ಒಟ್ಟು 36 ಕಡೆಗಳಲ್ಲಿ , 15 ದಾಸರು , 35 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಥನಾತ್ಮಕ ಬಾಗಿಲಿಕ್ಕಿದ ಬಗಿಯೇನೆ | ಬೇಗ ಬ್ಯಾಗದಿಂದ ಪೇಳೆ ನೀನೆ | ನಾಗವೇಣಿಯೆನ್ನ ಕೂಡ ಜಾಗುಬ್ಯಾಡ ಬಾಗಿಲುತೆಗೆಯೆ ಪ (ಬಂದೆಯಾದರಿಂದಿನದಿನದಿ) | ಛಂದದಿಂದ ಪೇಳೊ ಮದದಿ ನಾಮವುಸಾರೊ ಮುದದಿ 1 ಅಚ್ಯುತಾನ ಇಚ್ಛೆಯಿಂದ | ಸ್ವೇಚ್ಛ ದೈತ್ಯರಾಳಿದೇನೆ ಮತ್ಸ್ಯರೂಪಗೈದುನಾನೆ | ಭೀಭತ್ಸು ರಾಯ ನಲ್ಲವೇನೆ 2 ಯೇಸು ಪೇಳಿದ್ರಿಗುಣವನ್ನು | ಈಸು ಮಂದಿಯೊಳು ನೀನು ಬೂಸುರಾಗೆ ಭಾಷೆಕೊಟ್ಟು | ಕೂಸೀನ ಕೊಡದಾವ ನೀನು 3 ಪಾರ್ವತಿಯ ಪತಿಯನೊಲಿಸಿ | ಪಾಶು ಪತಾಸ್ತ್ರವ ಗೆಲಿಸಿ ಪಾರ್ಥರಾಯನೆ ಪಾಂಚಾಲಿ 4 ಪಾರ್ಥರಾಯ ನೀನಾದರೇನು, ಕೀರ್ತಿಯೆಲ್ಲಾ ಬಲ್ಲೆನಾನು ಸ್ತೋತ್ರ ಮೂರುತಿ ತಂಗಿಗೀಗ | ತೀರ್ಥಯಾತ್ರೆಲಿ ಗೆಲಿಹೋಗೊ 5 ಫುಂಡತೊರೆವ ಗಂಡನಾನೆ | ಖಾಂಡವನ ದಹಿಸಿದೆನೆ ಗಂಡುಗಲಿ ವರಹನ ದಾಸಾ | ಗಾಂಡೀವರ್ಜುನ ನಲ್ಲವೇನೆ 6 ಧೀರ ನೀನಾದರೆ ಏನು ಭಾರಿ ಗುಣವೆಲ್ಲಾ ಬಲ್ಲೆನಾನು ಯತಿಯಾಗಿರು ಹೋಗೋ 7 ವಟುರೂಪನ್ನ ವಲಿಸಿದೆನೆ ಕಿರೀಟಿ ಅಲ್ಲವೆ ಕೃಷ್ಣಿನಾನೆ 8 ಕೋಟಿರಾಯಗೆ ಮೇಟಿ ನೀನು | ಮಾಟವಾದ ಮುಖದವನು | ಬೂಟಿತನದಿ ವಿರಾಟನಲ್ಲಿ | ಆಟವಾ ಕಲಿ ಸ್ಹೋಗೊ ನೀನು 9 ಘಾತುಕ ಕರ್ಮಗಳನ | ಖ್ಯಾತಿಯಿಂದ ಚೈಸಿದ್ದೇನೆ ಮಾತೆ ಅಳಿದಗೆ ದೂತನಾನು ಶ್ವೇತವಾಹನ ದ್ರೌಪದಿನಾ 10 ವಾಹನ ನೀನಾದರೇನು | ಖ್ಯಾತಿಯೆಲ್ಲ ಬಲ್ಲೆ ನಾನು ಜೂತದಲ್ಲಿ ಸೋತವ ನೀ | ಅಗ್ನಾತವಾಸದಲ್ಲಿರು ಹೋಗೋ 11 ವಿಪಿನಾವಾಸದಿಯುದ್ಧ | ವಿಪರೀತ ಮಾಡಿದೇನೇ ಶ್ರೀ ಪತಿ ಶ್ರೀ ರಾಮದೂತ, ಭೂಪ ವಿಜಯನಾ ವಿಮಲಾಂಗೀ 12 ಭಾಳ ಪೇಳಿದಿ ಗುಣವನ್ನು ಕೇಳಲಿಕೆ ಅಶಕ್ಯವಿನ್ನು ಭಾಳ ಹರುಷದಿಗೆಲಿ ಹೋಗೋ 13 ಮೀನು ಫಕ್ಕನೆ ಖಂಡಿಸಿದೆನೇ ಪತಿ ಶ್ಯಾಲ ನಾನು | ಹೆಚ್ಚಿನ ಸವ್ಯಸಾಚಿ ನಾನು 14 ದುಷ್ಟ ಕುರುಪಕಿಗೆ ಭಯವ ಬಿಟ್ಟು | ಶ್ರೇಷ್ಟ ಸ್ತ್ರೀ ವೇಷ ಬಿಟ್ಟು ಅಷ್ಟು ಜನರೊಳು ಗುಟ್ಟುತೋರದೆ | ಧಿಟ್ಟದ್ವಿಜನಾಗಿ ಹೋಗೊ 15 ಬೌದ್ದ ರೂಪಗೆ ಬಂಧು ನಾನು | ಪ್ರಸಿದ್ಧ ಕೃಷ್ಣ ನಾನಲ್ಲವೇನು 16 ಯುದ್ಧದಲ್ಲಿ ಪ್ರಸಿದ್ದನೆಂದು | ಸಿದ್ದಿಗಳನು ಹೇಳಿದಿಂದು ಮುದ್ದು ಬಬ್ರುವಾಹನನಲ್ಲಿ | ಬಿದ್ದ ಸುದ್ದಿಯ ಪೇಳೊ ಇಲ್ಲಿ 17 ಕಂಜ ಮುಖಿಕಲಿ ಭಂಜನಾನ ಮಾಯಾ ಕೇಳೆ ನಾರಾಯಣನಲ್ಲವೇನೆ 18 ವಜ್ರದಬಾಗಿಲು ತೆಗೆದು | ಅರ್ಜುನನಪ್ಪಿದಳ್ ಬಿಗಿದು ದೊಡೆಯಗೆ ಕೈಮುಗಿದು 19 ನಿರುತವೀ ಸಂವಾದ ಪಠಿಸಲು ಭರಿತವಾದ ಸುಖವೀವೊದು ವಿಠಲನ್ನ ನೆನೆಯೋದು 20
--------------
ಓರಬಾಯಿ ಲಕ್ಷ್ಮೀದೇವಮ್ಮ
ಆನಂದಕರಮಾದ ಇಂದಿರಾರ್ಯ ತವ ಧ್ಯಾನಾನಂದೆನಗೆ ದಯಪಾಲಿಸು ಪ ನೊಂದೆ ಭವದೊಳು ಬಿದ್ದು ಮಂದನಾಗಿ ತಿಳಿಯದೆ ಅಂದಮಾದ ತವ ಮಹಿಮೆಯ ದೇವ ಅ.ಪ ಕಾಣುವ ಜಗವೆಲ್ಲ ಏನೆಂಬ ನಿಜತವನು ನಾನರಿಯದೊರಲುತಿಹೆನು ನಾನಿಲ್ಲದಮೊದಲು ಏನಿತ್ತು ಎಂಬುದನು ನಾನೆಂತು ತಿಳಿಯುವೆನು ನಾನು ಯಾರೆಂಬ ನಿಜ ಖೂನವರಿಯದೆ ಬಲು ಹೀನತೆಗೆ ಬಂದಿದ್ದೆನು ನೀನೆ ಸ್ವತಂತ್ರಖಿಲ ದೀನಗರಿವಿಕೆ ನೀಡಿ ಜ್ಞಾನದಿಂ ಪೊರೆ ದಯದಿ ಜವದಿ 1 ಎಲ್ಲಿರ್ದೆಮೊದಲು ನಾನೆಲ್ಲಿಂದ ಬಂದೆ ಮ ತ್ತೆಲ್ಲಿಗೆ ಪೋಗುವೆನು ಎಲ್ಲಿರುವೆ ಈಗ ನಾನೆಲ್ಲಿಂದ ನುಡಿಯುವೆನು ಎಲ್ಲಿಗೆ ಕೊಡುವೆನು ಎಲ್ಲನಿಂದಿದರೊಳಗೆ ಇಲ್ಲದ್ದು ಕಲ್ಪಿಸಿ ಎಲ್ಲಿಂದ ಕಾಂಬುವೆನು ಎಲ್ಲಿಟ್ಟಿರುವಿದರ ಸಲ್ಲಲಿತ ಸೂತ್ರವನು ಪುಲ್ಲನಾಭ ದಯಪಾಲಿಸು ತಿಳಿಸು 2 ಆರೊಂದುಗೇಣಿನಾಪಾರ ಸೂತ್ರದಗೊಂಬೆ ಆರಿಂದಲಾಗಿಹ್ಯದು ಸೋರುತಿಹ್ಯ ಒಂಬತ್ತು ದ್ವಾರಹಚ್ಚಲು ಇದರ ಕಾರಣವೇನಿಹ್ಯದು ತೋರುವುವು ಇದರೊಳಗೆ ಮೂರುವಿಧಮಾಗಿ ಆರಸಾಕ್ಷದಕ್ಕಿಹ್ಯದು ತೋರದೇನೇನಿದರ ತಾರತಮ್ಯಜ್ಞಾನ ಸುವಿ ಚಾರ ಎನಗೊಲಿದು ತಿಳುಹು ಸಲಹು 3 ಕಾಲು ಕಯ್ಯಿಗಳಾಡಿ ಬೀಳುವೇಳುವ ಮೂಲ ಕೀಲಿಯೆಲ್ಲಿರುತಿಹ್ಯದು ಜ್ಯಾಲದಂದದಿ ಹರಕು ಚೀಲದೊಳು ತುಂಬಿರುವ ಗಾಳ್ಯೆಂತುನಿಂತಿಹ್ಯದು ಕಾಲಮಹಿಮ ನೀ ಗೈದ ಮೇಲುಯಂತ್ರದಿ ಇಂದ್ರ ಜಾಲವೇ ತುಂಬಿಹ್ಯದು ಕಾಲಚಕ್ರನ ಮಹ ದಾಳಿಯನು ಗೆಲಿಸಿ ತವ ಲೀಲೆಯೊಳೆನ್ನಾಡಿಸು ಪಾಲಿಸು 4 ಬಂಧರೂಪಕಮಾದ ದಂದುಗದ ಭವವು ದಾ ರಿಂದಲುತ್ಪತ್ತಿ ಯಾಯ್ತು ಸತಿ ಸುತರು ಬಂಧಬಳಗ ಎ ಲ್ಲಿಂದ ಬಂದಿವಗೆ ಜೊತೆಗೂಡಿತು ಒಂದಕ್ಕೊಂದರ ಸಂಬಂಧವೇ ಇಲ್ಲಿವಗೆ ಬಂಧ ಮತ್ತೆಲ್ಲೊದಗಿತು ನಿಂದುನೋಡಲು ಸಕಲ ತಂದೆ ಶ್ರೀರಾಮ ನಿನ್ನಿಂದ ಕಂಡು ನಿನ್ನೊಳೈಕ್ಯ ಮಾಯ ಖರೆಯ 5
--------------
ರಾಮದಾಸರು
ಇನ್ಯಾಕೆ ದೇವಿ ಮುನಿಸು ಮಾತಾಡೇ| ನಿನ್ನ ಹಿಡಿದ ಛಲ ಗೆಲಿಸಿದ ಬಳಿಕ ಪ ಘನ ಮಳೆಗರವ ಜೀಮ್ಯೂತಮ್ಯಾಲೇ|ತಾ| ಮುನಿಪ ಕೋಪದಿ ಪೋಗುತಲಿಹ| ಮನ ದೊಳಗಿದ್ದ ಚಾತಕನಂತೆ ನಿನ್ನ ಮ್ಯಾಲೆ| ವನರುಹ ನೇತ್ರ ನಾ ಮುನಿದುದು ಕಾಣೆ 1 ಸಂಗತಿಲ್ಲದೆ ನಿನ್ನಾಂಗ ನಟ್ಟುಳಿಯಿಂದ| ಭಂಗ ಗೊಂಡಿಹುದು| ತುಂಗ ಪಯೋಧರೆನ್ನಂಗ ತೋಷಿಸುವ ತಾ| ಲಿಂಗನ ಗೈಯೆ ನೀ ಮಂಗಳವದನೇ 2 ನಿನ್ನಿಂದಾಗಲಿ ಮತ್ತ ನನ್ನಿಂದಾಗಲಿ ಇನ್ನು ಮುನ್ನಾದ ಮನದ ಗಂಟು ಬಿಟ್ಟು| ಪನ್ನಗವೇಣಿ ಮಾತಾಡೇ ಸದ್ಗುಣದ ಸಂ| ಪನ್ನೇ ಮಹಿಪತಿ ಸುತಗೊಲಿದ ಶ್ರೀದೇವಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಚ್ಚರಾದರು ದೇವಗಣರಿಂದು ನಮ್ಮ ಲಕ್ಷ್ಮೀರಮಣ ಕೃಷ್ಣ ರಥವನೇರುವನೆಂದು ಪ. ಶಿಂಶುಮಾರ ಚಕ್ರದಂಶಮಕರ ತಿ- ಗ್ಮಾಂಶು ಸಂಕ್ರಮಿಸುವ ಸಮಯದಲಿ ಕಂಸಮರ್ದನ ಯದು ವಂಶಾಬ್ಧಿ ಚಂದ್ರ- ವಿಪಾಂಗಗಮನನಾಗಿ ವೀಧಿಗೆ ಬಹನೆಂದು 1 ಕಂದನ ಸಂಭ್ರಮ ತಂದೆಗೆ ಸುಖಕರ- ವೆಂದು ಪೇಳುವ ಮಾತ ನಿಜವ ದೋರಿ ಮಂದರಧರ ಮನ್ಮಥನ ಕೇತು ಬೆಳಗುವಾ- ನಂದದಿ ರಥವೇರುತ್ತಿಂದು ಬರುವನೆಂದು 2 ಮೋಕ್ಷದಾಯಕ ಕಮಲಾಕ್ಷ ಕೃಷ್ಣನ ಸ- ತ್ಕಟಾಕ್ಷ ಸಂಪಾದಿಪಪೇಕ್ಷೆಯಲಿ ತ್ರ್ಯಕ್ಷಾಧ್ಯಕ್ಷಲೋಕಾಧ್ಯಕ್ಷರೆಲ್ಲರು ಕೂಡಿ ಪಕ್ಷಿವಾಹನನನ್ನು ಈಕ್ಷಿಪ ತವಕದಿ 3 ಪೃಥೆಯ ಕುಮಾರನ ರಥವ ನಡಸುತತಿ- ರಥರನು ಗೆಲಿಸಿ ಸಾಮ್ರಾಜ್ಯವಿತ್ತ ಕಥೆಯ ಕೇಳ್ಪರ ಮನೋರಥಗಳ ಕೊಡುವ ಮ- ನ್ಮಥನ ಜನಕ ಮುಕ್ತಿ ಪಥವ ತೋರುವನೆಂದು 4 ಸಿದ್ಧಿ ವಿಘ್ನಮುಖ ದೋಷಭೇಷಜ ಭಕ್ತಿ ಸಿದ್ಧ ಜಪರಿಗೆ ಸಿದ್ಧಿಸುವನೆಂದು ಮಧ್ವಮುನಿಯು ತಂದಿಲ್ಲಿರಿಸಿ ಪೂಜಿಸಿದಂಥ ಸಿದ್ಧಾಂತವೇದ್ಯನಿರುದ್ಧನಿಲ್ಲಿಹನೆಂದು 5 ಧಾರುಣಿಯೊಳಗಿನ ವಿಷ್ಣುಭಕ್ತರ ಸಂಘ ಸೇರಿ ಸಂತೋಷದಿ ಜಯವೆನಲು ಪಾರಿವ್ರಾಜರು ಕೂಡಿ ಪರತತ್ವ ನುಡಿಯೆ ಸ- ರ್ಪಾರಿಯನೇರಿ ಸಮೀರೇಡ್ಯಬಹನೆಂದು 6 ಮಾಯಿಜನರ ಮುರಿದೊತ್ತುತ ತತ್ವರ- ಸಾಯನ ಸುಧೆಯ ಸಜ್ಜನರಿಗಿತ್ತು ವಾಯುಮುನಿಯು ಪ್ರತಿಷ್ಠೆಯ ಗೈದ ಪುರುಷಾರ್ಥ ದಾಯಕ ವೆಂಕಟರಾಯನೀತನೆಯೆಂದು 7
--------------
ತುಪಾಕಿ ವೆಂಕಟರಮಣಾಚಾರ್ಯ
ಎಲ್ಲಿರುವುದೋ ಸಿರಿವಲ್ಲಭನೆ ನಿನ ಗಲ್ಲದ ಕಾರ್ಯಗಳು ಪ ಕಲ್ಲಾಗಿದ್ದ ಅಹಲ್ಯಯೆ ನಿಮಿಷದಿ ಚಲ್ವೆಯ ಮಾಡಿದ ನಲ್ಲ ತ್ರಿಭುವನದಿ ಅ.ಪ ಶರಧಿಯೆ ವಾಸವು ಗರುಡನೆ ವಾಹನ ಉರಗಪತಿಯೆ ನಿನ್ನ ಪರಿಯಂಕ ಶರಧಿ ಕುಮಾರಿಯು ವರರಮಣಿಯು ಸುರ ವೀರರು ನಿನಗೆ ಕಿಂಕರರಾಗಿರಲು 1 ಕಂಬದಿ ಜನಿಸಿದೆ ಅಂಬಿಗರವಳನು ಸಂಭ್ರಮದಲಿ ನಿನ್ನ ಜನನಿಯೆನಿಸಿದೆ ಅಂಬುಜ ಮಿತ್ರನ ತನಯಗೆ ಮರುತನ ಬೆಂಬಲವರಿಯುತ ಉಳಿಸಿದೆ ಗೆಲಿಸಿದೆ 2 ಅಮಿತ ಕಾರ್ಯಗಳ ಕ್ರಮದಲಿ ನಡಿಸಿದೆ ವಿಮಲ ತನೋ ಸುಮನಸರೊಡೆಯನೆ ಕ್ಷಮಿಸಿ ಎನ್ನಯ ಮೋಹ ತಿಮಿರವ ತೊಲಗಿಸೊ ಸುಮನ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು
ಕಂತುಜನಕನ ನೆನೆಯಲೆ ಬರಿದೆ ಮನ ಚಿಂತಿಸಿ ಫಲವಿಲ್ಲಲೇ ಪ ಕುಂತಿಸುತರಪಾಲ ಸಂತಜನರ ಪ್ರೀಯ ಚಿಂತೆಯಳಿದು ನಿಶ್ಚಿಂತೆ ಪಾಲಿಸುವಂಥ ಅ.ಪ ಕೀಳುಯೋಚನೆ ಅಳಿಯೆಲೆ ವೈಕುಂಠನ ಶೀಲತನದಿ ಭಜಿಸೆಲೆ ಮೂಲಮಂತ್ರವ ಕೇಳೋ ನೀಲವರ್ಣನ ಜಪ ಕಾಲನ ಬಾಧೆಯ ಗೆಲಿಸಿ ಪಾಲಿಸುವಂಥ 1 ಕರಿಧ್ರುವರೆಂಬುವರೊ ಹರಿಹರಿಯೆಂದು ಸ್ಥಿರಮುಕ್ತಿ ಪಡೆದಿಹ್ಯರೊ ಹರಿಯೆಂದು ಪ್ರಹ್ಲಾದ ಪರಮಕಂಟಕ ಗೆದ್ದ ಹರಿಯೆಂದು ವಿಭೀಷಣ ಸ್ಥಿರಪಟ್ಟ ಪಡೆದನು 2 ವಾಸನಾದೇಹವಿದು ಶಾಶ್ವತವಲ್ಲ ನಾಶನಹೊಂದುವುದು ಬೇಸರಿಲ್ಲದೆ ಪಠಿಸೀಶ ಶ್ರೀರಾಮನ ಧ್ಯಾಸÀವ ಮರೆಯದಿರು ಹೇಸಿಭವವ ಗೆಲಿಪ 3
--------------
ರಾಮದಾಸರು
ತಿಳಿಯದೊ ನಿನ್ನಾಟ ತಿರುಪತಿಯ ವೆಂಕಟ ಪ. ನೀರೊಳು ಯಳವ ಮೋರೆಯ ನೆಳಲ ನೋಡುವಿ ಸುಳಿವರಂಬುಧಿ ಇಳೆಯನಾಳುವ ಭಳಿರೆ ಭಾರ್ಗವ ಖಳನ ಛೇದಿಸಿ ಕೊಳಲ ದನಿಯನು ನಳಿನಮುಖಿಯರಿಗೆ ನಾಚಿಸುವದಿದೊಳಿತೆಯೇಳು ಹವಣಗಾರನೆ 1 ಆರುಬಲ್ಲರು ನಿನ್ನ ಶ್ರೀ ಲಕ್ಷ್ಮಿಯ ಮನಸಿಗೆ ತೋರದಿಹ ಪರಬ್ರಹ್ಮ ಉಳಿದವರು ಬಲ್ಲರೆ ನೀರಜಾಸನ ಬೊಮ್ಮಾ ಇದು ನಿಮ್ಮ ವರ್ತಿ ಭಾರ ಬೆನ್ನಲಿ 2 ಭೂರಿ ಮಾರ ಜನಕನೆ ಮೆರಿವೆ ಕೋಮಲಾಂಗನೆ 3 ಸಕಲ ಮಾಯವಿದೇನೊ ತ್ರಿವಿಕ್ರಮನ ಪಾಲಿಸಿ ಸಕಲನುಳಿಹಿದೆ ನೀನು ಭಕುತಿಯಿಂದಲಿ ಸ್ತುತಿಪರಿಗೆ ಸುರಧೇನು ಸುಮನಸರ ಭಾನೂ ಅಖಿಳವೇದೋದ್ಧಾರ ಗಿರಿಧರ 4 ನಿಖಿಳ ಭೂಮಿಯ ತಂದ ನರಹರಿ ಯುಕುತಿಯಲಿ ಆಳಿದೆ ಭಕ್ತವೃಂದಕೆ ಸುಖವ ತೋರುವ ವೇಣು ಗೋಪಾಲನೆ ರುಕುಮನನುಜೆಯ ರಮಣ ಬೌದ್ಧನೆ ಲಕ್ಷುಮಿಯರಸನೆ ಕಲ್ಕಿ ರೂಪನೆ 5 ನಿನ್ನ ರೂಪವಿದೆಲ್ಲಾ ನೋಡುವರಿಗೆ ಕಣ್ಣು ಸಾಸಿರವಿಲ್ಲಾ ಪಾಡಿ ಪೊಗಳಲು ರಂನ್ನಘಾತಿದೆನಲ್ಲಾ ಕಂಣಮುಚ್ಚದೆ ಬೆಂನ್ನ ತೋರುವೆ ಮಂಣ ಕೆÉದಿರದಿ 6 ಚಿಂಣಗೊಲಿದನೆ ಸಂಣವಾಮನ ಪುಣ್ಯಪುತ್ರನೆ ಹಂಣುಸವಿದನೆ ಬೆಂಣೆಗಳ್ಳನೆ ಹೆಂಣುಗಳ ವ್ರತಗಳೆವ ಹೆಳವನಂದು ಗೆಲಿಸಿದ ರಂಗ ದೇವೋತ್ತುಂಗನೆ 7
--------------
ಹೆಳವನಕಟ್ಟೆ ಗಿರಿಯಮ್ಮ
ನರಹರಿ ಶರಣರಸುರತರು ಶ್ರೀಕರ ಹರಿ ನಿಮ್ಮ ಪಾದಸ್ಮರಣೆ ಮರೆಯಲಾರೆನೆಂದೆಂದು ಪ ಹರಿ ನೀನೆ ಗತಿಯೆಂದು ಮೊರೆಯಿಟ್ಟು ಸ್ಮರಿಪರ ಅರಲವ ಬಿಡದವರ ಸ್ಮರಣೆಯೋಳ್ನೆಲೆಗೊಂಡು ತೆರೆದು ಕರುಣಚಕ್ಷು ಪೊರೆವೆ ಎವೆಯಿಕ್ಕದೆ 1 ವೇದವೇದಾದಿ ನಮಿತ ಸಾಧುಸಜ್ಜನ ವಿನುತ ಪಾದದಾಸರ ಭವಬಾಧೆಗೆಲಿಸಿ ಸು ಹಾದಿ ತೋರಿಸಿ ಬಹು ಮೋದದಿಂ ಸಲಹುವಿ 2 ನೀ ಮಾಡಿದುಪಕಾರ ನಾ ಮರೆಯಲಾರೆ ದೇವ ಈ ಮಹಭವದು:ಖ ಕ್ಷೇಮದಿಂ ಗೆಲಿಸಿದಿ 3
--------------
ರಾಮದಾಸರು
ನಿಗಮ ಆಗಮಗೋಚರ ಜಗನ್ಮೋಹ ಜಗದೀಶ ಪಾಲಿಸು ಎನ್ನ ಪ ಖಗವರಗಮನ ಜಗದ ಜೀವನ ಪೊಗಳುವೆ ನಗಧರ ಅನಘನೆ ನಿನ್ನ ನಗೆ ಮೊಗದೋರೆನಗಗಲದೆ ಅನುದಿನ ನಗಜನಮಿತ ಮಿಗಿಲಗಣಿತ ಮಹಿಮ ಅ.ಪ ಕದನಕಂಠೀರವ ಉದಧಿಸದನ ಮಹ ಅಧಮಕುಲದ ಮದಸಂಹರ ಹದಿನಾರುಸಾವಿರ ಸುದತಿಯರ ಮನ ವಿಧ ವಿಧ ಸುಲಿದ ಸುಂದರ ಸದಮಲರಾಧೇಯ ಮದನಕದನದಿಂ ಕದಲದ ಆನಂದ ಮಂದಿರ ಕುದುರೆ ತಿರುವಿ ಪಾದಪದುಮದಾಸನ ಘೋರ ಕದನಗೆಲಿಸಿದ ಗಂಭೀರ ಯುದುಕುಲಪಾವನ ಮದನನಯ್ಯ ರಮಾ ಪದುಮಾವತಿಯ ಪಂಚಜೀವನಸದನ ಪದುಮವದನ ಸದಸದುಗುಣಗಳ ಸದ್ಹøದಯ ಉದಯ ಮುದ ವುದಯಾಗೆನ್ನೊದನದಿ1 ನಲಿದು ನಲಿದು ಪೊಂಗೊಳಲುನೂದುವ ಬಲುಚೆಲುವ ಚಿದ್ರೂಪನಾಟಕ ಒಲದು ಭಜಕಜನರ್ಹೊಲಬು ತಿಳಿವ ಚಿ ತ್ಕಳಾಭರಿತ ವಿಶ್ವವ್ಯಾಪಕ ಜಲಜಮಿತ್ರ ಕೋಟಿಕಳೆಕಿರಣಗಳಿಂ ಖಳಕುಲಭೀತ ಸುಫಲಪ್ರದ ಪರತರ ಇಳೆಮಂಡಲತ್ರಯ ಪಾಲಕ ಕಲಿಮಲಹರ ನಿರ್ಮಲನಿಜಚರಿತ ಮಲಿನ ಕಳೆದು ನಿರ್ಮಲನೆನಿಸೆನ್ನ ಒಲಿದುಪಾಲಿಸು ಸ್ಥಿರ ಚಲಿಸಿದಚಲಮನ ಸುಲಭಭಕುತ ಬಲ ವಿಲಿಸಿತಕರುಣಿ 2 ಸಿಡಿಲುಕೋಟಿಸಮ ಫಡಫಡಸ್ತಂಭವ ಒಡೆದು ಮೂಡಿದ ತ್ರಿವಿಕ್ರಮ ಕಡುರೋಷದಿ ಕೆಂಗಿಡಿಗಳನುಗುಳುವ ಕಡುಗಲಿಗಳಗಲಿ ನಿಸ್ಸೀಮ ಘುಡುಘುಡಿಸುತ ಆರ್ಭಟಿಸುತ ದುರುಳನ ಒಡಲಬಗಿದ ಕಡುಪರಾಕ್ರಮ ಗಡಗಡ ನಡುಗುವ ದೃಢತರ ಬಾಲನ ಪಿಡಿದು ಪೊರೆದ ಭಕ್ತ ಸುಖಧಾಮ ಉಡುಮಂಡಲ ವರಗಡರಿದ ಶಾಪವ ತಡೆಯದೆ ಹಡೆಹಾಯ್ಸ್ಹಿಡಿದೆಲೋಕವರ ಜಡಜಭವ ತೊಡರನು ಗಡ ಕಡಿದೆನ್ನಯ ನುಡಿಯೊಳೊಡೆದು ಮೂಡು ಒಡೆಯ ಶ್ರೀರಾಮ ಪ್ರಭು 3
--------------
ರಾಮದಾಸರು
ನಿನ್ನ ಬಗೆ ಬಗೆ ರೂಪಗಳ ಉರಗ ಶಯ್ಯ ರಂಗಯ್ಯಾ ಪ ದಿತಿಸುತ ಸೋಮಕ ಶ್ರುತಿತತಿ ಕದ್ದೊಯ್ಯೆ ಶತಧೃತಿ ತಲೆವಾಗಿ ಚತುರತೆÉಯಿಂದಲಿ ಮತಿಪತಿ ಮತ್ಪಿತಾ ಪ್ರತಿಪತಿ ಕಲ್ಪಕ್ಕೆ ಗತಿಸ್ಥಿತಿ ನೀನೆಂದು ಅತಿ ತುತಿಸಲು ಸಂ ತತ ಹಿತ ಹಿರಿದಾಗಿ ಪ್ರತಿಯಿಲ್ಲವೆನಿಸಿದ್ದು ರಿತ ಪುಂಜದಾನವನ ತರಿದೊಟ್ಟಿ ಮತ್ಸ್ಯಾಕೃತಿಯಾ ಜಯ ಜಯವೆನುತಿರೆ ತ್ರಿಭುವನಾ 1 ಕೃತು ಭುಕು ದೇವಾರಿತತಿ ಸಂಗತಿಯಿಂದ ಮತಿ ಏಕರಾಗಿ ಸಂಮತದಿಂದ ನಡೆದು ಪ ರ್ವತವ ಕಿತ್ತಿ ತಂದು ಉ ನ್ನತವಾದ ಕ್ಷೀರೋದ ಪತಿಯೊಳಗಿಟ್ಟು ಅತಿಬಲದಿಂದ ನಗುತ ಮಥಿಸಲು ಮಹಾ ಕ್ಷಿತಿಧರ ಮುಣಗಿ ಪೋಗೆ ಹಾಹೋ ಎಂದು ಗತಿಗೆಟ್ಟ ಯೆಲ್ಲ ಕೂಗೆ ಕೇಳುತ ಬಂದು ಅತುಳ ಕಮಠನಾಗಿ ಪೊತ್ತೆ ಭಳಿರೆ ಮಿಗೆ2 ಗತಮಂದ ಮಾರೀಚ ಸುತ ಹೇಮನೇತುರಾ ಕ್ಷಿತಿಯ ಕದ್ದೌಯಿದು ದುರ್ಮತಿಯಿಂದ ವಿಬುಧÀರ ಖತಿಗೊಳಾಗೈಸಿ ಹಿಗ್ಗುತಲವ ತಿರುಗುತ್ತ ಪ್ರತಿಕೂಲನಾಗಿ ಸುವ್ರತಗಳ ಕೆಡಿಸುತ್ತ ಮಿತಿ ಮೀರಿ ಪಾತಾಳ ವಾಸವಾಗಿರಲು ಅದ್ಭುತ ಕಿಟಿ ರೂಪವಾಗಿ ರುತಲಿರೆ ಸತತಮರರು ಪಾಡೆ ಏನೆಂಬೆ ಶಿರವಾಗಿ 3 ಚತುರ ಮೊಗನವರನುತಿಸಿ ಪಡೆದು ಪ್ರಾಗ ರ್ವಿತನಾಗಿ ನೀಲಲೋಹಿತನ ಭಕುತಿಯಿಂದ ತತುವೇಶಜನರ ಶಕುತಿ ಕುಂದಿಸಿ ತಾನೆ ರತುನ ಗರ್ಭದೊಳು ದೇವತಿಯೆಂದು ಸಾರಿ ಬಾ ಳುತ್ತ ತನ್ನಾತ್ಮಜ ಭಾಗವತನ ಭಾಧಿಸಿ ಶಿರಿ ಗತಿಯೆಂದು ವಂದಿಸಲೆ ಕಂಭದಿ ಬಂದು ಸುರರು ಪೂಮಳೆ ಚೆಲ್ಲೆ 4 ಸುತಳ ಲೋಕಕ್ಕೀಶ್ವರ ಶತಕೃತ ಕವಿಯ ರಚಿಸಿ ಸಿತನಾಗಿ ರಥ ನನ್ನ ಚ್ಯುತ ಪದಸ್ಥನ ಮಾಡಿ ಸತುವ ಮಾರ್ಗದಲಿ ಪೂರಿತ ಭಾಗ್ಯತನದಲ್ಲಿ ಕೃತಕಾರ್ಯನಾಗಿರೆ ರಿತಮದದಲಿ ತಾ ನುತಿಸಲಾದಿತಿಯ ಗರ್ಭದಲ್ಲಿ ಜ ವಿತರಣೆ ನೆವದಿ ನಿಂದು ಭೂಮಿಯ ಕೊಂಡಜ ತತಿ ವಿಕ್ರಮತೀರಿತವಾದ ದಯಾಸಿಂಧು 5 ಸೂನು ಪೂಜಿತನಾಗಿ ಮುನಿಯಿಂದ ಪಿತನಗೋಸುಗ ಉಗ ಳುತ ರೋಷ ಕಿಡಿಗಳಾದ ಈರೈದು ಬಾಹೋ ದ್ವಿತೀಯ ಜಾತಿಯವನ ಹುತವ ಮಾಡಿದ ಗಂಭೀರಾ ನಿ ರುತ ಸತ್ಯವತಿ ನಂದನಕುವರ ಪರುಶ ಪಾಣಿ ಮೃತ ಜೀವಿಗಳ ಬದುಕಿಸಿದ ಮಹಾಧೀರಾ 6 ಚತುರಾತ್ಮ ಹರಿದೈವ ವೈವಸ್ವತ ಮನುಕುಲೋಧ್ಭವನಾ ಅನುಜ ಸಹಿತ ಪೋಗಿ ಮುನಿಯ ವಾ ರುತಿಯ ಮನ್ನಿಸಿ ಶಿಲಿ ಸತಿಯಳ ಮಾಡಿ ಭೂ ಪುರವಸಾರಿ ಪಿತನಾಜ್ಞ ತಿಳಿದು ಮಾ ರುತಿಯಿಂದ ಕಪಿಯ ವಿಗತಸಂತಾಪನ ಮಾಡಿ ಸೇತುವೆ ಕಟ್ಟಿ ಪತಿತರ ಶಿರ ಚೆಂಡಾಡಿ ಲಂಕಾನಗರ ಹಿತದಿಂದ ಭಕ್ತಗೆ ಪಟ್ಟಗಟ್ಟಿದÀ ನೋಡಿ 7 ಶತ್ರಪತ್ರಾರುಣ ದಳಾಯುತ ನಯನಾದೇವ| ತತಿ ವಂದ್ಯ ಗೋಕುಲ ಸ್ಥಿತಿ ಉದ್ಧಾರಕ | ಭಂಗ ಬಲಾ | ಚರಿತಪೂರ್ಣ ಕಂಸಾರಿ ಯುತ ಷೋಡಶಾಖ್ಯ ಯುವತಿಯರ ತಂದ ಅ| ಪ್ರತಿಮಲ್ಲ | ರತಿಪತಿ ಪಿತ ಫಲ್ಗುಣಗೆ ಭಾ | ಸಾರಥಿ ಎನಿಸಿ ಕಾಳಗದೊಳು | ಧೃತರಾಷ್ಟ್ರಜರ ಕೊಲ್ಲಿಸೆ ಸಭಯಲ್ಲಿ ಪರೀ | ಕ್ಷಿತಿನ ಉಳಿಹಿ ಕೀರುತಿ ಪೊತ್ತ ಗುಣರಾಶಿ 8 ವ್ರತದಿಂದ ಖಳರು ಧರಿತ ಸತ್ಕರ್ಮವ ಮಾಡೆ | ಗತಿಗೆಟ್ಟು ಸುರರ ಉಕುತಿಯಿಂದ ಕೈಮುಗಿದು | ಅಪ್ರಾಕೃತ ಕಾಯ ಶಿಶುವಾಗಿ || ಶ್ರುತಿ ಸರ್ವದಲಿ ಅನೃತವೆಂದು ತಿಳುಪಿ ಉ | ಚಿತ ಮಾರ್ಗದ ಬಿಡಿಸಿ ನಿ | ರ್ಜೀತ ಕಾರು ಪಾರ್ವತಿ ಪತಿಗೆ ಮಾರ್ಗಣವೆನಿಸಿ ತ್ರಿಪುರಾರಿಗೆ ಹುತಗೈಸಿ ಶಿವನ ಗೆಲಿಸಿ ವಿವಶಳನೆ ಪತಿವ್ರತೆಯರ ಲಜ್ಜೆಗೊಳಿಸಿದೆ ವಂಚಿಸೀ 9 ವಿಹಿತ ಧರ್ಮ ಮರೆದು | ಮಮತೆ ಜಾತಿ ಸಂಕರ | ವ್ರತದಲ್ಲಿ ನಾನಾ ದುಷ್ಕøತ ತುಂಬಿರಲು ದೇವತೆಗಳು ಮರುಗಿ ಅ | ರತರಾಗಿ ತುತಿಸಿ ತ್ವರಿತ ಸ್ವಭಾವದಲ್ಲಿ ನಿ | ಸಿತ ಖಡ್ಗಧರಿಸಿ ರಾ ಶೌರಿ | ಸುಕೃತ ನೆನೆವವರಿಗೆ ಭವಸಾಗರ ತಾರಿ10 ಶ್ರುತಿ ಶೀರ್ಷ ಶ್ರುತಿ ಉಪ | ಕೃತಿನಯ ಪಂಚಮ ಶ್ರುತಿ ಪಂಚರಾತ್ರಾ ಸಂ | ವತ ಮೂಲ ರಹಸ್ಯ | ತತುವಾದಿನಾಮನು | ಶ್ರುತಿಕಲ್ಪ ಕಥೆ ಸರ್ವ ಪ್ರತಿಪ್ರತಿ ವರ್ಣ ಸಂತತಿಯಲ್ಲಿ ನೀನೆ ವ್ಯಾ | ಪುತಮೂರ್ತಿ ಸಪ್ತ ಸಪುತ ಭುವನೇಶನೆಂದು ಅಚೌಧ್ಯರೊ ಪ್ಪುತ ಕೊಂಡಾಡುವರು ನಿಂದು | ಭಕುತಪೂ ಜಿತ ಕಾಯಾ ವಿಜಯವಿಠ್ಠಲನೆ ಪಾಲಿಸೊ ಇಂದು11
--------------
ವಿಜಯದಾಸ
ನೀನೆ ನಿಜಗುರುವಾಗುಎನಗೆ ಮಾಧವ ಪ ಮರವೆಯೆಂಬ ಪರದೆ ಹರಿದು ಅರಿವುಯೆಂಬಾಲಯದೊಳಿರಿಸಿ ದುರಿತಪರ್ವತ ತರಿದು ಪೊರೆಯುವ ಚರಣದಾಸರ ಭಾಗ್ಯನಿಧಿಯೆ 1 ಹೀನಸಂಸಾರೆಂಬುವ ಮಹ ಕಾನನದಿ ಬಳಲಿಸದೆ ಅನುದಿನ ಧ್ಯಾನಮೃತ ಪಾನಗೈಸುವ ಧ್ಯಾನಿಪರ ಮಹಪ್ರಾಣದರಸೇ 2 ಆವಕಾಲದಿ ಬಿಡದೆ ನಿಮಿಷ ಜೀವ ಭಕುತರ ಭಾವದ್ವಾಸಿಸಿ ಜಾವ ಜಾವಕೆ ಬುದ್ಧಿ ಕಲಿಸುವ ದೇವದೇವರ ದಿವ್ಯದೇವರೆ 3 ಸಕಲಕೋಟಿಮಂತ್ರಗಳಿಗೆ ನಿಖಿಲ ನೀನೆ ಆಧಾರನಾಗಿ ಅಖಿಲರೂಪದಿ ಜಗವ ಬೆಳಗುವ ಭಕುತಿದಾಯಕ ಸುಖದ ಶರಧಿಯೆ 4 ಸಾರಿ ಭಜಕರ ಭಾರವಹಿಸಿ ಘೋರಭವಸಾಗರವ ಗೆಲಿಸಿ ಧೀರ ಶ್ರೀಗುರುರಾಮ ಪ್ರಭುವೇ 5
--------------
ರಾಮದಾಸರು
ಪೂರ್ಣರೂಪನೆ ಎನ್ನ ಪೂರ್ಣ ಮನದಲಿ ನಿಂತು ಪೂರ್ಣಗೊಳಿಸಭಿಲಾಷೆಯ ಪ. ಪೂರ್ಣ ಚಂದ್ರನ ಕಾಂತಿ ಪೂರ್ಣಧಿಕ್ಕರಿಸುವೊ ಪೂರ್ಣ ಪ್ರಕಾಶ ಹರಿಯೆ | ನೀ ಪೊರೆಯೊ ದೊರೆಯೆ ಅ.ಪ. ಪೂರ್ಣಕಾಮನೆ ಸ್ವಾಮಿ ಪೂರ್ಣ ಆನಂದ ಸಂ- ಪೂರ್ಣ ಗುಣಗಣನಿಲಯನೆ ಪೂರ್ಣ ಭಕ್ತರದಾತ ಪೂರ್ಣ ಲಕ್ಷ್ಮೀಶಪ್ರೀತ ಪೂರ್ಣಭೋಧರ ವರದನೆ ಪೂರ್ಣ ಪ್ರಕಾಶ ನಿನ್ನ ಕಾಣದೆಲೆ ಕಂಗೆಡುವೆ ಪಾದ ನೀಡೋ 1 ಚಕೋರ ಪೂರ್ಣಚಂದ್ರನೆ ಭಕ್ತಿ ಪೂರ್ಣ ಶರಧಿಗೆ ಚಂದ್ರನೆ ಪೂರ್ಣ ಬಾಧೆಯಪಡುವೆ ಪೂರ್ಣಗೈಸೆನ್ನಭವ ಪೂರ್ಣಚಂದ್ರನೆ ತಾಪಕೆ ಪೂರ್ಣ ನಂಬಿರುವೆನೊ ಪೂರ್ಣದಯವನೆಗರೆಯೊ ಪೂರ್ಣ ಕೃಪೆ ಚಂದ್ರಿಕೆ ಈಗಲೇ | ಬೀರೆನ್ನ ಮೇಲೆ 2 ಪೂರ್ಣಚಂದ್ರನ ವಂಶ ಪಾವನವಗೈಯಲು ಪೂರ್ಣ ಯದುಕುಲದಿ ಜನಿಸಿ ಪೂರ್ಣ ಯುದ್ಧದಲಿ ಗೆಲಿಸಿ ಪೂರ್ಣ ರಾಜ್ಯವನಿತ್ತೆ ಪ್ರಾಣಿ ಹೃದ್ಗುಹವಾಸಿ ಪೂರ್ಣ ಶ್ರೀ ವೆಂಕಟೇಶ | ಶ್ರೀ ಶ್ರೀನಿವಾಸ 3 ಪೂರ್ಣತತ್ವಗಳಿಗೆ ಪೂರ್ಣ ಶಕ್ತಿಯನಿತ್ತು ಪೂರ್ಣಗೊಳಿಸಿದೆ ಸೃಷ್ಟಿಯ ಪೂರ್ಣತತ್ವಾಧಿಪತಿ ಪ್ರಾಣದೇವನ ಪ್ರಿಯ ಪೂರ್ಣ ಭಕ್ತರ ರಕ್ಷಕ ಪೂರ್ಣ ಮನೋರಥದಾತ ಜೀವನಂತರ ವ್ಯಾಪ್ತ ಜ್ಞಾನ ವಿಜ್ಞಾನದಾತ | ಸುಜನರಿಗೆ ಪ್ರೀತ 4 ಪೂರ್ಣ ಭೂಮಂಡಲಕೆ ಪೂರ್ಣ ಪ್ರಭು ನೀನೆಂದು ಪೂರ್ಣಬೋಧರು ನುಡಿವರೊ ಪೂರ್ಣ ದೇವತೆಗಳು ಪೂರ್ಣ ನಿನ್ನನು ಭಜಿಸಿ ಪೂರ್ಣ ಪದ ಪಡೆದಿರುವರೊ ಪೂರ್ಣ ಹರಿ ಗೋಪಾಲಕೃಷ್ಣವಿಠ್ಠಲ ಎನ್ನ ಪೂರ್ಣ ಇಚ್ಛೆಯನೆ ಸಲಿಸೊ | ನೀ ಮನದಿ ನೆಲಸೊ5
--------------
ಅಂಬಾಬಾಯಿ
ಭಕುತೋದ್ಧಾರ ಪರಿಭವದ್ವೈದ್ಯ ನಿಖಿಲಬ್ರಹ್ಮಾಂಡ ಸುಸೂತ್ರ ಸಿರಿಬಾಧ್ಯ ನಿಖಿಲವ್ಯಾಪಕ ನಿಖಿಲರಕ್ಷ ಭಕುತರಾತ್ಮಕ ಭಕುತಪಕ್ಷ ಪ್ರಕಟರಕ್ಕಸಕುಲ ನಿರ್ಮೂಲನೆ ಮುಕುಟಮಾನಸ ಮನದಿ ಭಜಿಪರ ಮುಕುತಿದಾಯಕ ಮಣಿವೆನೈ ಮಹ ಮುಕುತಿಸಂಪದ ಕರುಣಿಸಭವ ಪ ಕಲ್ಪನೆಯಿಂದೊಂದೆತ್ರಯವೆನಿಸಿ ಕಲ್ಪ ಕಲಿಸಿ ಕಲ್ಪನೆಯಿಂದ ನಾಲ್ಕುಘೋಷ ರಚಿಸಿ ಕಲ್ಪನಿಲ್ಲದೆ ಕಲ್ಪಕಲ್ಪದರರ್ಹೊಗಳಿಸಿ ಕಲ್ಪಿತದಿ ನೆಲಸಿ ಕಲ್ಪಿತದಿ ಸಂಕಲ್ಪ ತೋರಿಸಿ ಕಲ್ಪಿತದಿಂ ಸಂಕಲ್ಪ ಮುಳುಗಿಸಿ ಕಲ್ಪ ಕಲ್ಪಾಂತರದಿ ಉದಿಸಿ ಕಲ್ಪತಕೆ ನೀ ಬೇರೆಯೆನಿಸಿ ಕಲ್ಪನದೊಳು ಕಲ್ಪ ಕೂಡಿಸಿ ಕಲ್ಪನಕೆ ಮಹಪ್ರಳಯವೆನಿಸಿ ಕಲ್ಪನೆಯನು ಮತ್ತು ತಿರುಗಿಸಿ ಕಲ್ಪಿಸಿದಿ ಪುನ:ಸಫಲವೆನಿಸಿ ಕಲ್ಪನೆಯನು ಪೊಗಳಲಿನ್ನಾವ ಕಲ್ಪನಕೆ ತುಸು ಶಕ್ಯವಲ್ಲವು ಕಲ್ಪ ಕಲ್ಪಾಂತರದಿ ಎನ್ನನು ಕಲ್ಪಿಸದಿರು ಕಲ್ಪತರುವೆ 1 ಕಲ್ಪಿಸಿದೆ ಕೋಟಿ ತ್ರಿದಶತ್ರಯೆನಿಸಿ ಕಲ್ಪ ಕಲ್ಪಕೆ ಕಲ್ಪಿತೀಯುವ ಮಂತ್ರ ಕಲ್ಪಿಸಿ ಕಲ್ಪಿಸಿದಿಯೊ ಕಲ್ಪ ಕಲ್ಪದಿ ಐದು ಮೇಲೆನಿಸಿ ಕಲ್ಪಸಾರೆನಿಸಿ ಕಲ್ಪನೆ ಮಹತಾರಕೆನಿಸಿ ಕಲ್ಪನೆ ಘನಗಾಯತ್ರೆನಿಸಿ ಕಲ್ಪನೆಯಲಿ ಸ್ಥೂಲವೆನಿಸಿ ಕಲ್ಪನೆ ಬಹುಸೂಕ್ಷ್ಮವೆನಿಸಿ ಕಲ್ಪನೆಯ ಮಹಕಾರಣೆನಿಸಿ ಕಲ್ಪನದಿ ಈ ಕಲ್ಪವಿರಿಸಿ ಕಲ್ಪನಕೆ ನೀನೆ ಸೂತ್ರನೆನಿಸಿ ಕಲ್ಪನಕೆ ನೀನೆ ಚೈತನ್ಯನೆನಿಸಿ ಕಲ್ಪ ಕುಣಿಸುವಿ ಕಲ್ಪನಿಲ್ಲದ ಕಲ್ಪದ ನೆಲೆಬುಡ ನೀನೆನ್ನಯ ಕಲ್ಪನೆಯೊಳುದಯನಾಗಿ ಕಲ್ಪನೆಯ ಕಡೆಗಾಣಿಸಭವ 2 ಕಲ್ಪ ಕಲ್ಪಕೆ ಆಚೆ ನೀನೆನಿಸಿ ಕಲ್ಪ ನಿರ್ಮಿಸಿ ಕಲ್ಪ ಕಲ್ಪದಿ ನೀನೆ ಆವರಿಸಿ ಕಲ್ಪ ನಡೆಸಿ ಕಲ್ಪ ಕಲ್ಪದಮೂಲ ನೀನೆನಿಸಿ ಕಲ್ಪದಿಂ ನುಡಿಸಿ ಕಲ್ಪದಲಿ ಮಿಥ್ಯಕಲ್ಪ ಪುಟ್ಟಿಸಿ ಕಲ್ಪದಲಿ ನಿಜಕಲ್ಪ ಸೃಷ್ಟಿಸಿ ಕಲ್ಪದಿಂ ತ್ರಿಕಲ್ಪ ರಕ್ಷಿಸಿ ಕಲ್ಪದಿಂ ಕಲ್ಪಕ್ಕೆ ಶಿಕ್ಷಿಸಿ ಕಲ್ಪವೇ ಮಹ ಮಾಯವೆನಿಸಿ ಕಲ್ಪದಿಂದಲೇ ಅದನು ಗೆಲಿಸಿ ಕಲ್ಪದಿಂ ಕಲ್ಪವನು ಬೆಳಗಿಸಿ ಕಲ್ಪದಿಂ ಕಲ್ಪವನು ತೊಲಗಿಸಿ ಕಲ್ಪನರಿಯುವ ಕಲ್ಪಕೆ ಮಹ ಕಲ್ಪನಿದು ಬಹು ಸುಲಭವೆನಿಸಿ ಕಲ್ಪಿತದಿಂ ರಕ್ಷಿಸುವ ಮಮ ಕಲ್ಪನಿಲ್ಲದವರ ಶ್ರೀರಾಮ 3
--------------
ರಾಮದಾಸರು
ಭಕ್ತಿಲೇಸು ಮುಕ್ತಿಗಿಂತಲಿ ಪ ಭಕ್ತಿಲೇಸು ಮುಕ್ತಿಗಿಂತಲಿ | ಭಕ್ತಜನರಾ ಪಾಲಿಸುವನಾ | ಭಕ್ತಿಗೊಲಿದು ಫಣಿಗಣ ಲೋಕದಿ | ಯುಕ್ತಬಲಿಯ ಬಾಗಿಲಲೊಳಿಹ ರಂಗಯ್ಯನಾ | ಸುರಪ್ರೀಯನಾ ಮುನಿಧ್ಯೇಯನಾ 1 ಸರಸಿಭವನ ಕಠಾರದಿಂದ ಲೋಗದನಾ | ಅರಸೆನಿಪನಾ ತನುಭವನಾ | ಧರಿಸಿದನಾ | ಅರಸಿಯ ಜನಕನ ಕುಲರಿಯನಿಪನಾ | ಕುವರನ ಸ್ಯಂದನ ವಾಜಿಯನು ಪೊರೆದನಾ | ಗೆಲಿಸಿದನಾ | ಮೆರಿಸಿದನಾ 2 ವನರುಹಸಖನ ಪೊಂದೇರ ನಡೆಸುತಿಹನಾ | ಅನುಜನಾ ಅರಿಗಳಾ ಹರಿಯ ನಂದನನಾ | ಘನವಾಲದಿಂದ ನೊಂದಿಹ ಪುರದರಸನಾ | ಅನುಜನಾ ಸ್ಥಿರಪದವಿತ್ತು ನುಳುಹಿದನಾ | ನಿಲಿಸಿದನಾ | ಕಾಯ್ವನಾ 3 ಸಿರಿಯ ಮದನಳಿದು ಗುರುಚರಣಕೆ ಹೊಂದಿ | ದೊರಕಿ ನಿತ್ಯದಲಿ ಸಂತುಷ್ಟವಿರುತಾ | ಗುರುವರ ಮಹಿಪತಿ ಸ್ವಾಮಿಯ ಷೋಡಶ | ಪರಿಯಲಿ ತುಳಸಿಯ ತಂದು ಪೂಜೆ ಮಾಡುವ | ಪಾದ ನೋಡುವಾ | ಪಾಡುವಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭೇದವ ಮರೆಸಿದ ನಮ್ಮಯ್ಯ ಸು ಸಾಧನ ತಿಳಿಸಿದ ಪ ಭೇದ ಮರೆಸುತ ವಾದನೀಗಿಸಿ ಪರ ಸಾಧನದ ನಿಜಹಾದಿಗೆ ಹಚ್ಚಿದ ಅ.ಪ ಮಂದಮತಿಯ ತರಿದ ಎನ್ನಯ ಭವ ಬಂಧ ಪರಿಹರಿಸಿದ ಕುಂದುವ ಜಗಮಾಯದಂದುಗ ಗೆಲಿಸಿದ ಕಂದನೆಂದುದ್ಧಾರಗೈದ ತಂದೆ ಸಿಂಧುಶಾಯಿ 1 ಜ್ಞಾನಕೆ ಹಚ್ಚಿದ ಎನ್ನದೆ ನಿಜ ಧ್ಯಾನವ ಪಾಲಿಸಿದ ನಾನಾಯೋನಿಯೊಳು ಜನಿಸಿ ಜನಿಸಿ ಬಹ ಹಾನಿಯಿಂದುಳಿಸಿದ ದಾನವಕುಲಹರ 2 ಏನೆಂದು ಬಣ್ಣಿಸಲಿ ನಮ್ಮಯ್ಯನ ಆನಂದದ ಕೀಲಿ ತಾನೆ ಒಲಿದಿತ್ತೆನ್ನಗಾನಂದಮಯಾಂಬುಧಿ ದೀನಜನಾಪ್ತ ಮಮಪ್ರಾಣ ಶ್ರೀರಾಮಯ್ಯ 3
--------------
ರಾಮದಾಸರು