ಮಾನವ ಪ
ಸ್ಮರಿಸಿ ಜೀವಿಸು ರಂಗವಲಿದ ದಾಸರ ಪಾದ
ಶರಧಿ ಚಂದಿರನಾದ
ಮೊರೆ ಹೊಕ್ಕ ಶರಣಘುಕರಿಗೆ ಕೇಸರಿಯಾದ
ಪರಮ ಸಾಧು ಸಹ್ಲಾದ ಅ.ಪ
ತರಣಿ ತನಯನ ಸೂತ
ಪುರಂದರಾರ್ಯರ ಗೃಹದಿ ತರಳನೆಂದೆನಿಸಿದಾತ
ಮರುತ ದೇವನ ಪದಕೆ ಬರುವ ಯತಿಗಳ ದೂತ
ವರದೇಂದ್ರ ತೀರ್ಥರಿಗೆ ಪ್ರೀತ ||
ಗುರುಧೇನು ಪಾಲ ವಿಜಯ ದಾಸವರ್ಯರ ಮಮತ
ಭರಿತನಾಗುತ ಪೋಗಿ ಹರಿಣಾಂಕ ಭಾಗದಲಿ ತ್ವರಿತ
ಸಿರಿ ಜಗನ್ನಾಥ ವಿಠಲಾಂಕಿತ ಪಡೆದಾತ
ನಮಗೀತ ಗತಿ ಪ್ರದಾತ 1
ದುರಿತ ವಿದೂರ
ಮೂರ್ಹತ್ತು ಶರಯುಗ್ಮ ಗ್ರಂಥಗಳ ಸುವಿಚಾರ
ತೋರಿ ಬರುತಿಹ ದಿವ್ಯ ಹರಿಕಥಾಮೃತಸಾರ
ಸಾರಿದಂಥ ಸುಧೀರ ||
ಕಾರುಣ್ಯದಲಿ ಪೊರೆವ ಧರಣಿಸುರ ಪರಿವಾರ
ಸುಜನ ಕೋರಿಕೆಯ ಮಂದಾರ
ಭೂರುಹದ ತೆರದಿ ಘುನ ಸೂರೆ ಕೊಡುವನುದಾರ
ದುರಿತವಿಪಿನ ಕುಠಾರ 2
ಇವರ ಕವನ ಪಠಣ ಶ್ರವಣ ಮನನಗಳಿಂದ
ಲವಕೇಶವಾಗದು ಜವನ ಭವನದ ಬಂಧ
ಅವಿವೇಕತಮದಿ ವರಚರಿತೆ ತಿಳಿಯದೆ ನಿಂದೆ
ಗೈದ ಮನಜ ದಿವಾಂಧ |
ಭುವನದೊಳು ಬೆಳಗುತಿಹ ಇವರ ಮಹಿಮಾನಂದ
ವಿವರಿಸಲು ಎನಗೊಶವೆ ಅವನಿಯೊಳು ನಾ ಮಂದ
ಇವರ ಸನ್ನಿಧಿಯಲ್ಲಿ ಸಕಲ ನದಿಗಳ ವೃಂದ
ನೆಲಸಿಹವು ನಲವಿಂದ 3
ಮೆರೆವ ಮಾನವಿ ಪುರದಿ ಇರುವ ಸ್ತಂಭದಿ ಜಾಣ
ಎರಡೆರಡು ಸಚ್ಛಾಸ್ತ್ರವರಿತ ಘನ್ನ ಪ್ರವೀಣ
ಪರವಾದಿಗಳ ವಾಗ್ಧುರದಿ ಗೆದ್ದ ಧುರೀಣ
ಹರಿಗೆ ಪಂಚಪ್ರಾಣ ||
ಅರುಹಲೇನಿವರ ಚರಣನಂಬಿದ ಸುಜನ
ಪರಮಭಾಗವತರೆನಿಸಿ ನಿರುತ ಹರಿಪದ ಧ್ಯಾನ
ಪರರಾಗಿ ಮೆಟುತಲಿ ಮುಕುತಿಪಥ ಸೋಪಾನ
ಸೇರಿದರು ನಿಜ ಸ್ಥಾನ 4
ಶಾಮಸುಂದರ ವಿಠಲ ಸ್ವಾಮಿಗತಿ ಪ್ರಿಯದಾಸ
ಶ್ರೀಮದಕ್ಷತೆ ಗಂಧ ನಾಮದ್ವಾದಶ ಭೂಷ
ತಿಮಿರ ದಿನೇಶ
ಭೂಮಿ ವಿಬುಧರ ಪೋಷ ||
ಈ ಮಹಾತ್ಮರ ಚಾರುಧವಲಕೀರ್ತಿಪ್ರಕಾಶ
ಸೋಮಸುಪ್ರಭೆಯಂತೆ ಪಸರಿಸುತÀ ಸಕಲದೇಶ
ಸುಜನ ಕುಮುದ ವಿಕಾಸ
ಗೊಳಿಸಿಗರೆದುದುಲ್ಹಾಸ 5