ಅಹಹ ಮರುಳನಾದೆ ಸುಮ್ಮನೆ ಪೂರ್ವ
ಮಹಿಮ ಹರಿಯ ಸೇವೆಯನ್ನು
ಸಹಿಸಿಕೊಂಡು ಗ್ರಹದೊಳಿರದೆ ಪ.
ಇಂದಿರೇಶನಿರವನರಿಯದ ಮೂರ್ಖರಾದ
ಮಂದಮತಿಗಳಾದ ಕುಜನರ
ಬಂದು ಸೇರಿ ಬುದ್ಧಿಹೀನರೆಂದ ನುಡಿಯ ಕೇಳಿ ಬಹಳ
ಮೂರ್ತಿ ಬಿಟ್ಟು 1
ತರಣಿ ತಿಮಿರವಟ್ಟಿಲಿರುವದೆ ಸಿಂಹರಾಜ
ಮರಿಯ ಕೂಡೆ ನರಿಯು ಬರುವುದೆ
ಮರುಳತನದ ಭಾಗ್ಯವೆಂಬೀ ನರಕ ಪಾತ್ರರಾದ ಜನರು
ಪಾದ ಪದ್ಮದಾಸ ಚರಿಯವೆಂದು ತಿಳಿವರುಂಟೆ 2
ನೀರಗುಳ್ಳೆಕಿಂತ ಲಘುತರವಾದ
ಸಂಸಾರ ಸಂಬದ್ಧ ಪರಿಸರ
ಸೇರಿ ಹಿಂದೆ ನಡೆದ ತಪ್ಪ ನೀರಜಾಕ್ಷ ಕ್ಷಮಿಸಿ ಮಹಾ-
ದ್ವಾರದೆಡೆಗೆ ಕರಸಿಕೊಳ್ಳೊ ಭೂರಮೇಶ ವೆಂಕಟೇಶ 3