ಒಟ್ಟು 50 ಕಡೆಗಳಲ್ಲಿ , 32 ದಾಸರು , 49 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(41ನೇ ವರ್ಷದ ವರ್ಧಂತಿ) ಸತ್ಯ ಸಂಕಲ್ಪಾನುಸಾರದಿ ನಡೆಸುವುದುತ್ತಮ ಬಿರುದಾದರು ಭೃತ್ಯನ ಬಿಟ್ಟನೆಂಬಪಕೀರ್ತಿ ಬರದಂತೆ ಚಿತ್ತದಲ್ಲಿರಲಾದರು ಪ. ಕಳೆದಿತು ಐದೆಂಟು ಮೇಲೊಂದು ವತ್ಸರ ಬೆಳೆದಿತು ಬಲು ಮತ್ಸರ ನೆಲನ ಮೇಲಡಿಯಿಡಲಿಲ್ಲ ಶಕ್ತಿಯು ಇಂಥ ಛಲದಿ ತೋರುವಿ ತಾತ್ಸಾರ ಬಳುಕಿ ಬಾಡಿದ ದೇಹವುಳುಹಲುತ ಸೇವಾ ಫಲಕೆ ಕಾರಣವೆಂಬೆನು ನಳಿನನಾಭನೆ ನಿನ್ನ ಮನವೆಂತಿರುವುದೆಂದು ತಿಳಿಯದೆ ಬಳಲುವೆನು 1 ವಯಿನು ತಪ್ಪಿದ ಬಳಿ- ಕ್ಯಾತರಗುಣವಪ್ಪುದು ಭೂತಪಂಚಕ ಸನ್ನಿಪಾತ ಸೂಚಿಸುವಂತೆ ಕಾತರತೆಯು ತಪ್ಪದು ಈ ತೆರದಲಿ ದೇಹ ರೀತಿಯಾಗಿರುವುದ ನೀ ತಿಳಿದಿರಲೆನ್ನಯ ಮಾತ ಕೇಳದೆ ಲಕ್ಷ್ಮೀನಾಥ ತಾತ್ಸಾರವಿಂತು ನೀತಿಯಾಗದು ಚಿನ್ಮಯ 2 ಜನನ ಮರಣ ಜೋಡಾಗಿರುವುದೆಂಬ ಸಿದ್ಧ ನಿನಗಿದು ಸುಲಭಸಾಧ್ಯ ಮನೆವಾರ್ತೆ ಮಡದಿ ಮಕ್ಕಳು ಮುಂತಾದುದಕೆಲ್ಲ ವನಜಾಕ್ಷ ನೀನೆ ಬಾಧ್ಯ ಕನಸಿಲಾದರು ನಿನ್ನ ನೆನವ ತಪ್ಪಿಸದಿರು ವಿನಯ ವೆಂಕಟರಾಯನೆ ನಿನಗಿಲ್ಲದಪಕೀರ್ತಿ ಎನಗಿಲ್ಲ ಮಹದಾರ್ತಿ ಘನಕಲ್ಪ ಸುರಭೂಜನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅಕ್ಷಯವಾಗುವುದು ನಿಮಗೆ ಪ ಕುಕ್ಷಿಯೊಳೆಲ್ಲವ ಪೊಂದಿರುವಾತನ ಕುಕ್ಷಿಗೆ ಹಿತಕರ ಭಿಕ್ಷೆಯೆಂದೆನ್ನುತ ಅ.ಪ ಹೊಟ್ಟಿಗೆ ಇಲ್ಲದೆ ಬಂದಿಲ್ಲ ಕೊಟ್ಟರೆ ಪುಟ್ಟದ ಕಟ್ಟನು ತರುವೆವು ಅಷ್ಟು ಪಾಪಗಳ ಮಾಡಲು ಕೃಷ್ಣ ದಯೆಯ ತಂಬಿಟ್ಟನು ಕೊಡುವೆವು 1 ಶ್ರಾವಣ ಮಾಸದ ಶನಿವಾರ ಯಾವನು ಕೊಡುವನೊ ಮನಸಾರ ಜೀವನ ಕ್ಲೇಶದ ಪರಿಹಾರ ಭಾವದಿ ಪೊಂದುವ ಸುಖಸಾರ 2 ಮೋಸವಿಲ್ಲದವು ದಾಸ ಪ್ರಸನ್ನ ತೋಷಣ ವೈಭವ ಶ್ರೀಶನೆ ಬಲ್ಲನು ಸಾಸಿರ ಸಾಸಿರ ನಾಣ್ಯದ ಕಾರ್ಯವ ವೀಸಕೆ ಮಾಡುವ ದಾಸರ ಗುಂಪಿದು3
--------------
ವಿದ್ಯಾಪ್ರಸನ್ನತೀರ್ಥರು
ಅಧ್ಯಾಯ ಎರಡು ರಾಗ ಭೂಲೋಕವನು ಜೈಸುತ ಬಲದಿಂದಾ ಇಂದ್ರನೇ ಮೊದಲಾದ ಬೇಗಾ ದೇವೇಂದ್ರ ನಾಸನಕೆ 1 ಉಗ್ರಶಾಸನ ಮಾಡು ಮಾಡುವಂಥಾ ಉಗ್ರಶಾಶನ ಶೀಘ್ರದಿಂ ಹರಿಗೆ 2 ಬಿಡದೆ ದಯದಿ ಅನಂತ ಇಂಥ ಕಾಲಕೆ ಎಲ್ಲಿ `ಅನಂತಾದ್ರೀಶನೆ ' ನಿಂತು ನುಡಿದನು ಅಂತರಿಕ್ಷದಲಿ 3 ರಾಗ ಅಂಜಬೇಡಿರಂಜ ಬೇಡಿರೋ ನೀವಿನ್ನು ಮೇಲೆ ಪ ಪಂಜರದೊಳಗಿರುವೆ ನಿಮ್ಮನಂಜಿಸುವನ ಭಂಜಿಸುವೆನು ಅ.ಪ ಎಂದು ದ್ವೇಷ ಮಾಡುವನೋ ಅಂದಿಗವನ ಕೊಂದÀು ಬಿಡುವೆ 1 ದ್ವೇಷವನ್ನು ಮಾಡಿದವನು ಉಳಿಯ ಮುನ್ನ ಬಹಳ ದಿವಸ ಸತ್ಯ 2 ಪ್ರಹ್ಲಾದ ಇದ್ದ ಸ್ಥಳದಲ್ಲಿರುವೆ ನಾನು 3 ವಚನ ಶ್ರೀ ಲಲಾಮನವಾಣಿ ಕೇಳಿ ಉಳಿದವನಲ್ಲ ಕಾಲ ಹಿರಣ್ಯಕನಿಂದ ಬಾಲ ಕಾಲಕಾಗುವದೆಂದು ಕಾಲವನು ನೋಡುತಲೆ ಕಾಲಗಳೆದರು ಲೋಕಪಾಲಕರು ಎಲ್ಲಾ 1 ರಾಗ ಕೈಯಲಿಕೊಟ್ಟು ನಕ್ಕು ನುಡಿದಾನು 1 ಇರಲಿ ಬುದ್ಧಿವಂತನಾಗಲಿ ಪ್ರಸಿದ್ಧನಾಗಲಿ2 ಆಗ ಪ್ರಹ್ಲಾದನ್ನ ಕರದ್ಹೇಳಿದರು ಆಹ್ಲಾದದಿಂದಾ3 ಸಂಭ್ರಮದಿಂದ ಉತ್ತಮ ಶ್ರೀ ಹರಿನಿಂದಾ ಶಾಸ್ತ್ರ ನುಡಿದರು 4 ತ್ರೈವರ್ಗಿಕ ಶಾಸ್ತ್ರ ನುಡಿದರು 5 ಪಾಠಮಾಡಲಿಲ್ಲ ಸವಿದು ಹರಿ ಚರಿತಾಮೃತವನ್ನು ಸವಿ ಇನ್ನೊಂದನರಿಯಾ 6 ನುಡಿದನು ಅವನು ನವನೀತ ಧಾಂಗಿರುವಂಥಾದು ನವವಿಧ ಭಕ್ತಿ 7 ಅವರಿಗೆ ಮತ್ತಾರಿಗಾದರು ಅವನಂಜುವನಲ್ಲಾ 8 ಅವನು ಚಲುವ ನಂತಾದ್ರೀಶನಲ್ಲೆ ಛಲ ಬಿಟ್ಟನಲ್ಲಾ 9 ವಚನ ಕೂಡಿಸಿಕೊಂಡು ಮಂದ ಮುಂದ್ಹೇಳು ಇಷ್ಟುದಿನ ಒಂದು ಬಿಡದಲೆ ಹೀಗೆ ಅಂದ ಮಾತಿಗೆ ಮತ್ತೆ ಕಂದ ಪ್ರಹ್ಲಾದ ಹೀಗೆಂದನಾಗ 1 ರಾಗ ಬರೆಯಲಿಲ್ಲ ಓದಲಿಲ್ಲವೋ ಅಪ್ಪಯ್ಯ ನಾನು ಪ ಹರಿಯ ನಿಂದಿಸುವ ಶಾಸ್ತ್ರ ಬರೆಯಲ್ಹ್ಯಾಗೆ ಓದಲ್ಹ್ಯಾಗೆ ಅ.ಪ ಹರಿಯ ಗುಣಗಳನ್ನು ಮಾಡುವೆನು ಹರಿಯಪಾದ ಹರಿಯ ವಂದಿಸುವೆ ನಿತ್ಯಾ 1 ಅಂಥಾದು ಎನ್ನ ಮನಸು ಮನಸಿಲ್ಲೆ ವಿಷಯಗಳನ್ನು ನೆನೆಸುವೆ ಸುಹರಿಯ ರೂಪಾ2 ಗೆಳೆಯನಾದ ತಾನು ಅಂತರಂಗದಲ್ಲಿ ತಾನು ನಿಂತು ಪ್ರೇರಿಸುವ ಅಂತರಂಗದಂತೆ ಇರುವೆ 3 ವಚನ ಸಿಟ್ಟು ಮಾಡುತಲಿಂಥ ಥಟ್ಟನ್ಹೇಳಿರಿಯೆನಲು ಥಟ್ಟ ನಾವಲ್ಲ ಕೊಟ್ಟವರು ಕೊಟ್ಟ ಬುದ್ಧಿಯು ಅಲ್ಲ ರಾಗ ಕೇಳಿರಿ ನೀವೆಲ್ಲ ಭಾಳ ಭಕುತಿಯಲಿ ಕೇಳಿರಯ್ಯಾ ಪ ಬಾಳ ಮಾತುಗಳೇಕೆ ಹೇಳುವೆ ಸಾರಾಂಶ ಕೇಳಿರಯ್ಯಾ ಅ.ಪ ಅಲ್ಲ ಕೇಳಿರಯ್ಯಾ ದಿಟ್ಟಾಗಿ ಶ್ರೀ ಹರಿಯು ಕೊಟ್ಟ ಬುದ್ಧಿಯು ಇದು ಕೇಳಿರಯ್ಯ 1 ಶ್ರೀ ಜಗದೀಶನಿಂದೀ ಜಗ ತಿರಗೋದು ಕೇಳಿರಯ್ಯಾ 2 ಅನಂತಾದ್ರೀಶನು ತಾನೆ ಆಡುವದು ಕೇಳಿರಯ್ಯಾ 3 ವಚನ ದೈತ್ಯ ಅಡಿಯಿಟ್ಟು ನೀತಿಯಲಿ ಕಿಡಿಗಣ್ಣಿನೊಳು ನೋಡಿ ಒಡಲೊಳಗೆ ಸಿಟ್ಟಿನಲಿ ದೃಢವಾಗಿ ಇರುವಂಥ ಭೃತ್ಯರುಗಳಿಗೆ ನುಡಿದನೀಪರಿಯ 1 ರಾಗ ಕಡಿದ್ಹಾಕಿರೀತನ ||ಪಲ್ಲ|| ಬಗೆ ದುಷ್ಟಮಾತುಗ- ವಿಷ್ಣುವ ಸೊಗಸಾಗಿ ಪೂಜಿಸಿ ನಗುತಿಪ್ಪನ 1 ಸುತನಾಗದಿದ್ದರೂ ಸುತನವನೆ ಅತಿರಭಸದಲೆ ವಿಶ್ರುತವಾಗಿ ಹುಟ್ಟಿದ ವಿತತರೋಗ ತನಗ್ಹಿತವಾಗಿರುವದೇನು 2 ನಾನಾರೀತಿಗಳಿಂದ ಹಾನಿಯ ಅನಂತಾದ್ರೀಶನ ಧ್ಯಾನದಲ್ಲಿರುವನ 3 ರಾಗ ಆಗೆಲ್ಲ ಮಂದಿಗಳನ ನೆರಸಿದಾ1 ಮುರಿದು ಅವನ ಭಯ ಬಿಡಿಸಿದಾ 2 ಹರಿಯು ಬಂದು ಉಳಿಸಿದಾ3 ಸರ್ಪಶಯನ ಬಂದು ಭಯವಾ ಬಿಡಿಸಿ4 ವಿಷವ ತಂದು ಯತ್ನದಿಂದ ಕುಡಿಸಿದಾ ಹರಿ ತಾ ವಿಷವಮೃತ ಮಾ ಡಿ ಸೌಖ್ಯ ಬಡಿಸಿದಾ 5 ಘಟ್ಟ್ಯಾಗ್ಹಿಡಿದು ಶ್ರೀಹರಿ ಸಾಕಿದಾ 6 ತಾನೆ ತಾರಿ ಸಿದಾ7 ಶೀತಾಗಿ ಸೌಖ್ಯ ಬಡಿಸದಾ 8 ನಾನಾರೀತಿಯಿಂದಲವನನು ಸರಿಸಿದಾ ಅಚ್ಯುತನಂತಾದ್ರೀಶನು ಸೌಖ್ಯ ಸುರಸಿದಾ 9 ವಚನ ಮಾಡಿದರಿವಗೆ ಇನ್ನದೇನು ಪಾಯವುಯೆಂದು ಮಾನಿತರು ಗುರುಗಳಾ ದಾನವೇಂದ್ರ ನೀನು ದೀನನಾಗುವದು ಮುಂದೆ ನೀನು ತಿಳಿಯೊ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಐದು ಶ್ರೀ ಕಾಲಿಯ ಫಣಾರ್ಪಿತ ಪಾದಾಂಬುಜಾಯನಮ ಶ್ರೀ ಗುರುಭ್ಯೋನಮಃ ಪದ, ರಾಗ ಸೌರಾಷ್ಟ ತಾಳ ತಿವಿಡೆ ಸ್ವರ ಋಷಭ ಬಿಡದೆ ಕೃಷ್ಣನ ಅಪ್ಪಿ ತಾಯಿಯು ನಡದಳಾ ಗೃಹಕಾರ್ಯದಲ್ಲೆ ನಡೆದವನು ಜೋಡ್ಯರಡು ಮತ್ತೀ ಗಿಡಗಳಿದ್ದಲ್ಲೇ ನಡೆದವುಗಳ ಮತ್ತವು ತಡದು ಅಡ್ಡಾಯಿತು ಊಲೂಬಲ ಕಡಕಡೆನುತಲಿ ಕಡದು ಬಿದ್ದವುಗಿಡಗಳವು ಎರಡು|| 1 ಪತಿತ ವೃಕ್ಷಗಳಿಂದ ಹೊರಟರು ಅತಿಸುರೂಪರು ಅತಿ ಮದೋನ್ಮತ್ತರು ಕುಬೇರನ ಸುತರು ಮಂಚೆವರು| ಪೃಥಿವಿಯಲಿ ತರುಜನ್ಮಕೊಂಡರು ಪ್ರಥಮ ನಳಕೂಬರನು ಎನಿಸುವ ದ್ವಿತಿಯ ಮಣಿಗ್ರಿವಾ|| 2 ವೃಕ್ಷ ಜನ್ಮದಿ ಮುಕ್ತರಾದರಧೋಕ್ಷಜನ ದಯದಿಂದ ಇಬ್ಬರು ವೃಕ್ಷ ಶಬ್ದವ ಕೇಳಿ ನೆರೆದರು ಆ ಕ್ಷಣಕೆ ಜನರು ಲಕ್ಷ್ಮಿ ಇಲ್ಯಲ್ಲರಿಗೆ ಹರಿ ಪುತ್ಯಕ್ಷ ಅಲ್ಲಿರಲು|| 3 ತನ್ನ ಮಗನಾಟವನು ತಿಳಿಯದೆ ಚನ್ನಿಗನು ಆನಂದಗೋಪನು ಮುನ್ನವನು ಕರಕೊಂಡು ನಡಿದನು ಕಣ್ಣಿಯನು ಬಿಟ್ಟಿ|| ಆದಾವೆಂದು ಚಿಂತಿಸಿ ತನ್ನ ಮನದೊಳಗೆ 4 ಹೂಡಿ ಭಂಡಿಗಳನ್ನು ಮರುದಿನ ಮಾಡಿಸಿದ್ಧವು ಎಲ್ಲರಿಂದಲಿ ಕೂಡಿ ವೃಂದಾವನಕ ಪೋಗುತ ಮಾಡಿದಾಶ್ರಯವು | ನೋಡಿ ಆ ವೃಂದಾವನ ಸ್ಥಳ ಗಾಢ ಹರುಷದಲಿ ಬಾಲರೆಲ್ಲರು ಕೂಡಿದರು ಕುಣಿದಾಡಿದರು ಙಡ್ಯಾಡಿದರು ಅಲ್ಲೆ5 ಸ್ವಚ್ಛ ಯಮುನಾ ತೀರದಲಿ ತನ್ನಿಚ್ಛಿಯಿಂದ ವಿಚಾರ ಮಾಡುವ ವತ್ಸಗಳ ಕಾಯುವನು ತಾ ಶ್ರೀ ವತ್ಸಲಾಂಧನನು| ವಂತ್ಸರೂಪದಿ ಬಂದ ಅಸುರನ ಪುಚ್ಛ ಹಿಂಗಾಲ್ಹಿಡದು ತಿರಿಗಿಸಿ ಉತ್ಸವದಿ ಮ್ಯಾಲೊಗೆದ ಬಿದ್ದಾವತ್ಸಹತವಾಗಿ|| 6 ನಳಿನನಾಭನು ಮುಂದ ಆತರಗಳಿಗೆ ತಾ ನೀರಕುಡಿಸಿ ತೀರದ ಮಳಲಿನೂಳಗಾಡುವನು ಮತ್ತಾ ಗೆಳೆಯರನ ಕೂಡಿ| ಖಳ ಅಸುರ ಬಕಪಕ್ಷಿ ರೂಪದಿ ಸುಳದು ಮೆಲ್ಲನೆ ಬಂದು ಬಾಲಕರೂಳಗಿರುವ ಕೃಷ್ಣನ್ನ ತಾ ಬಾಯ್ವಳಗ ನುಂಗಿದನು||7 ಸುಡುವ ಕೃಷ್ಣನ ಉಂಡು ದಕ್ಕಿಸಿಕೊಳದೆ ಘಾಬರಿಗೊಂಡು ಕಾರಿದನು| ತುಂಡು ಮಾಡಿಯೊಗದಾ||8 ಘಾಸಿ ಆಗದೆ ಉಳದನೆಂದು ತೀಸವಾಗ್ಯಲ್ಲಾರು ಬಹಳುಲ್ಹಾಸವನು ಬಟ್ಟು ಏಸುಕಾಲಕೆ ಬಿಡದೆ ನಮ್ಮನ್ನು ಘಾಸಿಮಾಡದೆ ಗುರು ಅನಂತಾದ್ರೇಶ ರಕ್ಷಿಸುವೋನು ಎಂದು ಆ ಸಮಯದಲ್ಲಿ 9 ಪದ್ಯ ಸಾಧು ಹಿತಕರ ಕೃಷ್ಣಯಾದವರಲ್ಯವ ತರಿಸಿ ಐದು ವರ್ಷಾದ ಮ್ಯಾಲ್ಕಾಯ್ದನು ಆಕಳುಗಳನು ಆದರದಿ ಮತ್ತು ರಾಮಾದಿಗಳಕೂಡಿ ಬೇಕಾದ ಆಟಗಳಾಡಿ ಅನುಸರಿಸಿ ಆ ಧೇನುಕಗಳ ಕೂಡಿ ಸ್ವಾದು ಫಲಗಳು ಕೋಮಲಾದ ತೃಣ ಇದ್ದಲ್ಲೆ ಆದಿಯಲಿ ಬಲರಾಮ ಹಾದಿಯನು ಮಾಡಿ ಮುಂಧೋದ ಆ ಸ್ಥಳಕ್ಕೆ || 1 ನೋಡ್ಯಲ್ಲೆ ತಾಳಾಖ್ಯ ಪ್ರೌಢ ವೃಕ್ಷಗಳನ್ನು ಆ ಫಳಗಳನ್ನು ಪ್ರೌಢಫಲಗಳು ನೋಡಿ ಅಬ್ಬರದಿಂದ ಓಡಿ ಬಂದನು ಅಸುರ ಕೂಡಿ ತನ್ನವರಿಂದ ಕಾಡ ಖರರೂಪಿ ಅವ ಮಾಡಿ ಕ್ರೂರಧ್ವನಿಯ ಮಾಡಿದನು ಮೂಢಧೇನುಕನು 2 ಖಡುಕೋಪದಲಿ ರಾಮ ಹಿಡಿದು ಹಿಂಗಾಲುಗಳ ತಡಿಯದಲೆ ತಿರಿವ್ಯಾಡಿ ಗಿಡದ ಮ್ಯಾಲೊಗದ ಆ ಗಿಡಕ ಭಾರಾಗ್ಯವನು ಗಿಡಸಹಿತ ಪ್ರಾಣ ವನು ಬಿಡುತಲೆ ಬಿದ್ದನು ತೆಳಗೆ ತಡವು ಇಲ್ಲದಲೆ| ಬಿಡದೆ ವಸುದೇವಜರು ಬಿಡಿ ಮೆಂದಿಗಳ ಕೊಂಡು ಖಡು ಹರುಷದಿಂದಲ್ಲೆ ಬಿಡದೆ ಗೋಪಾಲರಿಂದೊಡಗೂಡಿ ಎಲ್ಲಾರು ಖಡು ರುಚಿಕರಾಗಿರುವ ಗಿಡದ ಫಲಗಳ ತಿಂದು ನಡದರಾಲಯಕೆ|| 3 ಬಂದು ದಿನದಲಿ ದಿವಿಜವಂದಿತನು ಶ್ರೀ ಕೃಷ್ಣವಂದಿಸ್ಯಗ್ರಜಗ ಅವನ ಮಂದಿರದಲಿಟ್ಟು ಬಹು ಛಂದವಾಗಿರುವ ಕಾಳಿಂದಿಯಾ ತೀರದಲಿ ಬಂದÀ ಗೋಗೋಪಾಲ ವೃಂದವನು ಕಾಲಂದಿಯಲಿ ವಿಷಜಲವು ಛಂದಾಗಿ ಕುಡದುಮರಣ ಬದಿಕಿಸಿದ ಗೋವಿಂದ ಎಲ್ಲಾರನಾ|| 4 ಚಾರು ಕಾಲಿಂದಿಯಲಿ ನೀರು ವಿಷವಾದಕ್ಕೆ ಕಾರಣ ಹುಡುಕುವೆನೆಂದ ಶೌರಿಸುತ ಶ್ರೀಕೃಷ್ಣಸಾರ ಕಡಹಾಲ ಮರನೇರಿ ಆ ಮಡಿವಿನಲಿ ಹಾರಿದಾಕ್ಷಣಕ್ಕೆ ಉಕ್ಕೇರಿದಳು ಸಾರ ಮದಗಜದಂತೆ ನೀರೊಳಗೆ ಗಡಬಡಿಸಿ ಸಾರ ಸರ್ಪನ ಹಿಡಿದ ಕ್ರೂರನವ ಮೈಮ್ಯಾಲೇರಿ ಕಚ್ಚುತ ತನ್ನ ಶರೀರಪಾಶದಿ ಹರಿ ಶರೀರ ಸುತ್ತಿದನು||5 ದುಷ್ಟಾಹಿಯಿಂದ ನಿಶ್ಚೇಷ್ಟನಾದನು ಕೃಷ್ಣದೃಷ್ಟಿಯಿಂದಲಿ ನೋಡಿ ಅಷ್ಟು ಗೋಗಳು ಮತ್ತೆ ಅಷ್ಟೆಗೋಪಾಲಕರು ಕಷ್ಟವನು ಬಟ್ಟು ಉತ್ಕøಷ್ಟ ತಾಪದಲೆ ನಿಶ್ಬೇಷ್ಟರಾದರು ಅಲ್ಲೆ ಕಾಷ್ಟಮೂರ್ತಿಗಳಂತೆ ಸ್ಪಷ್ಟತೋರಿದರು| ಗೋಷ್ಟದಲಿ ಮತ್ತೆಲ್ಲ ದುಷಚಿನ್ಹವು ಕಂಡು ಶೇಷ್ಠ ನಂದಾದಿಗಳು ಕÀಷ್ಟದನು ಬಟ್ಟಸಂತುಷ್ಟರಾಮನ ಕೂಡಿ ಅಷ್ಟೂರು ನಡದರಾ ವೃಷ್ಣಿಕುಲ ತಿಲಕ ಶ್ರೀಕೃಷ್ಣ ಇದ್ದಲ್ಲೆ||6 ಮುಂದವನ ತಾಯಿ ಆಕಂದನಾ ಕಂಡು ಕಾಳಿಂದಿಯಲಿ ಧುಮುಕಬೇಕೆಂದು ಧಾವಿಸಲಾಗಿ ಮಂದಗಮನಿಯರೆಲ್ಲ ಹಿಂದಕ್ಕ ಸರಿಸಿದರು ನಂದಗೋಪನ ಹಿಡಿದು ಹಿಂದಕ್ಕ ಸರಿಸಿದನು óಛಂದದಲಿ ರೋಹಿಣಿಯ ಕಂದ ಬಲರಾಮಾ| ಮುಂದೆರಡು ಫಳಿಗಿ ಮ್ಯಾಲೆ ಛಂದಾಗಿ ಎಚ್ಚÀ್ಚರಿಕಿಯಿಂದ ಸರ್ಪನ ಹಿಡಿದು ಹಿಂದೊತ್ತಿ ಹೆಡಿಮೇಲೆ ಛóಂದಾಗಿ ಮಂದ ಹಾಸ್ಯದಿ ನಗುತ ನಂದಸುತ ಕುಣಿದ ಆನಂದದಿಂದಾ|| 7 ಪದ, ರಾಗ:ಆನಂದ ಭೈರವಿ ಆದಿತಾಳ ರಂಗ ಕುಣಿದ ಕಾಳಿಂಗನ ಹೆಡಿಮ್ಯಾಲ ಕಂಗಳಿಂದಲಿ ನೋಡಿ ಹಿಂಗದೆ ಸುರಕಿಲ್ಲ ಸಂಗೀತ ಸಹಿತ ಸಾರಂಗ ಮೃದಂಗ ತಾಲಂಗಳ ನುಡಿಸಿದರು ಹಿಂಗದಲೆ||ಪ ಹಿಂಗದೆ ಯಮುನಿ ತರಂಗಗಳಿಂದಲೆ ಮಂಗಳಾಂಗನ ಪಾದಂಗಳ ತೊಳುವಳು | ಅಂಗಾಲಿಲ್ಯವನು ಕಾಳಿಂಗನ ಮರ್ದಿಸಿ ಮಂಗಳ ಕೂಡುವ ಜಗಂಗಳಿಗೆ | ಮಂಗಳಕರ ಪುಷ್ಟಂಗಳ ದೃಷ್ಟಿಯ ರಂಗಗ ಮಾಳ್ಪರು ಹಿಂಗದೆ ದಿವಿಜರು ಭೃಂಗಕೋಕಿಲ ಮಯೂರಂಗಳು ಮಾಳ್ಪವು ರಂಗನ ಸಂಗಾತ ಸಂಗೀತವು|| 1 ಮುನ್ನಾಗಿ ಬಹುವರ್ಷ ತನ್ನ ಸಂದರ್ಶನವನ್ನು ಬಯಸುವಂಥ ಮಾನ್ಯಾದ ಮುನಿಗಳಿಗೆ ಚೆನ್ನಾಗಿ ಶ್ರೀಹರಿ ತನ್ನ ಕೃಷ್ಣರೂಪವನ್ನು ತೋರಿಸುತ ಪ್ರಸನ್ನನಾಗಿ| ಉನ್ನತವಾಗಿಹ ಪನ್ನಗಾಧೀಶನ ಉನ್ನತವಾಗಿಹ ಘನ್ನ ಹೆಡಿಗಳಲ್ಲಿ| ರನ್ನದಂಥೊಳುವಂಥಾ ತನ್ನ ಪಾದಗಳಟ್ಟು ತನ್ನಂಗಡ ಧಿನ್ನಂ ಗಡ ಧಿಕ್ಕಡ ಥೌ ಎಂದು|| 2 ಎಂತು ವರ್ಣಿಸಲಿ ಅನಂತ ಮಹಿಮಿಯು ಎಂಥವರಿಗೆ ಬಹಿರಂತವ್ರ್ಯಾಪತನಾಗ್ಯನಂತ ಪ್ರಾಣಿಗಳಲ್ಲಿ ನಿಂತಿರುವಾ| ಅಂತ್ಹತ್ತಗುಡದೆ ತನ್ನಂತೆ ತಾ ಕುಣಿದಾಡುವಂಥದಗನ್ಯ ದೃಷ್ಟಾಂತವೆಂಬುದಿಲ್ಲ ಇಂಥ ಎಲ್ಲರು ಭ್ರಾಂತರಾಗಿ|| 3 ಆರ್ಯಾ ಪದ, ರಾಗ :ಜಾಂಗಲಾ ಶ್ರೀ ಪತಿಯೇ ನಮ್ಮ ಪ್ರಾಣಪತಿಯ ಪಾಲಿಸು ಶ್ರೀ ಪತಿಯೆ|| ಪ ಪತಿಯು ಪಾವಿತನಾದ ಹಿತವಾಯಿತು||1 ಫಣಿಯ ಫಣಗಳಲ್ಲಿ ಪ್ರಣಯದಲಿ ಕಾಲಿಟ್ಟ ಶುಣಿಕುಣಿ ದಾಡಿದ್ದು ಗುಣವಾಯಿತು|| 2 ಮುದ್ದು ಮುಖದ ಅನಂತಾದ್ರೀಶ ದುಃಖ ಸಮುದ್ರದಿಂದ ನಮ್ಮನ್ನು ಉದ್ಧಾರ ಮಾಡು 3 ಆರ್ಯಾ ಕೃಷ್ಣ ವೇಣಿಯರ ಕಷ್ಟನೋಡಿ ಶ್ರೀ ಕೃಷ್ಣ ಅವನ ಬಿಟ್ಟನುಬ್ಯಾಗೆ| ಕೃಷ್ಣನೇ ಸಾಕ್ಷಾದ್ದಿಷ್ಣುನೆಂದು ಆ ಕೃಷಸರ್ಪ ನುಡಿದನು ಹೀಂಗೆ|| 3 ಭಕುತಿಯ ಕೊಡು ಮೋಹನಾ|| ಪ ಚನ್ನಾಗಿಕೊಡು ನೀನಿನ್ನಲ್ಲಿ ಧ್ಯಾನಾ||1 ಲೋಕನಾಥನೆ ನಿನ್ನ ತೋಕನೆಂದರಿತು|| 2 ಹರಿಯೆ ಅನಂತಾದ್ರಿ ದೊರಿಯೆ ಎಂದೆಂದು|| 3 ಆರ್ಯಾ ಕಾಳಿಯ ನುಡಿಯನು ಕೇಳುತ ಶ್ರೀ ಪತಿ ಭಾಳ ಪ್ರೇಮದಲಿ ಹೀಗೆಂದಾ | ಹೇಳುವೆ ಕಾಳಿಯ ಕೇಳ್ಯನ್ನಯ ವಚನಾ ಏಳು ಶೀಘ್ರದಲಿ ಇಲ್ಲಿಂದಾ|| 1
--------------
ಅನಂತಾದ್ರೀಶ - ಕಥನಕಾವ್ಯಗಳು
ಅನುಮಾನ ಬೇಡಿರೋ ಪ ದುಷ್ಕರ್ಮ ತ್ಯಜಿಸಿರೋ1 ಹೆಣ್ಣು ಮಣ್ಣು ಹೊನ್ನು ಸ್ಥಿರವಿದೆನ್ನ ಬೇಡಿರೋ ನಿಜವನ್ನು ನೋಡಿರೋ2 ಈತಜಗನ್ನಾಥಸೌಖ್ಯದಾತಕಾಣಿರೋಪ್ರಖ್ಯಾತ ಕೇಳಿರೋ3 ಕಾಟಕರ್ಮಲೂಟಿಗೈವ ತೋಟಿಗಾರನ ಈ ಸಾಟಿ ಕಾಣೆ ನಾ4 ಶಿಲೆಗೆ ದಿವ್ಯ ಲಲನಾರೂಪವೊಲಿದು ಕೊಟ್ಟನ ಶಾಪವಳಿಸಿ ಬಿಟ್ಟನ 5 ಮಾನಿನಿಯಾ ಮಾನ ಜೋಪಾನಗೈದನ ಸ್ವಾಧೀನನಾದನ6 ಪಿಡಿದ ಮುನಿಯ ಬಿಡಿಸಿ ಪುಲಿಯ ಬಡಿದ ಧೀರನ ಕೈಪಿಡಿಗೆ ಬಾರನ 7 ಭುಕ್ತಿ ಮುಕ್ತಿಪಡೆವರು 8 ಶ್ರೀಧರನೆ ಜಟಿಲನೆ 9
--------------
ವೆಂಕಟವರದಾರ್ಯರು
ಈ ಸುಖವ ಬಿಟ್ಟನ್ನು ಬೇರೆ ಸುಖವುಂಟೆ ವಾಸುದೇವನ ಭಜಿಸಿ ಸುಖಿಯಾಗು ಮನವೆ ಈ ಸುಖವ ಬಿಟ್ಟಿನ್ನು ಬೇರೆ ಸುಖವುಂಟೆ ಪ ಕಾಮಕ್ರೋಧಾದಿಗಳ ಕಡೆಗೊತ್ತಿ ನಿರತ ನಿ ಷ್ಕಾಮನಾಗಿಯೆ ತುಲಸಿ ಕುಸುಮಗಳ ತಂದು ಪ್ರೇಮಪೂರಿತನಾಗಿ ಸರ್ವಪರಿಪೂರ್ಣ ಶ್ರೀ ರಾಮಪೂಜೆಯಗೈದು ಸುಖಿಯಾಗು ಮನವೆ 1 ಸೂನು ಮನೆ ಮೊದಲಾದ ಮಮಕಾರವನು ಬಿಟ್ಟು ಧ್ಯಾನವನು ಶ್ರೀಹರಿಯ ಮೂರ್ತಿಯೊಳಗಿಟ್ಟು ಸಾನುರಾಗದಿ ಹರಿಯ ನಾಮಸುಧೆಯನು ನೀನು ಪಾನವನುದಿನ ಗೈದು ಸುಖಿಯಾಗು ಮನವೆ 2 ಧರೆಯೊಳತ್ಯಧಿಕವೆಂದೆನಿಪ ಚಿಕ್ಕನಾಗಾಖ್ಯ ಪುರದೊಳಗೆ ಮಹಿಮೆಯಿಂ ಭಕ್ತರನು ಪೊರೆವ ಗುರು ವಾಸುದೇವಾರ್ಯರೂಪ ವೆಂಕಟಪತಿಯ ಚರಣದಾಸ್ಯವ ಪಡೆದು ಸುಖಿಯಾಗು ಮನವೆ3
--------------
ನಾರಾಯಣದಾಸರು
ಈತನೀಗ ಪ್ರಣವ ಪಾದ್ಯನೊ | ಭೂತ ಪ್ರೇತ ಪ್ರಮಥ ತತಿಗೆ | ನಾಥನೆನಿಪ ನಮಗೆ ನಿರುತ | ವಾಕನೊಳಗೆ ಹರಿಯ ತೋರುವ ಪ ಗಜದನುಜ ವಿನಾಶನೀತ | ಗಜವದನನ ಪೆತ್ತನೀತ | ಗಜನ ಸದದನೀತ ಪೆತ್ತಂ | ಗಜನ ಗೆದ್ದ ಗಂಭೀರನೀತ | ಗಜರಿಪುರಥ ರಮಣನೀತಾ ನಂ | ಗಜಮಾರಗೊಲಿದನೀತ | ಗಜ ವರದನ ಭಕ್ತರಘವೆಂಬೊ | ಗಜಕೆ ಕೇಸರಿಯಾಗಿಪ್ಪನೀತಾ 1 ದ್ವಿಜರಾಜ ಜುಟನೀತಸೋತ್ತಮ | ದ್ವಿಜಗೆ ಪಾಲಿಪನೀತ ಸತತಾ | ದ್ವಿಜ ಪನ್ನಗನ್ನ ಸಮಗುಣನೀತಾ | ದ್ವಿಜ ಕುಲದಲ್ಲಿ ಉದ್ಭವನೀತ | ದ್ವಿಜನ ಶಾಪವ ಕೈಕೊಂಡನೀತ | ದ್ವಿಜ ಭೂಷಣ ಯಾಗದಲಿ ಸೂರ್ಯನ | ಧ್ವಜವ ಕಿತ್ತಿದನೀತ ಕೈಲಾಸ | ದ್ವಿಜವಾಗಿವುಳ್ಳ ಉಗ್ರೇಶನೀತ2 ತ್ರಿಗುಣಾಕಾರ ನೀತ ಮೂರು | ಜಗವದಲ್ಲಣನೀತ ಮೇರು | ನಗಚಾಪನೀತ ನಾರಾಯಣಾಸ್ತ್ರದಿ | ನಗರನುರುಪಿ ಬಿಟ್ಟನೀತ | ಬಗೆಬಗೆಯ ಜೀವಿಗಳಿಗೆ ಬಿಡದೆ | ಅಗಣಿತ ಭೋಗ ಪ್ರದಾತನೀತ | ಮೃಗಲಾಂಛನದ ಮೊಗನಗೆ ಈತ | ನಿಗಮಾಶ್ರವದಗಧಿಕನೀತಾ 3 ಭಸುವ ರಾವಣ ಮಾಗಧ ಕಶ್ಯಪ | ಅಸುರಗಣಕೆ ವರವಿತ್ತನೀತ | ಪಶುವದನ ಪರಮೇಶ್ವರನೀತ | ವಿಷವ ಭಂಜನಭವ ಶಿವನೀತ | ಬಿಸಿಜ ಸಂಭವ ನಂದನನೀತ | ಅಸಮವೀರ ವೈಷ್ಣವನೀತ | ವಸುಧಿಯೊಳಗೆ ಶರಣ ಜನಕೆ | ವಶವಾಗಿಯಿಪ್ಪ ಉಗ್ರೇಶನೀತಾ 4 ಹೇಮಕೂಟಾದ್ರಿ ನಿಲಯನೀತ | ರಾಮದೇವ ವಾಸವಂದ್ಯ | ಸೋಮವರ್ಣನೀತ ಸಕಲ | ಕಾಮಿತಾರ್ಥವ ಕೊಡುವನೀತ | ಯಾಮ ಯಾಮಕೆ ಮನದೊಳು ನಿಂದು | ಕ್ಷೇಮ ಮಾರ್ಗಕ್ಕೆ ಪ್ರೇರಕÀನೀತ | ರಾಮ ವಿಜಯವಿಠ್ಠಲನಂಘ್ರಿ | ನಾಮನೆನಿಸಿ ಕೊಂಡಾಡುವನೀತಾ5
--------------
ವಿಜಯದಾಸ
ಎಂಥ ಗರವು ನೋಡಮ್ಮಯ್ಯರುಕ್ಮಿಣಿಗೆಂಥ ಗರವು ನೋಡಮ್ಮಯ್ಯಕಂತುನಯ್ಯನ ಎನಗಂತ್ರವ ಮಾಡಿದ ಮಂತ್ರವ ಮಾಡಿದಳಮ್ಮಯ್ಯ ಪ. ಹಿಡಿದ ವೀಳ್ಯವ ನಾನು ಕೊಡುವೊ ಸಮಯದಿಬಂದು ಕಿಡಿ ಹಾಕಿದಳು ನೋಡಮ್ಮಯ್ಯಭಾವೆ ಕಿಡಿಯ ಹಾಕಿದಳು ನೋಡಮ್ಮಯ್ಯ ಹುಡುಗೆ ವೀಳ್ಯಕೆ ಮುಖಕೊಡಬಹುದುಕೃಷ್ಣನು ಬಿಡನು ಇವಳದೇನಮ್ಮಯ್ಯಇಂಥ ಭಿಡೆಯು ಇವಳದೇನಮ್ಮಯ್ಯ 1 ಮೋದ ಇಟ್ಟವಳಿಗೆಆದರವಿಲ್ಲ ನೋಡಮ್ಮಯ್ಯಏನೂ ಆದರವಿಲ್ಲ ನೋಡಮ್ಮಯ್ಯ ಕಾಡುತ ಕೊಟ್ಟ ವೀಳ್ಯವ ಮಾಧವಗೆಕೊಟ್ಟರೆ ಹೋದೀತು ಬುದ್ದಿ ನೋಡಮ್ಮಯ್ಯರುಕ್ಮಿಣಿಯಲ್ಲೆ ಹೋದೀತು ಬುದ್ಧಿ ನೋಡಮ್ಮಯ್ಯ 2 ಥಾಟು ಥೀಟಿನ ಭಾವೆ ಮಾಟ ಮಾಡಿದಳೇನಮ್ಮಯ್ಯಬೂಟಕತನ ನೋಡಮ್ಮಯ್ಯಬೂಟಕಗುಣದವಳ ಕೂಟಕೆ ಮೆಚ್ಚಿದಹರಿಯ ಆಟವÀ ನೋಡಮ್ಮಯ್ಯಮರುಳಾಟವ ಹರಿಯ ನೋಡಮ್ಮಯ್ಯ3 ಸೃಷ್ಟ್ಯಾದಿಕರ್ತಗೆ ಇಟ್ಟಳು ಮದ್ದಾನೆ ಧಿಟ್ಟತನವ ನೋಡಮ್ಮಯ್ಯರುಕ್ಮಿಣಿಯ ದಿಟ್ಟತನವ ನೋಡಮ್ಮಯ್ಯಎಷ್ಟು ಧೈರ್ಯವೆಂದು ಕೃಷ್ಣತಾ ಬೆರಗಾಗಿ ಬಿಟ್ಟನುವೀಳ್ಯವ ನೋಡಮ್ಮಯ್ಯ4 ವಟಪತ್ರ ಶಾಯಿಗೆ ಕುಟಿಲ ಮಂತ್ರವಮಾಡೊ ಚಟುಲತನ ನೋಡಮ್ಮಯ್ಯ ಭಾವೆಯ ಚಟುಲತನವ ನೋಡಮ್ಮಯ್ಯಸಟಿಯಲ್ಲ ಇವಳೆದೆ ಕಠಿಣತಿಶÀಯವೆಂದು ಮಿಟಿಮಿಟಿ ನೋಡಿದನಮ್ಮಯ್ಯಕೃಷ್ಣ ಮಿಟಿಮಿಟ ನೋಡಿದನಮ್ಮಯ್ಯ 5 ಭಾಳೆ ದಯಾಳು ಎಂದು ಹೇಳುವ ಶೃತಿಗಳುಕೇಳಿ ಆಟವು ನೋಡಮ್ಮಯ್ಯಹರಿಯ ಕೇಳಿ ಆಟವು ನೋಡಮ್ಮಯ್ಯಕಾಳ ಕೂಟವ ಕೈತಾಳವ ಹಿಡಿದಂತೆಆಳುವನಿವಳ ನೋಡಮ್ಮಯ್ಯಕೃಷ್ಣ ಆಳುವನಿವಳ ನೋಡಮ್ಮಯ್ಯ6 ಸರ್ವದಾ ತನ್ನ ಕೂಡ ಇರಬೇಕೆಂದೆನುತಲಿಎರೆದಳು ತೈಲವ ನೋಡಮ್ಮಯ್ಯಹರಿಗೆ ಎರೆದಳು ತೈಲವಮ್ಮಯ್ಯಭರದಿ ಕೋಪಿಸಿ ಕಣ್ಣು ತೆರೆದು ನೋಡುವರೆನ್ನಧರಿಸಲಿನ್ನೆಷ್ಟು ನೋಡಮ್ಮಯ್ಯನಾ ಧರಿಸಲಿನ್ನೆಷ್ಟು ನೋಡಮ್ಮಯ್ಯ 7 ಪುಂಡರೀಕಾಕ್ಷನ ಕೊಂಡಾಡಿ ಸುಖಿಸುವಹೆಂಡಿರು ಕಡಿಮೆಯೇನಮ್ಮಯ್ಯಹರಿಗೆ ಹೆಂಡಿರು ಕಡಿಮೆಯೇನಮ್ಮಯ್ಯಕೆಂಡವ ತುಂಬಿದ ಮಂಡಿ ತೋರಿಸಿದಂತೆಚಂಡಿಯನಾಳುವ ನಮ್ಮಯ್ಯಕೃಷ್ಣ ಚಂಡಿಯನಾಳುವ ನಮ್ಮಯ್ಯ8 ಧಿಟ್ಟಿಯರಿಬ್ಬರು ಕೋಪ ಬಿಟ್ಟರೆ ಇವರಿಗೆಎಷ್ಟು ಒಲುಮೆ ನೋಡಮ್ಮಯ್ಯನಾ ಎಷ್ಟು ಒಲುಮೆ ನೋಡಮ್ಮಯ್ಯಧಿಟ್ಟ ರಾಮೇಶನಲೆ ಇಟ್ಟರೆ ಇವರಿಗೆಎಷ್ಟರೆ ಗರ್ವ ನೋಡಮ್ಮಯ್ಯಬೇಡಿದ್ದು ಎಷ್ಟರೆ ಗರ್ವ ನೋಡಮ್ಮಯ್ಯ 9
--------------
ಗಲಗಲಿಅವ್ವನವರು
ಎನ್ನ ಹಣೆಯ ಬರಹಕೆ ಎಂಥಾ ಗಂಡ ದೊರೆತನೇಎನ್ನ ಮನವೆಂಬ ಗಂಡನ ಪರಿಯ ಪೇಳುವೆನೆ ಪ ಅಡಕಿಲಿಗಳನೆಲ್ಲವ ಹುಡುಕುವನೇಅಡುಗೆಯ ಮಡಕೆಯನೆಲ್ಲ ಒಡೆದನೇಗುಡುಗುಟ್ಟುತ ಯಾವಾಗಲೂ ಇಹನೇಗುಡ್ಡವನೇರುವನೇ 1 ಮುನಿಸಿಕೊಂಡು ಮೇಲಟ್ಟದಿ ಕೂರುವನೇಘನ ಹುಟ್ಟನೆ ಮುಂದಿಹನೇಮನೆಯಲೆಲ್ಲರ ಬಡಿವನೇಮತವನು ಕೆಡಿಸಿದನೆ 2 ದುಡಿವ ಕೋಣನನು ಕೊಂದನೇಕಡಿದುಬಿಟ್ಟನೆ ಕಾಯುವ ನಾಯನುಪುಡಿ ಮಾಡಿದ ಕಟ್ಟುವ ಹಗ್ಗವನೇ ಪಂಕ್ತಿಯ ಸೇರದಿಹನೆ 3 ಒತ್ತೆಯ ಒಡವೆಯನೆ ತಿಂದನೇಬತ್ತಿಯ ಹಿರಿದಾಗೆ ಚಾಚುವನೇಕಿತ್ತು ಒಗದನೇ ದೇವರನೇ ಕಡಿದನೇ ಮರವನ್ನೇ 4 ತ್ಯಜಿಸಿದ ನೆಚ್ಚಿದ ಮಡದಿಯನೇತ್ಯಜಿಸಿದ ಮೋಹದ ಮನೆಯನ್ನೇಭಜಿಸಿದ ಚಿದಾನಂದ ಗುರುವನ್ನೇನಿಜದಲಿ ಬೆರೆತನು ಅವರನ್ನೇ 5
--------------
ಚಿದಾನಂದ ಅವಧೂತರು
ಎಲ್ಲಮ್ಮಾದೇವಿ ನಮ್ಮ ದೇವರು ಬಂದರು ಕಾಣ ಪ. ಸೋಮಾಸುರನೆಂಬ ದೈತ್ಯನು ಸಾಮಕ ವೇದವನೊಯ್ಯಲು ಮಾ ಸೋಮಾಸುರನೆಂಬವನ ಕೊಂದು ಸಾಮಕವೇದವ ತಂದನು ಮಾ 1 ಗುಡ್ಡವು ಮುಳುಗಿ ಪೋಗಲು ನಮ್ಮದೇವ ಗುಡ್ಡವ ಬೆನ್ನಲ್ಲಿಟ್ಟನು ಮಾ ಗುಡ್ಡದಂಥÀ ದೈತ್ಯರನೆಲ್ಲ ಅಡ್ಡÀಕೆಡಹಿ ಬಿಸುಟನು ಮಾ 2 ಚಿನ್ನಗಣ್ಣಿನವನು ಬಂದು ಕನ್ನೆ ಪೆಣ್ಣನೊಯ್ಯಲು ಮಾ ವರ್ಣರೂಪವ ತಾಳಿ ಅವನ ಭಿನ್ನ ಭಿನ್ನವ ಮಾಡಿದನು ಮಾ 3 ಕಂಭದಿಂದಲೆ ಉದಿಸಿ ನಮ್ಮ ದೇವ ಜಂಭದಸುರನ ಬಡಿದನು ಮಾ ನಂಬಿದ ಪ್ರಹ್ಲಾದನ್ನ ಕಾಯಿದ ಅಂಬುಜನಾಭ ನರಸಿಂಗನು ಮಾ 4 ಬಲು ಮುರುಡನಾಗಿ ಭೂಮಿಯ ಬಲಿಯ ದಾನವ ಬೇಡಿದ ಮಾ ಇಳೆಯ ಈರಡಿಯ ಮಾಡಿ ಬಲಿಯ ಪಾತಾಳಕೊತ್ತಿದ ಮಾ 5 ಕೊಡಲಿಯನ್ನು ಪಿಡಿದು ನಮ್ಮದೇವ ಕಡಿದ ಕ್ಷತ್ರಿಯ ರಾಯರ ಮಾ ಹಡೆದ ತಾಯ ಶಿರವ ತರಿದು ಪಡೆದನಾಕೆÉಯ ಪ್ರಾಣವ ಮಾ 6 ಎಂಟೆರಡು ತಲೆಯ ಅಸುರನ ಕಂಠವ ಛೇದಿಸಿ ಬಿಟ್ಟನು ಮಾ ಒಂಟಿರೂಪವ ತಾಳಿ ಲಂಕೆಯ ಬಂಟ ವಿಭೀಷಣಗಿತ್ತನು ಮಾ 7 ಸೋಳಸಾಸಿರ ಗೋಪಿಯರೊಡನೆ ಕೇಳೀಮೇಳದಲಿಪ್ಪನು ಮಾ ಬಾಲಕನಾಗಿ ಪೆಣ್ಣರೂಪದಲಿ ಶ್ರೀ- ಲೋಲ ಲಕ್ಷ್ಮಿಯ ಅರಸನು ಮಾ 8 ಒಪ್ಪದಿಂದಲಿ ಬಂದು ನಮ್ಮ ದೇವ ಇಪ್ಪೆವನದೊಳಗಿಪ್ಪನು ಮಾ ಸರ್ಪಶರನಾಗಿ ಪೋಗಿ ತ್ರಿಪುರಸಂಹರ ಮಾಡಿದ ಮಾ 9 ಎಲ್ಲಮ್ಮಾ ಎಲ್ಲಮ್ಮಾ ನಮ್ಮದೇವ ಬಲ್ಲಿದ ಕಲ್ಕ್ಯವತಾರನು ಮಾ ಇಳೆಯ ಸ್ವರ್ಗ ಪಾತಾಳಕೊಡೆಯ ಚೆಲುವ ಹಯವದನನು ಮಾ 10
--------------
ವಾದಿರಾಜ
ಏಕ ಬÁಣ ಬಿಟ್ಟನು ಜಾಣ ಪ ಏಕ ಸಂಕಲ್ಪದಿ ಏಕ ವಾಕ್ಯವನು ಅ.ಪ. ಏಕ ದೈವ ಲೋಕೈಕ ಮಹಿಮ ಜಗ- ದೇಕ ಕಾರಣ ಭಕ್ತ ಶೋಕ ನಿವಾರಣ ಶ್ರೀಕರ ಶುಭಗುಣ ಸೀತಾರಮಣ ಪೂರ್ಣ ರಾಕೇಂದು ವದನ ದಿವಾಕರ ಕುಲಭೂಷಣ 1 ಕಾಕುಜನರ ಬಲು ಶೋಕಕಾರಣ ಕರು ಣಾಕರ ಶರಣಾಗತ ಜನ ರಕ್ಷಣ ಶ್ರೀಕಮಲೇಕ್ಷಣ ಲೋಕ ವಿಲಕ್ಷಣ ಲೋಕವಿನುತ ಶ್ರೀ ಕರಿಗಿರಿ ನಿಕೇತನ 2
--------------
ವರಾವಾಣಿರಾಮರಾಯದಾಸರು
ಏಕೆ ದೂರುವಿರೇ ರಂಗಯ್ಯನಏಕೆ ದೂರುವಿರೇ ಪ ಸಾಕು ನಿಮ್ಮ ದೂರ ಬಲ್ಲೆನುಈ ಕುವರನಾಕೃತ್ಯ ಮಾಳ್ಪನೆಅ.ಪ. ದಟ್ಟಡಿಯಿಡಲರಿಯ ಗೋವತ್ಸವಬಿಟ್ಟು ಚಲಿಸಬಲ್ಲನೆಘಟ್ಟಿಯಾಗಿ ಗೊತ್ತಿನಲ್ಲಿಕಟ್ಟಿನೊಳು ಕಟ್ಟಿದ್ದ ಕರುಗಳಬಿಟ್ಟನೇ ಈ ಕೃಷ್ಣನ ಮೇ-ಲೆಷ್ಟು ಹೊಟ್ಟೆಕಿಚ್ಚೆ ನಿಮಗೆ 1 ಕೆನೆಹಾಲು ಬೆಣ್ಣೆಯನು ಇತ್ತರೆ ಆದಿನವೊಲ್ಲನು ಊಟವಮನೆಮನೆಗಳನು ಪೊಕ್ಕುಬೆಣ್ಣೆ ಪಾಲ್ಮೊಸರನ್ನು ತಿನ್ನುತವನಿತೆಯರ ಕೂಡಾಡಿದನೆಂ-ದೆನಲು ನಿಮಗೆ ನಾಚಿಕಿಲ್ಲವೆ 3
--------------
ಶ್ರೀಪಾದರಾಜರು
ಕನಿಕರವಿಲ್ಲವೆ | ವನರುಹಲೋಚನಾ ಪ ಘನಕೃಪಾಪೂರ್ಣ ನೀನೆನುವುದು ಜಗವೆಲ್ಲಾ ಎನಗದು ನಿಜವೆಂದು ಅರಿವಾಗಲಿಲ್ಲ ಅ.ಪ ವೇದ ಪುರಾಣವ ಓದಿ ತಿಳಿಯಲಿಲ್ಲ ಸಾಧುಸಂತರ ಸೇವೆ ಸಾಧಿಸಲಿಲ್ಲ ಭಾರ ನಾನಾದೆನಲ್ಲ ಆದಿಮೂರುತಿ ನಿನ್ನಾರಾಧನೆ ಮಾಡಲಿಲ್ಲ 1 ಜ್ಞಾನ ಸುಧಾರಸ ಪಾನವ ಮಾಡಲಿಲ್ಲ ದೀನತೆಯೊಳು ನಿನ್ನ ಧ್ಯಾನಿಸಲಿಲ್ಲ ದೀನರ ಸಂಗದಿ ಶ್ವಾನನಂತಾದೆನಲ್ಲ ನಾನು ನನ್ನದು ನಿನ್ನಾಧೀನವಾಗಲು ಇಲ್ಲ 2 ನಿನ್ನ ಬಿಟ್ಟನ್ಯರ ಇನ್ನು ಸೇವಿಪುದಿಲ್ಲ ಅನ್ನ ಪಾನಂಗಳೊಳಿನ್ನಾಸೆಯಿಲ್ಲ ನಿನ್ನ ನಾಮಾಮೃತವನು ಬಿಡುವವನಲ್ಲ ನಿನ್ನವನೆಂದೆನ್ನ ಮನ್ನಿಸೊ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಮಲ ಧ್ಯಾನಮಾಡಿರೋ ಅನುಮಾನ ಬೇಡಿರೋ ಪ ಬೊಮ್ಮ ಪಿತನ ನೆಮ್ಮಿ ಭಜಿಸಿರೋ ದುಷ್ಕರ್ಮತ್ಯಜಿಸಿರೋ1 ಹೆಣ್ಣು ಮಣ್ಣು ಹೊನ್ನು ಸ್ಥಿರವಿದೆನ್ನ ಬೇಡಿರೋ ನಿಜವನ್ನು ನೊಡಿರೋ 2 ಪ್ರಖ್ಯಾತ ಕೇಳಿರೋ 3 ಕಾಟಕರ್ಮ ಲೂಟಿಗೈವ ತೋಟಗಾರನಾ ಈಸಾಟಿಗಾಣೆನಾ 4 ಶಿಲೆಗೆ ದಿವ್ಯ ಲಲನಾ ರೂಪ ವೊಲಿದು ಕೊಟ್ಟನಾ ಶಾಪವಳಿದು ಬಿಟ್ಟನಾ 5 ಮಾನಿನಿಯಾ ಮಾನ ಜೋಪಾನ ಗೈದನಾ ಸ್ವಾಧೀನನಾದನ 6 ಪಿಡಿದ ಮುನಿಯ ಬಿಡಿಸಿ ಪುಲಿಯ ಬಡಿದ ಧೀರನಾ ಕೈಪಿಡಿಗೆ ಬಾರನಾ 7 ಮತ್ರ್ಯರಿವನ ಭಕ್ತಿ ಯಲ್ಲಿ ರಕ್ತಿಪಡು- ವರು ಭಕ್ತಿ ಮುಕ್ತಿ ಪಡೆವರು 8 ಶರಣಜನರ ಪೊರೆದ ಧೊರೆಯು ವರದವಿಠ್ಠಲನೆ-ಶ್ರೀಧರಣೀ ಜಟಿಲನೇ 9
--------------
ಸರಗೂರು ವೆಂಕಟವರದಾರ್ಯರು
ಕಾಲ ವ್ಯರ್ಥ ಪ ಘನ್ನ ನಿರಯಕೆ ವೈವೋ ಸಾಧನವೋ ಗೋಪಾಲ ಅ.ಪ ಸುರರು ಬಲ್ಲರೈ ಚದುರ ತತ್ವೇಶಗಣ ಬಲ್ಲರಯ್ಯಾ ವಿಧಿಪಿತನೆ ನಿನ್ನ ಬಿಟ್ಟನ್ಯತ್ರ ಮನವಿರಲು ನಿಧನ ನೋವಿಗೆ ಮಿಗಿಲು ಪದುಮ ಮುಕ್ತರು ಸಾಕ್ಷಿ1 ಬಂಧಿಸಲು ನೀ ನಮ್ಮ ಬಿಡಿಸಿಕೊಂಬುವರುಂಟೆ ಅಂಧತಮಸಿನ ಭೋಗದಿಂದಾಹುದೊ ಸಿಂಧು ಚಿನ್ಮಯ ಕಾಯ ತಂದೆ ನಿನ್ನಯ ಕರುಣ ಉಂಬುವನೆ ಬಹುಧನ್ಯ 2 ಗೋ ಗೊಲ್ಲರಲಿ ಕರುಣ ಸುರಿದ ದೀನ ಬಂಧು ಭಾಗ್ಯಪಾಲಿಸು ಭಕ್ತಿಯೋಗವಿತ್ತು ರೋಗದಲಿ ಬಲು ನೊಂದೆ ಭಯವನ್ನು ಹೀರುವುದು ನಾಗತಲ್ಪ ಜಯೇಶವಿಠಲನೆ ಉದ್ಧರಿಸು 3
--------------
ಜಯೇಶವಿಠಲ