮುಡಿಸಿದರು 8 ಮರುಗ ದವನ ಪಚ್ಚೆತೆನೆಯು ಸುಗಂಧರಾಜವ ಪರಮ ಸುರರು ತಂದು ಮುಡಿಸುವರು 9 ವಸಂತೋತ್ಸವಕೆಂದು ವಸುಧೀಶನರಸಿ ತಾನು ಕುಶಲದಿಂದಲೆ ಬಂ[ದಳಾವ]ಸಂತಮಂಟಪಕಿಂದು 10 ರತ್ನದ ಕೆಂಪಿನ ಕಿರೀಟವಿಟ್ಟು ತಿದ್ದಿದ ಕಸ್ತೂರಿಬಟ್ಟು ಮುತ್ತುಸುತ್ತಿದ ಮೂಗಿನಬಟ್ಟು ಹರಿದ್ರಾವಸ್ತ್ರವನುಟ್ಟು 11 ಕರ್ಪೂರದ ಚೂರ್ಣದಿ ಮಿಂದು ಭಕ್ತರಿಟ್ಟ ನೈವೇದ್ಯವನುಂಡು [ತಾ]ಪೊರಟಳು ಮಿತ್ರೆಯರ ಕೋಲಾಟವ ನೋಡುತ್ತ ತನ್ನರಮನೆಗೆ 12 ಹುಟ್ಟಿದಮನೆ ಕ್ಷೀರಾಬ್ಧಿ ಹೊಕ್ಕಮನೆ ಶ್ರೀವೈಕುಂಠವ ಬಿಟ್ಟು ಭಕ್ತರ ಸಲಹುವೆನೆಂದು ಬಂದ ವೆಂಕಟರಂಗನರಸಿಗೆ 13
--------------
ಯದುಗಿರಿಯಮ್ಮ
ಬಂಟರಾಗಿ ಬಾಗಿಲ ಕಾಯೋರು ಹರಿಯವೈಕುಂಠದಿ ರಂಗನಾಯಕನರಮನೆಯ ಪ. ಸುತ್ತ ವಿರಜಾನದಿ ಮತ್ತು ನಂದನ ವನಉತ್ತಮೋತ್ತಮ ವೈಕುಂಠಉತ್ತಮೋತ್ತಮ ವೈಕುಂಠದೊಳಗಿನ್ನುಮಿಂಚಿನಂತೆ ಹೊಳೆವೊ ಮುಕ್ತರು1 ಶ್ರೀದೇವಿ ತಾನು ಮುರಹರನ ಪುರದಾಗವಿರಜಾ ತಾನೆಂದು ಕರೆಸುತವಿರಜಾ ತಾನೆಂದು ಕರೆಸುತ ನಾನಾ ಪರಿಗಿಳಿ ಕೋಗಿಲಾಗಿ ಮೆರೆವೋಳು2 ಉತ್ತರ ದಿಕ್ಕಿನಲೆಥಳ ಥಳಿಸುವ ದ್ವಾರ ಮುತ್ತು ಮಾಣಿಕ್ಯ ಅಳವಟ್ಟಮುತ್ತು ಮಾಣಿಕ್ಯ ಅಳವಟ್ಟ ಹರಿಪುರರತ್ನದ ಝಲ್ಲೆ ಬಿಗಿದಾವೆÉ 3 ರಾಜಿ ಮಾಣಿಕ ಗೋಡೆ ಗಾಜಿನ ನೆಲಗಟ್ಟುಈ ಜೋಡು ದ್ರವ್ಯ ಎಲ್ಲಿಲ್ಲ ಈ ಜೋಡು ದ್ರವ್ಯ ಎಲ್ಲಿಲ್ಲ ಇದುನಮ್ಮ ಶ್ರೀದೇವಿಯರಸನ ಅರಮನೆ 4 ಕೇಶರ ಶ್ರೀಗಂಧ ಕಲವೆಲ್ಲ ಪರಿಮಳಬಿಸÀಜನೇತ್ರನರಮನೆಯಬಿಸಜನೇತ್ರೆಯರ ಮನೆಯಿಂದ ಕುಸುಮದ ವೃಷ್ಟಿಗರೆದಾವು5 ಉತ್ತರ ಪಾಲ್ಗಡಲೊಳು ಮುತ್ತು ಮಾಣಿಕರತ್ನಪಚ್ಚ ಕರ್ಪೂರ ಸುಳಿಗಾಳಿಪಚ್ಚ ಕರ್ಪೂರ ಸುಳಿಗಾಳಿ ಇದುನಮ್ಮ ಅಚ್ಯುತಾನಂತನರಮನೆಯ6 ಕೃಷ್ಣ ರಾಮೇಶನ ವಿಶಿಷ್ಠದ ವೈಕುಂಠಸೃಷ್ಟಿ ಮಾಡಿ ರಚಿಸಿದ ಸೃಷ್ಟಿ ಮಾಡಿ ರಚಿಸಿದ ನೋಡಲು ದೃಷ್ಟಿ ಸಾಲದು ಜನರಿಗೆ7
--------------
ಗಲಗಲಿಅವ್ವನವರು
ಬಾರೈ ನಂದನ ಕಂದನೆ ನೀರಜನೇತ್ರ ಪ ನೀಲಮಣಿ ಮಂಟಪದ ಮೇಲೆ ಮಾಣಿಕ್ಯಕಲಶ ಜಾಲು ಜಲ್ಲರಿ ರತ್ನ ನೀಲಪೀಠಕೆ ನೀ 1 ಮುತ್ತಿನಾಕ್ಷತೆಗಳ ನೆತ್ತಿಯಲಿಡುವೋಲು ಸುತ್ತಭೂಸುರರೆಲ್ಲರಸುತ್ತ ಬಾರೆನ್ನುವರು 2 ಶೃಂಗಾರಶೀಲನೆ ಸಂಗೀತಲೋಲನೆ ರಂಗನಾಯಕಿಸಹಿತ ತುಂಗಪೀಠಕೆ ನೀ 3 ಅಂಗನೆಯರು ಕೂಡಿ ಮಂಗಳಗಾನ ಪಾಡಿ ರಂಗ ಬಾರೆನ್ನುವರು ಮಾಂಗಿರಿನಿಲಯ4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂಗಳ ಜಯ ಜಯ ಮಂಗಳ ತುಳಸಿಗೆ ಮಂಗಳ ಜಯ ಜಯ ರಂಗನಾಯಕಗೆ ಪ ವಾರಿಧಿ ಮಥÀನದಿ ವಾರಿಜನಾಭನ ವಾರಿಜನೇತ್ರನ ವಾರಿಗಳಿಂದ ತೋರಿದ ತುಳಸಿಯು ಸೇರಿದಳೆಲ್ಲ ಶ- ರೀರವ ಪಾವನ ಮಾಡಬೇಕೆನುತ 1 ತುಳಸಿಯ ನಾಮವ ಬೆಳೆಸಿಯೆ ಲೋಕವ ಬಳಸಿಕೊಂಡಿರುವೆನು ಎನುತಲೆ ಬಂದು ಕಳಸಿದ ಮನುಜರ ಉಳಿಸಬೇಕೆನುತಲೆ ಕಳಸದ ತೆರನಂತೆ ಉದಿಸಿದಳು ತುಳಸಿ 2 ಸಾಲಿಗ್ರಾಮವು ಇಲ್ಲದಾತನ ಮನೆಯೊಳು ಕಾಲೂರಿ ನಿಲ್ಲಳು ಹರುಷದೊಳಿವಳು ಪಾಲಿಪ ಹರಿಶಿಲೆಯಿರುವಂಥ ಸ್ಥಳದೊಳು ಓಲಗವಾಗಿಯೆ ತೋರುತ್ತಲಿಹಳು3 ಎಲ್ಲಿಯು ತುಳಸಿಯು ಅಲ್ಲಿಯೆ ಶ್ರೀಹರಿ ವಲ್ಲಭೆ ಸಹವಾಗಿ ಇರುತಿಪ್ಪ ಬಿಡದೆ ಫುಲ್ಲನಾಭನು ಕೃಷ್ಣ ಆಡಿದ ಪರಿಯನು ಗೊಲ್ಲತಿಯರು ಕಂಡು ನಾಚಿ ಹಿಗ್ಗಿದರು 4 ಬಂದಳು ಭಕ್ತರ ಮಂದಿರದೆಡಗೆ ಗೋ- ವಿಂದನ ಕಂಡಿರೆ ಎಂದು ಕೇಳಿದಳು ವೃಂದಾವನದೊಳು ನಿಂದಳು ತುಳಸಿಯು ಚಂದವು ನಿಮ್ಮಯ ಭವನದೊಳೆನುತ 5 ಗೋವಿನ ತುಪ್ಪದಿ ದೀವಿಗೆಯಿರಿಸಿಯೆ ಭಾವ ಶುದ್ಧತ್ವದಿ ಬಲವಂದರವಳು ಕಾವಲು ಪೋಗಿಯೆ ಕರ್ಣದ ಒಳಗಿದ್ದು ಜೀವಿತ ಮುಕ್ತಿಯ ತೋರುವೆನೆನುತ 6 ಸರ್ವತೀರ್ಥಗಳನ್ನು ಮೂಲದಿ ಧರಿಸಿಯೆ ಸರ್ವ ದೇವರ್ಕಳ ಮಧ್ಯದೊಳಿರಿಸಿ ಸರ್ವ ವೇದಂಗಳ ಶಿರದೊಳು ಧರಿಸಿಯೆ ಸರ್ವವ ಕಾಲಗೆ ನಿರ್ವಹಿಸುತಿಹಳು 7 ಅಂಗಳದೊಳಗಿಹ ಮಂಗಳ ಮಹಿಮಗೆ ರಂಗುವಲ್ಲಿಯನಿಕ್ಕಿ ಶೃಂಗಾರವಾಗಿ ಸಾಂಗ್ಯದೊಳಿಹ ಒಂದು ಮಂಗಳ ಬರೆದರೆ ಬಂಗಾರ ಮನೆಯನ್ನು ತೋರುವಳಿವಳು 8 ಮೂಲದ ಮೃತ್ತಿಕೆ ಮೂಲ ಪಣೆಯೊಳಿಟ್ಟು ಕಾಲದಿ ಸ್ನಾನವ ಮಾಡಿದ ನರರು ಭಾಳವಾಗಿಹ ಅಘರಾಶಿಯನೆಲ್ಲವ ಚಾಳಿಸಿ ಕಳೆವರು ಕಾಲನ ಗೆಲಿದು 9 ತನ್ನ ಕಾಷ್ಟವ ತಂದು ಚಿನ್ನದಿ ಸುತ್ತಿಸಿ ಕರ್ಣದಿ ಧರಿಸಿದ ಮನುಜರಿಗೆಲ್ಲ ಉನ್ನತ ಪದವಿಯ ತೋರುವೆನೆನುತಲೆ ಪನ್ನಗಶಯನಗೆ ಪ್ರೀತಿಯಾಗಿಹಳು 10 ಉತ್ತಮವಾಗಿಹ ಕಾರ್ತಿಕ ಮಾಸದಿ ಅರ್ತಿಯಿಂದಲೆ ನಲಿನಲಿಯುತ್ತ ದೇವಿಯ ಕರ್ತನ ಕೀರ್ತನೆ ರಚಿಸುವ ಮನದಿ 11 ಬ್ರಾಹ್ಮಿ ಮುಹೂರ್ತದಿ ಸ್ನಾನ ತರ್ಪಣವನ್ನು ನಿರ್ಮಲ ತೀರದಿ ತಿದ್ದಿಯೆ ಕೊಂಡು ಧರ್ಮಕ್ಕೆ ಯೋಗ್ಯಳ ಪೂಜೆಯ ಮಾಡಲು ಕರ್ಮ ಬಂಧಗಳೆಲ್ಲ ಕಡಿದುಕೊಳುವುದು 12 ಸಾಯಂಕಾಲದಿ ದೀವಿಗೆ ಹಚ್ಚಲು ಮಾಯಗಳೆಲ್ಲವು ಮರುಗಿ ಪೋಗವುವು ದಾಯವಾಗಿಯೆ ಸುರರಾಯನೊಳರ್ಥವ ಬೇವಿನವರು ಕಂಡು ಹೊರಸಾರುತಿಹರು 13 ಸರ್ವದಾನಗಳನ್ನು ಸರ್ವಪೂಜೆಗಳನ್ನು ಸರ್ವರು ಋಷಿ ಪಿತೃ ತರ್ಪಣಗಳನು ಸರ್ವಥಾ ತುಳಸಿಯ ತಪ್ಪಿಸಬೇಡೆಂದು ನಿರ್ವಾಹವಾಗಿಯೆ ಶ್ರುತಿಯು ಪೇಳಿದುದು 14 ಅಂಗದೊಳಗಿಹ ಮಂಗಳ ಮಹಿಮಗೆ ಸಾಂಗ್ಯದೊಳಿದನು ಪಠಿಸಿ ಪೇಳಿದರೆ ಗಂಗೆ ಗೋದಾವರಿ ತುಂಗಭದ್ರೆಯ ಮಿಂದು ರಂಗನ ಕ್ಷೇತ್ರವ ನೋಡಿದ ಫಲವು 15 ಅಂಗಳ ತುಳಸಿಯ ದಿನ ದಿನದಿ ತಾವೆದ್ದು ಹಿಂಗದೆ ನೋಳ್ಸ ಶ್ರೀರಂಗನ ಭಕ್ತರಿಗೆ ಬಂಗಾರಗಿರಿವಾಸ ವರಾಹತಿಮ್ಮಪ್ಪನ ಮಂಗಳಮೂರ್ತಿಯ ನೋಡಿದ ಫಲವು 16
--------------
ವರಹತಿಮ್ಮಪ್ಪ