ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಥಮ ವಚನ ಕಾಂತಿಯಿಂದಿರುವ | ಚಕ್ರ ಪದುಮ ಗದೆ | ಅದರೊಳಗೆ ಬಿದ್ದಿರುವ ಪರಮಪವಿತ್ರ ತ್ಯುಬುಗಳ ತೆಗೆದು | ನೇತ್ರದೊಳಗೊತ್ತಿ | ಪರಿಮಳವಾದ ಗಂಧಗಳಿಂದ ಅಲಂಕೃತ | ಸಿರಿದೇವಿ ವರದೊಡೆಯ ಮೇಲಿದ್ದು | ಕರಕಮಲದಲೊತ್ತುವ | ದಿನವೆ ಪರಮ ಪುಣ್ಯೋದಯ ಪ ಪಾದ | ಸರಸೀರುಹ ಸರಸದಿಂ ಕೊಂಡಾಡಿ | ನೆರಳಿ ಮರಳೀ ಸೌಖ್ಯದಾನಂದ | ಶರಧಿಯೊಳು ಮುಣುಗಿ ಮುಣುಗಿ ಏಳುತ | ಸೌಖ್ಯದಾನಂದ ಭಕ್ತಿಭಾವಗಳಿಂದ ಕರುಣಾಳು ಕೃಷ್ಣ ತ್ವರಿತದಲಿ ತನ್ನ ಸೇವಕ ಜನರೊಳಗೆ | ಸೇರಿಪ್ಪ ನಾ ಅರಿಯನು ನಾನೊಂದು ಸ್ತೋತ್ರ ಮಾಡುವದಕ್ಕೆ | ವರವ್ರಜ ತರುಣಿಯರು ಏನು ಪುಣ್ಯವ ಮಾಡಿದರೊ | ಸರುವದಾ ಹರಿಯನ್ನು ಕಾಣುವರು ಕಂಗಳಲಿ | ಪರಿಹಾಸ್ಯ ನುಡಿಯಲ್ಲ | ಪರಮ ಪವಿತ್ರರಿಗೆ ದೊರೆ | ಸಿರಿ ವಿಜಯವಿಠ್ಠಲನು | ಕರವಿಡಿದು ಎನ್ನಭೀಷ್ಟವನಿತ್ತು | ಪರಿಪಾಲಿಸಬೇಕೆಂದು ಭಕ್ತ ಕೇಳಿದನು 1 ದ್ವಿತೀಯ ವಚನ ಜಲಜನಾಭನÀ ರಥದ ದಡದ ಮೇಲೆ ನಿಲ್ಲಿಸಿ | ಜಲದೊಳಗೆ ತಾ ಮುಳುಗಿ ಅಕ್ರೂರ ಕಣ್ಣು ತೆರೆಯೆ | ಕಲುಷವರ್ಜಿತನಾದ ಕೃಷ್ಣ | ಹಲಧರನ ಸಹ ಮೇಳ ಸಂಭ್ರಮದಿ | ಜಲದೊಳಗೆ ತಾ ಕಂಡು | ನಾ ಪೇಳಿದ ಮಾತು ನಡಿಸಿ | ಬಲವಂತದಲಿ ಬಿದ್ದ ಭವರೋಗ ವೈದ್ಯನ ಮಾತೆ | ಲಲನಾಮಣಿಗೆ ಏನು ಹೇಳುವೆನು | ಸುಲಭವಾಗಿ ಎಮಗೆ ಅಭೀಷ್ಟಪ್ರದವಿದು | ಎಂದೆನುತ ತಂದೆ ನಂದಗೋಪನು | ಯೋಚಿಸಿ ಮನದಲಿ ಚಿಂತೆಯಗೊಂಡು | ಹನುಮೇಶ ವನಜಾಕ್ಷ | ಘನಮಹಿಮ ಎನ್ನ ಮನದ ಚಿಂತೆಯನು ಹನನವ ಮಾಡಿ ಎನ್ನ ಕೈಪಿಡಿಯಲಾಗದೆ ಈಗ ಎನುತ | ಮೇಲೇಳೆ ಸನಕ ಸನಂದನ ಸನತ್ಕುಮಾರ ಸಹ | ವನಜ ಸಂಭವ ಜನಕ ವೈಕುಂಠಪತಿ ಕೃಷ್ಣ | ಕನಕ ರಥದ ಮೇಲೆ ನಿಂತಿದ್ದು ತಾ ಕಂಡು | ಕರವೆರಡು ಜೋಡಿಸಿ | ಭರದಿ ಭಕ್ತಿಯಗೊಂಡು | ನರಜನ್ಮ ಹುಳು ನಿನ್ನ ಮಹಿಮೆಗಳ ಅರಿಯದೆ | ಜಲದೊಳಗೆ ನೀ ಬಿದ್ದಿ ಎನುತಲೀ ಯೋಚಿಸಿದೆ | ಚರಣದ ಮಹಿಮೆಗಳ | ಮರಣದಲಿ ಅಜಮಿಳಗೆ ದಯಮಾಡ ಬೇಕೈ | ಅರ್ಭಕ ಪ್ರಹ್ಲಾದ ನಿಜಮುನಿ ಶುಕಾಚಾರ್ಯರಂತೆ | ಅಪ್ರಾಕೃತ ಅಕಲಂಕ ಚರಿತ ಅಮರೇಂದ್ರ ವಂದಿತ | ಪಾಲಾ ವಿಜಯನ ರಥವನ್ನು ಸಾರಥಿಯಾಗಿ ದಯಾಸಮುದ್ರ ವಿಜಯವಿಠ್ಠಲನೇ2 ತೃತೀಯ ವಚನ ಅರವಿಂದನಾಭ ಕೃಷ್ಣ ಅಖಿಲಜನ ಪರಿಪಾಲ | ಕೃಪಾ ಸಮುದ್ರ | ಕಳತ್ರ | ಪರಿಪಾಲಿಸಬೇಕೆನ್ನ | ಪಾವನ ಚರಿತ್ರ | ಸುರಪತಿಗೆ ಅಸುರರ ಬಲನೀಗಿ ಆ | ವಿರಂಚಿ ಬಳಿಗೆ | ಶರಣೆಂದು ವರವೊಂದು ಕೇಳಿದೆ ವೈಕುಂಠಪತಿ ಕೃಷ್ಣ | ಕಂಟಕ ಕಂಸಾದಿಗಳ ಗೆಲಿದು | ಪಾದ | ಸರಸಿಜದೊಳು ಚಿತ್ತವಿರುವಂದದಲಿ | ಪರಮ ದಯಾಕರ ನಿನ್ನ ಮಹಾ ಮಹಿಮೆಗಳ | ಗರ್ವಿಷ್ಠನಾಗಿ ಮಲಗಿದವನಲ್ಲಿ | ಕೇಳ್ವ | ತ್ವರಿತದಲಿ ದಯಮಾಡಿ | ಭರದಿ ಪಾಲಿಸಬೇಕೆನ್ನ | ಭಕ್ತಜನ ವತ್ಸಲನೆ ಎನಲಾ ಮಾತಿಗೆ | ಇನ ಇಂದಿರೆ ಅರಸ | ಹನುಮೇಶ ಕನಕಮಯವಾದ ಪೀತಾಂಬರ | ಜನಿವಾರ | ಅನೇಕ ಅತರಿಗಳ ಗೆಲಿವ ಕನಕಮಯ | ಕಿರೀಟ ಚತುರ್ಭುಜ | ಕಟಕ ರತ್ನಮಯದುಂ | ಗುರ ವಾಹನ ಚಕ್ರವರ್ತಿಗೆ ತನ್ನ ನಿಜರೂಪವ3 ಚತುರ್ಥ ವಚನ ಆನಂದತೀರ್ಥ ಮುನಿವಂದ್ಯ | ಜ್ಞಾನಿಗಳ ವಲ್ಲಭ | ದೀನಜನ ಮಂದಾರ ನಾ | ನಿನ್ನ ಮೊರೆಹೊಕ್ಕು ಧೇನಿಸಲರಿಯೆ | ಆನೆಯನು ಆದರದಿ ಕಾಯ್ದ ಶ್ರೀನಿವಾಸ | ಸಾನುರಾಗದಿ ಪ್ರಹ್ಲಾದಗೊಲಿದ ಶ್ರೀನಿಧಿ ನರಸಿಂಹ | ಅನಾದಿ ಕಾಲದಿ ತಂದೆ ಬಂಧು ಬಳಗವು ಎಂದೆ | ಮಾನಿನಿ ದ್ರೌಪದಿ ಮೊರೆ ಇಟ್ಟಾಗ ಧ್ವನಿ ಕೇಳಿ | ಮಣಿ ಲಕುಮಿಗ್ಹೇಳದೆ | ಆನಂದಮಯನು ಅಕ್ಷಯವಿತ್ತು ಆಗ ಪರಿಪಾಲಿಸಿದಿ ಅದರಂತೆ | ಮಾನಹೀನನೆಂದು ನಿರಾಕರಿಸದೆ | ಧ್ಯಾನಕ್ಕೆ ಒಳಗಾಗಿ | ಮೌನಿಜನರನು ಕಾವ ಕ್ಷೋಣೀಶ ಮಾಣಿಕ್ಯ ಮಕುಟ ಕುಂಡಲಧರ | ಸಿರಿ ತುಳಸಿ | ಪರಿಮಳ ಸಿರಿಗಂಧ ಉದರದಲಿ ಬೆಳಗುವ | ಉಪೇಂದ್ರ ನಾಮ ಕೃಷ್ಣ ಉರಗೇಶಶಯನಾ | ನಿನ್ನ ದಾಸರದಾಸನೆಂದೆನುತ | ಕಾಣಸಿ ನಿನ್ನ ನಿಜರೂಪ | ನಿನ್ನ ಸ್ತೋತ್ರ ಮಾಡುವ ಭಕ್ತಗಣದೊಳಗೆ ನಿಲ್ಲಿಸೊ | ನಿನ್ನ ಮತ್ತೊಂದು ಪದಾರ್ಥ ಕೇಳುವವನಲ್ಲ | ತೀರ್ಥ ತೀರ್ಥಗಳಲ್ಲಿ ಮುಳುಗಿ ಬಂದವನಲ್ಲ | ಸಾರ್ಥಕವಾದಂಥ ಕೃತ್ಯ ಮಾಡುವನಲ್ಲ | ಸಾಧುಜನಸಂಗದಲಿ ಸೇರಿ ಪಾಡಿದವನಲ್ಲ | ಈ ನುಡಿ ಸತ್ಯವೇ ಲೇಸು ಪುಸಿಯಲ್ಲ | ಮಲ್ಲಮಲ್ಲರ ಗೆಲಿದ ಮಾಧವನು ನೀನಲ್ಲದೆ ಇನ್ನೊಂದು ದೈವವಿಲ್ಲದ ಮಧ್ವ ಮುನಿ ಹೃದಯಾಟ್ಟ ಪೀಠದೊಳು ವಾಸ ಮಾಡುವ ದೊರೆ ಉದ್ಧರಿಸಬೇಕೆನ್ನ ವಿಜಯವಿಠ್ಠಲನೆ 4 ಐದನೇ ವಚನ ಕರಿಯಬೇಕೆನ್ನ ಹಿರಿಯರೂ | ಇಡಲಾಗದ ಮನಸು ಸರ್ವದಾ ನಿನ್ನ | ಚರಣಾರವಿಂದ ದ್ವಂದ್ವದಲಿ | ಭರದಿಂದ ಮುದ್ರೆಯನಿಟ್ಟ | ತುತಿ ಮಾಡುವೆ ನಿನ್ನ | ಮುಚಕುಂದ ವರದ ನಿತ್ಯಾನಂದ ವಿಗ್ರಹ | ಸರಸಿರುಹಾಕ್ಷ ಸಜ್ಜನ ಪರಿಪಾಲಾ | ಪೂಜ್ಯ ಅವಗುಣ ವರ್ಜ ಅಕಳಂತ | ಮಹಾನುಭಾವ ಮಧ್ವೇಶ | ಈ ನುಡಿಯು ಪುಸಿಯಲ್ಲ | ಕರ ಪಿಡಿದು ಕಾಯ್ವರನ ಕಾಣೆ ಚರಣಾವಿಂದವನು ಭಜಿಪ ವೀಣೆ | ಈ ಕ್ಷೋಣಿಯೊಳಗೆನ್ನ ನರಜನ್ಮವು ಬಾರದೆ ಪರಿಪಾಲಿಸಬೇಕೆನ್ನ | ಪರಮ ಪವಿತ್ರ ಪಂಕೇರುಹನೇತ್ರ ಸಂಕಟಗಳ ಕಳೆದು | ಸೌಖ್ಯಪದ ವೈಕುಂಠದೊಳಗೆನ್ನ ನಿಲ್ಲಿಸೊ | ಭರದಿಂದ ನಿನ್ನ ನಾಮದ ಭಂಡಾರ ಕದ್ದ ಕಳ್ಳನೆನೆಸಿ | ಅರವಿಂದನಾಭ ನಿನ್ನ ಅಮರನೇ ವೈಕುಂಠ | ಕಾರಾಗೃಹದೊಳಗೆ ವಾಸ ಮಾಡಿಸು ದೇವ ಕೋಟಿ | ವರುಷಕೆ ಇದುವೆ ಎನಗೆ ಹರುಷ ಆನಂದಮಯ | ಇನ್ನೋರ್ವನಿಲ್ಲ ವಿಜಯವಿಠ್ಠಲನೇ 5
--------------
ವಿಜಯದಾಸ
ಕಾಯೋ ದಯದಿಂದೆನ್ನ ಕಾರುಣ್ಯ ನಿಧಿಯೇ | ಯದು ನಾಯಕನೇ ದೇವ ದೇವಾ ಪ ಪುಷ್ಯರಾಗದಿ ನವರತ್ನ ಪದಕಧರ | ಘನಶ್ಯಾಮ ಉರಗಶಯನಾ | ಕಶ್ಯಪ ವಸಿಷ್ಠಾದಿ ಸ್ಮರಣೆ ಮಾಳ್ವವರಿಂಗೆ | ದೃಶ್ಯನಾಗಿಹ ಮುರಾರಿ ಶೌರಿ1 ನಂದಸುಕುಮಾರ ಸಿರಿನಾರಿಯ | ಸದ್ಬಕ್ತವೃಂದ ರಕ್ಷಕ ಭೂಧರಾ | ಇಂದಿರಾ ಭಾವನೆಯೂ ಪೂರಿತಿಕೇಳು | ಜಗವಂದ್ಯ ಮುಕುಂದ ಗರುಡರೂಢಾ2 ಚಕ್ರಕರ ಕಮಲಾಕ್ಷ ಚತುರಾಸ್ಯ ಜನಕ ಬಲಿ | ಚಕ್ರವರ್ತಿಗೆ ವರದನಾ | ಶಕ್ರನುತ ಮಹಿಪತಿ ಸ್ವಾಮಿ ಸುತ ಪ್ರೀಯಾ | ತ್ರಿವಿಕ್ರಮನೆ ಕೋಮಲಾಂಗಾ ರಂಗಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಾರಾಯಣ ಪಂಜರನಾರಾಯಣಾಯ ನಮೊ ನಾರಾಯಣಾಯ ನಮೊನಾರಾಯಣಾಯ ನಮೊ ನಾರಾಯಣನಾರದರ ಮುಖದಿಂದ ನರಕಸ್ಥರೆಬ್ಬಿಸಿದೆನಾರಾಯಣಾಯ ನಮೊ ನಾರಾಯಣ ಪ.ಮತ್ತಕರಿಯವಸಾನಕಂಜಿ ಹರಿಯೆ ನೀ ಕಾಯ್ದೆ *ಭಕ್ತ ಪ್ರಹ್ಲಾದನೇಕಾಂಗ ನಿಷ್ಠೆಗೆ ಒಲಿದೆ 1ಪೃಥುವಿಗಳ್ಳನನಿರಿದು ಸತಿಯನುದ್ಧರಿಸಿದೆಪೃಥುಚಕ್ರವರ್ತಿಗೆ ಪ್ರತ್ಯಕ್ಷನಾಗ್ಯೊಲಿದೆ2ಶೂಲಿಯನು ಬೆಂಬತ್ತಿ ಸುಡುವೆನೆಂಬನ ಸುಟ್ಟೆಶೀಲವಿಡಿದಂಬರೀಷನ ಮತವ ಗೆಲಿಸಿದೆಯೊ 3ಮಕರರೂಪದಿ ಸತ್ಯವ್ರತಗೆ ತತ್ವವನೊರೆದೆಮುಖದಿಶ್ರುತಿಪಿಡಿತಂದು ವಾರಿಜಾಸನಗಿತ್ತೆ4ಪುರುಹೂತಗಖಿಳ ಪರಮಾರ್ಥವನು ಅರುಹಿದೆಸುರಪನ್ನ ಭಯವಟ್ಟಿ ಧ್ರುವಗೆ ಧ್ರುವಪದವಿತ್ತ್ತ್ತೆ 5ಮಹಾಪಾಪನಿರತ ಅಜಾಮಿಳನಿಷ್ಟ ಕರಿಸಿದೆಮಹಿದಾಸನಾಗಿ ತಾಯಿಗೆ ತತ್ವವನು ಪೇಳ್ದೆ 6ಮುನಿ ಕಾಲಲೊದೆಯೆ ಎದ್ದು ಕರುಣಿಸಿದೆ ಕರುಣಾನಿಧಿಮುನಿವೆಂಗಳರೆಯಾಗೆ ಪದಸೋಂಕಿಸ್ಯೆತ್ತಿದೆಯೊ 7ಮಖವ ರಕ್ಷಿಸಿ ರಾಜಋಷಿಗಭೀಷ್ಟೆಯನಿತ್ತೆಮಕರಧ್ವಜಾರಿ ಧನು ಮುರಿದವನಿಜೇಶ8ಶುಭಕಪೀಶಗೆ ಅಭಯವರವಿತ್ತು ಕೈಪಿಡಿದೆಶುಭಕಂಠನಂಜಿಕೆಯ ಹನುಮ ಹೇಳಲು ಕಳೆದೆ 9ಶರಣು ಹೊಕ್ಕಿರೆ ವಿಭೀಷಣಗರಸುತನ ಕೊಟ್ಟೆಶರದಿ ರಾವಣನರಿದು ಸುರರ ಸಂಕಟ ಹರಿದೆ 10ಅನುಜನಗ್ನಿಗೆÉ ಧುಮುಕಲವಧಿ ಮೀರದೆ ಪೊರೆದೆಅನಿಮಿಷರ ನಿಕರಕತಿ ಆಹ್ಲಾದ ಬೆಳೆಯಿಸಿದೆ 11ಉರಿನುಂಗಿ ಗಿರಿನೆಗಹಿ ವ್ರಜವ ಪಾಲನೆ ಮಾಡ್ಡೆಉರಗನೆಳೆತಂದವನ ರಾಣಿಯರ ಸ್ತುತಿಗೊಲಿದೆ 12ಕ್ರತುನಾರಿಯರನ್ನ ಸವಿದುಂಡು ಸುಖವಿತ್ತೆಕ್ರತುಭೋಕ್ತø ಕ್ರತುಗಾತ್ರ ಕ್ರತುಪಾಲ ಕ್ರತುಶೀಲ13ಗೋಪ ಸ್ತ್ರೀಯರ ಕುಚದಿ ನ್ಯಸ್ತ ಚರಣಾಬ್ಜಯುಗಗೋಪೀ ಜನಜಾರನವನೀತದಧಿಚೋರ14ವಂಶಗಾಯನ ಪ್ರಿಯ ವಿಧುಕುಲೋದ್ಭವ ಕೃಷ್ಣವಂಶವರ್ಧಕಸುಜನವಂಶಮರ್ದಕ ಕುಜನ15ಅಕ್ರೂರವಂದ್ಯಕಂಸಾರಿಕುಬ್ಜಾರಮಣಆಕ್ರಂದಿಸಿದ ತಂದೆ ತಾಯಿಯರ ಭಯವಳಿದೆ 16ಅದಿತಿ ಕುಂಡಲದಾತ ಭಗದತ್ತವರದನೆಅಧಿಪತಿಗಳಧಿಪತಿಯೆ ಭೈಷ್ಮಿ ಸತ್ಯಾರಮಣ 17ಶಂಭುವಂದಿತಪಾದ ಸಾಂದೀಪೋದ್ಧವ ಪ್ರಿಯಶಂಬರಾರಿಯ ಜನಕ ಯಜÕಪೂಜಾಗ್ರಣಿಯೆ 18ಪಾಂಡವರ ಪ್ರಾಣ ದ್ರೌಪದಿ ಮಾನರಕ್ಷಕನೆಪೌಂಡ್ರಕಶೃಗಾಲಕೌರವ ಭೂಮಿ ಭಾರಹರ19ಅಭಿಮನ್ಯುನಾತ್ಮಜನ ಬಸುರೊಳಗೆ ಸಲಹಿದೆಯೊಅಭಯದಲಿ ಪಾಂಡವರ ಸಂತತಿಯ ಬೆಳೆಸಿದೆಯೊ 20ಗರುಡ ಗಂಧರ್ವಕಿನ್ನರಗೀತ ಸಂಪ್ರೀತಗರುವೆ ಲಕುಮಿಯ ಕೂಡ ಕ್ರೀಡಾದ್ರಿಯಲ್ಲಿರುವೆ 21ಶಂಖ ಚಕ್ರ ಗದಾಬ್ಜ ಶ್ರೀವತ್ಸ ಶೋಭಿತನೆಸಂಖ್ಯೆರಹಿತಾಭರಣ ಭೂಷಣಾವ್ಯಾಕೃತನೆ 22ಮೀನ ಕಶ್ಯಪ ಪೋತ್ರಿ ನೃಹರಿ ವಾಮನ ಭಾರ್ಗ್ವಮಾನವಪ ಕೃಷ್ಣಬುದ್ಧಕಲ್ಕಿ ಕಪಿಲಾತ್ರೇಯ23ಸ್ವಾಮಿ ತೀರ್ಥಾಂಬು ಅಂತರ್ಗಂಗಾಭಿಷಿಕ್ತಸ್ವಾಮಿ ಭೂವರಾಹ ವೈಕುಂಠನಾಥ ವಿಶ್ವೇಶ 24ಷಟ್ಕೋಟಿ ತೀರ್ಥಯುತಚರಣ ಶ್ರೀಭೂರಮಣಷಟ್ಕಮಲನಿಲಯ ಚಿನ್ಮಯ ಚಿದ್ಗುಣಾರ್ಣವನೆ 25ಭಕ್ತಾಭಿಮಾನಿ ಭವದೂರ ಭಕ್ತರ ಪ್ರಭುವೆಭಕ್ತವತ್ಸಲ ಕೃಪಾಂಬುಧಿಪರಾತ್ಪರಕೃಷ್ಣ26ವಸುಧೆವೈಕುಂಠ ಮಂದಿರವಾಸ ಶ್ರೀನಿವಾಸವಸುಪ್ರೀತ ವಸುಕರ್ತ ವಸುದಾತ ವಸುಪೂರ್ಣ 27ಆದಿನಾಥÀಪ್ರಮೇಯಾದಿ ಪುರುಷೋತ್ತಮನೆಆದಿಮಧ್ಯಾಂತ ರಹಿತಾದ್ಯಮೂರುತಿ ವಿಷ್ಣು 28ಬದುಕಿಪ್ಯಾದರೆ ನಿನ್ನ ಹೊಗಳಿಕೆಲಿ ಬದುಕಿಸೈಬುಧರ ಸಂಗತಿ ಕೊಟ್ಟು ಮನ್ನಿಸೆನ್ನನು ತಂದೆ 29ಕಿವಿಯಲ್ಲಿ ಮುಖದಲ್ಲಿ ನಾಮಾಮೃತವÀ ತುಂಬುಕವಲಾಗದೆ ಮನೋಳಿ ಮಿಗೆ ಪದಾಬ್ಜವ ತೋರು 30ಭವಭವದಿ ತೊಳತೊಳಲಿ ಬಳಬಳಲಿ ಬಲುದಣಿದೆಭವವಿರಿಂಚ್ಯಾದಿ ಕರಿಗಭಯದನೆ ನೀ ಸಲಹು31ನೀ ತಾಯಿ ನೀ ತಂದೆ ನೀ ಬಂಧು ನೀ ಬಳಗನೀತಿಗಳನರಿಯೆ ನಿನ್ನಯ ನಾಮವೆ ಗತಿಯು 32ತನು ನೆಚ್ಚಿಕಿಲ್ಲ ಚಿತ್ತದ ಗತಿಯು ನೀಟಿಲ್ಲತನಯತರುಣಿ ಕೊನೆಯ ಸಂಗತಿಗೆ ಆರಿಲ್ಲ33ದೋಷಗಳನರಸದೆನ್ನನು ಸಾಕು ಸಾಕಯ್ಯದಾಸಪಾಲಕ ದೇವ ಡಿಂಗರರ ಸಂಜೀವ 34ನಿನ್ನ ಮೂರುತಿ ನೋಡಿ ನೋಡಿ ನೋಡಿ ನೋಡಿನಿನ್ನ ಬಿಂಬವನೆಂದು ಕಂಡು ಕೊಂಡಾಡುವೆನೊ 35ನಿನ್ನ ಮೈ ಬೆಮರ್ಹೊಳೆಯಲ್ಲೆನ್ನ ಮುಳುಗಿಸಿನಿನ್ನವ ನಾ ನಿನ್ನವರ ಕೈಲಿ ಕೊಡು ಗಡಗಡ 36ವಾರಿಯಲಿ ಸ್ಥಳದಲ್ಲಿ ಅಡವಿಲೆಲ್ಲೆಲ್ಲಿ ಕಾಯೊವಾರಾಹ ವಾಮನ ನೃಸಿಂಹ ಕೇಶವ ಸ್ವಾಮಿ 37ಸತ್ಕುಲೋದ್ಭವನಾದೆ ಸನ್ಮಾರ್ಗರಿಯಲಿಲ್ಲಸತ್ಕರ್ಮಗಳಿಗೆ ಬಹಿಷ್ಕøತನಾಗಿ ಬಾಳುತಿಹೆ 38ಒಂದು ಜಾವದ ತಪ್ಪನೆಂದೆಂದಿಗುಣಲಾರೆವಂದಿಸುವೆ ಸಾಷ್ಟಾಂಗತ್ರಾಹಿತ್ರಾಹಿಪಾಹಿತ್ರಾಹಿ39ಮಧ್ವೇಶ ಮಧ್ವಪ್ರಿಯ ಮಧ್ವಮತ ಪ್ರತಿಪಾಲಮಧ್ವಗುರು ಸ್ತುತ್ಯ ಮಧ್ವಾರ್ಚಿತ ಪದಾಬ್ಜಹರಿ40ಏನರಿಯೆನೇನರಿಯೆ ನೀನೆ ನೀಗೆಲೆಲೆಎನ್ನಘವ್ರಜ ಪ್ರಸನ್ನವೆಂಕಟ ಕೃಷ್ಣ 41
--------------
ಪ್ರಸನ್ನವೆಂಕಟದಾಸರು