ಒಟ್ಟು 904 ಕಡೆಗಳಲ್ಲಿ , 92 ದಾಸರು , 780 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂದ ಮಾಡುವುದೇನು ಕಂಡಿರೆ ಗೋ- ವಿಂದನ್ನ ದೂರ್ಹೇಳ ಬಂದಿರಾ ಪ ಏನುಮಾಡಿದನೀಗ ನಮರಂಗ ಜೋಡೇನೆ ನಿಮಗೆ ಕೋಮಲಾಂಗ ಭಂಗ 1 ಅತ್ತೆ ಮಾವಂದಿರಂಜಿಕೆಯೇನೆ ಪರ ನೀಯೆಂಬೋದನು ಕಾಣೆ ಕೃಷ್ಣ ಕೊಳಲನೂದೊ ವನಕಿನ್ನು ಕತ್ತಲೊಳಗೆ ಬರುವ ಬುದ್ಧಿ ತರವೇನೆ 2 ಪುರುಷ ಮಕ್ಕಳನ್ನೆಲ್ಲ ತೊರೆದಿರೆ ನಮ್ಮ ಸರಸಿಜಾಕ್ಷನ ಹಿಂದೆ ತಿರುಗುವಿರÉ ಸರಿಬಂದ ಕ್ರೀಡ್ಯವಗರುಹಿರೆ ಅರಗಳಿಗೆ ಎನ್ನರಮನ್ಯಾಗಿರಗೊಡಿರೆ 3 ಕದ್ದುಬೆಣ್ಣೆಯ ಮೆಲ್ಲುವನೇನೆ ಮುದ್ದು ಕೂಸಿಗೀಪರಿ ಅಂಬುವರೇನೆ ಪದ್ಮಪಾದದ ಪರಮಾತ್ಮನೆ ಬಂ- ದಿದ್ದಲ್ಲೆ ನಿಮಗೆ ದಯಮಾಡುವನೆ 4 ಮಾನವಿಲ್ಲದೆ ಮಾರನಯ್ಯನ ಕೂಡಿ ವೃಂದಾ- ವನದೊಳಾಡುವುದೇನೆ ದೂರಿಕೊಂಬುವುದೇನು ಕಾರಣ ಭೀ- ಮೇಶ ಕೃಷ್ಣನು ನಿಮ್ಮನ್ಸಲಹುವನೆ 5
--------------
ಹರಪನಹಳ್ಳಿಭೀಮವ್ವ
ಕನಸ ಕಂಡೆ ನಿನ್ನಿನಿರುಳೊಳು ಕೇಳುಕನಸಿನ ಸೊಗಸನು ತರಳೆಚಿನುಮಯಾತ್ಮಕ ಚಿದಾನಂದ ಅವಧೂತದಿನಕರ ಪ್ರಭಾತೀತ ಗುರುನಾಥ ಬಂದಿಹ ಪ ಕಾಶ ಕೌಪೀನವನುಟ್ಟು ಚೆಲ್ವಬಾಸುರ ಕುಂಡಲವಿಟ್ಟುಕೇಶದ ಜಡೆಗಳು ಥಳಥಳಿಸಲು ಸರ್ವಭೂಷಿತನಾಗಿ ತನ್ನೆದುರಿಗೆ ನಿಂತಿಹ 1 ನೆಟ್ಟನೆ ನಡುಮನೆಯೊಳು ತಾನುನೆಟ್ಟನೆ ಬಂದು ಕುಳಿತಿಹನುಶಿಷ್ಟ ಮೂರುತಿ ತನ್ನ ಕಾಯಬೇಕು ಎಂದುಮುಟ್ಟಿ ಪಾದವ ನಾನು ಶರಣು ಮಾಡಲಿದ್ದೆ2 ಸುಂದರ ಕಳೆಯುಳ್ಳ ಸ್ವಾಮಿತಾನು ಸಿಂಧು ಕೃಪಾಕರನಾಮಿ ಎಂದಡಿಗಡಿಗೆ ಸಾಷ್ಟಾಂಗವೆರಗಿನಿಂದು ಪೂಜಿಸಿ ಕಣ್ತುಂಬ ನೋಡಿನಲಿವ 3 ನಾನಾ ಪೂಜೆಯನೆಲ್ಲವ ಮಾಡಿ ಗುರುಧ್ಯಾನದಿನಾನೋಲಾಡಿ ಮಾನವನಾಗಿನಾನು ನಿಂದಿರಲೆನ್ನ ಕಿವಿಯೊಳುನಾನು ನೀಗಿತ್ತೆಂದು ಉಪದೇಶ ನೀಡುವ4 ಈಪರಿ ಕನಸನು ಕಂಡು ಎಲ್ಲತಾಪವು ಪರಿಹಾರಗೊಂಡುಭೂಪ ಚಿದಾನಂದ ಅವಧೂತ ತಾನಾದರೂಪಾಗಿ ಬೆಳಗಿರೆ ಬೆಳಗಿರೆ ಬೆಳ್ಳನೆ ಬೆಳಕಿತ್ತು5
--------------
ಚಿದಾನಂದ ಅವಧೂತರು
ಕುಂಡಲಿಶಯನನ ಕೋದಂಡಧರನಾ ಮಂಡಲಾಧಿಪ ತ್ರಿ------- ಬಲವಂತನ ಪ ಪುಂಡರೀಕ ವರದನ ಪುರಾಣ ಪುರುಷನ ಪಂಡರಪುರ ನಿಲಯ ಭಕ್ತರ ಚಲನ 1 ದಂಡಿ ದಾನವರನ ಛೇದನ ಮಾಡಿದನ -------ಕರುಣಿಸಿ ಕಾಯ್ದನ 2 ಪುಂಡರಾವಣನ ಶಿರಗಳ ತರಿದನ ಅಂಡಸೇರಿ ಶರಣಂದನ ಕಾಯ್ದನ 3 ಮಾನವ ದಯಮಾಡಿ ಕಾಯ್ದನ ಕವಿಜನ ರಕ್ಷಕ ಘನ ಶ್ರೀಕೃಷ್ಣನ 4 ಭುವಿನಾಯಕನ ಪೂರ್ಣ ಪ್ರಭಾಕರನ ರಾಜೀವ ನೇತ್ರನ 5 ಲವಕುಶ ಜನಕನ ರಘುಕುಲ ಶ್ರೇಷ್ಠನ -------------------- 6 ಭವಸುರ ವಂದ್ಯನ ಪರಮಾನಂದನ ಕಲೆಯುಕ್ತ ಶಿರಸೂರನ 7 -----ನಾಭನ ಪಾಂಡವ ಪಕ್ಷನ ಮುದನೂರ ವಾಸನ ಮುನಿಜನವಂದ್ಯನ 8 ಯದುಕುಲ ಭೂಷಣನ ------- ವೇದಾಂತ ವೇದ್ಯನ ವಿಶ್ವರೂಪನ 9 ಹೆನ್ನಪುರನಿಲವಾಸ 'ಹೆನ್ನೆವಿಠ್ಠಲನ’ ನಿನ್ನ ------ ಶ್ರೀತ ಜನಪೋಷಕನ 10
--------------
ಹೆನ್ನೆರಂಗದಾಸರು
ದೃಷ್ಟ ಅದೃಷ್ಟದ ಬಲವು ನೊಡಿ ವಿಸ್ತಾರ ಸೃಷ್ಟಿಯಲಿ ಮುಟ್ಟಿ ಮುದ್ರಿಸಿದ ವಾಕ್ಯಂಗಳು ಕೇಳಿ ಆತ್ಮನಿಷ್ಠ ಜನರು 1 ದೃಷ್ಟಿ ಪುರುಷನ ಸೈನ್ಯಗಳು ಕೇಳಿ ಚಿತ್ತದಲಿ ಮಾನವರು ಅಜ್ಞಾನವೆಂಬಾಶ ಗತಿಯು ಮಾಯಾಮೋಹಕವೆಂಬ ಸುತರು 2 ಬಂಟ ಜನರು ಪ್ರಪಂಚ ಸೈನ್ಯಾಧಿಪತಿ ಸುಖ ದು:ಖದಳ ಭಾರಗಳು3 ಚಂಚಲವಂಚಲಶ್ವಗಳು ಅಹಂ ಮಮತಾ ಗಜಗಳು ಅವಸ್ಥೆಗಳು ಕಾಲಾಳುಗಳು ಮನ್ನೆವಾರರು ಕರಣಗಳು4 ಮೆರೆಯುತಿಹರು ಪಂಚೇಂದ್ರಿಯಗಳು ಸೂಸುತಲಿಹ ಬೇಹಿನವರು ಮೊದಲಾದ ದಶವಾಯುಗಳು 5 ಸುತ್ತಲಿಹ ಪರಿವಾರಗಳು ಸಪ್ತವ್ಯಸನ ಭೂಷಣಂಗಳು ಪಂಚಾಗ್ನಿಗಳು ಪಂಜಿನವರು ಅಷ್ಟಮದವು ಕಾವಲಿಗಳು 6 ಮೂರು ಪರಿಯ ತ್ರಿಗುಣಗಳು ಸೈನ್ಯದ ಪಾರುಪತ್ಯದವರು ಜಾಗ್ರಸ್ವಪ್ನ ಸುಷುಪ್ತಿಗಳು ಛತ್ರ ಚಾಮರ ಭೂಷಣಗಳು 7 ಸಪ್ತಧಾತುದ ಸುಖಾಸನವು ಪಂಚಾತ್ಮಗಳು ನಿಶ್ಯಾನಿಗಳು ತಾಮಸವೆಂಬ ಭೇರಿಗಳು ಅಹಂಕಾರವು ಕಹಳೆಗಳು 8 ಪರಿ ಚಂದ ಚಂದದಲಿ ಇಳಿದಿಹ ಸೈನ್ಯ ಭಾರಗಳು 9 ಜನನ ಮರಣದ ಮಂಟಪವು ಕಟ್ಟಿಹರು ವಿಸ್ತಾರದಲಿ ಚಿಂತಿ ಮುಪ್ಪಳಿಯು ಭ್ರಾಂತಿಗಳಲಿ ಸ್ಥಿತಿ ಸ್ಥಳಲಿಹ ದ್ವಾರಗಳು 10 ದುರ್ಮೋಹ ಬಲದಲಿ ತನುವೆಂಬ ದುರ್ಗಬಲದಲಿ ಕದನ ಮಾಡುವರನುದಿನದಲಿ 11 ಇನ್ನು ಅದೃಷ್ಟದ ಬಲವು ಕೇಳಿ ಚೆನ್ನಾಗಿ ಮನದಲಿ ಸಮ್ಯಜ್ಞಾನೆಂಬಾಶಗತಿಯ ಜ್ಞಾನ ವೈರಾಗ್ಯಸುತರು 12 ಬಂಟ ಜನರು ಬೋಧ ಸೈನ್ಯಾಧಿಪತಿಯ ದೃಢ ನಿಶ್ಚಯ ದಳ ಭಾರಗಳು 13 ನಿರ್ಮಳ ನಿಶ್ಚಳಶ್ವಗಳು ವಿವೇಕವೆಂಬ ಗಜಗಳು ಮಗುಟ ವರ್ಧನರು 14 ಶೂರತನದ ಪ್ರರಾಕ್ರಮರು ಸ್ಮರಣೆ ಚಿಂತನೆ ಧ್ಯಾನಗಳು ಸೂಸುತಲಿಹ ಬೇಹಿನವರು ಯೋಚನೆ ಅವಲೋಕನೆಗಳು 15 ಸುತ್ತಲಿಹ ಪರಿವಾರಗಳು ರತಿಪ್ರೇಮ ಸದ್ಭಾವನೆಗಳು ಲಯ ಲಕ್ಷ್ಯಗಳು ಪಂಜಿನವರು ಮೌನ್ಯ ಮೋನವೆ ಕಾವಲಿಗಳು 16 ನಾದ ಬಿಂದು ಕಳೆಯಗಳು ಸೈನ್ಯದ ಪಾರುಪತ್ಯವರು ಅನಿಮಿಷ ಛತ್ರ ಚಾಮರವು ಏಕಾಕಾರವೆ ನಿಶ್ಯಾನಿಗಳು 17 ಅನುಭವ ಸುಖಾಸನಗಳು ತೂರ್ಯಾವಸ್ಥೆಯ ಭೂಷಣಗಳು ಆನಂದಮಯವೆ ಭೇರಿಗಳು ನಿಶ್ಚಿಂತವೆ ಕಹಳೆಗಳು 18 ಸುಜ್ಞಾನದ ಮೊದಲಾದ ಅಂಗಡಿಯು ಇಳಿದಿಹ ಸಾಲವರಿಯಲಿ ಚಂದ ಚಂದ ಶೃಂಗಾರದಲಿ ಇಳಿದಿಹ ಸೈನ್ಯ ಭಾರಗಳು 19 ಸದ್ಗತಿ ಮುಕ್ತಿ ಮಂಟಪವು ಹೊಳೆಯುತಿಹದು ಸ್ಯೆನ್ಯದೊಳಲಿ ಶೋಭಿಸುವದು ಶೃಂಗಾರದಲಿ 20 ನಿರಾಶವೆಂಬ ಪ್ಯಾಟಿಯಲಿ ಇಳಿದಿಹದು ಸಂತೋಷದಲಿ ದೃಷ್ಟಿ ಪುರುಷನ ಅಟ್ಟಲೆಯ ಕೇಳಿ ನಡೆಯಿತು ಮಾರ್ಬಲವು 21 ಧಿಮಿ ಧಿಮಿಗುಡುತ ನಾದ ಮಾಡಿದರಾನಂದಲ ಗ್ಹೇಳೆನಿಸುತ್ತ ಕಹಳೆಗಳು ಭೋರ್ಗರೆಯುತಲಿ ನಡೆದರು 22 ನಡೆವರು ಅತಿಶಯ ಶೀಘ್ರದಲಿ ಬಾಣ ಬಾಣಗಳು ಮಾಡುತಲಿ ದಣಿದಣಿಸುತಲಿ ನಡೆದರು 23 ತುಂಬಿದ ಸೈನ್ಯ ಭಾರಗಳು ಉಬ್ಬು ಕೊಬ್ಬಿ ನಡೆದವು ನಗುತ ಗೆಲವಿಂದಶ್ವಗಳು ಏರಿ ಹಾರಿಸುತ ನಡೆದರು 24 ಮಗುಟ ವರ್ಧನರು ನಡೆದರು ಅತಿ ಹರುಷದಲಿ ಕಾಲಾಳುಗಳು ಮುಂದೆ ಮಾಡಿ ನಡೆಯಿತು ದಳ ಭಾರಗಳು 25 ಶೂರತನದ ಪರಾಕ್ರಮರು ಮುಂದಾಗಿ ಬ್ಯಾಗೆ ನಡೆದರು ಅಬ್ಬರಿಸುತಲಿ ಮಾರ್ಬಲವು ನಡೆಯಿತವರ ಸೈನ್ಯ ಮ್ಯಾಲೆ 26 ವಿವೇಕವೆಂಬ ಗಜಗಳು ವಾಲ್ಯಾಡುತಲಿ ನಡೆದರು ರಗಡಿಸುತ ಡೋಲಿಸುತಲಿ ನಡೆದರು ಪರಚಕ್ರ ಮ್ಯಾಲೆ 27 ನಡೆವ ಮಾರ್ಬಲದ ಧೂಳಿಗಳು ಮುಸುಕಿತು ಸುವಾಸನೆಗಳು ಗರ್ಜಿಸುವ ಧ್ವನಿಗೇಳಿ ಹೆದರಿತು ಶತ್ರು ಮಾರ್ಬಲವು 28 ಕಂಡು ದೃಷ್ಟರ ಸೈನ್ಯದವರು ಸಿದ್ದವಾದರು ಸಮಸ್ತದಲಿ ತಮ್ಮ ತಮ್ಮೊಳು ಹಾಕ್ಯಾಡುತಲಿ ನಡೆದುಬಂದರು ಸನ್ಮುಖಕೆ 29 ಚಿಂತಿಸುತಲಿ ಪರಾಕ್ರಮರು ಬಂದರು ವೀರ ಕಾಳಗಕೆ ಕಾಳಿ ಭೇರಿಗಳು ಬಾರಿಸುತ ಬಂದರು ಮಹಾಜನರು 30 ಕೂಗಿ ಚೀರುತ ಒದರುತಲಿ ಬಂದು ನಿಂದರು ಪರಾಕ್ರಮರು ಅಹಂ ಮಮತಾ ಗಜಗಳು ನಡೆದು ಬಂದವು ಎದುರಾಗ 31 ಕಾಲಾಳು ಸಹ ಕೂಡಿಕೊಂಡು ರಚಿಸಿ ಬಂದರಶ್ವಗಳು ಕೂಡಿತು ಉಭಯ ದಳವು 32 ಸುವಾಸನೆ ಧೂಳಿಯೊಳಗೆ ಅಡಗಿತು ದುರ್ವಾಸನೆಯು ಅಹಂ ಮಮತಾ ಗಜಗಳು ಕಂಡು ಓಡಿದವು ಹಿಂದಾಗಿ33 ಬೆನ್ನಟ್ಟಿ ವಿವೇಕ ಗಜವು ಹೊಡೆದು ಕೆಡವಿದವು ಧರೆಗೆ ಅವಸ್ಥೆಗಳು ಕಾಲಾಳುಗಳು ಜಗಳ ಮಾಡಿದವು ನಿಮಿಷವು 34 ವಿಚಾರ ಕಾಲಾಳು ಮುಂದೆ ಓಡಿದರು ದೆಸೆದೆಸೆಗೆ ಚಂಚಳವೆಂಚಳಶ್ವಗಳು ಏರಿ ಬಂದರು ರಾವುತರು 35 ಯುದ್ದಮಾಡಿದರರಗಳಿಗೆಯು ಶುದ್ಧಿ ಇಲ್ಲದೆ ಓಡಿದರು ನಿರ್ಮಳ ನಿಶ್ಚಳಶ್ವಗಳು ಏರಿ ಬೆನ್ನಟ್ಟಿ ನಡೆದರು 36 ಚಂಚಳ ವೆಂಚಳಶ್ವಗಳ್ಹರಿಗಡೆದರು ಕಾಲು ಬಲ ರಾಹುತರ ಸಹವಾಗಿ ಕಡೆದೊಟ್ಟಿದರು ಶಿರಸವನು 37 ವೀರರು ಕಾಮಕ್ರೋಧಗಳು ಬಂದರು ಅತಿಶಯಉಗ್ರದಲಿ ಶಮೆ ದಮೆ ವೀರಗಳೊಡನೆ ಕಾದಿ ಮಡಿದರು ಆ ಕ್ಷಣದಲಿ 38 ಬಂಟ ಜನರು ಬಂದರು ಸಿಟ್ಟು ಕೋಪದಲಿ ಭಾವ ಭಕ್ತಿಯ ಬಂಟರೊಡನೆ ಕಾದಿ ಕಾಲಾಳು ಮಡಿದರು 39 ಪ್ರಪಂಚ ಸೈನ್ಯಾಧಿಪತಿಯ ಕೈಸೆರೆಯಲಿ ಹಿಡಿದರು ಬೋಧ ಸೈನ್ಯಾಧಿಪತಿಯು ನಾದಘೋಷವು ಮಾಡಿಸಿದನು 40 ಉಲ್ಹಾಸವೆಂಬ ಸರವರಿಯು ಹಚ್ಚಿಸಿದರು ಸೈನ್ಯದೊಳಲ್ಲಿ ದಯ ಕರುಣ ಭಾಂಡಾರಗಳು ಒಡೆದು ಧರ್ಮ ಮಾಡಿದರು 41 ಪಂಚೇಂದ್ರಿಯಗಳ ಪರಾಕ್ರಮರ ಹಿಡಿದು ಕಟ್ಟಿದರು ಪಾಶದಲಿ ಸ್ಮರಣಿ ಚಿಂತನೆ ಪರಾಕ್ರಮರು ಉಬ್ಬಿದರು ಹರುಷದಲಿ 42 ದಶವಾಯುಗಳ ಬೇಹಿನವರ ಹಿಡಿದು ಬಂಧನವ ಮಾಡಿದರು ಅವಲೋಕನೆ ಬೇಹಿನವರ ಸದ್ಬ್ರಹ್ಮದಲಿ ಸುಖಿಸಿದರು 43 ಸಪ್ತವ್ಯಸನ ಪರಿವಾರಗಳು ರತಿಪ್ರೇಮರೊಡನೆ ಕೂಡಿದರು ಪಂಚಾಗ್ನಿಗಳು ಪಂಜಿನವರು ಪಂಚ ಪಾಲದಿ ಅಡಗಿದರು 44 ಲಯ ಲಕ್ಷಗಳು ಪಂಜಿನವರು ಸಂಜೀವದಂತೆ ಹೊಳೆವರು ಅಷ್ಟಮದವು ಕಾವಲಿಗಳು ಅಡಗಿದವು ಸ್ಥಳ ಸ್ಥಳಲಿ 45 ಮೌನ್ಯ ಮೋನವೆ ಕಾವಲೆಗಳು ತಾವೆ ತಾವಾಗಿ ದೋರಿದರು ತ್ರಿಗುಣರ ಪಾರುಪತ್ಯದವರು ಒಂದು ಸ್ಥಳದಲಿರಿಸಿದರು 46 ನಾದ ಬಿಂದು ಕಳೆಯಗಳು ಮುಟ್ಟಿ ಪಾರುಪತ್ಯ ಮಾಡುವರು ಶತ್ರುರಾಘನ ಭೂಷಣಗಳು ಸೆಳೆದುಕೊಂಡರು ಗಳಿಗೆಯೊಳು 47 ಅವಿದ್ಯ ಮೊದಲಾದಾಗದರಿಂದ ಚೋಳಿಯು ಮಾಡಿದರು ಜನನ ಮರಣದ ಮಂಪಟವು ಸುಟ್ಟು ಸಂಹಾರ ಮಾಡಿದರು 48 ಚಿಂತೆ ಭ್ರಾಂತಿಯ ದ್ವಾರಗಳು ಕಿತ್ತಿ ಬೀಸಾಟಿದರು ಆಶಾಪ್ಯಾಟಿಗೆ ಧಾಳಿನಿಕ್ಕಿ ಲೂಟಿಸಿದರು ನಿಮಿಷದಲಿ 49 ತನು ದುರ್ಗ ವಶಮಾಡಿಕೊಂಡು ಇಳಿಯಿತು ಸೈನ್ಯ ಸುಖದಲಿ ಸದ್ಗತಿ ಮುಕ್ತಿ ಮಂಟಪವು ಕೊಟ್ಟರು ಅಚಲದಲಿ 50 ಯೋಗ ಭೋಗದ ದ್ವಾರದಿಂದ ನಡೆದರು ಮಹಾ ಭಕ್ತಜನರು ಮನ್ನೆವಾರರು ಕರಣಗಳು ಅಭಯವ ಕೊಂಡು ನಡೆದರು 51 ಅಜ್ಞಾನವೆಂಬಾಶಾಗತಿಯು ಮುಕ್ತವಾದಳು ಸುಜ್ಞಾನz ಮಾಯವಾದರು ವೈರಾಗ್ಯದಲಿ52 ದೃಷ್ಟ ಪುರುಷನ ತಂದಿನ್ನು ಇಟ್ಟುಕೊಂಡರು ತಮ್ಮೊಳಲಿ ತನು ದುರ್ಗ ವಶಮಾಡಿಕೊಂಡು ಮುಂದೆನಡೆದರಾನಂದದಲಿ 53 ಅಧಾರ ಪುರ ಬೆನ್ನಮಾಡಿ ನಡೆದರು ಬ್ರಹ್ಮಾಂಡಪುರಕೆ ವಿಘ್ನಹರನ ಬಲಗೊಂಡು ಮ್ಯಾಲೆ ಮಣಿಪುರಕೆ ನಡೆದರು 54 ಅನಾಹತಪುರ ದಾಟಿ ಮುಂದೆ ನಡೆದರು ವಿಶುದ್ಧ ಪುರಕೆ ಸ್ಥಳ ಸ್ಥಳ ಹರುಷ ನೋಡುತಲಿ ನಡೆದರಗ್ನಿ ಚಕ್ರಪುರಕೆ 55 ಮ್ಯಾಲಿಹ ಬ್ರಹ್ಮಾಂಡ ಪುರವು ಹೊಳೆಯುತಿಹದು ಪರಿಪರಿಲಿ ಸಹಸ್ರದಳ ಕಮಲಗಲು ಥಳಥಳಿಸುವದದರೊಳು 56 ಘನ ಬೆಳಗಿನ ಪ್ರಭೆಯುಗಳು ಹೊಳಯುತಿಹುದು ಕಿರಣಗಳು ಹರಿ ಬ್ರಹ್ಮಾದಿಗಳು ವಂದಿಸುವ ಸ್ಥಳ ನೋಡಿ ಗುರು ಕರುಣದಲಿ 57 ಪಿಂಡ ಬ್ರಹ್ಮಾಂಡೈಕ್ಯಪುರದಿ ಒಳಗಿಹ ಹಂಸಾತ್ಮಗತಿಯು ಸಹಸ್ರ ರವಿಕೋಟಿ ತೇಜ ಭಾಸುವಾ ವಸ್ತುಗತಿಯು 58 ವಿಶ್ವ ವ್ಯಾಪಕನೆಂಬ ಸ್ಥಿತಿಯು ಮಹಿಮಾನಂದ ಸ್ಫೂರ್ತಿಯು 59 ದೃಷ್ಟಾದೃಷ್ಟಗತಿಯು ದೋರಿದ ಗುರು ಸದೃಷ್ಟದಲಿ ಗುರು ಕರುಣದ ಕಟಾಕ್ಷದಲಿ ಬೆರೆಯಿತು ಮನ ಹರುಷದಲಿ 60 ಕಂಡು ಮಹಿಪತಿಯ ಜೀವನವು ಧನ್ಯವಾಯಿತು ದೃಷ್ಟದಲಿ ಪರಮಾನಂದ ಸುಪಥದಲಿ ಜೀವನ ಮುಕ್ತ್ಯದರಲ್ಲಿ 61
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾಹಿ ಕೃಷ್ಣ ಮಹಿಪತಿ ಮಧುರೆಗೆ ಪೋಗೋದೇನೊ ಕಾರಣ ಯದುಕುಲನಾಥ ಪಾಹಿ ಕೃಷ್ಣ ಮಹಿಪತಿ ಪ ಮಧುವೈರಿ ತಾ ಬ್ಯಾಗ ಮಧುರಾಪಟ್ಟಣದಾರಿ ಹಿಡಿದಿರೆ1 ದಧಿ ಮಥನವ ಮಾಡಿ ಕದವ ತೆಗೆದು ಕಂಡರು ಬ್ಯಾಗ 2 ಮಿಂಚಿನಂತ್ಹೊಳೆವೊ ವಿರಿಂಚನಯ್ಯನ ರಥ ಚಂಚಲಾಕ್ಷಿಯರು ನೋಡುತಲಾಗ 3 ಬನ್ನಿರೆ ಬನ್ನಿರೇ ಪನ್ನಂಗಶಯನನ ಬೆನ್ನ್ಹತ್ತಿ ನಾವು ಹೋಗುವೊಣೀಗ 4 ಫುಲ್ಲನಾಭನೆ ಮತ್ತೆಲ್ಲಿಗೆ ಪಯಣವೊ ಎಲ್ಲ ವಾರ್ತೆಗಳ್ಹೇಳೊ ನಮಮುಂದೆ 5 ನಂದಗೋಪನ ಬುದ್ಧಿ ಮಂದವಾಯಿತೇನೊ ವೃಂದಾವನವ ಬಿಟ್ಟು ಕಳಿಸುವ 6 ಕೂಸೆಂದು ನಿನ್ನ ಮುದ್ದಿಸುವೊ ಮೋಹಗಳೆಲ್ಲ ಬ್ಯಾಸರಿಕ್ಯಾಯ್ತೇನೆಶೋದೆಗೆ 7 ಸಾಧುಗೋವ್ಗಳನೆಲ್ಲ ಕಾದುಕೊಂಡಿರುವೋದು ಶ್ರೀಧರ ನೀದಾರಿಗ್ಹೇಳಿದ್ಯೊ 8 ವತ್ಸಕಾಯ್ದುದು ಮನಕಿಚ್ಛಿಲ್ಲದಿರಲು ಶ್ರೀ- ವತ್ಸಧರನೆ ಸುಮ್ಮನಿರೊ ನೀನು 9 ನಮ್ಮನೆಯಲಿ ಪಾಲ್ ಬೆಣ್ಣೆ ಕದ್ದನೆಂದು ನಿಮ್ಮಮ್ಮನಲ್ಲಿ ದೂರಿದೆವೇನೊ 10 ಕ್ಷೀರಗಡಿಗೆ ಒಡೆದೋಡಿ ಪೋದನೆಂದು ದೂರಿಕೊಂಡವರಲ್ಲೋ ನಿನ್ನನು 11 ಊರೊಳಗೊಬ್ಬಳು ದೂರಿಕೊಂಡರೆ ನಾವು ಭಾರಿ ಶಿಕ್ಷೆಯ ಮಾಡಿ ಬಂದೆವೊ 12 ಎಂದಾದರೊಂ(ದು) ದಿನ ಅಂದ ಮಾತುಗಳೆಲ್ಲ ಇಂದೆ ತಪ್ಪಿ ್ಹಡಿಯದೆ ಕ್ಷಮಿಸಯ್ಯ 13 ಕದವ ತೆಗೆಯದ ಮುಂಚೆ ಸದನದ್ವಾರದಿ ಬಂದು ಯದುನಾಥ ಎದುರೆ ನಿಂತಿರುವ್ಯಲ್ಲೊ 14 ಕಂಗಳಿಂದಲಿ ನೋಡ್ಯಾಲಿಂಗನೆ ಮಾಡುತ ಸಂಗಸುಖದಿ ಬೆಳೆದಿದ್ದೇವೊ 15 ನಿನ್ನ ನೋಡದ ಕಂಗಳಿನ್ನ್ಯಾತಕಿರಲು ಕೇ(ಗೇ?) ರೆಣ್ಣೆಯ ತೀಡಿಕೊಂಬುವೋಣೇನೊ 16 ಮಾರನಾಟಕೆ ಮನಸೋತು ನಿನ್ನನೆ ನಾವು ಜಾರಪುರುಷನೆಂದು ತಿಳಿಯದೆ 17 ಇರುಳೇಯೆ ಮನೆಯಲ್ಲಿ ಕೊಳಲೂದೋ ಕಾಲಕ್ಕೆ ನಳಿನಾಕ್ಷ ನಾವ್ಹ್ಯಾಗೆ ಬಂದೆವೊ 18 ಕಾಲಿಗಿಡುವ ವಸ್ತು ಕರದಲಿಟ್ಟುಕೊಂಡು ವಾಲೆ ಮೂಗುತಿ ಹೆರಳಿಗೆ ಚುಚ್ಚಿ 19 ಹರಡಿ ಕಂಕಣ ಪಾದದ್ಹರಡಿನ ಮ್ಯಾಲಿಟ್ಟು ಮುಡಿವ ಮಲ್ಲಿಗೆ ಕಿವಿಯಲಿ ಸುತ್ತಿ 20 ಹಾರ ಪದಕವ ಟೊಂಕಕೆ ಕಟ್ಟಿ ನಾವು ಉಟ್ಟ ಸೀರೆ ಕುಪ್ಪುಸ ಪಾರವಿ(ಪರಿವೆಯಿ?)ಲ್ಲದೆ 21 ಗಂಡಮಕ್ಕಳಿಗುಣಬಡಿಸಿ ಮಂಡಿಯ ಮ್ಯಾಲೆ ಸಂಡಿಗ್ಹುಳಿಯನ್ಹಾಕಿ ಬಂದೆವೊ 22 ಎಲೆಯ ಮ್ಯಾಲ್ಹಾಕೋ ಪದಾರ್ಥವೆಚ್ಚರವಿಲ್ಲ ತಲೆಯ ಮ್ಯಾಲ್ಹಾಕಿ ಬಂದೆವು ನೋಡೊ 23 ಬೆಣ್ಣೆ ಚೆಟ್ಟಿಗೆಯ ಬೆಕ್ಕಿನ ಮುಂದೆ ಸರಿಸೇವೊ ಸಣ್ಣ ಕೂಸಿನ ನೆಲವಿನೊಳಿಟ್ಟು 24 ಅಳುವೊ ಮಕ್ಕಳನೆ ಆಕಳ ಕಣ್ಣಿಗೆ ಕಟ್ಟಿ ಕರು- ಗಳ ತೊಟ್ಟಿಲೊಳಗೆ ಇಟ್ಟು 25 ಬಂಗಾರದ್ಹಾರ ಪದಕನ್ಹಾಕಿ 26 ಅಚ್ಛದಿಂದೆತ್ತಿ ಮುದ್ದಿಡುತಿರೆ ನಮ ಗಲ್ಲ ಕಿ- ತ್ತಿ ಚಿವರಿಕೊಂಡ್ಹೋಯಿತು 27 ಬಂಗಾರ ಕಳಕೊಂಡು ಮಂಗನಂತಾದೆವೊ ಮಂಗಳಾಂಗನೆ ಇಷ್ಟು ಮರುಳಾಗಿ 28 ವ್ಯತ್ಯಾಸದಿಂದ್ವಸ್ತ್ರ ಇಟ್ಟು ಬಂದೆವೊ ನಾವು ಬಿಟ್ಟೊ ್ಹೀದನೆಂಬೊ ಸಿಟ್ಟಿಲ್ಲವೊ 29 ಅಡಅಡವಿಲಿ ನಿನ್ನ ಹುಡುಕುತ ತಿರುಗೇವೊ ಕಡಲಶಯನ ಕರುಣದಿ ಬಂದ್ಯೊ 30 ರಾಸಕ್ರೀಡೆ ಜಲಕ್ರೀಡೆನಾಡಿದ ವಾರ್ತೆ ರಾ(ರಹ?)ಸ್ಯ ಒಬ್ಬರಿಗೆ ನಾವ್ ತಿಳಿಸದೆ31 ಅತ್ತೆಮಾವಂದಿರೀ ವರ್ತಮಾನವ ಕೇಳಿ ನೆತ್ತಿಮ್ಯಾಲ್ಹೊಡದ್ಹೊರಗ್ಹಾಕೋರೊ 32 ಪತಿಗಳು ನಮ್ಮನ್ನು ಬಿಟ್ಟರೂ ಬಿಡಲೊ ಶ್ರೀ- ಪತಿ ನಿನ್ನ ಬಿಟ್ಟು ಪೋಗುವರಲ್ಲ 33 ಮನೆ ಧನ ಧಾನ್ಯ ಮಕ್ಕಳು ಪತಿಗಳು ಬ್ಯಾ- ಡ ನಮಗೊಂದು ಸ್ಥಾನ ತೋರಿಸೊ ನೀನು 34 ಕುಸುಮ ಮಲ್ಲಿಗೆ ಒಣಗಿದ ದಾರ ಮತ್ಯಾವ ಕೆಲಸಕ್ಕೆ ಬರುವುದೊ 35 ಎಲ್ಲಿ ಬಿಲ್ಲ ್ಹಬ್ಬ ಮತ್ತೆಲ್ಲಿ ಸೋದರಮಾವ ಎಲ್ಲಿಂದ ಕರೆಯ ಬಂದನು ಈತ 36 ಕ್ರೂರನೆನ್ನದಲೆ ಅಕ್ರೂರನೆಂಬುವೋ ಹೆ- ಸರ್ಯಾರಿಟ್ಟರ್ಹೇಳೊ ಈ ಪುರುಷಗೆ 37 ನಮ್ಮ ನಿಮ್ಮನು ಅಗಲಿಸುವೋನು ನಮ್ಮಂಥ ಹೆ- ಣ್ಣು ಮಕ್ಕುಳು ಇವಗಿಲ್ಲವೆ 38 ಇಳಿಯಿಳಿ ಇಳೆಯಲ್ಲೀಳಿಗೆಯ ಕೊಟ್ಟೇವೊ ನಮ್ಮ ಕೊ- ರಳ ಕೊಯ್ದು ಮುಂದಕ್ಹೋಗೋ ನೀ 39 ವಾಸುದೇವನೆ ನಿನ್ನ ರಥದ ಗಾಲಿಗೆ ನಾವು ಹಾಸಿಕ್ಯಾಗಿ ಅಡ್ಡಬಿದ್ದೆವೊ 40 ಮಧುರಾಪಟ್ಟಣದಲ್ಲಿ ಇದ್ದ ಸತಿಯರೆಲ್ಲ ಮದನಮೋಹನ ನಿನ್ನ ಬಿಡುವೋರೆ 41
--------------
ಹರಪನಹಳ್ಳಿಭೀಮವ್ವ
ಮುಕುತಿಗೆ ಹೊಣಿಯಿದಕೋ ಭಕುತಿ ಪ ಹರಿಭಕುತಿಯ ಗುರು ಮೂರ್ತಿಲಿ ತಂದು | ಬೆರೆವದು ತನುಮನವಚನದಲೀ 1 ಆಚಾರ್ಯಮಾಂವಿಧಿ ಎಂದುದ್ದವಗೇ | ಸೂಚಿಸಿ ಹೇಳಿದ ಯದುವರನೀಗ2 ಸರ್ವಂ ವಾಸುದೇವೆನುತಿರಲಿಕ್ಕೆ | ಗುರ್ವಿನೊಳಗ ಅನುಮಾನವು ಬೇಕ3 ಬಲ್ಲವ ಬಲ್ಲವನೀ ಮಾತಿನ ಖೂನಾ | ಎಲ್ಲರಿಗಿದು ಅಗಮ್ಯದ ಸ್ಥಾನಾ4 ತಂದೆ ಮಹೀಪತಿ ಪ್ರಭು ದಯದಿಂದಾ | ಕಂದಗೆಚ್ಚರಿಸಿದ ಸುಖಸ್ವಾನಂದ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾದವ ನಿನ್ನೆಲ್ಲ ವರ್ಮಕರ್ಮಂಗಳ ಸಾಧಿಸಿ ಜನರ ಮುಂದ್ಹೇಳಲ್ಯಾ ರಂಗ ಸಾಧಿಸಿ ಜನರ ಮುಂದ್ಹೇಳಲ್ಯಾ ಭೇದವಿಲ್ಲದೆ ಕರುಣವನಿಟ್ಟು ಮರೆ- ಯದೆ ನೀ ದಯ ಸುಮ್ಮನೆ ಮಾಡುವ್ಯಾ ಪ ಮಡುವಿನೊಳಗೆ ಪೊಕ್ಕು ಬಿಡುತ ನೀ ಕಣ್ಣ ದುಡುಕು ಮಾಡಿದ್ದೆಲ್ಲ ಹೇಳಲ್ಯಾ ರಂಗ ದುಡುಕು ಮಾಡಿದ್ದೆಲ್ಲ ಹೇಳಲ್ಯಾ ಮಡುಹಿದ ಸೋಮಕಾಸುರನೆಂಬ ಸುದ್ದಿಯ ಬಿಡದೆ ಜನರ ಮುಂದ್ಹೇಳಲ್ಯಾ 1 ಕಡÀಗೋಲನ್ಹೊತ್ತು ಮಂಡಿಯಂತೆ (?) ಕೈಕಾಲು ಮು- ದುಡಿಕೊಂಡದ್ದೆಲ್ಲ ಹೇಳಲ್ಯಾ ರಂಗ ಮು- ದುಡಿಕೊಂಡದ್ದೆಲ್ಲ ಹೇಳಲ್ಯಾ ಹಿಡಿದು ಸುಧೆಯ ವಂಚನಿಂದ ಸುರರಿಗೆ ನೀ- ಭಂಗ ನಾ ಹೇಳಲ್ಯಾ 2 ಊರುಮನೆಗಳಿಲ್ಲ ನೀ ಗಿರಿಗಂಹ್ವರ ಸೇರಿಕೊಂಡದ್ದೆಲ್ಲ ಹೇಳಲ್ಯಾ ರಂಗ ಸೇರಿಕೊಂಡದ್ದೆಲ್ಲ ಹೇಳಲ್ಯಾ ಕೋರೆ ಹಲ್ಲುಗಳಿಂದ ಬೇರನು ಸವಿದುಂಡ ದಾರಿದ್ರ್ಯವೆಲ್ಲ ನಾ ಹೇಳಲ್ಯಾ3 ಮುಖವ ನೋಡಲು ಮೃಗದಂತೆ ಬಾಯ್‍ತೆರೆದ ನಿನ್ವಿಪರೀತ ಕೋಪಂಗಳ್ಹೇಳಲ್ಯಾ ರಂಗ ನಿನ್ವಿಪರೀತ ಕೋಪಂಗಳ್ಹೇಳಲ್ಯಾ ನಖದಿಂದ ಹಿರಣ್ಯಕನ ಕರುಳ ನೀ ಬಗೆದಂಥ ಸಕಲ ವ್ಯಾಪಾರ ನಾ ಹೇಳಲ್ಯಾ 4 ಪಾದ ಭೂಮಿ ಮುದ್ದು ರೂಪಗಳಿಂದ ಬೇಡಿಕೊಂಡದ್ದೆಲ್ಲ ಹೇಳಲ್ಯಾ ರಂಗ ಬೇಡಿಕೊಂಡದ್ದೆಲ್ಲ ಹೇಳಲ್ಯಾ ಮೂರು ಲೋಕವು ಸಾಲದಂತೆ ನೀ ಬೆಳೆದ ಅನ್ಯಾಯ ಮಾಯಗಳ ನಾ ಹೇಳಲ್ಯಾ 5 ಜಮದಗ್ನಿಯಲ್ಹುಟ್ಟಿ ಜನಭಯಕಂಜದೆ ಜನನಿ ಹತವ ಮಾಡಿದ್ಹೇಳಲ್ಯಾ ರಂಗ ಜನನಿ ಹತವ ಮಾಡಿದ್ಹೇಳಲ್ಯಾ ಅನುಮಾನವಿಲ್ಲದೀತನು ನಿಮ್ಮ ಕುಲಕೆ ಛೇದಕನೆಂದು ಕ್ಷತ್ರೇರಿಗ್ಹೇಳಲ್ಯಾ 6 ದೊರೆತನಾಳುವ ತಂದೆ ಪುರವಬಿಟ್ಹೊರಗ್ಹಾಕೆ ವನವನತಿರುಗಿದ್ದು ಹೇಳಲ್ಯಾ ರಂಗ ವನವನತಿರುಗಿದ್ದು ಹೇಳಲ್ಯಾ ಸಿರಿಯನಗಲಿ ಹತ್ತು ಶಿರ(ನ)ನುಜೆಯ ಮೂಗು ಮುಂದಲೆಯ ಕೊಯ್ದ(ಯ್ಸಿದ?) ನೆಂದ್ಹೇಳಲ್ಯಾ 7 ಎಳೆದು ಗೋಪ್ಯಮ್ಮ ನಿನ್ನೊ ್ವರಳಿಗೆ ಕಟ್ಟಿದ್ದು ಕಳವು ಜನರ ಮುಂದ್ಹೇಳಲ್ಯಾ ರಂಗ ಕಳವು ಜನರ ಮುಂದ್ಹೇಳಲ್ಯಾ ಸೆಳೆದು ಗೋಪ್ಯೇರ ಸೀರೆಕಟ್ಟಿ (ಕಡಹಾ) ಲಕ್ಕೆ ಆ- ಕಳಕಾಯ್ದನೆಂದು ನಾ ಹೇಳಲ್ಯಾ 8 ಬಟ್ಟೆರಹಿತನಾಗಿ ಹೊಕ್ಕು ತ್ರಿಪುರದಲ್ಲಿ ಬತ್ತಲೆ ತಿರುಗಿದ್ದು ಹೇಳಲ್ಯಾ ರಂಗ ಬತ್ತಲೆ ತಿರುಗಿದ್ದು ಹೇಳಲ್ಯಾ ದುಷ್ಟ ಕಲಿಯ ಶಿರಕಡಿದು ಹಾಕುವ ನೀ ದುಷ್ಟ ಗುಣಗಳ ನಾ ಹೇಳಲ್ಯಾ 9 ಭಕ್ತ ಜನರು ಕಂಡು ಕಟ್ಟಿ ಹಾಕುವರೆಂ- ದಿಷ್ಟು ಅಂಜಿಕೆ ನಿನ್ನದ್ಹೇಳಲ್ಯಾ ರಂಗ ಇಷ್ಟು ಅಂಜಿಕೆ ನಿನ್ನದ್ಹೇಳಲ್ಯಾ ನಿತ್ಯ ಈ ಹೃದಯಮಂದಿರದಲ್ಲಿ ಭೀಮೇಶ- ಕೃಷ್ಣ ನೀನಡಗಿದ್ದು ಹೇಳಲ್ಯಾ 10
--------------
ಹರಪನಹಳ್ಳಿಭೀಮವ್ವ
ಶಿಶುವಿನ ಯಾತಕ ದೂರವಿರೆ| ನಿಶಿದಿನ ನೋಡಲು ಮಾತವರಿದವಾ| ಮರಳನೆ ಮಾಡುವರೆ ಪ ಅತಿ ಮೋಹದಿಂದಲಿ ಮೊಲೆಯನು| ಬಾಯೊಳಗಿಟ್ಟರೆ ಸೇವಿಸನು| ಮಿಲೆ ಯಿಲ್ಲದ ಪಾಲ್ಮೊಸರನು| ಕುಡಿಯಲು ತಕ್ಕವನೆ 1 ಪರಿಪರಿಯಿಂದಲಿ ಮುಂದಕೆ ಕರೆದರೆ|ಸರಕನೆ ಹೆಜ್ಜಿಡನು| ಹರಿ ನಿಮ್ಮುಡುಗೆಯ ಸೆಳೆದು ಕೊಳುತಲಿ| ಮರವನೆ ಏರುವನೆ 2 ಸುರಜನ ಪಾಲಕ ಮಹಿಪತಿ ನಂದನ|ಜೀವನ ಮೂರುತಿಯಾ| ಕುರುಪಿಡಬಹುದೆನೆ ಮಾನವನೆಂದು| ಲೀಲೆಯ ದೋರುತಿಹ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀನಿವಾಸ ಮಾ[ವಿಲಾಸ] ಮಾನವೇಶ ಈಶ ಶ್ರೀಶ ದೀನ ಪೋಷಕ ಕಲುಷ[ನಾಶ ಮಾಮನಸಂತೋಷ] ಪ ಗಾನಲೋಲ ಭಕ್ತಜಾಲ ದೀನರಿಗೆ ಕರುಣಾಲವಾಲ ಮಾ[ನ]ವರ್ಗೆ ವಿಲೋಲ ಸಂಕುಲ ದಾನವಾಬ್ಧಿ ಕುಲಾಲೀಲ 1 ಲಕ್ಷರೂಪನೆ ರಾಕ್ಷಸಾರಿ ಮೋಕ್ಷದಾತ [ನುತಪಾಲಕ] ಯಕ್ಷಪಾಧಿಪ ಸುತೆಯ ರಮಣ ಯಕ್ಷ ಕಿನ್ನರ ವಿನುತ ಚರಣ2 [ಲಕ್ಷ್ಯವಿರಲಿ ರಾಮದಾಸಾರ್ಚಿತ ಭಾಗವತ ಪ್ರೋಕ್ತ] ರಕ್ಷಿಸೈ ವರಪದ್ಮಚರಣ [ಮಾಂಗಿರಿ] ಭೂ ರಮೆಯ ರಮಣ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಲಲಾಮ | ಶ್ರೀನಿವಾಸ | ಪಾಲಯಾ ಶುಮಾಂ ಹರೇ ನೀಲಮೇಘ ಶ್ಯಾಮ ಸುಂದರ | ಬಾಲ ಭಾಸ್ಕರಾ | ಮುರಾರೆ ಪ ಭಕ್ತ ಜನಾನಂದದಾತ | ಅಮರಕ್ಷೋಣಿ ಸಂಸೇವಿತ ಶಕ್ತ ಸರ್ವಲೋಕ ಖ್ಯಾತ | ವ್ಯಕ್ತರತ್ನ ಶೋಭಿತ ಯುಕ್ತಿ ಶಕ್ತಿ ಸಂಭೂಷಿತ | ವ್ಯಕ್ತ ನಿಗಮ ಮಾನವ ಸಂಪೂಜಿತ | ಸೂಕ್ತ ರೂಪದ ಮಾಂಗಿರಿನಾಥ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿಯೆ ನಿನಗೆ ಮೊರೆಯನಿಡುವೇ ಪ. ದುರಿತ ಪರಿಹಾರ ನಿನ್ನ | ಸ್ಮರಣೆ ಎನಗೀಯೋ ಅ.ಪ. ಜ್ಞಾನ ಜ್ಞೇಯ ಜ್ಞಾತೃವೆಂಬಭಿಧಾನದಿಂದ ಕರೆಸುವಿಯೋನಾನು ನನ್ನದು ಎಂಬ ದುರಭಿ | ಮಾನವನ್ನೆ ಪರಿಹರಿಸೋ 1 ಮೂರ್ತಿ 2 ಆಳು ನಿನ್ನವನೆಂದು ತಿಳಿಯೋ | ಪಾಲಿಸೊಲಿಮೆ ನಿನ್ನ ಪದದಿಪಾಲ ಸಾಗರ ಶಯ್ಯ ಕೃ | ಪಾಲು ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
(1) ನಿಂದಾಸ್ತುತಿಗಳು ಏನುಂಟು ನಿನ್ನೊಳಗೆ ನಾ ಬೇಡಲು ಏನು ಕೊಡುವೆ ಎನಗೆ ಪ ಶ್ರೀನಿವಾಸನೇ ಬಲು ದೀನನೊಳವಲಕ್ಕಿ ಮಾನವ ನೋಡದೆಅ.ಪ ತಿರುಕನಾಗಿ ತಂದೆ ಧರೆಯ ಕಶ್ಯಪನೆಂಬ ತಿರುಕ ಹಾರುವನಿಗೆ ಗುರಿಮಾಡಿದೆ ಸಿರಿಯನು ರಜಕನ ಪರಿವಾರದಿ ಬಿಟ್ಟು ಗರಳ ಹಾಸಿನೊಳೊರಗಿದೆ ಕೃಷ್ಣ 1 ಧನಕನಕಂಗಳು ನಿನಗಿರೆ ಸತ್ರಾಜಿ ತನ ಮಣಿಯನು ನೀಗಣಿಸುವೆಯಾ ಅನುವಾದ ಮನೆಯಿರೆ ಮುನಿಮನವೇತಕೆ ಮನೆವಾರ್ತೆಯುಳ್ಳರೆ ವನವಾಸಬೇಕೆ 2 ಕಾಮಧೇನುವು ಕಲ್ಪನಾಮಕ ತರುವು ಚಿಂ ತಾಮಣಿಗಳನು ಸುತ್ರಾಮಗಿತ್ತು ಗೋಮಯರಸಗಳ ಕಾಮಿಸಿ ಕದ್ದು ನೀ ದಾಮೋದರನಾದೆ ತಾಮರಸಾಕ್ಷ 3 ಖ್ಯಾತಿ ನೋಡದೆ ರಣ ಭೀತಿಯೊಳೋಡಿದೆ ಜಾತಿ ನೋಡದೆ ಜಾಂಬವತಿಗೂಡಿದೆ ನೀತಿಯ ನೋಡದೆ ಕೋತಿಯೊಳಾಡಿದೆ ಮಾತು ನೋಡದೆ ಬರಿ ಮಾಯೆಯ ಪಿಡಿದೆ 4 ಗತಿಹೀನರಿಗೆ ವರ ಗತಿಯ ತೋರಿಪನಾಮ ಸ್ಮøತಿಯೊಂದಿತ್ತರೆ ಸಾಕೆನಗೆ ಅತಿಶಯವಿದು ಎನ್ನ ಮತಿಯೊಳು ನಿನ್ನಯ ರತಿಯನ್ನು ಪಾಲಿಸು ವರದವಿಠಲರಾಮ 5
--------------
ವೆಂಕಟವರದಾರ್ಯರು
* ಶಿಲೆಯಲ್ಲಿ ಮಮತೆಯೇ ಸಿದ್ಧ ಪುರುಷ ಇಳೆಮೂರು ವ್ಯಾಪಕಗೆ ಈ ಮುನಿಯ ಬಳಿಯಾ ಪ. ದಶರಥಾತ್ಮಜ ಸೇತು ಬಂಧನವ ಗೈಯಲೂ ಅಸಮ ಸಾಹಸದಿ ಗಿರಿಗಳನೆ ತಂದೇ ಹಸನಾದ ಶಿಲೆಯೊಂದರಲಿ ರೂಪ ಮೂಡುವಡೆ ವಸುಧಿ ಸುತೆಪತಿ ಬೇಡವೆನುತಿರ್ದನೇನೈ 1 ನಡುಗೆ ಹುಲಿ ಘರ್ಜನೆಗೆ ಪಡೆದವಳ ಕೈ ಜಾರೆ ವಡೆದು ಶತವಾಗಲಾ ಗಿರಿಯಲ್ಲಿ ಮಮತೇ ವಡಮೂಡದವಗೆ ಈ ವಡೆದ ಪ್ರತೀಕದಲಿ ಇಡುತ ಅಭಿಮಾನವನು ಕಡು ಪೂಜೆಗೊಂಬೇ 2 ಧರೆಯಲ್ಲಿ ಚರಿಸಿ ಸದ್ಭಕ್ತರ ಜ್ಞಾನವನು ಹರಿಸಿ ಸಧ್ಗ್ರಂಥ ಕನ್ನಡಿಯ ತೋರಿ ಗಿರಿ ಏರುವಾಗ ಬೇಕೆನಲು ಶಿಲೆ ಇರಲಿಲ್ಲೆ ಬಿರುಕಾದ ಕಲ್ಲಿನಲ್ಲಿ ನೆಲಸಿರುವದೇನೈ 3 ಶಿಲೆಯೆ ನೀನೆನ್ನಲು ಅಜ್ಞಾನಿ ನುಡಿಯಹುದು ಶಿಲೆಯಲ್ಲಿ ನೀನೆಲು ಮತ್ತೊಂದು ಶಿಗದೇ ಬಲು ಛಿದ್ರ ತಂತಿಯಲಿ ಬಿಗಿಸಿ ಪೂಜೆಯಗೊಂಬ ಬಲವಂತದಾ ಮಹಿಮೆ ತಿಳಿಯಲಳವಲ್ಲಾ 4 ತಾಪಸರ ಪೂಜೆ ಸತ್ವವ ತೋರ್ವ ವೈಭವವೋ ಆಪನ್ನರನೆ ಕಾಯ್ವ ಆನಂದವೋ ಶ್ರೀ ಪರಮಹಂಸ ಪ್ರದ್ಯುಮ್ನತೀರ್ಥರಿಗೊಲಿದೆ ಗೋಪಾಲಕೃಷ್ಣವಿಠ್ಠಲನ ನಿಜದಾಸ 5
--------------
ಅಂಬಾಬಾಯಿ
* ಸತ್ಯವಂತನೊ ನೀನು ಸರಸಿಜಾಕ್ಷ ಸಿರಿ ನಿತ್ಯಾವಿಯೋಗ ಪ. ಶ್ರೀನಿವಾಸನೆ ಕೃಷ್ಣ ಭಾನು ಪ್ರಕಾಶ ಹರಿ ಏನೆಂಬೆ ನಿನ್ನ ಪ್ರಭಾವವನ್ನು ನಾನಾ ವಿಧದಿಂದ ಭಕ್ತರ ಕಾಯ್ವ ನರಹರಿಯೆ ಮಾನವಂತರ ಕಾಯ್ವ ದಾನವಾಂತಕನೆ 1 ಕೃಷ್ಣಮೂರುತಿ ನಿನ್ನ ದರುಶನದ ಕಾರಣದಿ ಕ್ಲೇಶ ತಂದೊಡ್ಡಿ ಇಷ್ಟು ಪರಿಯಲಿ ಎನ್ನ ಮನವ ಶೋಧಿಸಿ ನೋಡಿ ಕಷ್ಟ ಕಳೆದೆಯೊ ಈಗ ಕರುಣಾಳು ದೇವ 2 ಗುರುಗಳಿಗೆ ಬಂದಂಥ ರೋಗವನೆ ಪರಿಹರಿಸಿ ಕರುಣಿಸಿದೆ ಮನಕೆ ಬಹು ಆನಂದವನ್ನು ಪರತರನೆ ಇದರಂತೆ ಭವರೋಗವನೆ ಹರಿಸಿ ನಿರುತ ನಿನ್ನಯ ಪಾದಸ್ಥಾನ ನೀಡೆನಗೆ 3 ಸುರಪನಿಗೆ ಬಂದಂಥ ಪರಿಪರಿಯ ಕಷ್ಟದಿಂ ಹರಿಯೆ ನಿನ್ನಾಜ್ಞೆಯಿಂದೆಲ್ಲರೂ ಕೂಡಿ ಶರಧಿ ಮಥಿಸುತಲಿರಲು ಕರುಣೆಯಿಂದಲಿ ಸುಧೆಯ ಕಲಶ ತಂದವನೆ4 ವಂಚನೆಯ ಪೆಣ್ಣಾಗಿ ವಂಚಿಸಿ ದೈತ್ಯರನು ಅಮೃತ ಸುರರಿಗುಣಿಸಿ ಪಂಚಬಾಣನ ಪಿತನೆ ಸುರರ ರಕ್ಷಕನಾದೆ ವಂಚಿಸದೆ ಎಮ್ಮಗಳ ನೀನೀಗ ಕಾಯೊ 5 ಅಮೃತಹಸ್ತನೆ ಕೃಷ್ಣ ಅಮೃತವಿತ್ತು ಕಾಯೊ ಅಮೃತರಲ್ಲವೆ ನಿನ್ನ ಪಟ್ಟಣದ ಜನರು ಅಮೃತ ಕಿರಣಾಂತರ್ಯಾಮಿಯೆ ಶಾಂತ ಧನ್ವಂತ್ರಿ ಅಮೃತರಾಗುವರೈಯ್ಯ ನಿನ್ನ ನಂಬಿದರೆ 6 ಸಚ್ಚಿದಾನಂದ ಸರ್ವೋತ್ತಮನೆ ಶ್ರೀ ಕೃಷ್ಣ ಬಿಚ್ಚಿ ಸಲಹಯ್ಯ ಎನ್ನಜ್ಞಾನ ಬಂಧ ಅಚ್ಚುತಾನಂತ ಶ್ರೀ ಗುರುಗಳಂತರ್ಯಾಮಿ ಅಚ್ಚವೈಷ್ಣಣವ ಪ್ರಿಯ ಗೋಪಾಲಕೃಷ್ಣವಿಠ್ಠಲ 7
--------------
ಅಂಬಾಬಾಯಿ
* ಹರಿಗುರು ಕರುಣದಿ ದೊರಕಿದುದೆನಗೀ ಪರಮ ಪಾವನ ತಂಬೂರಿ ಪ. ನರÀಹರಿ ಭಕ್ತರು ಒಲಿದೆನಗಿತ್ತರು ಸುಲಲಿತ ನಾದದ ತಂಬೂರಿ ಅ.ಪ. ತಂದೆ ಮುದ್ದುಮೋಹನರು ಸ್ವಪ್ನದಿ ತಂದು ತೋರಿದಂಥ ತಂಬೂರಿ ನಂದ ಕಂದನ ಗುಣ ಅಂದದಿ ಸ್ತುತಿಸೆ ಆ- ನಂದವ ತೋರುವ ತಂಬೂರಿ ಇಂದಿರೇಶನ ಭಕ್ತರಂದದಿ ಧರಿಸುವ ರೆಂದೆಂದಿಗು ಈ ತಂಬೂರಿ ನೊಂದು ಭವದೊಳು ತಪ್ತರಾದವರಿಗೆ ಬಂಧನ ಬಿಡಿಸುವ ತಂಬೂರಿ 1 ಅಂತರಭಕ್ತರು ಹರುಷದಿ ನುಡಿಸುವ ಕಂತುಪಿತಗೆ ಪ್ರೀತಿ ತಂಬೂರಿ ಸಂತತ ಮಾನಾಭಿಮಾನವ ತೊರೆದು ಏ- ಕಾಂತದಿ ಸುಖಿಸುವ ತಂಬೂರಿ ಶಾಂತದಿ ನಾರದಾದಿಗಳು ವೈಕುಂಠದಿ ನಿಂತು ನುಡಿಸುವಂಥ ತಂಬೂರಿ ಪಂಥದಿ ಹರಿಪಾದಂಗಳ ಭಜಿಸೆ ನಿ- ಶ್ಚಿಂತೆಯ ಮಾಳ್ಪಂಥ ತಂಬೂರಿ2 ಬಲು ಬಲು ಪರಿಯಲಿ ಹರಿದಾಸತ್ವಕೆ ಬರುವಂತೆ ಮಾಡಿದ ತಂಬೂರಿ ಛಲದಿಂದಲಿ ಶ್ರೀ ಹರಿ ತಾನಿಡ್ಹಿಸಿದ ಒಲುಮೆಯಿಂದಲಿ ಈ ತಂಬೂರಿ ನೆಲೆಯಾದೆನು ಹರಿದಾಸರ ಮಾರ್ಗದಿ ಕಲುಷವ ಕಳೆದಿತು ತಂಬೂರಿ ಸುಲಭದಿಂದ ಶ್ರೀ ಗುರುಗಳು ಕರುಣಿಸಿ ನೆಲೆಗೆ ನಿಲಿಸಿದಂಥ ತಂಬೂರಿ 3 ಶ್ರೀನಿವಾಸನು ತಾ ಕೊಡಿಸಿದನು ಏನೆಂಬೆನು ಈ ತಂಬೂರಿ ಮಾನಾಭಿಮಾನವ ತೊಲಗಿಸುವುದಕೆ ಕಾರಣವಾಗಿಹ ತಂಬೂರಿ ಶ್ರೀನಿಧಿ ಸೊಸೆ ಬಹು ಆನಂದದಲಿ ತಾ ನುಡಿಸುವಳೀ ತಂಬೂರಿ ಗಾನಲೋಲ ಕೃಷ್ಣ ತಾನೊಲಿವುದಕೆ ಕಾರಣ ಮಾಡಿಹ ತಂಬೂರಿ 4 ಬೆಟ್ಟದೊಡೆಯ ತಾನಿಷ್ಟು ಹಟವ ಮಾಡಿ ಕೊಟ್ಟೀ ಕೊಟ್ಟನು ತಂಬೂರಿ ಎಷ್ಟು ನಾಚಿಕೆಪಟ್ಟರು ಬಿಡದಲೆ ಕಷ್ಟ ಕಳೆಯಲಿತ್ತ ತಂಬೂರಿ ಭವ ಕಟ್ಟು ಇಂದೆನ್ನನು ಮುಟ್ಟಿಸಿತ್ಹರಿಪುರ ತಂಬೂರಿ ಎಷ್ಟು ಹೇಳಲಿ ಶ್ರೀನಿಧಿ ಗೋಪಾಲ ಕೃಷ್ಣವಿಠ್ಠಲನಿತ್ತ ತಂಬೂರಿ 5
--------------
ಅಂಬಾಬಾಯಿ