ಮುಕುತಿಯ ಮಾರ್ಗವ ಹಿಡಿಯಲಿಬೇಕು
ಭಕುತಿಯು ಮನದಲಿ ಮಾಡಲಿಬೇಕು ಪ
ಭಕುತರು ತುಳಿವ ಕಲ್ಲಾಗಿರಬೇಕು
ಲಕುಮಿಯ ರಮಣನ ದಯೆ ಬರಬೇಕು ಅ.ಪ
ನೊಂದವರನು ಸಂತೈಸಲಿಬೇಕು
ತಂದೆ ತಾಯಿಯರ ವಂದಿಸಬೇಕು
ಬಂದುದ ಮೋದದಿ ಪಡೆಯಲಿಬೇಕು
ಇಂದಿರೆಯರಸನೇ ಗತಿಯೆನಬೇಕು 1
ಸಂಗವು ಶರಣರದಾಗಿರಬೇಕು
ರಂಗನೊಳೇ ಮನ ತಂಗಿರಬೇಕು
ಭಂಗಿಸಿ ಕಾಮವ ವರ್ಜಿಸಬೇಕು
ಮಾಂಗಿರಿನಾಥನ ದಯೆ ಬರಬೇಕು 2