ಒಟ್ಟು 20 ಕಡೆಗಳಲ್ಲಿ , 2 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(2) ತುಳಸಿರಾಮದಾಸರ ಅಂತಿಮ ಯಾತ್ರೆ ಬೆಂಗಳೂರಿಗೆ ಹೋಗಿ ಬಂದರೂ ಮೈಸೂರಿಂದಾ ಪ ಬೆಂಗಳೂರಿಗೆ ಹೋಗಿಬಂದ ಜಂಗಮನು ತಾನಾಗಿ ನಿಂದಾ ಕಂಗಳೆರಡರ ಮಧ್ಯ ತಾ ನಿಜ ಲಿಂಗನಾಗಿ ಕಾಣಬಂದಾ ಅ.ಪ ಬಿದಿಗೆ ಪಾಡ್ಯವ ಮಾಡಿ ನೋಡೆಂದಾ ಬಂದಾಗ ಬರದಾ ವಿಧಿಯ ಬರಹವ ತೊಡೆದುಕೊಂಡೆಂದ ಕದಿವ ಕಳ್ಳರ ಕಂಡುಹಿಡಿದು ಮದನಪಿತನಾ ಯುಧದಿ ಹೊಡೆದೂ ನದಿಯ ಸ್ನಾನವ ಮಾಡಿ ನಿಜ ಪದವಿ ತೋರಿದ ನಮ್ಮ ದೇಶಿಕ 1 ಸೃಷ್ಟಿ ತದಿಗೆಯೊಳಿರಲು ಬೇಡೆಂದಾ ಅಲ್ಲಾಗ ತನ್ನ ಇಷ್ಟದೈವದ ಪೂಜೆ ಮಾಡೆಂದಾ ದೃಷ್ಟಿಗೋಚರಮಾದ ಗುರುವು ಸೃಷ್ಟಿಗಧಿಕಾ ತುಲಶಿರಾಮನ ಇಷ್ಟದಿಂದಲಿ ಭಜಿಸಿನೋಡಲು ಸ್ಪಷ್ಟನಾಗಿ ಕಾಣುತೈತೆ 2
--------------
ಚನ್ನಪಟ್ಟಣದ ಅಹೋಬಲದಾಸರು
(2) ಸರಗೂರು ರಂಗನಾಥನೇ ವೋ ರಂಗನಾಥನೇ ಪ ಅಂಗಜಕೋಟೀರನೆ ತಿಂಗಳಥರ ಜಂಗಮಂದಿರ ಮಂಗಳ ಹರಿ ಮಾಧವನೇ 1 ಶ್ರೀವರ ದಾಮೋದರ ನಿಜದೇವ ರಂಗನಾಥ 2 ಶರಣರನ್ನು ಪೊರೆಯುವ ತರುಣೀಮಣಿ ಕರುಣಾಕರ ಶರಣೆಂದೆನು ಸರಗೂರಿನ ರಂಗಾ 3 ವಂದಿಪೆ ಶ್ರೀ ತುಲಶಿರಾಮಾ ಸುಂದರಗಿರಿ ಯೆಂದಿಗೊ ನೀ ಬಾರೆಂದಿಪುದು ಮಂದರಧರ 4
--------------
ಚನ್ನಪಟ್ಟಣದ ಅಹೋಬಲದಾಸರು
(ಇ) ಆಳ್ವಾರಾಚಾರ್ಯ ಸ್ತುತಿಗಳು (1) ರಾಮಾನುಜರು ನಾದ ಮೂರರೊಳೆನ್ನೊಳು ನೀ ಕಂಡುಬಾರೊ ಪ ಆದಿ ಆನಾದಿಯ ಭೇದವೇನದು ತೋರಿ ನಾದಬಿಂದು ಕಳೆಯೊಳ್ ನೀ ಕಂಡುಬಾರೊ 1 ಪಂತಗೊಳಿಸಿ ಕೊಟ್ಟ ಪರಮದೇಶಿಕನೆ 2 ಮೂಲ ಪ್ರಣವ ಬ್ರಹ್ಮ ಬಾಲ ಬ್ರಹ್ಮಚಾರೀ ಕೋಲೂಪ್ಯಾಟಕಾ ಮಾಂ ಪಾಲ ತುಲಶಿರಾಮಾ 3
--------------
ಚನ್ನಪಟ್ಟಣದ ಅಹೋಬಲದಾಸರು
ಅಮ್ಮನಿಮ್ಮ ಮನೆಗಳಲ್ಲಿ ನಮ್ಮ ಕಂದನ ಕಾಣರೇನೆ ಪ ಸುಮ್ಮನೆ ಮಲಗಿರುಯೆಂದು ಗಮ್ಮನೆ ನಾ ನೀರಿಗೋದೆ ಈಮಹೀಪಾಲ ಶ್ರೀರಂಗಾ ಗಮ್ಯವಾಗಿ ಹೋದ ಕಣೇ 1 ನಿದ್ರೆಯ ಮಾಡುತ್ತಲಿದ್ದೂ ಕದ್ದು ಪೋದಾ ನಮ್ಮ ರಂಗಾ ಇದ್ದ ಮಾತಂತಿರಲಿ ಎನ್ನ ಮುದ್ದು ಕಂದಾ ಪೋದಾಕಾಣೆ 2 ಕದ್ದು ಬೆಣ್ಣೆ ಮೆದ್ದನೆಂದು ಸುದ್ದಿಯತಂದಾನು ಗುರುವೂ ಗೆದ್ದು ತುಲಶಿರಾಮಾದಾಸಾರಿದ್ದು ಪೋದಾರಂತೆ ಕಣೇ 3
--------------
ಚನ್ನಪಟ್ಟಣದ ಅಹೋಬಲದಾಸರು
ಅರಿತರೆ ಮನುಜ ನೀನಹುದಣ್ಣಾ ನಿಜ ದರಿವುಯಿಲ್ಲದೆ ಹ್ಯಾಂಗಹುದಣ್ಣಾ ಪ ಪರಮನಪ್ಪಣೆ ಹಿಂಗಿಹುದಣ್ಣಾ ಇದ ನರಿಯದೆ ಕೆಡುವೆ ನೀನಹುದಣ್ಣಾ ಅ.ಪ ಸಪ್ತ ಸಮುದ್ರವ ನಡೆಯಣ್ಣಾ ನಿನ ಗುಪ್ತದೆ ನಾಮವ ನುಡಿಯಣ್ಣಾ ಪ್ರಾ ಣಾಪ್ತನ ಕಂಡು ನೀ ಹಿಡಿಯಣ್ಣಾ 1 ಅಂಗಪುರೀಯೆನಬಹುದಣ್ಣಾ ಜಯ ಮಂಗಳ ನಾಯಕನಹುದಣ್ಣಾ ಜಂಗಮಗುರು ಹರಿತುಲಶಿರಾಮ ನಿಜ ಲಿಂಗನೆ ತಾನಹುದಹುದಣ್ಣ 2
--------------
ಚನ್ನಪಟ್ಟಣದ ಅಹೋಬಲದಾಸರು
ಏರ ರಂಗಕಿಷನ್ ದಾರಿ ಚೂಪರಾ ಮಾರ ಸುಂದರ ಪ ಮೊರೆ ಗಾಣರೆ ವಶವೊ ಮಾರಜನಕನೇ ಅ ಸುಜನ ಭಜಕನೆ 1 ರಾರಯನುಚು ಮೇರೆ ಮೂಮೆ- ಕರಿಯಲೇದೆರಾ ಕೋರ ಅನುಚು ತೇರೆ ಚರಣ-ಲೇದು ಕಾದುರಾ 2 ಓಡಿಬನ್ನಿ ಸುಜನರೆಲ್ಲ ಭಜನೆ ತ್ರಿಜಗ ಪೂಜಿತನೆಂಬೊ ಅಜನಪಿತನಗೂಡುವಾ 3 ಧರೆಯೊಳಧಿಕ ಮಧುರ ನಗರ ಪುರಿಯವಾಸನೇ ಯನ್ನ ಭವವಿನಾಶನೇ ಕೋಟಿ ರವಿಪ್ರಕಾಶನೆ ನಿನ್ನ ಚರಣ ಗುರುವು ತುಲಶಿರಾಮದಾಸನೇ 4
--------------
ಚನ್ನಪಟ್ಟಣದ ಅಹೋಬಲದಾಸರು
ಕರುಣಿ ಬಾರದೇಕೋ ನಿನ್ನ ಕಂದನ ಮ್ಯಾಲೆ ಪ ಶರಣು ನಿನ್ನ ಚರಣ ಸೇವೆಯೊಳಿರಿಸೊಯೆನ್ನನೂ ಅ.ಪ ಅರುಹುಯೆಂಬೋದೆನ್ನಾ ಮನದೊಳ್ ಇರಿಸಿ ಪಾಲಿಸೈ 1 ತರವೆ ನಿನ್ನ ಕರದೊಳಿಂದು ಬಿರುದು ಹೋಲಿಸೈ 2 ಪರಮಗುರುವು ತುಲಶಿರಾಮ ಧೊರೆಯೊಳಿರುವೆನೈ 3 ಇರಿಸಿ ಪಾಲಿಸೆಂದು ಬಂದು ಮೊರೆಯ ನಿಟ್ಟನೈ 4
--------------
ಚನ್ನಪಟ್ಟಣದ ಅಹೋಬಲದಾಸರು
ನಂದಿವಾಹನ ಸಖನೆ ಯೆಂದಿಗೆ ನೋಡುವೆ ನಿನ್ನಾ ಪ ಅರಿಗೆನಿನ್ನಾಚಾರ್ಯರಪ್ಪಣೆ ಹೊಂದಿಸುಖಿಸುತಿರುವೆನೊನಂದಿ ಅ.ಪ ರಂಗನಾಯಕನೆ ಬಾರೊ ರಾಕ್ಷಸಾಂತಕನಲ್ಲವೆ ಮಂಗಳಾಂಗ ಮಾತನಾಡೊ ಮಾಯಧಾರಿ ಕೇಶವ 1 ಸಾಟಿಯೇನಹುದೊ ಹರಿ ಸಾಧು ಶಿಖರನಲ್ಲವೆ ಆಟವಾಡುವ ಬಾಲನನ್ನು ಕರುಣದಿ ಕಾಯಲಿಲ್ಲವೆ2 ಕೋಲುಪ್ಯಾಟಿಯೊಳು ನಿನ್ನ ಕೋರಿ ಕೊಸರಿ ಕೂಗುವೆ ಮೂಲಗುರುವು ತುಲಶಿರಾಮಾ ದಾಸರ ಸೇವಕನಾಗುವೆ ಹರಿದಾಸರ ಸೇವಕನಾಗುವೇ 3
--------------
ಚನ್ನಪಟ್ಟಣದ ಅಹೋಬಲದಾಸರು
ನಾರದನು ನಮರರಶಿಕರ ನಂದನಂದನೆ ಗೋಪಿ ಕಂದನೇ ಪ ಬಾರದೆನಾ ಮನಸು ದುಷ್ಕøತ ಮೀರಲಾಪುದೇ ಸುಕೃತ ದೋರಲಾಪುದೇ ದಾಸ ತುಲಶಿರಾಮ ನಿನ್ನ ದಾಸನಾದೆನೋ ದೋಷರಹಿತನ ಮಾಡೆನ್ನ ಮೋಸಹೋದೆನೋ 1
--------------
ಚನ್ನಪಟ್ಟಣದ ಅಹೋಬಲದಾಸರು
ನಿನ್ನೊಳಗಿರಿಸೆನ್ನ ಚಿತ್ತ ಚೆಲ್ವ ಪನ್ನಗಶಯನ ಶ್ರೀ ಆದಿರಂಗಯ್ಯ ಪ ಪರನನ್ನೊಳಗೆ ನಾ ಕಂಡು ನಿನ್ನೊಳಗೆ ನಾನೈಕ್ಯ ಇನ್ನೆಂದಿಗಾಗುವುದೊ ಇನಕುಲದ ಮಣಿಯೆ 1 ಎಂಟಾರರೊಳಗೆನ್ನ ಅಂಟಲೆಸಗೊಡಬೇಡ ಭಂಟನಾಗಿರು ವೈಕುಂಠನಾಯಕನೆ 2 ಕಾಕುಲದ ಕತ್ತಲೆಗೆ ನೂಕದಿರು ನೀಯೆನ್ನ ಏಕನಾಯಕನೆ ಕೇಳಿದು ಸತ್ಯಸಿದ್ಧಂ 3 ದೇಶಿಕಾಯೇನಮಃ ದಾಸನಗಿರುತಿರುವೆ ದೋಷರಹಿತಾಗುರುವು ಶ್ರೀತುಲಶಿರಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು
ಪತಿಯಿಂದಲೆ ಸದ್ಗಿತಿಯೆಂಬುವಳು ಅತಿಮತಿಯೆನ್ನುವಳು ನಮ್ಮ ಶ್ರೀದೇವಿ ಪ ಕ್ಷಿತಿಯೊಳು ತನ್ನಯ ಪತಿಯೊಳು ಸಲ್ಲದೆ ಇತರವನೆಣಿಪಳೆ ಮೂದೇವಿ ಅ.ಪ ಗಂಡನು ಪುಂಡನು ಕುರುಡನು ಕುಂಟನು ಭಂಡಾಂಗನೆಯಂ ಕಲಹಿಪಳೆ ಮೂದೇವಿ 1 ಅತ್ತೆಮಾವನ ಹೇಳಿಕೆಗೆ ಪ್ರ ತ್ಯುತ್ತರಳಲ್ಲ ಶ್ರೀದೇವಿ ಕತ್ತೆಯಂತೆ ತಾ ಬಗಳುವ ಕಳ್ಳ ಚಿತ್ತಿನಿ ಹವುದೆಲೊ ಮೂದೇವಿ 2 ಅರಿಸಿನ ಕುಂಕುಮ ಹಣೆಯೊಳಗಿಡುವಳು ಅಡಿಯಾ ಗಿರುವಳು ಶ್ರೀದೇವಿ ಅನು- ಕರಿಸಲು ಬಾರದೆ ಕಳವಳಗೊಳುವಳು ಕರಠೆಕಮಾನಳು ಮೂದೇವೀ 3 ಶಿರಬಾಗಿ ತನ್ನರಸನ ಸೇವೆಯ ಹರುಷದೊಳಿರುಪವಳೆ ಶ್ರೀದೇವೀ ಕರಸಲು ಬಾರದೆ ಕಳವಳಗೊಳುವಳು ಕರಟಕ ತನುವಳು ಮೂದೇವೀ 4 ಇರುವ ಅತಿಥಿ ಅಭ್ಯಾಗತಗಳಿಗುಪ ಚರಿಸುವಳೆ ನಮ್ಮ ಶ್ರೀದೇವಿ ಗುರುವು ತುಲಶಿರಾಮಯೆಂದೆನ್ನುತ ಭಜಿಸದೆ ಯಿರುವಳೆ ಮೂದೇವೀ 5
--------------
ಚನ್ನಪಟ್ಟಣದ ಅಹೋಬಲದಾಸರು
ಬಲ್ಲೆನೇಳೊ ನಲ್ಲ ನಿನ್ನ ಬೆಲ್ಲಮಾತುಗಳನ್ನಾ ಪ ಅಲ್ಲ ಆಡಿದುದ್ದ ಆದೋದಮ್ಯಾ ಲೆಲ್ಲಿದು ಬರಿ ಸೊಲ್ಲದು ಬಿಡು ಅ.ಪ ಭಾಷೆನಿತ್ತೆ ಬರಸೆಂದೂ ಮೋಸಗಯ್ವಯ್ಯೋ ರಂಗಾ ಆಶೆಯಂ ತೀರಿಸೆನ್ನಯ ನಿಜ ಭೂಸುರಗಣ ಭಾಸುರಮಣಿ 1 ಸುರತಕೇಳಿ ಸುಖದೊಳೆನ್ನಂ ಮರೆತು ಪೋದೆಯೊರಾಮಾ ಅರಿತೆನೇಳೊ ಚರಿತವನ್ನಾ ನಿರುತದಿ ಬರೆ ಗುರುತದು ಸರಿ 2 ಸುರಗಿರೀವರ ತುಲಶಿರಾಮ ನೀ ಸರಗೂರಿನ ಗುರುಕಾರನೆ 3
--------------
ಚನ್ನಪಟ್ಟಣದ ಅಹೋಬಲದಾಸರು
ಭವಗಳನು ಖಂಡಿಸೆಂದು ಬಂದು ಬೇಡಿದೆ ಪ ಅರುಹಿನೊಳಗೆ ಇರಿಸಿಯೆನ್ನ ಮರವೆಯನ್ನು ಅಳಿಸೊಮುನ್ನಾ ಪರಮ ನೀನೆಯಾಗಿಯಾ ನಿಜದರುಹ ತೋರಿಸೈ 1 ಅಣುವಿನೊಳಗೆ ಅಣುವೆಯಾದ ಪ್ರಣವ ಜ್ಯೋತಿಯನ್ನು ತೋರೊ ತ್ರಿಣೆಯ ನೀನೆಯಾದಡೆ ನಾಂ ಪ್ರಣಿತನಾಗುವೇ 2 ಮೂರು ಐದರಿವುಗಳನ್ನು ಮೀರಿಹೋಗುವಂಥ ಮನವಾ ನಾರಿಕೈಯೊಳ್ ಕೋಟ್ಯಾತಕಿಂತು ನಟಿಸುತಿರುವಿಯೋ 3 ಪಾರುಗಾಣಿಸಯ್ಯ ನೀ ಸಂಸಾರ ಶರಧಿಯನ್ನು ಶಂಭು ಕೋರಿಕೆ ಈಡೇರಿಸಯ್ಯ ಅಪಾರಲಿಂಗವೇ 4 ಪರಮ ತತ್ವೋಕ್ತಾಧಿಕಾರಿ ಸುರಮುನೀಂದ್ರಾಕಾಶಪತಿ ಗುರುವು ತುಲಶಿರಾಮನೆ ತ್ವಚ್ಚರಣ ಶರಣಯ್ಯ5
--------------
ಚನ್ನಪಟ್ಟಣದ ಅಹೋಬಲದಾಸರು
ಭುವನದೊಳಗೆ ಒಬ್ಬ ಶಿವಯೋಗಿನಾ ಕಂಡೆ ಅವತರಿಸಿರುವನದ್ಯಾರಮ್ಮಾ ಪ ತುಂಬಿ ನಡುನಾಡಿಯೊಳಗಾಡೊ ಪವನರೂಪನ ಬೇಗ ತೋರಮ್ಮಾ ಅ.ಪ ಉಪಜೀವಿಯನು ಕಂಡು ಉಷ್ಣಶೀತವನಳಿದು ತಪಸು ಮಾಡುವನ್ಯಾರದೇಳಮ್ಮಾ ಅಪಮೃತ್ಯುವನು ಕಂಡು ಆನಂದವನು ಬಿಟ್ಟಾ ವಿಪರೀತವೇನಿದು ಹೇಳಮ್ಮಾ 1 ಬುದ್ಧಿ ಮನಸು ಚಿತ್ತ ಅದ್ವಯವನು ಮಾಡಿ ಇದ್ದನಹುದು ಆತಾ ಕಾಣಮ್ಮಾ ಮದ್ಗುರುವಾದ ಶ್ರೀ ತುಲಶಿರಾಮದಾಸ ಪರೀಕ್ಷಿತ ಕಾಣಮ್ಮಾ 2
--------------
ಚನ್ನಪಟ್ಟಣದ ಅಹೋಬಲದಾಸರು
ಮಂಗಳಾರತಿಯು ನಮ್ಮ ಲಿಂಗವಿನುತಗೇ ನಮ್ಮ ಪ ಅಂಗನೆಯರೆಲ್ಲ ಕೂಡಿ ಅಚ್ಯುತಾಯೈ ನಮಃ ಎನ್ನಿ ಅ.ಪ ವೇದಕಾದಿಪ್ರಣವವೆಂದು ಬೋಧಿಸಿದನುಶಿವನುಉಮೆಗೆ ನಾದಬಿಂದುಕಳೆಯಗೂಡಿನ ನಾರಾಯಣನಿಗೆ ಮಂಗಳಂ 1 ಸುರರೂ ನರರೂ ಮುಖ್ಯಮಾದಾ ಗರುಡ ವಿಶ್ವಕ್ಸೇನರೆಲ್ಲ ಪರಮತತ್ವಮಹುದಿದೆಂದು ಯಿರುವೋತದ್ವಿಪಾದಗಳಿಗೆ2 ನಿರ್ವಿಕಲ್ಪ ನಿಶ್ಚಲಾತ್ಮ ಸರ್ವಲೋಕಸಾಕ್ಷಿಭೂತ ಗರ್ವಕಲನುಯೆಂಬೊ ನಾಮ ಉರ್ವಿಯೊಳಗೆ ವಹಿಸಿರುವಗೆ 3 ತತ್ವಗುರುವು ತುಲಶಿರಾಮ ಚಿತ್ಸುಖಾಂಶ ಶಿವಪ್ರಿಯನಿಗೆ 4
--------------
ಚನ್ನಪಟ್ಟಣದ ಅಹೋಬಲದಾಸರು