ಈತನೀಗ ಭಾರತೀಶನು ತನ್ನ ಪ್ರೀತಿಸುವರ |
ಮನದ ಮಾತು ಸಲಿಸಿ ಮುಕುತಿ ಈವ ಪ
ಶರಧಿ ಜಿಗಿದು ಹಾರಿ ಲಂಕಾಪುರವ ಶೋಧಿಸಿ |
ಹರಿಯ ರಾಣಿಗೆ ಕುರುಹನಿತ್ತು ಮರಗಳುರುಹಿ ||
ಮುರಿದು ಧರೆಗೆ ವರಿಸಿದಾತಾ ಅಪ
ಧುರದೊಳಕ್ಷನ ಹರಣವಳಿದು |
ಗುರುವರ್ಹತ್ತುಶಿರನ ಜರಿದು ||
ನಗರ ಉರುಪಿ ಮರಳಿ |
ಹರಿಯ ಚರಣಕ್ಕೆರಗಿದಾತಾ 1
ಕುರುನಿಕರ ಕರುಬಿ ಬೊ-|
ಬ್ಬಿರಿದು ನಿಂದುರವಣಿಸಿ ಎದುರಾ-||
ದರಿಗಳ ಶಿರ ತರಿದು ತಳೋ-|
ದರಿಯ ಹರುಷಬಡಿಸಿದಾತಾ2
ಕರಿಯ ತೆರದಿ ದುಷ್ಟ ಸಂಕರನು |
ತಿರುಗಲವನ ಮುರಿದು ಮತ್ತೆ ||
ಮರುತಮತದ ಬಿರುದನೆತ್ತಿ - |ಪರನೆ ವಿಜಯವಿಠ್ಠಲನೆಂದಾ 3