ದುರುಳ ಬುದ್ಧಿಯನು ತೋರಿಸಬೇಡವೊ ಪ
ನರವರರಿಗೆ ಇದು ಸರಿಯಲ್ಲವೋ ಕೇಳ್ ಅ.ಪ.
ತುಡುಗ ಬುದ್ಧಿಯಿದ ಕಡೆಗಾಲಕೆ ಸರಿ
ನುಡಿಗೆದುರಿಲ್ಲವೋ ನಿನಗಿಂದು
ಕಡು ಪತಿವ್ರತೆಯರು ಬಿಡುವ ನಯನಜಲ
ಉಡಿಯಲಿ ಕಟ್ಟಿದ ಉಜ್ವಲ ಶಿಖಿಯೊ 1
ಧರ್ಮಪಥದಿ ಸಂಚರಿಸುವ ಸುಜನರ
ಮರ್ಮವ ಭೇಧಿಸೆ ಮಾತಿನಲಿ
ಒಮ್ಮೆ ಅವರು ಬಿಸಿರುಸಿರನು ಚಿಮ್ಮಿಸೆ
ಒಮ್ಮೆಗೆ ನಿನ್ನಯ ಕುಲಕ್ಷಯ ನಿಜವು 2
ಮತ್ತನಾದ ನಿನಗೆತ್ತಣದೊ ಇನ್ನು
ಯುಕ್ತಾಯುಕ್ತ ವಿವೇಚನೆಯು
ಭಕ್ತವತ್ಸಲ ಶ್ರೀ ಕರಿಗಿರೀಶನ
ಚಿತ್ತ ಸತ್ಯವೆಂದು ತೊಳಿಯೊ ಮೂಢ 3